Tag: Karna

  • ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ನಿಧನ – ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ

    ಮಹಾಭಾರತದ ‘ಕರ್ಣ’ ಪಂಕಜ್ ಧೀರ್ ನಿಧನ – ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ

    ಹಿಂದಿ ಕಿರುತೆರೆಯ ‘ಮಹಾಭಾರತ’ (Mahabharat) ಸೀರಿಯಲ್‌ನಲ್ಲಿ ಕರ್ಣನ ಪಾತ್ರ ನಿರ್ವಹಿಸಿ ಜನಪ್ರಿಯರಾಗಿದ್ದ ನಟ ಪಂಕಜ್‌ ಧೀರ್‌ (Pankaj Dheer) ಅವರು ನಿಧನರಾಗಿದ್ದಾರೆ.

    ಪಂಕಜ್ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ತಿಂಗಳುಗಳಿಂದ ಆಸ್ಪತ್ರೆಗಳಿಗೆ ಹೋಗಿ ಬರುತ್ತಿದ್ದರು. ಇತ್ತೀಚೆಗೆ ಕಾಯಿಲೆ ತೀವ್ರಗೊಂಡಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

    ಪಂಕಜ್ ಧೀರ್‌ ಅವರು ಚಂದ್ರಕಾಂತ, ಬಧೋ ಬಹು, ಜೀ ಹಾರರ್ ಶೋ, ಕಾನೂನ್, ಸಸುರಲ್ ಸಿಮಾರ್ ಕಾ, ಸೋಲ್ಜರ್, ಅಂದಾಜ್, ಬಾದ್‌ಶಾ, ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆಯಂತಹ ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

    ಪಂಜಾಬ್ ಮೂಲದ ಪಂಕಜ್ ಧೀರ್, ಗೀತಾ ಬಾಲಿ ನಟಿಸಿದ ಬಹು ಬೇಟಿ ಮತ್ತು ಜಿಂದಗಿಯಂತಹ ಚಲನಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ಮಾಪಕ ಸಿಎಲ್ ಧೀರ್ ಅವರ ಮಗ. ನಟನೆಯ ಜೊತೆಗೆ, ಪಂಕಜ್ ಧೀರ್ ತಮ್ಮ ಸಹೋದರ ಸತ್ಲುಜ್ ಧೀರ್ ಜೊತೆ ಮುಂಬೈನಲ್ಲಿ ವಿಸೇಜ್ ಸ್ಟುಡಿಯೋಸ್ ಎಂಬ ಶೂಟಿಂಗ್ ಸ್ಟುಡಿಯೋವನ್ನು ಸ್ಥಾಪಿಸುವ ಮೂಲಕ ಚಲನಚಿತ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2010 ರಲ್ಲಿ, ನಟ ಮಹತ್ವಾಕಾಂಕ್ಷಿ ನಟರಿಗಾಗಿ ಅಬ್ಬಿನ್ನೆ ಆಕ್ಟಿಂಗ್ ಅಕಾಡೆಮಿಯನ್ನು ಸ್ಥಾಪಿಸಿದ್ದರು.

    1980 ರ ದಶಕದಲ್ಲಿ ಅನೇಕ ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದರು. ಆದರೆ, ಅವರನ್ನು ಮನೆಮಾತನ್ನಾಗಿ ಮಾಡಿದ್ದು ಮಹಾಭಾರತ ಧಾರಾವಾಹಿ. ಕರ್ಣನ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು.

  • ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ರು: ರವಿ ಪುತ್ರ ಕಣ್ಣೀರು

    ಬೆಂಗಳೂರು: ನಾನು ನಿಮ್ಮ ಜೊತೆ ಇದ್ದೀನಿ ಕಣೋ. ನೀನು ಚೆನ್ನಾಗಿ ಬೆಳೆಯಬೇಕು ಎಂದು ಹೇಳಿದ್ದರು. ಆದರೆ ಅವರ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ ಎಂದು ರವಿಬೆಳಗೆರೆ ಪುತ್ರ ಕರ್ಣ ಕಣ್ಣೀರು ಹಾಕಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರವಿಬೆಳಗೆರೆ ರಾತ್ರಿ ಪದ್ಮನಾಭ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ರಾತ್ರಿ ಸುಮಾರು 12.15ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ಹೋಗುವಷ್ಟರಲ್ಲಿ ಆಸ್ಪತ್ರೆಗೆ ಸಾಗಿಸಲೆಂದು ತಯಾರಾಗಿದ್ದರು. ಆದರೆ ಅದಾಗಲೇ ಅವರ ಸಾವು ಕೂಡ ಆಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು.

    ಅವರು ನಮ್ಮ ಜೊತೆ ಇನ್ನೂ ಬಹಳ ದಿನಗಳ ಕಾಲ ಬದುಕಿರುತ್ತಿದ್ದರು ಅಂತ ಭಾವಿಸಿದ್ವಿ. ಪ್ರಾರ್ಥನಾ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಸಬೇಕು ಅನ್ನೋ ಬಹುದೊಡ್ಡ ಆಸೆ ಅವರಿಗಿತ್ತು. ಅವರಿಗೆ ಡಯಾಬಿಟಿಸ್ ಇತ್ತು, ಕಾಲುಗಳ ನೋವಿತ್ತು. ಕಳೆದ ಮೂರು ದಿನಗಳ ಹಿಂದೆಯಷ್ಟೇ ನಾನು ಅವರ ಜೊತೆ ಮಾತನಾಡಿದ್ದರು. ನಾನು ನಿಮ್ಮ ಜೊತೆ ಇದ್ದೀನಿ ಕಣೋ ಅಂದಿದ್ದರು ಎಂದು ತಿಳಿಸಿದರು.

    ನೀನು ಚೆನ್ನಾಗಿ ಬೆಳಯಬೇಕು ಅಂತ ಕೂಡ ಹೇಳಿದ್ದರು. ಆದರೆ ಅವರ ದಿಢೀರ್ ಸಾವಿನ ಸುದ್ದಿ ನಮಗೆ ಶಾಕ್ ಆಗಿದೆ. ಬೆಳಗ್ಗೆ 9 ಗಂಟೆಗೆ ಪ್ರಾರ್ಥನಾ ಶಾಲೆಯ ಮೈದಾನದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ಸಂಜೆ 4 ಗಂಟೆ ಒಳಗೆ ಬನಶಕಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.

    ತನ್ನ ಬರಹದಿಂದಲೇ ಸಾಕಷ್ಟು ಮಂದಿ ಅಭಿಮಾನಿಗಳನ್ನು ಹೊಂದಿದ್ದ ರವಿ ಬೆಳಗೆರೆ ಅವರು ಇಂದು ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ಕರಿಷ್ಮಾ ಹಿಲ್ಸ್ ಮನೆಯಲ್ಲಿ ಹೃದಯಾಘಾತದಿಂದ ಅಸ್ತಂಗತರಾಗಿದ್ದಾರೆ.

  • ವಿಧಾನಸಭಾ ಕಲಾಪದಲ್ಲಿ ತನ್ನನ್ನು ಕರ್ಣನಿಗೆ ಹೋಲಿಸಿಕೊಂಡ ಸಿಎಂ ಕುಮಾರಸ್ವಾಮಿ

    ವಿಧಾನಸಭಾ ಕಲಾಪದಲ್ಲಿ ತನ್ನನ್ನು ಕರ್ಣನಿಗೆ ಹೋಲಿಸಿಕೊಂಡ ಸಿಎಂ ಕುಮಾರಸ್ವಾಮಿ

    ಬೆಂಗಳೂರು: ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಮ್ಮನ್ನು ಮಹಾಭಾರತದ ಕರ್ಣನಿಗೆ ಹೋಲಿಸಿಕೊಳ್ಳುವ ಮೂಲಕ ವಿರೋಧ ಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

    ನಾನು ಸಾಂದರ್ಭಿಕ ಶಿಶು ಅಂತಾ ಹೇಳಿದ್ದೇನೆ. ಮಹಾಭಾರತದಲ್ಲಿ ಕರ್ಣ ಸಹ ಸಾಂದರ್ಭಿಕ ಶಿಶು. ಅಂದು ಋಷಿಗಳ ವರ ಪ್ರಸಾದಿಂದ ಹುಟ್ಟಿದ ಸಾಂದರ್ಭಿಕ ಶಿಶುವನ್ನು ತಾಯಿ ಕುಂತಿ ನದಿಗೆ ಎಸೆದಿದ್ದಳು. ಆ ಮಗುವನ್ನು ಬೆಸ್ತ ಉಳಿಸಿ ಕಾಪಾಡಿದನು. ಅದೇ ಕರ್ಣನಿಗೆ ದುರ್ಯೋಧನ ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ್ದನು. ಸಮ್ಮಿಶ್ರ ಸರ್ಕಾರದ ಸಾಂದರ್ಭಿಕ ಶಿಶುವಿಗೆ ಅಪ್ಪ-ಅಮ್ಮ ಇದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ನಮಗೆ ಅಪ್ಪ-ಅಮ್ಮ. ಇಂದು ಎಲ್ಲ ಶಾಸಕರು ಹಾಗು ದೇವರ ಆಶೀರ್ವಾದದಿಂದ ಸಿಎಂ ಆಗಿದ್ದೇನೆ ಎಂದು ತಿಳಿಸಿದರು.

    ಇದೇ ವೇಳೆ ಮಾತನಾಡಿದ ಸಿಎಂ, ನನ್ನದು 37 ಶಾಸಕರ ಸರ್ಕಾರ ಅಲ್ಲ. ನಮ್ಮದು 120 ಜನ ನಾಯಕರ ಸರ್ಕಾರವಾಗಿದೆ. ಅವತ್ತು 12 ವರ್ಷಗಳ ಹಿಂದೆ 38 ಜನ ಶಾಸಕರು ಇದ್ದ ನನಗೆ ಬೆಂಬಲ ಕೊಟ್ಟಿದ್ದು ನೆನಪಿಲ್ವಾ? 84 ಜನ ಶಾಸಕರಿದ್ದ ಬಿಜೆಪಿ ಅವರು ಏಕೆ ಸಿಎಂ ಆಗಲಿಲ್ಲ. ಅಂದು ನೀವು ಬಿಜೆಪಿ ಶಾಸಕರು ನಮ್ಮ ಜೊತೆ ಸೇರಿಕೊಂಡಾಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಲಿಲ್ವಾ? ಅಂದು ನೀವು ನಮ್ಮ ಬಳಿ ಬಂದು ನಾನೇನು ನಿಮ್ಮನ್ನು ಸಿಎಂ ಮಾಡಿ ಎಂದು ಮನವಿ ಮಾಡಿಕೊಂಡಿರಲಿಲ್ಲ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.

    ಯಾರು ಕರ್ಣ?
    ಕುಂತಿಭೋಜನ ಮಗಳಾದ ಕುಂತಿಯೇ ಕರ್ಣನ ತಾಯಿ. ಬಾಲ್ಯದಲ್ಲಿ ಕುಂತಿಭೋಜನ ಮನೆಯಲ್ಲಿದ್ದ ಕುಂತಿ ದೂರ್ವಾಸನನ್ನು ಸತ್ಕರಿಸಿದ್ದಕ್ಕಾಗಿ ಮಂತ್ರಗಳ ವರವನ್ನು ಪಡೆದಿದ್ದಳು. ಈ ಮಂತ್ರದ ಮಹಿಮೆ ಹೇಗಿದೆ ಎನ್ನುವ ಕುತೂಹಲಕ್ಕೆ ಸೂರ್ಯಮಂತ್ರ ಜಪಿಸಲು ಸೂರ್ಯನಾರಾಯಣ ಆಕೆಗೆ ಗಂಡು ಮಗುವನ್ನು ಅನುಗ್ರಹಿಸಿದ್ದ. ಲೋಕಾಪವಾದಕ್ಕೆ ಹೆದರಿದ ಕುಂತಿ ತನ್ನ ಮರುಳುತನಕ್ಕಾಗಿ ಬೆದರಿ ಆ ಹಸುಗೂಸನ್ನು ಗಂಗಾನದಿಯಲ್ಲಿ ತೇಲಿಬಿಟ್ಟಳು. ಆ ಮಗು ಧೃತರಾಷ್ಟ್ರನ ಸಾರಥಿ ಅಧಿರಥನ ಕೈಗೆ ಸಿಕ್ಕಿತು. ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ ಆಕಾರಣಿಕ ಶಿಶುವನ್ನು ಅಧಿರಥ ತನ್ನ ಹೆಂಡತಿ ರಾಧೆಯ ಕೈಗೆ ಕೊಟ್ಟ. ಈ ಮಗು ಬೆಳೆದು ದೊಡ್ಡವನಾಗಿ ಕೀರ್ತಿ ಪಡೆದ ಕಾರಣ ದುರ್ಯೋಧನ ಅಂಗರಾಜ್ಯದ ರಾಜನನ್ನಾಗಿ ಕರ್ಣನನ್ನು ನೇಮಿಸಿದ್ದ.