Tag: Karnataka Band

  • ಬಂದ್‍ಗೆ ಬೆಂಬಲವಿಲ್ಲ, ಆದ್ರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು – ಉರುಳು ಸೇವೆ ಮಾಡಿದ ಪ್ರತಿಭಟನಾಕಾರರು

    ಬಂದ್‍ಗೆ ಬೆಂಬಲವಿಲ್ಲ, ಆದ್ರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಬರಬೇಕು – ಉರುಳು ಸೇವೆ ಮಾಡಿದ ಪ್ರತಿಭಟನಾಕಾರರು

    ಬೆಂಗಳೂರು: ಡಾ. ಸರೋಜಿನಿ ಮಹಿಷಿಯವರ ಪರಿಷ್ಕೃತ ವರದಿ ಜಾರಿಗೆ ಆಗ್ರಹಿಸಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿಗಾಗಿ ಆಗ್ರಹಿಸಿ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ನಮ್ಮ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಐಬಿ ಸರ್ಕಲ್‍ನಲ್ಲಿ ಜಮಾಯಿಸಿ ಉರುಳು ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಬಂದ್‍ಗೆ ವಿರೋಧ ವ್ಯಕ್ತಪಡಿಸಿ ಬಂದ್‍ನಿಂದ ಯಾವುದೇ ಪ್ರಯೋಜನವಿಲ್ಲ, ಬಂದ್ ನಿಂದ ಕೇವಲ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅನಾನುಕೂಲ ಹೀಗಾಗಿ ಕರ್ನಾಟಕ ಬಂದ್‍ಗೆ ನಮ್ಮ ವಿರೋಧವಿದೆ. ಆದರೆ ಡಾ. ಸರೋಜಿನಿ ಮಹಿಷಿ ಪರಿಷ್ಕೃತ ವರದಿ ಕೂಡಲೇ ಜಾರಿಗೆ ಬರುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

    ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ರಾಜ್ಯಾಧ್ಯಕ್ಷ ಮಾತನಾಡಿ, ಈ ಬಂದ್ ಜನಸಾಮಾನ್ಯರಿಗೆ ಮತ್ತಷ್ಟು ಸಮಸ್ಯೆ ತಂದಿದೆ. ನಾವು ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯಬೇಕು ಇಂತಹ ಬಂದ್‍ಗೆ ನಮ್ಮ ಸಂಘಟನೆಯ ವಿರೋಧ ಇದೆ ಎಂದು ತಿಳಿಸಿದರು.

  • ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ ಮಹಾಶಯ

    ಬಂದ್ ನಡುವೆ ‘ಎಣ್ಣೆ ಡ್ಯಾನ್ಸ್’- ನಾನೇ ಮಂತ್ರಿ ಎಂದ ಕುಡುಕ ಮಹಾಶಯ

    ಬೆಂಗಳೂರು : ಇಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಟೌನ್ ಹಾಲ್ ಬಳಿ ಹಾಕಿದ್ದ ಬ್ಯಾರಿಕೇಡ್ ಸರಿಸಿ ಒಳಗೆ ನುಗ್ಗಿದ ಕುಡುಕನೋರ್ವ ಭರ್ಜರಿ ಸ್ಟೆಪ್ಸ್ ಹಾಕಿದ್ದಾನೆ.

    ನಗರದ ಮೆಜೆಸ್ಟಿಕ್, ರೈಲ್ವೇ ನಿಲ್ದಾಣ ಸೇರಿದಂತೆ ಬಹುತೇಕ ಕಡೆ ಬಿಗಿ ಭದ್ರತೆಗಾಗಿ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಅದರಂತೆ ನಗರದ ಟೌನ್ ಹಾಲ್ ನಲ್ಲಿಯೂ ಮುಂಜಾಗ್ರತಾ ಕ್ರಮವಾಗಿ ಎರಡೂ ಕೆಎಸ್‍ಆರ್ ಪಿ ತುಕಡಿ ಹಾಗೂ 100 ಜನರ ಪೊಲೀಸ್ ಬ್ಯಾರಿಕೇಡ್ ಸರ್ಪಗಾವಲನ್ನು ಹಾಕಲಾಗಿತ್ತು. ಇದರ ನಡುವೆ ಬ್ಯಾರಿಕೇಡ್ ಒಳಗೆ ನುಗ್ಗಿದ ಫುಲ್ ಟೈಟಾಗಿದ್ದ ಕುಡುಕನೊಬ್ಬ ಭರ್ಜರಿ ಸ್ಪೆಪ್ಸ್ ಹಾಕಿದ್ದಾನೆ. ಅದು ಮಟ ಮಟ ಮಧ್ಯಾಹ್ನ, ಸುಡು ಬಿಸಿಲಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾನೆ.

    ತನ್ನ ಸುತ್ತ ಪೊಲೀಸರು ಇದ್ರೂ, ಕುಡುಕ ಮಹಾಶಯ ಸ್ವಲ್ಪವೂ ವಿಚಲಿತನಾಗದೇ ರಸ್ತೆಯಲ್ಲೇ ಭರ್ಜರಿ ಕುಣಿದಿದ್ದಾನೆ. ಜೊತೆಗೆ ಟೌನ್ ಹಾಲ್ ನನ್ನದೇ ಅಂತಾ ಸಾರ್ವಜನಿಕರಿಗೆ ಡೋಂಟ್ ಕೇರ್ ಎಂದಿದ್ದಾನೆ. ನಾನೇ ಮಂತ್ರಿ ಅಂತಾ ಬಂಧಿಸಲು ಬಂದ ಪೊಲೀಸರಿಗೆ ಫುಲ್ ಆವಾಜ್ ಹಾಕಿದ್ದಾನೆ. ಜೊತೆಗೆ ಮುಖ್ಯಮಂತ್ರಿಗಳಿಗೆ ಕಾಲ್ ಮಾಡ್ತೇನೆ ಅಂತಾ ಪೋಲಿಸ್ರಿಗೆ ವಾರ್ನ್ ಮಾಡಿದ್ದಾನೆ. ನಂತರ ಪೊಲೀಸರು ಕುಡುಕನನ್ನು ಸ್ಥಳದಿಂದ ಬೇರೆಯೆಡೆಗೆ ಕಳುಹಿಸಿದ್ದಾರೆ.

  • ಕೆಲವರು ಸಮಯ ಬಂದಾಗಷ್ಟೇ ವರದಿಗಳ ಬಗ್ಗೆ ಹೇಳ್ಕೊಂಡು ತಿರುಗುತ್ತಾರೆ: ಎಚ್‍ಡಿಡಿ ಬೇಸರ

    ಕೆಲವರು ಸಮಯ ಬಂದಾಗಷ್ಟೇ ವರದಿಗಳ ಬಗ್ಗೆ ಹೇಳ್ಕೊಂಡು ತಿರುಗುತ್ತಾರೆ: ಎಚ್‍ಡಿಡಿ ಬೇಸರ

    ರಾಯಚೂರು: ಕರ್ನಾಟಕ ಬಂದ್ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕೆಲವರು ಸಮಯ ಬಂದಾಗ ವರದಿಗಳ ಬಗ್ಗೆ ಹೇಳಿಕೊಂಡು ತಿರುಗುತ್ತಾರೆ. ಕರ್ನಾಟಕ ಬಂದ್‍ಗೆ ಬಗ್ಗೆ ನನಗೆ ಹೆಚ್ಚು ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

    ರಾಯಚೂರಿನಲ್ಲಿ ಮಾತನಾಡಿದ ಅವರು, ಡಾ. ಸರೋಜಿನಿ ಮಹಿಷಿ, ನಂಜುಂಡಪ್ಪ ವರದಿ 40 ವರ್ಷಗಳಿಂದ ಚರ್ಚೆಯಲ್ಲಿವೆ. ವರದಿಗಳ ಬಗ್ಗೆ ವಿಶ್ಲೇಷಣೆ ಮಾಡಿ ತಿಳಿದುಕೊಳ್ಳಬೇಕು. ಪ್ರತಿಯೊಂದಕ್ಕೂ ಬಂದ್ ಅಂದರೆ ಹೇಗೆ ಎಂದು ಬೇಸರ ವ್ಯಕ್ತಪಡಿಸಿದರು.

    ರಾಜ್ಯ ರಾಜಕಾರಣದ ಬಗ್ಗೆ ಮಾತನಾಡಿ, ಬಿಜೆಪಿ ಮೂರು ವರ್ಷ ಪೂರೈಸಲಿ ಅವರೇ ಸಿಎಂ ಆಗಿ ಕೆಲಸ ಮಾಡಲು ನನ್ನ ವಿರೋಧವಿಲ್ಲ ಎಂದರು. ಬಿಜೆಪಿ ಬಂದ ಮೇಲೆ ಭಷ್ಟಾಚಾರ ಹೆಚ್ಚಾಗಿದೆ ಎಂದು ಅವರೇ ಹೇಳಿದ್ದಾರೆ ನಾನು ಹೇಳಿಲ್ಲ. ಮುಚ್ಚುಮರೆಯಿಲ್ಲದೆ ಬಿಜೆಪಿ ಹೇಳಿಕೊಳ್ಳುತ್ತಿದೆ ಅದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು. ಅವರ ಪಕ್ಷದವರೇ ಭ್ರಷ್ಟಚಾರದ ಬಗ್ಗೆ ಹೈಕಮಾಂಡಗೆ ದೂರು ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

    ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಅನೇಕ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ದೆಹಲಿಯಲ್ಲಿ ಶೇಕಡಾವಾರು ಮತದಾನ ಬಿಜೆಪಿಗೆ ಕಡಿಮೆಯಾಗಿದೆ. ದೆಹಲಿ ಫಲಿತಾಂಶ ಕಾಂಗ್ರೆಸ್, ಬಿಜೆಪಿಗೆ ಒಂದು ಪಾಠ ಎಂದು ಕಿಡಿಕಾರಿದರು. ಮುಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ಕಷ್ಟ ಇದೆ. ತಮಿಳುನಾಡು, ಕೇರಳದಲ್ಲಿ ಕಷ್ಟವಾಗುತ್ತೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಅಸ್ಥಿತ್ವ ಇಲ್ಲ ಎಂದು ಹೇಳಿದರು.

    ರಾಜಕೀಯ ವಾಸ್ತವಾಂಶಗಳ ಪುಸ್ತಕ ಬಿಡುಗಡೆ ಮಾಡುತ್ತೇನೆ. ಪುಸ್ತಕದಲ್ಲಿ ರಾಜಕೀಯ ವಿಚಾರಗಳು ಎಲ್ಲವೂ ಇವೆ. ಒಂದೂವರೆ ತಿಂಗಳಲ್ಲಿ ಪುಸ್ತಕ ಬಿಡುಗಡೆ ಆಗುತ್ತೆ. ಕೇಂದ್ರ ಸರ್ಕಾರ ನೀರಾವರಿ ಯೋಜನೆಗೆ ಮಹತ್ವ ಕೊಟ್ಟಿಲ್ಲ. ಮೋದಿ ಅವರ ಸ್ವಭಾವ ಬೇರೆಯಿದೆ ನಾನು ಯಾರ ಮನೆ ಬಾಗಿಲಿಗೆ ಹೋಗಿ ಮನವಿ ಮಾಡಲ್ಲ ಎಂದು ಎಚ್‍ಡಿಡಿ ಕಿಡಿಕಾರಿದರು.