Tag: Karnataka Election 2018

  • ಹೇಗೆ ಬದಲಾವಣೆ, ಯಾರಿಂದ ಬದಲಾವಣೆ, ಯಾಕೆ ಬದಲಾವಣೆ? ಅಂತಾ ಬೆಂಗ್ಳೂರು ಜನರನ್ನು ಪ್ರಶ್ನಿಸಿದ ಜಗ್ಗೇಶ್

    ಹೇಗೆ ಬದಲಾವಣೆ, ಯಾರಿಂದ ಬದಲಾವಣೆ, ಯಾಕೆ ಬದಲಾವಣೆ? ಅಂತಾ ಬೆಂಗ್ಳೂರು ಜನರನ್ನು ಪ್ರಶ್ನಿಸಿದ ಜಗ್ಗೇಶ್

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರ ಪ್ರಚಾರ, ಮತದಾನ ಎಲ್ಲವೂ ಮುಗಿದಿದೆ. ಇನ್ನೇನು ಚುನಾವಣಾ ಫಲಿತಾಂಶಕ್ಕಾಗಿ ಎಲ್ಲ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದ್ರೆ ಈ ಬಾರಿ ಚುನಾವಣೆಯಲ್ಲಿ ಬೆಂಗಳೂರು ನಗರದಲ್ಲಿಯೇ ಅತಿ ಕಡಿಮೆ ಮತದಾನವಾಗಿದ್ದಕ್ಕೆ ನಟ, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಜಗ್ಗೇಶ್ ಟ್ವಿಟ್ಟರ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

    ‘ಏನ್ ವೋಟ್ ಹಾಕಿದ್ದಾರೆ ಸಿಟಿ ಜನಗಳೇ, ಶಹಬಾಷ್ ಜೈ ಬೆಂಗಳೂರಿನ ವಾಸಿಗಳೆ!, ಏನು ಬದ್ಧತೆ, ಏನು ಪ್ರೇಮ, ಏನು ಸ್ವಾಭಿಮಾನ? ಅಂತರಾಷ್ಟ್ರದ ಗುಣಮಟ್ಟ ಬೇಕು ಅಂತಾ ಕೇಳ್ತಿರಿ. ಟಿವಿ ಕಂಡರೆ ಸಾಕು ಏನು ವಾದ ಮಂಡನೆ.. ಮೆಚ್ಚಬೇಕು. ಹಳ್ಳಿಯಲ್ಲಿ ದುಡ್ಡಿಗೆ ವೋಟ್. ಸಿಟಿಯಲ್ಲಿ ಬೂತ್ ಕಡೆನೂ ತಿರುಗಿ ಸಹ ನೋಡಲ್ಲ. ಹೇಗೆ ಬದಲಾವಣೆ.. ಯಾರಿಂದ ಬದಲಾವಣೆ…ಯಾಕೆ ಬದಲಾವಣೆ…. ನಗೆ ಬರುತ್ತಿದೆ ಅಂತಾ ಬರೆದುಕೊಂಡು ಬೆಂಗಳೂರು ಕೇತ್ರಗಳಲ್ಲಿ ಮತದಾನದ ಶೇಕಡಾವಾರು ಮಾಹಿತಿಯುಳ್ಳ ಫೋಟೋ ಹಾಕಿಕೊಂಡು ಟ್ವೀಟ್ ಮಾಡಿದ್ದಾರೆ.

    ರಾಮನಗರದಲ್ಲಿ ಅತೀ ಹೆಚ್ಚು ಶೇ.84 ಮತದಾನವಾದರೆ ಬೆಂಗಳೂರಿನಲ್ಲೇ ಅತೀ ಕಡಿಮೆ ಶೇ.50 ಮತದಾನವಾಗಿದೆ. ಗ್ರಾಮೀಣ ಭಾಗಗಳಷ್ಟು ಮತದಾನವು ಬೆಂಗಳೂರು ನಗರದಲ್ಲಿ ಆಗಿಲ್ಲ. ಬೆಂಗಳೂರಿನಲ್ಲಿ ಕೇವಲ 50 ಪರ್ಸೆಂಟ್ ಮತದಾನವಾಗಿದೆ. ಐಟಿ-ಬಿಟಿಗಳಿಗೆ ಶನಿವಾರ, ಭಾನುವಾರ ರಜಾ ಹಿನ್ನೆಲೆ ಬೆಂಗಳೂರಿಗರು ಮತ ಹಾಕಲು ಮನಸು ಮಾಡಿಲ್ಲ. 2 ದಿನ ರಜಾ ಹಿನ್ನೆಲೆ ಎಲ್ಲರೂ ಟ್ರಿಪ್ ಅಂತಾ ತೆರಳಿದ್ರು. ಚುನಾವಣಾ ಆಯೋಗ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಮತದಾನ ಪ್ರಮಾಣ 50ಕ್ಕಿಂತ ಹೆಚ್ಚು ದಾಟದಿರುವುದು ವಿಷಾದನೀಯ.

  • ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿ- 8 ಜನರಿಗೆ ಗಾಯ, 3 ಜನರಿಗೆ ಗಂಭೀರ ಗಾಯ!

    ಗದಗ: ಮತದಾನ ಹಾಕಲು ಪ್ರಯಾಣಿಸುತ್ತಿದ್ದ ಟಂ ಟಂ ಪಲ್ಟಿಯಾಗಿ 8 ಜನರಿಗೆ ಗಾಯ, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯ ನರಗುಂದ ಹೊರವಲಯದಲ್ಲಿ ಈ ಅಪಘಾತ ನಡೆದಿದೆ.

    ಮತದಾರರು ಬೆಳಗಾವಿಯಿಂದ ನರಗುಂದ ಮಾರ್ಗವಾಗಿ ಕೊಂಗವಾಡ ಗ್ರಾಮಕ್ಕೆ ಹೊರಟ್ಟಿದ್ದರು. ಈ ವೇಳೆ ಟಂಟಂ ವಾಹನ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಅಪಘಾತದಲ್ಲಿ 5 ಜನ ಮಹಿಳೆಯರು, 3 ಜನ ಪುರುಷರು ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ನರಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು, 3 ಜನ ಗಂಭೀರ ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

  • ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ತಾಯಿಯ ಸಾವಿನ ದುಃಖದಲ್ಲಿಯೂ ಮತ ಚಲಾಯಿಸಿದ ಮಗ!

    ಯಾದಗಿರಿ: ಮನೆಯಲ್ಲಿ ತಾಯಿ ಮೃತಪಟ್ಟರು ಮಗ ಹಾಗೂ ಮೊಮ್ಮಗ ಮತದಾನ ಚಲಾಯಿಸಿರುವ ಘಟನೆ ಶಹಾಪುರ ವಿಧಾನಸಭೆ ಕ್ಷೇತ್ರದ ನಗನೂರ ಗ್ರಾಮದಲ್ಲಿ ನಡೆದಿದೆ.

    ಸೋಮಣ್ಣ ಎಂಬವರ ತಾಯಿ ಗುರುಸಿದ್ದವ್ವ ಇಂದು ಬೆಳಗಿನ ಜಾವ ಸಾವನಪ್ಪಿದ್ರು. ಮನೆಯಲ್ಲಿ ತಾಯಿಯ ಮೃತದೇಹ ಇಟ್ಟು ಮತದಾನ ಹಕ್ಕು ಚಲಾಯಸಬೇಕು ಎಂದು ಸೋಮಣ್ಣ ಹಾಗೂ ಮಗ ಶರಣು ತಮ್ಮ ವೋಟ್ ಮಾಡಿದ್ದಾರೆ.

    ನಗನೂರನ 123 ಸಂಖ್ಯೆಯ ಮತಗಟ್ಟೆಗೆ ಬಂದು ಮಗ ಮತ್ತು ಮೊಮ್ಮಗ ಮತವನ್ನು ಚಲಾಯಿಸಿದ್ದಾರೆ. ಮತ ಚಲಾಯಿಸಿದ ನಂತರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.

  • ಚುನಾವಣೋತ್ತರ ಸಮೀಕ್ಷೆ: ಎರಡರಲ್ಲಿ ಕಾಂಗ್ರೆಸ್, ಎರಡಲ್ಲಿ ಬಿಜೆಪಿಗೆ ಮುನ್ನಡೆ

    ಚುನಾವಣೋತ್ತರ ಸಮೀಕ್ಷೆ: ಎರಡರಲ್ಲಿ ಕಾಂಗ್ರೆಸ್, ಎರಡಲ್ಲಿ ಬಿಜೆಪಿಗೆ ಮುನ್ನಡೆ

    ಬೆಂಗಳೂರು: 222 ಕ್ಷೇತ್ರಗಳ ಮತದಾನದ ಮುಗಿದಿದ್ದು, ಚುನಾವಣೋತ್ತರ ಸಮೀಕ್ಷೆಯೆ ಪ್ರಕಟವಾಗಿದೆ. ಎರಡು ಸಮೀಕ್ಷೆಗಳಲ್ಲಿ ಆಡಳಿತರೂಢ ಕಾಂಗ್ರೆಸ್‍ಗೆ ಮುನ್ನಡೆ ಸಿಕ್ಕರೆ, ಎರಡು ಸಮೀಕ್ಷೆಯಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

    ಇಂಡಿಯಾ ಟುಡೇ ಆಕ್ಸಿಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 106-118, ಬಿಜೆಪಿ 89-112, ಜೆಡಿಎಸ್ 22 -30 ಸ್ಥಾನಗಳು ಸಿಕ್ಕಿವೆ. ಟೈಮ್ಸ್ ನೌ ಸಮೀಕ್ಷೆಯ ಪ್ರಕಾರ ಬಿಜೆಪಿ 80-93, ಕಾಂಗ್ರೆಸ್ 90-103, ಜೆಡಿಎಸ್ 31-39, ಇತರೆ 2-4 ಸ್ಥಾನಗಳು ಸಿಗಲಿದೆ ಎಂದು ಹೇಳಿದೆ.

    ರಿಪಬ್ಲಿಕ್ ಟಿವಿ ಜನ್ ಕಿ ಬಾತ್ ಪ್ರಕಾರ ಕಾಂಗ್ರೆಸ್ 73 -82, ಬಿಜೆಪಿ 95-114, ಜೆಡಿಎಸ್ 32-43, ಇತರೆ 02-03 ಸ್ಥಾನ ಸಿಗಲಿದೆ ಎಂದು ತಿಳಿಸಿದೆ. ನ್ಯೂಸ್ ಎಕ್ಸ್ ಪ್ರಕಾರ ಕಾಂಗ್ರೆಸ್ 72-79, ಬಿಜೆಪಿ 102-110, ಜೆಡಿಎಸ್ 35-39, ಇತರೇ 3-4 ಸ್ಥಾನ ಸಿಗಲಿದೆ. ಆಕ್ಸಿಸ್ ಇಂಡಿಯಾ ಪ್ರಕಾರ ಕಾಂಗ್ರೆಸ್ 111, ಬಿಜೆಪಿ 85, ಜೆಡಿಎಸ್ 26 ಸ್ಥಾನ ಸಿಗಲಿದೆ.

     

  • ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಬೆಂಗಳೂರಿನಿಂದ ಮೈಸೂರಿಗೆ ತೆರಳಿದ್ರೂ ಚಿಕ್ಕಣ್ಣ ವೋಟ್ ಹಾಕಿಲ್ಲ!

    ಮೈಸೂರು: ಮತದಾನದ ಹಕ್ಕಿನಿಂದ ಹಾಸ್ಯನಟ ಚಿಕ್ಕಣ್ಣ ವಂಚಿತರಾಗಿದ್ದಾರೆ.

    ಚಿಕ್ಕಣ್ಣ ಮೈಸೂರಿನ ಬಲ್ಲಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತದಾರರಾಗಿದ್ದರು. ಅಲ್ಲದೇ ಹುಟ್ಟೂರಿನಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡಿದ್ದರು. ಮತದಾನಕ್ಕಾಗಿ ಬೆಂಗಳೂರಿನಿಂದ ಮೈಸೂರಿಗೂ ಕೂಡ ಆಗಮಿಸಿದ್ದರು.

    ಚಿಕ್ಕಣ್ಣ ಇಂದು ಮತಗಟ್ಟೆಗೆ ಭೇಟಿ ನೀಡಿದಾಗ ತನ್ನ ಹೆಸರಿನ ಮೇಲೆ ಡಿಲೀಟ್ ಎಂದು ಉಲ್ಲೇಖಿಸಿದ್ದಾರೆ. ವಾಸವಿಲ್ಲದ ಕಾರಣ ಡಿಲೀಟ್ ಆಗಿದೆ ಎಂದು ಮತಗಟ್ಟೆ ಸಿಬ್ಬಂದಿಗಳು ಸಬೂಬು ಹೇಳಿದ್ದಾರೆ. ಅಲ್ಲದೇ ಗ್ರಾಮದ ಹಲವರ ಹೆಸರನ್ನು ಡಿಲೀಟ್ ಮಾಡಿರುವ ಬಗ್ಗೆ ಆರೋಪಿಸಿದ್ದಾರೆ.

    ಕೊನೆಗೂ ಚಿಕ್ಕಣ ತಮ್ಮ ಮತದಾನ ಮಾಡದೆ ವಾಪಸ್ ಆಗಿದ್ದಾರೆ. ಚಿಕ್ಕಣ್ಣ ಮತದಾನಕ್ಕಾಗಿಯೇ ಬೆಂಗಳೂರಿನಿಂದ ಮೈಸೂರಿಗೆ ಬಂದಿದ್ದರು ಆದರೆ ಈಗ ಬೇಸರದಿಂದ ವಾಪಸ್ ಆಗಿದ್ದಾರೆ.

  • ಮತ ಚಲಾಯಿಸಿ ಹಾಡು ಹಾಡಿದ ಚಂದನ್ ಶೆಟ್ಟಿ!

    ಮತ ಚಲಾಯಿಸಿ ಹಾಡು ಹಾಡಿದ ಚಂದನ್ ಶೆಟ್ಟಿ!

    ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ರ‍್ಯಾಪರ್ ಹಾಗೂ ಬಿಗ್ ಬಾಸ್-5ರ ವಿಜೇತ ಚಂದನ್ ಶೆಟ್ಟಿ ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದ ಜೊತೆ ಬಂದು ಮತ ಚಲಾಯಿಸಿದ್ದಾರೆ.

    ಚಂದನ್ ಶೆಟ್ಟಿ ಮತ ಚಲಾಯಿಸಿ ಬಂದ ಕೂಡಲೇ ಅವರನ್ನು ಪುಟ್ಟ ಮಕ್ಕಳು ಆಗಮಿಸಿದ್ದರು. ಮಕ್ಕಳು ಚಂದನ್ ಶೆಟ್ಟಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ನಂತರ ಚಂದನ್ ಶೆಟ್ಟಿ ಮಕ್ಕಳ ಮೂಲಕ ಮತ ಚಲಾಯಿಸಿ ಎಂಬ ಜಾಗೃತಿ ಮೂಡಿಸಿದರು.

    ಮತದಾನ ನಮ್ಮೆಲ್ಲರ ಹಕ್ಕು. ನಾವು ಪ್ರಜೆ ಎಂದು ಪ್ರೂವ್ ಮಾಡಿಕೊಳ್ಳಲು ಒಳ್ಳೆಯ ದಿನ. ನಾವು ಪ್ರಜೆಯಾಗಿದ್ದಕ್ಕೂ ಸಾರ್ಥಕವಾಗೋ ದಿನ. ನೀವು ಕೂಡ ಮತಚಲಾಯಿಸಿ ನಿಮ್ಮ ಹಕ್ಕನ್ನು ಉಳಿಸಿಕೊಳ್ಳಿ ಎಂದು ಚಂದನ್ ಶೆಟ್ಟಿ ಹೇಳಿದರು.

    ಚಂದನ್ ಶೆಟ್ಟಿ ಕೊನೆಯಲ್ಲಿ ತಮ್ಮ ರ‍್ಯಾಪ್ ಸಾಂಗ್ ಮೂಲಕ ಎಲ್ಲರಿಗೂ ಮತದಾನದ ಜಾಗೃತಿ ಮೂಡಿಸಿದ್ದಾರೆ. “ವೋಟ್ ಮಾಡಬೇಕು ನಾವು ವೋಟ್ ಮಾಡಬೇಕು” ಎಂದು ಸಾಂಗ್ ಹೇಳುವ ಮೂಲಕ ಚಂದನ್ ಮತದಾನದ ಜಾಗೃತಿ ಮೂಡಿಸಿದರು.

  • ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ವಧು!

    ಕೊಡಗು: ರಾಜ್ಯಾದ್ಯಂತ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಮಡಕೇರಿಯಲ್ಲಿ ಮದುವೆಗೂ ಮುನ್ನ ಮದುಮಗಳು ತಮ್ಮ ಮತವನ್ನು ಚಲಾಯಿಸಿದ್ದಾರೆ.

    ಸ್ಮಿತಾ ಮಡಿಕೇರಿ ತಾಲೂಕಿನ ಕಾಂಡನಕೊಲ್ಲಿ ಮತಗಟ್ಟಿ ಸಂಖ್ಯೆ 131 ಯಲ್ಲಿ ತಮ್ಮ ಮತ ಚಲಾಯಿಸಿದ್ದಾರೆ. ಮದುಮಗಳಂತೆ ಅಲಂಕರಿಸಿ ಮತಗಟ್ಟೆಗೆ ಆಗಮಿಸಿದ ಸ್ಮಿತಾ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

    ಸ್ಮಿತಾ ಇಂದು ಗೌಡ ಸಮಾಜದಲ್ಲಿ ಮದುವೆ ಆಗುತ್ತಿದ್ದು, ಮಡಿಕೇರಿಯ ಮೂವತೊಕ್ಕಲಿನ ಬಿಎಂಟಿಸಿ ಸಿಬ್ಬಂದಿ ಆದ ಪ್ರವೀಣ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

    ಮಂಗಳೂರಿನಲ್ಲೂ ಕೂಡ ವಧುವೊಬ್ಬರು ತಮ್ಮ ಮತ ಚಲಾಯಿಸಿದ್ದಾರೆ. ನಗರದ ಬೋಂದೆಲ್ ಸೇಂಟ್ ಲಾರೆನ್ಸ್ ಮೀಡಿಯಂ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದು, ಪಚ್ಚನಾಡಿಯ ಮದುಮಗಳು ವಿಯೋಲಾ ಮಾರಿಯಾ ಫೆರ್ನಾಂಡೀಸ್ ಮತದಾನ ಮಾಡಿದ್ದಾರೆ.

    7 ಗಂಟೆಗೆ ಮತದಾನ ಮಾಡಿ ಬಳಿಕ ಬೆಳ್ತಂಗಡಿಯಲ್ಲಿ ನಡೆಯೋ ಮದುವೆಗೆ ಮದುಮಗಳು ತೆರಳಿದ್ದಾರೆ. ಬೆಳ್ತಂಗಡಿಯ ವರ ಸಿಲ್ವೆಸ್ಟರ್ ರೋಡ್ರಿಗಸ್ ಜೊತೆ ಮಾರಿಯಾ ಮದುವೆ ನಡೆಯಲಿದೆ. ಒಟ್ಟಿನಲ್ಲಿ ವಿಯೋಲಾ ಹಾಗೂ ಸ್ಮಿತಾ ಅವರು ಮದುವೆಗೂ ಮುನ್ನ ಮತದಾನ ಮಾಡಿ ಮಾದರಿಯಾಗಿದ್ದಾರೆ.

  • ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!

    ಮತದಾನಕ್ಕೆ ಅವಕಾಶ ನೀಡದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತ ತುಂಬು ಗರ್ಭಿಣಿ!

    ಬೆಂಗಳೂರು: ಮತದಾನಕ್ಕೆ ಅವಕಾಶ ನೀಡದ್ದಕ್ಕೆ ತುಂಬು ಗರ್ಭಿಣಿಯೊಬ್ಬರು ಬಿಕ್ಕಿ ಬಿಕ್ಕಿ ಅತ್ತ ಘಟನೆ ಬನಶಂಕರಿಯ ಬಿಎನ್ ಎಂ ಕಾಲೇಜಿನ 142 ರ ಮತಗಟ್ಟೆಯಲ್ಲಿ ನಡೆದಿದೆ.

    ಬನಶಂಕರಿಯ ಎರಡನೇ ಹಂತದಲ್ಲಿ ವಾಸವಾಗಿರುವ ಚೈತ್ರ ಅವರು ಇಂದು ಬೆಳಗ್ಗೆ ಮತದಾನಕ್ಕೆ ಆಗಮಿಸಿದ್ದರು. ಈ ವೇಳೆ ಇವರ ವೋಟರ್ ಐಡಿ ಫೋಟೊ ಕಾಪಿ ಮಾನ್ಯ ಮಾಡುತ್ತಿಲ್ಲ ಅಂತ ಸಿಬ್ಬಂದಿ ತಿಳಿಸಿದ್ದಾರೆ.

    ಚೈತ್ರ ಧಾರವಾಡ ಮೂಲದವರಾಗಿದ್ದು, ವೋಟರ್ ಐಡಿ ಜೆರಾಕ್ಸ್ ಬಿಟ್ಟು ಬೇರೆ ಯಾವುದೇ ದಾಖಲೆ ಇರಲಿಲ್ಲ ಎಂದು ಹೇಳಲಾಗಿದೆ. ಕೊನೆಗೆ ಪತ್ರಕರ್ತರೊಬ್ಬರ ಮಧ್ಯಪ್ರವೇಶದಿಂದ ಮತದಾನಕ್ಕೆ ಅವಕಾಶ ಪಡೆದು ಚೈತ್ರ ಸಂತಸಗೊಂಡಿದ್ದಾರೆ.

  • ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ನೈಸ್ ಅಶೋಕ್ ಖೇಣಿಗೆ ಐಟಿ ಶಾಕ್

    ಬೀದರ್: ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಹಾಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿಗೆ ಐಟಿ ಶಾಕ್ ನೀಡಿದೆ.

    ಅಭ್ಯರ್ಥಿ ಅಶೋಕ್ ಖೇಣಿಯ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹ ದೂರು ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೀದರ್ ರಾಂಪೂರೆ ಕಾಲೋನಿಯಲ್ಲಿರುವ ನಿವಾಸದಲ್ಲಿ ಅಧಿಕಾರಿಗಳು ದಾಖಲೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

    ಖೇಣಿ ನಿವಾಸದ ಮೇಲೆ ಐಟಿ ದಾಳಿ ನಡೆಯುತ್ತಿದ್ದಾಗ ಖೇಣಿ ಬೆಂಬಲಿಗರು ಮಾಧ್ಯಮಗಳ ಮೇಲೆ ದರ್ಪ ತೋರಿದ್ದಾರೆ. ಬೆಂಬಲಿಗರು ಖೇಣಿ ವಿರುದ್ಧ ಸುದ್ದಿ ಮಾಡುತ್ತೀರಿ ಎಂದು ಅವಾಜ್ ಹಾಕಿ ದರ್ಪ ತೋರಿಸಿದ್ದಾರೆ.

     

  • ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

    ನನ್ನ ವಿರುದ್ಧ ಮುನಿರಾಜು, ಕೈ ಮಹಿಳಾ ಕಾರ್ಪೋರೇಟರ್ ಷಡ್ಯಂತ್ರ: ಮುನಿರತ್ನ

    ಬೆಂಗಳೂರು: ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಕೈ ಪಾಲಿಕೆ ಸದಸ್ಯೆ ಮತ್ತು ಬಿಜೆಪಿಯವರು ಷಡ್ಯಂತ್ರ ನಡೆಸಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಶಾಸಕ ಮುನಿರತ್ನ ಆರೋಪ ಮಾಡಿದ್ದಾರೆ.

    ವೋಟರ್ ಐಡಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಯನ್ನು ತೇಜೋವಧೆ ಮಾಡಲು ಈ ರೀತಿಯ ದಾರಿ ಹಿಡಿಯಬಾರದು ಎಂದು ಹೇಳಿದರು.

    ಸುದ್ದಿಗೋಷ್ಠಿಯ ಆರಂಭದಲ್ಲಿ ಆರ್ ಆರ್ ನಗರ ಕಾಂಗ್ರೆಸ್ ಕಾರ್ಪೊರೇಟರ್ ಆಶಾ ಸುರೇಶ್ ಪಕ್ಷದ ವಿರುದ್ಧವೇ ಪ್ರಚಾರ ಮಾಡಿದ್ದಾರೆ ಎಂದು ಹೇಳಿ ಅವರು ಪ್ರಚಾರ ನಡೆಸಿದ ವಿಡಿಯೋವನ್ನು ಬಿಡುಗಡೆ ಮಾಡಿದರು.

    ನಾವು ಮೌನವಾಗಿದ್ದೇವೆ. ಆದರೆ ಇದು ಮಿತಿಮೀರಿದೆ. ಬಿಜೆಪಿ ತುಳಸಿ ಮುನಿರಾಜ್ ನಾವು ನೀವು ಅಂದುಕೊಂಡ ವ್ಯಕ್ತಿಯಲ್ಲ. ಲೋಕಸಭೆ ಮತ್ತು ಬಿಬಿಎಂಪಿ ಚುನಾವಣೆಯಲ್ಲಿ ಸೋತಿದ್ದಾರೆ. ಆದರೆ ಈ ಬಾರಿ ಹಠಕ್ಕೆ ಬಿದ್ದು ಗೆಲ್ಲಲು ಹೊರಟಿದ್ದಾರೆ. ಅವರು ಏನೇನು ಮಾಡಿದ್ದಾರೆ ಎನ್ನುವುದಕ್ಕೆ ಎಲ್ಲ ದಾಖಲೆ ಇದೆ. ಅವರ ಮೇಲೆ ಎಷ್ಟು ಕ್ರಿಮಿನಲ್ ಕೇಸ್ ಇದೆ ಎನ್ನುವುದು ಗೊತ್ತು. ಅವರ ಹಿನ್ನೆಲೆ ನನಗೆ ಗೊತ್ತಿದೆ. ಬಳ್ಳಾರಿ ಗಣಿಯನ್ನು ಬೆಂಗಳೂರಿನಲ್ಲಿ ಇಟ್ಟುಕೊಂಡಿದ್ದು ಮುನಿರಾಜು ಅವರು ಎಂದು ಆರೋಪಿಸಿದರು.

    ವೋಟರ್ ಐಡಿಗಳನ್ನು ಕಾಂಗ್ರೆಸ್‍ನವರು ತಂದಿಟ್ಟಿದ್ದಾರೆ ಎಂದು ಯಾವ ಆಧಾರದಲ್ಲಿ ಆರೋಪ ಮಾಡುತ್ತಾರೆ? ವೋಟರ್ ಐಡಿ ಸ್ಲಂ ಜನರಿಗೆ ಸಂಬಂಧಿಸಿದ್ದು. ಅದು ಕಾಂಗ್ರೆಸ್ ಭದ್ರಕೋಟೆ ಸ್ಲಂ. 9 ಸಾವಿರ ವೋಟರ್ ಐಡಿಯಲ್ಲಿ ಸುಮಾರು ಐದು ಸಾವಿರ ಮುಸ್ಲಿಂ ಹಾಗೂ ಎರಡು ಸಾವಿರದಷ್ಟು ದಲಿತರು ಇದ್ದಾರೆ. ಎಸ್.ರಮೇಶ್ ಕಾಲದಿಂದಲೂ ಇವರು ನಮ್ಮ ಪರವಾಗಿಯೇ ಇದ್ದಾರೆ. ಹೀಗಿರುವಾಗ ನಾನು ಯಾಕೆ ವೋಟರ್ ಐಡಿಗಳನ್ನು ಸಂಗ್ರಹಿಸಲಿ ಎಂದು ಪ್ರಶ್ನಿಸಿದರು.

    ವೋಟರ್ ಐಡಿಯಿಂದ ಚುನಾವಣೆ ಮುಂದೂಡಿದರೆ ಇದೊಂದು ಐತಿಹಾಸಿಕ ವಾಗಲಿದೆ. ಮುಂದೆ ಯಾರಾದರೂ ಆಗದಿರುವವರ ಮನೆಗಳಲ್ಲಿ ವೋಟರ್ ಐಡಿ ಇಟ್ಟು ಚುನಾವಣೆ ಮುಂದೂಡಬಹುದು. 500 ಟೀಶರ್ಟ್ ನೀಡಲು ನಾನು ಅನುಮತಿ ಪಡೆದಿದ್ದೇನೆ. ಐದು ಸಾವಿರ ಟೀಶರ್ಟ್ ಗಳನ್ನು ಮುನಿರಾಜು ಕಡೆಯವರು ಸೀಜ್ ಮಾಡುತ್ತಾರೆ. ಆಮೇಲೆ ಪೊಲೀಸರು ಬರುತ್ತಾರೆ. ಪ್ರತಿ ಸಲನೂ ಅದ್ ಹೇಗೆ ಅವರ ಕೈಗೆ ಸಿಗುತ್ತೆ? ಎಫ್ ಬಿ ಲೈವ್ ಮಾಡ್ತಾರೆ. ಕೆಲವೊಮ್ಮೆ ಸದಾಶಿವನಗರದಲ್ಲಿ ಕೆಲವು ವಸ್ತುಗಳನ್ನು ಹಿಡಿದು ನನ್ನ ಹೆಸರನ್ನು ಹೇಳಿದ್ದಾರೆ. ಆ ಕ್ಷೇತ್ರದಲ್ಲಿ ನಾನು ಯಾಕೆ ಟೀ ಶರ್ಟ್ ಹಂಚಲಿ ಇದೆಲ್ಲವೂ ತುಳಸಿ ಮುನೀರಾಜ್ ಕೃತ್ಯ ಎಂದು ಆರೋಪಿಸಿದರು.

    ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಅವರ ಬಗ್ಗೆ ನಾನು ಏನು ಮಾತಾನಾಡಲ್ಲ. ಅವರ ಹತ್ತಿರ ಗನ್ ಬೇರೆ ಇದೆ. ನನಗೆ ಯಾಕೆ ಅವರ ವಿಚಾರ ಎಂದು ಮುನಿರತ್ನ ವ್ಯಂಗ್ಯವಾಡಿದರು.

    ಮೇ 16 ರಂದು ನನ್ನ ವಿರುದ್ಧ ತೇಜೋವಧೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಕೇಸ್ ಹಾಕುತ್ತೆನೆ. ನನ್ನ ಬಗ್ಗೆ ಕೆಟ್ಟ ಪದಗಳನ್ನು ಆಡಿದ ಆಶಾ ಸುರೇಶ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ತಿಳಿಸಿದರು.

    ನಾನು ಎಂಟು ವರ್ಷದಿಂದ ಮಕ್ಕಳ ಶಾಲೆ ಫೀಸ್ ಕಟ್ಟುತ್ತಿದ್ದೇನೆ. ಕುಕ್ಕರ್ ನೀಡುತ್ತೇನೆ. ವೈದ್ಯಕೀಯ ಸಹಾಯ ನೀಡುತ್ತೇನೆ. ಆದರೆ ನೀತಿ ಸಂಹಿತೆ ಜಾರಿಯಾದ ಮೇಲೆ ಅದನ್ನೆಲ್ಲ ಮಾಡಿಲ್ಲ. ಪಬ್ಲಿಕ್ ಸರ್ವೆಂಟ್ ಆಗಿ ಇದನ್ನೆಲ್ಲ ಮಾಡಲೇ ಬೇಕು. ಎಲ್ಲಾ ಕಡೆ ಮತದಾರರಿಗೆ ಉಡುಗೊರೆ ಕೊಡ್ತಾರೆ. ಮಲ್ಲೇಶ್ವರಂ ಬಿಜೆಪಿ ಶಾಸಕ ಅಶ್ವಥ್ ನಾರಾಯಣ್ ಕೂಡ ಹಂಚಿದ್ದಾರೆ ಎಂದು ಆರೋಪಿಸಿದರು.