Tag: Karan Johar

  • ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್:  ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ

    ವಿಮಾನದಲ್ಲೇ ರೊಮ್ಯಾನ್ಸ್ ಮಾಡಿದ್ದರಂತೆ ಟೈಗರ್ ಶ್ರಾಫ್: ಆಕೆ ದಿಶಾ ಪಟಾನಿ ಆಗಿರಲಿಲ್ಲ ಎಂದ ನಟ

    ಬಾಲಿವುಡ್ ಸಿನಿಮಾ ರಂಗದ ಖ್ಯಾತ ನಟ ಟೈಗರ್ ಶ್ರಾಫ್ ಶೋವೊಂದರಲ್ಲಿ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ತಾವು ವಿಮಾನದಲ್ಲೇ ರೊಮ್ಯಾನ್ಸ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಅವರು, ತಾವು ವಿಮಾನದಲ್ಲಿ ರೊಮ್ಯಾನ್ಸ್ ಮಾಡಿರುವ ವಿಚಾರವನ್ನು ಬಹಿರಂಗ ಪಡಿಸಿದರು.

    ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಡೇಟಿಂಗ್ ಮಾಡುತ್ತಿರುವ ವಿಚಾರ, ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ಅಲ್ಲದೇ, ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನುವ ವಿಷಯವೂ ಹರಿದಾಡುತ್ತಿದೆ. ಈ ಜೋಡಿ ಒಟ್ಟಿಗೆ ಹಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾರೆ. ಹಾಗಾಗಿ ದಿಶಾ ಜೊತೆಯೇ ವಿಮಾನದಲ್ಲಿ ರೊಮ್ಯಾನ್ಸ್ ಮಾಡಿದರಾ ಎನ್ನುವ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಮಾನದಲ್ಲಿ ಯಾರ ಜೊತೆ ಟೈಗರ್ ರೊಮ್ಯಾನ್ಸ್ ಮಾಡಿದರು ಎನ್ನುವ ಕುರಿತು ಹೇಳಲಿಲ್ಲ. ಇದನ್ನೂ ಓದಿ:ಹೂವುಗಳನ್ನ ದೇಹಕ್ಕೆ ಅಂಟಿಸಿ, ಪ್ಲಾಸ್ಟಿಕ್ ಕವರ್‌ನಲ್ಲಿ ಮೈಮುಚ್ಚಿಕೊಂಡು ಬಂದ ಉರ್ಫಿ

    ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಡೇಟಿಂಗ್ ಕುರಿತಾಗಿಯೂ ಕರಣ್ ಪ್ರಶ್ನೆಗಳನ್ನು ಕೇಳಿದರು. ಆ ಹುಡುಗಿ ಜೊತೆ ಡೇಟಿಂಗ್ ಅಂಥದ್ದು ಏನೂ ಇಲ್ಲ. ದಿಶಾ ನನ್ನ ಬೆಸ್ಟ್ ಫ್ರೆಂಡ್ ಎಂದಷ್ಟೇ ಚುಟುಕಾಗಿ ಉತ್ತರಿಸಿ ಅನುಮಾನ ಮೂಡಿಸಿದರು ಟೈಗರ್. ಕೆಲ ದಿನಗಳ ಹಿಂದೆಯಷ್ಟೇ ಟೈಗರ್ ಮತ್ತು ದಿಶಾ ಇಬ್ಬರೂ ಬೇರೆ ಬೇರೆ ಆಗಿದ್ದಾರೆ ಎನ್ನುವ ಸುದ್ದಿ ಇತ್ತು. ಆದರೆ, ಈ ಕುರಿತು ಟೈಗರ್ ಏನನ್ನೂ ಹೇಳಲು ಇಷ್ಟ ಪಡಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    `ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?

    ಸ್ಟೈ‌ಲೀಶ್ ಸ್ಟಾರ್ ವಿಜಯ್ ದೇವರಕೊಂಡ `ಲೈಗರ್’ ಸಿನಿಮಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಈ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಸದ್ದು ಮಾಡುತ್ತಿದ್ದಾರೆ. ಈ ಪ್ರಚಾರದ ವೇಳೆ, ಈ ಹಿಂದೆ ಕರಣ್ ಜೋಹರ್ ಚಿತ್ರವನ್ನು ಕೈಬಿಟ್ಟಿದರ ಬಗ್ಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ.

    vijaydevarakonda

    ಈಗ ಏಲ್ಲೆಲ್ಲೂ `ಲೈಗರ್ ಸಿನಿಮಾ ಪ್ರಚಾರ ಜೋರಾಗಿದೆ ಸೌಂಡ್ ಮಾಡುತ್ತಿದೆ. ವಿಜಯ್ ದೇವರಕೊಂಡ ವೃತ್ತಿ ಜೀವನದ ನಿರೀಕ್ಷಿತ `ಲೈಗರ್’ ಚಿತ್ರ ಟೀಸರ್, ಟ್ರೆöÊಲರ್, ಪೊಸ್ಟರ್ ಲುಕ್‌ನಿಂದ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಇನ್ನು ಈ ಚಿತ್ರದ ಪ್ರಚಾರ ಕಾರ್ಯ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಈ ವೇಳೆ ಕರಣ್ ಜೋಹರ್ ಸಿನಿಮಾ ಆಫರ್ ಅನ್ನು ಕೈಬಿಟ್ಟ ವಿಚಾರದ ಬಗ್ಗೆ ವಿಜಯ್ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:Bigg Boss: ಗರ್ಲ್‌ಫ್ರೆಂಡ್ ವಿಚಾರಕ್ಕೆ ಬಂದ ಸೋನು ಶ್ರೀನಿವಾಸ್ ಗೌಡ ವಿರುದ್ಧ ಕಿಡಿಕಾರಿದ ಜಶ್ವಂತ್

    `ಅರ್ಜುನ್ ರೆಡ್ಡಿ’ ಚಿತ್ರದ ಸಕ್ಸಸ್ ನಂತರ ಕರಣ್ ಜೋಹರ್ ಕಡೆಯಿಂದ ಬಾಲಿವುಡ್ ಸಿನಿಮಾ ಆಫರ್ ಬಂದಿತ್ತು. ಆದರೆ ಆ ಸಮಯದಲ್ಲಿ ನಾನು ಸಿದ್ಧನಾಗಿರಲಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಇರುವ ಕಾರಣ ಲೈಗರ್ ಚಿತ್ರ ಒಪ್ಪಿಕೊಂಡೆ ಎಂದು ಮಾತನಾಡಿದ್ದಾರೆ. ಇನ್ನು ಲೈಗರ್ ಚಿತ್ರವು ಸ್ಲಂ ಹುಡುಗರ ಕಥೆಯಾಗಿದ್ದು, ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ವಿಜಯ್ ಮಿಂಚಿದ್ದಾರೆ. ಕರಣ್ ಜೋಹರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಆಗಸ್ಟ್ ೨೫ಕ್ಕೆ ಲೈಗರ್ ಚಿತ್ರ ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ:  ನಟಿ ತಾಪ್ಸಿ ಹೇಳಿದ್ದೇನು?

    ಕರಣ್ ಜೋಹಾರ್ ಶೋಗೆ ಹೋಗೋಕೆ ಸೆಕ್ಸ್, ಬ್ರೇಕಪ್ ಅರ್ಹತೆನಾ: ನಟಿ ತಾಪ್ಸಿ ಹೇಳಿದ್ದೇನು?

    ಟಿಟಿಯಲ್ಲಿ ಪ್ರಸಾರವಾಗುತ್ತಿರುವ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ದಿನದಿಂದ ದಿನಕ್ಕೆ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದೆ. ಈ ಶೋಗೆ ಬರುವ ಸೆಲೆಬ್ರಿಟಿಗಳು ಒಂದಲ್ಲ ಒಂದು ರೀತಿಯಲ್ಲಿ ಅಚ್ಚರಿಯ ಹೇಳಿಕೆ ನೀಡುತ್ತಿದ್ದಾರೆ. ಅದರಲ್ಲೂ ಅವರ ತೀರಾ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೆಕ್ಸ್, ಬ್ರೇಕ್ ಅಪ್, ಫಸ್ಟ್ ನೈಟ್, ಅಫೇರ್ ಸೇರಿದಂತೆ ಇಂತಹ ಖಾಸಗಿ ಸಂಗತಿಗಳನ್ನು ಮುಲಾಜಿಲ್ಲದೇ ಹಂಚಿಕೊಳ್ಳುತ್ತಿದ್ದಾರೆ.

    ಈ ಕಾರಣಕ್ಕಾಗಿಯೇ ಒಂದು ರೀತಿಯಲ್ಲಿ ಕಾಫಿ ವಿತ್ ಕರಣ್ ಶೋ ಮಡಿವಂತರ ಕಾರ್ಯಕ್ರಮವಲ್ಲ ಅನಿಸುವಂತಾಗಿದೆ. ಹೀಗಾಗಿಯೇ ನಟಿ ತಾಪ್ಸಿ ಪನ್ನು ಈ ಶೋ ಬಗ್ಗೆ ಕಾಮೆಂಟ್ ಮಾಡಿದ್ದು , ಈವರೆಗೂ ತಮ್ಮನ್ನು ಆ ಶೋಗೆ ಕರೆಯದೇ ಇರುವ ಕಾರಣವನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿಯೇ ನನ್ನನ್ನು ಕರಣ್ ಮುಂದೆಯೇ ಕರೆಯುವುದಿಲ್ಲ ಎನ್ನುವುದನ್ನು ಈಗಲೇ ಹೇಳಿದ್ದಾರೆ. ಇದನ್ನೂ ಓದಿ:ಪೊಲೀಸ್ ಠಾಣೆ ತಲುಪಿದ ನಿರ್ಮಾಪಕರ ವಲಯದ ಚುನಾವಣೆ ಪ್ರಕ್ರಿಯೆ

    ನನ್ನ ಸೆಕ್ಸ್ ಲೈಫ್ ಚೆನ್ನಾಗಿಲ್ಲ, ಸೆಕ್ಸ್ ಲೈಫ್ ಚೆನ್ನಾಗಿದ್ದವರನ್ನು ಮಾತ್ರ ಕರಣ್ ತಮ್ಮ ಶೋಗೆ ಕರೆಯುತ್ತಾರೆ. ಈ ಕಾರಣದಿಂದಾಗಿಯೇ ಅವರು ನನ್ನನ್ನು ಈವರೆಗೂ ಕರೆದಿಲ್ಲ ಎಂದು ಹೇಳಿದ್ದಾರೆ. ತಾಪ್ಸಿ ಈ ಸ್ಟೇಟ್ ಮೆಂಟ್ ಕೊಡುತ್ತಿದ್ದಂತೆಯೇ ಶೋ ಕುರಿತಾಗಿ ಮತ್ತಷ್ಟು ಕಾಮೆಂಟ್ ಗಳನ್ನು ಅಭಿಮಾನಿಗಳು ಹಾಕಿದ್ದಾರೆ. ಜೀವನದಲ್ಲಿ ಸೆಕ್ಸ್, ದೋಖಾ, ಬ್ರೇಕ್ ಅಪ್ ಬಿಟ್ಟರೆ ಸಂತಸ ಅನ್ನುವುದೇ ಇಲ್ಲವಾ ಎಂದು ಕೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

    ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ನಿಮಗೇಕೆ ಅಷ್ಟೊಂದು ಆಸಕ್ತಿ?: ಕರಣ್ ಗೆ ಕಾಲೆಳೆದ ಆಮೀರ್

    ಹಿಂದಿಯ ಕಾಫಿ ವಿತ್ ಕರಣ್ ಶೋ ನಲ್ಲಿ ನಿರೂಪಕ ಕರಣ್ ಜೋಹಾರ್ ಬಹುತೇಕವಾಗಿ ಪರ್ಸನಲ್ ಲೈಫ್ ಕುರಿತಾದ, ಅದರಲ್ಲೂ ಬೆಡ್ ರೂಮ್ ವಿಷಯಗಳೇ ಹೆಚ್ಚಾಗಿ ಇರುತ್ತವೆ ಎನ್ನುವ ಆರೋಪವಿದೆ. ಈವರೆಗೂ ಅವರ ಶೋಗೆ ಬಂದಿರುವ ಬಹುತೇಕ ಸಿಲೆಬ್ರಿಟಿಗಳಿಗೆ ತಮ್ಮ ಮೊದಲ ಸೆಕ್ಸ್ ಅನುಭವ, ಫಸ್ಟ್ ನೈಟ್, ಡೇಟಿಂಗ್, ಸೆಕ್ಸ್ ಲೈಫ್ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ರೀತಿಯ ಪ್ರಶ್ನೆಗಳನ್ನು ಕೇಳಿ ಮುಜಗರಕ್ಕೂ ನೂಕಿದ್ದಾರೆ.

    ಆಲಿಯಾ ಭಟ್, ವಿಜಯ್ ದೇವರಕೊಂಡ, ಅನನ್ಯ ಪಾಂಡೆ, ಸಾರಾ ಅಲಿಖಾನ್ ಸೇರಿದಂತೆ ಹಲವು ತಾರೆಯರು ಇಂತಹ ಪ್ರಶ್ನೆಗಳಿಗೆ ಬೋಲ್ಡ್ ಆಗಿಯೇ ಉತ್ತರಿಸಿದ್ದಾರೆ. ಅದರಲ್ಲೂ ವಿಜಯ್ ದೇವರಕೊಂಡ ಒಂದು ಹೆಜ್ಜೆ ಮುಂದೆ ಹೋಗಿ, ತಾವು ಕಾರಿನಲ್ಲಿ ಸೆಕ್ಸ್ ಮಾಡಿದ್ದಾಗಿ ಹೇಳಿಕೊಂಡು ಅಚ್ಚರಿಗೆ ಕಾರಣರಾಗಿದ್ದರು. ಇಂಥದ್ದೇ ಪ್ರಶ್ನೆಯು ಆಮೀರ್ ಖಾನ್ ಗೆಸ್ಟ್ ಆಗಿ ಹೋದಾಗ ಬಂದಿದೆ. ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಉತ್ತರ ನೀಡಿದ್ದಾರೆ ಆಮೀರ್. ಇದನ್ನೂ ಓದಿ:ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್

    ಸೆಕ್ಸ್ ಜೀವನದ ಬಗ್ಗೆ ಆಮೀರ್ ಗೆ ಪ್ರಶ್ನೆಯೊಂದು ಎದುರಾದಾಗ, ‘ಕರಣ್, ನೀವು ಬೇರೆಯವರ ಸೆಕ್ಸ್ ಲೈಫ್ ಬಗ್ಗೆ ಯಾಕೆ ಇಷ್ಟೊಂದು ಕುತೂಹಲ ಹೊಂದಿದ್ದೀರಿ. ಈ ರೀತಿ ಪ್ರಶ್ನೆಗಳನ್ನು ಕೇಳುತ್ತೀರಲ್ಲ, ನಿಮ್ಮ ತಾಯಿ ನಿಮಗೆ ಏನೂ ಅನ್ನುವುದಿಲ್ಲವೆ? ಎಂದು ಪ್ರಶ್ನೆ ಮಾಡಿದ್ದಾರೆ. ಆಮೀರ್ ಈ ಪ್ರಶ್ನೆಗೆ ತಬ್ಬಿಬ್ಬಾಗಿದ್ದಾರೆ ಕರಣ್.

    Live Tv
    [brid partner=56869869 player=32851 video=960834 autoplay=true]

  • ಕಾಫಿ ವಿತ್ ಕರಣ್ ಶೋಗೆ ಹೋಗದಂತೆ ತಡೆಯುತ್ತಿದ್ದಾರೆ ಯಶ್ ಅಭಿಮಾನಿಗಳು

    ಕಾಫಿ ವಿತ್ ಕರಣ್ ಶೋಗೆ ಹೋಗದಂತೆ ತಡೆಯುತ್ತಿದ್ದಾರೆ ಯಶ್ ಅಭಿಮಾನಿಗಳು

    ಬಿಟೌನ್ ನಲ್ಲಿ ಇದೀಗ ಕರಣ್ ಜೋಹಾರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಶೋ ವಿಷಯವೇ ಹಾಟ್ ಟಾಪಿಕ್. ವಿವಾದ, ಡೇಟಿಂಗ್, ಸೆಕ್ಸ್, ಖಾಸಗಿ ಸಂಗತಿಗಳನ್ನೇ ಬಂಡವಾಳ ಮಾಡಿಕೊಂಡು ಈ ಕಾರ್ಯಕ್ರಮವನ್ನು ನೆಡಿಸಿಕೊಡುತ್ತಿದ್ದಾರಂತೆ ಕರಣ್. ಹಾಗಾಗಿ ಇಂತಹ ಕಾರ್ಯಕ್ರಮಕ್ಕೆ ಯಶ್ ಹೋಗಬಾರದು ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

    ಯಶ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕಾಮೆಂಟ್ ಮಾಡಿದ್ದು, ಯಶ್ ಅವರಿಗೆ ಒಂದು ಘನತೆಯಿದೆ. ಅಲ್ಲದೇ, ಅವರು ಕಾರ್ಯಕ್ರಮದಲ್ಲಿ ಕೇಳುವ ಪ್ರಶ್ನೆಗಳು ಯಾರಿಗೂ ಸ್ಫೂರ್ತಿ ತುಂಬುವಂಥದ್ದು ಆಗಿರುವುದಿಲ್ಲ. ನಿಮ್ಮಿಂದ ಬೇರೆ ರೀತಿಯ ಉತ್ತರಗಳನ್ನೂ ನಾವು ಬಯಸುವುದಿಲ್ಲ. ಹೀಗಾಗಿ ಆ ಶೋಗೆ ಹೋಗಬೇಡಿ ಎಂದು ಹಲವಾರು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ತಮಿಳಿನ ನಟ ಜಿ.ಎಂ ಕುಮಾರ್ ಆಸ್ಪತ್ರೆಗೆ ದಾಖಲು

    ಪತ್ನಿ ರಾಧಿಕಾ ಜೊತೆ ವಿದೇಶ ಪ್ರವಾಸದಲ್ಲಿರುವ ಯಶ್, ಇದನ್ನು ಎಷ್ಟು ಗಂಭೀರವಾಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಅಭಿಮಾನಿಗಳಂತೂ ಇಂಥದ್ದೊಂದು ಒತ್ತಡವನ್ನಂತೂ ಹೇರುತ್ತಿದ್ದಾರೆ. ಹಾಗಾಗಿ ಯಶ್ ನಡೆ ಏನಿರಬಹುದು ಎನ್ನುವ ಸಹಜ ಕುತೂಹಲವಂತೂ ಮೂಡಿದೆ. ಈಗಾಗಲೇ ಈ ಶೋನಲ್ಲಿ ಭಾಗಿ ಆಗುವಂತೆ ಯಶ್ ಗೂ ಕೂಡ ಕರೆ ಬಂದಿದೆ ಎನ್ನಲಾಗುತ್ತಿದೆ. ಆದರೆ, ಅವರು ಇನ್ನೂ ಅದಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎನ್ನುತ್ತಾರೆ ಆಪ್ತರು.

    Live Tv
    [brid partner=56869869 player=32851 video=960834 autoplay=true]

  • ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಕ್ಷಿಣ ಭಾರತದ ಸ್ಟಾರ್ ವಿಜಯ್ ದೇವರಕೊಂಡ ಸದ್ಯ ಲೈಗರ್ ಸಿನಿಮಾ ವಿಚಾರವಾಗಿ ಸಖತ್ ಸದ್ದು ಮಾಡ್ತಿದ್ದಾರೆ. ಜತೆಗೆ ಇತ್ತೀಚೆಗಷ್ಟೇ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿ, ಸಾಕಷ್ಟು ವಿಚಾರಗಳ ಬಗ್ಗೆ ವಿಜಯ್ ಮನಬಿಚ್ಚಿ ಮಾತನಾಡಿದ್ದಾರೆ. ಇನ್ನು ವೇಳೆ ರಶ್ಮಿಕಾ ಜತೆಗಿನ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದಾರೆ.

    ಟಾಲಿವುಡ್‌ನ ಸಿನಿಮಾಗಳಲ್ಲಿ ಸ್ಟಾರ್ ಜೋಡಿಗಳಾಗಿ ಗುರುತಿಸಿಕೊಂಡಿರುವ ವಿಜಯ್ ಮತ್ತು ರಶ್ಮಿಕಾ ಮಧ್ಯೆ ಎನೋ ಸಂಥಿಂಗ್ ಸಂಥಿಂಗ್ ಇದೆ ಅಂತಾ ಗುಸು ಗುಸು ಸುದ್ದಿಯಾಗುತ್ತಿದೆ. ಇದೇ ಪ್ರಶ್ನೆಯನ್ನ ಕರಣ್ ಜೋಹರ್ ಕೂಡ ವಿಚಾರಿಸಿದ್ದಾರೆ. ಅದಕ್ಕೆ ವಿಜಯ್ ಕೂಡ ಪ್ರತಿಕ್ರಿಯೆ ನೀಡಿದ್ದು, `ರಶ್ಮಿಕಾ ನನ್ನ ಡಾರ್ಲಿಂಗ್’ ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ. ಇದನ್ನೂ ಓದಿ:ಸಿದ್ದು ಮೂಸೆ ವಾಲಾ ಮುಖವನ್ನ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡ ತಂದೆ

    ನಾನು ರಶ್ಮಿಕಾ ಅವರೊಂದಿಗೆ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ರಶ್ಮಿಕಾ ನನ್ನ ಡಾರ್ಲಿಂಗ್. ಅವರನ್ನ ನಾನು ತುಂಬಾ ಇಷ್ಟಪಡುತ್ತೇನೆ. ನನಗೆ ರಶ್ಮಿಕಾ ನಿಜವಾಗಿಯೂ ಒಳ್ಳೆಯ ಸ್ನೇಹಿತೆ. ಚಲನಚಿತ್ರಗಳಲ್ಲಿ ಅಭಿನಯಿಸುವಾಗ ನಮ್ಮ ಮಧ್ಯೆ ಉತ್ತಮ ಬಂಧ ಸೃಷ್ಟಿಯಾಯಿತು. ಸಾಮಾನ್ಯವಾಗಿ ಓರ್ವ ಹುಡುಗಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಕ್ಕೂ ನಾನು ತುಂಬಾ ಸಮಯ ತೆಗೆದುಕೊಳ್ಳುತ್ತೇನೆ. ಆದರೆ, ಚಿತ್ರೀಕರಣದ ಸಮಯದಲ್ಲಿ ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹ ಬೆಳೆಯಿತು ಎಂದಿದ್ದಾರೆ.

    ವಿಜಯ್ ದೇವರಕೊಂಡ ರಿಲೇಷನ್‌ಶಿಪ್ ಸ್ಟೇಟಸ್ ಕೇಳಿದಾಗ, ಒಂದಲ್ಲಾ ಒಂದು ದಿನ ನನಗೆ ಮದುವೆಯಾಗಿ, ಮಕ್ಕಳಾಗುತ್ತದೆ. ಆ ದಿನ ನನ್ನ ಪಾರ್ಟರ್ ಬಗ್ಗೆ ಜೋರಾಗಿ ಹೇಳುತ್ತೇನೆ. ಅಲ್ಲಿಯವರೆಗೂ ನನ್ನನ್ನು ಇಷ್ಟಪಡುವವರಿಗೆ ನಾನು ನೋವು ಕೊಡಬಾರದು. ಎಲ್ಲರೂ ಇಷ್ಟೊಂದು ಪ್ರೀತಿ ಕೊಡುವಾಗ ನಾನು ಇನ್ನೊಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿದ್ದೇನೆ ಎಂದು ಹೇಳಲು ಬಯಸುವುದಿಲ್ಲ ಎಂದು ಮಾತನಾಡಿದ್ದಾರೆ. ಕಡೆಗೂ ತಮ್ಮ ಲವ್ ಲೈಫ್ ಬಗ್ಗೆ ಎಲ್ಲೂ ತುಟಿಕ್ ಪಿಟಿಕ್ ಎನ್ನಲಿಲ್ಲ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಹೆಸರು ನನ್ನ ಟಾಪ್ ಪಟ್ಟಿಯಲ್ಲಿ ಇರಲಿಲ್ಲ ಎಂದು ಅಚ್ಚರಿ ಮೂಡಿಸಿದ ಕರಣ್ ಜೋಹರ್

    ನಯನತಾರಾ ಹೆಸರು ನನ್ನ ಟಾಪ್ ಪಟ್ಟಿಯಲ್ಲಿ ಇರಲಿಲ್ಲ ಎಂದು ಅಚ್ಚರಿ ಮೂಡಿಸಿದ ಕರಣ್ ಜೋಹರ್

    ರಣ್ ಜೋಹಾರ್ ವಿರುದ್ಧ ಲೇಡಿ ಸೂಪರ್ ಸ್ಟಾರ್ ನಯನತಾರಾ ಅಭಿಮಾನಿಗಳು ಗರಂ ಆಗಿದ್ದರು. ಕರಣ್ ಕುರಿತು ಅಭಿಮಾನಿಗಳು ಕೆಟ್ಟದ್ದಾಗಿಯೇ ಕಾಮೆಂಟ್ ಮಾಡುತ್ತಿದ್ದರು. ಕರಣ್ ಜೋಹರ್ ವ್ಯಕ್ತಿತ್ವದ ಬಗ್ಗೆಯೂ ಅವಹೇಳನ ಮಾಡುವಂತಹ ಕೆಲಸಗಳು ನಡೆದವು. ಕಾರಣ, ಕರಣ್ ಜೋಹರ್ ತನ್ನ ಶೋನಲ್ಲಿ ನಯನತಾರಾ ಅವರಿಗೆ ಅವಮಾನ ಮಾಡಿದ್ದಾರೆ ಎನ್ನುವುದಾಗಿತ್ತು.

    ಕರಣ್ ಜೋಹರ್ ಶೋನಲ್ಲಿ ನಯನತಾರಾ ಅವರ ಹೃದಯದ ಗೆಳತಿ ಸಮಂತಾ ಭಾಗಿಯಾಗಿದ್ದರು. ಆಗ ಕರಣ್, ‘ದಕ್ಷಿಣದ ಟಾಪ್ ತಾರೆ ಯಾರು?’ ಎನ್ನುವ ಪ್ರಶ್ನೆಯನ್ನು ಸಮಂತಾಗೆ ಕೇಳುತ್ತಾರೆ. ಕ್ಷಣವೂ ಯೋಚಿಸದೇ ನಯನತಾರಾ ಹೆಸರು ಹೇಳುತ್ತಾರೆ ಸಮಂತಾ. ಆಗ ಕರಣ್, ಇವರ ಹೆಸರು ನನ್ನ ಪಟ್ಟಿಯಲ್ಲಿ ಇಲ್ಲ ಎಂದು ಹೇಳುತ್ತಾರೆ. ಈ ಮಾತೇ ನಯನತಾರಾ ಅಭಿಮಾನಿಗಳನ್ನು ಕೆರಳಿಸಿತ್ತು. ಹಾಗಾಗಿ ಕರಣ್ ಮತ್ತು ಅವರ ಶೋಗಳನ್ನು ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರು. ಇದನ್ನೂ ಓದಿ:ಟೈಗರ್ ಶ್ರಾಫ್ ಪ್ರೀತಿಯ ಬಗ್ಗೆ ಮೌನ ಮುರಿದ ಜಾಕಿ ಶ್ರಾಫ್

    ಈ ವಿವಾದಕ್ಕೆ ಸಂಬಂಧಪಟ್ಟಂತೆ ಕರಣ್ ಸ್ಪಷ್ಟನೆ ನೀಡಿದ್ದು, ನಾನು ನಯನತಾರಾ ಅವರಿಗೆ ಅವಮಾನ ಮಾಡಿಲ್ಲ. ನಾನು ಕೇಳಿದ ಪ್ರಶ್ನೆಗೆ ನನ್ನ ಪಟ್ಟಿಯಲ್ಲಿ ಆ ಉತ್ತರವಿರಲಿಲ್ಲ. ಅಲ್ಲದೇ, ಅವರು ಟಾಪ್ ಅನ್ನುವುದನ್ನು ಯಾವುದೇ ಸಂಸ್ಥೆ ಕೂಡ ಅಧಿಕೃತ ಮಾಡಿರಲಿಲ್ಲ. ಹೀಗಾಗಿ ನಾನು ಹಾಗೆ ಮಾತನಾಡಬೇಕಾಯಿತು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೂ, ನಯನತಾರಾ ಅಭಿಮಾನಿಗಳು ಮಾತ್ರ ಟ್ರೋಲ್ ಮಾಡುವುದನ್ನು ನಿಲ್ಲಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಕಾರಿನಲ್ಲಿ ಸೆಕ್ಸ್ ಮಾಡಿದ್ದೇನೆ ಎಂದ ನಟ ವಿಜಯ್ ದೇವರಕೊಂಡ: ಅಸಹ್ಯ ಎಂದ ಫ್ಯಾನ್ಸ್

    ಕಾರಿನಲ್ಲಿ ಸೆಕ್ಸ್ ಮಾಡಿದ್ದೇನೆ ಎಂದ ನಟ ವಿಜಯ್ ದೇವರಕೊಂಡ: ಅಸಹ್ಯ ಎಂದ ಫ್ಯಾನ್ಸ್

    ಕಾಫಿ ವಿತ್ ಕರಣ್ ಶೋ ಹಲವು ನಟರ ಬಣ್ಣ ಬಯಲು ಮಾಡುತ್ತಿದೆ. ವೈಯಕ್ತಿಕ ಪ್ರಶ್ನೆಗಳನ್ನು ನೇರಾನೇರ ಕೇಳುವ ಕರಣ್ ಜೋಹಾರ್ ಗೆ ಯಾವುದೇ ಫಿಲ್ಟರ್ ಇಲ್ಲದೇ ಉತ್ತರಿಸುತ್ತಿದ್ದಾರೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು. ಹಾಗಾಗಿ ಶೋಗೆ ಬಂದ ಅತಿಥಿಗಳು ವಿವಾದಕ್ಕೆ ಕಾರಣವಾಗುತ್ತಿದ್ದಾರೆ. ಅಭಿಮಾನಿಗಳ ಮುಂದೆ ಬೆತ್ತಲಾಗುತ್ತಿದ್ದಾರೆ.

    ಮೊನ್ನೆಯಷ್ಟೇ ಅನನ್ಯ ಪಾಂಡೆ ಜೊತೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ವಿಜಯ್ ದೇವರಕೊಂಡ, ತಾವು ಕಾರಿನಲ್ಲಿ ಸೆಕ್ಸ್ ಮಾಡಿದ್ದಾಗಿ ಒಪ್ಪಿಕೊಂಡರು. ಅಲ್ಲದೇ, ಸೆಕ್ಸ್ ಕುರಿತಾಗಿಯೇ ಅನೇಕ ಪ್ರಶ್ನೆಗಳನ್ನು ಅಂದು ಕರಣ್ ಕೇಳಿದ್ದರು. ಅಷ್ಟೂ ಪ್ರಶ್ನೆಗಳಿಗೂ ಯಾವುದೇ ಮುಜಗರವಿಲ್ಲದೇ ವಿಜಯ್ ಮತ್ತು ಅನನ್ಯ ಪಾಂಡೆ ಉತ್ತರಿಸಿದ್ದರು. ಕೊನೆಯ ಬಾರಿಗೆ ನೀವು ಯಾವಾಗ ಸೆಕ್ಸ್ ಮಾಡಿದ್ದೀರಿ ಎಂದು ವಿಜಯ್ ದೇವರಕೊಂಡಿಗೆ ಕರಣ್ ಕೇಳಿದರೆ, ಅದಕ್ಕೆ ಉತ್ತರಿಸಿದ್ದು ಮಾತ್ರ ಅನನ್ಯ ಪಾಂಡೆ. ಇದನ್ನೂ ಓದಿ:ಓಟಿಟಿನಲ್ಲಿ ಬರುತ್ತಿದ್ದಾಳೆ ರಕ್ಷಿತ್ ಶೆಟ್ಟಿ ನಟನೆಯ ಕನ್ನಡದ ‘ಚಾರ್ಲಿ

    ಇದೀಗ ಇಂತಹ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸಿರುವ ವಿಜಯ್ ದೇವರಕೊಂಡ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. ಅದರಲ್ಲೂ ಕಾರಿನಲ್ಲಿ ನಾನು ಸೆಕ್ಸ್ ಮಾಡಿದ್ದೇನೆ ಎಂದು ಹೇಳಿಕೊಂಡಿರುವ ವಿಜಯ್ ವಿರುದ್ಧ ಅಭಿಮಾನಿಗಳು ಇದೊಂದು ಅಸಹ್ಯವೆಂದು ಕಾಮೆಂಟ್ ಮಾಡಿದ್ದಾರೆ. ಖಾಸಗಿ ಜೀವನ ಖಾಸಗಿಯಾಗಿಯೇ ಇರಬೇಕು. ಈ ಮೂಲಕ ಅಭಿಮಾನಿಗಳಿಗೆ ಅವರು ಯಾವ ಸಂದೇಶವನ್ನು ನೀಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ ವಿಡಿಯೋ ವೈರಲ್

    ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ ವಿಜಯ್ ದೇವರಕೊಂಡ- ಅನನ್ಯಾ ಪಾಂಡೆ ವಿಡಿಯೋ ವೈರಲ್

    ಬಾಲಿವುಡ್‌ನ ನಂಬರ್ ಒನ್ ಶೋ ಕರಣ್ ಜೋಹರ್ ನಿರೂಪಣೆಯ ಶೋನಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಎಪಿಸೋಡ್‌ನ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಪ್ರೋಮೋದಲ್ಲಿ `ಲೈಗರ್’ ಜೋಡಿ ತಮ್ಮ ಸೆಕ್ಸ್ ಲೈಫ್ ಮತ್ತು ಡೇಟಿಂಗ್ ಕುರಿತು ಮಾತನಾಡಿದ್ದಾರೆ.

    ಬಿಟೌನ್‌ನ ಫಿಲ್ಮ್ಂ ಮೇಕರ್ ಕರಣ್ ಜೋಹರ್ ಶೋನಲ್ಲಿ ಒಂದಲ್ಲಾ ಒಂದು ಬ್ರೇಕಿಂಗ್ ನ್ಯೂಸ್ ಕೊಡುವುದರ ಮೂಲಕ ಸೌಂಡ್ ಮಾಡ್ತಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಭಾಗವಹಿಸಿದ್ದು, ವಿಜಯ್ ಕೊನೆಯ ಬಾರಿ ಸೆಕ್ಸ್ ಮಾಡಿರುವುದರ ಬಗ್ಗೆ ಕರಣ್ ಕೇಳಿದ್ದಾರೆ. ಜತೆಗೆ ಅನನ್ಯಾ ಡೇಟಿಂಗ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ

     

    View this post on Instagram

     

    A post shared by Karan Johar (@karanjohar)

    `ಕಾಫಿ ವಿತ್ ಕರಣ್’ ಹೊಸ ಸೀಸನ್‌ನಲ್ಲಿ, ವಿಜಯ್ ತಮ್ಮ ಕೊನೆಯ ಬಾರಿಯ ಸೆಕ್ಸ್ ಕಾರಿನಲ್ಲಿ ಮಾಡಿದ್ದೇನೆ ಎಂದು ಶೋನಲ್ಲಿ ರಿವೀಲ್ ಮಾಡಿದ್ದಾರೆ. ನಂತರ ಅನನ್ಯಾ ಪಾಂಡೆಗೆ ಆದಿತ್ಯ ರಾವ್ ಕಪೂರ್ ಜತೆಗಿನ ಡೇಟಿಂಗ್ ವಿಚಾರ ಕೇಳಿದ್ದಾರೆ. ವಿಜಯ್ ಮತ್ತು ಅನನ್ಯಾ ಎಪಿಸೋಡ್ ಪ್ರೋಮೋನೇ ಸಖತ್ ವೈರಲ್ ಆಗುತ್ತಿದ್ದು, ಹೆಚ್ಚಿನ ಅಪ್‌ಡೇಟ್‌ಗೆ ಶೋ ಬರುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಆಲಿಯಾ ರಣ್‌ಬೀರ್, ವಿಕ್ಕಿ ಕತ್ರಿನಾ: ಸುಂದರ ಸಂಸಾರಕ್ಕೆ ಅಕ್ಷಯ್ ಕುಮಾರ್ ಟಿಪ್ಸ್

    ಆಲಿಯಾ ರಣ್‌ಬೀರ್, ವಿಕ್ಕಿ ಕತ್ರಿನಾ: ಸುಂದರ ಸಂಸಾರಕ್ಕೆ ಅಕ್ಷಯ್ ಕುಮಾರ್ ಟಿಪ್ಸ್

    ಬಾಲಿವುಡ್‌ನ ನಂಬರ್ ಒನ್ ಶೋ `ಕಾಫಿ ವಿತ್ ಸೀಸನ್ 7’ರಲ್ಲಿ ಇತ್ತೀಚೆಗಷ್ಟೇ ಸಮಂತಾ ಮತ್ತು ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ಶೋನಲ್ಲಿ ಬಿಟೌನ್‌ನ ನವವಿವಾಹಿತರಾದ ಆಲಿಯಾ ಭಟ್ ಮತ್ತು ರಣ್‌ಬೀರ್, ವಿಕ್ಕಿ ಕತ್ರಿನಾ ದಂಪತಿಗೆ ಸುಂದರ ಸಂಸಾರಕ್ಕೆ ಅಕ್ಷಯ್ ಕಿವಿ ಮಾತೊಂದನ್ನ ಹೇಳಿದ್ದಾರೆ.

    `ಕಾಫಿ ವಿತ್ ಕರಣ್ ಸೀಸನ್ 7’ಕ್ಕೆ ಮೊದಲ ಅತಿಥಿಯಾಗಿ ರಣ್‌ವೀರ್ ಮತ್ತು ಆಲಿಯಾ ಭಾಗವಹಿಸಿದ್ದರು. ಎರಡನೇ ಎಪಿಸೋಡ್‌ಗೆ ಸಮಂತಾ ಮತ್ತು ಅಕ್ಷಯ್ ಕುಮಾರ್ ಭಾಗವಹಿಸಿದ್ದರು. ಈ ಶೋನಲ್ಲಿ ಹೇಳಿರುವ ಅದೆಷ್ಟೋ ಮಾತುಗಳು ಈಗ ಸಖತ್ ಸದ್ದು ಮಾಡುತ್ತಿದೆ. ಇದೀಗ ಶೋನಲ್ಲಿ ನಿರೂಪಕ ಕರಣ್ ಜೋಹರ್ ಅಕ್ಷಯ್‌ಗೆ ನವವಿವಾಹಿತರಾದ ಆಲಿಯಾ ರಣ್‌ಬೀರ್, ಮತ್ತು ವಿಕ್ಕಿ ಕತ್ರಿನಾ ದಂಪತಿಗೆ ದಾಂಪತ್ಯ ಜೀವನಕ್ಕೆ ಎನು ಸಲಹೆ ನೀಡುತ್ತೀರಾ ಎಂದು ಕೇಳಿದ್ದಾರೆ. ಇದನ್ನೂ ಓದಿ:68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ:ಅತ್ಯುತ್ತಮ ಚಲನಚಿತ್ರ ʻಸೂರರೈ ಪೊಟ್ರುʼ

    ಅಕ್ಷಯ್ ಕುಮಾರ್ ಮತ್ತು ಟ್ವಿಂಕಲ್ ಖನ್ನಾ ಚಿತ್ರರಂಗದ ಬೆಸ್ಟ್ ದಂಪತಿಗಳಲ್ಲಿ ಒಬ್ಬರು. ಸಾಕಷ್ಟು ವರ್ಷಗಳಿಂದ ಒಬ್ಬರಿಗೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈಗ ಸುಂದರ ಸಂಸಾರಕ್ಕೆ ಬಿಟೌನ್ ನವಜೋಡಿಗೆ ಕಿವಿ ಮಾತೊಂದನ್ನ ಅಕ್ಷಯ್ ಕುಮಾರ್ ಹೇಳಿದ್ದಾರೆ. ರಣ್‌ಬೀರ್‌ಗೆ ಹೆಂಡತಿಯನ್ನು ಸಂತೋಷವಾಗಿಡಿ, ಆಗ ಜೀವನ ಸುಂದರವಾಗಿರುತ್ತದೆ ಎಂದು ಹೇಳಿದ್ದಾರೆ. ಕತ್ರಿನಾ ಜತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರೋದರಿಂದ ಕತ್ರಿನಾಗೆ, ವಿಕ್ಕಿ ಕಿವಿಯನ್ನು ತಿನ್ನಬೇಡಿ, ನಿಧಾನವಾಗಿ ಹೇಳಿ ಎಂದು ಸಲಹೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]