Tag: Karnataka Bulldozers

  • CCL- ಬೆಂಗಾಲ್ ಟೈಗರ್ಸ್ ಮುಂದೆ ಸೋಲು ಒಪ್ಪಿಕೊಂಡ ಕರ್ನಾಟಕ ಬುಲ್ಡೋಜರ್ಸ್

    CCL- ಬೆಂಗಾಲ್ ಟೈಗರ್ಸ್ ಮುಂದೆ ಸೋಲು ಒಪ್ಪಿಕೊಂಡ ಕರ್ನಾಟಕ ಬುಲ್ಡೋಜರ್ಸ್

    ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಐಕಾನಿಕ್ 10 ನೇ ಸೀಸನ್ ಮಾರ್ಚ್ 17 ರಂದು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ವಿರುದ್ಧ ಉಗುರು ಕಚ್ಚುವ ಫೈನಲ್‌ನಲ್ಲಿ ಬೆಂಗಾಲ್ ಟೈಗರ್ಸ್ (Bengal Tigers) ಜಯಗಳಿಸುವ ಮೂಲಕ ಭವ್ಯವಾದ ಅಂತಿಮ ಪಂದ್ಯದೊಂದಿಗೆ ಕೊನೆಗೊಂಡಿತು. ಅಂತಿಮ ಪಂದ್ಯವು ಇಡೀ ಋತುವಿನಂತೆಯೇ ಕಟ್-ಥ್ರೋಟ್ ಯುದ್ಧವೆಂದು ಸಾಬೀತಾಯಿತು ಮತ್ತು ಬೆಂಗಾಲ್ ಟೈಗರ್ಸ್ ಕೇವಲ 13 ರನ್‌ಗಳ ಅಂತರದಿಂದ ಗೆದ್ದಿತು. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಉತ್ಸಾಹವು ಈ ಋತುವಿನಲ್ಲಿ ಉತ್ತುಂಗದಲ್ಲಿದೆ, ಪಂದ್ಯಗಳನ್ನು ಲೈವ್ ಆಗಿ ಪ್ರಸಾರ ಮಾಡಲಾಗುತ್ತದೆ JioCinema. ಈ ಐಕಾನಿಕ್ ಋತುವಿನಲ್ಲಿ ಅಭಿಮಾನಿಗಳು ವಿಸ್ಮಯದಿಂದ ಹಂಚಿಕೊಂಡಿದ್ದಾರೆ ಮತ್ತು ಮರುಹಂಚಿಕೊಳ್ಳುತ್ತಿರುವ ನಟರ ಸೀದಾ ವೀಡಿಯೋಗಳು ವೈರಲ್ ಆಗುವುದರೊಂದಿಗೆ ಅದ್ಭುತವಾದ ಮನರಂಜನೆಗೆ ಸಾಕ್ಷಿಯಾಯಿತು. ಸಲ್ಮಾನ್ ಖಾನ್ ಅವರ ತಾಯಿಯೊಂದಿಗೆ ಹೃದಯಸ್ಪರ್ಶಿ ಸಂವಾದದಿಂದ ಹಿಡಿದು ಸ್ಟೇಡಿಯಂನಲ್ಲಿ ಜೆನಿಲಿಯಾ ಡಿಸೋಜಾ ಅವರ ವೈರಲ್ ವೀಡಿಯೊದವರೆಗೆ, ಈ ಸೀಸನ್ ನಿಜವಾಗಿಯೂ ಭಾವನೆಗಳ ರೋಲರ್ ಕೋಸ್ಟರ್ ಆಗಿದೆ. ಸ್ಟ್ಯಾಂಡ್‌ಗಳು ಸಹ ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸುವ ಭಾರತೀಯ ಮನರಂಜನಾ ಉದ್ಯಮದ ದೊಡ್ಡ ತಾರೆಗಳಿಂದ ಹರಿಯುವ ಹಾಜರಾತಿಯನ್ನು ಕಂಡವು. ನಾಲ್ಕು ರೋಮಾಂಚನಕಾರಿ ವಾರಾಂತ್ಯಗಳನ್ನು ವ್ಯಾಪಿಸಿದೆ ಮತ್ತು 20 ರೋಮಾಂಚಕ ಪಂದ್ಯಗಳನ್ನು ಒಳಗೊಂಡಿತ್ತು, CCL ಯಶಸ್ವಿಯಾಗಿ ವೈವಿಧ್ಯಮಯ ಪ್ರೇಕ್ಷಕರ ಗಮನವನ್ನು ಸೆಳೆಯಿತು, ಕೇವಲ ಕ್ರಿಕೆಟ್ ಉತ್ಸಾಹಿಗಳನ್ನು ಮೀರಿಸಿತ್ತು.

    ಪಂದ್ಯದ ನಂತರದ ಸಮಾರಂಭದಲ್ಲಿ, ಕಿಚ್ಚ ಸುದೀಪ್ ಹಂಚಿಕೊಂಡಿದ್ದಾರೆ, “ಇದು ಅದ್ಭುತವಾದ ಅಂತಿಮ ಪಂದ್ಯ ಎಂದು ನಾನು ಭಾವಿಸುತ್ತೇನೆ. ಫಿನಾಲೆ ಎಂದರೆ ಹೀಗೇ ಇರಬೇಕು. ಸೋತ ನಂತರ ನಾನು ಅಸಮಾಧಾನಗೊಳ್ಳದಿರುವುದು ಇದೇ ಮೊದಲು. ನನ್ನ ತಂಡಕ್ಕೆ ಅವರ ಪಾತ್ರವನ್ನು ತೋರಿಸಲು ನಾನು ಹೇಳುತ್ತೇನೆ ಮತ್ತು ಅವರು 2 ನೇ ಇನ್ನಿಂಗ್ಸ್‌ನಲ್ಲಿ ಅವರು ಆಡಿದ ರೀತಿ, ಅವರು ಬುಲ್ಡೋಜರ್‌ಗಳು ಎಂದು ತೋರಿಸಿದರು. ಹುಲಿಗಳು ಕೆಲಸ ಮಾಡಿದ್ದನ್ನು ನಾವು ನೋಡಬಹುದು. ಇದು ಅದ್ಭುತ ತಂಡ ಎಂದು ನಾನು ಭಾವಿಸುತ್ತೇನೆ. ಹೊರಗೆ ಕುಳಿತಿದ್ದ ಹೆಂಗಸರು ಅಪಾಯಕಾರಿ ಅಭಿವ್ಯಕ್ತಿಗಳನ್ನು ನೀಡಿದರು ಮತ್ತು ನಾನು ಉದ್ವಿಗ್ನಗೊಂಡೆ. ಉತ್ತಮ ಪ್ರದರ್ಶನವನ್ನು ನೀಡಿದ್ದಕ್ಕಾಗಿ ಸಿಬ್ಬಂದಿ ಮತ್ತು ಸಿಬ್ಬಂದಿಗೆ ದೊಡ್ಡ ಧನ್ಯವಾದಗಳು.” ಆರ್‌ಸಿಬಿ ಡಬ್ಲ್ಯುಪಿಎಲ್ ಗೆದ್ದಿರುವ ಬಗ್ಗೆ ಅವರು ಹಂಚಿಕೊಂಡಿದ್ದಾರೆ, “ಆರ್‌ಸಿಬಿ ಮಹಿಳಾ ತಂಡ ಗೆದ್ದಿದೆ. ಈ ಸಲ ಕಪ್ ನಮ್ದೆ ಮತ್ತು ಹುಡುಗರು ಈಗ ಒತ್ತಡದಲ್ಲಿದ್ದಾರೆ. ಅವರಿಗೆ ದೊಡ್ಡ ಅಭಿನಂದನೆಗಳು. ”

    ವಿಜೇತ ನಾಯಕ ಜಿಸ್ಶು ಸೇನ್‌ಗುಪ್ತಾ ಹಂಚಿಕೊಂಡಿದ್ದಾರೆ, “ಈ ಇಡೀ ತಂಡಕ್ಕೆ ಮತ್ತು ಅವರ ಕುಟುಂಬ ಮತ್ತು ಸ್ನೇಹಿತರಿಗೆ ನಾನು ಪ್ರತಿ ಕ್ಷಣಕ್ಕೂ ಋಣಿಯಾಗಿದ್ದೇನೆ. 9 ವರ್ಷಗಳಲ್ಲಿ ನಾವು ಕೆಳಗಿನಿಂದ ಚಾಂಪಿಯನ್ ಆಗಿದ್ದೇವೆ ಅಥವಾ ಕೆಳಗಿನಿಂದ 2 ನೇ ಸ್ಥಾನ ಪಡೆದಿದ್ದೇವೆ. ಯುವಕರು ನಿಜವಾಗಿಯೂ ಚೆನ್ನಾಗಿ ಮಾಡಿದ್ದಾರೆ. ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ ಮತ್ತು ಆದ್ದರಿಂದ ನಾವು ಚಾಂಪಿಯನ್ ಆಗಿದ್ದೇವೆ. ನನಗೆ ಹೇಳಲು ಪದಗಳಿಲ್ಲ, ನಾನು ತುಂಬಾ ಭಾವುಕನಾಗಿದ್ದೇನೆ. ಪಂದ್ಯದ ನಂತರದ ಸಮಾರಂಭದಲ್ಲಿ ಉಪಸ್ಥಿತರಿದ್ದ ಈ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರಿಗೆ, “ಹುಲಿಗಳು ತಮ್ಮ ಪಂಜರದಿಂದ ಹೊರಬಂದಿವೆ ಮತ್ತು ಆದ್ದರಿಂದ ನೀವು ಗೆದ್ದಿದ್ದೀರಿ!”

    ಕ್ರೀಡಾ ಮನೋಭಾವ ಮತ್ತು ಚುರುಕುತನದ ಸಂಪೂರ್ಣ ಪ್ರದರ್ಶನದೊಂದಿಗೆ, ಈ ಋತುವಿನಲ್ಲಿ, JioCinema ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿರುವುದು ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ ಅತ್ಯಂತ ಹಿಟ್ ಸೀಸನ್‌ಗಳಲ್ಲಿ ಒಂದಾಗಿದೆ. ಮೂರು ವಾರಗಳ ಮುಖಾಮುಖಿ ಮತ್ತು ಕೆಲವು ಉಗುರು ಕಚ್ಚುವಿಕೆಯ ಪಂದ್ಯಗಳ ನಂತರ, ಕರ್ನಾಟಕ ಬುಲ್ಡೋಜರ್ಸ್, ಬೆಂಗಾಲ್ ಟೈಗರ್ಸ್, ಮುಂಬೈ ಹೀರೋಸ್ ಮತ್ತು ಚೆನ್ನೈ ರೈನೋಸ್ ಕ್ವಾಲಿಫೈಯರ್‌ಗೆ ಮುನ್ನಡೆದವು.

    ಅಂತಿಮ ಪಂದ್ಯದ ಉನ್ನತ ಗೌರವಗಳು

    ಅತ್ಯುತ್ತಮ ಬ್ಯಾಟ್ಸ್‌ಮನ್ – ರಾಹುಲ್ ಮಜುಂದಾರ್ (ಬೆಂಗಾಲ್ ಟೈಗರ್ಸ್)

    ಅತ್ಯುತ್ತಮ ಬೌಲರ್ – ಚಂದನ್ (ಕರ್ನಾಟಕ ಬುಲ್ಡೋಜರ್ಸ್)

    ಪಂದ್ಯ ಶ್ರೇಷ್ಠ – ಜಮ್ಮಿ ಬ್ಯಾನರ್ಜಿ (ಬೆಂಗಾಲ್ ಟೈಗರ್ಸ್)

    ಸರಣಿಯ ಉನ್ನತ ಗೌರವಗಳು

    ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳು – ಜೆಜಮ್ಮಿ ಬ್ಯಾನರ್ಜಿ (ಬೆಂಗಾಲ್ ಟೈಗರ್ಸ್)

    ಅತ್ಯುತ್ತಮ ಬೌಲರ್ – ರಾಜ ಭರ್ವಾನಿ (ಮುಂಬೈ ಹೀರೋಸ್)

    ಸರಣಿ ಶ್ರೇಷ್ಠ – ರಾಹುಲ್ ಮಜುಂದಾರ್ (ಬೆಂಗಾಲ್ ಟೈಗರ್ಸ್)

  • ಸಿಸಿಎಲ್ 2024: ಮುಂಬೈ ವಿರುದ್ಧ ಗೆದ್ದ ಸುದೀಪ್ ಟೀಮ್

    ಸಿಸಿಎಲ್ 2024: ಮುಂಬೈ ವಿರುದ್ಧ ಗೆದ್ದ ಸುದೀಪ್ ಟೀಮ್

    ರಡು ದಿನಗಳ ಹಿಂದೆ ಅದ್ಧೂರಿಯಾಗಿ ಶುರುವಾಗಿರುವ ಸಿಲೆಬ್ರಿಟಿ ಕ್ರಿಕೆಟ್ ಲೀಗ್ ನಿನ್ನೆ ತನ್ನ ಮೊದಲ ಪಂದ್ಯವನ್ನು ಆಡಿದೆ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ (Karnataka Bulldozers). ನಿನ್ನೆ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಹೀರೋಸ್ (Mumbai Heroes) ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ ಗೆದ್ದು ಬೀಗಿದೆ.

    ಹತ್ತು ಓವರ್ ಗಳ ಈ ಪಂದ್ಯದಲ್ಲಿ ಬಾಲಿವುಡ್ ತಂಡವನ್ನು ರಿತೇಶ್ ದೇಶಮುಖ ಮುನ್ನಡೆಸುತ್ತಿದ್ದರೆ, ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ನಟ ಪ್ರದೀಪ್  ನಾಯಕರಾಗಿದ್ದರು. ಮೊದಲ ಇನ್ನಿಂಗ್ಸ್ ನಲ್ಲಿ ಮುಂಬೈ ಹೀರೋಸ್ ನೀರಸ ಪ್ರದರ್ಶನ ತೋರಿದ್ದರಿಂದ ಕರ್ನಾಟಕ ಬುಲ್ಡೋಜರ್ಸ್ ರೋಚಕ ಗೆಲುವು ಸಾಧಿಸಿತು.

     

    18 ಎಸೆತಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್ ನ ಡಾರ್ಲಿಂಗ್ ಕೃಷ್ಣ 55 ರನ್ ಗಳನ್ನು ಸಿಡಿಸಿ ಗಮನ ಸೆಳೆದರು. ಕರ್ನಾಟಕ ಬುಲ್ಡೋಜರ್ಸ್ ನ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಹೀರೋಸ್ ಸೋಲು ಅನುಭವಿಸಬೇಕಾಯಿತು.

  • CCL- ತೆಲುಗು ವಾರಿಯರ್ಸ್ ಜೊತೆ ಇಂದು ಸೆಣಸಲಿದೆ ಕಿಚ್ಚ ಸುದೀಪ್ ಟೀಮ್

    CCL- ತೆಲುಗು ವಾರಿಯರ್ಸ್ ಜೊತೆ ಇಂದು ಸೆಣಸಲಿದೆ ಕಿಚ್ಚ ಸುದೀಪ್ ಟೀಮ್

    ಕಿಚ್ಚ ಸುದೀಪ್ (Sudeep) ನೇತೃತ್ವದ ಕರ್ನಾಟಕ ಬುಲ್ಡೋಜರ್ ಟೀಮ್ ಇಂದು ತೆಲುಗು ವಾರಿಯರ್ಸ್ (Telugu Warriors) ವಿರುದ್ಧ ಸಿಸಿಎಲ್ (CCL) ಪಂದ್ಯದಲ್ಲಿ ಸೆಣಸಲಿದೆ. ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಸಿಸಿಎಲ್ ಪಂದ್ಯಾವಳಿಯಲ್ಲಿ 2023ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನಕ್ಕಾಗಿ ತೆಲುಗು ವಾರಿಯರ್ಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಜೈಪುರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ತಂಡಗಳು ಬೆಂಗಳೂರಿನಲ್ಲಿ ಇಂದು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ.

    ರಾಯಪುರ ಮತ್ತು ಜೈಪುರದಲ್ಲಿ ಎರಡು ದಿನಗಳ ಕಾಲ ಸಿಸಿಎಲ್ ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳನ್ನು ಮತ್ತು ಸಿನಿಮಾ ಪ್ರೇಕ್ಷಕರನ್ನು ಸೆಳೆದ ಈ ಪಂದ್ಯಗಳು ಅದೇ ರೋಚಕತೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯು ಪಂಜಾಬ್ ಮತ್ತು ತೆಲುಗು ವಾರಿಯರ್ಸ್ ನಂತರ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯಗಳು ಏರ್ಪಡಲಿವೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಇಂದು ಮಧ್ಯಾಹ್ನ 2.30 ರಿಂದ ಸಂಜೆ 6.30ರವರೆಗೆ ಪಂಜಾಬ್ ಡಿ ಶೇರ್ ಮತ್ತು ತೆಲುಗು ವಾರಿಯರ್ಸ್ ನಡುವೆ ಪಂದ್ಯವಿದ್ದರೆ, ಸಂಜೆ 7 ಗಂಟೆಯಿಂದ ರಾತ್ರಿ 11ರವರೆಗೆ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯವಿದೆ. ಈ ಪಂದ್ಯದಲ್ಲಿ ಕಿಚ್ಚ ಸುದೀಪ್, ಪ್ರದೀಪ್, ಆರ್ಯ, ಅಖಿಲ್ ಅಕ್ಕಿನೇನಿ, ಸೋನು ಸೂದ್ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಲಿದ್ದಾರೆ.

  • CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

    CCL 2023 ಬೆಂಗಳೂರಿನಲ್ಲಿ : ಕಿಚ್ಚನ ಟೀಮ್ ಜೊತೆ ತೆಲುಗು ವಾರಿಯರ್ಸ್ ರೋಚಕ ಪಂದ್ಯ

    ನಾಳೆ ಬೆಂಗಳೂರಿನಲ್ಲಿ ನಡೆಯಲಿರುವ ಸಿಸಿಎಲ್ (CCL) ಪಂದ್ಯಾವಳಿಯಲ್ಲಿ 2023ನೇ ಸಾಲಿನ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ಪ್ರಯತ್ನಕ್ಕಾಗಿ ತೆಲುಗು ವಾರಿಯರ್ಸ್ (Telugu Warriors) ಮತ್ತು ಕರ್ನಾಟಕ ಬುಲ್ಡೋಜರ್ಸ್ (Karnataka Bulldozers) ಕ್ರಮವಾಗಿ ಪಂದ್ಯಗಳನ್ನು ಆಡಲಿವೆ. ಜೈಪುರದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿರುವ ತಂಡಗಳು ಬೆಂಗಳೂರಿನಲ್ಲಿ ಮಾರ್ಚ್ 4 ರಂದು ಪಂದ್ಯಗಳನ್ನು ಆಯೋಜನೆ ಮಾಡಲಾಗಿದೆ. ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ.

    ರಾಯಪುರ ಮತ್ತು ಜೈಪುರದಲ್ಲಿ ಎರಡು ದಿನಗಳ ಕಾಲ ಸಿಸಿಎಲ್ ಪಂದ್ಯಗಳು ನಡೆದಿವೆ. ಕ್ರಿಕೆಟ್ ಅಭಿಮಾನಿಗಳನ್ನು ಮತ್ತು ಸಿನಿಮಾ ಪ್ರೇಕ್ಷಕರನ್ನು ಸೆಳೆದ ಈ ಪಂದ್ಯಗಳು ಅದೇ ರೋಚಕತೆಯನ್ನು ಬೆಂಗಳೂರಿನಲ್ಲಿ ಮುಂದುವರೆಸಲಿವೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯಾವಳಿಯು ಪಂಜಾಬ್ ಮತ್ತು ತೆಲುಗು ವಾರಿಯರ್ಸ್ ನಂತರ ಚೆನ್ನೈ ರೈನೋಸ್ (Chennai Rhinos) ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯಗಳು ಏರ್ಪಡಲಿವೆ. ಇದನ್ನೂ ಓದಿ: ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ಮಾರ್ಚ್ 4 ರಂದು ಮಧ್ಯಾಹ್ನ 2.30 ರಿಂದ ಸಂಜೆ 6.30ರವರೆಗೆ ಪಂಜಾಬ್ ಡಿ ಶೇರ್ (Punjab D Sher) ಮತ್ತು ತೆಲುಗು ವಾರಿಯರ್ಸ್ ನಡುವೆ ಪಂದ್ಯವಿದ್ದರೆ, ಸಂಜೆ 7 ಗಂಟೆಯಿಂದ ರಾತ್ರಿ 11ರವರೆಗೆ ಚೆನ್ನೈ ರೈನೋಸ್ ಮತ್ತು ಕರ್ನಾಟಕ ಬುಲ್ಡೋಜರ್ಸ್ ನಡುವೆ ಪಂದ್ಯವಿದೆ. ಈ ಪಂದ್ಯದಲ್ಲಿ ಕಿಚ್ಚ ಸುದೀಪ್ (Sudeep), ಪ್ರದೀಪ್, ಆರ್ಯ, ಅಖಿಲ್ ಅಕ್ಕಿನೇನಿ, ಸೋನು ಸೂದ್ ಸೇರಿದಂತೆ ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿ ಚಿತ್ರರಂಗದ ಹಲವು ಕಲಾವಿದರು ಭಾಗಿಯಾಗಲಿದ್ದಾರೆ.

  • ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ಕೇರಳ ಸ್ಟ್ರೈಕರ್ಸ್‌ ಮೇಲೆ ಕರ್ನಾಟಕ ಬುಲ್ಡೋಜರ್ಸ್‌ ಸವಾರಿ – ಕಿಚ್ಚನ ಸೈನ್ಯಕ್ಕೆ 8 ವಿಕೆಟ್‌ಗಳ ಭರ್ಜರಿ ಜಯ

    ತಿರುನಂತಪುರಂ: ಭರ್ಜರಿ ಬ್ಯಾಟಿಂಗ್‌ ಹಾಗೂ ಸಂಘಟಿತ ಬೌಲಿಂಗ್‌ ದಾಳಿ ನೆರವಿನಿಂದ ಕಿಚ್ಚ ಸುದೀಪ್‌ (Kiccha Sudeep) ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್‌ (Karnataka Bulldozers) ತಂಡವು ಕೇರಳ ಸ್ಟ್ರೈಕರ್ಸ್‌ (Kerala Strikers) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

    ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಕೇರಳ ಸ್ಟ್ರೈಕರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಮೂಲಕ ಆಡಿದ ಎರಡೂ ಪಂದ್ಯಗಳನ್ನು ಗೆದ್ದ ಕರ್ನಾಟಕ ಬುಲ್ಡೋಜರ್ಸ್ ಪಾಯಿಂಟ್ ಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದನ್ನೂ ಓದಿ: KCC 2023: ನಿನ್ನೆ ಪಂದ್ಯದಲ್ಲಿ ಸೋತವರು ಯಾರು? ಗೆದ್ದವರು ಯಾರು?

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 101 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟರ್ ರಾಜೀವ್ ಪಿಳ್ಳೈ 32 ಎಸೆತಗಳಲ್ಲಿ 54 ರನ್ (4 ಬೌಂಡರಿ 3 ಸಿಕ್ಸರ್) ಸಿಡಿಸಿದರೆ, ನಾಯಕ ಉನ್ನಿ ಮುಕುಂದನ್ 10 ಎಸೆತಗಳಲ್ಲಿ 19 ರನ್ ಗಳಿಸಿ ತಂಡಕ್ಕೆ ನೆರವಾದರು.

    ಈ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಪರ ಕರಣ್ ಆರ್ಯಾನ್ 2 ಓವರ್ ಗಳಲ್ಲಿ 20 ರನ್ ನೀಡಿ 2 ವಿಕೆಟ್ ಪಡೆದರೇ, ಜಯರಾಮ್ ಕಾರ್ತಿಕ್, ಪ್ರದೀಪ್ ಬೋಗಾದಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ತಲಾ ಒಂದೊಂದು ವಿಕೆಟ್ ಕಿತ್ತರು. ಇದನ್ನೂ ಓದಿ: KCC-2023: ಪಂದ್ಯ ಗೆದ್ದು ಅಪ್ಪುಗೆ ಕೆಸಿಸಿ ಕಪ್ ಅರ್ಪಿಸಿದ ಧನಂಜಯ್ ಟೀಮ್

    2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮಾಡಿದ ಕರ್ನಾಟಕ 5 ವಿಕೆಟ್ ಕಳೆದುಕೊಂಡು 124 ರನ್ ಗಳಿಸುವ ಮೂಲಕ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಈ ವೇಳೆ ಪ್ರದೀಪ್ ಬೋಗಾದಿ ಮತ್ತು ಡಾರ್ಲಿಂಗ್ ಕೃಷ್ಣ ಉತ್ತಮ ಶುಭಾರಂಭ ನೀಡಿದ್ದರು. ಕೃಷ್ಣ 13 ಎಸೆತಗಳಲ್ಲಿ 20 ರನ್ ಗಳಿಸಿದರೆ, ಪ್ರದೀಪ್ 29 ಎಸೆತಗಳಲ್ಲಿ 59 ರನ್ (7 ಬೌಂಡರಿ 2 ಸಿಕ್ಸರ್) ಚಚ್ಚಿ ಮಿಂಚಿದರು. ರಾಜೀವ್ ಹನು, ಕರಣ್ ಆರ್ಯಾನ್ ತಲಾ 13 ರನ್ ಗಳಿಸಿದರು.

    3ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕೇರಳ ಸ್ಟ್ರೈಕರ್ಸ್ ತಂಡ 5 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ರಾಜೀವ್ ಪಿಳ್ಳೈ 18 ಎಸೆತಗಳಲ್ಲಿ 43 ರನ್ (3 ಬೌಂಡರಿ 3 ಸಿಕ್ಸರ್) ಚಚ್ಚಿ ಕೇರಳ ತಂಡಕ್ಕೆ ನೆರವಾದರು. ಆದರೆ 23 ರನ್‌ಗಳ ಮುನ್ನಡೆ ಕಾಯ್ದುಕೊಂಡಿದ್ದ ಕರ್ನಾಟಕ ತಂಡಕ್ಕೆ ಗೆಲುವಿಗಾಗಿ 83 ರನ್‌ಗಳ ಅವಶ್ಯಕತೆಯಿತ್ತು.

    ಈ ವೇಳೆ ಆರಂಭಿಕರಾಗಿ ಕಣಕ್ಕಿಳಿದ ರಾಜೀವ್ ಹನು ಮತ್ತು ಜಯರಾಮ್ ಕಾರ್ತಿಕ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರಾಜೀವ್ ಹನು 14 ಎಸೆತಗಳಲ್ಲಿ 34 ರನ್ (3 ಬೌಂಡರಿ 2 ಸಿಕ್ಸರ್) ಗಳಿಸಿದರೇ, ಜಯರಾಮ್ ಕಾರ್ತಿಕ್ 13 ಎಸೆತಗಳಲ್ಲಿ 31 ರನ್ (5 ಬೌಂಡರಿ 1 ಸಿಕ್ಸರ್) ಗಳಿಸಿದರು. ಒಟ್ಟು 6.4 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದ ಕರ್ನಾಟಕ ಬುಲ್ಡೋಜರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಸಿಸಿಎಲ್ 20 ಪಂದ್ಯಾವಳಿಯಲ್ಲಿ 4 ಇನ್ನಿಂಗ್ಸ್‌ಗಳಲ್ಲಿ ಆಡಲಾಗುತ್ತದೆ. ಪ್ರತಿ 10 ಓವರ್ ಗಳಿಗೆ ಒಂದು ಇನ್ನಿಂಗ್ಸ್ ಎಂದು ಪರಿಗಣಿಸಲಾಗುತ್ತದೆ.