Tag: karnata election 2023

  • ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

    ಬೆಂಗ್ಳೂರಲ್ಲಿ ಮತ್ತೆ ಮೋದಿ ಕ್ಯಾಂಪೇನ್- 38 ಕಿ.ಮೀಟರ್ ರೋಡ್ ಶೋಗೆ ಪ್ಲ್ಯಾನ್

    – ಪ್ರಧಾನಿ ಸಚಿವಾಲಯದಿಂದ ಸಿಗುತ್ತಾ ಸಿಗ್ನಲ್..?

    ಬೆಂಗಳೂರು: ಕರ್ನಾಟಕ ಕಬ್ಜಾಗೆ ಕಸರತ್ತು ನಡೆಸ್ತಿರೋ ಬಿಜೆಪಿ (BJP) ಪಾಳಯ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಬೆಂಗಳೂರಲ್ಲಿ ಮೊನ್ನೆಯಷ್ಟೇ ರೋಡ್ ಶೋ ನಡೆಸಿದ್ದ ಮೋದಿ (Narendra Modi) ಮತ್ತೊಮ್ಮೆ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ. ಬೆಂಗಳೂರನ್ನು ಗೆಲ್ಲಲು 23 ಕ್ಷೇತ್ರಗಳನ್ನು ಕವರ್ ಮಾಡಲು ಬೃಹತ್ ರೋಡ್ ಶೋ ನಡೆಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದ್ಯಂತೆ.

    ಅದು ಗುಜರಾತ್ ಚುನಾವಣೆ (Gujarat Election) ಸಂದರ್ಭ. ಮತದಾನದಕ್ಕೆ ಮೂರು ದಿನ ಇರುವಾಗ ಬರೋಬ್ಬರಿ 50 ಕಿಲೋಮೀಟರ್ ರೋಡ್ ಶೋ ನಡೆಸಿ ಪಕ್ಷದ ಭಾರೀ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ರು. ಇದೀಗ ಅಂಥಾದ್ದೇ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಮೋದಿ ಪ್ಲಾನ್ ಮಾಡ್ಕೊಂಡಿದ್ದಾರೆ. ಮೇ 6ರಂದು ಅಂದರೆ ಇದೇ ಶನಿವಾರ ಬೆಂಗಳೂರಿನಲ್ಲಿ ಮೋದಿ ಮೆಗಾ ರೋಡ್ ಶೋ (Modi Mega Road Show) ಆಯೋಜಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಚರ್ಚೆಗಳು ನಡೆದಿವೆ.

    ಮೇ 6ರಂದು ಬೆಳಗ್ಗೆ ಬೆಂಗಳೂರು ಸೆಂಟ್ರಲ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮೋದಿಯವರ ನೇತೃತ್ವದಲ್ಲಿ ಎಂಟು ಕಿಲೋಮೀಟರ್ ರೋಡ್ ಶೋ ಆಯೋಜಿಸುವುದು. ಮತ್ತು ಅದೇ ದಿನ ಸಂಜೆ ಕೋಣನಕುಂಟೆಯಿಂದ ಮಲ್ಲೇಶ್ವರಂನ ಮಾರಮ್ಮ ಸರ್ಕಲ್ ವರೆಗೂ ಅಂದ್ರೆ 30 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಬಿಜೆಪಿ ಪ್ಲಾನ್ ಮಾಡಿದೆ. 30 ಕಿಲೋಮೀಟರ್ ರೋಡ್ ಶೋ ಮೂಲಕ ಬೆಂಗಳೂರಿನ 23 ಮತ ಕ್ಷೇತ್ರಗಳನ್ನು ಕವರ್ ಮಾಡಲಾಗುತ್ತದೆ. ಇದನ್ನೂ ಓದಿ: ಬಿಜೆಪಿ ಜನರ ಆಶೀರ್ವಾದದಿಂದಲ್ಲ ಕಳ್ಳತನ ಮಾಡಿದ ಸರ್ಕಾರ, ಕಾಂಗ್ರೆಸ್‍ಗೆ ಪೂರ್ಣ ಬಹುಮತ ಕೊಡಿ: ರಾಹುಲ್ ಮನವಿ

    ಬಿಗ್ ರೋಡ್ ಶೋ: ಬ್ರಿಗೇಡ್ ಮಿಲೇನಿಯಂ, ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮ, ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್, ಸ್ಯಾಂಕಿಟ್ಯಾಂಕ್.

    ಸಂಜೆ ಮೋದಿ ನಡೆಸಲಿರೋ ರೂಟ್ ಮ್ಯಾಪ್ ನೋಡೋದಾದ್ರೆ ಬ್ರಿಗೇಡ್ ಮಿಲೇನಿಯಂನಿಂದ ರೋಡ್ ಶುರುವಾಗಿ ಸಾರಕ್ಕಿ ಮಾರ್ಕೆಟ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ಬಸವನಗುಡಿ, ರಾಮಕೃಷ್ಣ ಆಶ್ರಮದವರೆಗೆ ರೋಡ್ ನಡೆಸಲಾಗುತ್ತೆ. ಅಲ್ಲಿಂದ ಚಾಮರಾಜಪೇಟೆ, ಮಕ್ಕಳಕೂಟ, ವಿವಿ ಪುರಂ, ಟೌನ್‍ಹಾಲ್, ಮೆಜೆಸ್ಟಿಕ್, ಮಾಗಡಿ ರೋಡ್, ಟೋಲ್‍ಗೇಟ್, ಮಹಾಲಕ್ಷ್ಮೀ ಲೇಔಟ್ ಬರಲಿರುವ ರೋಡ್ ಮಲ್ಲೇಶ್ವರಂನ ಸ್ಯಾಂಕಿಟ್ಯಾಂಕ್‍ನಲ್ಲಿ ಮುಕ್ತಾಯವಾಗಲಿದೆ.

    ಯಾವ ಕ್ಷೇತ್ರದಲ್ಲಿ ಮೋದಿ ಮೇನಿಯಾ..?:
    1. ಬೆಂಗಳೂರು ದಕ್ಷಿಣ
    2. ಜಯನಗರ
    3. ಪದ್ಮನಾಭನಗರ
    4. ಬಸವನಗುಡಿ
    5. ಚಾಮರಾಜಪೇಟೆ
    6. ಚಿಕ್ಕಪೇಟೆ
    7. ಗಾಂಧಿನಗರ
    8. ಗೋವಿಂದರಾಜನಗರ
    9. ರಾಜಾಜಿನಗರ
    10. ಮಹಾಲಕ್ಷ್ಮಿಲೇಔಟ್
    11. ಮಲ್ಲೇಶ್ವರಂ

    ಬೆಂಗಳೂರಲ್ಲಿ ಮೋದಿ ಮತ್ತೆ ಈ ರೋಡ್ ಶೋಗೆ ಪ್ಲ್ಯಾನ್ ಮಾಡಿರೋ ಹಿಂದೆ ಸಾಕಷ್ಟು ಲೆಕ್ಕಾಚಾರಗಳಿವೆ. ಮೋದಿ ರೋಡ್ ಇಂದ ಬೆಂಗಳೂರು ದಕ್ಷಿಣ, ಜಯನಗರ, ಪದ್ಮನಾಭನಗರ, ಬಸವನಗುಡಿ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಗೋವಿಂದರಾಜನಗರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್ ಸೇರಿದಂತೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪ್ರಭಾವ ಬೀರೋದು ಪಕ್ಕಾ ಆಗಿದೆ.

    ಒಟ್ಟಿನಲ್ಲಿ ಈ ರಸ್ತೆಯಲ್ಲೆಲ್ಲಾ ರೋಡ್ ಶೋ ನಡೆಸೋ ಮೂಲಕ ಬೆಂಗಳೂರಿನಲ್ಲಿ ಬಿಜೆಪಿ ಅಲೆ ಎಬ್ಬಿಸಲು ಕೇಸರಿ ಪಡೆ ಪ್ಲಾನ್ ಮಾಡ್ಕೊಂಡಿದೆ. ಇದಕ್ಕೆ ಪ್ರಧಾನಿ ಸಚಿವಾಲಯದಿಂದ ಇನ್ನಷ್ಟೇ ಅನುಮೋದನೆ ಸಿಗಬೇಕಿದೆ.

  • ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ

    ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ: ಕುಸುಮಾ ಶಿವಳ್ಳಿ

    ಹುಬ್ಬಳ್ಳಿ: ನನ್ನ ಪತಿ ಇಲ್ಲದಿರುವ ನೋವು ನನಗೆ ಕಾಡುತ್ತಿದೆ ಎಂದು ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ‌ (Kusuma Shivalli) ಭಾವುಕರಾಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಪತಿ ಇರುತ್ತಿದ್ದರೆ ನಮ್ಮ ಕುಟುಂಬಕ್ಕೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಸೋಮವಾರ ನನಗೆ ನಿಂದನೆ ಮಾಡಿರುವವರನ್ನು ನಾನು ತಂದೆ ಸಮಾನ ಅಂದುಕೊಂಡಿದ್ದೆ. ಆದರೆ ಅವರು ಈ ರೀತಿಯಾಗಿ ಮಾತನಾಡುತ್ತಾರೆಂದು ಅಂದುಕೊಂಡಿರಲಿಲ್ಲ. ನಾನು ನನ್ನ ಪತಿ ಸ್ಥಾನವನ್ನು ತುಂಬುತ್ತೇನೆ ಎಂದರು.

    ಕುಂದಗೋಳ ಕ್ಷೇತ್ರ (Kundagola Constituency) ದ ಜನತೆ ನನ್ನ ನಮ್ಮ ಕುಟುಂಬದ ಮೇಲೆಟ್ಟಿರುವ ನಂಬಿಕೆ ಉಳಿಸಿಕೊಳ್ಳುತ್ತೇನೆ. ಈ ಬಾರಿ ಟಿಕೆಟ್ ನೀಡುವ ಭರವಸೆಯನ್ನು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನೀಡಿದ್ದಾರೆ ಎಂದು ಕುಸುಮಾ ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗ್ಲಿ- ಅಭಿಮಾನಿಗಳಿಂದ ಶಬರಿಮಲೆಗೆ ಹರಕೆ

    ಶಾಸಕಿಗೆ ನಿಂದನೆ: ಕುಸುಮಾ ಶಿವಳ್ಳಿಗೆ ಟಿಕೆಟ್ ಕೊಟ್ಟರೆ ಬಂಡಾಯ ಗ್ಯಾರಂಟಿ ಅನ್ನೋ ಪಟ್ಟು ಹಿಡಿದಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸುವುದಾಗಿ ಹೇಳಿದ್ದಾರೆ. ಕುಂದಗೋಳ ಕಾಂಗ್ರೆಸ್ ಟಿಕೆಟ್ (Congress Ticket) ಆಕಾಂಕ್ಷಿಗಳು ಈ ಹಿಂದಿನ ಚುನಾವಣೆಯಲ್ಲೂ ನನ್ನ ಪರ ಕೆಲಸ ಮಾಡಿಲ್ಲಾ ಎಂದು ಶಾಸಕಿ ಕುಸುಮಾ ಶಿವಳ್ಳಿ ಹೇಳಿರುವುದಕ್ಕೆ ಆಕಾಂಕ್ಷಿಗಳು ತೀವ್ರ ಆಕ್ಷೇಪ ವ್ಯಕ್ತಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡುವಾಗ ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ. ಹಾಲಿ ಶಾಸಕಿ ಕುಸುಮಾ ಶಿವಳ್ಳಿಯವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪತ್ರಿಕಾ ಗೋಷ್ಠಿಯಲ್ಲಿ ನಾಲಗೆ ಹರಿಬಿಟ್ಟಿದ್ದಾರೆ. ಶಾಸಕಿಯನ್ನು ವಿರೋಧಿಸುವ ಬರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ. ಅವಾಚ್ಯ ಶಬ್ದ ಬಳಸಿದ ಕಾಂಗ್ರೆಸ್ ಮುಖಂಡ ಸಿ.ಜಿ. ಪಾಟೀಲ್ ಸಿಟ್ಟಲ್ಲೆ ಹೊರ ನಡೆದಿದ್ದಾರೆ.

    ಪತಿ ನಿಧನ: ಧಾರವಾಡ ಜಿಲ್ಲೆಯ ಕುಂದಗೋಳ ಕಾಂಗ್ರೆಸ್ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿ (85) ಬೈಪಾಸ್ ಸರ್ಜರಿ ಮಾಡಿಸಿಕೊಂಡಿದ್ದು, ಸಾಯುವ ಮೊದಲ ಮಧ್ಯರಾತ್ರಿಯವರೆಗೂ ಧಾರವಾಡದಲ್ಲಿ ನಡೆದ ಕಟ್ಟಡ ದುರಂತ ಸ್ಥಳದಲ್ಲಿ ಹಾಜರಿದ್ದು ಪರಿಹಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ದುರ್ಘಟನೆ ಸಂಭವಿಸಿದ ದಿನದಿಂದ ಸತತವಾಗಿ ಅಲ್ಲಿಯೇ ಬೀಡು ಬಿಟ್ಟು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. 2019 ರ ಮಾರ್ಚ್ 22ರ ಬೆಳಗ್ಗೆ ಹೃದಯಾಘಾತದಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆಯುಸಿರೆಳೆದಿದ್ದರು.