Tag: karnatak elections2018

  • ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ- ಅನಂತ್ ಕುಮಾರ್

    ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ- ಅನಂತ್ ಕುಮಾರ್

    ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕವಾಗಿ ಹೊರಬಿದ್ದಿದ್ದು, ಬಿಜೆಪಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಅಂತ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

    ಸುದ್ದಿಗಾರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯನವರು ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಅಂದ್ರೆ ಕಾಂಗ್ರೆಸ್ ಮುಕ್ತ ಕರ್ನಾಟಕ ಅನ್ನೋದು ಮೋದಿಯವರ ಉಚ್ಛಾರ, ಅಮಿತ್ ಶಾ ಅವರ ಒಂದು ಮುಂದಾಳತನ ಹಾಗೂ ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕದ ಜನ ಸಂಪೂರ್ಣವಾಗಿ ಆಶೀರ್ವಾದ ಮಾಡಿದ್ದಾರೆ ಅಂದ್ರು.

    ಜನ ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಒಂದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಜೆಡಿಎಸ್ ಕೂಡ ಗಣನೀಯವಾಗಿ ಗೆದ್ದಿದೆ. ಆದ್ರೆ ಕಾಂಗ್ರೆಸ್ ವಿರೋಧಿ ಮತ ಇಂದು ಜನ ಕೊಟ್ಟಿರುವುದರಿಂದ ಇಲ್ಲಿ ಮುಂದಿನ ಹೆಜ್ಜೆ ಏನಾಗಬೇಕು ಅಂತ ನಾವು ನಮ್ಮ ಕೇಂದ್ರೀಯ ನಾಯಕರುಗಳ ಜೊತೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಅಂತ ಹೇಳಿದ್ರು.

  • ಇಂದು ಸಂಜೆ 5 ಗಂಟೆಗೆ ಮನೆಮನೆ ಪ್ರಚಾರ ಅಂತ್ಯ – ನಾಳೆ ಬೆಳಗ್ಗೆ 7ರಿಂದ ಮತದಾನ ಶುರು

    ಇಂದು ಸಂಜೆ 5 ಗಂಟೆಗೆ ಮನೆಮನೆ ಪ್ರಚಾರ ಅಂತ್ಯ – ನಾಳೆ ಬೆಳಗ್ಗೆ 7ರಿಂದ ಮತದಾನ ಶುರು

    ಬೆಂಗಳೂರು: ಜಿದ್ದಾಜಿದ್ದಿ, ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. 223 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಲಿದೆ.

    ಈಗಾಗಲೇ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಕದನ ಕಲಿಗಳು ಮನೆಮನೆ ಪ್ರಚಾರಕ್ಕಿಳಿದಿದ್ದಾರೆ. ಇಂದು ಸಂಜೆ 5 ಗಂಟೆ ತನಕ ಮನೆಮನೆ ಪ್ರಚಾರಕ್ಕೆ ಅವಕಾಶವಿದ್ದು, ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ನಡೆಸಲಿದ್ದಾರೆ.

    ಹೈವೋಲ್ಟೇಜ್ ಕ್ಷೇತ್ರ ಬದಾಮಿಯಲ್ಲಿ ಶುಕ್ರವಾರ ರಾತ್ರಿಯೇ ಮನೆಮನೆ ಪ್ರಚಾರ ನಡೀತು. ಬದಾಮಿ ಮಾಜಿ ಶಾಸಕ ಎಂ.ಕೆ ಪಟ್ಟಣಶೆಟ್ಟಿ ಶ್ರೀರಾಮುಲು ಪರ ಮನೆ ಮನೆಗೆ ತೆರಳಿ ಮತಯಾಚಿಸಿದ್ರು. ಜೆಡಿಎಸ್ ತಾಲೂಕು ಅಧ್ಯಕ್ಷ ಅಪ್ಪಣ್ಣ ಹಿರೇಹಾಳ, ಅಭ್ಯರ್ಥಿ ಹನುಮಂತ ಮಾವಿನ ಮರದ ಪರ ಪ್ರಚಾರ ನಡೆಸಿದ್ರು. ಇಂದು ಕೂಡ ಮನೆ ಮನೆ ಪ್ರಚಾರ ಮತ್ತಷ್ಟು ರಂಗೇರಲಿದೆ.