Tag: Karnataka Election

  • ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ: ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ

    ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ: ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ

    ಬೆಂಗಳೂರು: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ ಸಂಬಂಧ ಬುಧವಾರ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಟ್ವಿಟ್ಟರ್ ವಾರ್ ನಡೆದಿದೆ. ಇದನ್ನೂ ಓದಿ:ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

    ಲಾರಿ ಕೊಪ್ಪ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ್ ಅನ್ನೋರಿಗೆ ಸೇರಿದ್ದು ಎಂಬ ಮಾಹಿತಿಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿಯಲ್ಲಿರುವ ನಾಯಕತ್ವ ಕೊರತೆಯ ಲಾಭ ಪಡೆಯಲು ಹೆಗಡೆ ಹವಣಿಸ್ತಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಸಂಸದ ಪ್ರತಾಪ್ ಸಿಂಹ ಬಿಜೆಪಿ ಸಿಎಂ ಅಭ್ಯರ್ಥಿ ಯಡಿಯೂರಪ್ಪರನ್ನು ಮೀರಿ ಬೆಳೆಯಲು ಯತ್ನಿಸ್ತಿದ್ದಾರೆ. ಹೀಗಾಗಿ ಸಣ್ಣ ಘಟನೆಯನ್ನು ಬಳಸಿಕೊಂಡು ಹೆಗಡೆ ಯಡಿಯೂರಪ್ಪರನ್ನು ಸೈಡ್‍ಲೈನ್ ಮಾಡಲು ಯತ್ನಿಸ್ತಿದ್ದಾರೆ ಅಂತ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ನಿಮಗಿದು ಸಣ್ಣ ಘಟನೆನಾ..? ಡಿಕ್ಕಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ನಿಮ್ಮ ನಿರ್ಲಕ್ಷ್ಯ ಖಂಡನೀಯ. ಪಾರದರ್ಶಕ ತನಿಖೆ ಬದಲಿಗೆ ರಾಜಕೀಯ ಮಾಡ್ತಿದ್ದೀರಿ. ನಿಮಗೆ ನಾಚಿಕೆ ಆಗ್ಬೇಕು ಅಂತ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್

    https://youtu.be/CIkpZUPuKO8

    https://youtu.be/cwbDP5ViV3U

  • ಅಕ್ಷಯ ತೃತೀಯಗೆ ರಾಜಕಾರಣಿಗಳ ‘ಗೋಲ್ಡನ್’ ಮ್ಯಾಚ್ ಫಿಕ್ಸಿಂಗ್-ಒಂದೇ ದಿನದಲ್ಲಿ ದಾಖಲೆಯ ಚಿನ್ನ ಮಾರಾಟ

    ಅಕ್ಷಯ ತೃತೀಯಗೆ ರಾಜಕಾರಣಿಗಳ ‘ಗೋಲ್ಡನ್’ ಮ್ಯಾಚ್ ಫಿಕ್ಸಿಂಗ್-ಒಂದೇ ದಿನದಲ್ಲಿ ದಾಖಲೆಯ ಚಿನ್ನ ಮಾರಾಟ

    ಬೆಂಗಳೂರು: ಬುಧವಾರ ಅಕ್ಷಯ ತೃತೀಯ ಆಗಿದ್ದರಿಂದ ಹೆಚ್ಚಿನ ಮಹಿಳೆಯರು ಚಿನ್ನ ಖರೀದಿಯಲ್ಲಿ ಬ್ಯುಸಿ ಆಗಿದ್ದರು. ಸದ್ಯ ರಾಜ್ಯದಲ್ಲಿ ಚುನಾವಣೆ ರಣಕಣ ರಂಗೇರುತ್ತಿದ್ದು, ಅಕ್ಷಯ ತೃತೀಯವನ್ನ ರಾಜಕಾರಣಿಗಳು ಬಹು ಚಾಲಾಕಿತನದಿಂದ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆ ಪಬ್ಲಿಕ್ ಟಿವಿ ರಾಜಕಾರಣಿಗಳು ಮತದಾರರಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ನೀಡಲು ಮುಂದಾಗುತ್ತಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸಿತ್ತು.

    ಚುನಾವಣಾ ಆಯೋಗದ ಹದ್ದಿನ ಕಣ್ಣು ತಪ್ಪಿಸಿ ಕೆಲ ರಾಜಕೀಯ ಮುಖಂಡರು ಮತದಾರರಿಗೆ ಫ್ರೀಯಾಗಿ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ನೀಡಿದ್ದಾರೆ ವಿಷಯ ರಿವೀಲ್ ಆಗಿದೆ. ಈ ಬಾರಿ ಚುನಾವಣೆ ಆಯೋಗ ಎಲ್ಲ ಚಿನ್ನದ ಮಳಿಗೆಗಳಿಗೆ ಬಲ್ಕ್ ಗೋಲ್ಡ್ ಖರೀದಿಯ ಡೀಟೈಲ್ಸ್ ಹಾಗೂ ಅಭರಣದಂಗಡಿಯಲ್ಲಿ ಸಿಸಿಟಿವಿ ಫೋಟೇಜ್ ನೀಡುವಂತೆ ಹೇಳಿದೆ. ಆದ್ರೆ ಮುಖಂಡರು ಚಿನ್ನದಂಗಂಡಿ ಮಾಲೀಕರ ಜೊತೆ ಹೊರಗಡೆಯೇ ಡೀಲ್ ಮಾಡಿದ್ದಾರೆ.

    ಏನದು ಡೀಲ್?: ರಾಜಕೀಯ ನಾಯಕರು ಟೋಕನ್ ಕೊಟ್ಟು ಚಿನ್ನವನ್ನು ತಾವಿದ್ದ ಸ್ಥಳಕ್ಕೆ ತರಿಸಿಕೊಂಡು ಜನರಿಗೆ ಹಂಚಿದ್ದಾರೆ ಎನ್ನಲಾಗಿದೆ. ನೀಲಿ ಟೋಕನ್ ಕೊಟ್ರೆ ಚಿನ್ನದ ಒಡವೆ, ಕೆಂಪು ಟೋಕನ್ ಕೊಟ್ರೆ ಬೆಳ್ಳಿ ಅಂತಾ ಮೊದಲೇ ಡೀಲ್ ಮಾಡಿಕೊಂಡು ಆಭರಣದಂಗಡಿಗೆ ಜನರನ್ನು ಕಳುಹಿಸಿ ಪ್ರತ್ಯೇಕವಾಗಿ ವಹಿವಾಟು ನಡೆದಿದೆ. ಇನ್ನು ದೇವಸ್ಥಾನದಲ್ಲಿ ನಿನ್ನೆ ಮಹಿಳೆಯರಿಗೆ ಬಾಗಿನ ಕೊಟ್ಟು ಅದ್ರಲ್ಲಿ ಚಿನ್ನದ ಒಡವೆ ಇಟ್ಟು ಯಾರಿಗೂ ತಿಳಿಸದಂತೆ ರಾಜಕೀಯ ಮುಖಂಡರು ದೇವರ ಮೇಲೆ ಪ್ರಮಾಣ ಮಾಡಿಸಿಕೊಂಡಿದ್ದಾರೆ ಅಂತಾ ತಿಳಿದು ಬಂದಿದೆ.

    ರಾಜ್ಯದಲ್ಲಿ ಒಂದೇ ದಿನದಲ್ಲಿ ದಾಖಲೆಯ ಚಿನ್ನ ಮಾರಾಟವಾಗಿದೆ. ಈ ವರ್ಷ 3,495 ಕೆಜಿ ಚಿನ್ನ ಸೇಲ್ ಆಗಿದೆ. ಒಟ್ಟಾರೆಯಾಗಿ ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ.25ರಷ್ಟು ವ್ಯಾಪಾರ ಹೆಚ್ಚಳವಾಗಿದೆ. ವ್ಯಾಪಾರದಲ್ಲಿ ಬೆಂಗಳೂರು ನಂಬರ್ ಒನ್ ಆದ್ರೆ, ಹುಬ್ಬಳ್ಳಿ, ಬೆಳಗಾವಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

  • ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಚುನಾವಣೆಯಲ್ಲಿ ಪ್ರಚಾರ ಮಾಡಲು ಅಭ್ಯರ್ಥಿಗಳಿಗೆ ಷರತ್ತು ವಿಧಿಸಿದ ರಾಕಿಂಗ್ ಸ್ಟಾರ್

    ಬೆಂಗಳೂರು: ಮರ ಮತ್ತು ಕೆರೆಯನ್ನು ಯಾರು ಅಭಿವೃದ್ಧಿ ಮಾಡುತ್ತಾರೋ ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ.

    ಫೇಸ್‍ಬುಕ್ ಲೈವ್ ನಲ್ಲಿ ಅಭಿಮಾನಿಗಳ ಜೊತೆ ಮಾತನಾಡುವ ವೇಳೆ ಅಭಿಮಾನಿಯೊಬ್ಬರು ನೀವು ರಾಜಕೀಯಕ್ಕೆ ಬರುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ, ಬೆಂಗಳೂರು ನಗರದಲ್ಲಿ ಈಗ 5 ಲಕ್ಷ ಗಿಡ ನೆಡಬೇಕಾಗಿದೆ. ಇದಕ್ಕೆ ಪ್ರೋತ್ಸಾಹ ನೀಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ. ಬೆಂಗಳೂರು ಅಷ್ಟೇ ಅಲ್ಲದೇ ಬೇರೆ ಯಾವುದೇ ಕ್ಷೇತ್ರದಲ್ಲಾದರೂ ಸರಿ ಮರಗಳನ್ನು ನೆಡುವ ಅಭ್ಯರ್ಥಿಗಳಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಉತ್ತರಿಸಿದರು.

    ಯಾವುದೇ ಪಕ್ಷದ ಬಗ್ಗೆ ನನಗೆ ಸ್ಪಷ್ಟನೆ ಸಿಗುತ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ನನ್ನ ಸ್ನೇಹಿತರು ರಾಜಕೀಯಲ್ಲಿ ತೊಡಗಿದ್ದಾರೆ, ಶಾಸಕರಾಗಿದ್ದಾರೆ. ಕೆಲವು ಗೆಳೆಯರು ಪ್ರಚಾರಕ್ಕೆ ಬರುವಂತೆ ಕೇಳುತ್ತಿದ್ದಾರೆ. ಆಗ ಅವರಿಗೆ ನಾನು ಪ್ರಚಾರಕ್ಕೆ ಬರುತ್ತೇನೆ. ಆದರೆ, ನೀನು ಕೆಲಸ ಮಾಡದಿದ್ದರೆ ಜನರು ನನ್ನ ಕೇಳುತ್ತಾರೆ. ನಾನು ಏನು ಉತ್ತರ ಕೊಡಬೇಕು. ಆಗ ನಾನೇ ನಿಮಗೆ ವಿರುದ್ಧವಾಗಿ ನಿಲ್ಲುತ್ತೇನೆ. ಅದಕ್ಕೆ ನಾವು ಗೆಳೆಯರಾಗಿಯೇ ಇರುವುದು ಒಳ್ಳೆಯದು ಎಂದು ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ:ನಾನು ಯಾವುದೇ ಬಾಡಿಗೆ ಹಣ ಇಟ್ಟುಕೊಂಡಿಲ್ಲ: ಅಭಿಮಾನಿಗಳ ಪ್ರಶ್ನೆಗಳಿಗೆ ಯಶ್ ಸ್ಪಷ್ಟನೆ

    ನನಗೆ ರಾಜಕೀಯಕ್ಕೆ ಬರುವ ಆಸೆ ಇಲ್ಲ. ಒಂದು ವೇಳೆ ಬರುವುದಾದರೆ ತಿಳಿಸುತ್ತೇನೆ. ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ಒಂದೊಂದು ರೀತಿಯ ಸಮಸ್ಯೆಗಳಿರುತ್ತವೆ. ಅಲ್ಲಿನ ಪ್ರತಿನಿಧಿಗಳು ಆ ವಿಷಯವನ್ನು ಬಗೆಹರಿಸಲು ಹೋರಾಡಬೇಕು. ನಾನು ಭ್ರಮೆಯಲ್ಲಿ ಬದುಕುತ್ತಿಲ್ಲ. ಇಂದು ಮಾಧ್ಯಮಗಳಲ್ಲಿ ಟಿಕೆಟ್ ಸಿಗದ ಆಕಾಂಕ್ಷಿಗಳ ಬೆಂಬಲಿಗರ ವರ್ತನೆ ಹಾಗೂ ಬಂಡಾಯಗಳ ವೇಳೆ ಅವರ ವರ್ತನೆ ಹೇಗೆ ಇರುತ್ತದೆ ಎಂದು ನಾನು ನೋಡಿದೆ. ಇಲ್ಲಿ ಯಾರ ವಿರುದ್ಧ ಕಳಂಕ, ತಕರಾರುಗಳಿಲ್ಲ? ಯಾರು ಸರಿಯಾಗಿದ್ದಾರೆ ಎಂದು ಅವರು ಪ್ರಶ್ನಿಸಿದರು.

    ಇತ್ತೀಚೆಗೆ ಒಬ್ಬರು ತಮ್ಮ ಕ್ಷೇತ್ರದಲ್ಲಿ ಹತ್ತು ಕೆರೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ನಾನು ಅವರಿಗೆ ಬೆಂಬಲ ನೀಡುತ್ತೇನೆ. ನಾಲ್ಕು ಜನಕ್ಕೆ ಒಳ್ಳೆಯದು ಆಗುವುದಾದರೆ ನಾನು ಕೆಟ್ಟವನಾಗುವುದಕ್ಕೂ ಸಿದ್ಧ. ಯಾರಿಗೂ ಒಳ್ಳೆಯದನ್ನು ಮಾಡದೇ ಒಳ್ಳೆಯವನು ಅಂಥ ಅನಿಸಿಕೊಂಡು ಬದುಕುವುದು ಸರಿಯಲ್ಲ. ನಾನು ಏನು ಇಲ್ಲದೇ ಬಂದವನು. ಈಗ ಎಲ್ಲವೂ ಸಿಕ್ಕಿದೆ. ಇದನ್ನು ಕೊಟ್ಟಿದ್ದು ಜನ. ಈ ಜನ್ಮದಲ್ಲಿ ಜನರಿಗೆ ಉಪಯೋಗವಾಗುವಂತಹ ಕೆಲಸ ಮಾಡುತ್ತೇನೆ. ನನ್ನ ಮೇಲೆ ನೀವು ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

    ಯಾವುದೇ ಕೆಲಸ ಮಾಡುವ ವೇಳೆ ಸರ್ಕಾರ ಬೇಕಾಗುತ್ತದೆ. ಸರ್ಕಾರದ ಬೆಂಬಲ ಇಲ್ಲದ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಆದರೆ, ಸರ್ಕಾರದ ಕೆಲಸವನ್ನು ಹೇಗೆ ಮಾಡಿಸಬೇಕು. ನಾನು ರಾಜಕಾರಣಕ್ಕೆ ಬರಬೇಕಾ, ಅದು ಆಗಲ್ಲ. ನಮ್ಮ ಮಾತನ್ನು ಕೇಳುವ ನಾಲ್ಕು ಜನ ರಾಜಕಾರಣಿಗಳು ಸಿಕ್ಕರೆ ಅವರ ಮೂಲಕ ಕೆಲಸ ಮಾಡಿಸಬಹುದು ಎಂದು ಅವರು ವಿವರಿಸಿದ್ದಾರೆ.

     

    https://www.facebook.com/TheOfficialYash/videos/2291921764368555/

  • ಏನಿದು ಬಿ ಫಾರಂ? ಫಾರಂ-26 ಏನು?

    ಏನಿದು ಬಿ ಫಾರಂ? ಫಾರಂ-26 ಏನು?

    ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಭಾರತದಲ್ಲಿ ಬಹಳಷ್ಟು ಫಾರ್ಮ್‍ಗಳನ್ನು ಅಭ್ಯರ್ಥಿಗಳು ಭರ್ತಿಮಾಡಬೇಕಾಗುತ್ತದೆ. ಅವುಗಳಲ್ಲಿ ಫಾರಂ-ಬಿ ಕೂಡ ಒಂದು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎನ್ನುವುದನ್ನು ಫಾರಂ-ಬಿ ಸಾಕ್ಷೀಕರಿಸುತ್ತದೆ. ಮೀಸಲಿಟ್ಟ ಪಕ್ಷದ ಚಿಹ್ನೆಯನ್ನು ಅಭ್ಯರ್ಥಿಗೆ ಕೊಡಲಾಗುತ್ತದೆ.

    ಚುನಾವಣಾ ಆಯೋಗ ಚುನಾವಣಾ ವೇಳಾಪಟ್ಟಿ ಪ್ರಕಟಿಸಿದ ಮೇಲೆ ಅಭ್ಯರ್ಥಿಗಳು ನಾಮ ನಿರ್ದೇಶನ ಅರ್ಜಿಯ ಜೊತೆಗೆ ಇತರೆ ಬೆಂಬಲಿತ ದಾಖಲೆಗಳನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡುತ್ತಾರೆ.

    ಲೋಕಸಭಾ ಚುನಾವಣೆಗೆ ಫಾರಂ-2ಎ, ವಿಧಾನ ಸಭಾ ಚುನಾವಣೆಗಳಿಗೆ ಫಾರಂ-2ಬಿ, ರಾಜ್ಯಸಭಾ ಚುನಾವಣೆಗಳಿಗೆ ಫಾರಂ-2ಸಿ ನಾಮಪತ್ರದ ಅರ್ಜಿಗಳನ್ನು ಅಭ್ಯರ್ಥಿಗಳು ಸಲ್ಲಿಸಬೇಕಾಗುತ್ತದೆ. ನಾಮಪತ್ರ ಅರ್ಜಿಯ ಜೊತೆ ಫಾರಂ-26 ಅಫಿಡವಿಟ್ ಹಾಗೂ ಬಿ-ಫಾರಂ ಅನ್ನು ಬೆಂಬಲಿತ ದಾಖಲೆಗಳಾಗಿ ಅಭ್ಯರ್ಥಿಗಳು ಸಲ್ಲಿಸಬೇಕು.

    ಫಾರಂ-26 ನಲ್ಲಿ ಏನಿರಲಿದೆ?
    ಕ್ರಿಮಿನಲ್ ಪ್ರಕರಣಗಳಲ್ಲಿ ಈ ಹಿಂದೆ ಅಭ್ಯರ್ಥಿ ತೊಡಗಿಕೊಂಡಿದ್ದರಾ? ಪ್ರಕರಣದ ತನಿಖೆ ಅಥವಾ ವಿಚಾರಣೆ ಎಲ್ಲಿಯವರೆಗೆ ಬಂದಿದೆ? ಎಲ್ಲಾ ಕುಟುಂಬ ಸದಸ್ಯರ ಆದಾಯ ತೆರಿಗೆ, ಆಸ್ತಿಯ ಮೌಲ್ಯ, ಸಾಲದ ಮಾಹಿತಿ, ಅಭ್ಯರ್ಥಿ ಮತ್ತು ಗಂಡ/ಹೆಂಡತಿಯ ವೃತ್ತಿ ಅಥವಾ ಉದ್ಯೋಗ, ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಯನ್ನು ಅಫಿಡವಿಟ್ ನಲ್ಲಿ ನಮೂದಿಸಬೇಕು.

    ಬಿ-ಫಾರಂನಲ್ಲಿ ಏನಿರಲಿದೆ?
    ಪ್ರತಿಷ್ಠಿತ ಕ್ಷೇತ್ರದಿಂದ ಈ ಅಭ್ಯರ್ಥಿ ನಮ್ಮ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ ಎನ್ನುವುದನ್ನು ಪಕ್ಷದ ಅಧಿಕೃತ ಸದಸ್ಯನ ಸಹಿಯೊಂದಿಗೆ ಅಭ್ಯರ್ಥಿಗೆ ಪಕ್ಷ ಕೊಡುವ ಫಾರ್ಮ್ ಅನ್ನು ಬಿ-ಫಾರಂ ಎಂದು ಕರೆಯಲಾಗುತ್ತದೆ. ನಾಮಪತ್ರದ ಅರ್ಜಿಯಲ್ಲಿ ಪ್ರತಿಷ್ಠಿತ ಪಕ್ಷದಿಂದ ಸ್ಪರ್ಧೆ ಮಾಡುತ್ತೇನೆ ಎಂದು ನಮೂದಿಸಿದ್ದಲ್ಲಿ, ಅಭ್ಯರ್ಥಿಯು ಬಿ-ಫಾರಂ ಅನ್ನು ಸಲ್ಲಿಸಬೇಕಾಗುತ್ತದೆ.

  • ಸೂರ್ಯ, ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಇರುತ್ತೆ: ಗೀತಾ ಮಹದೇವ ಪ್ರಸಾದ್

    ಸೂರ್ಯ, ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಇರುತ್ತೆ: ಗೀತಾ ಮಹದೇವ ಪ್ರಸಾದ್

    ಚಾಮರಾಜನಗರ: ಭೂ ಮಂಡಲದಲ್ಲಿ ಸೂರ್ಯ ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಸಚಿವೆ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.

    ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಗ್ಗಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಮಾತನಾಡಿದ ಗೀತಾ ಮಹದೇವ ಪ್ರಸಾದ್, ನಮ್ಮ ಕುಟುಂಬ ಇಲ್ಲಿಯವರೆಗೆ 10 ಚುನಾವಣೆ ಎದುರಿಸಿದೆ. ಆರಂಭದಲ್ಲಿ ನಾಲ್ಕರಲ್ಲಿ ಸೋತ್ರು, ಮುಂದಿನ 6 ಚುನಾವಣೆಗಳಲ್ಲಿ ಸತತ ಗೆಲುವು ಕಂಡಿದೆ. ನಾನು ನೋಡುತ್ತಿರೋದು ಏಳನೇ ಚುನಾವಣೆ, ಕ್ಷೇತ್ರದ ಜನರು ನಮ್ಮ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನಮಗೆ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಅಂತಾ ಅಂದ್ರು.

    ಮಹದೇವ್ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳಿಂದ ನಮಗೆ ಗೆಲವು ನಿಶ್ಚಿತ. ನಮ್ಮ ಎದುರು ಯಾರೇ ಸ್ಪರ್ಧಿಸಿದರೂ ಗೆಲುವಿನ ಮಾಲೆ ನಮಗೆ ಲಭಿಸಲಿದೆ. ಇಲ್ಲಿಯ ಜನರು ಕುಟುಂಬ ರಾಜಕಾರಣ ಬೇಕು ಅಂತಾ ನಮಗೆ ಮತ ನೀಡುತ್ತಿದ್ದಾರೆ. ಮಹದೇವ ಪ್ರಸಾದರ ಬಳಿಕ ನಾನು ಹೀಗೆ ನಮ್ಮ ಪರಿವಾರ ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಭವಿಷ್ಯ ನುಡಿದ್ರು.

    1994, 1999, 2004, 2008, 2013ರಲ್ಲಿ ಮಹಾದೇವ ಪ್ರಸಾದ್ ಈ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಪತಿ ಅಕಾಲಿಕ ನಿಧನನದಿಂದಾಗಿ 2017ರಲ್ಲಿ ತೆರವಾದ ಕ್ಷೇತ್ರಕ್ಕೆ ್ಲ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೀತಾ ಮಹಾದೇವ ಪ್ರಸಾದ್ ಸ್ಪರ್ಧಿಸಿ ಗೆದ್ದಿದ್ದರು. ಗೀತಾ ಮಹಾದೇವ ಪ್ರಸಾದ್ ಅವರಿಗೆ 90,258 ಮತಗಳು ಬಿದ್ದಿದ್ದರೆ, ಬಿಜೆಪಿಯ ನಿರಂಜನ್ ಕುಮಾರ್ ಅವರಿಗೆ 79,381 ಮತಗಳು ಬಿದ್ದಿತ್ತು.

  • ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಬೆಂಗಳೂರು: ರಾಜ್ಯದಲ್ಲಿ ಚುನಾವಣೆಯ ರಂಗು ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ಕಡೆ ಚುನಾವಣಾ ಆಯೋಗ ಶೇ.100 ರಷ್ಟು ಮತದಾನಕ್ಕೆ ನಾನಾ ರೀತಿಯ ಕಸರತ್ತು ಮಾಡುತ್ತಿದೆ. ಆದ್ರೆ ಮೆಡಿಕಲ್ ಶಾಪ್ ಮಾಲೀಕರೊಬ್ಬರು ಮತದಾನ ಹೆಚ್ಚಿಸಲು ತಮ್ಮದೇ ಆದ ರೀತಿಯಲ್ಲಿ ಪ್ರಚಾರ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಬಳಿಯ ಮೆಡಿಕಲ್ ಶಾಪ್ ಮಾಲೀಕ ಪ್ರಸಾದ್ ಮತದಾನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ವರ್ಷಗಳಿಂದ ಮೆಡಿಕಲ್ ಶಾಪ್ ನಡೆಸುತ್ತಿರುವ ಪ್ರಸಾದ್ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಡಿಸ್ಕೌಂಟ್‍ನಲ್ಲಿ ಔಷಧಿ ನೀಡಲು ಹೊಸ ಐಡಿಯಾವನ್ನ ಮಾಡಿದ್ದಾರೆ. ರಾಜ್ಯ ಚುನಾವಣಾ ಅಧಿಕಾರಿಗಳು ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿಯಲ್ಲಿ, ಮತದಾನ ಮಾಡಿದವರಿಗೆ ಕೆಲ ಮಾಲ್‍ಗಳ ಜೊತೆ ಮಾತಾಡಿ ಶೇ.10 ಡಿಸ್ಕೌಂಟ್ ಕೊಡಿಸ್ತೀವಿ ಅಂತ ಹೇಳಿದ್ರು. ಈ ಸುದ್ದಿಯನ್ನು ಪೇಪರ್‍ನಲ್ಲಿ ಓದಿದ ಪ್ರಸಾದ್ ಕೂಡಲೇ ಮತದಾನ ಮಾಡಿ ಬರುವ ಪ್ರತಿ ಗ್ರಾಹಕರಿಗೆ ಶೇ.10 ಡಿಸ್ಕೌಂಟ್ ಘೋಷಣೆ ಮಾಡಿದ್ದಾರೆ.

    ಕೇವಲ ಡಿಸ್ಕೌಂಟ್ ಘೋಷಣೆ ಮಾಡಿ ಸುಮ್ಮನೆ ಆಗದ ಪ್ರಸಾದ್ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನೀವು ಯಾರಿಗಾದ್ರು ಮತದಾನ ಮಾಡಿ. ಆದ್ರೆ ಕಡ್ಡಾಯವಾಗಿ ಮತದಾನ ಮಾಡಿ. ಅಷ್ಟೇ ಅಲ್ಲದೆ ಮತದಾನ ಮಾಡಿದ್ರೆ ಮುಂದಿನ 5 ವರ್ಷಗಳವರೆಗೆ ನಮ್ಮ ಶಾಪ್ ನಲ್ಲಿ ಶೇ.10 ಡಿಸ್ಕೌಂಟ್ ನೀಡ್ತೀನಿ ಅಂತ ತಮ್ಮ ಮೆಡಿಕಲ್ ಶಾಪ್‍ಗೆ ಬರುವ ಪ್ರತಿ ಗ್ರಾಹಕರಿಗೂ ಹೊಸ ಆಫರ್ ನೀಡುತ್ತಿದ್ದಾರೆ.

    ಒಟ್ಟಿನಲ್ಲಿ ಮತದಾನ ಮಾಡೋದಕ್ಕೆ ಹಿಂಜರಿಯುತ್ತಿರೋ ಇಂದಿನ ಜನರ ಮಧ್ಯೆ ಮತದಾನಕ್ಕಾಗಿ 10 ಪರ್ಸೆಂಟ್ ಡಿಸ್ಕೌಂಟ್ ನೀಡುತ್ತಿರುವ ಪ್ರಸಾದ್ ಉಳಿದವರಿಗೆ ಮಾದರಿಯಾಗಿದ್ದಾರೆ.

     

  • ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

    ಮನೆಗೆ ಭೇಟಿ ನೀಡಿದ ಶಾಗೆ ಚಿದಾನಂದ ಮೂರ್ತಿ ನೀಡಿದ್ರು 5 ಸಲಹೆ

    ಬೆಂಗಳೂರು: ನಗರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಾಹಿತಿ ಚಿದಾನಂದ ಮೂರ್ತಿ ಅವರನ್ನು ಭೇಟಿಯಾಗಿದ್ದಾರೆ.

    ಹಿರಿಯ ಸಂಶೋಧಕ ಡಾ ಚಿದಾನಂದ ಮೂರ್ತಿ ಅವರನ್ನು ಭೇಟಿಯಾದ ಶಾ ಮುಂದೆ ಬಿಜೆಪಿ ಪ್ರಣಾಳಿಕೆಗೆ ರಚನೆ ಸಂಬಂಧ ಸಲಹೆ ನೀಡುವಂತೆ ಕೇಳಿಕೊಂಡಿದ್ದಾರೆ.

    ಅಮಿತ್ ಶಾ ಭೇಟಿಗೂ ಮುನ್ನ ಪಬ್ಲಿಕ್ ಟಿವಿ ಜೊತೆ ಚಿದಾನಂದ ಮೂರ್ತಿ ಮಾತನಾಡಿದ್ದರು. ಈ ವೇಳೆ ನಾನು ಶಾ ಅವರಿಗೆ ಏನು ಸಲಹೆ ನೀಡತ್ತೇನೆ ಎನ್ನುವುದನ್ನು ತಿಳಿಸಿದ್ದರು.

    ಸಾಹಿತಿ ಚಿಮೂ ಹೇಳಿದ್ದೇನು?
    1. ವೀರಶೈವ ಹಾಗೂ ಲಿಂಗಾಯಿತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಬಾರದು.

    2. ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಗಡಿ ವಿವಾದದಿಂದಾಗಿ ಮಹಾರಾಷ್ಟ್ರವೂ ಪದೇ ಪದೇ ಕರ್ನಾಟಕದ ಜೊತೆ ತಗಾದೆ ತೆಗೆಯುತ್ತಿದೆ. ಕರ್ನಾಟಕ ಬೆಳಗಾವಿಗೆ ಸೇರುತ್ತದೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಕರ್ನಾಟಕದ ವಾದವನ್ನು ಸರಿಯಾಗಿ ಪರಿಶೀಲಿಸಬೇಕು.

    3. ಆಂಗ್ಲರು ಬಿಟ್ಟು ಹೋಗಿರುವ `ಇಂಡಿಯಾ’ ಎನ್ನುವ ಪದ ಕೈಬಿಟ್ಟು `ಭಾರತ್’ ಎನ್ನುವ ಪದ ಬಳಕೆ ಮಾಡಬೇಕು. ಸಂವಿಧಾನದಲ್ಲಿರುವ ಇಂಡಿಯಾ ಪದವನ್ನು ಕೂಡ ತೆಗೆಯಬೇಕು. ಇಂಡಿಯಾ ಎಂದು ಬರೆದಿರುವ ಕಡೆ ಭಾರತ್ ಎಂದು ಬರೆಯಬೇಕು. ದೇಶದಲ್ಲಿ ಮಾತೃಭಾಷಾ ಮಾಧ್ಯಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.

    4. ಒಬ್ಬ ಹಿಂದೂ ಉತ್ತಮ ಹಿಂದೂವಾಗಿ ಬದುಕಬೇಕು, ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮನಾಗಿ ಬದುಕಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಿ ಬದುಕಬೇಕು. ಆದರೆ, ಮತಾಂತರ ಸಲ್ಲದು. ದೇಶದಲ್ಲಿ ಹಿಂದೂ ಧರ್ಮದವರನ್ನು ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು.

    5. ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಗುರುತಿಸಿಕೊಂಡಿದೆ. ಇದು ಬದಲಾಗಬೇಕು. ಸ್ವಲ್ಪ ಮಟ್ಟಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಹೀಗಾಗಿ, ದಲಿತರನ್ನು ನಿರ್ಲಕ್ಷಿಸದೆ, ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕು. ರೈತರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು

  • ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್

    ಜನರನ್ನು ಬಿಜೆಪಿಯತ್ತ ಸೆಳೆಯುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಬೇಕು?- ನಾಯಕರಿಗೆ ಚಾಣಕ್ಯನಿಂದ ಸ್ಪೆಷಲ್ ಕ್ಲಾಸ್

    ಬೆಂಗಳೂರು: 2017ರಲ್ಲಿ ರಾಜ್ಯ ನಾಯಕರಿಗೆ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವುದು ಹೇಗೆ ಎಂದು ಪಾಠ ಮಾಡಿ ಹೋಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈಗ ಕೊನೆ ಕ್ಷಣದಲ್ಲಿ ಮತದಾರರನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ ಎನ್ನುವುನ್ನು ಪಾಠ ಮಾಡಲಿದ್ದಾರೆ.

    ಹೌದು, ನಗರಕ್ಕೆ ನಾಳೆ ಭೇಟಿ ನೀಡಲಿರುವ ಅಮಿತ್ ಶಾ ಅವರು ಚುನಾವಣೆಯಲ್ಲಿ ಜನರ ಮನಸ್ಸನ್ನು ತಮ್ಮತ್ತ ಒಲಿಸಿಕೊಳ್ಳುವುದು ಹೇಗೆ? ಯಾವ ವಯಸ್ಸಿನವರನ್ನು ಹೇಗೆ ಸೆಳೆಯಬಹುದು? ಮಕ್ಕಳನ್ನು ಇಷ್ಟಪಡಿಸುವುದು ಹೇಗೆ? ಯಾವ ಸಮಯದಲ್ಲಿ ಎಲ್ಲಿ ಪ್ರಚಾರ ಮಾಡಿದರೆ ಯಾರನ್ನು ಒಲಿಸಿಕೊಳ್ಳಬಹುದು ಇತ್ಯಾದಿ ವಿಚಾರಗಳ ಬಗ್ಗೆ ರಾಜ್ಯದ ನಾಯಕರು ಮತ್ತು ಕಾರ್ಯಕರ್ತರಿಗೆ ಪಾಠ ಮಾಡಲಿದ್ದಾರೆ.

    ಗುಜರಾತ್, ಉತ್ತರ ಪ್ರದೇಶದಲ್ಲಿ ಈ ತಂತ್ರಗಳನ್ನು ಅನುಸರಿಸಿ ಬಿಜೆಪಿ ಗೆದ್ದಿದೆ. ಅದೇ ತಂತ್ರವನ್ನು ರಾಜ್ಯದಲ್ಲೂ ಅನುಸರಿಲು ಶಾ ಮುಂದಾಗಿದ್ದಾರೆ. ಅಮಿತ್ ಶಾ ನಾಯಕರಿಗೆ ಮಾಡಲಿರುವ “ಚುನಾವಣಾ ಸ್ಪೆಷಲ್ ಕ್ಲಾಸ್” ನಲ್ಲಿರುವ ಪಠ್ಯದಲ್ಲಿರುವ ಅಂಶಗಳು ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು, ಅವುಗಳನ್ನು ಇಲ್ಲಿ ನೀಡಲಾಗಿದೆ.

    ಸ್ಪೆಷಲ್ ಕ್ಲಾಸ್ ನಲ್ಲಿ ಏನಿದೆ?
    ಪ್ರತಿನಿತ್ಯ ಮಧ್ಯಾಹ್ನ ಕಾರ್ಯಕರ್ತರ ಜೊತೆಗೆ ರಸ್ತೆ ಬದಿಯಲ್ಲಿಯೇ ನಿಂತು ಊಟ ಮಾಡಬೇಕು. ನಾಯಕ ಎನ್ನುವ ಹಮ್ಮು ಬಿಟ್ಟು ಅಲ್ಲೇ ಊಟ ಮಾಡಿದರೆ ನೀವು ಜನ ಸಾಮಾನ್ಯರಂತೆ ಗುರುತಿಸಿಕೊಳ್ಳುತ್ತಿರಿ. ಇದರಿಂದಾಗಿ ಕಾರ್ಯಕರ್ತರಿಗೆ ಪ್ರಚಾರ ಮಾಡಲು ಉತ್ಸಾಹ ಬರುತ್ತದೆ. ಸಾಧಾರಣವಾಗಿ ಮಧ್ಯಾಹ್ನದ ಬಳಿಕ ಕಾಲೇಜು ಕ್ಯಾಂಪಸ್, ಗ್ರಂಥಾಲಯದ ಬಳಿ ಹೋಗಿ ಪ್ರಚಾರ ಮಾಡಬೇಕು.

    ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಟೀ, ಕಾಫಿ ಕುಡಿಯಲು ಟೀ ಶಾಪ್ ಗೆ ಬರುತ್ತಾರೆ. ಹೀಗಾಗಿ ಪಕ್ಷವನ್ನು ಪ್ರಚಾರ ಮಾಡಲು ಸಂಜೆ 4 ಗಂಟೆಗೆ ಟೀ ಶಾಪ್ ಗೆ ಭೇಟಿ ನೀಡಿ. ಈ ವೇಳೆ ಜನರ ಜೊತೆ ಟೀ ಕುಡಿಯುತ್ತಾ ಬೆರೆತು ಪಕ್ಷವನ್ನು ಪ್ರಚಾರ ಮಾಡಿ. ಕತ್ತಲಾಗುತ್ತಿದ್ದಂತೆ ಚಾಟ್ ಸೆಂಟರ್ ಗಳ ಬಳಿ ಹೆಚ್ಚು ಜನರು ಸೇರಿರುತ್ತಾರೆ. ಹೀಗಾಗಿ 6 ಗಂಟೆಗೆ ಚಾಟ್ ಸೇವಿಸುತ್ತಾ ನಾಯಕರ ಬಗ್ಗೆ ತಿಳಿ ಹೇಳಬೇಕು.

    ತರಕಾರಿ ಹಾಗೂ ಹಣ್ಣಿನ ಮಳಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ರಾತ್ರಿ 7 ಗಂಟೆಯಿಂದ 8 ರವರೆಗೆ ಬರುತ್ತಿರುತ್ತಾರೆ. ಅವರ ಜೊತೆ ಮಾತನಾಡಿ ಪಕ್ಷದ ಕಡೆಗೆ ಗಮನ ಸೆಳೆಯಲು ಪ್ರಯತ್ನಿಸಿ. ಹಳ್ಳಿಗಳಲ್ಲಿ ಹಿರಿಯ ವ್ಯಕ್ತಿಗಳು ಸಂಜೆ ವೇಳೆ ಕಟ್ಟೆಯ ಮೇಲೆ ಕುಳಿತು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿರುತ್ತಾರೆ. ಅವರ ಚರ್ಚೆಯಲ್ಲಿ ಭಾಗಿಯಾಗಿ 15 ನಿಮಿಷ ಕಮಲದ ನಾಯಕರ ಬಗ್ಗೆ ತಿಳಿಸಬೇಕು.

    ಮಧ್ಯಾಹ್ನದ ಟೈಂ ಟೇಬಲ್ ಈ ಮೇಲಿನಂತಿದ್ದರೆ, ಬೆಳಗ್ಗೆಯೂ ಪ್ರಚಾರಕ್ಕೆ ಸಮಯ ನಿಗದಿಯಾಗಿದೆ. ಬೆಳಿಗ್ಗೆ 5.30 ರಿಂದ 7.30 ಗಂಟೆವರೆಗೆ ಉದ್ಯಾನವನಗಳಲ್ಲಿ, 7.30ರಿಂದ 8 ಗಂಟೆಯವರೆಗೆ ಕಾಫಿ ಸ್ಟಾಲ್‍ಗಳಲ್ಲಿ ಪ್ರಚಾರ ಮಾಡಬೇಕು. 8 ರಿಂದ 9 ಗಂಟೆವರೆಗೆ ಹೋಟೆಲ್, 9 ಗಂಟೆಗೆ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಪ್ರಚಾರ ಮಾಡಬೇಕು. ಇಷ್ಟು ಮಾಡಿದ ಮೇಲೆ 10 ಗಂಟೆಯ ಬಳಿಕ ಮನೆ ಮನೆ ಪ್ರಚಾರ ಆರಂಭಿಸಬೇಕು.

    ಮನೆ ಮನೆ ಪ್ರಚಾರ ಮಾಡುವ ವೇಳೆ ಕೈಯಲ್ಲಿ ಬರೀ ಕರಪತ್ರವನ್ನು ಹಿಡಿದು ಪ್ರಚಾರ ಮಾಡುವುದಲ್ಲ. ಕೈಯಲ್ಲಿ ಚಾಕಲೇಟ್ ಹಿಡಿದುಕೊಳ್ಳಿ. ಮಕ್ಕಳಿಗೆ ಚಾಕಲೇಟ್ ಕೊಟ್ಟರೆ ಅವರ ಪೋಷಕರಿಗೆ ಖುಷಿಯಾಗಿ ನೀವು ಅವರ ನೆನಪಿನಲ್ಲಿ ಇರಲು ಸಾಧ್ಯವಾಗುತ್ತದೆ. ಪ್ರಚಾರಕ್ಕೆ ಕೇವಲ ಬೆಳಗ್ಗೆ ಮತ್ತು ರಾತ್ರಿ ಹೋಗಬೇಕು ಎನ್ನುವ ಹಳೆ ಸಮಯ ಪರಿಪಾಲನೆಯನ್ನು ಬಿಟ್ಟು ಎಲ್ಲ ಸಮಯದಲ್ಲೂ ಪಕ್ಷಕ್ಕಾಗಿ ದುಡಿಯಿರಿ. ಚುನಾವಣೆಗೆ ಬೆರಳೆಣಿಕೆ ದಿನಗಳು ಮಾತ್ರ ಬಾಕಿ ಉಳಿದಿರುವುದು ಸಾಧ್ಯವಾದಷ್ಟು ಜನರ ಮಧ್ಯದಲ್ಲಿ ನೀವು ಇರಬೇಕು.

  • ಮಠಾಧೀಶರ ಭೇಟಿ ಬಳಿಕ ಸಾಹಿತಿಗಳ ಭೇಟಿಗೆ ಮುಂದಾದ ಅಮಿತ್ ಶಾ

    ಮಠಾಧೀಶರ ಭೇಟಿ ಬಳಿಕ ಸಾಹಿತಿಗಳ ಭೇಟಿಗೆ ಮುಂದಾದ ಅಮಿತ್ ಶಾ

    ಬೆಂಗಳೂರು: ಈ ಹಿಂದೆ ಪಕ್ಷದ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಮಠಗಳಿಗೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಹಿತಿಗಳಿಂದ ಸಲಹೆ ಪಡೆಯಲು ಮುಂದಾಗಿದ್ದಾರೆ.

    ಕರ್ನಾಟಕ ಚುನಾವಣೆಯ ಕುರಿತಾಗಿ ಸಲಹೆಗಳನ್ನು ಸಂಗ್ರಹಿಸುವ ಉದ್ದೇಶದಿಂದ ಏಪ್ರಿಲ್ 18 ಮತ್ತು 19ರಂದು ನಗರಕ್ಕೆ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಏ.18ರಂದು ರಾಜರಾಜೇಶ್ವರಿ ನಗರದಲ್ಲಿರುವ ದಲಿತ ಸಾಹಿತಿ ಸಿದ್ಧಲಿಂಗಯ್ಯ ಮತ್ತು ಹಂಪಿನಗರದಲ್ಲಿರುವ ಸಂಶೋಧಕ ಚಿದಾನಂದಮೂರ್ತಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.

    ಈ ವೇಳೆ ಇಬ್ಬರು ಸಾಹಿತಿಗಳೊಂದಿಗೆ ಚರ್ಚೆ ನಡೆಸಿ ರಾಜ್ಯ ವಿಧಾನ ಸಭಾ ಚುನಾವಣೆಗೆ ಅವರಿಂದ ಸಲಹೆಯನ್ನು ಸಂಗ್ರಹಿಸಲಿದ್ದಾರೆ. ಸಾಹಿತಿ ಹಾಗೂ ಸಂಶೋಧಕರಿಂದ ಸಲಹೆ ಪಡೆದು ಪರಿಣಾಮಕಾರಿ ಪ್ರಣಾಳಿಕೆಯನ್ನು ಸಿದ್ಧ ಪಡಿಸುವ ಉದ್ದೇಶವನ್ನು ಅಮಿತ್ ಶಾ ಹೊಂದಿದ್ದಾರೆ ಎನ್ನಲಾಗಿದೆ.

  • 10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    10 ವರ್ಷ ಆಯ್ತು, ಗ್ರಾಮದಲ್ಲಿ ಏನೂ ಆಗಿಲ್ಲ- ಪ್ರಚಾರಕ್ಕೆ ಬಂದ ಸಚಿವರನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

    ಹಾಸನ: 10 ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಮಾಡಿಲ್ಲ. ಆದರೆ ಈಗ ಮತ ಪ್ರಚಾರಕ್ಕೆ ನೀವು ಬಂದಿದ್ದೀರ ಎಂದು ಸಚಿವ ಎ.ಮಂಜು ಅವರಿಗೆ ಗ್ರಾಮಸ್ಥರು ಕ್ಲಾಸ್ ತೆಗೆದುಕೊಂಡ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ನಡೆದಿದೆ.

    ಸಚಿವ ಎ.ಮಂಜು ಅರಕಲಗೂಡು ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಕೂಡ ಅವರಿಗೆ ಕ್ಷೇತ್ರದ ಟಿಕೆಟ್ ಸಿಕ್ಕಿದ್ದು, ಚುನಾವಣೆ ಪ್ರಚಾರಕ್ಕಾಗಿ ಕಳೆದ ರಾತ್ರಿ ಗ್ರಾಮಕ್ಕೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಕೃಷಿ ಜಮೀನು ನೀಡುವಲ್ಲಿ ನಮಗೆ ಕಡೆಗಣಿಸಿದ್ದೀರಿ, ಈಗ ವೋಟು ಕೇಳೋದಕ್ಕೆ ಬಂದಿದ್ದೀರ ಎಂದು ಗ್ರಾಮಸ್ಥರು ತರಾಟೆ ತೆಗೆದುಕೊಂಡರು.

    ಈ ಸಂದರ್ಭದಲ್ಲಿ ಸಮರ್ಥನೆಗೆ ಮುಂದಾದ ಸಚಿವರ ಮಾತನ್ನು ಗ್ರಾಮಸ್ಥರು ಕೇಳಲಿಲ್ಲ, ರಸ್ತೆ ಅಭಿವೃದ್ಧಿ ಮಾಡಿದ್ದೇನೆ ಅದೂ ಇದೂ ಅನ್ನುವುದಕ್ಕೆ ಮುಂದಾದ್ರು. ಆದರೆ ಗ್ರಾಮಸ್ಥರು ಮಾತ್ರ ಅವರ ಮಾತನ್ನು ಕೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಸಚಿವರೊಂದಿಗೆ ಇದ್ದ ಬೆಂಬಲಿಗರು ಸಹ ವಾದಿಸಲು ಮುಂದಾದ್ದರು. ಆದರೂ ಸಹ ಪ್ರಯೋಜನ ಆಗಲಿಲ್ಲ. ಗ್ರಾಮಸ್ಥರ ಆಕ್ರೋಶವನ್ನು ಕಂಡು ವಿಧಿಯಿಲ್ಲದೇ ಸಚಿವರು ಅಲ್ಲಿಂದ ವಾಪಸಾದ್ರು.

    ಎ. ಮಂಜು ಅರಕಲಗೂಡು ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎ.ಟಿ.ರಾಮಸ್ವಾಮಿ ವಿರುದ್ಧ ಜಯ ಸಾಧಿಸಿದ್ರು. 2008 ಮತ್ತು 1999ರ ಚುನಾವಣೆಗಳಲ್ಲಿ ಜಯ ಸಾಧಿಸಿದ್ದರು.

    https://www.youtube.com/watch?v=-0eW63YGmCo