Tag: Karnataka Election

  • ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!

    ಮಂಡ್ಯ: ಜಿಲ್ಲೆಯ ಮಳವಳ್ಳಿಯಲ್ಲಿ ರಾತ್ರಿ ಹೈಡ್ರಾಮಾವೊಂದು ನಡೆದಿದೆ. ಎಸ್‍ಬಿಐ ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.

    ಮಂಗಳವಾರ ರಾತ್ರಿ 10 ಗಂಟೆ ಸುಮಾರಿಗೆ ಶ್ರೀರಂಗಪಟ್ಟಣದ ಎಸ್‍ಬಿಐ ಬ್ಯಾಂಕ್‍ನಿಂದ ಕೆಎ 11, 8489 ನಂಬರಿನ ಐಷರ್ ವಾಹನದಲ್ಲಿ 20 ಕೋಟಿ ಹಣ ತೆಗೆದುಕೊಂಡು ಬ್ಯಾಂಕ್ ಸಿಬ್ಬಂದಿ ಹೊರಟಿದ್ದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿತ್ತು. ಕೂಡಲೇ ವಾಹನ ಹಿಂಬಾಲಿಸಿದ ಜನರು ಮಳವಳ್ಳಿಯ ಎಸ್‍ಬಿಐ ಬ್ಯಾಂಕ್‍ವರೆಗೂ ಬಂದಿದ್ದರು. ಈ ವೇಳೆಗಾಗಲೇ ವಿಷಯ ತಿಳಿದು ನೂರಾರು ಮಂದಿ ಬ್ಯಾಂಕ್ ಮುಂದುಗಡೆ ಜಮಾಯಿಸಿದ್ರು.

    ಹಗಲಲ್ಲಿ ಹಣ ಸಾಗಿಸದೇ ಮಧ್ಯರಾತ್ರಿ ಏಕೆ ಸಾಗಿಸಿದ್ದೀರಾ ಅಂತಾ ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ರು. ಮಾಜಿ ಶಾಸಕ ಅನ್ನದಾನಿ, ಚುನಾವಣಾಧಿಕಾರಿಗಳು, ಪೊಲೀಸರ ಸಮ್ಮುಖದಲ್ಲಿ ರಾತ್ರಿಯೆಲ್ಲಾ 20 ಕೋಟಿ ಹಣದ ಎಣಿಕೆ ಕೂಡ ನಡೆಯಿತು. ನಂತರ ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿ ಚುನಾವಣಾಧಿಕಾರಿಗಳು ಹಣವನ್ನು ಸೀಜ್ ಮಾಡಿದ್ದಾರೆ.

    ರಾತ್ರಿ ವೇಳೆಯಲ್ಲಿ ಹಣ ಸಾಗಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅನ್ನದಾನಿ ಅನುಮಾನ ವ್ಯಕ್ತಪಡಿಸಿದ್ದು, ಬ್ಯಾಂಕ್ ಹೆಸರಲ್ಲಿ ಚುನಾವಣೆ ಖರ್ಚಿಗೆ ಹಣ ವರ್ಗಾವಣೆ ಆಗುತ್ತಿದೆ ಅಂತಾ ಆರೋಪಿಸಿದ್ದಾರೆ.

  • ಅಂಬಿ ಮನವೊಲಿಸಲು ಮುಂದಾದ ಸಿಎಂ-ಮಂಡ್ಯದಿಂದ ಅಂಬರೀಶ್ ಸ್ಪರ್ಧೆ ಮಾಡ್ತಾರಾ?

    ಅಂಬಿ ಮನವೊಲಿಸಲು ಮುಂದಾದ ಸಿಎಂ-ಮಂಡ್ಯದಿಂದ ಅಂಬರೀಶ್ ಸ್ಪರ್ಧೆ ಮಾಡ್ತಾರಾ?

    ಬೆಂಗಳೂರು: ಕೆಲವರು ಬಿ ಫಾರಂ ಸಿಗ್ತಿಲ್ಲ ಅಂತಾ ಒದ್ದಾಡುತ್ತಿದ್ರೆ, ಇತ್ತ ಮಾಜಿ ಶಾಸಕ ಅಂಬರೀಶ್ ಮಾತ್ರ ಬಿ ಫಾರಂ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಮೂಲಗಳ ಪ್ರಕಾರ ಅಂಬರೀಶ್ ಹೆಸರನ್ನು ನಮೂದಿಸದ ಫಾರಂ ಕೇಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಏನಿದು ಬಿ ಫಾರಂ? ಫಾರಂ-26 ಏನು?

    ಯಾವುದೇ ಹೇಳಿಕೆ ನೀಡದೇ ತಟಸ್ಥವಾಗಿ ಉಳಿದಿರುವ ಅಂಬರೀಶ್ ಅವರನ್ನು ಮನವೊಲಿಸಲು ಕಾಂಗ್ರೆಸ್ ನಾಯಕರು ಪ್ರಯತ್ನ ಪಡುತ್ತಿದ್ದಾರೆ. ಅದೇ ರೀತಿ ಬಿಫಾರಂ ನೀಡಲು ಕಾಂಗ್ರೆಸ್ ನಾಯಕರು ಕಸರತ್ತು ಮುಂದುವರೆಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಫೋನ್ ಮಾಡಿದ್ರೂ, ಸಚಿವ ಕೆಜೆ ಜಾರ್ಜ್ ಅಂಬಿ ಮನೆಗೆ ಹೋಗಿ ಬಿ ಫಾರಂ ತಗೊಳಿ ಅಂದ್ರೂ ತಗೊಂಡಿರಲಿಲ್ಲ. ಸಿಎಂ ಬರ್ಲಿ ಮಾತಾಡ್ತಿನಿ ಅಂತಾ ಹೇಳಿದ್ದರಂತೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಅಂಬಿ ಸ್ಪರ್ಧೆ: ಮಂಡ್ಯದಲ್ಲಿ ಭಾರೀ ಚರ್ಚೆ ಆಗ್ತಿದೆ 4 ವದಂತಿ

    ಇಂದು ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ನೇರವಾಗಿ ಅಂಬರೀಶ್ ನಿವಾಸಕ್ಕೆ ತೆರಳಲಿದ್ದಾರೆ. ಈ ವೇಳೆ ಸಿಎಂ ಅಂಬರೀಶ್ ಅವರಿಗೆ ಬಿ ಫಾರಂ ತೆಗೆದುಕೊಳ್ಳುವಂತೆ ಮನವೊಲಿಸುವ ಕೆಲಸ ಮಾಡಲಿದ್ದಾರೆ. ಮಂಡ್ಯದಿಂದ ಅಂಬರೀಶ್ ಕಣಕ್ಕಿಳಿತಾರೋ ಇಲ್ವೋ ಅನ್ನೋ ಸಸ್ಪೆನ್ಸ್ ಇನ್ನೂ ಹಾಗೇ ಮುಂದುವರೆದಿದೆ. ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್‍ಗೆ ಹೊಸ ಬೇಡಿಕೆಯಿಟ್ಟ ಮಂಡ್ಯದ ಗಂಡು ಅಂಬರೀಶ್

  • ಚುನಾವಣಾ ಪೂರ್ವದಲ್ಲಿಯೇ ಭುಗಿಲೆದ್ದ ರಾಜಕೀಯ ಸಂಘರ್ಷ- ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

    ಚುನಾವಣಾ ಪೂರ್ವದಲ್ಲಿಯೇ ಭುಗಿಲೆದ್ದ ರಾಜಕೀಯ ಸಂಘರ್ಷ- ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ

    ಗದಗ: ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ವೈಷಮ್ಯ ಹಿನ್ನೆಲೆ ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

    ಕಾಂಗ್ರೆಸ್ ಮುಖಂಡ ರಾಜು ಕಲಾಲ ಎಂಬವರಿಗೆ ಸೇರಿದ ಸಂಜು ಡಾಬಾದಲ್ಲಿ ತಡರಾತ್ರಿ ಗಲಾಟೆ ನಡೆದಿದೆ. ನರಗುಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಹೊಡೆದಾಟ ನಡೆದಿದೆ.

    ನರಗುಂದ ಕ್ಷೇತ್ರದ ಕಾಂಗ್ರೆಸ್ ಹಾಲಿ ಶಾಸಕ ಬಿ.ಆರ್ ಯಾವಗಲ್ ರ ಪುತ್ರರಾದ ಡಾ. ಸಂತೋಷ, ಪ್ರವೀಣ್ ಹಾಗು ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಸಿ ಪಾಟೀಲ್ ಮೂವರು ಪುತ್ರರಾದ ಮಹೇಶಗೌಡ, ಸಂಗನಗೌಡ, ಉಮೇಶಗೌಡರ ನಡುವೆ ಗಲಾಟೆ ನಡೆದಿದೆ. ಕಾಂಗ್ರೆಸ್ ಮುಖಂಡ ರಾಜು ಕಲಾಲ ಮಧ್ಯರಾತ್ರಿವರೆಗೂ ಡಾಬಾ ತೆರೆದಿರುತ್ತಾರೆ. ಮತದಾರರಿಗೆ ಊಟ ಹಾಗೂ ಡ್ರಿಂಕ್ಸ್ ನೀಡಿ ಪುಸಲಾಯಿಸುತ್ತಾರೆ ಎಂದು ಬಿಜೆಪಿಯವರ ಆರೋಪಿಸುತ್ತಾರೆ.

    ಇನ್ನು ಊಟದ ನೆಪದಲ್ಲಿ ಡಾಬಾಗೆ ಬಂದು ಸುಕಾಸುಮ್ಮನೆ ಜಗಳ ಮಾಡಿ ನಮ್ಮ ಮೇಲೆ ಹಲ್ಲೆ ನಡೆಸಿ ಡಾಬಾ ಧ್ವಂಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಜು ಕಲಾಲ ಹಾಗೂ ಬೆಂಬಲಿಗರ ಆರೋಪವಾಗಿದೆ. ಬಿಜೆಪಿ ಅಭ್ಯರ್ಥಿ ಸಿ.ಸಿ ಪಾಟೀಲ್ ಸಹ ಈ ಗಲಾಟೆ ವೇಳೆ ಸ್ಥಳದಲ್ಲಿದ್ದರು ಎಂಬುದಾಗಿ ತಿಳಿದು ಬಂದಿದೆ. ಅವರೇ ಬಂದು ಮುಂದೆ ನಿಂತು ಗಲಾಟೆ ಮಾಡಿಸಿದ್ದಾರೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ.

    ಇದರಲ್ಲಿ ಎರಡು ಪಕ್ಷದ ಕಾರ್ಯಕರ್ತರರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನ ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗದಗ ಜಿಲ್ಲೆ ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಬ್ರಿಗೇಡ್ ಕಟ್ಟಿ ಯುದ್ಧಕ್ಕೆ ಇಳಿದವ್ರಿಗೆ ಬಿಸಿ ಮುಟ್ಟಿಸಿದ ಬಿಜೆಪಿ!

    ಬ್ರಿಗೇಡ್ ಕಟ್ಟಿ ಯುದ್ಧಕ್ಕೆ ಇಳಿದವ್ರಿಗೆ ಬಿಸಿ ಮುಟ್ಟಿಸಿದ ಬಿಜೆಪಿ!

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತರೆಲ್ಲರಿಗೂ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಸುದ್ದಿಯೊಂದು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿದೆ. 2017ರಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿದ ಎಲ್ಲರಿಗೂ ಸೈಲಂಟ್ ಆಗಿಯೇ ಯಡಿಯೂರಪ್ಪ ಬಿಸಿ ಮುಟ್ಟಿಸಿದಾರಂತೆ.

    ಬ್ರಿಗೇಡ್ ನಲ್ಲಿ ಗುರುತಿಸಿಕೊಂಡಿದ್ದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮತ್ತು ಎಸ್.ಎ.ರವೀಂದ್ರ ಅವರಿಗೆ ಮಾತ್ರ ಬಿಜೆಪಿ ಟಿಕೆಟ್ ನೀಡಿದೆ. ಈಶ್ವರಪ್ಪರನ್ನ ನಂಬಿ ಸಿಂಧನೂರು ಟಿಕೆಟ್‍ಗೆ ಯತ್ನಿಸಿದ್ದ ಮಾಜಿ ಸಂಸದ ವಿರೂಪಾಕ್ಷಪ್ಪಗೆ ನಿರಾಸೆಯಾಗಿದೆ. ಶಿಗ್ಗಾಂವಿ ಟಿಕೆಟ್ ಬಯಸಿದ್ದ ಸೋಮಣ್ಣ ಬೇವಿನಮರದ ಬಂಡಾಯ ಎದ್ದಿದ್ದಾರೆ. ಇದೇ ವೇಳೆ ಮಾಜಿ ಮೇಯರ್ ವೆಂಕಟೇಶ್ ಮೂರ್ತಿ ಬಿಜೆಪಿಗೆ ಗುಡ್‍ಬೈ ಹೇಳಿದ್ದಾರೆ. ಇದನ್ನೂ ಓದಿ: ನನ್ನ ವಿರುದ್ಧ ಕ್ರಮಕೈಗೊಳ್ಳೋದಾಗಿ ಬಿಎಸ್‍ವೈ ಹೇಳಿ ಹಲವು ವರ್ಷಗಳೇ ಆಯ್ತು: ಈಶ್ವರಪ್ಪ

    ಈ ಹಿಂದೆ ರಾಯಣ್ಣ ಬ್ರಿಗೇಡ್‍ನಲ್ಲಿ ಗುರುತಿಸಿಕೊಂಡಿದ್ದ ಮಾಯಕೊಂಡದ ಪ್ರಬಲ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಬಸವರಾಜ್ ನಾಯ್ಕ್‍ಗೆ ಟಿಕೆಟ್ ತಪ್ಪಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಇದೇ ಕ್ಷೇತ್ರದಿಂದ ಸಿದ್ದೇಶ್ವರ್ ತಮ್ಮ ಬೆಂಬಲಿಗ ಪ್ರೊಫೆಸರ್ ಲಿಂಗಣ್ಣಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ. ಇದು ಮಾಜಿ ಮಂತ್ರಿ ಎಸ್.ರವೀಂದ್ರನಾಥ್ ಮತ್ತು ಬಸವರಾಜನಾಯ್ಕರನ್ನ ಸಿಟ್ಟಿಗೆಬ್ಬಿಸಿದೆ. ಟಿಕೆಟ್ ಸಿಗದೇ ಇದ್ರೆ ಬಿಜೆಪಿ ಬಂಡವಾಳ ಬಯಲು ಮಾಡ್ತೀನಿ ಅಂತ ಬಸವರಾಜನಾಯ್ಕ ಹೇಳಿದ್ದಾರೆ. ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು

  • ಜ್ಯೋತಿಷ್ಯದ ಪ್ರಕಾರ ಇಂದು ಬೆಸ್ಟ್ ಡೇ ಅಂತೆ-ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

    ಜ್ಯೋತಿಷ್ಯದ ಪ್ರಕಾರ ಇಂದು ಬೆಸ್ಟ್ ಡೇ ಅಂತೆ-ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ

    ಬೆಂಗಳೂರು: ಎಲೆಕ್ಷನ್ ಕಣ ರಂಗೇರುತ್ತಿದ್ದು, ನಾಮಪತ್ರ ಸಲ್ಲಿಸಲು ಇವತ್ತು ಬಿಟ್ರೆ ಇರೋದು ಇನ್ನು ನಾಲ್ಕೇ ದಿನ. ಅದ್ರಲ್ಲಿ ಒಂದು ಭಾನುವಾರ, ಒಂದು ಮಂಗಳವಾರ ಬರಲಿದೆ. ಹೀಗಾಗಿ ಇವತ್ತೇ ಘಟಾನುಘಟಿ ನಾಯಕರು ತಮ್ಮ ಉಮೇದುವಾರಿಕೆ ಸಲ್ಲಿಸಲು ಮುಂದಾಗುತ್ತಿದ್ದಾರೆ.

    ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ, ಜಿಟಿ ದೇವೇಗೌಡ, ರಾಮನಗರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ವರುಣಾದಲ್ಲಿ ಯತೀಂದ್ರ, ಸಚಿವರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ಆರ್ ವಿ ದೇಶಪಾಂಡೆ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕರು ಇಂದೇ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

    ದಿನದ ವಿಶೇಷತೆ: ಜ್ಯೋತಿಷ್ಯದ ಪ್ರಕಾರ ಶುಭ ಶುಕ್ರವಾರದ ಜೊತೆಗೆ ಚೌತಿ ಹಾಗೂ ಶಂಕರ ದಿನವಂತೆ. ಕಳೆದ ಎರಡು ಮೂರು ದಿನದಿಂದ ಅಮವಾಸ್ಯೆಯ ಆಸುಪಾಸು ಇದ್ದಿರೋದ್ರಿಂದ ಸಾಕಷ್ಟು ಜನ ನಾಮಪತ್ರ ಸಲ್ಲಿಕೆಗೆ ಉತ್ಸಾಹ ತೋರಿಲ್ಲ. ಆದ್ದರಿಂದ ಜ್ಯೋತಿಷಿಗಳ ಸಲಹೆಯ ಮೇರೆಗೆ ಇಂದೇ ರಾಜಕೀಯ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. ಅದ್ರಲ್ಲೂ ಬಹುತೇಕ 10 ಗಂಟೆಯಿಂದ 11 ಗಂಟೆಯೊಳಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇನ್ನೊಂದು ವಿಶೇಷ ಅಂದ್ರೇ ಚೌತಿ ಹಾಗೂ ಶಂಕರ ದಿನ ಬಂದಿರೋದ್ರಿಂದ ಶಿವ ಹಾಗೂ ಗಣೇಶನ ಪೂಜೆಗೆ ಪ್ರಾಶಸ್ತ್ಯದಿನ. ಇಂದು ದೇಗುಲದಲ್ಲಿ ಪೂಜೆ ಸಲ್ಲಿಸಿಯೇ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ.

    ಮೈಸೂರು ಪೊಲೀಸರಿಗೆ ಇವತ್ತೊಂದಿನ ಕಳೆದ್ರೆ ಸಾಕಪ್ಪ ಅನ್ನಿಸಿಬಿಟ್ಟಿದೆ. ಕಾರಣ ಇವತ್ತೇ ಸಿಎಂ ಮತ್ತು ಜಿಟಿಡಿ ನಾಮಪತ್ರ ಸಲ್ಲಿಸ್ತಿರೋದು. ಹೀಗಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

    ನಾಮಿನೇಷನ್ ಹಾಕಲು ಮೊದಲು ಅನುಮತಿ ಪಡೆದಿದ್ದು ಜಿಟಿ ದೇವೇಗೌಡರು, ಆದ್ರೆ ಮೊದಲು ಕಾಂಗ್ರೆಸ್ ಪಕ್ಷದ ಮೆರವಣಿಗೆಗೆ ಪೊಲೀಸರು ಅವಕಾಶ ನೀಡಿದ್ದಾರೆ. ಮಧ್ಯಾಹ್ನ 12 ರಿಂದ 1 ಗಂಟೆಯವರೆಗೆ ಕಾಂಗ್ರೆಸ್ ಮೆರವಣಿಗೆಗೆ ಪೊಲೀಸರ ಅವಕಾಶ ಕಲ್ಪಿಸಿದ್ದಾರೆ. ಜಿ.ಟಿ.ದೇವೆಗೌಡರಿಗೆ 2ರಿಂದ 3ಗಂಟೆಯವರೆಗೆ ಮೆರಣಿಗೆಗೆ ಸಮಯ ನಿಗದಿ ಮಾಡಲಾಗಿದೆ. ಆದರೆ ಸಿಎಂ ಪ್ರೋಗ್ರಾಂ ಬದಲಾದ ಕಾರಣ ಮೆರವಣಿಗೆ ತಡವಾಗಿ ಆರಂಭವಾಗುವ ಸಾಧ್ಯತೆಗಳಿದ್ದು, ಇದೇ ವೇಳೆಗೆ ಜೆಡಿಎಸ್ ಪಕ್ಷದ ಮೆರವಣಿಗೆ ಕೂಡ ಆರಂಭವಾಗಬೇಕಿದೆ. ಇಬ್ಬರ ಮೆರವಣಿಗೆ ಅರಮನೆ ಮುಂಭಾಗದ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಆರಂಭವಾಗಲಿದ್ದು, ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸೋದು ಹೇಗೆ ಎಂದು ಪೊಲೀಸರು ಚಿಂತೆಗೀಡಾಗಿದ್ದಾರೆ.

  • ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!

    ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಸರ್ಕಾರ!

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಕಣ ಕಾವೇರಿದೆ. ಚುನಾವಣೆಗೆ ಇನ್ನೂ 23 ದಿನಗಳು ಬಾಕಿ ಉಳಿದಿವೆ. ಮತದಾರರ ಮನ ಗೆಲ್ಲಲು ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ತಂತ್ರ-ಪ್ರತಿತಂತ್ರದಲ್ಲಿ ತೊಡಗಿದ್ದಾರೆ. ಪಬ್ಲಿಕ್‍ಟಿವಿ ಕೂಡ ಮಿನಿ ಸರ್ವೇ ನಡೆಸಿದೆ.

    ಈ ಸರ್ವೆ ವೇಳೆ ಹಲವಾರು ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು? ಈಗ ಚುನಾವಣೆ ನಡೆದ್ರೆ ನೀವು ಯಾರಿಗೆ ಮತ ಚಲಾಯಿಸುತ್ತೀರಿ? ಪ್ರತ್ಯೇಕ ಧರ್ಮದ ವಿಚಾರ ಎಲೆಕ್ಷನ್‍ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾ? ಹೀಗೆ ನಾನಾ ಪ್ರಶ್ನಾವಳಿಗಳನ್ನು ಮುಂದಿಟ್ಟು ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಪಬ್ಲಿಕ್ ಟಿವಿಯ ಪ್ರಶ್ನಾವಳಿಯೇನು? ಮತದಾರರ ಉತ್ತರವೇನು ಎನ್ನುವುದನ್ನು ಇಲ್ಲಿ ನೀಡಲಾಗಿದೆ.

    1. ಲಿಂಗಾಯತ ಧರ್ಮ ವಿಚಾರ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ವರದಾನನಾ? ತಿರುಗುಬಾಣನಾ?
    ಹೌದು. ಕಾಂಗ್ರೆಸ್ ಗೆ ಲಾಭದಾಯಕ – 30.41%
    ಇಲ್ಲ. ಕಾಂಗ್ರೆಸ್ ನಷ್ಟ – 19.51%
    ಬಿಜೆಪಿಗೆ ನಷ್ಟ – 6.07%
    ಬಿಜೆಪಿಗೆ ಲಾಭ – 13.50%
    ರಾಜಕೀಯ, ಧರ್ಮದ ಮಿಶ್ರಣ ತಪ್ಪು – 20.49%
    ಏನು ಹೇಳಲ್ಲ – 10.02%

    2. ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನದಿಂದ ಇತರೆ ಜಾತಿಗಳು ಸಿಟ್ಟಾಗಿದ್ದಾವಾ?
    ಹೌದು – 42.44%
    ಇಲ್ಲ – 22.35%
    ಗೊತ್ತಿಲ್ಲ – 35.21%

    3.ಸಿದ್ದರಾಮಯ್ಯ ಸರ್ಕಾರದ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮುಂತಾದ ಭಾಗ್ಯಗಳು ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಜಯದ ಭಾಗ್ಯ ತಂದುಕೊಡುತ್ತಾ?
    ಹೌದು. ಖಂಡಿತ – 28.02%
    ಸ್ವಲ್ಪ ಅನುಕೂಲ – 36.87%
    ಇಲ್ಲ – 27.52%
    ಗೊತ್ತಿಲ್ಲ – 7.59%

    4.ಕಾಂಗ್ರೆಸ್, ಬಿಜೆಪಿ ಮಠ ಮಂದಿರ ಪಾಲಿಟಿಕ್ಸ್ ಕ್ಲಿಕ್ ಆಗುತ್ತಾ?
    ಕಾಂಗ್ರೆಸ್ ಗೆ ಲಾಭ, ಬಿಜೆಪಿಗೆ ನಷ್ಟ – 16.37%
    ಕಾಂಗ್ರೆಸ್ ಗೆ ನಷ್ಟ, ಬಿಜೆಪಿಗೆ ಲಾಭ – 22.57%
    ಇಬ್ಬರಿಗೂ ಸ್ವಲ್ಪ ಲಾಭ ಆಗಬಹುದು – 32.01%
    ಇಬ್ಬರಿಗೂ ನಷ್ಟವಾಗಬಹುದು – 12.01%
    ಏನು ಹೇಳಲ್ಲ – 17.04%

    5. ಜೆಡಿಎಸ್ ಹಾಗೂ ಬಿಎಸ್‍ಪಿ ಚುನಾವಣಾ ಮೈತ್ರಿಯಿಂದ ದಲಿತರ ವೋಟು ಡಿವೈಡ್ ಆಗುತ್ತಾ?
    ಹೌದು. ಮತ ವಿಭಜನೆ ಆಗುತ್ತೆ – 20.14%
    ಇಲ್ಲ. ವ್ಯತ್ಯಾಸ ಆಗಲ್ಲ – 56.50%
    ಗೊತ್ತಿಲ್ಲ – 23.36%

    6. ಸಿದ್ದರಾಮಯ್ಯ ಸರ್ಕಾರಕ್ಕೆ ನೀವು ಕೋಡೋ ಅಂಕ ಎಷ್ಟು?
    ಅತ್ಯುತ್ತಮ – 12.29%
    ಉತ್ತಮ – 21.61%
    ಸಾಧಾರಣ – 33.74%
    ಕಳಪೆ – 17.86%
    ಅತಿ ಕಳಪೆ – 14.50%

    7.ಈ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಹಾಕುತ್ತೀರಿ
    ಪಕ್ಷ – 11.18%
    ಅಭಿವೃದ್ಧಿ – 3.74%
    ಅಭ್ಯರ್ಥಿ – 12.93%
    ಜಾತಿ – 18.93%
    ಧರ್ಮ – 20.24%
    ಸಿಎಂ ಸಿದ್ದರಾಮಯ್ಯ – 7.71%
    ನರೇಂದ್ರ ಮೋದಿ – 16.12%
    ಕುಮಾರಸ್ವಾಮಿ – 6.15%
    ಇತರೆ – 3.00%

     

    8. ಈ ಚುನಾವಣೆಯಲ್ಲಿ ನಿಮ್ಮ ಮತ ಯಾರಿಗೆ?
    ಕಾಂಗ್ರೆಸ್ – 30.82%
    ಬಿಜೆಪಿ – 29.65%
    ಜಿಡಿಎಸ್ – 22.52%
    ನೋಟಾ – 5.17%
    ಇತರೆ – 11.84%

    9. ನಿಮ್ಮ ಪ್ರಕಾರ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು?
    ಸಿದ್ದರಾಮಯ್ಯ – 24.66%
    ಯಡಿಯೂರಪ್ಪ – 21.65%
    ಕುಮಾರಸ್ವಾಮಿ – 20.63%
    ಮಲ್ಲಿಕಾರ್ಜುನ ಖರ್ಗೆ – 4.67%
    ಜಿ. ಪರಮೇಶ್ವರ್ – 3.86%
    ಹೊಸ ಮುಖ – 12.09%
    ಏನು ಹೇಳಲ್ಲ – 9.90%
    ಇತರೆ – 2.54%

    10. ಈ ಬಾರಿ ಸ್ವತಂತ್ರ ಸರ್ಕಾರವೋ, ಸಮ್ಮಿಶ್ರ ಸರ್ಕಾರವೋ?
    ಪೂರ್ಣ ಬಹುಮತ ಸರ್ಕಾರ – 39.64%
    ಅತಂತ್ರ ಪರಿಸ್ಥಿತಿ – 43.23%
    ಗೊತ್ತಿಲ್ಲ -17.13%

    11. ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯಾವುದು?
    ಬಿಜೆಪಿ + ಜೆಡಿಎಸ್ – 44.30%
    ಕಾಂಗ್ರೆಸ್ + ಜೆಡಿಎಸ್ – 28.73%
    ಬಿಜೆಪಿ + ಕಾಂಗ್ರೆಸ್ – 6.74%
    ಯಾವುದು ಇಲ್ಲ – 20.23%

    12. ಬಿಜೆಪಿಗೆ ಮೋದಿಯೇ ಆಸರೆನಾ ಅಥವಾ ಬಿಎಸ್‍ವೈ ಆಸರೆನಾ?
    ಮೋದಿ ಆಸರೆ
    ಹೌದು – 67.20%
    ಇಲ್ಲ – 22.36%
    ಗೊತ್ತಿಲ್ಲ – 10.44%

    ಬಿಎಸ್‍ವೈ ಆಸರೆ
    ಹೌದು – 19.22%
    ಇಲ್ಲ – 57.66%
    ಗೊತ್ತಿಲ್ಲ – 23.12%

    13. ಕಾಂಗ್ರೆಸ್‍ಗೆ ರಾಹುಲ್ ಆಸರೆನಾ ಅಥವಾ ಸಿದ್ದರಾಮಯ್ಯ ಆಸರೆನಾ?
    ರಾಹುಲ್ ಆಸರೆ
    ಹೌದು – 24.98%
    ಇಲ್ಲ – 52.86%
    ಗೊತ್ತಿಲ್ಲ – 22.16%

    ಸಿದ್ದರಾಮಯ್ಯ ಆಸರೆ
    ಹೌದು – 45.57%
    ಇಲ್ಲ – 22.18%
    ಗೊತ್ತಿಲ್ಲ – 32.25%

    14. ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ ಎಂದು ಭಾವಿಸುತ್ತೀರಾ?
    ಬಿಜೆಪಿ ಹಿಂದೂಪರ, ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ – 29.54%
    ಕಾಂಗ್ರೆಸ್ ಹಿಂದೂ ವಿರೋಧಿ, ಬಿಜೆಪಿ ಹಿಂದೂ ಪರ – 35.73%
    ಏನು ಹೇಳಲ್ಲ – 34.73%

    15. ಪಬ್ಲಿಕ್ ಸರ್ವೆಯ ಅಂತಿಮ ಫಲಿತಾಂಶ?
    ಕಾಂಗ್ರೆಸ್ 85-95
    ಬಿಜೆಪಿ 75-85
    ಜೆಡಿಎಸ್ 40-45
    ಇತರೆ 05

  • ಅಂಬಿ ಸ್ಪರ್ಧೆ: ಮಂಡ್ಯದಲ್ಲಿ ಭಾರೀ ಚರ್ಚೆ ಆಗ್ತಿದೆ 4 ವದಂತಿ

    ಅಂಬಿ ಸ್ಪರ್ಧೆ: ಮಂಡ್ಯದಲ್ಲಿ ಭಾರೀ ಚರ್ಚೆ ಆಗ್ತಿದೆ 4 ವದಂತಿ

    ಬೆಂಗಳೂರು: ಅಂಬರೀಶ್ ಸ್ಪರ್ಧೆ ಬಗ್ಗೆ ಕಾಂಗ್ರೆಸ್‍ನಲ್ಲಿ ಭಾರೀ ಚರ್ಚೆ ಎದ್ದಿದೆ. ಟಿಕೆಟ್ ಘೋಷಣೆಯಾದರೂ ಅಂಬರೀಶ್ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸದ ಹಿನ್ನೆಲೆಯಲ್ಲಿ ಕೈ ನಾಯಕರು ಈಗ ಗೊಂದಲದಲ್ಲಿದ್ದಾರೆ.

    ಅಂಬಿ ಮನವೊಲಿಕೆಗೆ ಬುಧವಾರ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆಜೆ ಜಾರ್ಜ್ ಸಂಧಾನ ಮಾಡಿದ್ದರು. ಇದರ ಬೆನ್ನಲ್ಲೇ ಮಂಡ್ಯದಲ್ಲಿ ನಾಲ್ಕು ವದಂತಿಗಳು ಭಾರೀ ಊಹಾಪೋಹಕ್ಕೆ ಕಾರಣವಾಗಿದೆ.

    ಚರ್ಚೆಯಾಗುತ್ತಿರುವ 4 ವದಂತಿಗಳು
    ವದಂತಿ 1 – ಮಂಡ್ಯ ಕ್ಷೇತ್ರದ ಖಾಲಿ ಬಿ ಫಾರಂಗಾಗಿ ಅಂಬರೀಶ್ ಬೇಡಿಕೆ
    ವದಂತಿ 2 – ಖಾಲಿ ಬಿ ಫಾರಂ ಅನ್ನ ಆಪ್ತ ಅಮರಾವತಿ ಚಂದ್ರಶೇಖರ್ ಗೆ  ಕೊಡಲು ಪ್ಲಾನ್
    ವದಂತಿ 3 – ಕೊನೆ ಕ್ಷಣದಲ್ಲಿ ಪತ್ನಿ ಸುಮಲತಾರನ್ನು ಅಂಬರೀಶ್ ಕಣಕ್ಕೆ ಇಳಿಸಲಿದ್ದಾರೆ.
    ವದಂತಿ 4 – ಅಂಬಿಯೇ ಸ್ಪರ್ಧೆ ಮಾಡೋದು ಖಚಿತ. ಏಪ್ರಿಲ್ 23/24ಕ್ಕೆ ಮಂಡ್ಯಕ್ಕೆ ಬರ್ತಾರೆ ಅಂತಾರೆ ಕೆಲವರು