ಬೆಂಗಳೂರು: 222 ಕ್ಷೇತ್ರಗಳ ಮತದಾನದ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆಯೆ ಪ್ರಕಟವಾಗಿದೆ. ಎರಡು ಸಮೀಕ್ಷೆಗಳಲ್ಲಿ ಆಡಳಿತರೂಢ ಕಾಂಗ್ರೆಸ್ಗೆ ಮುನ್ನಡೆ ಸಿಕ್ಕರೆ, ಎರಡು ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.
ಇಂಡಿಯಾ ಟುಡೇ ಆಕ್ಸಿಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 106-118, ಬಿಜೆಪಿ 89-112, ಜೆಡಿಎಸ್ 22 -30 ಸ್ಥಾನಗಳು ಸಿಕ್ಕಿವೆ. ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ 80-93, ಕಾಂಗ್ರೆಸ್ 90-103, ಜೆಡಿಎಸ್ 31-39, ಇತರೆ 2-4 ಸ್ಥಾನಗಳು ಸಿಗಲಿದೆ ಎಂದು ಹೇಳಿದೆ.
ರಿಪಬ್ಲಿಕ್ ಟಿವಿ ಜನ್ ಕಿ ಬಾತ್ ಪ್ರಕಾರ ಕಾಂಗ್ರೆಸ್ 73 -82, ಬಿಜೆಪಿ 95-114, ಜೆಡಿಎಸ್ 32-43, ಇತರೆ 02-03 ಸ್ಥಾನ ಸಿಗಲಿದೆ ಎಂದು ತಿಳಿಸಿದೆ. ನ್ಯೂಸ್ ಎಕ್ಸ್ ಪ್ರಕಾರ ಕಾಂಗ್ರೆಸ್ 72-79, ಬಿಜೆಪಿ 102-110, ಜೆಡಿಎಸ್ 35-39, ಇತರೇ 3-4 ಸ್ಥಾನ ಸಿಗಲಿದೆ. ಆಕ್ಸಿಸ್ ಇಂಡಿಯಾ ಪ್ರಕಾರ ಕಾಂಗ್ರೆಸ್ 111, ಬಿಜೆಪಿ 85, ಜೆಡಿಎಸ್ 26 ಸ್ಥಾನ ಸಿಗಲಿದೆ.
ನವದೆಹಲಿ: ಕರ್ನಾಟಕ ಮತದಾರರನ್ನು ಸೆಳೆಯುವ ಉದ್ದೇಶದಿಂದಲೇ ಪ್ರಧಾನಿ ಮೋದಿ ನೇಪಾಳದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ರಾಜಸ್ಥಾನ ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.
ಕರ್ನಾಟಕದಲ್ಲಿ ಈಗ ನೀತಿ ಸಂಹಿತೆಯಿದೆ. ಈ ಕಾರಣಕ್ಕೆ ಮತದಾರರನ್ನು ಸೆಳೆಯಲು ಮೋದಿ ಚುನಾವಣೆಯ ದಿನದಂದೇ ನೇಪಾಳದಲ್ಲಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮೋದಿ ದೇವಾಲಯಕ್ಕೆ ಭೇಟಿ ನೀಡಿರುವುದು ಪ್ರಜಾಪ್ರಭುತ್ವದ ಉದ್ದೇಶದಿಂದ ಒಳ್ಳೆಯದಲ್ಲ. ದೇವಾಲಯಕ್ಕೆ ಬೇರೆ ದಿನ ಭೇಟಿ ನೀಡಬಹುದಿತ್ತು. ಚುನಾವಣೆಯ ದಿನವೇ ಈ ಸ್ಥಳಕ್ಕೆ ಭೇಟಿ ನೀಡುವ ದಿನವನ್ನು ನಿಗದಿ ಪಡಿಸಿದ್ದು ಯಾಕೆ ಎಂದು ಅವರು ಪ್ರಶ್ನಿಸಿದ್ದಾರೆ.
As there is model code of conduct in Karnataka, PM Modi planned to pray at temples in Nepal instead, just to influence voters.This is not a good trend for democracy.Why did he only choose today as the day?: Ashok Gehlot,Congress #KarnatakaElections2018pic.twitter.com/Rho0LIFxnt
ತುಮಕೂರು: ಇಂದು ರಾಜ್ಯದೆಲ್ಲೆಡೆ ಮತದಾನ ನಡೆಯುತ್ತಿದ್ದು, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಮಠದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 133 ರಲ್ಲಿ ಶ್ರೀಗಳು ಮತದಾನ ಮಾಡಿದ್ದಾರೆ. 111 ರ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಲೇ ಶ್ರೀಗಳು ವೋಟ್ ಹಾಕಿರುವುದು ವಿಶೇಷವಾಗಿದೆ.
ನೆಲಮಂಗಲದಲ್ಲೂ ಶತಾಯುಷಿ ಮತದಾನ:
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಲೇಕ್ಯಾತನಹಳ್ಳಿ ಹಾಗೂ ನಿಡವಂದ ಗಳಲ್ಲಿ ಎಲೇಕ್ಯಾತನಹಳ್ಳಿಯ 102 ವರ್ಷದ ಪುಟ್ಟ ಅರಸಯ್ಯ ಹಾಗೂ ನಿಡವಂದದಲ್ಲಿ 110 ವರ್ಷದ ಅಟ್ಟಮ್ಮ ಮತದಾನ ಮಾಡಿ ಮಾದರಿಯಾದರು.
ಬೇರೆಯವರ ಸಹಾಯ ಪಡೆದು ಪುಟ್ಟ ಅರಸಯ್ಯ ಮತದಾನ ಮಾಡಿದರೆ ವ್ಹೀಲ್ ಚೇರ್ ಮುಖಾಂತರ ಆಗಮಿಸಿದ ಅಟ್ಟಮ್ಮ ತನ್ನ ಸಂಬಂಧಿಯ ಸಹಾಯ ಪಡೆದು ಮತ ಚಲಾಯಿಸಿದರು. ಒಟ್ಟಿನಲ್ಲಿ ತಮ್ಮ ವಯೋಮಾನ ವನ್ನು ಲೆಕ್ಕಿಸಿದೆ ಮತ ಹಾಕಿದ್ದು ವಿಶೇಷವಾಗಿತ್ತು.
ಜಯನಗರ ಮತ್ತು ಆರ್ ಆರ್ ನಗರ ಬಿಟ್ಟು ಕರ್ನಾಟಕದ ಒಟ್ಟು 222 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದೆ. ಹಲವೆಡೆ ಮತಯಂತ್ರಗಳು ಕೈ ಕೊಟ್ಟಿದ್ದು, ಮತದಾರರು ನಿರಾಶರಾಗಿ ಹಿಂದಿರುಗಿದ್ದಾರೆ. ಇನ್ನು ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ.
ಮಂಗಳೂರು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮದುವೆಗೂ ಮುನ್ನ ಮದುಮಗಳು ಮತದಾನ ಮಾಡಿದ ಪ್ರಸಂಗವೊಂದು ಮಂಗಳೂರಿನಲ್ಲಿ ನಡೆದಿದೆ.
ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದೆ. ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.
7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಮಂಗಳೂರಿನ ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜತೆ ಯುವತಿಯ ಮದುವೆ ಇಂದು ನಡೆಯುತ್ತಿದೆ.
ಒಟ್ಟಿನಲ್ಲಿ ವಿಯೋಲಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.
ಬೆಂಗಳೂರು: ಕರ್ನಾಟಕದ 222 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಶುರುವಾಗಿದೆ. ಬೆಳಗ್ಗೆಯಿಂದಲೇ ಎಲ್ಲೆಡೆ ಮತದಾರರು ಹಕ್ಕು ಚಲಾಯಿಸಲು ಆಗಮಿಸುತ್ತಿದ್ದು, ರಾಜ್ಯದ ಹಲವೆಡೆ ಇವಿಎಂ ಯಂತ್ರಗಳು ಕೈಕೊಡುತ್ತಿವೆ. ಇದರಿಂದ ನಿರಾಶರಾಗಿ ಹಲವೆಡೆ ಮತದಾರರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಹೋಗುತ್ತಿದ್ದಾರೆ. ಉಡುಪಿ ಜಿಲ್ಲೆಯ ಮತಗಟ್ಟೆಯೊಂದರಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ಸುಮಾರು 200ಕ್ಕೂ ಹೆಚ್ಚು ಮತದಾರರು ಬೇಸರದಿಂದ ಮತ ಚಲಾಯಿಸದೇ ಹಿಂದಿರುಗಿದ್ದಾರೆ.
ಸಂಜೆ 5.07: ಸಂಜೆ 4 ಗಂಟೆಗೆ ಹೊತ್ತಿಗೆ ಶೇ.61.53ರಷ್ಟು ಮತದಾನ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 68ರಷ್ಟು ಮತದಾನ
ಸಂಜೆ 4.49: ಬೆಂಗಳೂರು ಉತ್ತರದಲ್ಲಿ ಅತೀ ಕಡಿಮೆ ಅಂದ್ರೆ ಶೇ.39ರಷ್ಟು ಮತದಾನ
ಸಂಜೆ 4.27: ಉಡುಪಿಯಲ್ಲಿ ಸ್ಪೆಷಲ್ ವೋಟ್ ಆಫರ್, ವೋಟ್ ಹಾಕಿ, ಟೀ ಕುಡಿಯಿರಿ, ಬಟ್ಟೆ ತಗೊಳ್ಳಿ
ಸಂಜೆ 4.15: ಮತದಾನ ಮಾಡಲು ಬಾರದ ನಟಿ ರಮ್ಯಾ ಹಾಗೂ ಸುಮಲತಾ
ಸಂಜೆ 4.07: ಮತದಾರರಿಗೆ ಹಣ ಹಂಚಿದ ಆರೋಪ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ವಿರುದ್ಧ ಎಫ್ಐಆರ್
ಸಂಜೆ 4: ಕೋಲಾರ ಕೆಜಿಎಫ್ , ರಾಯಚೂರು ಮೊದಲಾದ ಕಡೆಗಳಲ್ಲಿ ಮತದಾನಕ್ಕೆ ವರುಣ ಅಡ್ಡಿ
ಮಧ್ಯಾಹ್ನ:3.53: ಮದ್ದೂರಿನ ದೊಡ್ಡರಸಿಕೆರೆಯಲ್ಲಿ ಜೆಡಿಎಸ್ ಅಭ್ಯರ್ಥಿ ಡಿಸಿ ತಮ್ಮಣ್ಣ ಕಾರಿನಲ್ಲಿ ಬಂದು ಮತ ಚಲಾಯಿಸಿದ ಅಂಬರೀಶ್
ಮಧ್ಯಾಹ್ನ:3.52: ಬೊಮ್ಮನಹಳ್ಳಿ ಮತಗಟ್ಟೆಗೆ ಪತ್ನಿ ಪ್ರಿಯಾ ಸುದೀಪ್ ಜೊತೆ ಬಂದು ನಟ ಸುದೀಪ್ ಮತ ಚಲಾವಣೆ
ಮಧ್ಯಾಹ್ನ:3.48: ಎಲೆಕ್ಷನ್ ದಿನವೇ ಪ್ರಯಾಣಿಕರಿಂದ ದುಪ್ಪಟ್ಟು ಹಣ ಸುಲಿಗೆ ಮಾಡುತ್ತಿರುವ ಬಿಎಂಟಿಸಿ. ಮೆಜೆಸ್ಟಿಕ್ ನಿಂದ ಮಾಗಡಿರೋಡ್ ಟೋಲ್ ಗೇಟ್ ಗೆ 10 ರೂ. ಇದ್ದಿದ್ದು 20ರೂ. ಗೆ ದಿಢೀರ್ ಏರಿಕೆ. ಬಸ್ ಪಾಸ್ ಇದ್ದವರನ್ನು ಬಸ್ ಗೆ ಹತ್ತಿಸದ ಕಂಡಕ್ಟರ್ ಗಳು
ಮಧ್ಯಾಹ್ನ:3.43: ಕಾರವಾರದಲ್ಲಿ 1390 ಮತದಾರರಿರುವ ವಾರ್ಡ್ ನಲ್ಲಿ ಕಡಿಮೆ ಪ್ರಮಾಣದ ಮತ ಚಲಾವಣೆ
ಮಧ್ಯಾಹ್ನ:3.30: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ಮತದಾನದಿಂದ ವಂಚಿತರಾದ್ರೆ, ಮಗಳು ಬ್ರಹ್ಮಿಣಿಯಿಂದ ಮೊದಲ ಬಾರಿಗೆ ಮತದಾನ
ಮಧ್ಯಾಹ್ನ:3.23: ಕರ್ನಾಟಕದಲ್ಲಿ ಮತದಾನ ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಸುಳಿವು
ಮಧ್ಯಾಹ್ನ 3.11: ರಾಜ್ಯಾದ್ಯಂತ ಶೇ. 56ರಷ್ಟು ಮತದಾನ
ಮಧ್ಯಾಹ್ನ: 3.09 – ಹಾಸನದ ಗೆಂಡೆಹಳ್ಳಿಯಲ್ಲಿ ವೋಟರ್ ಲಿಸ್ಟ್ ನಲ್ಲಿ ಬದುಕಿರುವವರು ಸತ್ತಿದ್ದಾರೆ. ಭದ್ರೇಗೌಡ ಹಾಗೂ ಇತರರನ್ನು ಸತ್ತವರ ಪಟ್ಟಿಗೆ ಸೇರಿಸಿದ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ನಡೆಗೆ ಆಕ್ರೋಶ
ಮಧ್ಯಾಹ್ನ: 3.02 – ಒಂದೇ ಕುಟುಂಬದ ಒಂದೊಂದು ವೋಟ್ ಬೇರೆ ಬೇರೆ ಬೂತ್ ಗಳಲ್ಲಿ ಸೇರ್ಪಡೆ- ಗೋವಿಂದರಾಜನಗರದ ಗಣೇಶ್ ರಾವ್ ದಂಪತಿ ಪರದಾಟ
ಮಧ್ಯಾಹ್ನ: 29 – ಸಂಜೆ 4 ಗಂಟೆಯಿಂದ ಮಳೆ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ
ಮಧ್ಯಾಹ್ನ 2.50- ಬೆಣ್ಣೆನಗರಿ ದಾವಣಗೆರೆಯಲ್ಲಿ ಶೇ.40ರಷ್ಟು ಮತದಾನ
ಮಧ್ಯಾಹ್ನ 2.24: ಸದಾಶಿವನಗರದ ಹೆಚ್ ಕೆಇಎಸ್ ಮತಕೇಂದ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮತದಾನ
ಮಧ್ಯಾಹ್ನ 2:18- ಶಾಂತಿನಗರದಲ್ಲಿ ಹ್ಯಾರಿಸ್ ಬೆಂಬಲಿಗರಿಂದ ಹಣ ಹಂಚಿಕೆ ಆರೋಪ, ಕಾರ್ ಡಿಕ್ಕಿಯಲ್ಲಿ ಹಣ ಮತ್ತು ಸ್ಟಿಕ್ಕರ್ ಪತ್ತೆ
ಮಧ್ಯಾಹ್ನ 2.13: ಚಿತ್ರದುರ್ಗದಲ್ಲಿ ಚುನಾವಣಾಧಿಕಾರಿ ಅಮ್ಜದ್ ಮೇಲೆ ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಕಿಡಿ
ಮಧ್ಯಾಹ್ನ 2:05: ಉಡುಪಿಯಲ್ಲಿ ದಾಖಲೆಯ ಶೇ.50 ರಷ್ಟು ಮತದಾನ
ಮಧ್ಯಾಹ್ನ 2:00: ಇದೂವರೆಗೂ ದಕ್ಷಿಣ ಕನ್ನಡದಲ್ಲಿ ಅತಿ ಹೆಚ್ಚು ಶೇ.47ರಷ್ಟು ಮತದಾನ-ಬೆಂಗಳೂರಿನಲ್ಲಿ ಅತಿ ಕಡಿಮೆ ಶೇ.28ರಷ್ಟು ಮತದಾನ
ಮಧ್ಯಾಹ್ನ 1:45: ಮತದಾನ ಮಾಡಿ ಹೊರ ಬರುತ್ತಿದ್ದಂತೆಯೇ ಮಹಿಳೆ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕು ಗೆಂಡಿಹಳ್ಳಿ ಮತಗಟ್ಟೆಯಲ್ಲಿ ನಡೆದಿದೆ. ಮಗೆಹಳ್ಳಿ ನಿವಾಸಿ 50 ವರ್ಷದ ರೇವತಿ ಸಾವನ್ನಪ್ಪಿದ ಮಹಿಳೆ.
ಮಧ್ಯಾಹ್ನ 1:40: ರಾಜ್ಯಾದ್ಯಂತ ಇದೂವರೆಗೂ ಶೇ.39ರಷ್ಟು ಮತದಾನ
ಮಧ್ಯಾಹ್ನ 01:30: ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿಯ ಮತಗಟ್ಟೆ ಸಂಖ್ಯೆ 240ರಲ್ಲಿ ಮತದಾನದ ಹಕ್ಕು ಚಲಾಯಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್-ಸರತಿ ಸಾಲಿನಲ್ಲಿ ನಿಂತು ಪತ್ನಿ ಉಷಾ ಶಿವಕುಮಾರ್, ಮಗಳು ಐಶ್ವರ್ಯ ಜೊತೆ ಮತದಾನ
ಮಧ್ಯಾಹ್ನ 01: 25: ಮಾಗಡಿಯ ಹುಲಿಕಲ್ ನಲ್ಲಿ ಸಾಲುಮರದ ತಿಮ್ಮಕ್ಕರಿಂದ ಮತದಾನ. ನಾನು ಮತದಾನ ಮಾಡಿದ್ದೇನೆ, ನೀವು ವೋಟ್ ಹಾಕಿ ಎಂದು ತಿಮ್ಮಕ್ಕರಿಂದ ಮತದಾರರಿಗೆ ಪ್ರೋತ್ಸಾಹ
ಮಧ್ಯಾಹ್ನ 01: 20: ವರುಣಾ ಕ್ಷೇತ್ರದ ಸಿದ್ದರಾಮನ ಹುಂಡಿಯಲ್ಲಿ ಮತ ಚಲಾವಣೆ ಮಾಡಿದ ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ
ಮಧ್ಯಾಹ್ನ 01: 10: ಇವತ್ತು ಹಾಲಿ ಡೇ ಅಂತಾ ಟ್ರೀಟ್ ಮಾಡ್ಬೇಡಿ. ಬನ್ನಿ ಎಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ: ನಟಿ ರಾಧಿಕಾ ಪಂಡಿತ್
ಮಧ್ಯಾಹ್ನ 01: 00: ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ನಕಲಿ ವೋಟರ್ ಐಡಿ ಹಂಚುತ್ತಿದ್ದವರ ಬಂಧನ
ಮಧ್ಯಾಹ್ನ 12.50: ಧಾರವಾಡ: ಮದುವೆ ಮನೆಯಿಂದ ನೇರವಾಗಿ ಮತಗಟ್ಟೆಗೆ ಆಗಮಿಸಿದ ಮಲ್ಲಿಕಾರ್ಜುನ್ ಗಾಮನಗಟ್ಟಿ ಮತ್ತು ನಿಖಿತಾ -ಧಾರವಾಡದ ಕಾಮನಕಟ್ಟಿ ಬಡಾವಣೆಯ ಕನ್ನಡ ಶಾಲೆಯ ಮತಗಟ್ಟೆ ಸಂಖ್ಯೆ ೧೯೧ (ಎ) ಆಗಮಿಸಿ ಮತದಾನ ಮಾಡಿದ ನವ ದಂಪತಿ
ಮಧ್ಯಾಹ್ನ 12.30: ಮೈಸೂರಿನ ಸಿದ್ದರಾಮನ ಹುಂಡಿಯಲ್ಲಿ ಮತ ಚಲಾಯಿಸಲಿರುವ ಸಿಎಂ ಸಿದ್ದರಾಮಯ್ಯ
ಮಧ್ಯಾಹ್ನ 12.20: ಬಳ್ಳಾರಿಯ ದೇವಿ ನಗರದ ಬೂತ್ ೫೨ ರಲ್ಲಿ ಪತ್ನಿ ಭಾಗ್ಯಲಕ್ಷ್ಮೀ ಯೊಂದಿಗೆ ಆಗಮಿಸಿ ಮತ ಚಲಾವಣೆ ಮಾಡಿದ ಸಂಸದ ಶ್ರೀರಾಮುಲು
ಮಧ್ಯಾಹ್ನ 12.10: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ರಾಚೇನಹಳ್ಳಿ ಬೂತ್ ನಂ 326 ನಲ್ಲಿ ಮತ ಚಲಾಯಿಸಿದ ನಟ ಶಿವರಾಜ್ ಕುಮಾರ್
ಮಧ್ಯಾಹ್ನ 12.10: ಇದೂವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.31ರಷ್ಟು ಮತದಾನ
ಮಧ್ಯಾಹ್ನ 12.05: ಬೆಂಗಳೂರು-ತುಮಕೂರು ಹೆದ್ದಾರಿಯಲ್ಲಿ ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್-ವೋಟ್ ಹಾಕಲು ತಮ್ಮ ಸ್ವಂತ ಊರುಗಳಿಗೆ ತೆರಳುತ್ತಿರುವ ಮತದಾರರು
ಮಧ್ಯಾಹ್ನ 12.00: ದಾವಣಗೆರೆಯಲ್ಲಿ ಮತದಾನದ ಫೋಟೋ ವೈರಲ್-ವೋಟ್ ಹಾಕಿದ್ದನ್ನು ಫೋಟೋ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿಕೊಂಡ ಬಿಜೆಪಿ ಬೆಂಬಲಿಗ
ಬೆಳಗ್ಗೆ 11.40: ದಾವಣಗೆರೆ ಮಾಯಕೊಂಡ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರ-ರಾಂಪುರ ಗ್ರಾಮದ ಮತಗಟ್ಟೆಯಲ್ಲಿ ಇದೂವರೆಗೂ ಯಾರು ಮತದಾನದ ಹಕ್ಕನ್ನು ಚಲಾಯಿಸಿಲ್ಲ. ಮೂಲಭೂತ ಸೌಕರ್ಯ ಒದಗಿಸದಿರುವದರಿಂದ ಮತದಾನ ಬಹಿಷ್ಕಾರ
ಬೆಳಗ್ಗೆ 11:30: ಮೈಸೂರು: ಅಗ್ರಹಾರದ ಶ್ರೀಕಾಂತ ಮಹಿಳಾ ಪದವಿ ಪೂರ್ವ ಕಾಲೇಜಿಗೆ ಆಗಮಿಸಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಮತದಾನ. ರಾಜ ಪ್ರಭುತ್ವದಲ್ಲಿ ಪ್ರಜೆಗಳಿಗೆ ಏನು ಬೇಕೆಂಬುದನ್ನು ರಾಜರು ನಿರ್ಧರಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಏನು ಬೇಕೆಂಬುದನ್ನು ಪ್ರಜೆಗಳೇ ನಿರ್ಧರಿಸುತ್ತಾರೆ. ಒಳ್ಳೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಕಡ್ಡಾಯವಾಗಿ ಮತದಾನ ಮಾಡಬೇಕು ಅಂತಾ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ರು.
ಬೆಳಗ್ಗೆ 11:20: 11 ಗಂಟೆಯವರಗೆ ರಾಜ್ಯಾದ್ಯಂತ ಶೇ.24ರಷ್ಟು ಮತದಾನ
ಬೆಳಗ್ಗೆ 11:10: ಕಲಬುರಗಿಯಲ್ಲಿ ಮತ ಚಲಾಯಿಸಿದ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ
ಬೆಳಗ್ಗೆ 11:10: ಕೋಲಾರದ ಶ್ರೀನಿವಾಸಪುರದ ಚನ್ನಯ್ಯಗಾರಪಲ್ಲಿ ಮತಗಟ್ಡೆಯಲ್ಲಿ ತಾಂತ್ರಿಕ ದೋಷದಿಂದ 2 ಗಂಟೆಯಿಂದ ಮತದಾನ ಸ್ಥಗಿತ
ಬೆಳಗ್ಗೆ 11:00: ದಾವಣಗೆರೆಯ ಜಗಳೂರು ಕ್ಷೇತ್ರದಲ್ಲಿ ಬಿರುಸಿನ ಮತದಾನ-ಪಿಂಕ್ ಮತಗಟ್ಟೆಗೆ ಖುಷಿಯಿಂದ ಬಂದು ಮತದಾನ ಮಾಡಿ ಸೆಲ್ಫಿಗೆ ಮೊರೆ ಹೋದ ಯುವತಿಯರು
ಬೆಳಗ್ಗೆ 10:55: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ದಂಪತಿಯಿಂದ ಮತದಾನ-ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮತ ಚಲಾವಣೆ ಮಾಡಿದ ಹೆಗ್ಗಡೆ ದಂಪತಿ
ಬೆಳಗ್ಗೆ 10:40: ಕೊಡಗಿನಲ್ಲಿ ಮತದಾನ ಮಾಡಿದ ಮದುಮಗಳು. ಹಸೆ ಮಣೆ ಏರುವ ಮೊದಲು ಮತ ಚಲಾಯಿಸಿದ ಯುವತಿ. ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಗ್ರಾಮದ ಮತಗಟ್ಟೆ ಸಂಖ್ಯೆ 131 ರಲ್ಲಿ ಮತಚಲಾವಣೆ.
ಬೆಳಗ್ಗೆ 10:30: ಅಂಡಿಜೆ ಗ್ರಾಮದಲ್ಲಿ ಮತಹಾಕಲು ಹೋಗುತ್ತಿದ್ದ 70 ವರ್ಷದ ಜಾರಿಗೆದಡಿ ನಿವಾಸಿ 70 ವರ್ಷದ ಅಣ್ಣಿ ಅಚಾರ್ಯಗೆ ಹೃದಯಾಘಾತ
ಬೆಳಗ್ಗೆ 10:30: ಯಾದಗಿರಿಯ ಕೋಳಿವಾಡ ಮತಗಟ್ಟೆ 38ರಲ್ಲಿ ಎಡವಟ್ಟು-ಮತ ಚಲಾಯಿಸಲು ಬಂದ ಮಹಿಳೆಗೆ ನಿಮ್ಮ ವೋಟ್ ಹಾಕಲಾಗಿದೆ ಎಂದ ಚುನಾವಣಾ ಅಧಿಕಾರಿಗಳು
ಬೆಳಗ್ಗೆ 10:25: ತುಮಕೂರಿನಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳಿಂದ ಮತದಾನ
ಬೆಳಗ್ಗೆ 10:20: ಇವಿಎಂನಲ್ಲೇ ಕಾಂಗ್ರೆಸ್ ಪ್ರಚಾರ-ಇಲ್ಲೇ ವೋಟ್ ಹಾಕುವಂತೆ ಕಾಂಗ್ರೆಸ್ ಚಿನ್ಹೆ ಅಡಿಯಲ್ಲಿ ಕಪ್ಪು ಮಸಿ-ಬೆಳಗಾವಿ ಜಿಲ್ಲೆಯ ಯಮಕನಕರಡಿ ಕ್ಷೇತ್ರದ ಭರಮನಹಟ್ಟಿ ಬೂತ್ ನಲ್ಲಿ ಘಟನೆ-ಬಿಜೆಪಿ ಪ್ರತಿಭಟನೆ ಬಳಿಕ ಮತದಾನ ಸ್ಥಗಿತ
ಬೆಳಗ್ಗೆ 10:10: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಮತಗಟ್ಟೆಯಲ್ಲಿ ಕುಟುಂಬ ಸಮೇತ ಆಗಮಿಸಿ ಕಾಂಗ್ರೆಸ್ ಅಭ್ಯರ್ಥಿ ಎ.ರಾಜಶೇಖರ್ ನಾಯಕ್, ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ಮತ್ತು ಜೆಡಿಎಸ್ ಅಭ್ಯರ್ಥಿ ವೆಂಕಟೇಶ್ ಪೂಜಾರಿ ಮತದಾನ
ಬೆಳಗ್ಗೆ 10:05: ಬೀದರ್ ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 7ರಷ್ಟು ಮತದಾನ.
ಕೊಡಗು ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 10ರಷ್ಟು ಮತದಾನ.
ಧಾರವಾಡ ಜಿಲ್ಲೆಯದ್ಯಾಂತ ಈವರೆಗೆ ಶೇಕಡಾ 8.72ರಷ್ಟು ಮತದಾನ.
ಬೆಳಗ್ಗೆ 10:00: ಚಿತ್ತಾಪುರ ತಾಲೂಕಿನ ಗುಂಡಗೂರ್ತಿ ಗ್ರಾಮದ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಮತದಾನ- ಪತ್ನಿ ಶೃತಿ ಜೊತೆ ಆಗಮಿಸಿ ಹಕ್ಕು ಚಲಾಯಿಸಿದ ಪ್ರಿಯಾಂಕ್ ಖರ್ಗೆ
ಮಂಗಳೂರಿನ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತ ಚಲಾಯಿಸಿ ಮದುವೆಗೆ ತೆರಳಿದ ಮದುಮಗಳು
ಬೆಳಗ್ಗೆ 09:52: ಚಿಕ್ಕಬಳ್ಳಾಪುರ: ಸರದಿ ಸಾಲಿನಲ್ಲಿ ನಿಂತು ನಗರಸಭೆಯ ಮತಗಟ್ಟೆ ಸಂಖ್ಯೆ 163 ರಲ್ಲಿ ಪತ್ನಿ ಮಾಲತಿ ಜೊತೆ ಸಂಸದ ವೀರಪ್ಪ ಮೊಯ್ಲಿ ಮತದಾನ.
ಬೆಳಗ್ಗೆ 09:50: ಯಾದಗಿರಿ ಜಿಲ್ಲೆಯದ್ಯಾಂತ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇಕಡಾ 11 ರಷ್ಟು ಮತದಾನ.
ಬೆಳಗ್ಗೆ 09:40: ಚಾಮರಾಜನಗರ ಜಿಲ್ಲೆಯದ್ಯಾಂತ ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಶೇಕಡಾ 2.37 ರಷ್ಟು ಮತದಾನ.
ಬೆಳಗ್ಗೆ 09:40: ಉಡುಪಿಯಲ್ಲಿ ಶೇ9.24 ಮತದಾನ: ಜಿಲ್ಲೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 9 ರವರೆಗೆ 9.24% ಮತದಾನ,ಬೈಂದೂರು 6.43%,ಕುಂದಾಪುರ 9.96%, ಉಡುಪಿ 8.65%, ಕಾಪು 10.41%, ಕಾರ್ಕಳ 11.15%
ಬೆಳಗ್ಗೆ 09:36: ಮಾಜಿ ಸಚಿವ, ಪತಿ ಮಹದೇವಪ್ರಸಾದ್ ಸಮಾಧಿಗೆ ಪೂಜೆ ಸಲ್ಲಿಸಿ ಗುಂಡ್ಲುಪೇಟೆ ಕಾಂಗ್ರೆಸ್ ಅಭ್ಯರ್ಥಿ ಗೀತಾಮಹದೇವಪ್ರಸಾದ್ ಕುಟುಂಬ ಸಮೇತ ಮತದಾನ – ಪೂಜೆ ಸಲ್ಲಿಸುವಾಗ ಪತಿ ನೆನದು ಭಾವುಕರಾದ ಗೀತಾಮಹದೇವಪ್ರಸಾದ್
ಬೆಳಗ್ಗೆ 09:35: ಅಫಜಲಪುರ ಬಿಜೆಪಿ ಮಾಲೀಕಯ್ಯ ಗುತ್ತೇದಾರ್ ಕುಟುಂಬ ಸಮೇತ ಮತದಾನ, ಸ್ವಗ್ರಾಮ ಸ್ಟೇಷನ್ ಗಾಣಗಾಪುರದಲ್ಲಿ ಮತದಾನ-ಜೇವರ್ಗಿ ಬಿಜೆಪಿ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ಮತದಾನ-ಕಲಬುರಗಿ ದಕ್ಷಿಣ ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ & ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ರೇವೂರ್ ಮತದಾನ
ಬೆಳಗ್ಗೆ 09:30: ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಕ್ಷೇತ್ರದ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಮತದಾನ
ಬೆಳಗ್ಗೆ 09:25: ನಗರದ ನಿಜಲಿಂಗಪ್ಪ ಬಡಾವಣೆ ಯಲ್ಲಿರುವ ಮಾಗನೂರು ಬಸಪ್ಪ ಶಾಲೆಯಲ್ಲಿ ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ್ ಮತದಾನ
ಬೆಳಗ್ಗೆ 09:20: ಹಾಸನ: ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಮತದಾನ-ಮತಗಟ್ಟೆ ಸಂಖ್ಯೆ ೨೪೪, ಗೌಡರೊಂದಿಗೆ ಪತ್ನಿ ಚನ್ನಮ್ಮ, ಪುತ್ರ ರೇವಣ್ಣ, ಸೊಸೆ ಭವಾನಿ, ಮೊಮ್ಮಗ ಪ್ರಜ್ವಲ್ ರಿಂದಲೂ ಮತದಾನ
ಬೆಳಗ್ಗೆ 09:15: ಧಾರವಾಡದ ಪವನ್ ಸ್ಕೂಲ್ನ ಮತಗಟ್ಟೆ ಸಂಖ್ಯೆ 171ರಲ್ಲಿ ಮತ ಚಲಾಯಿಸಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ
ಬೆಳಗ್ಗೆ 09:12: ರಾಯಚೂರಿನ ಲಿಂಗಸುಗೂರಿನ ಕಡದರಗಡ್ಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರ. ಕೃಷ್ಣನದಿಯಲ್ಲಿ ನಡುಗಡ್ಡೆಯಾಗಿರುವ ಗ್ರಾಮಕ್ಕೆ ಸೇತುವೆ ನಿರ್ಮಾಣದ ಬೇಡಿಕೆ ಗೆ ಸ್ಪಂದಿಸದ ಹಿನ್ನೆಲೆ ಬಹಿಷ್ಕಾರ. ಚುನಾವಣಾ ಅಧಿಕಾರಿಗಳಿಂದ ಮತದಾರರನ್ನ ಒಲಿಸುವ ಕಾರ್ಯ.
ಬೆಳಗ್ಗೆ 09:10 ಎಲ್ಲರೂ ಮತದಾನ ಮಾಡಿ, ರಾಜ್ಯದ ಅಭಿವೃದ್ಧಿ ಜನರ ಕಷ್ಟಗಳಿಗೆ ಸ್ವಂದಿಸುವಂತವರಿಗೆ ಮತಹಾಕಿ ನಿರ್ಮಲಾನಂದನಾಥ ಸ್ವಾಮೀಜಿ
ಬೆಳಗ್ಗೆ 09:05 ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಆಸ್ಪತ್ರೆಗೆ ದಾಖಲು-ಸ್ವತಂತ್ರ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಎಂ ರಾಜಣ್ಣ ಶಿಡ್ಲಘಟ್ಟ ಸರ್ಕಾರಿ ಆಸ್ಪತ್ರೆಗೆ ದಾಖಲು-ಲೋ ಬಿಪಿ ಸಮಸ್ಯೆ ಯಿಂದ ಆಸ್ಪತ್ರೆಗೆ ದಾಖಲಾದ ಎಂ ರಾಜಣ್ಣ
ಬೆಳಗ್ಗೆ 09:00 ಮಂಗಳೂರಿನ ಬಂಟ್ವಾಳದಲ್ಲಿ ತೊಡಂಬಿಲದಲ್ಲಿ ಬೆಂಬಲಿಗರೊಂದಿಗೆ ಆಗಮಿಸಿ ಸೇಕ್ರೆಡ್ ಹಾರ್ಟ್ ಅನುದಾನಿತ ಶಾಲೆಯಲ್ಲಿ ಮತದಾನ ಮಾಡಿದ ಸಚಿವ ರಮಾನಾಥ ರೈ
ಬೆಳಗ್ಗೆ 08: 55 ಪಾಂಡವಪುರದ ಕ್ಯಾತನಹಳ್ಳಿ ಗ್ರಾಮದಲ್ಲಿ ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಮತದಾನ
ಬೆಳಗ್ಗೆ 08: 50 ಬದಾಮಿಯಲ್ಲಿ ಚುರುಕುಗೊಂಡ ಮತದಾನ -ಬಾದಾಮಿಯಲ್ಲಿ ಬೆಳಗ್ಗೆಯಿಂದಲ್ಲೇ ಮತಗಟ್ಟೆಗೆ ಬಂದು ವೋಟ್ ಹಾಕುತ್ತಿರುವ ಮತದಾರರು
ಬೆಳಗ್ಗೆ 08: 50 ಕುಬಟೂರಿನಲ್ಲಿ ತಂದೆ ಬಂಗಾರಪ್ಪ ಹಾಗೂ ತಾಯಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸೊರಬ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ. ಊರ ದೇವತೆ ದ್ಯಾಮವ್ವನ ಗುಡಿಯಲ್ಲಿ ಪೂಜೆ ಸಲ್ಲಿಸಿ ಮತದಾನ
ಬೆಳಗ್ಗೆ 08: 45 ಸಾಲುಬಿಟ್ಟು ಮುಂದೆ ಹೋಗಿ ಮತದಾನ ಮಾಡಿದ್ದಕ್ಕೆ ಜಗ್ಗೇಶ್ ಗೆ ಸಾರ್ವಜನಿಕರಿಂದ ತರಾಟೆ
ಬೆಳಗ್ಗೆ: 08:40 ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ರಿಂದ ಮತದಾನ
ಬೆಳಗ್ಗೆ: 08: 15 ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ಯದುವೀರ್ ಒಡೆಯರ್
ಚಾಮರಾಜನಗರ: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಚಾಮರಾಜನಗರದ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ.
ಹೌದು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳಿಗೆ ತಮ್ಮ ವೋಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಿರುವುದು ವಿಪರ್ಯಾಸವಾಗಿದೆ.
ಕಾಂಗ್ರೆಸ್ ನ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ, ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಈ ಮೂವರಿಗೆ ವೋಟು ಹಾಕುವ ಭಾಗ್ಯವಿಲ್ಲ. ಯಾಕಂದ್ರೆ ಈ ಮೂವರು ಕ್ಷೇತ್ರ ವ್ಯಾಪ್ತಿಯಲ್ಲಿ ವಾಸಿಸಿಲ್ಲ. ಅಷ್ಟೇ ಅಲ್ಲದೇ ಕ್ಷೇತ್ರದ ಮತದಾರರ ಪಟ್ಟಿಯಲ್ಲೂ ಇವರ ಹೆಸರಿಲ್ಲ.
ಹೀಗಾಗಿ ಮೂವರ ಹೆಸರು ಬೇರೆ ಬೇರೆ ಕ್ಷೇತ್ರಗಳ ಮತಗಟ್ಟೆಯಲ್ಲಿರುವ ಹಿನ್ನೆಲೆಯಲ್ಲಿ ತಮ್ಮ ವೋಟು ತಮಗೆ ಹಾಕಿಕೊಳ್ಳದ ಪರಿಸ್ಥಿತಿ ಎದುರಾಗಿದೆ ಎಂಬುದಾಗಿ ತಿಳಿದುಬಂದಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಿಗೆ ಚುನಾವಣೆ ನಡೀತಿದ್ದು, ಟೈಟ್ ಸೆಕ್ಯೂರಿಟಿ ಕೈಗೊಳ್ಳಲಾಗಿದೆ. 10, 500 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇನ್ನು, ಬೆಂಗಳೂರಲ್ಲಿ ಒಟ್ಟು 7,477 ಮತಗಟ್ಟೆಗಳನ್ನು ತೆರೆಯಲಾಗಿದ್ದು, 1,469 ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಪರಿಗಣಿಸಲಾಗಿದೆ.
222 – ಕ್ಷೇತ್ರ (ಬೆಂಗಳೂರಿನ ಜಯನಗರ, ಆರ್.ನಗರ ಹೊರತು ಪಡಿಸಿ) ಕುರ್ನಾಟಕ ಕುರಕ್ಷೇತ್ರಕ್ಕೆ ಧುಮುಕಿರುವ ಕದನ ಕಲಿಗಳು ಎಷ್ಟು ಜನ ಅಂತ ನೋಡೋದಾದ್ರೆ..
* 2,636 – ಅಭ್ಯರ್ಥಿಗಳು (ಬಿಜೆಪಿ-223(-1), ಕಾಂಗ್ರೆಸ್ -221(-1), ಜೆಡಿಎಸ್ -200 (-1), ಬಿಎಸ್ಪಿ( 18) (ಆರ್ಆರ್ ನಗರದ ಅಭ್ಯರ್ಥಿಗಳನ್ನ ಬಿಡಬೇಕು)
* 2,419 – ಪುರುಷ ಅಭ್ಯರ್ಥಿಗಳು (ಆರ್ಆರ್ ನಗರದ 14 ಅಭ್ಯರ್ಥಿಗಳನ್ನ ಬಿಡಬೇಕು )
* 217 – ಮಹಿಳಾ ಅಭ್ಯರ್ಥಿಗಳು
* 1,146 – ಪಕ್ಷೇತರ ಅಭ್ಯರ್ಥಿಗಳು
* 70+ – ಕಣದಲ್ಲಿರುವ ಪಕ್ಷಗಳ ಸಂಖ್ಯೆ
* 39 – ಮುಳಬಾಗಿಲಿನಲ್ಲಿ ಗರಿಷ್ಠ ಅಭ್ಯರ್ಥಿಗಳು (23 ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ)
* 04 – ಸೇಡಂ, ಚಳ್ಳಕೆರೆಯಲ್ಲಿ ಕನಿಷ್ಠ ಅಭ್ಯರ್ಥಿಗಳು
* ಹಿರಿಯ ಅಭ್ಯರ್ಥಿ – ಕಾಗೋಡು ತಿಮ್ಮಪ್ಪ, 87 ಕ್ಷೇತ್ರ – ಸಾಗರ (80 ದಾಟಿದವರು ಐವರು ಇದ್ದಾರೆ)
* ಕಿರಿಯ ಅಭ್ಯರ್ಥಿ – ಎಸ್. ಅಶ್ವಿನಿ, 26 ವರ್ಷ – ಕೆಜಿಎಫ್
ಇನ್ನು, ರಾಜ್ಯದಲ್ಲಿ ಸರಿ ಸುಮಾರು 7 ಕೋಟಿ ಜನಸಂಖ್ಯೆ ಇದೆ. ಅದರಲ್ಲಿ, ಮತದಾರರ ಸಂಖ್ಯೆ ಎಷ್ಟಿದೆ? ಸುಗಮ, ಶಾಂತ ಮತದಾನಕ್ಕಾಗಿ ಭದ್ರತಾ ಪಡೆಗಳು ಕೈಗೊಂಡಿರುವ ಭದ್ರತಾ ಕ್ರಮಗಳನ್ನು ನೋಡೋಣ..
* 5 ಕೋಟಿ 06 ಲಕ್ಷದ 90 ಸಾವಿರದ 538 – ಒಟ್ಟು ಮತದಾರರು
* 2 ಕೋಟಿ 56 ಲಕ್ಷದ 75 ಸಾವಿರದ 579 – ಪುರುಷ ಮತದಾರರು
* 2 ಕೊಟಿ 50 ಲಕ್ಷದ 09 ಸಾವಿರದ 904 – ಮಹಿಳಾ ಮರದಾರರು
* 15 ಲಕ್ಷದ 42 ಸಾವಿರ – ಮೊದಲ ಬಾರಿಗೆ ಓಟ್ ಮಾಡುತ್ತಿರುವವರು
* 56 ಸಾವಿರದ 696 – ಒಟ್ಟು ಮತಗಟ್ಟೆಗಳು
* 3 ಲಕ್ಷದ 56 ಸಾವಿರದ 552 – ಎಲೆಕ್ಷನ್ ಸಿಬ್ಬಂದಿ
* 76 ಸಾವಿರದ 110 – ವಿವಿಪ್ಯಾಟ್ಗಳು
* 82 ಸಾವಿರದ 157- ಭದ್ರತಾ ಸಿಬ್ಬಂದಿ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಆರಂಭವಾಗಿದೆ. ಒಟ್ಟು 222 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು, ಮೇ 15ಕ್ಕೆ ಮತ ಎಣಿಕೆ ನಡೆಯಲಿದೆ. ಇಂದು ಮಧ್ಯಾಹ್ನದ ಬಳಿಕ ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ಬೆಳಗ್ಗಿನ ಅವಧಿಯಲ್ಲೇ ಬಿರುಸಿನ ಮತದಾನ ನಡೆಯುವ ಸಾಧ್ಯತೆಯಿದೆ.
ರಾಜ್ಯ ವಿಧಾನಸಭೆಯ 224 ಕ್ಷೇತ್ರಗಳ ಪೈಕಿ ಜಯನಗರ, ರಾಜರಾಜೇಶ್ವರಿನಗರ ಹೊರತು ಪಡಿಸಿ 222 ಕ್ಷೇತ್ರಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮೂರು ಪಕ್ಷಗಳ ಮುಖ್ಯಮಂತ್ರಿ ಅಭ್ಯರ್ಥಿಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಎರಡೂವರೆ ಸಾವಿರ ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನ ಮತದಾರರು ನಿರ್ಧರಿಸಲಿದ್ದಾರೆ.
ಜಯನಗರ ಅಭ್ಯರ್ಥಿ ಬಿ.ಎನ್ ವಿಜಯ್ಕುಮಾರ್ ನಿಧನದಿಂದ ಜಯನಗರ ಹಾಗೂ ಮತಚೀಟಿ ಅಕ್ರಮದ ಹಿನ್ನೆಲೆಯಲ್ಲಿ ರಾಜಾರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ರಾಜ್ಯದಲ್ಲಿ ಒಟ್ಟಾರೆ 56,696 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮತದಾನದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಕ್ತ, ನ್ಯಾಯಸಮ್ಮತ, ಶಾಂತಿಯುತವಾಗಿ ನಡೆಸಲು ರಾಜ್ಯ ಪೊಲೀಸ್ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಈಗಾಗಲೇ ಎಲ್ಲಾ ಮತಗಟ್ಟೆಗಳಲ್ಲೂ ಸಿದ್ಧತೆ ಪೂರ್ಣಗೊಂಡಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಶುರವಾಗಲಿದೆ. .
ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ವರುಣನ ಅರ್ಭಟ ಮುಂದುವರೆದಿದ್ದು ನಾಳೆ ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನದ ಒಳಗಡೆ ಮತ ಚಲಾಯಿಸಿದರೆ ಉತ್ತಮ ಎನ್ನುವ ಮಾತು ಕೇಳಿ ಬಂದಿದೆ.
ರಾಜ್ಯಾದ್ಯಂತ ಹಲವೆಡೆ ಗುರುವಾರ ಸಂಜೆಯಿಂದ ಮಳೆಯಾಗಿತ್ತು. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ನಾಳೆಯೂ ಸಹ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ (ಮೋಡಗಳ ಸಾಲು) ನಿರ್ಮಾಣ ವಾಗಿರುವ ಹಿನ್ನಲೆಯಲ್ಲಿ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಸಂಜೆ ವೇಳೆಗೆ ನಗರದ ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಗಾಂಧಿನಗರ, ಮಲ್ಲೇಶ್ವರಂ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಯಶವಂತಪುರ, ರಾಜಾಜಿನಗರ, ವಿಜಯನಗರ ಸೇರಿದಂತೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಿದೆ. ಮೈಸೂರು ರಸ್ತೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳಲು ಆಗಮಿಸಿದ್ದ ಹಲವು ಪ್ರಯಾಣಿಕರು ಪರದಾಟ ನಡೆಸಿದರು. ಆಕಾಲಿಕ ಮಳೆಯಿಂದ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯದ ಸಾರಿಗೆ ಇಲಾಖೆಯ ಹಲವು ಬಸ್ಗಳನ್ನು ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಬಸ್ಗಳ ಕೊರತೆಯೂ ಉಂಟಾಗಿತ್ತು.
ಬೀದರ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಐಟಿ ಶಾಕ್ ನೀಡಿದೆ.
ಅಭ್ಯರ್ಥಿ ಅಶೋಕ್ ಖೇಣಿಯ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹ ದೂರು ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ರಾಂಪೂರೆ ಕಾಲೋನಿಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಖೇಣಿ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದ್ದಾಗ ಖೇಣಿ ಬೆಂಬಲಿಗರು ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಬೆಂಬಲಿಗರು ಖೇಣಿ ವಿರುದ್ಧ ಸುದ್ದಿ ಮಾಡುತ್ತೀರಿ ಎಂದು ಅವಾಜ್ ಹಾಕಿ ದರ್ಪ ತೋರಿಸಿದ್ದಾರೆ.