Tag: Karnataka Election

  • ನಾನು ಕರ್ನಾಟಕಕ್ಕೆ ಮುಸ್ಲಿಂ ಮತಗಳನ್ನು ಒಡೆಯಲು ಬಂದಿಲ್ಲ: ಅಸಾದುದ್ದೀನ್ ಓವೈಸಿ

    ನಾನು ಕರ್ನಾಟಕಕ್ಕೆ ಮುಸ್ಲಿಂ ಮತಗಳನ್ನು ಒಡೆಯಲು ಬಂದಿಲ್ಲ: ಅಸಾದುದ್ದೀನ್ ಓವೈಸಿ

    ಬೆಳಗಾವಿ: ದೇಶದಲ್ಲಿ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಇದೆ. ಆದ್ದರಿಂದ ಕರ್ನಾಟಕದಲ್ಲಿ ಜೆಡಿಎಸ್ ಬೆಂಬಲಿಸಿದ್ದೇನೆ. ನಾನು ಮುಸ್ಲಿಂ ಮತಗಳನ್ನು ಒಡೆಯಲು ಬಂದಿಲ್ಲವೆಂದು ಎಐಎಂಐಎಂ ಸ್ಥಾಪಕ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.

    ಜೆಡಿಎಸ್ ಪರ ಪ್ರಚಾರಕ್ಕೆ ನಗರಕ್ಕೆ ಬಂದಿದ್ದ ವೇಳೆ ಮಾತನಾಡಿದ ಅವರು, ಅನೇಕ ದಿನಗಳ ಹಿಂದೆಯೇ ನಾನು ಬೆಳಗಾವಿ ನಗರರಕ್ಕೆ ಬರಲು ಇಚ್ಛಿಸಿದ್ದೆ. ಆದ್ರೆ ಕರ್ನಾಟಕದ ತಾತ್ಕಾಲಿಕ ಸಿಎಂ ಸಿದ್ದರಾಮಯ್ಯ ಅವರು ಅವಕಾಶ ನೀಡಲಿಲ್ಲ. ರಾಜ್ಯದಲ್ಲಿ ಅನೇಕ ಬಾರಿ ಸಭೆ ಮತ್ತು ಸಮಾವೇಶಗಳನ್ನು ನಡೆಸಲು ಅವಕಾಶ ಕೇಳಿದ್ದೆ, ಆದ್ರೆ ಪ್ರತಿಬಾರಿಯೂ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ನಿಲ್ಲಿಸುವ ಪ್ರಯತ್ನ ಮಾಡಿತ್ತು ಅಂತಾ ಆರೋಪಿಸಿದ್ರು.

    ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸಂಸತ್ತಿನಲ್ಲಿ ಐದು ನಿಮಿಷ ಮಾತನಾಡಲು ಬರಲ್ಲ. ಐದು ನಿಮಿಷ ನನ್ನ ಜೊತೆ ಚರ್ಚೆಗೆ ಬನ್ನಿ ಎಂದು ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರಿಗೆ ಬಹಿರಂಗ ಸವಾಲು ಹಾಕಿದ್ರು. ಕಾಂಗ್ರೆಸ್‍ನವರು ಮುಸ್ಲಿಂ ನಾಯಕರನ್ನು ಬೆಳೆಸಲು ಬಿಡುತ್ತಿಲ್ಲ. ದೇಶದಲ್ಲಿ ಉತ್ತರ ಪ್ರದೇಶ ನಂತರ ಅತಿ ಹೆಚ್ಚು ಅಪರಾಧ ಪ್ರಕರಣಗಳು ಕರ್ನಾಟಕದಲ್ಲಿ ನಡೆದಿವೆ. ಇದೇನಾ ಕಾಂಗ್ರೆಸ್ ಜಾತ್ಯಾತೀತ ತತ್ವ ಎಂದು ಪ್ರಶ್ನಿಸಿದ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯ ಸೋಲು ಖಚಿತ ಅಂತಾ ಭವಿಷ್ಯ ನುಡಿದ್ರು.

  • ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಚುನಾವಣಾಧಿಕಾರಿಗಳ ಭರ್ಜರಿ ಬೇಟೆ – 32 ಲಕ್ಷಕ್ಕೂ ಹೆಚ್ಚಿನ ಹಣ ವಶ

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಆಮಿಷಗಳು ಜೋರಾಗುತ್ತಿದ್ದು, ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಚುನಾವಣೆಗಾಗಿ ಸಂಗ್ರಹಿಸಿರೋ ಹಣವನ್ನು ವಶಪಡಿಸಿಕೊಂಡು ರಾಜಕೀಯ ಪಕ್ಷಗಳಿಗೆ ಸರಿಯಾದ ಏಟನ್ನು ನೀಡಿದ್ದಾರೆ.

    ರಾಜ್ಯದಲ್ಲಿ ಚುನಾವಣೆಗೆ ಕೆಲವೇ ದಿನಗಳು ಇರುವಂತೆ ರಾಜಕೀಯ ಪಕ್ಷಗಳ ಹಣದ ಸಂಗ್ರಹವನ್ನ ಹೆಚ್ಚು ಮಾಡುತ್ತಿವೆ. ಮಂಗಳವಾರ ಚುನಾವಣಾ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ಅಮೃತಹಳ್ಳಿಯಲ್ಲಿರುವ ಕೃಷ್ಣ ಜ್ಯುವೆಲ್ಲರಿ ಅಂಗಡಿ ಮೇಲೆ ದಾಳಿ ಮಾಡಿ ಒಟ್ಟು 32 ಲಕ್ಷ 50 ಸಾವಿರ ಹಣವನ್ನ ವಶಪಡಿಸಿಕೊಂಡಿದ್ದಾರೆ.

    ಚುನಾವಣೆಗಾಗಿ ಮೂಗುತಿ ಮತ್ತು ಇತರೆ ಆಭರಣಗಳನ್ನು ಖರೀದಿ ಮಾಡಲು ತಂದಿದ್ದ ಹಣ ಅಂತ ಚುನಾವಣಾ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಹಣದ ಮಾಲೀಕ ಚೆನ್ನಕೇಶವ್ ನನ್ನ ಕೆಲ ವ್ಯವಹಾರಗಳಿಗೆ ಸಂಬಂಧಿಸಿದ ಹಣ ಇದಾಗಿದ್ದು, ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಅಂತ ಹೇಳಿದ್ದಾರೆ.

    ಇದು ಕಾಂಗ್ರೆಸ್ ಏಜೆಂಟರಿಗೆ ಸೇರಿದ ಹಣ, ಆತನು ಸಹ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ಮತದಾನದ ಸಮಯದಲ್ಲಿ ಹಣ ಹಂಚಲು ಕೆಲ ಅಂಗಡಿಗಳಲ್ಲಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ನಾನು ಚುನಾವಣಾ ಅಧಿಕಾರಿಗಳಿಗೆ ಫೋನ್ ಮುಖಾಂತರ ದೂರು ನೀಡಿದ್ದೆ. ಅಧಿಕಾರಿಗಳು ಬಂದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿರುವ ಹರೀಶ್ ಹೇಳಿದ್ದಾರೆ.

    ಮತದಾರರಿಗೆ ನಾನಾ ಆಮಿಷಗಳನ್ನು ತೋರಿಸಿ ಹಣವನ್ನ ಹಂಚಿ ಅಧಿಕಾರಿದ ಗದ್ದುಗೆ ಏರಲು ರಾಜಕೀಯ ನಾಯಕರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಇದಕ್ಕೆ ಚುನಾವಣೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.

  • ಕಾಂಗ್ರೆಸ್ ಆಯ್ತು ಈಗ ಬಿಜೆಪಿಗೂ ಐಟಿ ಶಾಕ್ – ಶ್ರೀರಾಮುಲು ತಂಗ್ತಿದ್ದ ಹೋಟೆಲ್ ಮೇಲೂ ರೇಡ್

    ಕಾಂಗ್ರೆಸ್ ಆಯ್ತು ಈಗ ಬಿಜೆಪಿಗೂ ಐಟಿ ಶಾಕ್ – ಶ್ರೀರಾಮುಲು ತಂಗ್ತಿದ್ದ ಹೋಟೆಲ್ ಮೇಲೂ ರೇಡ್

    ಚಿತ್ರದುರ್ಗ: ಬದಾಮಿಯಲ್ಲಿ ಸೋಮವಾರ ರಾತ್ರಿ ಕಾಂಗ್ರೆಸ್ ಗೆ ಶಾಕ್ ಕೊಟ್ಟಿದ್ದ ಐಟಿ ಅಧಿಕಾರಿಗಳು ಇದೀಗ ಬಿಜೆಪಿಯವರಿಗೂ ಶಾಕ್ ನೀಡಿದ್ದಾರೆ.

    ಸಂಸದ ಶ್ರೀರಾಮುಲು ಬದಾಮಿಗೆ ಹೋದಾಗಲೆಲ್ಲಾ ವಾಸ್ತವ್ಯ ಹೂಡುತ್ತಿದ್ದ ಕೋರ್ಟ್ ಹೋಟೆಲ್‍ಗೆ ಐಟಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಿಢೀರ್ ದಾಳಿ ನಡೆಸಿ ರೂಂ ಗಳನ್ನ ಜಾಲಾಡಿದ್ದಾರೆ. ಹೋಟೆಲ್ ರಿಜಿಸ್ಟರ್ ಪುಸ್ತಕವನ್ನ ಪರಿಶೀಲಿಸಿದ್ದಾರೆ.

    ಇದಕ್ಕೂ ಮುನ್ನ ಚುನಾವಣಾ ಅಕ್ರಮ ಮಾಹಿತಿ ಹಿನ್ನೆಲೆಯಲ್ಲಿ ಅಧಿಕಾರಿಗಳು ರಾಮುಲು ಆಪ್ತ ಮೊಳಕಾಲ್ಮೂರು ತಾಲೂಕು ಅಧ್ಯಕ್ಷ ಟಿ.ರೇವಣ್ಣ ಅವರ ಕೊಂಡ್ಲಹಳ್ಳಿ ತೋಟದ ಮನೆ ಹಾಗೂ ಧನಂಜಯ ರೆಡ್ಡಿ ಅವರ ದೊಡ್ಡ ಉಳ್ಳಾರ್ತಿ ಮನೆ ಮೇಲೂ ದಾಳಿ ನಡೆಸಿದ್ದರು. ಅಷ್ಟೇ ಅಲ್ಲದೇ ದಾವಣಗೆರೆಯ ಮಾಡಾಳು ಗ್ರಾಮ ಚನ್ನಗಿರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಡಾಳ್ ವಿರೂಪಾಕ್ಷಪ್ಪ ನಿವಾಸದ ಮೇಲೂ ರೇಡ್ ಮಾಡಿದ್ದಾರೆ. ಮೂರು ಜನ ಅಧಿಕಾರಿಗಳ ತಂಡದಿಂದ ಮಹತ್ವ ಪ್ರಮಾಣದ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

    ಈ ವಿಚಾರ ತಿಳಿಯುತ್ತಿದ್ದಂತೆ ವಿರೂಪಾಕ್ಷಪ್ಪ ಮನೆ ಮುಂಭಾಗ ಅಪಾರ ಪ್ರಮಾಣದಲ್ಲಿ ಬೆಂಬಲಿಗರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ, ವಿರೂಪಾಕ್ಷಪ್ಪ, ಇದೆಲ್ಲಾ ವಿಪಕ್ಷದವರ ಕುತಂತ್ರ. ನನ್ನ ಜನಪ್ರಿಯತೆ ಸಹಿಸಲಾರದೆ ದೂರು ನೀಡಿದ್ದಾರೆ. ಯಾರು ಏನೇ ಮಾಡಿದರೂ ನಾನೇ ಗೆಲ್ಲೋದು ಅಂದ್ರು.

    ಗದಗ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಪ್ರಚಾರ ವೇಳೆ, ಈ ಬಗ್ಗೆ ಮಾತನಾಡಿದ ಬಿ.ಶ್ರೀರಾಮುಲು, ಹಣ ಹಂಚಿ ಗೆಲುವು ಸಾಧಿಸಲು ಸಿ.ಎಂ ಹಿಂಬಾಲಕರು ಬದಾಮಿಯಲ್ಲಿ ಠಿಕಾಣಿ ಹೂಡಿದ್ದಾರೆ. ಸೋಮವಾರ ರೇಡ್ ನಡೆದ ಸಂದರ್ಭದಲ್ಲಿ ಸಿ.ಎಂ. ಇಬ್ರಾಹಿಂ. ಎಸ್ ಆರ್ ಪಾಟೀಲ್ ಹಾಗೂ ಅವರ ಹಿಂಬಾಲಕರು ಬಚ್ಚಿಟ್ಟ ಹಣ ಸಿಕ್ಕಿದೆ. ಬದಾಮಿಯ ಕೃಷ್ಣ ಹೆರಿಟೇಜ್ ನಲ್ಲಿ ರೇಡ್ ಆದಾಗ ಸಿಎಂ ಹಿಂಬಾಲಕರು ಹಣ ಸಮೇತ ಪರಾರಿ ಆಗಿದ್ದಾರೆ. ಜತೆಗೆ ಸಾಕಷ್ಟು ಹಣವೂ ರೇಡ್ ನಲ್ಲಿ ಸಿಕ್ಕಿದೆ ಎಂದಿದ್ದಾರೆ. ಇದನ್ನೂ ಓದಿ: ಹೊಸ ತಿರುವು ಪಡೆದುಕೊಂಡ ಬದಾಮಿ ಐಳಿ ದಾಳಿ ಪ್ರಕರಣ

    ಸಿಎಂ ಅವರೇ ಲೋಹಿಯಾ ಸಿದ್ಧಾಂತದ ಕುರಿತು ಮಾತಾಡುತ್ತೀರಿ. ಹಣ ಹಂಚೋ ಕೆಲಸ ನಿಮಗೆ ಕೆಟ್ಟದ್ದು, ಅನ್ನಿಸಲಿಲ್ವಾ?. ಸಂವಿಧಾನದ ಮೇಲೆ ಗೌರವ ಇದ್ದರೆ ಹಿಂಬಾಲಕರನ್ನು ಹಿಂದಕ್ಕೆ ಕರೆಸಿಕೊಳ್ಳಿ ಹಣದಿಂದ ಚುನಾವಣೆ ನಡೆಸುವ ಸಂಪ್ರದಾಯ ಪ್ರಾರಂಭಿಸಿದ್ದೀರಿ. ಅಕ್ರಮ ಮಾರ್ಗದಿಂದ ಚುನಾವಣೆ ಮಾಡಿದರೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ರೋಲ್ ಮಾಡೆಲ್ ಆಗಬೇಕು ಎಂದು ಗದಗ್ ನಲ್ಲಿ ಶ್ರಿರಾಮುಲು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

  • ಶಾಸಕ ಸಿ.ಟಿ ರವಿ ಚುನಾವಣಾ ಪ್ರಚಾರದಲ್ಲಿ ‘ಸಿದ್ದರಾಮಯ್ಯಗೆ ಜೈ’ ಅಂದ ಕಾರ್ಯಕರ್ತರು

    ಶಾಸಕ ಸಿ.ಟಿ ರವಿ ಚುನಾವಣಾ ಪ್ರಚಾರದಲ್ಲಿ ‘ಸಿದ್ದರಾಮಯ್ಯಗೆ ಜೈ’ ಅಂದ ಕಾರ್ಯಕರ್ತರು

    ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ ರವಿ ಚುನಾವಣಾ ಪ್ರಚಾರ ನಡೆಸುವ ವೇಳೆ ಕೆಲ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯಗೆ ಜೈ ಅಂತಾ ಘೋಷಣೆ ಕೂಗಿದ್ದಾರೆ.

    ಸಿ ಟಿ ರವಿ ಅವರು ಚಿಕ್ಕಮಗಳೂರು ನಗರದ ವಾರ್ಡ್ 35 ಕೆಂಪನಹಳ್ಳಿಯಲ್ಲಿ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಈ ವೇಳೆ ಜೆಡಿಎಸ್, ಕಾಂಗ್ರೆಸ್ ಹಾಗು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಆರಂಭಗೊಂಡಿತು. ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಭಾಷಣದ ಮಧ್ಯೆ ‘ಕಾಂಗ್ರೆಸ್‍ಗೆ ಜೈ’ ಅಂದ ಗ್ರಾಮಸ್ಥರು-ವಿಡಿಯೋ ನೋಡಿ

    ಕೆಲವರು ನಮ್ಮ ವಾರ್ಡ್ ನಲ್ಲಿ ಯಾವುದೇ ರೀತಿಯಲ್ಲಿ ಅಭಿವೃದ್ಧಿಯಾಗಿಲ್ಲ ಅಂತಾ ಶಾಸಕರನ್ನು ತರಾಟೆಗೆ ತೆಗೆಕೊಂಡ್ರು. ಕೂಡಲೇ ಕೆಲವರು ಸಿಎಂ ಸಿದ್ದರಾಮಯ್ಯಗೆ ಜೈ ಅಂತಾ ಘೋಷಣೆ ಕೂಗಲು ಆರಂಭಿಸಿದರು. ಇದ್ರಿಂದ ಕೋಪಗೊಂಡ ಶಾಸಕರ ಬೆಂಬಲಿಗರು ಬಿಜೆಪಿಗೆ ಜೈ ಅಂತಾ ಮರು ಘೋಷಣೆ ಕೂಗಿದ್ರು.

  • ಹೊಸ ತಿರುವು ಪಡೆದುಕೊಂಡ ಬದಾಮಿ ಐಟಿ ದಾಳಿ ಪ್ರಕರಣ

    ಹೊಸ ತಿರುವು ಪಡೆದುಕೊಂಡ ಬದಾಮಿ ಐಟಿ ದಾಳಿ ಪ್ರಕರಣ

    ಬಾಗಲಕೋಟೆ: ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಬದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ತಂಗಿದ್ದ ಕೃಷ್ಟಾ ಹೆರಿಟೆಜ್ ರೆಸಾರ್ಟ್ ಮೇಲೆ ನಡೆದ ಐಟಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

    ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ಮಲ್ ಜೈನ್‍ರನ್ನು ಟಾರ್ಗೆಟ್ ಮಾಡಿ ಐಟಿ ಅಧಿಕಾರಿಗಳು ಮೂರು ಕಡೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬದಾಮಿ ಮತ್ತು ಬಾಗಲಕೋಟೆ ಕಾಂಗ್ರೆಸ್ ಚುನಾವಣಾ ಉಸ್ತುವಾರಿ ಹೊತ್ತಿರುವ ಪಾರಸ್ಮಾಲ್ ಜೈನ್ ಹುಬ್ಬಳ್ಳಿ ಮೂಲದ ಉದ್ಯಮಿಯಾಗಿದ್ದು, ಚುನಾವಣೆ ಹಿನ್ನೆಲೆ ಎಸ್.ಆರ್ ಪಾಟೀಲ್ ಮತ್ತು ಸಿ.ಎಂ ಇಬ್ರಾಹಿಂ ಜೊತೆ ಚರ್ಚೆ ನಡೆಸಲು ಆನಂದ್ ಸಿಂಗ್ ಒಡೆತನದ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಗೆ ತೆರಳಿದ್ದರು. ಈ ವೇಳೆ ಏಕಕಾಲದಲ್ಲಿ ಹುಬ್ಬಳ್ಳಿಯಲ್ಲಿರುವ ಜೈನ್ ನಿವಾಸ, ಬದಾಮಿಯ ಕೃಷ್ಣಾ ಹೇರಿಟೆಜ್ ರೆಸಾರ್ಟ್ ಮತ್ತು ಜೈನ್ ತಂಗಿದ್ದ ಕೆಎಸ್‍ಟಿಡಿಸಿ ಹೋಟೆಲ್‍ನ ರೂಂ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ರು. ಇದನ್ನೂ ಓದಿ: ಕೋಟ್ಯಾಂತರ ರೂ. ಸಿಗುತ್ತೆ ಅಂತ 20 ಮಂದಿಯ ಪಟಾಲಂ ದಾಳಿ ಮಾಡ್ತು- ಐಟಿ ದಾಳಿಗೆ ಇಬ್ರಾಹಿಂ ವ್ಯಂಗ್ಯ

    ಈ ಸಂಬಂಧ ಪ್ರತಿಕ್ರಿಯಿಸಿರುವ ಜೈನ್, ದಾಳಿ ವೇಳೆ ಎರಡ್ಮೂರು ಲಕ್ಷ ಹಣ ಸಿಕ್ಕಿದೆ. ಇದು ನಾನು ಖರ್ಚಿಗೆ ಅಂತಾ ಇಟ್ಟು ಕೊಂಡಿದ್ದ ಹಣ. ನನ್ನ ಮೇಲಿನ ಐಟಿ ದಾಳಿ ಬಿಜೆಪಿ ಸೋಲಿನ ಹತಾಷೆ ತೋರಿಸುತ್ತೆ. ಇದು ರಾಜಕೀಯ ಪ್ರೇರಿತ ದಾಳಿ ಅಂತ ಆರೋಪಿಸಿದ್ರು. ಇದನ್ನೂ ಓದಿ: ನಾನೂ ಆ ರೂಮಿನಲ್ಲಿ ದುಡ್ಡು ಮಡಚಿಟ್ಟು ಬಂದಿದ್ದೇನಾ: ಸಿಎಂ ಆಕ್ರೋಶ

    ಇದನ್ನೂ ಓದಿ: ಬದಾಮಿ ಕಾಂಗ್ರೆಸ್‍ಗೆ ಮಿಡ್‍ನೈಟ್ ಐಟಿ ಶಾಕ್!

  • ಕರ್ನಾಟಕದಲ್ಲಿ ಅತಂತ್ರ ಅಸೆಂಬ್ಲಿ: ಮೋದಿ ಎಂಟ್ರಿಯಿಂದ ರಾಜಕೀಯ ಲೆಕ್ಕಾಚಾರ ಬುಡಮೇಲಾಗುತ್ತಾ?

    ಕರ್ನಾಟಕದಲ್ಲಿ ಅತಂತ್ರ ಅಸೆಂಬ್ಲಿ: ಮೋದಿ ಎಂಟ್ರಿಯಿಂದ ರಾಜಕೀಯ ಲೆಕ್ಕಾಚಾರ ಬುಡಮೇಲಾಗುತ್ತಾ?

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದು, ಮುಂದಿನ ವಾರ ಫಲಿತಾಂಶ ಪ್ರಕಟವಾಗಲಿದೆ. ಚುನವಾಣೆಯ ದಿನ ಹತ್ತಿರ ಬರುತ್ತಿದ್ದಂತೆ ಚದುರಂಗದಾಟದ ಲೆಕ್ಕಾಚಾರ ಜೋರಾಗುತ್ತಿದೆ.

    ಪಬ್ಲಿಕ್ ಟಿವಿ ಈ ಹಿಂದೆ ಎರಡು ಸಮೀಕ್ಷೆಗಳನ್ನು (ಏಪ್ರಿಲ್ ಎರಡನೇ ವಾರ, ಏಪ್ರಿಲ್ ಕೊನೆಯ ವಾರ) ನಡೆಸಿತ್ತು. ಆ ಸಮೀಕ್ಷೆಯಲ್ಲಿ ಮೋದಿ ಭಾಷಣವನ್ನು ಪರಿಗಣಿಸಲು ಸಾಧ್ಯವಾಗಿರಲಿಲ್ಲ. ಈ ಸಮೀಕ್ಷೆಯನ್ನು ಮೋದಿ ಎರಡನೇ ಬಾರಿ(ಮೇ 3) ರಾಜ್ಯಕ್ಕೆ ಭೇಟಿ ನೀಡಿದ ನಂತರ ನಡೆಸಿದ್ದೇವೆ.

    ಕ್ವಾರ್ಟರ್ ಫೈನಲ್ ಫೈನಲ್ ಮತ್ತು ಸೆಮಿ ಫೈನಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಪ್ರಧಾನಿ ಮೋದಿ ಅವರ ಎಂಟ್ರಿ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ಸ್ವಲ್ಪ ಮಟ್ಟಿಗೆ ಬುಡಮೇಲು ಮಾಡಿದೆ. ಹಾಗಂತ, ಬಿಜೆಪಿ ಅತಿ ದೊಡ್ಡ ಪಾರ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಅದೇ ರೀತಿ, ಕಾಂಗ್ರೆಸ್ ಬಹುಮತ ಸಿಕ್ಕಿಲ್ಲ. ಇಬ್ಬರ ಮಧ್ಯೆಯೂ ಉಗುರು ಕಚ್ಚುವಂಥ ಫೈಟ್ ಇರಲಿದೆ. ಸರ್ಕಾರ ರಚಿಸಬೇಕಾದರೆ ಇಬ್ಬರಿಗೂ ಜೆಡಿಎಸ್ ಅನಿವಾರ್ಯ. ಹೀಗಾಗಿ, ನಿರೀಕ್ಷೆಯಂತೆ ಜೆಡಿಎಸ್ ಕಿಂಗ್ ಮೇಕರ್ ಆಗೋದರಲ್ಲಿ ಸಂಶಯವೇ ಇಲ್ಲ ಎನ್ನುವುದು ಇವತ್ತಿನ ಮೆಗಾ ಫೈನಲ್ ಸರ್ವೇಯಲ್ಲಿ ಬಹಿರಂಗವಾಗಿದೆ.

    ಸಮೀಕ್ಷೆ ನಡೆಸಿದ್ದು ಹೇಗೆ?
    ಸರ್ವೆಯ ವಿವರಗಳನ್ನು ನಿಮ್ಮ ಮುಂದೆ ಇಡುವುದಕ್ಕೂ ಮುನ್ನ ನಾವು ಈ ಸರ್ವೆಯನ್ನು ಹೇಗೆ ಮಾಡಿದ್ದೇವೆ ಅನ್ನೋದನ್ನ ಹೇಳುವುದು ನಮ್ಮ ಕರ್ತವ್ಯ. ಸರ್ವೆಯನ್ನು ಮಾಡಿದ ಪ್ರತಿನಿಧಿಗಳನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ನಿಗಾ ವಹಿಸಿದ್ದೆವು. ಗೂಗಲ್ ಅರ್ಥ್ ಬಳಸಿ ಸರ್ವೆ ಮಾಡಿದ ಪ್ರತಿನಿಧಿ ಎಲ್ಲೆಲ್ಲಿ ಸಂಚರಿಸಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆವು.  ಇದನ್ನೂ ಓದಿ:  ಪಬ್ಲಿಕ್ ಟಿವಿ ಸಮೀಕ್ಷೆ- ಸೆಮಿ ಫೈನಲ್

    ನಾವು ಈ ಸರ್ವೆಯನ್ನು ಆರಂಭಿಸಿದಾಗ, ನೀವು 2013ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದಿರಿ ಎಂದು ಸಂಕೋಚವಿಲ್ಲದೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ‘ಹೌದು’ ‘ಇಲ್ಲ’ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರ ನೀಡಿದವರಿಗೆ ಧನ್ಯವಾದ ಹಳಿ ಸಂದರ್ಶನವನ್ನು ಅಂತ್ಯಗೊಳಿಸಿದ್ದೇವೆ. ಇದರ ಜೊತೆಯಲ್ಲಿ ಮುಂದಿನ ಚುನಾವಣೆಯಲ್ಲಿ ನೀವು ಮತ ಹಾಕುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದವರನ್ನು ಸಮೀಕ್ಷೆಗೆ ಪರಿಗಣಿಸಿಲ್ಲ.  ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ? ಕ್ವಾರ್ಟರ್ ಫೈನಲ್ ಸಮೀಕ್ಷೆ

    ಸರ್ವೆ ಮಾಡಿದ್ದು ಹೇಗೆ?
    ರಾಜ್ಯದ ಎಲ್ಲಾ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಮಾಹಿತಿ ಸಂಗ್ರಹಿಸಿದ್ದು, ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಪ್ರದೇಶಗಳಲ್ಲಿ ಮಾಹಿತಿ ಸ್ವೀಕರಿಸಿದ್ದೇವೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಂದಲೂ ಸಮೀಕ್ಷಾ ಮಾಹಿತಿ ಸಂಗ್ರಹಿಸಲಾಗಿದೆ. ಈ ಸರ್ವೆಯಲ್ಲಿ 60:40ರ ಅನುಪಾತದಲ್ಲಿ ಪುರುಷ ಹಾಗೂ ಮಹಿಳೆಯರಿಂದ ಮಾಹಿತಿಯನ್ನು ಪಡೆಯಲಾಗಿದೆ.

    ಸರ್ವೆಯ ಗುಣಮಟ್ಟ ಹೇಗೆ?
    – ಒಂದು ಸ್ಯಾಂಪಲ್ ಮುಗಿಸಲು ತೆಗೆದುಕೊಂಡ ಅವಧಿ
    – ಒಂದು ಸ್ಯಾಂಪಲ್‍ನಿಂದ ಇನ್ನೊಂದು ಸ್ಯಾಂಪಲ್ ಸಂಗ್ರಹದ ನಡುವಿನ ಅವಧಿ
    – ಜಿಪಿಎಸ್ ತಂತ್ರಜ್ಞಾನ ಆಧರಿಸಿ ನಡೆಸಿದ ಸರ್ವೆ
    – ಜಿಪಿಎಸ್ ಹಾಗೂ ಸ್ಯಾಂಪಲ್‍ನಲ್ಲಿ ನೀಡಿದ ವಿಳಾಸಗಳ ನಿಖರತೆ ಖಚಿತಪಡಿಸುವಿಕೆ
    – ಗೂಗಲ್ ಎಪಿಐ ಬಳಸಿ ಸ್ಯಾಂಪಲ್‍ಗಳ ನಿಖರತೆ ಪರಿಶೀಲನೆ
    – ಕೊನೆಯಲ್ಲಿ ಗೂಗಲ್ ಅರ್ಥ್ ಬಳಸಿ ಪರಿಶೀಲನೆ

    ಸ್ಯಾಂಪಲ್ ಎಷ್ಟು?
    ಈ ಸಮೀಕ್ಷೆಗೆ ಒಟ್ಟು 24,835 ಸ್ಯಾಂಪಲ್ ಗಳನ್ನು ಪಡೆದುಕೊಂಡಿದ್ದೇವೆ. ಇದರಲ್ಲಿ 3,218 ಸ್ಯಾಂಪಲ್ ಗಳಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಕೈ ಬಿಟ್ಟಿದ್ದೇವೆ. ಅಂತಿಮವಾಗಿ 21,617 ಸ್ಯಾಂಪಲ್ ಗಳನ್ನು ಪರಿಗಣಿಸಿದ್ದೇವೆ.

    1. ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?

    ಮುಂಬೈ ಕರ್ನಾಟಕ
    ಅತ್ಯುತ್ತಮ – 28.20%
    ಉತ್ತಮ – 12.40%
    ಸುಮಾರು – 12.10%
    ಕಳಪೆ – 33.00%
    ತೀರಾ ಕಳಪೆ -14.30%

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 32.00%
    ಉತ್ತಮ – 25.20%
    ಸುಮಾರು – 21.40%
    ಕಳಪೆ – 18.60%
    ತೀರಾ ಕಳಪೆ – 2.80%

    ಮಧ್ಯ ಕರ್ನಾಟಕ
    ಅತ್ಯುತ್ತಮ – 11.70%
    ಉತ್ತಮ – 18.00%
    ಸುಮಾರು – 11.00%
    ಕಳಪೆ – 52.70%
    ತೀರಾ ಕಳಪೆ – 6.60%

    ಕರಾವಳಿ ಕರ್ನಾಟಕ
    ಅತ್ಯುತ್ತಮ – 23.30%
    ಉತ್ತಮ – 33.70%
    ಸುಮಾರು – 22.00%
    ಕಳಪೆ – 20.20%
    ತೀರಾ ಕಳಪೆ – 0.80%

    ಹಳೆ ಮೈಸೂರು
    ಅತ್ಯುತ್ತಮ – 14.90%
    ಉತ್ತಮ – 24.70%
    ಸುಮಾರು – 37.50%
    ಕಳಪೆ – 19.80%
    ತೀರಾ ಕಳಪೆ – 3.20%

    ಬೆಂಗಳೂರು ನಗರ
    ಅತ್ಯುತ್ತಮ – 19.90%
    ಉತ್ತಮ – 27.70%
    ಸುಮಾರು – 21.20%
    ಕಳಪೆ – 26.60%
    ತೀರಾ ಕಳಪೆ – 4.60%

    ಸಮಗ್ರ
    ಅತ್ಯುತ್ತಮ – 22.00%
    ಉತ್ತಮ – 22.00%
    ಸುಮಾರು – 22.00%
    ಕಳಪೆ – 27.00%
    ತೀರಾ ಕಳಪೆ -7.00%

    2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮಗೆ ತೃಪ್ತಿ ತಂದಿದೆಯಾ?
    ಮುಂಬೈ ಕರ್ನಾಟಕ
    ಹೌದು – 37.10%
    ಇಲ್ಲ – 52.30%
    ಏನೂ ಹೇಳಲ್ಲ – 10.60%

    ಹೈದರಾಬಾದ್ ಕರ್ನಾಟಕ
    ಹೌದು – 52.80%
    ಇಲ್ಲ – 41.40%
    ಏನೂ ಹೇಳಲ್ಲ – 5.80%

    ಮಧ್ಯ ಕರ್ನಾಟಕ
    ಹೌದು – 29.60%
    ಇಲ್ಲ – 66.80%
    ಏನೂ ಹೇಳಲ್ಲ -3.60%

    ಕರಾವಳಿ ಕರ್ನಾಟಕ
    ಹೌದು – 53.50%
    ಇಲ್ಲ – 34.10%
    ಏನೂ ಹೇಳಲ್ಲ – 12.40%

    ಹಳೆ ಮೈಸೂರು
    ಹೌದು – 42.00%
    ಇಲ್ಲ – 48.20%
    ಏನೂ ಹೇಳಲ್ಲ – 9.80%

    ಬೆಂಗಳೂರು ನಗರ
    ಹೌದು – 39.90%
    ಇಲ್ಲ – 47.20%
    ಏನೂ ಹೇಳಲ್ಲ – 12.90%

    ಸಮಗ್ರ
    ಹೌದು – 42.00%
    ಇಲ್ಲ – 49.00%
    ಏನೂ ಹೇಳಲ್ಲ – 9.00%

    3. ರಾಜ್ಯ ಸರ್ಕಾರ ಯಾವ ಯೋಜನೆಯ ಲಾಭವನ್ನು ನೀವು ಪಡೆದಿದ್ದೀರಿ?
    ಮುಂಬೈ ಕರ್ನಾಟಕ
    ಅನ್ನಭಾಗ್ಯ – 46.80%
    ಕ್ಷೀರ ಭಾಗ್ಯ – 14.50%
    ವಿದ್ಯಾಸಿರಿ – 12.90%
    ಇಂದಿರಾ ಕ್ಯಾಂಟೀನ್ – 3.90%
    ಯಾವೂದು ಇಲ್ಲ – 21.80%
    ಇತರೆ – 0.10%

    ಹೈದರಾಬಾದ್ ಕರ್ನಾಟಕ
    ಅನ್ನಭಾಗ್ಯ – 51.80%
    ಕ್ಷೀರ ಭಾಗ್ಯ – 12.20%
    ವಿದ್ಯಾಸಿರಿ – 6.30%
    ಇಂದಿರಾ ಕ್ಯಾಂಟೀನ್ – 6.50%
    ಯಾವೂದು ಇಲ್ಲ – 46.30%
    ಇತರೆ -0.00%

    ಮಧ್ಯ ಕರ್ನಾಟಕ
    ಅನ್ನಭಾಗ್ಯ – 37.10%
    ಕ್ಷೀರ ಭಾಗ್ಯ – 5.70%
    ವಿದ್ಯಾಸಿರಿ – 6.00%
    ಇಂದಿರಾ ಕ್ಯಾಂಟೀನ್ – 4.90%
    ಯಾವೂದು ಇಲ್ಲ – 46.30%
    ಇತರೆ – 0.00%

    ಕರಾವಳಿ ಕರ್ನಾಟಕ
    ಅನ್ನಭಾಗ್ಯ – 43.40%
    ಕ್ಷೀರ ಭಾಗ್ಯ – 18.50%
    ವಿದ್ಯಾಸಿರಿ – 14.40%
    ಇಂದಿರಾ ಕ್ಯಾಂಟೀನ್- 3.10%
    ಯಾವೂದು ಇಲ್ಲ – 19.80%
    ಇತರೆ – 0.80%

    ಹಳೆ ಮೈಸೂರು
    ಅನ್ನಭಾಗ್ಯ – 49.60%
    ಕ್ಷೀರ ಭಾಗ್ಯ – 6.50%
    ವಿದ್ಯಾಸಿರಿ – 12.80%
    ಇಂದಿರಾ ಕ್ಯಾಂಟೀನ್ -5.40%
    ಯಾವೂದು ಇಲ್ಲ -25.60%
    ಇತರೆ – 0.10%

    ಬೆಂಗಳೂರು ನಗರ
    ಅನ್ನಭಾಗ್ಯ -25.20%
    ಕ್ಷೀರ ಭಾಗ್ಯ -12.50%
    ವಿದ್ಯಾಸಿರಿ -11.10%
    ಇಂದಿರಾ ಕ್ಯಾಂಟೀನ್ – 22.70%
    ಯಾವೂದು ಇಲ್ಲ -28.50%
    ಇತರೆ -0.00%

    ಸಮಗ್ರ
    ಅನ್ನಭಾಗ್ಯ – 44.00%
    ಕ್ಷೀರ ಭಾಗ್ಯ -11.00%
    ವಿದ್ಯಾಸಿರಿ – 11.00%
    ಇಂದಿರಾ ಕ್ಯಾಂಟೀನ್ -7.00%
    ಯಾವೂದು ಇಲ್ಲ -27.00%
    ಇತರೆ -0.00%

    4. ಮೇಲಿನ ಯೋಜನೆಗಳು ಕಾಂಗ್ರೆಸ್ ಮತ ಚಲಾಯಿಸಲು ನಿಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾ?
    ಮುಂಬೈ ಕರ್ನಾಟಕ
    ಹೌದು -42.50%
    ಇರಬಹುದು -19.80%
    ಇಲ್ಲ -30.20%
    ಪರಿಣಾಮ ಬೀರಲ್ಲ -7.50%

    ಹೈದರಾಬಾದ್ ಕರ್ನಾಟಕ
    ಹೌದು -49.90%
    ಇರಬಹುದು -23.50%
    ಇಲ್ಲ -23.30%
    ಪರಿಣಾಮ ಬೀರಲ್ಲ 3.30%

    ಮಧ್ಯ ಕರ್ನಾಟಕ
    ಹೌದು -28.60%
    ಇರಬಹುದು -17.20%
    ಇಲ್ಲ -36.70%
    ಪರಿಣಾಮ ಬೀರಲ್ಲ -17.50%

    ಕರಾವಳಿ ಕರ್ನಾಟಕ
    ಹೌದು – 38.30%
    ಇರಬಹುದು – 36.20%
    ಇಲ್ಲ – 21.20%
    ಪರಿಣಾಮ ಬೀರಲ್ಲ – 4.30%

    ಹಳೆ ಮೈಸೂರು
    ಹೌದು – 36.50%
    ಇರಬಹುದು -28.30%
    ಇಲ್ಲ -31.70%
    ಪರಿಣಾಮ ಬೀರಲ್ಲ -3.50%

    ಬೆಂಗಳೂರು ನಗರ
    ಹೌದು – 36.60%
    ಇರಬಹುದು -23.30%
    ಇಲ್ಲ – 36.80%
    ಪರಿಣಾಮ ಬೀರಲ್ಲ – 3.30%

    ಸಮಗ್ರ
    ಹೌದು – 39.00%
    ಇರಬಹುದು – 24.00%
    ಇಲ್ಲ – 30.00%
    ಪರಿಣಾಮ ಬೀರಲ್ಲ -7.00%

    5. ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ ಬರುತ್ತಾ?
    ಮುಂಬೈ ಕರ್ನಾಟಕ
    ಹೌದು – 44.00%
    ಇಲ್ಲ – 45.10%
    ಏನೂ ಹೇಳಲ್ಲ -10.90%

    ಹೈದರಾಬಾದ್ ಕರ್ನಾಟಕ
    ಹೌದು – 50.30%
    ಇಲ್ಲ – 42.30%
    ಏನೂ ಹೇಳಲ್ಲ -7.40%

    ಮಧ್ಯ ಕರ್ನಾಟಕ
    ಹೌದು – 62.80%
    ಇಲ್ಲ – 26.90%
    ಏನೂ ಹೇಳಲ್ಲ -10.30%

    ಕರಾವಳಿ ಕರ್ನಾಟಕ
    ಹೌದು – 47.90%
    ಇಲ್ಲ – 31.00%
    ಏನೂ ಹೇಳಲ್ಲ – 21.10%

    ಹಳೆ ಮೈಸೂರು
    ಹೌದು – 36.80%
    ಇಲ್ಲ – 42.70
    ಏನೂ ಹೇಳಲ್ಲ – 20.50

    ಬೆಂಗಳೂರು ನಗರ
    ಹೌದು – 40.00%
    ಇಲ್ಲ – 40.20%
    ಏನೂ ಹೇಳಲ್ಲ – 19.80%

    ಸಮಗ್ರ
    ಹೌದು – 45.00%
    ಇಲ್ಲ – 40.00%
    ಏನೂ ಹೇಳಲ್ಲ – 15.00%

    6. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸಿವೆಯಾ?
    ಹೌದು – 52.00%
    ಇಲ್ಲ _ 35.00%
    ಏನು ಹೇಳಲ್ಲ – 13.00%

    7. ನಿಮ್ಮ ಮತದಾನದ ಮೇಲೆ ಪರಿಣಾಮ ಬೀರುವ ಅಂಶ ಯಾವುದು?
    ಮುಂಬೈ ಕರ್ನಾಟಕ
    ಅಭಿವೃದ್ಧಿ – 65.10%
    ಮುಂದಿನ ಸಿಎಂ -22.90%
    ಧಾರ್ಮಿಕ ಧ್ರುವೀಕರಣ -2.80%
    ಪಕ್ಷ -9.20%
    ಇತರೇ -0.00%

    ಹೈದರಾಬಾದ್ ಕರ್ನಾಟಕ
    ಅಭಿವೃದ್ಧಿ – 52.90%
    ಮುಂದಿನ ಸಿಎಂ – 24.70%
    ಧಾರ್ಮಿಕ ಧ್ರುವೀಕರಣ – 6.70%
    ಪಕ್ಷ – 15.70%
    ಇತರೇ- 0.00%

    ಮಧ್ಯ ಕರ್ನಾಟಕ
    ಅಭಿವೃದ್ಧಿ -71.90%
    ಮುಂದಿನ ಸಿಎಂ -17.30%
    ಧಾರ್ಮಿಕ ಧ್ರುವೀಕರಣ – 0.00%
    ಪಕ್ಷ -10.80%
    ಇತರೇ -0.00%

    ಕರಾವಳಿ ಕರ್ನಾಟಕ
    ಅಭಿವೃದ್ಧಿ -70.20%
    ಮುಂದಿನ ಸಿಎಂ -17.30 %
    ಧಾರ್ಮಿಕ ಧ್ರುವೀಕರಣ -5.30%
    ಪಕ್ಷ -7.20%
    ಇತರೇ -0.00%

    ಹಳೆ ಮೈಸೂರು
    ಅಭಿವೃದ್ಧಿ – 65.90%
    ಮುಂದಿನ ಸಿಎಂ -16.30%
    ಧಾರ್ಮಿಕ ಧ್ರುವೀಕರಣ -1.40%
    ಪಕ್ಷ – 16.30%
    ಇತರೇ – 0.10%

    ಬೆಂಗಳೂರು ನಗರ
    ಅಭಿವೃದ್ಧಿ -50.90%
    ಮುಂದಿನ ಸಿಎಂ – 31.70%
    ಧಾರ್ಮಿಕ ಧ್ರುವೀಕರಣ -5.20%
    ಪಕ್ಷ -12.20%
    ಇತರೇ – 0.00%

    ಸಮಗ್ರ
    ಅಭಿವೃದ್ಧಿ – 63.00%
    ಮುಂದಿನ ಸಿಎಂ – 21.00%
    ಧಾರ್ಮಿಕ ಧ್ರುವೀಕರಣ -3.00%
    ಪಕ್ಷ -13.00%
    ಇತರೇ – 0.00%

    8. ಚುನಾವಣೆ ನಂತರ ಯಾವ ರೀತಿಯ ಸರ್ಕಾರ ರಚನೆ ಆಗುತ್ತೆ?
    ಮುಂಬೈ ಕರ್ನಾಟಕ
    ಬಹುಮತದ ಸರ್ಕಾರ -23.40%
    ಸಮ್ಮಿಶ್ರ ಸರ್ಕಾರ – 68.30%
    ಏನೂ ಹೇಳಲ್ಲ – 8.30%

    ಹೈದರಾಬಾದ್ ಕರ್ನಾಟಕ
    ಬಹುಮತದ ಸರ್ಕಾರ -27.50%
    ಸಮ್ಮಿಶ್ರ ಸರ್ಕಾರ – 65.90%
    ಏನೂ ಹೇಳಲ್ಲ – 6.60%

    ಮಧ್ಯ ಕರ್ನಾಟಕ
    ಬಹುಮತದ ಸರ್ಕಾರ -31.40%
    ಸಮ್ಮಿಶ್ರ ಸರ್ಕಾರ -59.90%
    ಏನೂ ಹೇಳಲ್ಲ – 8.70%

    ಕರಾವಳಿ ಕರ್ನಾಟಕ
    ಬಹುಮತದ ಸರ್ಕಾರ -18.20%
    ಸಮ್ಮಿಶ್ರ ಸರ್ಕಾರ -47.60%
    ಏನೂ ಹೇಳಲ್ಲ -34.20%

    ಹಳೆ ಮೈಸೂರು
    ಬಹುಮತದ ಸರ್ಕಾರ -34.80%
    ಸಮ್ಮಿಶ್ರ ಸರ್ಕಾರ -62.10%
    ಏನೂ ಹೇಳಲ್ಲ -13.10%

    ಬೆಂಗಳೂರು ನಗರ
    ಬಹುಮತದ ಸರ್ಕಾರ – 31.10%
    ಸಮ್ಮಿಶ್ರ ಸರ್ಕಾರ -52.20%
    ಏನೂ ಹೇಳಲ್ಲ -17.70%

    ಸಮಗ್ರ
    ಬಹುಮತದ ಸರ್ಕಾರ -26.00%
    ಸಮ್ಮಿಶ್ರ ಸರ್ಕಾರ -61.00%
    ಏನೂ ಹೇಳಲ್ಲ – 13.00%

    9. ಜೆಡಿಎಸ್ ಈ ಬಾರಿ ಕಿಂಗ್ ಮೇಕರ್ ಆಗುತ್ತಾ?
    ಮುಂಬೈ ಕರ್ನಾಟಕ
    ಹೌದು – 46.80%
    ಇಲ್ಲ – 42.50%
    ಏನೂ ಹೇಳಲ್ಲ – 10.70%

    ಹೈದರಾಬಾದ್ ಕರ್ನಾಟಕ
    ಹೌದು – 54.80%
    ಇಲ್ಲ – 35.80
    ಏನೂ ಹೇಳಲ್ಲ – 9.40%

    ಮಧ್ಯ ಕರ್ನಾಟಕ
    ಹೌದು – 43.70%
    ಇಲ್ಲ – 36.10%
    ಏನೂ ಹೇಳಲ್ಲ -20.20%

    ಕರಾವಳಿ ಕರ್ನಾಟಕ
    ಹೌದು – 36.20%
    ಇಲ್ಲ – 37.10%
    ಏನೂ ಹೇಳಲ್ಲ – 26.70%

    ಹಳೆ ಮೈಸೂರು
    ಹೌದು – 36.10%
    ಇಲ್ಲ – 43.40%
    ಏನೂ ಹೇಳಲ್ಲ – 20.50%

    ಬೆಂಗಳೂರು ನಗರ
    ಹೌದು – 32.20%
    ಇಲ್ಲ – 41.30%
    ಏನೂ ಹೇಳಲ್ಲ – 25.90%

    ಸಮಗ್ರ
    ಹೌದು – 42.00%
    ಇಲ್ಲ – 40.00%
    ಏನೂ ಹೇಳಲ್ಲ – 18.00%

     

    ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯವುದು?
    ಮುಂಬೈ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ – 8.60%
    ಕಾಂಗ್ರೆಸ್+ಜೆಡಿಎಸ್ – 40.20%
    ಬಿಜೆಪಿ+ಜೆಡಿಎಸ್ -43.10%
    ಏನೂ ಹೇಳಲ್ಲ -8.10%

    ಹೈದರಾಬಾದ್ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ -8.30%
    ಕಾಂಗ್ರೆಸ್+ಜೆಡಿಎಸ್ -39.30%
    ಬಿಜೆಪಿ+ಜೆಡಿಎಸ್ -25.60%
    ಏನೂ ಹೇಳಲ್ಲ -26.80%

    ಮಧ್ಯ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ -2.90%
    ಕಾಂಗ್ರೆಸ್+ಜೆಡಿಎಸ್ -29.10%
    ಬಿಜೆಪಿ+ಜೆಡಿಎಸ್ -54.30%
    ಏನೂ ಹೇಳಲ್ಲ -13.70%

    ಕರಾವಳಿ ಕರ್ನಾಟಕ
    ಬಿಜೆಪಿ+ಕಾಂಗ್ರೆಸ್ – 9.90%
    ಕಾಂಗ್ರೆಸ್+ಜೆಡಿಎಸ್ -45.10%
    ಬಿಜೆಪಿ+ಜೆಡಿಎಸ್ – 19.40%
    ಏನೂ ಹೇಳಲ್ಲ – 25.60%

    ಹಳೆ ಮೈಸೂರು
    ಬಿಜೆಪಿ+ಕಾಂಗ್ರೆಸ್ – 8.30%
    ಕಾಂಗ್ರೆಸ್+ಜೆಡಿಎಸ್ -42.40%
    ಬಿಜೆಪಿ+ಜೆಡಿಎಸ್ -36.00%
    ಏನೂ ಹೇಳಲ್ಲ -13.00%

    ಬೆಂಗಳೂರು ನಗರ
    ಬಿಜೆಪಿ+ಕಾಂಗ್ರೆಸ್ – 4.10%
    ಕಾಂಗ್ರೆಸ್+ಜೆಡಿಎಸ್ -38.60%
    ಬಿಜೆಪಿ+ಜೆಡಿಎಸ್ – 34.90%
    ಏನೂ ಹೇಳಲ್ಲ – 22.40%

    ಸಮಗ್ರ
    ಬಿಜೆಪಿ+ಕಾಂಗ್ರೆಸ್ -7.00%
    ಕಾಂಗ್ರೆಸ್+ಜೆಡಿಎಸ್ – 40.00%
    ಬಿಜೆಪಿ+ಜೆಡಿಎಸ್ – 36.00%
    ಏನೂ ಹೇಳಲ್ಲ – 17.00%

    11. ಚುನಾವಣೆ ವೇಳೆ ಮತದಾನಕ್ಕೆ ನಿಮ್ಮ ಆದ್ಯತೆ ಏನು?
    ಪಕ್ಷ – 64.00%
    ಅಭ್ಯರ್ಥಿ – 36.00%

    12.ಅಭ್ಯರ್ಥಿಯ ಜಾತಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು – 55.00%
    ಇಲ್ಲ – 35.00%
    ಏನು ಹೇಳಲ್ಲ – 10%

    13. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು -37.00%
    ಇಲ್ಲ -47.00%
    ಏನೂ ಹೇಳಲ್ಲ -16.00%

    14. ಕಳೆದ 4 ವರ್ಷಗಳ ಮೋದಿ ಸರ್ಕಾರದ ಸಾಧನೆ ನಿಮ್ಮ ಮತವನ್ನು ನಿರ್ಧರಿಸುತ್ತಾ?
    ಹೌದು – 43.00%
    ಇಲ್ಲ – 43.00%
    ಏನೂ ಹೇಳಲ್ಲ – 14.00%

    15. ಯಾರಿಗೆ ಓಟು ಹಾಕಬೇಕು ಎಂದು ನಿರ್ಧರಿಸಿದ್ದೀರಾ?
    ನಿರ್ಧರಿಸಿದ್ದೇವೆ – 85.00%
    ಹಣ, ಗಿಫ್ಟ್ ನೋಡಿ ನಿರ್ಧಾರ – 6.00%
    ಮತದಾನದ ವೇಳೆ ನಿರ್ಧಾರ – 9.00%

    16. ಮುಂದಿನ ಸಿಎಂ ಯಾರಾಗಬೇಕು?
    ಮುಂಬೈ ಕರ್ನಾಟಕ
    ಸಿದ್ದರಾಮಯ್ಯ -38.00%
    ಯಡಿಯೂರಪ್ಪ -43.10%
    ಕುಮಾರಸ್ವಾಮಿ -19.40%
    ಖರ್ಗೆ -2.60%
    ಪರಮೇಶ್ವರ್ -1.00%
    ಹೊಸ ಮುಖ -0.10%

    ಹೈದರಾಬಾದ್ ಕರ್ನಾಟಕ
    ಸಿದ್ದರಾಮಯ್ಯ – 43.50%
    ಯಡಿಯೂರಪ್ಪ – 38.80%
    ಕುಮಾರಸ್ವಾಮಿ -13.90%
    ಖರ್ಗೆ -2.90%
    ಪರಮೇಶ್ವರ್ -0.30%
    ಹೊಸ ಮುಖ -0.60%

    ಮಧ್ಯಕರ್ನಾಟಕ
    ಸಿದ್ದರಾಮಯ್ಯ -27.60%
    ಯಡಿಯೂರಪ್ಪ -47.90%
    ಕುಮಾರಸ್ವಾಮಿ -22.40%
    ಖರ್ಗೆ -0.40%
    ಪರಮೇಶ್ವರ್ -1.60%
    ಹೊಸ ಮುಖ -0.00%

    ಕರಾವಳಿ ಕರ್ನಾಟಕ
    ಸಿದ್ದರಾಮಯ್ಯ – 52.60%
    ಯಡಿಯೂರಪ್ಪ – 39.50%
    ಕುಮಾರಸ್ವಾಮಿ -5.90%
    ಖರ್ಗೆ – 0.20%
    ಪರಮೇಶ್ವರ್ – 1.00%
    ಹೊಸ ಮುಖ – 0.80%

    ಹಳೆ ಮೈಸೂರು
    ಸಿದ್ದರಾಮಯ್ಯ -30.10%
    ಯಡಿಯೂರಪ್ಪ -23.00%
    ಕುಮಾರಸ್ವಾಮಿ -44.10%
    ಖರ್ಗೆ -1.80%
    ಪರಮೇಶ್ವರ್ -0.80%
    ಹೊಸ ಮುಖ -0.20%

    ಬೆಂಗಳೂರು ನಗರ
    ಸಿದ್ದರಾಮಯ್ಯ -38.40%
    ಯಡಿಯೂರಪ್ಪ -38.40%
    ಕುಮಾರಸ್ವಾಮಿ -19.40%
    ಖರ್ಗೆ -2.40%
    ಪರಮೇಶ್ವರ್ -0.90%
    ಹೊಸ ಮುಖ -0.50%

    ಸಮಗ್ರ
    ಸಿದ್ದರಾಮಯ್ಯ -34.00%
    ಯಡಿಯೂರಪ್ಪ -37.00%
    ಕುಮಾರಸ್ವಾಮಿ -26.00%
    ಖರ್ಗೆ -2.00%
    ಪರಮೇಶ್ವರ್ -1.00%
    ಹೊಸ ಮುಖ -0.00%

    17. ನಿಮ್ಮ ಪ್ರಕಾರ ಹೆಚ್ಚು ಭ್ರಷ್ಟ ಸರ್ಕಾರ ಯಾವುದು?
    ಸಿದ್ದರಾಮಯ್ಯ ಸರ್ಕಾರ – 44.00%
    ಮೋದಿ ಸರ್ಕಾರ -34.00%
    ಏನೂ ಹೇಳಲ್ಲ – 22.00%

    18. ಗುಜರಾತ್, ತ್ರಿಪುರಾ ಗೆಲುವು ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಾ?
    ಹೌದು -38.00%
    ಇಲ್ಲ – 48.00%
    ಏನೂ ಹೇಳಲ್ಲ – 14.00%

    19. ಸಿದ್ದರಾಮಯ್ಯ, ಎಚ್‍ಡಿಕೆ ಮುಂತಾದ ಪ್ರಮುಖ ನಾಯಕರ ಎರಡೂ ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಏನಂತೀರಿ?
    ಸ್ಪರ್ಧಿಸಲಿ – 45.00%
    ಸ್ಪರ್ಧಿಸಬಾರದು – 38.00%
    ಏನೂ ಹೇಳಲ್ಲ – 18.00%

    20. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ರಾಹುಲ್ ಘೋಷಣೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತಾ?
    ಹೌದು – 40.00%
    ಇಲ್ಲ – 44.00%
    ಏನು ಹೇಳಲ್ಲ -16.00%

    21. ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಾಂಗ್ರೆಸ್ ಅಹಿಂದ ಮತಗಳಿಗೆ ಹೊಡೆತ ನೀಡುತ್ತಾ?
    ಹೌದು – 41.00%
    ಇಲ್ಲ – 31.00%
    ಏನೂ ಹೇಳಲ್ಲ -28.00%

    22. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷವೇ?
    ಹೌದು – 43.00%
    ಇಲ್ಲ – 35.00%
    ಏನೂ ಹೇಳಲ್ಲ – 22.00%

    23. ಬಿಜೆಪಿ, ಕಾಂಗ್ರೆಸ್ ಟಿಕೆಟ್ ಕಿತ್ತಾಟ ಜೆಡಿಎಸ್‍ಗೆ ಸಹಕಾರಿಯಾಗುವುದೇ?
    ಹೌದು -38.00%
    ಇಲ್ಲ – 40.00%
    ಏನೂ ಹೇಳಲ್ಲ -22.00%

    24. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಟೆಂಪಲ್ ರನ್‍ನಿಂದ ಕಾಂಗ್ರೆಸ್ ಗೆ ಲಾಭವಾಗುತ್ತಾ?
    ಹೌದು-36.00%
    ಇಲ್ಲ-45.00%
    ಏನೂ ಹೇಳಲ್ಲ-19.00%

    25. ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಟೆಂಪಲ್ ರನ್‍ನಿಂದ ಬಿಜೆಪಿಗೆ ಲಾಭವಾಗುತ್ತಾ?
    ಹೌದು- 33.00%
    ಇಲ್ಲ- 44.00%
    ಏನೂ ಹೇಳಲ್ಲ- 23.00%

    26. ಮೋದಿ ಅಮಿತ್ ಶಾ ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ?
    ಹೌದು-37.00%
    ಇಲ್ಲ-40.00%
    ಏನೂ ಹೇಳಲ್ಲ-23.00%

    27. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷವೇ ಉತ್ತಮ ಎಂದು ಭಾವಿಸುವಿರಾ?
    ಹೌದು – 47.00%
    ಇಲ್ಲ – 35.00%
    ಏನೂ ಹೇಳಲ್ಲ -18.00%

    28. ಕಳೆದ 4 ವರ್ಷಗಳ ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
    ಅತ್ಯುತ್ತಮ -18.00%
    ಉತ್ತಮ -28.00%
    ಸುಮಾರು -33.00%
    ಕಳಪೆ -18.00%
    ತೀರಾ ಕಳಪೆ -3.00%

    29. ಟಿಪ್ಪು ಜಯಂತಿ ಆಚರಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸರಿಯೇ?
    ಮುಂಬೈ ಕರ್ನಾಟಕ
    ಹೌದು -29.20%
    ಇಲ್ಲ – 45.80%
    ಏನೂ ಹೇಳಲ್ಲ -25.00%

    ಹೈದರಾಬಾದ್ ಕರ್ನಾಟಕ
    ಹೌದು – 33.10%
    ಇಲ್ಲ – 41.40%
    ಏನೂ ಹೇಳಲ್ಲ -25.50%

    ಮಧ್ಯ ಕರ್ನಾಟಕ
    ಹೌದು -16.20%
    ಇಲ್ಲ -63.30%
    ಏನೂ ಹೇಳಲ್ಲ -20.50%

    ಕರಾವಳಿ ಕರ್ನಾಟಕ
    ಹೌದು -11.70%
    ಇಲ್ಲ – 60.40%
    ಏನೂ ಹೇಳಲ್ಲ -27.90%

    ಹಳೆ ಮೈಸೂರು
    ಹೌದು -18.70%
    ಇಲ್ಲ -40.50%
    ಏನೂ ಹೇಳಲ್ಲ -40.80%

    ಬೆಂಗಳೂರು ನಗರ
    ಹೌದು -22.30%
    ಇಲ್ಲ -27.40%
    ಏನೂ ಹೇಳಲ್ಲ – 50.30%

    ಸಮಗ್ರ
    ಹೌದು -23.00%
    ಇಲ್ಲ -45.00%
    ಏನೂ ಹೇಳಲ್ಲ – 32.00%

    30. ನಾನೇ ಮುಂದಿನ ಮುಖ್ಯಮಂತ್ರಿ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಆತ್ಮವಿಶ್ವಾಸನಾ ಅಥವಾ ಅತಿಯಾದ ಆತ್ಮವಿಶ್ವಾಸನಾ?
    ಆತ್ಮ ವಿಶ್ವಾಸ -42.00%
    ಅತಿಯಾದ ಆತ್ಮ ವಿಶ್ವಾಸ – 48.00%
    ಏನು ಹೇಳಲ್ಲ -10.00%

    ವಲಯವಾರು ಪ್ರಶ್ನೆ

    31. ವೀರಶೈವ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದು ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ಲಾಭ ತರುತ್ತಾ?

    ಮುಂಬೈ ಕರ್ನಾಟಕ
    ಹೌದು – 26.10%
    ಇಲ್ಲ – 59.30%
    ಏನೂ ಹೇಳಲ್ಲ -14.60%

    ಹೈದರಬಾದ್ ಕರ್ನಾಟಕ
    ಹೌದು – 43.80%
    ಇಲ್ಲ -42.10%
    ಏನೂ ಹೇಳಲ್ಲ -14.10%

    32. ಚುನಾವಣೆ ವೇಳೆ ಮತದಾರರ ಮನಗೆಲ್ಲಲು ಪಕ್ಷಗಳು ಮಹದಾಯಿ/ ಕಾವೇರಿ ವಿಚಾರಗಳನ್ನು ಪ್ರಸ್ತಾಪಿಸುತ್ತಿವೆ ಎಂದು ಭಾವಿಸುತ್ತೀರಾ?
    ಮುಂಬೈ ಕರ್ನಾಟಕ
    ಹೌದು -69.50%
    ಇಲ್ಲ -24.70%
    ಏನು ಹೇಳಲ್ಲ – 5.80%

    ಹಳೆ ಮೈಸೂರು
    ಹೌದು – 57.80%
    ಇಲ್ಲ -23.90%
    ಏನೂ ಹೇಳಲ್ಲ – 18.30%

    ಮುಂಬೈ ಕರ್ನಾಟಕ
    33. ಮಹದಾಯಿ ವಿವಾದವನ್ನು ಪರಿಹರಿಸುವುದು ಯಾವ ಸರ್ಕಾರ?
    ಬಿಜೆಪಿ – 38.60%
    ಕಾಂಗ್ರೆಸ್ -37.90%
    ಜೆಡಿಎಸ್- 21.40%
    ಏನೂ ಹೇಳಲ್ಲ – 0.90%
    ಕೇಂದ್ರ ಸರ್ಕಾರ -1.10%
    ಇತರೇ -0.10%

    ಕರಾವಳಿ ಕರ್ನಾಟಕ
    34. ಹಿಂದೂತ್ವದ ಪ್ರಯೋಜವನ್ನು ಹೆಚ್ಚು ಪಡೆಯುವ ರಾಜಕೀಯ ಪಕ್ಷ ಯಾವುದು?
    ಕಾಂಗ್ರೆಸ್ – 30.00%
    ಬಿಜೆಪಿ – 43.40%
    ಜೆಡಿಎಸ್- 5.60%
    ಏನೂ ಹೇಳಲ್ಲ – 21.00%

    ವೋಟ್ ಶೇರ್/ ಸೀಟ್ ಶೇರ್ ಲೆಕ್ಕಾಚಾರ
    ಮುಂಬೈ ಕರ್ನಾಟಕ
    ಕಾಂಗ್ರೆಸ್ – 38%
    ಬಿಜೆಪಿ – 38%
    ಜೆಡಿಎಸ್ – 15%
    ಇತರೇ – 10%

    ಸೀಟ್ ಶೇರ್
    ಕಾಂಗ್ರೆಸ್ – 21
    ಬಿಜೆಪಿ – 26
    ಜೆಡಿಎಸ್ – 02
    ಇತರೇ -01
    ಒಟ್ಟು – 50

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್- 39%
    ಬಿಜೆಪಿ – 37%
    ಜೆಡಿಎಸ್ -16%
    ಇತರೇ -8%

    ಸೀಟ್ ಶೇರ್
    ಕಾಂಗ್ರೆಸ್ -17
    ಬಿಜೆಪಿ -20
    ಜೆಡಿಎಸ್ -02
    ಇತರೇ -01
    ಒಟ್ಟು – 40

    ಮಧ್ಯ ಕರ್ನಾಟಕ
    ಕಾಂಗ್ರೆಸ್ -35%
    ಬಿಜೆಪಿ -36%
    ಜೆಡಿಎಸ್ – 22%
    ಇತರೇ -07%

    ಸೀಟ್ ಶೇರ್
    ಕಾಂಗ್ರೆಸ್ – 06
    ಬಿಜೆಪಿ -14
    ಜೆಡಿಎಸ್ -06
    ಇತರೇ -0
    ಒಟ್ಟು -26

    ಕರಾವಳಿ ಕರ್ನಾಟಕ
    ಕಾಂಗ್ರೆಸ್ -42%
    ಬಿಜೆಪಿ -39%
    ಜೆಡಿಎಸ್ -08%
    ಇತರೇ -10%

    ಸೀಟ್ ಶೇರ್
    ಕಾಂಗ್ರೆಸ್ -10
    ಬಿಜೆಪಿ -08
    ಜೆಡಿಎಸ್ -01
    ಇತರೇ -00
    ಒಟ್ಟು -19

    ಹಳೆ ಮೈಸೂರು
    ಕಾಂಗ್ರೆಸ್ -31%
    ಬಿಜೆಪಿ -20%
    ಜೆಡಿಎಸ್ -36%
    ಇತರೇ -13%

    ಸೀಟ್ ಶೇರ್
    ಕಾಂಗ್ರೆಸ್ -21
    ಬಿಜೆಪಿ -08
    ಜೆಡಿಎಸ್ -28
    ಇತರೇ – 04
    ಒಟ್ಟು – 61

    ಬೆಂಗಳೂರು ನಗರ
    ಕಾಂಗ್ರೆಸ್ – 37%
    ಬಿಜೆಪಿ -38%
    ಜೆಡಿಎಸ್ -20%
    ಇತರೇ -05%

    ಸೀಟ್ ಶೇರ್
    ಕಾಂಗ್ರೆಸ್ -14
    ಬಿಜೆಪಿ -12
    ಜೆಡಿಎಸ್ -01
    ಇತರೇ -00
    ಒಟ್ಟು -27

    ಕ್ವಾರ್ಟರ್ ಫೈನಲ್ ಲೆಕ್ಕಾಚಾರ ಸಮಗ್ರ(ಏಪ್ರಿಲ್ ಎರಡನೇ ವಾರ)
    ಕಾಂಗ್ರೆಸ್ 85-95
    ಬಿಜೆಪಿ 75-85
    ಜೆಡಿಎಸ್ 40-45
    ಇತರೇ 0-5

    ಸೆಮಿಫೈನಲ್ ಸೀಟು ಲೆಕ್ಕಾಚಾರ(ಏಪ್ರಿಲ್ ಕೊನೆಯ ವಾರ)
    ಕಾಂಗ್ರೆಸ್ 95-100
    ಬಿಜೆಪಿ 80-85
    ಜೆಡಿಎಸ್ 40-45
    ಇತರೇ 0-05

    ವೋಟ್ ಶೇರ್
    ಕಾಂಗ್ರೆಸ್ -36%
    ಬಿಜೆಪಿ -33%
    ಜೆಡಿಎಸ್ -23%
    ಇತರೇ – 8%

    ಸೀಟ್
    ಕಾಂಗ್ರೆಸ್ 89-94
    ಬಿಜೆಪಿ 86 -91
    ಜೆಡಿಎಸ್ 38-43
    ಇತರೇ 0-6

  • ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ಜಿಲ್ಲೆಯ ಗೌರಿಬಿದನೂರು ಪಟ್ಟಣಕ್ಕೆ ಬಂದಿದ್ದರು. ನಗರದ ಗಾಂಧಿ ವೃತ್ತದಲ್ಲಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ ಧ್ವನಿವರ್ಧಕದ ಕರ್ಕಶ ಶಬ್ದಕ್ಕೆ ಅರೆಕ್ಷಣ ಬೆಚ್ಚಿಬಿದ್ದಾರೆ.

    ರಾಹುಲ್ ಗಾಂಧಿ ಭಾಷಣ ಆರಂಭಿಸುವಾಗ ಮೈಕ್ ಕೈಕೊಟ್ಟಿದೆ. ನಂತರ ಧ್ವನಿವರ್ಧಕದಿಂದ ದಿಢೀರ್ ಬಂದ ಕರ್ಕಶ ಶಬ್ದದಿಂದ ಅವರು ಅರೆಕ್ಷಣ ಬೆಚ್ಚಿದ್ದಾರೆ. ಕರ್ಕಶ ಧ್ವನಿ ನಿಂತ ನಂತರ ರಾಹುಲ್ ಗಾಂಧಿ ನಗುಮುಖದಿಂದ ನಮಸ್ಕಾರ ಎಂದು ಭಾಷಣ ಆರಂಭಿಸಿದ್ದಾರೆ.

    ರಾಹುಲ್ ಗಾಂಧಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮೊಯಿಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬಸವಣ್ಣನವರ ವಚನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳಿದರು.

  • ಸುದೀಪ್ ರೀಲ್ ಸ್ಟಾರ್, ನಾವೆಲ್ಲಾ ರಿಯಲ್ ಸ್ಟಾರ್-ಕಿಚ್ಚನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ಸುದೀಪ್ ರೀಲ್ ಸ್ಟಾರ್, ನಾವೆಲ್ಲಾ ರಿಯಲ್ ಸ್ಟಾರ್-ಕಿಚ್ಚನ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಕಿಡಿ

    ಬಳ್ಳಾರಿ: ಬಿಜೆಪಿಯ ಅಭ್ಯರ್ಥಿಗಳ ಪರ ನಟ ಸುದೀಪ್ ಪ್ರಚಾರ ನಡೆಸಿರುವ ಕುರಿತು ಬಳ್ಳಾರಿ ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಕಿಡಿಕಾರಿದ್ದಾರೆ.

    ಜಿಲ್ಲೆಯ ಹಲಕುಂದಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು, ಸಿನಿಮಾ ನಟರು ಪದರೆಗೆ ಮಾತ್ರ ಸೀಮಿತ. ಸುದೀಪ್ ರೀಲ್ ಸ್ಟಾರ್, ನಾವೆಲ್ಲಾ ರಿಯಲ್ ಸ್ಟಾರ್. ರೀಲ್ ಸ್ಟಾರ್ ನೋಡಿ ಜನ ಮತ ಹಾಕಲ್ಲ. ಜನರ ಮಧ್ಯೆ ಇರುವ ನಾವೂ ನಿಜವಾಗಿ ರಿಯಲ್ ಸ್ಟಾರ್ ಎಂದು ಹೇಳಿದರು.

    ಸಿನಿಮಾ ನಟರು ಬಂದ ಕೂಡಲೇ ಜನ ಮತ ಹಾಕಲ್ಲ. ಮತದಾರರು ತುಂಬಾ ಪ್ರಬುದ್ಧರಿದ್ದಾರೆ. ಸುದೀಪ್ ಅವರಿಗೆ ಜಾತಿ ಮೇಲೆ ಅಭಿಮಾನ ಇದ್ದರೇ ಅವರು ನನ್ನ ಪರವಾಗಿಯೂ ಪ್ರಚಾರ ಮಾಡಬೇಕಿತ್ತು. ಆದರೆ ಸುದೀಪ್ ಸಿಎಂ ಸಿದ್ದರಾಮಯ್ಯ ಪರವಾಗಿ ಪ್ರಚಾರ ಮಾಡದೇ ರಾಮುಲು ಪರವಾಗಿ ಪ್ರಚಾರ ಮಾಡಿದ್ದು ಸರಿಯಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಸಿಎಂ ಪರ ಪ್ರಚಾರ ಮಾಡಬೇಕಿತ್ತು ಎಂದು ಹೇಳಿ ನಾಗೇಂದ್ರ ಕಿಡಿಕಾರಿದರು.

    ಬಳ್ಳಾರಿಯ ಶ್ರೀರಾಮುಲು ಹಾಗೂ ಸೋಮಶೇಖರ್ ಪರ ನಟ ಸುದೀಪ್ ಸೋಮವಾರ ಪ್ರಚಾರ ನಡೆಸಿ ರೋಡ್ ಶೋ ನಡೆಸಿದ್ದರು. ಹಲವು ಜನರು ಸುದೀಪ್ ರನ್ನು ನೋಡಲು ಬಿಸಿಲನ್ನು ಲೆಕ್ಕಿಸದೆ ಕಾದು ನಿಂತಿದ್ದರು.

  • ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ಕಾಂಗ್ರೆಸ್‍ಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ ಧರ್ಮ ಗುರು

    ರಾಮನಗರ: ಹಲವು ವಿಶೇಷತೆಗಳಿಂದ ಇಡೀ ರಾಜ್ಯದ ಗಮನ ಸೆಳೆದಿರುವ ಕ್ಷೇತ್ರ ಬೊಂಬೆನಗರಿ ಚನ್ನಪಟ್ಟಣ. ಈಗಾಗಲೇ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಪ್ರಬಲ ನಾಯಕರೇ ಸ್ಪರ್ಧೆ ಮಾಡಿರೋದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಎಲ್ಲದರ ನಡುವೆ ಮುಸ್ಲಿಂ ಧರ್ಮಗುರು ಒಬ್ಬರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುವಂತೆ ಫತ್ವಾ ಹೊರಡಿಸಿದ್ದಾರೆ.

    ಫಾರುಖ್ ಮುಲ್ಲಾ ಫತ್ವಾ ಹೊರಡಿಸಿದ ಧರ್ಮಗುರು. ಕ್ರಮ ಸಂಖ್ಯೆ 3ರ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣಗೆ ಮತ ನೀಡಬೇಕೆಂದು ತಮ್ಮ ಸಮುದಾಯದ ಜನರಿಗೆ ಸೂಚಿಸಿದ್ದಾರೆ. ಅಲ್ಲದೇ ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಸಹ ಒಂದೇ ಆಗಿವೆ. ಕೋಮುವಾದಿ ಬಿಜೆಪಿಯನ್ನ ಬೆಂಬಲಿಸದಂತೆ ಸೂಚನೆ ನೀಡಿದ್ದಾರೆ. ರೇವಣ್ಣಗೆ ಅಹಿಂದ ಮತ ಹಾಕುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ತಿಳಿಸಿದ್ದಾರೆ.

    ಚನ್ನಪಟ್ಟಣದಲ್ಲಿ ಒಕ್ಕಲಿಗ ಮತದಾರರ ಬಳಿಕ ಮುಸ್ಲಿಂ ಮತದಾರರ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ ಧರ್ಮಗುರುಗಳು ಹೊರಡಿಸಿರುವ ಫತ್ವಾವನ್ನು ಮುಸ್ಲಿಂ ಸಮುದಾಯದ ಜನರು ಪಾಲನೆ ಮಾಡ್ತಾರಾ ಎಂಬ ಪ್ರಶ್ನೆಯೊಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

    ಈ ಬಾರಿ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಎಚ್.ಎಂ.ರೇವಣ್ಣ ಸ್ಪರ್ಧೆ ಮಾಡಿದ್ರೆ, ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಜೆಡಿಎಸ್ ನಿಂದ ಹೆಚ್.ಡಿ.ಕುಮಾರಸ್ವಾಮಿ ಕಣದಲ್ಲಿದ್ದಾರೆ.

  • ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಮದ್ವೆ ಇತರೆ ಕೆಲಸಗಳಿಗೆ ಹೊರಟ್ಟಿದ್ದ 20 ಕ್ರೂಸರ್ ವಶಕ್ಕೆ ಪಡೆದ RTO ಅಧಿಕಾರಿಗಳು!

    ಬಾಗಲಕೋಟೆ: ಮದುವೆ ಹಾಗು ಇತರೆ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ ಖಾಸಗಿ ವಾಹನಗಳನ್ನು ಆರ್ ಟಿಓ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದಿದೆ.

    ಜಿಲ್ಲೆಯ ಜಮಖಂಡಿ ಆರ್ ಟಿಓ ಅಧಿಕಾರಿಗಳು ಮದುವೆ ಹಾಗು ಇನ್ನಿತರ ಶುಭ ಸಮಾರಂಭಗಳಿಗೆ ತೆರಳುತ್ತಿದ್ದ 20 ಕ್ರೂಸರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಧಿಕಾರಿಗಳು ವಾಹನಗಳನ್ನು ವಶಪಡಿಸಿಕೊಂಡ ಬಳಿಕ ಪೊಲೀಸ್ ಠಾಣೆಯ ಮುಂದೆ ಮಹಿಳೆಯರು ಸೇರಿದಂತೆ 150 ಜನರು ಎರಡು ಗಂಟೆಗಳ ಕಾಲ ನಿಲ್ಲುವಂತಾಯ್ತು.

    ಕೊನೆಗೆ ಅಧಿಕಾರಿಗಳು ವಾಹನಗಳು ಚುನಾವಣೆ ಉದ್ದೇಶಕ್ಕಾಗಿ ಬಳಕೆ ಆಗ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಕಳುಹಿಸಲಾಯ್ತು. ಆದ್ರೆ ಅಧಿಕಾರಿಗಳು ನಮ್ಮ ವಾಹನಗಳನ್ನು ವಶಪಡಿಸಿಕೊಂಡಿದ್ದರಿಂದ ತಲುಪಬೇಕಿದ್ದ ಸ್ಥಳಕ್ಕೆ ತಡವಾಗಿದೆ ಅಂತಾ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ರು.