Tag: Karnataka Election 2018

  • ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಮೊಳಕಾಲ್ಮೂರು ಶಾಸಕ ಎಸ್ ತಿಪ್ಪೇಸ್ವಾಮಿಯಿಂದ ಹೊಸ ಬಾಂಬ್!

    ಚಿತ್ರದುರ್ಗ: ಬಿಜೆಪಿ ಟಿಕೆಟ್ ಕೈ ತಪ್ಪಿದ್ದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಹಾಲಿ ಶಾಸಕ ಎಸ್.ತಿಪ್ಪೇಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

    ಎರಡು ದಿನಗಳ ಹಿಂದೆ ಬಿಜೆಪಿ ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇಂದು ಮೊಳಕಾಲ್ಮೂರಿನಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಶಾಸಕ ತಿಪ್ಪೇಸ್ವಾಮಿ, ಈ ಹಿಂದೆ ಪರಿವರ್ತನಾ ಯಾತ್ರೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ನನ್ನ ಬಳಿ ಹಣ ಕೇಳಿದ್ದಕ್ಕೆ, 25 ಲಕ್ಷ ರೂ. ನೀಡಿದ್ದೆ. ಮೋದಿ, ಅಮಿತ್ ಶಾ ಸಮಾವೇಶಗಳಿಗಾಗಿ ಇಲ್ಲಿಂದ ನನ್ನ ಖರ್ಚಿನಲ್ಲಿ ಬಸ್‍ಗಳನ್ನು ಕಳುಹಿಸಲಾಗಿತ್ತು. ಬಿಜೆಪಿ ನಾಯಕರೆಲ್ಲಾ ಪಕ್ಷ ಸಂಘಟನೆಗಾಗಿ ನನ್ನಿಂದ 4-5 ಕೋಟಿ ರೂ. ಖರ್ಚು ಮಾಡಿಸಿದ್ದಾರೆ ಅಂತಾ ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.

    ನನ್ನಿಂದ ಹಣ ಪಡೆದುಕೊಂಡ ಬಳಿಕ ಕೊನೆ ಗಳಿಗೆಯಲ್ಲಿ ನನಗೆ ಉದ್ದೇಶಪೂರ್ವಕವಾಗಿ ಟಿಕೆಟ್ ತಪ್ಪಿಸಲಾಯಿತು. ದೊಡ್ಡ ಲೀಡರ್ ಎಂದು ಹೇಳಿಕೊಂಡು ಮತ ಕೇಳಲು ಬರುವವರನ್ನು ಎಷ್ಟು ಮನೆಯ ದೀಪ ತೆಗೆದಿದ್ದೀರಿ ಎಂದು ಪ್ರಶ್ನಿಸಿ ಅಂತಾ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ವಾಗ್ದಾಳಿ ನಡೆಸಿದ್ರು.

  • ISI ನೆರವು ಕೋರಲು ಸಿಎಂ, ಜಮೀರ್ ಸೈಲೆಂಟಾಗಿ ಪಾಕಿಸ್ತಾನಕ್ಕೆ ಹೋಗಿದ್ರಾ?- ಇಲ್ಲಿದೆ ಅಸಲಿಯತ್ತು ಮಾಹಿತಿ

    ISI ನೆರವು ಕೋರಲು ಸಿಎಂ, ಜಮೀರ್ ಸೈಲೆಂಟಾಗಿ ಪಾಕಿಸ್ತಾನಕ್ಕೆ ಹೋಗಿದ್ರಾ?- ಇಲ್ಲಿದೆ ಅಸಲಿಯತ್ತು ಮಾಹಿತಿ

    ಬೆಂಗಳೂರು: ಕರ್ನಾಟಕ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ನಾಯಕರುಗಳು ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿರುತ್ತಾರೆ. ಆದ್ರೆ ಈ ಎಲ್ಲದರ ನಡುವೆ ಕಳೆದ ಎರಡ್ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಫೇಕ್ ನ್ಯೂಸ್ ಗಳು ಹರಿದಾಡುತ್ತಿವೆ.

    ಇತ್ತೀಚೆಗೆ ಏಪ್ರಿಲ್ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹಮದ್ ಪಾಕಿಸ್ತಾನಕ್ಕೆ ಸೈಲೆಂಟಾಗಿ ಒನ್ ಡೇ ಟ್ರಿಪ್ ಹೋಗಿದ್ರಂತೆ. ಎಲೆಕ್ಷನ್‍ನಲ್ಲಿ ಕಾಂಗ್ರೆಸ್ ಗೆಲ್ಲಲು ಐಎಸ್‍ಐ ನೆರವು ಕೂಡ ಕೋರಿದ್ರಂತೆ. ಇದಕ್ಕೆ ಪೂರಕವಾಗಿ ಮುಂಬೈನಿಂದ ಕರಾಚಿಗೆ ಹೋಗಿ ಬಂದ್ರಂತೆ. ಈ ವಿಚಾರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಎಸ್‍ಆರ್ ಏವಿಯೇಷನ್‍ನ ನಕಲಿ ಲೆಟರ್ ಕೂಡ ಹರಿಬಿಡಲಾಗಿದೆ. ಕೆಲವರು ಇದನ್ನು ನಿಜ ಅಂತಾ ತಿಳಿದು ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ಕಿಡಿಕಾರಿದುಂಟು.

    ನಕಲಿ ಲೆಟರ್ ಹರಿದಾಡುತ್ತಲೇ ವಿಎಸ್‍ಆರ್ ಏವಿಯೇಷನ್ ಕಂಪೆನಿ ಇದೆಲ್ಲಾ ಫೇಕ್ ಅಂತಾ ಸ್ಪಷ್ಟೀಕರಣ ನೀಡಿದೆ. ಸಿಎಂ ಕಚೇರಿ ಕೂಡ ಇದೆಲ್ಲಾ ಸುಳ್ಳು, ಬಿಜೆಪಿಯ ಅಪಪ್ರಚಾರ ಎಂದು ಕಾಂಗ್ರೆಸ್ ಆರೋಪಿಸಿದೆ.

    https://twitter.com/brijeshkalappa/status/990876107653177345

    ಆ ಫೇಕ್ ಲೆಟರ್  ನಲ್ಲಿ ಏನಿದೆ?
    * ವಿಎಸ್‍ಆರ್ ಏವಿಯೇಷನ್ ಅಕಾಡೆಮಿಯ ನಕಲಿ ಲೆಟರ್ ಹೆಡ್ ಸೃಷ್ಟಿ
    * ಏಪ್ರಿಲ್ 13ರಂದು ಸಂಜೆ 5ಕ್ಕೆ ಮುಂಬೈನಿಂದ ವಿಶೇಷ ವಿಮಾನದಲ್ಲಿ ಕರಾಚಿಗೆ ಸಿಎಂ ಮತ್ತು ಜಮೀರ್
    * ಸಿಎಂ ಮತ್ತು ಜಮೀರ್ ಹೊತ್ತ ವಿಮಾನ ಕರೆಕ್ಟಾಗಿ 6.15ಕ್ಕೆ ಕರಾಚಿಯಲ್ಲಿ ಲ್ಯಾಂಡ್
    * ಏಪ್ರಿಲ್ 13ರ ಸಂಜೆ 7ಕ್ಕೆ ಹೊರಟು ರಾತ್ರಿ 9.10ಕ್ಕೆ ದೆಹಲಿಗೆ ಸಿದ್ದರಾಮಯ್ಯ ಮತ್ತು ಜಮೀರ್ ವಾಪಸ್
    * ದೆಹಲಿಯಿಂದ ರಾತ್ರಿ 11.45ಕ್ಕೆ ಹೊರಟು ಏ.14ರ ನಸುಕಿನಜಾವ 2 ಗಂಟೆಗೆ ಬೆಂಗಳೂರಿಗೆ ವಾಪಸ್
    * ಮುಕ್ಕಾಲು ಗಂಟೆ ಅವಧಿಯಲ್ಲಿ ಐಎಸ್‍ಐ ನಾಯಕರ ಜೊತೆ ಸಿಎಂ ಮತ್ತು ಜಮೀರ್ ಸಭೆ
    * ಹೇಗಾದ್ರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ವಿನ್ ಮಾಡಿಸಿಕೊಡಿ ಅಂತಾ ಐಎಸ್‍ಐಗೆ ಮನವಿ
    * ಕೋಟಿಗಟ್ಟಲೆ ದುಡ್ಡು ಕೊಟ್ಟು, ಎಲೆಕ್ಷನ್‍ನಲ್ಲಿ ಹರಿಸಲು ನಕಲಿ ನೋಟು ತರ್ತಾರಂತೆ ಸಿಎಂ

    ಏಪ್ರಿಲ್ 13ರಂದು ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿದ್ರು. ಏಪ್ರಿಲ್ 14ರ ನಸುಕಿನ ಜಾವ 2 ಗಂಟೆಗೆ ಬೆಂಗಳೂರಿಗೆ ಹಿಂತಿರುಗಿದ್ದರು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

  • ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಎಂಇಎಸ್ ಅಭ್ಯರ್ಥಿಗೆ ಮರಾಠಿಗರಿಂದಲೇ ತರಾಟೆ

    ಬೆಳಗಾವಿ: ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಎಂಇಎಸ್ ಪಕ್ಷದ ಅಭ್ಯರ್ಥಿಗೆ ಮರಾಠಿ ಯುವಕರೇ ಘೇರಾವ್ ಹಾಕಿದ್ದಾರೆ.

    ಎಂಇಎಸ್ ಅಭ್ಯರ್ಥಿ ಬಾಳಾಸಾಹೇಬ ಕಾಕತಕರ ಮತಯಾಚನೆಗಾಗಿ ಬೆಳಗಾವಿ ಪಟ್ಟಣದ ಶಿವಾಜಿ ನಗರಕ್ಕೆ ತೆರಳಿದ್ದರು. ಈ ವೇಳೆ ಬಾಳಾಸಾಹೇಬ ನಗರಕ್ಕೆ ಆಗಮಿಸುತ್ತಿದ್ದಂತೆ ಕೋಪಗೊಂಡ ಕೆಲ ಮರಾಠಿ ಭಾಷಿಕ ಯುವಕರು ಆರಂಭದಲ್ಲೇ ಅವರನ್ನು ತಡೆದಿದ್ದಾರೆ.

     

    ಮರಾಠಿ ಹೆಸರಲ್ಲಿ ವೋಟ್ ಕೇಳ್ತಿರಿ, ಆಮೇಲೆ ನಮ್ಮನ್ನು ನಿರ್ಲಕ್ಷ್ಯ ಮಾಡ್ತೀರಿ. ನಿಮ್ಮಿಂದಾಗಿ ಮರಾಠಾ ಸಮುದಾಯಕ್ಕೆ ಯಾವುದೇ ಕೊಡುಗೆಗಳಿಲ್ಲ. ಇದೂವರೆಗೂ ಎಂಇಎಸ್ ಮರಾಠಿಗರ ಅಭಿವೃದ್ಧಿ ಮಾಡು ವಲ್ಲಿ ವಿಫಲಾಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು.

    ಸಾರ್ವಜನಿಕವಾಗಿ ಮರಾಠಿ ಭಾಷಿಕರಿಂದಲೇ ತರಾಟೆಗೊಳಗಾದ ಬಾಳಾಸಾಹೇಬ ತೀವ್ರ ಮುಜುಗರಕ್ಕೊಳಗಾದ್ರು.

  • ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಅಂಬರೀಶ್ ಅವ್ರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿದ್ದವರೇ ಕಾರಣ: ಕಾಂಗ್ರೆಸ್ ಮುಖಂಡ ಪರೋಕ್ಷ ವಾಗ್ದಾಳಿ

    ಮಂಡ್ಯ: ರೆಬೆಲ್ ಸ್ಟಾರ್ ಅಂಬರೀಶ್ ಅವರು ಚುನಾವಣೆಯಿಂದೆ ಹಿಂದೆ ಸರಿದರೂ ಅವರ ಬಗ್ಗೆ ಜಿಲ್ಲೆಯಲ್ಲಿ ದಿನಕ್ಕೊಂದು ಚರ್ಚೆ ನಡೆಯುತ್ತಿದೆ. ಅಂಬರೀಶ್ ಅವರ ಇಮೇಜ್ ಹಾಳಾಗಲು ಅವರ ಅಕ್ಕಪಕ್ಕದಲ್ಲಿ ಇದ್ದವರೇ ಕಾರಣ. ಅಕ್ಕಪಕ್ಕದಲ್ಲಿದ್ದವರೇ ಅವರನ್ನು ಹಾಳು ಮಾಡಿದ್ರು ಎಂದು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್‍.ಬಿ.ರಾಮು ಪರೋಕ್ಷವಾಗಿ ಅಂಬಿ ಆಪ್ತ ಅಮರಾವತಿ ಚಂದ್ರಶೇಖರ್ ವಿರುದ್ಧ ಹರಿಹಾಯ್ದಿದ್ದಾರೆ.

    ಮಂಡ್ಯದಲ್ಲಿ ಮಾತನಾಡಿದ ಅವರು, ಅಂಬಿ ಉತ್ತಮ ನಟ, ಉತ್ತಮ ವ್ಯಕ್ತಿ. ರಾಜಕಾರಣಕ್ಕೆ ಅವರ ನಡವಳಿಕೆ ಇಷ್ಟವಾಗಲಿಲ್ಲ. ಅವರ ಅಕ್ಕಪಕ್ಕ ಇದ್ದ ಹತ್ತಾರು ಮಂದಿ ಸ್ವಾರ್ಥಕ್ಕಾಗಿ ಅವರನ್ನು ಬಳಸಿಕೊಂಡರು. ಅಂಬಿ ಮೇಲೆ ಜನತೆ ಇಟ್ಟಂತಹ ಪ್ರೀತಿ ವಿಶ್ವಾಸಕ್ಕೆ ತಿಂಗಳಿಗೊಮ್ಮೆಯಾದ್ರೂ ಅವರು ಕಚೇರಿಯಲ್ಲಿ ಕುಳಿತುಕೊಂಡು ಜನಸಾಮಾನ್ಯರ ಕೆಲಸ ಮಾಡಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಅಂಬಿ ಆಪ್ತರ ಮನೆಯಲ್ಲಿ ಕುಳಿತುಕೊಳ್ಳುತ್ತಿದ್ದೇ ತಪ್ಪಾಗಿದೆ ಎಂದು ಹೇಳಿದ್ದಾರೆ.

    ಅಂಬರೀಶ್ ಜೊತೆಯಲ್ಲಿ ಇದ್ದಂತವರಾದ್ರೂ ವ್ಯವಸ್ಥಿತವಾಗಿ ಕೆಲಸ ಮಾಡಿಸಿದ್ದರೆ ಅವರ ಇಮೇಜ್ ಇಷ್ಟು ಹಾಳಾಗುತ್ತಿರಲಿಲ್ಲ. ಅಂಬರೀಶ್ ಅವರು ಕೆಲವರಿಗೆ ಮಾತ್ರ ಸೀಮಿತವಾದರು. ಪಕ್ಕದಲ್ಲಿ ಇದ್ದವರು ಮರ ಬೆಳೆದರೆ ಅದರ ನೆರಳಲ್ಲಿ ಹಲವರು ಇರಬಹುದು ಎಂದು ಯೋಚಿಸಬಹುದಿತ್ತು. ಆದರೆ ಮರವನ್ನು ಪೋಷಿಸುವ ಕೆಲಸ ಪಕ್ಕದಲ್ಲಿದ್ದವರು ಮಾಡಲಿಲ್ಲ ಎಂದ್ರು.

    ಅಂಬರೀಶ್ ಅವರು ಕಿವಿ ಮಾತನ್ನು ಹೆಚ್ಚು ಕೇಳುತ್ತಿದ್ದರು. ಕಬ್ಬಿಣ ಯಾವುದು ಚಿನ್ನ ಯಾವುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಅವರಲ್ಲಿ ಉದಾರತನವಿತ್ತು ಅದನ್ನು ಜೊತೆಯಲ್ಲಿದ್ದವರು ದುರ್ಬಳಕೆ ಮಾಡಿಕೊಂಡು. ಇದು ತುಂಬಾ ನೋವಾಗುತ್ತೆ ಎಂದು ಅಮರಾವತಿ ಚಂದ್ರಶೇಖರ್ ವಿರುದ್ಧ ಮಾಜಿ ಶಾಸಕ ರಾಮು ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

    ಆದ್ರೆ ರಾಮು ಆರೋಪಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಅಮರಾವತಿ ಚಂದ್ರಶೇಖರ್, ನಾನು ಈ ಬಗ್ಗೆ ನೋಡು ಇಲ್ಲ. ಕೇಳು ಇಲ್ಲ. ಇದರ ಬಗ್ಗೆ ನಾನೇನು ಮಾತನಾಡಲ್ಲ ಎಂದಿದ್ದಾರೆ.

  • ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್

    ವಿಜಯಪುರ: ರಾಷ್ಟ್ರೀಕೃತ ಬ್ಯಾಂಕ್‍ ಗಳಲ್ಲಿ ಸಾಲ ಮನ್ನಾ ಮಾಡುವ ಬಗ್ಗೆ ಯಡಿಯೂರಪ್ಪ ಅವರಿಗೆ ಈಗ ಜ್ಞಾನೋದಯವಾಗಿದೆ. ಹಾಗಾಗಿ ಈಗ ಟ್ವೀಟ್ ಮಾಡಿ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಯಡ್ಡಿಯೂರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದ ಜೆಡಿಎಸ್ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಪರ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ನಗರದ ದರಬಾರ್ ಮೈದಾನದಲ್ಲಿ ಬೃಹತ್ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನ ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಹಾಕುವ ಮುಖಾಂತರ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಇದನ್ನೂ ಓದಿ: ಕೃಷ್ಣನೂರಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ `ನಮೋ’- ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಸುಳಿವು ಕೊಟ್ರಾ ಪ್ರಧಾನಿ?

    ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಚ್‍ಡಿಕೆ, ರಿಸರ್ವ್ ಬ್ಯಾಂಕ್ ನವರು ನೋಟ್ ಪ್ರಿಂಟ್ ಮಾಡುವ ಮಷೀನ್ ನೀಡಿಲ್ಲ. ಹಾಗಾಗಿ ಸಾಲ ಮನ್ನಾ ಮಾಡಲು ಆಗಲ್ಲ ಎಂದು ಯಡಿಯೂರಪ್ಪ ಮೊದಲು ಹೇಳಿದ್ದರು. ಚುನಾವಣೆ ಬಂದಾಕ್ಷಣ ಯಡಿಯೂರಪ್ಪ ಅವರಿಗೆ ರೈತರ ಮೇಲೆ ಕನಿಕರ ಬಂತಾ ಎಂದು ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ವಿಚಾರ ಪ್ರಸ್ತಾಪ ಮಾಡದೇ ಹೋದರೆ ರೈತರು ಮತ ಹಾಕಲ್ಲ ಎಂದು ಈಗ ಸಾಲ ಮನ್ನಾ ಬಗ್ಗೆ ಮಾತಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಸವಾಲಿನಂತೆ ರಾಜೀನಾಮೆ ಕೊಟ್ಟರೂ ಮೋದಿ ಸ್ವೀಕರಿಸದೇ ವಿನಂತಿಸಿಕೊಂಡ್ರು: ಅಂದಿನ ಘಟನೆಯನ್ನು ನೆನಪಿಸಿಕೊಂಡ ಎಚ್‍ಡಿಡಿ

    ದೇವೇಗೌಡರ ಬಗ್ಗೆ ಅನುಕಂಪದ ಮಾತಾಡಿದ ಮೋದಿ ಕುರಿತು ಪ್ರತಿಕ್ರಿಯಿಸಿದ ಅವರು, 2014 ರ ಲೋಕಸಭಾ ಚುನಾವಣೆ ವೇಳೆ ದೇವೇಗೌಡರನ್ನು ವೃದ್ಧಾಶ್ರಮಕ್ಕೆ ಕಳಿಸುತ್ತೇನೆಂದು ಯಾಕೆ ಹೇಳಿದ್ರು ಎಂದು ಪ್ರಶ್ನಿಸಿದ್ದಾರೆ. ಈಗೇಕೆ ದೇವೇಗೌಡರ ಬಗ್ಗೆ ಅನುಕಂಪ ಬಂತು. ರಾಜ್ಯದ ಜನತೆ ಈಗಾಗಲೇ ಎರಡೂ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.

    ಮೋದಿ ಅವರು ಬಿಟ್ಟಿರುವಂತ ಪದ ಪುಂಜಗಳು ಎಲ್ಲರಲ್ಲಿ ಗೊಂದಲ ಸೃಷ್ಟಿಸಿದೆ. ಮೋದಿ ಅವರು ನನಗೆ ಬಾಲ್ ಹಾಕೋಕೆ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.

  • ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ನವಲಗುಂದದಲ್ಲಿ ಕೋನರೆಡ್ಡಿ ಗೆಲ್ಲಿಸಲು ಕೈ ಖೇಲ್ – ಬದಾಮಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಡೀಲ್..?

    ಬಾಗಲಕೋಟೆ: ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆಯಂತೆ ಅಂತಾ ಹೇಳಿಕೊಂಡು 10 ದಿನದಿಂದ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡ್ತಿದ್ದಾರೆ. ಮೋದಿ-ದೇವೇಗೌಡರು ಪರಸ್ಪರ ಹೊಗಳಿಕೊಂಡ ಮೇಲಂತೂ ಸಿಎಂ ಹೇಳಿಕೆ ತೀವ್ರ ಸ್ವರೂಪ ಪಡೆದಿದೆ.

    ಈ ಬಾರಿಯ ಚುನಾವಣೆಯಲ್ಲಿ ಪ್ರತಿಯೊಂದು ಹೆಜ್ಜೆಯನ್ನು ಸಿದ್ದರಾಮಯ್ಯ ಎಚ್ಚರಿಕೆಯಿಂದ ಇಡುತ್ತಿದ್ದಾರೆ. ಯಾವುದಕ್ಕೂ ಇರಲಿ ಅಂತಾ ಸಿಎಂ ಕೆಲ ಜೆಡಿಎಸ್ ಅಭ್ಯರ್ಥಿಗಳ ಜೊತೆ ಡೀಲ್ ಮಾಡಿಕೊಂಡ್ರಾ ಎಂಬ ಪ್ರಶ್ನೆ ಕೇಳಿ ಬರುತ್ತಿದೆ. ನವಲಗುಂದದಲ್ಲಿ ಜೆಡಿಎಸ್ ಕೋನರೆಡ್ಡಿಯನ್ನು ಸುಲಭವಾಗಿ ಗೆಲ್ಲುವಂತೆ ನೋಡಿಕೊಂಡು, ಒಂದು ವೇಳೆ ಮೈತ್ರಿ ಸಂದರ್ಭ ಬಂದ್ರೆ ಕೋನರೆಡ್ಡಿಯನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳಲು ಸಿಎಂ ಪ್ಲಾನ್ ಮಾಡಿದ್ದಾರೆ ಅಂತ ಹೇಳಲಾಗ್ತಿದೆ.

    ಕೋನರೆಡ್ಡಿ ಅವರನ್ನು ಗೆಲ್ಲಿಸುವುದಕ್ಕಾಗಿ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗೆ ಟಿಕೆಟ್ ನೀಡಿಲ್ಲ. ಸಿಎಂ ಸ್ಪರ್ಧಿಸಿರೋ ಬದಾಮಿಯಲ್ಲಿಯೂ ಕಾಂಗ್ರೆಸ್- ಜೆಡಿಎಸ್ ಒಳ ಒಪ್ಪಂದದ ಚರ್ಚೆ ನಡೆದಿದ್ಯಾ ಅನ್ನೋ ಪ್ರಶ್ನೆ ಕೂಡ ಎದ್ದಿದೆ.

    ಕಾಂಗ್ರೆಸ್-ಜೆಡಿಎಸ್ ಜೊತೆ ಒಪ್ಪಂದ ಮಾಡಿಕೊಂಡಿವೆ ಎಂಬ ಪ್ರಶ್ನೆಗಳಿಗೆ ಪೂರಕ ಎಂಬಂತೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಹಾಗೂ ಬದಾಮಿ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್ ಭೇಟಿ ಮಾಡಿ 20 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.

    ಭೇಟಿ ಬಳಿಕ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಹನುಮಂತ ಮಾವಿನಮರದ್, ಎಸ್.ಆರ್.ಪಾಟೀಲರನ್ನ ಭೇಟಿಯಾಗಿದ್ದು ನಿಜ. ಔಪಚಾರಿಕವಾಗಿ ಭೇಟಿಯಾಗಿದ್ದೆ ಅಷ್ಟೇ ಅವರೊಂದಿಗೆ ರಾಜಕೀಯ ಚರ್ಚೆ ನಡೆಸಿಲ್ಲ. ಆಕಸ್ಮಿಕವಾಗಿ ಹೋಟೆಲ್ ನಲ್ಲಿ ಸಿಕ್ಕಿದ್ದರು ಮಾತನಾಡಿಸಿದೆ. ಬಿಜೆಪಿ ನಾಯಕರು ಎದರುಗಡೆ ಸಿಕ್ಕರೆ ಮಾತನಾಡಿಸುವೆ ಇದರಲ್ಲಿ ಯಾವುದೇ ಒಳಒಪ್ಪಂದವಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಸೋಲಿನ ಭಯದಿಂದ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ. ನಾವು ಬದಾಮಿ ಅತಿ ಹೆಚ್ಚು ಅಂತರದಲ್ಲಿ ಗೆಲುವು ಸಾಧಿಸುತ್ತೇವೆ ಅಂತಾ ಸ್ಪಷ್ಟನೆ ನೀಡಿದ್ರು.

    ಇದೇ ವಿಚಾರವಾಗಿ ಮಾತನಾಡಿದ ಎಸ್.ಆರ್.ಪಾಟೀಲ್, ಒಂದೇ ಹೋಟೆಲ್ ನಲ್ಲಿ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ನನ್ನೊಂದಿಗೆ ಚಹಾ ಸೇವಿಸಿದ್ರು. ಭೇಟಿಯ ವೇಳೆ ನಮ್ಮಿಬ್ಬರ ಮಧ್ಯೆ ಯಾವುದೇ ರಾಜಕೀಯ ಒಳ ಒಪ್ಪಂದದ ಚರ್ಚೆಯಾಗಿಲ್ಲ. ಹಳೆಯ ಸ್ನೇಹ ಇರೋದಕ್ಕೆ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ನನ್ನನ್ನು ಭೇಟಿಯಾಗಿದ್ರು ಅಂತ ಪಾಟೀಲ್ ಸಮರ್ಥಿಸಿಕೊಂಡ್ರು.

  • ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಎಲೆಕ್ಷನ್ ಎಫೆಕ್ಟ್ – ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಆಫರ್

    ಬೆಂಗಳೂರು: ಪ್ರತಿ ವರ್ಷ ವೋಟ್ ಮಾಡುವವರ ಸಂಖ್ಯೆಯನ್ನ ಅಧಿಕ ಮಾಡಲು ಚುನಾವಣಾ ಆಯೋಗ ನಾನಾ ರೀತಿಯ ಕಸರತ್ತು ಮಾಡುತ್ತಾ ಇದೆ. ಆದರೆ ಸಂಖ್ಯೆ ಮಾತ್ರ ವೃದ್ದಿಸುತ್ತಿಲ್ಲ. ಅದಕ್ಕಾಗಿ ಇಲ್ಲೊಬ್ಬರು ಸಮಾಜ ಸೇವಕ ಜೆರಾಕ್ಸ್ ಅಂಗಡಿ ಇಟ್ಟು ಮೊದಲ ಬಾರಿ ವೋಟ್ ಮಾಡುವ ಕಾಲೇಜು ವಿಧ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಿದ್ದಾರೆ.

    ಈ ಬಾರಿಯ ಚುನಾವಾಣೆ ನಾನಾ ಕಾರಣಗಳಿಗೆ ತೀವ್ರ ಕುತೂಹಲ ಕೆರಳಿಸಿದೆ. ಹಾಗಾಗಿ ಪ್ರತಿಯೊಬ್ಬರು ವೋಟ್ ಮಾಡಿ ನಮಗೆ ಸೂಕ್ತವೆನಿಸುವ ಜನ ಪ್ರತಿನಿಧಿಯನ್ನು ಆಯ್ಕೆ ಮಾಡಿ ಅನ್ನೋ ಘೋಷಣೆಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ಘೋಷಣೆಗಳ ಮಧ್ಯೆ ವಿಶ್ವೇಶ್ವರ ಅವರು ತುಂಬ ವಿಭಿನ್ನವಾಗಿಯೇ ಚುನಾವಣೆ ಪ್ರಚಾರ ಮಾಡಿದ್ದಾರೆ.

    ನಾನು ವೋಟ್ ಮಾಡಿ ಅಂತ ಜನಜಾಗೃತಿ ಮೂಡಿಸುವ ಜೊತೆಗೆ ಮೊದಲ ಬಾರಿಗೆ ವೋಟ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಕೇವಲ 25 ಪೈಸೆಗೆ ಜೆರಾಕ್ಸ್ ಮಾಡಿಕೊಡುವುದಾಗಿ ಘೋಷಣೆ ಮಾಡಿದ್ದೇನೆ. ಅಷ್ಟೇ ಅಲ್ಲದೇ ತನ್ನ ಅಂಗಡಿ ಮುಂದೆ ದೊಡ್ಡ ಬೋರ್ಡ್ ಹಾಕಿದ್ದು, ನನ್ನ ಶಾಪಿಗೆ ಬರುವ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಮಾಡುತ್ತಿದ್ದೇನೆ ಎಂದು ಸಮಾಜ ಸೇವಕ ವಿಶ್ವೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ಮತ ಹಾಕಿದ್ರೆ 5 ವರ್ಷ ಡಿಸ್ಕೌಂಟ್ – ಗ್ರಾಹಕರಿಗೆ ಮೆಡಿಕಲ್ ಶಾಪ್ ಓನರ್ ಆಫರ್

    ಈ ಆಫರ್ 1 ತಿಂಗಳ ಕಾಲ ಜಾರಿಯಲ್ಲಿರಲಿದ್ದು, ವೋಟ್ ಹಾಕಿದವರು ಕಾಲೇಜು ಐಡಿ ಮತ್ತು ಮತದಾನದ ಗುರುತಿನೊಂದಿಗೆ ಅಂಗಡಿಗೆ ಬಂದರೆ ಸಾಕು ಈ ಆಫರ್ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಪ್ರಾಜೆಕ್ಟ್ ವರ್ಕ್ ಮಾಡುವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ ನೆಟ್ ಸೌಲಭ್ಯವನ್ನು ಸಹ ನೀಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ವಿದ್ಯಾರ್ಥಿನಿಯೊಬ್ಬರು ಹೇಳಿದ್ದಾರೆ.

  • ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ಸಿನಿಮಾ ನಟ-ನಟಿಯರಿಂದ ಕೈ ಅಭ್ಯರ್ಥಿಯ ಪರ ಪ್ರಚಾರ

    ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ  ಸ್ಯಾಂಡಲ್‍ ವುಡ್‍ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.

    ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.

    ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

    ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

  • ಯಾವ ಭಾಗದಲ್ಲಿ ಪಕ್ಷಗಳ ಟ್ರೆಂಡ್ ಹೇಗಿದೆ? 50:50 ಕ್ಷೇತ್ರಗಳು ಯಾವುದು? ಸಿಎಂ ಯಾರಾಗಬೇಕು?

    ಯಾವ ಭಾಗದಲ್ಲಿ ಪಕ್ಷಗಳ ಟ್ರೆಂಡ್ ಹೇಗಿದೆ? 50:50 ಕ್ಷೇತ್ರಗಳು ಯಾವುದು? ಸಿಎಂ ಯಾರಾಗಬೇಕು?

    ಬೆಂಗಳೂರು: ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನು 10 ದಿನ ಮಾತ್ರ ಬಾಕಿಯಿದೆ. ಎಲ್ಲಾ ಪಕ್ಷಗಳ ಪ್ರಚಾರ ಭರ್ಜರಿಯಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಬಿಜೆಪಿ 150, ಕಾಂಗ್ರೆಸ್‍ನವರು 130 ಸೀಟ್‍ಗಳಿಸಿ ಸರ್ಕಾರ ರಚಿಸುತ್ತೇವೆ ಎಂದು ಘಂಟಾಘೋಷವಾಗಿ ಹೇಳಿಕೆ ನೀಡಿ ಬೀಗುತ್ತಿದ್ದಾರೆ. ಜೆಡಿಎಸ್ ಸಹ ಸರ್ಕಾರ ನಮ್ಮದೇ ಅಂತ ಹೇಳ್ತಿದೆ. ಯಾರ್ ಏನೇ ಡಂಗೂರ ಸಾರಿಕೊಂಡ್ರೂ ಪ್ರಜಾಪ್ರಭುತ್ವದಲ್ಲಿ ಭವಿಷ್ಯ ನಿರ್ಧರಿಸೋದು ಮತದಾರರ ಪ್ರಭುಗಳು. ಹೀಗಾಗಿ ಮತದಾರ `ಓಟ್‍ಮಿಡಿತ’ ಯಾರ ಕಡೆಗಿದೆ? ಯಾವ ಸರ್ಕಾರ ಬರುತ್ತೆ? ಯಾರು ಗದ್ದುಗೆ ಏರುತ್ತಾರೆ ಅಂತ ನಿಮ್ಮ ಪಬ್ಲಿಕ್ ಟಿವಿಯು ಮೆಗಾ ಸೆಮಿಫೈನಲ್ ಸರ್ವೆ ಮಾಡಿದೆ.

    ಈ ಸಮೀಕ್ಷೆಯನ್ನು ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದ ನಂತರ ಮಾಡಲಾಗಿದೆ. ಈ ಸಮೀಕ್ಷೆಯಲ್ಲಿ 50 ಕ್ಷೇತ್ರಗಳಲ್ಲಿ ಭಾರೀ ಸ್ಪರ್ಧೆ ಇರುವುದು ಕಂಡು ಬಂದಿದ್ದು, ಈ ಕ್ಷೇತ್ರಗಳಲ್ಲಿ ಯಾರು ಅತಿ ಹೆಚ್ಚು ಸ್ಥಾನವನ್ನು ಗೆಲ್ಲುತ್ತಾರೋ ಅವರು ಅಧಿಕಾರ ಏರಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇದೇ ಅಂತಿಮ ಸಮೀಕ್ಷೆಯಲ್ಲ. ಕೊನೆ ದಿನ ಹತ್ತಿರ ಬರುತ್ತಿದ್ದಂತೆ ಮೂರು ಪಕ್ಷಗಳ ಪ್ರಚಾರ ಜೋರಾಗಲಿದೆ. ಅಷ್ಟೇ ಅಲ್ಲದೇ ಮೋದಿ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಈ ವಿಚಾರಗಳು ಮತದಾರರ ಮೇಲೆ ಪ್ರಭಾವ ಬೀಳುವ ಸಾಧ್ಯತೆ ಇರುತ್ತದೆ. ಕೊನೆ ಕ್ಷಣದಲ್ಲಿ ಮತದಾರರ ನಿರ್ಧಾರ ಬದಲಾಗುತ್ತಾ? ಅಥವಾ ಇದೇ ರೀತಿ ಫಲಿತಾಂಶ ಬರುತ್ತಾ ಎನ್ನುವುದು ಚುನಾವಣೆಗೆ ಮುನ್ನ ಪ್ರಸಾರವಾಗಲಿರುವ ಫೈನಲ್ ಸಮೀಕ್ಷೆಯಲ್ಲಿ ಪ್ರಕಟವಾಗಲಿದೆ. ಹೀಗಾಗಿ ಸದ್ಯ ವಲಯವಾರು ಅಥವಾ ಪ್ರಾಂತ್ಯವಾರು ಪಕ್ಷಗಳ ಟ್ರೆಂಡ್ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.

    1. ಸಿಎಂ ಸಿದ್ದರಾಮಯ್ಯ ಅವರು ಎರಡು ಕಡೆ ಸ್ಪರ್ಧೆ ಕಾಂಗ್ರೆಸ್ ಲಾಭನಾ..? ನಷ್ಟನಾ?
    ಹೈದರಾಬಾದ್ ಕರ್ನಾಟಕ
    ಲಾಭ – 28.33%
    ನಷ್ಟ – 49.67%
    ವ್ಯತ್ಯಾಸ ಆಗಲ್ಲ – 14.33%
    ಏನು ಹೇಳಲ್ಲ -7.67%

    ಮುಂಬೈ ಕರ್ನಾಟಕ
    ಲಾಭ – 31.00%
    ನಷ್ಟ – 47.25%
    ವ್ಯತ್ಯಾಸ ಆಗಲ್ಲ – 14.75%
    ಏನು ಹೇಳಲ್ಲ -7.00%

    ಕರಾವಳಿ ಕರ್ನಾಟಕ
    ಲಾಭ – 23.33%
    ನಷ್ಟ – 46.00%
    ವ್ಯತ್ಯಾಸ ಆಗಲ್ಲ -19.33%
    ಏನು ಹೇಳಲ್ಲ – 11.34%

    ಮಧ್ಯ ಕರ್ನಾಟಕ/ ಮಲೆನಾಡು
    ಲಾಭ – 15.00%
    ನಷ್ಟ – 58.00%
    ವ್ಯತ್ಯಾಸ ಆಗಲ್ಲ -19.00%
    ಏನು ಹೇಳಲ್ಲ – 8.00%

    ಹಳೆ ಮೈಸೂರು
    ಲಾಭ – 26.89%
    ನಷ್ಟ – 50.22%
    ವ್ಯತ್ಯಾಸ ಆಗಲ್ಲ -13.11%
    ಏನು ಹೇಳಲ್ಲ – 9.78%

    ಬೆಂಗಳೂರು ನಗರ
    ಲಾಭ – 27.44%
    ನಷ್ಟ – 56.32%
    ವ್ಯತ್ಯಾಸ ಆಗಲs್ಲ – 10.47%
    ಏನು ಹೇಳಲ್ಲ – 5.77%

    ಸಮಗ್ರ ಕರ್ನಾಟಕ
    ಲಾಭ -26.51%
    ನಷ್ಟ – 50.93%
    ವ್ಯತ್ಯಾಸ ಆಗಲ್ಲ – 14.46%
    ಏನು ಹೇಳಲ್ಲ – 8.10%

    2. ವರುಣಾದಲ್ಲಿ ಯಡಿಯೂರಪ್ಪ ಮಗನಿಗೆ ಟಿಕೆಟ್ ಕೊಡದೇ ಬಿಜೆಪಿ ಎಡವಟ್ಟು ಮಾಡಿಕೊಂಡಿತಾ?
    ಸಮಗ್ರ ಕರ್ನಾಟಕ
    ಹೌದು – 48.45%
    ಇಲ್ಲ – 31.68%
    ಗೊತ್ತಿಲ್ಲ – 19.87%

    3. ಯಡಿಯೂರಪ್ಪ ಮಗನ ಟಿಕೆಟ್ ರಾದ್ಧಾಂತದ ನಂತರವೂ ಲಿಂಗಾಯತರು ಬಿಜೆಪಿ ಪರ ನಿಲ್ಲುತ್ತಾರಾ?
    ಹೈದರಾಬಾದ್ ಕರ್ನಾಟಕ
    ಹೌದು – 43.33%
    ಇಲ್ಲ – 32.33%
    ಗೊತ್ತಿಲ್ಲ – 24.34%

    ಮುಂಬೈ ಕರ್ನಾಟಕ
    ಹೌದು – 47.00%
    ಇಲ್ಲ – 31.00%
    ಗೊತ್ತಿಲ್ಲ – 22.00%

    ಕರಾವಳಿ ಕರ್ನಾಟಕ
    ಹೌದು – 40.00%
    ಇಲ್ಲ – 30.67%
    ಗೊತ್ತಿಲ್ಲ – 29.33%

    ಮಧ್ಯ ಕರ್ನಾಟಕ/ಮಲೆನಾಡು
    ಹೌದು – 59.50%
    ಇಲ್ಲ – 20.00%
    ಗೊತ್ತಿಲ್ಲ – 20.50%

    ಹಳೆ ಮೈಸೂರು
    ಹೌದು – 41.56%
    ಇಲ್ಲ – 34.44%
    ಗೊತ್ತಿಲ್ಲ – 24.00

    ಬೆಂಗಳೂರು ನಗರ
    ಹೌದು – 34.30%
    ಇಲ್ಲ – 45.84%
    ಗೊತ್ತಿಲ್ಲ – 19.86%

    ಸಮಗ್ರ
    ಹೌದು – 43.84%
    ಇಲ್ಲ – 33.14%
    ಗೊತ್ತಿಲ್ಲ – 23.02%

    4. ಸಿದ್ದರಾಮಯ್ಯ ಅವರ ಲಿಂಗಾಯತ ಧರ್ಮಾಸ್ತ್ರ ಕಾಂಗ್ರೆಸ್ ಬುಟ್ಟಿಗೆ ಮತ ತಂದುಕೊಡುತ್ತಾ?
    ಸಮಗ್ರ ಕರ್ನಾಟಕ
    ಹೌದು – 28.19%
    ಇಲ್ಲ – 54.70%
    ಗೊತ್ತಿಲ್ಲ – 17.11%

    5. ಜನಾರ್ದನ ರೆಡ್ಡಿಗೆ ರೆಡ್ ಕಾರ್ಪೆಟ್ ಹಾಸಿದ್ದು ಬಿಜೆಪಿಗೆ ತಿರುಗುಬಾಣ ಆಗುತ್ತಾ?
    ಸಮಗ್ರ ಕರ್ನಾಟಕ
    ಹೌದು ಉಲ್ಟಾ ಹೊಡೆಯುತ್ತೆ – 33.26%
    ಇಲ್ಲ, ಲಾಭ ಆಗುತ್ತೆ – 40.57%
    ಗೊತ್ತಿಲ್ಲ – 26.17%

    6. ಕಾವೇರಿ ಪರ ಸುಪ್ರೀಂ ಕೋರ್ಟ್ ತೀರ್ಪು ಕಾಂಗ್ರೆಸ್ ಪ್ಲಸ್ ಆಗುತ್ತಾ?
    ಸಮಗ್ರ
    ಹೌದು – 36.58%
    ಇಲ್ಲ – 46.09%
    ಗೊತ್ತಿಲ್ಲ – 17.33%

    7. ಸಿದ್ದರಾಮಯ್ಯ ಆಡಳಿತದ ಈ 5 ವರ್ಷ ನಿಮಗೆ ತೃಪ್ತಿ ತಂದಿದ್ಯಾ?
    ಸಮಗ್ರ
    ಅತ್ಯುತ್ತಮ – 14.63%
    ಉತ್ತಮ – 17.28%
    ಸಾಧಾರಣ – 32.02%
    ಕಳಪೆ – 31.34%
    ಏನೂ ಹೇಳಲ್ಲ – 4.73%

    8. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಬಯಸುತ್ತೀರ?
    ಹೈದ್ರಾಬಾದ್ ಕರ್ನಾಟಕ
    ಸಿದ್ದರಾಮಯ್ಯ _ 29.00%
    ಯಡಿಯೂರಪ್ಪ – 31.00%
    ಕುಮಾರಸ್ವಾಮಿ – 25.33%
    ಇವರಾರೂ ಬೇಡ – 14.67%

    ಮುಂಬೈ ಕರ್ನಾಟಕ
    ಸಿದ್ದರಾಮಯ್ಯ _ 33.00%
    ಯಡಿಯೂರಪ್ಪ – 43.75%
    ಕುಮಾರಸ್ವಾಮಿ – 13.50%
    ಇವರಾರೂ ಬೇಡ – 9.75%

    ಕರಾವಳಿ ಕರ್ನಾಟಕ
    ಸಿದ್ದರಾಮಯ್ಯ _ 21.33%
    ಯಡಿಯೂರಪ್ಪ – 34.67%
    ಕುಮಾರಸ್ವಾಮಿ – 22.00%
    ಇವರಾರೂ ಬೇಡ – 22.00%

    ಮಧ್ಯ ಕರ್ನಾಟಕ/ಮಲೆನಾಡು
    ಸಿದ್ದರಾಮಯ್ಯ _ 12.00%
    ಯಡಿಯೂರಪ್ಪ – 55.50%
    ಕುಮಾರಸ್ವಾಮಿ – 19.00%
    ಇವರಾರೂ ಬೇಡ – 13.50%

    ಹಳೇ ಮೈಸೂರು
    ಸಿದ್ದರಾಮಯ್ಯ _ 20.67%
    ಯಡಿಯೂರಪ್ಪ – 20.00%
    ಕುಮಾರಸ್ವಾಮಿ – 43.11%
    ಇವರಾರೂ ಬೇಡ – 16.22%

    ಬೆಂಗಳೂರು ನಗರ
    ಸಿದ್ದರಾಮಯ್ಯ _ 26.94%
    ಯಡಿಯೂರಪ್ಪ – 28.52%
    ಕುಮಾರಸ್ವಾಮಿ – 38.79%
    ಇವರಾರೂ ಬೇಡ – 5.75%

    ಸಮಗ್ರ
    ಸಿದ್ದರಾಮಯ್ಯ _ 30.56%
    ಯಡಿಯೂರಪ್ಪ – 28.77%
    ಕುಮಾರಸ್ವಾಮಿ – 32.13%
    ಇವರಾರೂ ಬೇಡ – 8.54%

    9. ನಿಮ್ಮ ಮತ ಯಾರಿಗೆ?
    ಕಾಂಗ್ರೆಸ್ – 34.75%
    ಬಿಜೆಪಿ – 35.12%
    ಜೆಡಿಎಸ್ – 26.28%
    ಪಕ್ಷೇತರ – 1.68%
    ನೋಟಾ – 1.01%
    ಏನೂ ಹೇಳಲ್ಲ – 1.16%

    10. ಈ ಬಾರಿ ಸ್ವತಂತ್ರ ಸರ್ಕಾರವೋ ಸಮ್ಮಿಶ್ರ ಸರ್ಕಾರವೋ?
    ಬಹುಮತ ಸರ್ಕಾರ – 40.80%
    ಸಮ್ಮಿಶ್ರ ಸರ್ಕಾರ – 43.89%
    ಏನೂ ಹೇಳಲ್ಲ – 15.31%

    ವಲಯಾವಾರು ಪ್ರಶ್ನೆಗಳು
    ಮುಂಬೈ ಕರ್ನಾಟಕ
    11.ನಿಮ್ಮ ಪ್ರಮುಖ ಚುನಾವಣಾ ವಿಚಾರ ಯಾವುದು?
    ಲಿಂಗಾಯತ ಧರ್ಮ – 17.75%
    ಮಹಾದಾಯಿ ವಿವಾದ – 20.50%
    ಕನ್ನಡ ಮರಾಠಿ – 2.00%
    ಅಭಿವೃದ್ಧಿ – 55.00%
    ಗೊತ್ತಿಲ್ಲ – 4.75%

    ಹೈದ್ರಾಬಾದ್ ಕರ್ನಾಟಕ
    12. ನಿಮ್ಮ ಪ್ರಮುಖ ಚುನಾವಣಾ ವಿಚಾರ ಯಾವುದು?
    ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನ – 48.75%
    ಪ್ರತ್ಯೇಕ ರಾಜ್ಯದ ಕೂಗು – 11.00%
    ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ – 25.00%
    ಲಿಂಗಾಯತ ಪ್ರತ್ಯೇಕ ಧರ್ಮ – 5.25%
    ಗೊತ್ತಿಲ್ಲ – 10.00%

    ಕರಾವಳಿ ಕರ್ನಾಟಕ
    13. ಕರಾವಳಿ ಭಾಗದಲ್ಲಿ ಪ್ರಮುಖ ಚುನಾವಣಾ ವಿಷಯ ಹಿಂದುತ್ವನಾ, ಅಭಿವೃದ್ಧಿನಾ?
    ಹಿಂದುತ್ವ – 32.50%
    ಅಭಿವೃದ್ಧಿ – 32.00%
    ಎರಡೂ – 18.50%
    ಏನೂ ಹೇಳಲ್ಲ -17.00%

    ಹಳೆ ಮೈಸೂರು
    14. ಹಳೆ ಮೈಸೂರು ಭಾಗದಲ್ಲಿ ದೇವೇಗೌಡರು ಹಾಗೂ ಸಿದ್ದರಾಮಯ್ಯ ಪೈಕಿ ಯಾರು ಪವರ್ ಫುಲ್?
    ದೇವೇಗೌಡ – 47.33%
    ಸಿದ್ದರಾಮಯ್ಯ – 25.78%
    ಇಬ್ಬರೂ ಅಲ್ಲ – 13.78%
    ಗೊತ್ತಿಲ್ಲ – 13.11%

    ಬೆಂಗಳೂರು ನಗರ
    15. ಸಿದ್ದರಾಮಯ್ಯ ಆಡಳಿತದಲ್ಲಿ ನಿಮ್ಮ ಕನಸಿನ ಬೆಂಗಳೂರು ಸಾಕಾರಗೊಂಡಿದ್ಯಾ?
    ಉತ್ತಮ ಅಭಿವೃದ್ಧಿ – 16.61%
    ಸಾಧಾರಣ ಅಭಿವೃದ್ಧಿ – 25.83%
    ನಿರೀಕ್ಷಿತ ಮಟ್ಟ ಮುಟ್ಟಿಲ್ಲ – 18.45%
    ಏನು ಆಗಿಲ್ಲ – 33.57%
    ಏನು ಹೇಳಲ್ಲ – 5.54%

    ಸೀಟು ಲೆಕ್ಕಾಚಾರ
    ಮುಂಬೈ ಕರ್ನಾಟಕ
    ಕಾಂಗ್ರೆಸ್ – 21
    ಬಿಜೆಪಿ – 19
    ಜೆಡಿಎಸ್ -02

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್ – 13
    ಬಿಜೆಪಿ – 15
    ಜೆಡಿಎಸ್ – 03

    ಕರಾವಳಿ ಕರ್ನಾಟಕ
    ಕಾಂಗ್ರೆಸ್ – 10
    ಬಿಜೆಪಿ – 06
    ಜೆಡಿಎಸ್ -0

    ಮಧ್ಯ ಕರ್ನಾಟಕ/ ಮಲೆನಾಡು
    ಕಾಂಗ್ರೆಸ್ – 08
    ಬಿಜೆಪಿ – 08
    ಜೆಡಿಎಸ್ – 05

    ಹಳೆ ಮೈಸೂರು
    ಕಾಂಗ್ರೆಸ್ – 17
    ಬಿಜೆಪಿ – 05
    ಜೆಡಿಎಸ್ – 19

    ಬೆಂಗಳೂರು ನಗರ
    ಕಾಂಗ್ರೆಸ್ – 12
    ಬಿಜೆಪಿ – 10
    ಜೆಡಿಎಸ್ – 01

    ಸಮಗ್ರ ಕರ್ನಾಟಕ
    ಕಾಂಗ್ರೆಸ್ – 81
    ಬಿಜೆಪಿ – 63
    ಜೆಡಿಎಸ್ -30

    50:50 ಕ್ಷೇತ್ರಗಳು
    ಮುಂಬೈ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ -05
    ಬಿಜೆಪಿ/ಜೆಡಿಎಸ್ -00
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 03

    8 ಕ್ಷೇತ್ರಗಳು: ಬೆಳಗಾವಿ ದಕ್ಷಿಣ, ಖಾನಾಪುರ, ಬಾದಾಮಿ, ಹುನಗುಂದ, ರೋಣ, ನರಗುಂದ, ಶಿಗ್ಗಾಂವಿ, ರಾಣೆಬೆನ್ನೂರು

    ಹೈದರಾಬಾದ್ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ – 06
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 01
    ಇತರೆ – 01

    9 ಕ್ಷೇತ್ರಗಳು: ಗುಲ್ಬರ್ಗ ದಕ್ಷಿಣ, ಚಿತ್ತಾಪುರ, ಆಳಂದ, ಗುರುಮಿಟ್ಕಲ್, ಹಡಗಲಿ, ವಿಜಯನಗರ, ಸಂಡೂರು, ಹುಮನಾಬಾದ್, ಭಾಲ್ಕಿ

    ಕರಾವಳಿ ಕರ್ನಾಟಕ
    ಬಿಜೆಪಿ/ಕಾಂಗ್ರೆಸ್ – 03
    ಬಿಜೆಪಿ/ಜೆಡಿಎಸ್ – 00
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 00

    3 ಕ್ಷೇತ್ರಗಳು: ಕಾಪು, ಕುಮಟಾ, ಕಾರವಾರ

    ಮಧ್ಯ ಕರ್ನಾಟಕ/ ಮಲೆನಾಡು
    ಬಿಜೆಪಿ/ಕಾಂಗ್ರೆಸ್ – 01
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 0
    ಇತರೆ – 03

    5 ಕ್ಷೇತ್ರಗಳು: ತರೀಕೆರೆ, ಶೃಂಗೇರಿ, ಮೊಳಕಾಲ್ಮೂರು, ಹರಪನಹಳ್ಳಿ, ಮಾಯಕೊಂಡ


    ಹಳೆ ಮೈಸೂರು
    ಬಿಜೆಪಿ/ಕಾಂಗ್ರೆಸ್ – 02
    ಬಿಜೆಪಿ/ಜೆಡಿಎಸ್ – 03
    ಕಾಂಗ್ರೆಸ್/ಜೆಡಿಎಸ್ – 10
    ಇತರೆ -05

    20 ಕ್ಷೇತ್ರಗಳು: ಬೇಲೂರು, ಹಾಸನ, ಹೆಚ್.ಡಿ.ಕೋಟೆ, ಚಾಮುಂಡೇಶ್ವರಿ, ಚಾಮರಾಜ, ಟಿ.ನರಸೀಪುರ, ಕೊಳ್ಳೇಗಾಲ, ಮಳವಳ್ಳಿ, ಮೇಲುಕೋಟೆ, ಕೋಲಾರ, ಕೆಜಿಎಫ್, ಮಾಲೂರು, ಶ್ರೀನಿವಾಸಪುರ, ಚಿಂತಾಮಣಿ, ತುಮಕೂರು ಗ್ರಾಮೀಣ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಗುಬ್ಬಿ, ಮಾಗಡಿ

    ಬೆಂಗಳೂರು ನಗರ
    ಬಿಜೆಪಿ/ಕಾಂಗ್ರೆಸ್ – 04
    ಬಿಜೆಪಿ/ಜೆಡಿಎಸ್ – 01
    ಕಾಂಗ್ರೆಸ್/ಜೆಡಿಎಸ್ – 00
    ಇತರೆ – 00

    5 ಕ್ಷೇತ್ರಗಳು: ದಾಸರಹಳ್ಳಿ, ಹೆಬ್ಬಾಳ, ಶಿವಾಜಿನಗರ, ಗೋವಿಂದರಾಜ ನಗರ, ಜಯನಗರ

    50:50 ಸಮಗ್ರ
    ಬಿಜೆಪಿ/ಕಾಂಗ್ರೆಸ್ – 21
    ಬಿಜೆಪಿ/ಜೆಡಿಎಸ್ – 06
    ಕಾಂಗ್ರೆಸ್/ಜೆಡಿಎಸ್ -11
    ಇತರೆ – 12

  • ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿರೋದು ಯಾಕೆ: ರಾಕಿಂಗ್ ಸ್ಟಾರ್ ಹೇಳ್ತಾರೆ ಓದಿ

    ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡ್ತಿರೋದು ಯಾಕೆ: ರಾಕಿಂಗ್ ಸ್ಟಾರ್ ಹೇಳ್ತಾರೆ ಓದಿ

    ಮೈಸೂರು: ಚುನಾವಣಾ ಪ್ರಚಾರಕ್ಕೆ ರಾಂಕಿಂಗ್ ಸ್ಟಾರ್ ಯಶ್ ಎಂಟ್ರಿ ನೀಡಿದ್ದು, ಕೆಆರ್ ನಗರದ ಜೆಡಿಎಸ್ ಅಭ್ಯರ್ಥಿ ಸಾ ರಾ ಮಹೇಶ್ ಪರ ಪ್ರಚಾರ ಮಾಡಿದ್ದಾರೆ.

    ಯಶ್ ಕೆ.ಆರ್ ನಗರದ ತೋಪಮ್ಮ ದೇವಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಸಿದ್ದು, ಕೆಆರ್ ನಗರದ ಪ್ರಮುಖ ರಸ್ತೆಯಲ್ಲಿ ರೋಡ್ ಶೋ ನಡೆಸಿದರು. ಯಶ್ ಬಂದಿದ್ದಾರೆ ಎನ್ನುವ ವಿಚಾರ ತಿಳದು ರಾಕಿಂಗ್ ಸ್ಟಾರ್ ಅವರನ್ನು ನೋಡಲು ಜನ ಮುಗಿಬಿದ್ದರು.

    ನಾನು ಜನರಿಂದ ಸ್ಟಾರ್ ಆಗಿದ್ದೇನೆ. ಈ 5 ವರ್ಷ ಜನಗಳ ಜೀವನ ಈ 10 ದಿನದ ಕೆಲಸಗಳಿಂದ ನಿರ್ಧಾರ ಆಗುತ್ತದೆ. ಈ ಕೆಲಸದಲ್ಲಿ ನನ್ನ ಕರ್ತವ್ಯ ಕೂಡ ಇದೆ. ಹಾಗಾಗಿ ನನಗೆ ನಂಬಿಕೆ ಇರುವವರು, ನನ್ನ ಸ್ನೇಹಿತರು, ನನ್ನ ಒಡನಾಟದಲ್ಲಿ ಇರುವವರನ್ನು ಬೆಂಬಲಿಸುತ್ತಿದ್ದೇನೆ. ನನಗೆ ಸಾಕಷ್ಟು ಮಂದಿ ಪ್ರಚಾರಕ್ಕೆ ಕೇಳಿಕೊಂಡರು. ಆದರೆ ಯಾರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೋ, ಗುರಿಯನ್ನು ಇಟ್ಟುಕೊಳ್ಳುತ್ತಾರೋ ಅವರನ್ನು ನಾನು ಬೆಂಬಲಿಸುತ್ತೇನೆ. ಯಾವುದೇ ಪಕ್ಷ, ಯಾವುದೇ ಸಿದ್ಧಾಂತಕ್ಕೆ ನಾನು ಬೆಲೆ ಕೊಡಲ್ಲ ಎಂದು ಯಶ್ ತಿಳಿಸಿದರು.

    ನನಗೆ ಸಾರಾ ಮಹೇಶ್ ಎಂದರೆ ಬಹಳ ಪ್ರೀತಿ. ಅವರು ಮಾತಿಗೆ ನಿಲ್ಲೋ ವ್ಯಕ್ತಿ. ನಾವು ಬಹಳ ವರ್ಷದಿಂದ ಸ್ನೇಹಿತರು. ಅಲ್ಲದೇ ನನಗೆ ಹಳ್ಳಿಗಳೆಂದರೆ ಸಾಕಷ್ಟು ಇಷ್ಟ. ಹೀಗಾಗಿ ನಾನು ತುಂಬಾ ಇಷ್ಟಪಡೋ ಸಾರಾ ಮಹೇಶ್‍ಗೆ ಬೆಂಬಲಿಸುತ್ತಿದ್ದೇನೆ ಎಂದು ಹೇಳಿದರು.

    ನಾನು ಯಾವ ಪಕ್ಷಕ್ಕೂ ಅಥವಾ ಸಿದ್ಧಾಂತಕ್ಕೆ ಬೆಲೆ ಕೊಡುವುದ್ದಿಲ್ಲ. ನಾನು ವ್ಯಕ್ತಿಗಳಿಗೆ ಬೆಲೆ ಕೊಡುತ್ತೇನೆ. ಆ ವ್ಯಕ್ತಿಗಳು ನನ್ನ ಸ್ನೇಹಿತರು. ಹಾಗಾಗಿ ನಾನು ಅವರನ್ನು ಬೆಂಬಲಿಸುತ್ತಿದ್ದೇನೆ. ಜನರು ನನ್ನನ್ನು ಬೆಂಬಲಿಸುತ್ತಾರೆ. ಮುಂದೆ ಅವರು ಅಧಿಕಾರಕ್ಕೆ ಬಂದಾಗ ನಾನು ಅವರ ಕೈಯಲ್ಲಿ ಎಲ್ಲ ಕೆಲಸಗಳನ್ನು ಮಾಡಿಸುತ್ತೇನೆ. ಅದು ನನ್ನ ಜವಾಬ್ದಾರಿ ಎಂದು ಯಶ್ ಹೇಳಿದ್ದಾರೆ.

    ನಾನು ಎರಡೂ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೀನಿ ಎಂದು ಜನಗಳು ಕನ್ಫ್ಯೂಸ್ ಆಗುವುದು ಬೇಡ. ಯವಕರು ಜನಪರ ಕಾಳಜಿ ಹಾಗೂ ಕೆಲಸ ಮಾಡೋ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಾರೂ ಆ ಕ್ಷೇತ್ರದಲ್ಲಿ ಇರುತ್ತಾರೆ. ಯಾರು ಕೆಲಸ ಮಾಡುವವರು ಎಂದು ಅವರಿಗೆ ಅನಿಸುತ್ತದ್ದೆಯೋ ಆ ಅಭ್ಯರ್ಥಿಗೆ ಅವರು ವೋಟ್ ಮಾಡಲಿ ಎಂದು ಯಶ್ ತಿಳಿಸಿದ್ದಾರೆ.

    ಬೆಳಗ್ಗೆ ಸಾ ರಾ ಮಹೇಶ್ ಪರ ಪ್ರಚಾರ ಮಾಡಿದರೆ, ಸಂಜೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಮ್‍ದಾಸ್ ಪರ ಪ್ರಚಾರ ನಡೆಸುತ್ತೇನೆ ಎಂದು ಯಶ್ ತಿಳಿಸಿದರು.