Tag: Karan Oberoi

  • ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    ನಟ ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತೆ ಅರೆಸ್ಟ್

    -ತನಿಖೆ ವೇಳೆ ಮಹಿಳೆಯ ಕಟ್ಟು ಕಥೆ ಬಹಿರಂಗ
    -ಮಹಿಳೆಗೆ ಬೆಂಬಲಿಸಿದ್ದ ವಕೀಲನ ಬಂಧನ

    ಮುಂಬೈ: ನಟ ಕರಣ್ ಓಬೇರಾಯ್ ಮೇಲೆ ಅತ್ಯಾಚಾರದ ಆರೋಪ ಹೊರಿಸಿದ್ದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

    ಈ ಘಟನೆ ಪೂರ್ವ ನಿಯೋಜಿತವಾಗಿದ್ದು, ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ಸುಳ್ಳು ಆರೋಪ ಮಾಡಿದ್ದು, ಇದಕ್ಕೆ ತಕ್ಕಂತೆ ಕಥೆಯನ್ನೂ ಹೆಣೆಯುವ ಮೂಲಕ ಒಬೇರಾಯ್ ವಿರುದ್ಧ ಸುಳ್ಳು ಆರೋಪವನ್ನು ಸಾಬೀತು ಪಡಿಸಲು ಮುಂದಾಗಿದ್ದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪ ಸಾಬೀತು ಪಡಿಸಲು ಮಹಿಳೆ ವಿವಿಧ ರೀತಿಯ ಕಥೆ ಹೆಣೆದಿದ್ದು, ಇದೆಲ್ಲವೂ ಪೊಲೀಸ್ ತನಿಖೆ ವೇಳೆ ರಿವೀಲ್ ಆಗಿದೆ.

    ಪ್ರಕರಣ ಹಿಂಪಡೆಯುವಂತೆ ಇಬ್ಬರು ವ್ಯಕ್ತಿಗಳು ನನಗೆ ಬೆದರಿಕೆ ಒಡ್ಡಿದ್ದರು ಎಂದು ಇತ್ತೀಚೆಗೆ ಮಹಿಳೆ ದೂರಿದ್ದರು. ಇದೆಲ್ಲವೂ ಕಟ್ಟು ಕಥೆ ಕರಣ್ ಒಬೇರಾಯ್ ಅವರ ಮಾನಹಾನಿ ಮಾಡಲು ಈ ರೀತಿಯ ತಂತ್ರವನ್ನು ಹೆಣೆಯಲಾಗಿದೆ. ಇಂತಹ ನಕಾರಾತ್ಮಕ ಸುದ್ದಿಗಳಿಂದ ನಟ ಕರಣ್ ಒಬೇರಾಯ್ ಅವರ ಮಾನಹಾನಿಯಾಗಿದೆ ಎಂದು ತನಿಖೆ ನಂತರ ತಿಳಿದು ಬಂದಿದೆ.

    ಓಶಿವಾರ ಠಾಣೆಯ ಹಿರಿಯ ಪೊಲೀಸ್ ಇನ್ಸ್‍ಪೆಕ್ಟರ್ ಶೈಲೇಶ್ ಪಾಸಲ್ವಾಡ್ ಪ್ರಕರಣದ ಕುರಿತು ಮಾಹಿತಿ ನೀಡಿ, ತಪ್ಪೊಪ್ಪಿಗೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಒಬೇರಾಯ್ ವಿರುದ್ಧ ಆರೋಪ ಮಾಡಿದ್ದ ಮಹಿಳೆಯನ್ನು ಬಂಧಿಸಿದ್ದೇವೆ. ಹೆಚ್ಚಿನ ತನಿಖೆಗಾಗಿ ಶೀಘ್ರವೇ ಮಹಿಳೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

    ಸುಳ್ಳು ಹೇಳಿದ್ದ ಮಹಿಳೆ:
    ಮೇ.25ರಂದು ಓಶಿವಾರಾ ಪೊಲೀಸರು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಕರಣ್ ಒಬೇರಾಯ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ನನಗೆ ಖಿನ್ನತೆಯ ರೋಗವಿದ್ದು, ಪ್ರತಿ ದಿನ ಬೆಳಗಿನ ಜಾವ ವಾಕಿಂಗ್ ಮಾಡುವಂತೆ ವೈದ್ಯರು ಸೂಚಿಸಿದ್ದರು. ಹೀಗಾಗಿ ನಿತ್ಯ ಬೆಳಗ್ಗೆ ವಾಕಿಂಗ್‍ಗೆ ತೆರಳುತ್ತಿದ್ದೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಏಕಾಏಕಿ ದಾಳಿ ಮಾಡಿ, ಕರಣ್ ಒಬೇರಾಯ್ ವಿರುದ್ಧದ ಅತ್ಯಾಚಾರ ಕುರಿತ ದೂರನ್ನು ಹಿಂಪಡೆಯದಿದ್ದರೆ ಆಸಿಡ್ ದಾಳಿ ಮಾಡುವ ಕುರಿತು ಬೆದರಿಕೆ ಹಾಕಿದ್ದರು ಎಂದು ಮಹಿಳೆ ತಿಳಿಸಿದ್ದಾರೆ.

    ನಟನ ಮಾನಹಾನಿಗೆ ಸಂಚು:
    ಆರಂಭಿಕ ತನಿಖೆ ವೇಳೆ ಪೊಲೀಸರು ಮಹಿಳೆಯ ವಕೀಲನ ದೂರದ ಸಂಬಂಧಿಗಳಾಗಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಸಂತ್ರಸ್ತೆಯ ವಕೀಲನೂ ಸಹ ಪ್ರಕರಣದಲ್ಲಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿ, ವಕೀಲ ಖಾನ್ ಅವರನ್ನು ಪೊಲೀಸರು ವಿವರವಾದ ವಿಚಾರಣೆ ನಡೆಸಿದ್ದು, ಈ ವೇಳೆ ಅಪರಾಧದ ಕುರಿತು ವಕೀಲ ಖಾನ್ ತಪ್ಪೊಪ್ಪಿಕೊಂಡಿದ್ದಾರೆ.

    ಅಲ್ಲದೆ, ಬೆಳಗಿನ ಜಾವ ವಾಕಿಂಗ್‍ಗೆ ತರಳಿದಾಗ ಸಂತ್ರಸ್ತ ಮಹಿಳೆಯ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಲಾಯಿತು ಎಂದು ಪೊಲೀಸರ ಮುಂದೆ ವಕೀಲ ಖಾನ್ ಬಾಯ್ಬಿಟ್ಟಿದ್ದಾನೆ. ಈ ಪ್ಲಾನ್ ಮಾಡುವಲ್ಲಿ ಸಂತ್ರಸ್ತ ಮಹಿಳೆಯು ಭಾಗಿಯಾಗಿದ್ದಾಳೆ ಎಂದು ತಿಳಿಸಿದ್ದಾನೆ. ಈ ಎಲ್ಲದರ ಕುರಿತು ಮಹಿಳೆಗೂ ತಿಳಿದಿದೆ. ಇದು ಪಕ್ಕಾ ಪ್ಲಾನ್ ಮಾಡಿ ಮಾಡಲಾದ ಆರೋಪ ಎಂದು ಲಾಯರ್ ಖಾನ್ ಬಾಯ್ಬಿಟ್ಟಿದ್ದಾರೆ.

    ಮಹಿಳೆಯ ಆರೋಪವೇನು?
    ಕರಣ್ ವಿರುದ್ಧದ ಸಂತ್ರಸ್ತ ಮಹಿಳೆಯ ಪ್ರಕರಣದ ಕುರಿತು ಓಶಿವಾರಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆಯು ಕರಣ್ ಒಬೇರಾಯ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಕರಣ್ ಒಬೇರಾಯ್ ಅವರು ಮದುವೆಯಾಗುವಂತೆ ನನ್ನ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿದ್ದಾರೆ. ವಿಡಿಯೋ ಇಟ್ಟುಕೊಂಡು ಕರಣ್ ಅವರು ನನ್ನನ್ನು ಬ್ಲ್ಯಾಕ್‍ಮೇಲ್ ಮಾಡಿ ಹೆಚ್ಚು ಹಣ ನೀಡುವಂತೆ ಪೀಡಿಸುತ್ತಿದ್ದಾರೆ. ಕರಣ್ ಒಬೇರಾಯ್ ಅವರು ಆರೋಪವನ್ನು ಅಲ್ಲಗಳೆದು ನನ್ನನ್ನು ಬಂಧಿಸಲು ಹಾಗೂ ಮಾನಹಾನಿ ಉಂಟು ಮಾಡಲು ವಿನಾಕಾರಣ ಅತ್ಯಾಚಾರದ ಕಾನೂನನ್ನು ಮಹಿಳೆ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ ಎಂದು ಹೇಳಿದ್ದರು. ಇದಕ್ಕೆ ಅವರ ಸ್ನೇಹಿತರೂ ಸಹ ಬೆಂಬಲ ಸೂಚಿಸಿದ್ದರು. ಈ ಸ್ಪಷ್ಟೀಕರಣವನ್ನೂ ಮೀರಿ ಕರಣ್ ಒಬೇರಾಯ್ ಅವರನ್ನು ಮೇ 5 ರಂದು ಬಂಧಿಸಲಾಗಿತ್ತು. ನಂತರ ಮೇ 7 ರಂದು ಮುಂಬೈ ಹೈ ಕೋರ್ಟ್‍ನ ಬೇಲ್ ನೀಡಿತ್ತು.

  • ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಮುಂಬೈ: ಕಿರುತೆರೆ ನಟ ಮತ್ತು ನಿರೂಪಕ ಕರಣ್ ಒಬೆರಾಯ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದ ಮಾಡೆಲ್‍ಗೆ ಶನಿವಾರ ಬೆಳಗ್ಗೆ ಇಬ್ಬರು ಅಪರಿಚಿತರು ಚಾಕು ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಬೆಳಗ್ಗೆ ವಾಕಿಂಗ್ ಎಂದು ಹೋಗಿದ್ದ 34 ವರ್ಷದ ಮಾಡೆಲ್‍ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯನ್ನು ಹರಿತವಾದ ಅಯುಧದಿಂದ ಇರಿದು ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    2017ರಲ್ಲಿ ನನ್ನ ಮೇಲೆ ಕರಣ್ ಅತ್ಯಾಚಾರ ಮಾಡಿದ್ದಾನೆ ಎಂದು ಮಾಡೆಲ್ ಮೇ 6 ರಂದು ದೂರು ನೀಡಿದ್ದಳು. ಈ ದೂರಿನ ಪ್ರಕಾರ ಕರಣ್ ಪೋಲಿಸರು ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣ ಕೋರ್ಟ್‍ನಲ್ಲಿ ಇರುವಾಗಲೇ ಲೋಖಂಡ್ವಾಲಾ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ವಾಕಿಂಗ್ ಹೋಗಿದ್ದ ಮಾಡೆಲ್ ಮೇಲೆ ಇಬ್ಬರು ಅಪರಿಚಿತ ದಾಳಿ ಮಾಡಿ ಚಾಕುವಿನಿಂದ ಇರಿದು ಹೋಗುವಾಗ ಒಂದು ಪತ್ರವನ್ನು ಎಸೆದು ಹೋಗಿದ್ದಾರೆ. ಇದನ್ನು ಓದಿ: ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಈ ಸಮಯದಲ್ಲಿ ಮಾಡೆಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಬಂದು ಸಹಾಯ ಮಾಡಿದ್ದಾರೆ. ನಂತರ ಒಶಿವಾರದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾರ್ ಅವರಿಗೆ ಮಾಡೆಲ್ ದೂರು ನೀಡಿದ್ದು ತನಿಖೆ ಮಾಡಲಾಗುತ್ತಿದೆ.

    ಏನಿದು ಪ್ರಕರಣ?
    ಕರಣ್ ಮಾಡೆಲ್‍ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ರ ಆಡಿ ಪ್ರಕರಣ ದಾಖಲಾಗಿದ್ದು ಕರಣ್ ನನ್ನು ಪೊಲೀಸರು ಬಂಧಿಸಿದ್ದರು.