Tag: KannadaMovie

  • ‘ದಿಯಾ’ ಅಷ್ಟು ಭಾವನೆಗಳನ್ನ ತುಂಬಿದ್ದಾದ್ರೂ ಹೇಗೆ..?

    ‘ದಿಯಾ’ ಅಷ್ಟು ಭಾವನೆಗಳನ್ನ ತುಂಬಿದ್ದಾದ್ರೂ ಹೇಗೆ..?

    – ರುವಾರಿ ಅಶೋಕ್ ಹೇಳೊದೇನು?

    ಬ್ಬ ಸಿನಿಪ್ರೇಕ್ಷಕನಾದವನು ಒಂದು ಸಿನಿಮಾವನ್ನ ಹೇಗೆ ಆಯ್ಕೆ ಮಾಡ್ಕೋಳ್ತಾನೆ ಗೊತ್ತಾ..? ಒಂದು ನಾಯಕ ಅಥವಾ ನಾಯಕಿ ವಿಚಾರದಲ್ಲಿ ಯಾರಾದ್ರೂ ಒಬ್ರು ಟ್ಯಾಲೆಂಟ್ ಆಗಿದ್ರೆ ಅವರ ಸಿನಿಮಾಗಳಿಗೆ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಹುಟ್ಟಿಕೊಳ್ತಾರೆ. ಆ ವರ್ಗದವರು ಸಿನಿಮಾವನ್ನ ನೋಡ್ತಾರೆ. ತುಂಬಾ ಚ್ಯೂಸಿಯಾಗಿರುವ ಪ್ರೇಕ್ಷಕ ಸುಮಾರು ವರ್ಗದಲ್ಲಿ ಅಂದಾಜಿಸಿ ಸಿನಿಮಾ ಆಯ್ಕೆ ಮಾಡಿಕೊಳ್ತಾನೆ. ಅದರಲ್ಲಿ ನಿರ್ದೇಶಕ ಯಾರು ಎಂಬುದರ ಮೇಲೂ ಸಿನಿಮಾ ನೋಡುಗರು ಇದ್ದಾರೆ. ಅಶೋಕ್ ಅನ್ನೋ ಹೆಸರು ಕೇಳಿದ್ರೆ ಇನ್ಮುಂದೆ ಯಾರು ಬೇಕಾದ್ರೂ ಸಿನಿಮಾ ನೋಡುವ ಹುಮ್ಮಸ್ಸು ಬರುತ್ತೆ. ಆ ತಾಕತ್ತನ್ನ ಸೃಷ್ಟಿ ಮಾಡಿರೋದೆ ಈ ಕೆ.ಎಸ್ ಅಶೋಕ್.

    ಎಸ್. ರೀಲ್ ದೆವ್ವವನ್ನು ಒಂದಷ್ಟು ದಿನ ಜನರ ಬಾಯಲ್ಲಿ ರಿಯಲ್ ದೆವ್ವವಾಗಿ ಓಡಾಡಿಸಿದ 6-5=2 ಸಿನಿಮಾದ ರುವಾರಿ, ಭಾವನೆಗಳಲ್ಲೇ ಹಾಗೇ ತೇಲಿಸಿ ದಿಯಾ ಸಿನಿಮಾದಿಂದ ಹೀಗೂ ಸಿನಿಮಾ ಮಾಡಬಹುದಾ ಎಂಬ ಉದ್ಘಾರ ಮನಸ್ಸಲ್ಲಿ ಬರುವಂತೆ ಮಾಡಿದ ಅದೇ ಡೈರೆಕ್ಟರ್ ಅಶೋಕ್ ಬಗ್ಗೆ ನಾವಿವತ್ತು ಮಾತಾಡ್ತಾ ಇದ್ದೀವಿ. ನಿಮ್ಗೆಲ್ಲಾ ಅಶೋಕ್ ಅವರ ನಿರ್ದೇಶನ ಹೇಗಿರುತ್ತೆ ಅಂತ ಗೊತ್ತು. ಆದ್ರೆ ನಮ್ಗೆ ಅಷ್ಟಕ್ಕೆ ಕುತೂಹಲ ತಣಿಯುತ್ತಾ. ನೋ ವೇ ಚಾನ್ಸೇ ಇಲ್ಲ. ಈ ಐಡಿಯಾಗಳೆಲ್ಲಾ ಹೇಗೆ ಬರುತ್ತೆ ಅನ್ನೋ ಕುತೂಹಲ ನಿಮ್ಗೂ ಹುಟ್ಟಿರ್ಲೇ ಬೇಕು ಅಲ್ವಾ. ಅದನ್ನ ಅರಿತುಕೊಂಡೇ ಅವರನ್ನ ಕಾಂಟ್ಯಾಕ್ಟ್ ಮಾಡಿ ಒಂದಷ್ಟು ಒಳಾಂಗಣ ವಿಚಾರಗಳನ್ನ ತಿಳಿದುಕೊಂದ್ದೀವಿ. ಅದೆಲ್ಲವೂ ಕಂಪ್ಲೀಟ್ ಡಿಟೈಲ್ ಆರ್ಟಿಕಲ್ ನಲ್ಲಿ ನಿಮ್ಗೆ ಸಿಗಲಿದೆ.

    ಎಲ್ಲರಂತೆ ನಾನೂ ಯೋಚಿಸಿದ್ರೆ ವಿಭಿನ್ನ ಸಿನಿಮಾ ಹೇಗೆ ಕೊಡೋದು?:
    ಅಶೋಕ್ ಎಂಬ ಹೆಸರು ಕೇಳಿದ್ರೆ ಈಗ ಎಲ್ಲರ ಕಿವಿ ನಿಮಿರುತ್ತೆ. ಸಕ್ಸಸ್ ಫುಲ್ ಡೈರೆಕ್ಟರ್, ಮಾಡಿದ್ರೆ ಮತ್ತೊಂದು ಸಕ್ಸಸ್ ಸಿನಿಮಾನೇ ಮಾಡ್ತಾರೆ ಅನ್ನೋ ನಂಬಿಕೆ. ಹೀಗಾಗಿ ಈ ಪ್ರಶ್ನೆಯನ್ನ ಅವರ ಮುಂದೆ ಇಟ್ಟಾಗ, ಸಿನಿಮಾವನ್ನ ಎಲ್ಲರು ಮಾಡ್ತಾರೆ. ಅದೇ ಸಬ್ಜೆಕ್ಟ್, ಅದೇ ಪ್ಲೇಸ್ ಗಳು. ಆದ್ರೆ ಇರೋ ಸಬ್ಜೆಕ್ಟ್ ನಲ್ಲೇ ಏನೋ ಇದೆ ಅಂತ ಅನ್ನಿಸಬೇಕು ಅಂತ ಸಿನಿಮಾಗಳನ್ನ ಕೊಡಬೇಕು. ಹೊಸ ಸಿನಿಮಾ ಮಾಡ್ಬೇಕು ಅನ್ನೋದು ನನ್ನ ಗುರಿ. ಸಿನಿಮಾ ಮಾಡ್ಬೇಕಲ್ಲ ಅಂತ ಆಲ್ಟ್ರನೇಟ್ ಸಿನಿಮಾ ಮಾಡೋದಲ್ಲ. ಅದೇ ಪ್ರೀತಿ, ಅದೇ ದುಷ್ಮನಿ ವಿಚಾರಗಳೇ ನಾವೂ ಬದುಕುತ್ತಿರುವ ಪ್ರಪಂಚದಲ್ಲಿರೋದು. ಹೀಗಾಗಿ ಜನರಿಗೆ ರೀಚ್ ಮಾಡುವಾಗ ಕೊಡೊ ಪ್ರೆಸೆಂಟೇಷನ್ ಇದೆಯಲ್ಲ ಅದು ಬಹಳ ಮುಖ್ಯವಾಗುತ್ತೆ. ಆ ಸಿನಿಮಾ ನೋಡಿದ್ರೆ ನಂಗೇನೆ ಎಕ್ಸೈಟ್ ಅನ್ನಿಸ್ಬೇಕು. ಸಬ್ಜೆಕ್ಟ್ ನಲ್ಲಿ ನಂಗೇನೆ ಕುತೂಹಲ ಮೂಡ್ಲಿಲ್ಲ ಅಂದ್ರೆ ನಾನು ಆ ವಿಚಾರವನ್ನ ಟಚ್ ಮಾಡೋಕು ಹೋಗಲ್ಲ? ಅನ್ನೋದು ನಿರ್ದೇಶಕರ ಮಾತು. ಇದಕ್ಕೆ ಇರ್ಬೇಕು ನಮ್ಮ ನಡುವೆ ಇರೋ ಸಣ್ಣ-ಸಣ್ಣ ಸಬ್ಜೆಕ್ಟ್ ಗಳನ್ನು 3 ಗಂಟೆಗಳ ಕಾಲ ಕೂತಲ್ಲೇ ಕೂರುವಂತೆ ಮಾಡೋದು.

    ಸಕ್ಸಸ್ ಬೇಕು ಅಂದ್ರೆ ಪೇಪರ್ ವರ್ಕ್ ಮಾಡಿ:
    ಒಬ್ಬ ನಿರ್ದೇಶಕನಿಗೆ ರಿಸರ್ಚ್ ಕ್ಯಾರೆಕ್ಟರ್ ಇಲ್ಲ ಅಂದ್ರೆ ಯಶಸ್ಸು ಅನ್ನೋದು ಕಷ್ಟವೇ ಆಗುತ್ತೆ. ಅದನ್ನೇ ಡೈರೆಕ್ಟರ್ ಅಶೋಕ್ ಅವರು ಕೂಡ ಹೇಳಿದ್ದಾರೆ. ಒಂದು ಸಿನಿಮಾದ ಆಳ ಅಗಲ ಅರಿಯಬೇಕಾದ್ರೆ ಪೇಪರ್ ವರ್ಕ್ ತುಂಬಾ ಮುಖ್ಯ ಆಗುತ್ತೆ. ತುಂಬಾ ಪೇಪರ್ ವರ್ಕ್ ಮಾಡಿದಾಗ ಮಾತ್ರ ಒಂದೊಳ್ಳೆ ಸಿನಿಮಾ ಕೊಡೊದಕ್ಕೆ ಸಾಧ್ಯವಾಗುತ್ತೆ. ಸಿನಿಮಾಗೆ ಯಾವ್ದೋ ಒಂದ್ ಸಬ್ಜೆಕ್ಟ್ ಸಿಗುತ್ತೆ. ಸ್ಟೋರಿ ಬರೆಯೋನ ಕೆಪಾಸಿಟಿ ಇದೆ ಅಂತ ನಮ್ಮ ತಲೆಗೆ ಬಂದಂಗೆ ಸ್ಟೋರಿ ಬರೆದುಕೊಂಡು ಹೋಗೋದಲ್ಲ. ಆ ವಿಚಾರದ ಬಗ್ಗೆ ಒಂದಷ್ಟು ರಿಸರ್ಚ್ ಮಾಡಬೇಕು, ಒಂದಷ್ಟು ಮಂದಿಯನ್ನ ಮಾತಾಡಿಸಬೇಕು. ಆಗ ನಮ್ಮ ತಲೆಯಲ್ಲಿ ಇರುವ ವಿಚಾರಕ್ಕಿಂತ ಡಿಫ್ರೆಂಟ್ ಡಿಫ್ರೆಂಟ್ ವಿಚಾರಗಳು ತಿಳಿಯುತ್ತವೆ. ಸ್ಟೋರಿ ತೆಗೆದುಕೊಂಡು ಹೋಗಬೇಕೆಂದುಕೊಂಡ ರೀತಿಯೇ ಬದಲಾಗುತ್ತೆ ಅನ್ನೋದು ಅವರ ನಂಬಿಕೆ. ಅವರು ಕೂಡ ಇದನ್ನೇ ಅಂತೆ ಫಾಲೋ ಮಾಡೋದು. ಹೇಗೆ ಅನ್ನೋದನ್ನ ಮುಂದೆ ಹೇಳಿದ್ದಾರೆ ನೋಡಿ.

    ಐಡಿಯಾ ಕೆನ್ ಚೇಂಜ್ ಯುವರ್ ಲೈಫ್?
    6-5=2 ಈ ಸಿನಿಮಾವನ್ನ ಜನ ಆಗ ಹುಚ್ಚೆದ್ದು ನೋಡಿದ್ರು. ಆ ಸಿನಿಮಾ ನಿಜ ಅಂದ್ಕೊಂಡಿದ್ರಲ್ಲಿ ನಾನು ಕೂಡ ಒಬ್ಳು. ಈ ಸಿನಿಮಾ ಬಗ್ಗೆ ಡೈರೆಕ್ಟರ್ ಏನಂದ್ರು ಗೊತ್ತಾ..?. ನಾನು ಮೊದಲಿಗೆ ಮಾಡಿದ್ದು ಹಾರಾರ್ ಸಿನಿಮಾ. ಆ ಸಿನಿಮಾ ಬರೋಕು ಮುನ್ನ ಹಾರಾರ್ ಮೂವಿಗಳು ಎಷ್ಟ್ ಬಂದಿಲ್ಲ ಅಲ್ವಾ. ಆದ್ರೆ ಜನ ಆ ಸಿನಿಮಾವನ್ನ ತುಂಬಾ ಪ್ರೀತಿಸಿದ್ರು. ಈಗ್ಲೂ ನೋಡ್ತಾರೆ. ಅದಕ್ಕೆಲ್ಲಾ ರಿಸರ್ಚ್ ಕಾರಣ. ಹಾರಾರ್ ಅನ್ನೋದನ್ನ ಇಟ್ಕೊಂಡು ಹಳ್ಳಿ-ಹಳ್ಳಿ ಸುತ್ತಿದಾಗ, ಒಂದಷ್ಟು ಜನರನ್ನ ಮಾತಾಡಿಸಿದಾಗ ಅದೆಷ್ಟೋ ವಿಚಾರಗಳು ಸಿಕ್ಕಿದ್ವು. ಹಾಗಾಗಿಯೇ ಅಂತ ಒಂದೊಳ್ಳೆ ಸಿನಿಮಾವನ್ನ ಮಾಡೋಕೆ ಸಾಧ್ಯ ಆಯ್ತು. ಇನ್ನು ಮೊನ್ನೆ ಮೊನ್ನೆ ಸಕ್ಸಸ್ ಕೊಟ್ಟಂತ ದಿಯಾ ಸಿನಿಮಾನು ಹಾಗೇ. ಐಡಿಯಾ ಕೆನ್ ಚೆಂಜ್ ಯುವರ್ ಲೈಫ್ ಅಂತಾರಲ್ಲ ಹಾಗೇ. ಪೇಪರ್ ಓದುವಾಗ ಒಂದ್ ಹೆಡ್ ಲೈನ್ ಕಾಣಿಸ್ತು. ಮಿಸ್ ಕಾಲ್ ನಿಂದಾದ ಪರಿಚಯ, ಮುಂದೆ ಏನಾಯ್ತು ಅಂತ. ಅದೇ ಸಬ್ಜೆಕ್ಟ್ ತಗೊಂಡೆ, ರಿಸರ್ಚ್ ಮಾಡ್ದೆ, ಪೇಪರ್ ವರ್ಕ್ ಮಾಡ್ದೆ, ಸಾಕಷ್ಟು ಪುಸ್ತಕಗಳನ್ನ ಓದಿದೆ. ಫೈನಲಿ ಒಂದು ಹಂತಕ್ಕೆ ಸ್ಕ್ರಿಪ್ಟ್ ರೆಡಿ ಮಾಡಿ, ಆತ್ಮೀಯರಲ್ಲಿ ತೋರಿಸಿದೆ. ಎಲ್ಲರು ಚೆನ್ನಾಗಿದೆ ಅಂದ್ರು. ಸಿನಿಮಾ ಶುರು ಮಾಡಿ, ಶೂಟಿಂಗ್ ಮುಗ್ಸಿ, ರಿಲೀಸ್ ಮಾಡಿ, ಸಕ್ಸಸ್ ಕಂಡ್ವಿ.

    ದಿಯಾ ಹಣ ಮಾಡುತ್ತೆ ಅಂತ ಗೊತ್ತಿರ್ಲಿಲ್ಲ, ಗೆಲ್ಲುತ್ತೆ ಅನ್ನೋ ನಂಬಿಕೆ ಇತ್ತು:
    ಹೆತ್ತವಳಿಗೆ ಹೆಗ್ಗಣ ಮುದ್ದು ಅನ್ನೋ ಮಾತಿದೆ. ತಾವೂ ಮಾಡಿದ ಸಿನಿಮಾ ಹೇಗೆ ಇದ್ದರು ಚೆನ್ನಾಗಿದೆ ಎಂದುಕೊಳ್ಳುವ ಕೆಲವರ ನಡುವೆ ಇವರು ಭಿನ್ನ. ದಿಯಾ ಈಗಾಗಲೇ ಸಕ್ಸಸ್ ಕಂಡ ಸಿನಿಮಾ. ಆದ್ರೆ ಇಷ್ಟೊಂದು ಸಕ್ಸಸ್ ಕಾಣುತ್ತೆ ಅಂತ ನಿರ್ದೇಶಕರಿಗೆ ಗೊತ್ತಿರಲಿಲ್ಲವಂತೆ. ಸಿನಿಮಾ ಇಷ್ಟಪಡ್ತಾರೆ ಅಂತ ಶೇ.100 ಗೊತ್ತಿತ್ತು. ಆದ್ರೆ ಹಣ ಗಳಿಸುತ್ತೆ ಅಂತ ಗೊತ್ತಿರಲಿಲ್ಲ. ಯಾಕಂದ್ರೆ ಕಮರ್ಷಿಯಲ್ ಪರ್ಪಸ್ ನಲ್ಲಿ ಮಾಡೋ ಸಿನಿಮಾಗಳೇ ಬೇರೆ ರೀತಿ ಇರುತ್ತವೇ. ದಿಯಾ ಆ ಮಟ್ಟಿಗೆ ಮಾಡೋಕೆ ಆಗಿರಲಿಲ್ಲ. ದಿಯಾದಲ್ಲಿ ಹಾಡಿಗಾಗ್ಲಿ, ಫೈಟ್ ಗಾಗ್ಲಿ ಪ್ರಾಶಸ್ತ್ಯ ಕೊಟ್ಟಿಲ್ಲ. ಆದ್ರೆ ಬಾಲಿವುಡ್ ನಲ್ಲೆಲ್ಲಾ ಇಂಥ ಸಿನಿಮಾಗಳು ಸಾಕಷ್ಟಿವೆ. ಹೀಗಾಗಿ ಆ ಭಾವನೆಗಳು ಇಲ್ಲು ಕ್ಲಿಕ್ ಆಗ್ತಾವೆ ಅಂತ ಗೊತ್ತಿತ್ತು. ಹೀಗಾಗಿ ಸಾಂಗ್ ಇಲ್ಲದೆಯೂ ರೋಮ್ಯಾಂಟಿಕ್ ಕಥೆಯೊಂದಿಗೆ ಪ್ರಯತ್ನ ಪಡೋಣಾ ಎಂಬ ಚಾಲೆಂಜ್ ಇಟ್ಟುಕೊಂಡೆ ಸಿನಿಮಾ ಟ್ರೈ ಮಾಡಿದ್ದು.

    ನಾನ್ ಮಾಡಿದ ಸಿನಿಮಾ ಎಲ್ಲಿ ನೋಡಿದ್ರು, ಅದೇ ಭಾವನೆ:
    ದಿಯಾ ಓಟಿಟಿ ನಲ್ಲಿ ಓಡಿದ ರಭಸಕ್ಕೆ, ಪ್ರೇಕ್ಷಕರೇ ಬೇಸರ ಮಾಡಿಕೊಂಡ್ರು. ಥಿಯೇಟರ್ ನಲ್ಲಿ ಓಡಿದ್ರೆ ಪ್ರೊಡ್ಯೂಸರ್ ಗೆ ಒಳ್ಳೆ ಲಾಭ ಆಗ್ತಾ ಇತ್ತು ಅಂತ. ಆದ್ರೆ ಈ ಬಗ್ಗೆ ಅಶೋಕ್, ದಿಯಾ ಥಿಯೇಟರ್ ನಲ್ಲಿ ಓಡೋ ಸಿನಿಮಾ ಅಂತ ಅನ್ನಿಸಿಲ್ಲ. ಮೂವಿಗಳನ್ನ ಥಿಯೇಟರ್ ನಲ್ಲಿ ನೋಡುವಷ್ಟು ತೂಕ ಇರ್ಬೇಕು ಅಲ್ವಾ. ಸ್ಟಾರ್ ಸಿನಿಮಾಗಳನ್ನ ಥಿಯೇಟರ್ ನಲ್ಲೇ ನೋಡ್ಬೇಕು. ಹಣ ಕೊಟ್ಟು ನೋಡಿದಾಗ ಹೌದು ನನ್ನ ಹಣಕ್ಕೆ ಸಾರ್ಥಕತೆ ಇದೆ ಅಂತ ಅನ್ನಿಸುತ್ತೆ. ಮನರಂಜನೆ ಅಷ್ಟು ಸಿಗುತ್ತೆ. ಸ್ಟಾರ್ ಸಿನಿಮಾಗಳು ಥಿಯೇಟರ್ ಅನುಭವವನ್ನ ಫೀಲ್ ಮಾಡಿಸ್ತಾರೆ. ಆದ್ರೆ ನಾನ್ ಮಾಡಿದ ಸಿನಿಮಾಗಳು ಥಿಯೇಟರ್ ಸಿನಿಮಾ ಅನ್ನೋಕ್ ಆಗಲ್ಲ. ಯಾಕಂದ್ರೆ ಆ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡಿದಾಗ ಎಷ್ಟು ಎಮೋಷನಲ್ ಫೀಲ್ ಆಗುತ್ತೊ ಮೊಬೈಲ್ ನೋಡಿದಾಗಲೂ ಅಷ್ಟೇ ಎಮೋಷನಲ್ ಫೀಲ್ ಆಗುತ್ತೆ. ಅದೆ ಒಬ್ಬ ಸ್ಟಾರ್ ಸಿನಿಮಾವನ್ನ ಮೊಬೈಲ್ ನಲ್ಲಿ ನೋಡಿದ್ರೆ ಆ ಫೀಲ್ ಸಿಗೋದೆ ಇಲ್ಲ. ಫೈಟ್, ಆಕ್ಷನ್, ಆ ಸೌಮಡ್ ಇವನ್ನೆಲ್ಲಾ ಫೀಲ್ ಮಾಡೋಕೆ ನೀವೂ ಥಿಯೇಟರ್ ಗೆ ಹೋಗ್ಬೇಕು. ಥಿಯೇಟರ್ ಗೆ ವರ್ಥ್ ಆಗಿರೋ ಸಿನಿಮಾಗಳನ್ನ ಮಾಡಿದ್ರೆ ನಾವು ಅದನ್ನ ನಿರೀಕ್ಷೆ ಮಾಡಬಹುದು. ಇಲ್ಲಂದ್ರೆ ಥಿಯೇಟರ್ ನಲ್ಲಿ ಕಷ್ಟ ಆಗುತ್ತೆ. ಅಂತ ತುಂಬಾ ಸಿಂಪಲ್ ಆಗಿ ಉತ್ತರಿಸಿದ್ದಾರೆ.

    ಹಿಂದಿಯಲ್ಲಿ ನಿರ್ದೇಶನಕ್ಕಿಳಿಯುವ ಸಾಧ್ಯತೆ ಇದೆ:
    ಈಗಾಗಲೇ ದಿಯಾ ಸಿನಿಮಾ ತೆಲುಗು, ತಮಿಳು, ಹಿಂದಿ ರೈಟ್ಸ್ ನ್ನ ಪಡೆದಾಗಿದೆ. ಹಿಂದಿಯಲ್ಲಿ ನಿರ್ದೇಶನ ಯಾರ್ ಮಾಡ್ತಾರೆ ಅನ್ನೋ ಪ್ರಶ್ನೆಗೆ ನಿರ್ದೇಶಕರೇ ಉತ್ತರಿಸಿದ್ದಾರೆ. ದಿಯಾ ಇದೀಗ ಹಿಂದಿ, ತಮಿಳು ತೆಲುಗು ಎಲ್ಲಾ ರಿಮೇಕ್ ರೈಟ್ಸ್ ಪಡೆದುಕೊಂಡಿದೆ. ಹಿಂದಿ ರಿಮೇಕ್ ಮಾಡುವುದರ ಬಗ್ಗೆ ಮಾತುಕತೆ ನಡೀತಾ ಇದೆ. ಹಿಂದಿಯಲ್ಲಿ ಕೂಡ ನಾನೇ ಡೈರೆಕ್ಟ್ ಮಾಡ್ತಾ ಇದ್ದೀನಿ. ಇದರ ಜೊತೆ ಜೊತೆಗೆ ಬೇರೊಂದು ಸಿನಿಮಾದ ಕಥೆ ಬಗ್ಗೆಯೂ ಥಿಂಕ್ ಮಾಡ್ತಾ ಇದ್ದೀನಿ. ಹಾರಾರ್, ರೋಮ್ಯಾಂಟಿಕ್ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡಿದ್ದಾಯ್ತು. ಈಗ ಸೀರಿಯಲ್ ಕಿಲ್ಲರ್ ಸಿನಿಮಾ ಮಾಡ್ಬೇಕು ಅಂದ್ಕೊಂಡಿದ್ದೀನಿ. ಹೀಗಾಗಿ ಈ ಮಧ್ಯೆ ಆ ಸ್ಕ್ರಿಪ್ಟ್ ಕಡೆ ಗಮನ ಕೊಟ್ಟಿದ್ದೇನೆ.

    ನನ್ನಿ ತಾಳ್ಮೆಗೆ ಸೆಟ್ ನಲ್ಲಿರುವವರೇ ಬೈತಾರೆ:
    6-5=2, ದಿಯಾ ಅಂತ ಸಕ್ಸಸ್ ಮೂವಿ ಕೊಟ್ಟಾಗ್ಲೇ ಎಲ್ಲರೂ ಕೂಡ ಯಾರಿದು ಅಶೋಕ್ ಅಂತ ಸರ್ಚ್ ಮಾಡೇ ಮಾಡಿರ್ತೀರಾ. ಅವರಿಗೆಲ್ಲಾ ಅವರ ತಾಳ್ಮೆಯ ರೂಪವೇ ಪರಿಚಯವಾಗಿರುತ್ತೆ. ಆಗ ಅನ್ಸಿರುತ್ತೆ ಒಬ್ಬ ಡೈರೆಕ್ಟರ್ ಆಗಿ ಇಷ್ಟು ತಾಳ್ಮೆ ಹೇಗೆ ಸಾಧ್ಯ, ಕ್ಯಾಮೆರಾ ಮುಂದೆ ಹೀಗೆ ಇರಬಹುದಾ ಅನ್ನೋ ಪ್ರಶ್ನೆಗಳು ಮೂಡಿರಬಹುದು. ಖಂಡಿತ ಇಲ್ಲ ಅಶೋಕ್ ಅವರ ನಿಜಸ್ವರೂಪವೇ ಅದು. ಮುಂದೆ ಓದಿ ಅವರೇ ಅವರ ಬಗ್ಗೆ ಹೇಳಿಕೊಂಡಿದ್ದಾರೆ. ಶ್ರೀರಂಗಪಟ್ಟಣದ ಕ್ಯಾತನಹಳ್ಳಿ ಎಂಬ ಪುಟ್ಟ ಗ್ರಾಮದಿಂದ ಬಂದವನು ನಾನು. ಸಿನಿಮಾ ನೋಡಿ ಹುಚ್ಚು ಇರುವವರೇ ಸಿನಿಮಾ ಇಂಡಸ್ಟ್ರಿಗೆ ಬರೋದು. ಸಿನಿಮಾ ನೋಡುವಾಗ ಛೆ ಈ ಸೀನು ಹೀಗೆ ಮಾಡಬಾರದಿತ್ತು, ಆ ಫೈಟ್ ಹಿಂಗೆ ಇದ್ದಿದ್ರೆ ಸೂಪರ್ ಎಂಬೆಲ್ಲಾ ಬಿಟ್ಟಿ ಕಮೆಂಟ್ ಹೊಡಿತಾ ಇರ್ತೀವಿ. ನಾನು ಸಿನಿಮಾ ಮಾಡೋಣಾ ಅಂತ ಮನಸ್ಸಿಗೆ ಬರುತ್ತೆ. ಆ ರೀತಿ ಅನ್ನಿಸಿ ಸಿನಿಮಾಗೆ ಬಂದವನು. ಇಂಜಿನಿಯರಿಂಗ್ ಮುಗ್ಸಿ ಒಂದು ಕಂಪನಿಯಲ್ಲಿ ವರ್ಕ್ ಮಾಡ್ತಾ ಇದ್ದೆ. ವರ್ಕ್ ಬಿಟ್ಟು ಚೆನ್ನೈನಲ್ಲಿ ಸಿನಿಮಾ ಕೋರ್ಸ ಸೇರಿಕೊಂಡೆ. ಆನಂತರ ಅಸಿಸ್ಟೆಂಟ್ ಆಗಿ ಕೆಲಸ ಶುರು ಮಾಡಿದೆ. ಮಾಡ್ತಾ ಮಾಡ್ತಾ ದಿಯಾ ಆಂಡ್ 6-5=2 ಎರಡು ಸಿನಿಮಾ ಸ್ಕ್ರಿಪ್ಟ್ ಬರೆದಿದ್ದೆ. ನಿರಾಮಪಕರು ಸಿಕ್ಕ ಮೇಲೆ ಈ ಎರಡು ಸಿನಿಮಾಗಳನ್ನ ನಾನೇ ಮಾಡಿದೆ.

    ನಾನು ಓದಿದ್ದು ನವೋದಯ ಶಾಲೆಯಲ್ಲಿ. ಅಲ್ಲಿ ಶಿಸ್ತು, ತಾಳ್ಮೆ ಎರಡನ್ನು ಕಲಿಯಬೇಕಾಗುತ್ತದೆ. ಹೀಗಾಗಿ ನನಗೆ ಬಾಲ್ಯದಿಂದ ಬಂದ ತಾಳ್ಮೆ ಈಗಲೂ ಮುಂದುವರಿಯುತ್ತಿದೆ. ಅದೊಂಥರ ನಂಗು ಬೇಜಾರೇ. ದೇವರು ಸ್ವಲ್ಪ ಜಾಸ್ತಿ ಕೊಟ್ ಬಿಟ್ಟಿದ್ದಾನೆ. ಯಾಕಂದ್ರೆ ಸೆಟ್ ನಲ್ಲಿ ಕೆಲಸ ಸರಿ ಆಗ್ಲಿಲ್ಲ ಅಂದ್ರೆ ಕೂಗಾಡ್ತಾರೆ. ನಾನು ತಾಳ್ಮೆಯಿಂದ ಹೇಳ್ತೆನೆ. ನಂಗೆ ಫೈನಲಿ ಔಟ್ ಪುಟ್ ಚೆನ್ನಾಗಿ ಬರ್ಬೇಕು. ತಾಳ್ಮೆ ಅದಕ್ಕೆ ಅನುಕೂಲ ಮಾಡಿಕೊಟ್ಟಿದೆ.

    ಒಟ್ಟಾರೆ ಎರಡು ಸಕ್ಸಸ್ ಫುಲ್ ಸಿನಿಮಾ ಕೊಟ್ಟ ತಾಳ್ಮೆಯ ಸ್ವರೂಪಿ ಅಶೋಕ್ ಬಾಲಿವುಡ್ ಗೆ ಜಂಪ್ ಆಗ್ತಾ ಇದ್ದಾರೆ. ಜೊತೆಗೆ ಮತ್ತೊಂದು ಸ್ಕ್ರಿಪ್ಟ್ ಕೂಡ ಮಾಡ್ತಾ ಇದ್ದಾರೆ. ಮತ್ತೊಂದು ಒಳ್ಳೆ ಸಿನಿಮಾವನ್ನ ನೋಡಬಹುದು ಎಂಬ ನಿರೀಕ್ಷೆ ಹಾಗೆ ಉಳಿದಿದೆ.

  • ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಇಂದಿನಿಂದ ಶ್ರೀಮನ್ನಾರಾಯಣನ ದರ್ಶನ- ಪ್ರೀಮಿಯರ್ ಶೋನಲ್ಲಿ ರಕ್ಷಿತ್ ಶೆಟ್ಟಿಗೆ ಶಹಬ್ಬಾಷ್

    ಬೆಂಗಳೂರು: `ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಲಕ್ಷ್ಮೀ ಸಮೇತ ಇಂದು ರಕ್ಷಿತ್ ಶೆಟ್ಟಿ ರಾಜಾದ್ಯಂತ ಥಿಯೇಟರ್‍ಗೆ ಎಂಟ್ರಿಕೊಡುತ್ತಿದ್ದಾರೆ. ವಿಭಿನ್ನ ಕಥೆಯ ಮೂಲಕ ಅದೃಷ್ಟ ಪರೀಕ್ಷೆಗಿಳಿದಿರುವ ಸಿಂಪಲ್‍ಸ್ಟಾರ್ ಬಂಪರ್ ಫಲಿತಾಂಶಕ್ಕೆ ಎದುರು ನೋಡುತ್ತಿದ್ದಾರೆ.

    ಹೌದು. ಇಂದಿನಿಂದ ಶ್ರೀಮನ್ನಾರಾಯಣ ದರ್ಶನ ಕೊಡುತ್ತಿದ್ದಾನೆ. ಹ್ಯಾಟ್ಸಪ್ ಸಾಂಗ್ ಮೂಲಕ ಕಿಕ್ಕೇರಿಸಿದ್ದ ರಕ್ಷಿತ್ ಶೆಟ್ಟಿಯ ಕಲ್ಪನೆಯ ಕೂಸು ಅವನೇ ಶ್ರೀಮನ್ನಾರಾಯಣ ಇಂದು 10 ಗಂಟೆಯಿಂದ ಬೆಳ್ಳಿತೆರೆಯ ಮೇಲೆ ರಾರಾಜಿಸಲಿದೆ. ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿರೋ ಸಿಂಪಲ್ ಸ್ಟಾರ್ ನ ಸಕ್ಸಸ್ ಯಾತ್ರೆ ಇಂದು 450ಕ್ಕೂ ಹೆಚ್ಚಿನ ಚಿತ್ರಮಂದಿರಲ್ಲಿಂದು ಮೆರವಣಿಗೆ ಹೊರಡಲಿದೆ.

    ಅಂದಹಾಗೇ ಅವನೇ ಶ್ರೀಮನ್ನಾರಾಯಣನ ರಕ್ಷಿತ್ ಶೆಟ್ಟಿಯ ಮೂರು ವರ್ಷದ ತಪಸ್ಸು. ಈಗಾಗಲೇ ಇನ್ಸ್ ಸ್ಟಾಗ್ರಾಂ, ಫೇಸ್‍ಬುಕ್, ಟ್ವಿಟ್ಟರ್ ನಲ್ಲಿ ಶ್ರೀಮನ್ನಾರಾಯಣ ಭಜನೆ ಜೋರಾಗಿದೆ. ಚಿತ್ರಮಂದಿರದ ಮುಂದೆ ಅವನೇ ಶ್ರೀಮನ್ನಾರಾಯಣನ ಕಟೌಟ್‍ಗಳು ರಾರಾಜಿಸ್ತಿದ್ದು, ಗ್ರ್ಯಾಂಡಾಗಿ ನಾರಾಯಣನನ್ನು ವೆಲ್‍ಕಂ ಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ.

    ಗುರುವಾರ ಊರ್ವಶಿ ಚಿತ್ರಮಂದಿರದಲ್ಲಿ ಅದ್ಧೂರಿ ಪ್ರೀಮಿಯರ್ ಶೋ ಏರ್ಪಡಿಸಲಾಗಿತ್ತು. ಕಲರ್‍ಫುಲ್ ಪ್ರಿಮಿಯರ್ ಶೋನಲ್ಲಿ ಶಿವರಾಜ್ ಕುಮಾರ್, ರವಿಚಂದ್ರನ್, ರಿಷಬ್ ಶೆಟ್ಟಿ, ಅನೂಪ್ ಭಂಡಾರಿ, ನಿರೂಪ್ ಭಂಡಾರಿ, ಗುರುದತ್ತ್, ವಸಿಷ್ಠ, ಇಮ್ರಾನ್ ಸರ್ದಾರಿಯಾ, ಕೆ.ಮಂಜು ಸೇರಿದಂತೆ ಚಿತ್ರರಂಗ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ರು. ಚಿತ್ರ ನೋಡಿದವರೆಲ್ಲಾ ಶೆಟ್ರಿಗೆ ಹ್ಯಾಟ್ಸಪ್ ಹೇಳಿದ್ದಾರೆ.

    1980ರ ಕಾಲಘಟ್ಟದ ಕಥೆ ಇದಾಗಿದೆ. ಸೂಪರ್ ಹಿಟ್ ಚಿತ್ರ ಕಿರಿಕ್ ಪಾರ್ಟಿ ವೇಳೆ ಹೊಳೆದ ಅವನೇ ಶ್ರೀಮನ್ನಾರಾಯಣ ಕಥೆಯನ್ನ ಸ್ವತಃ ರಕ್ಷಿತೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರ ಅಂದ್ರೆ ಅದರಲ್ಲೇನೋ ವಿಶೇಷ ಇದ್ದೇ ಇರುತ್ತೆ. ಫ್ಯಾನ್ ಇಂಡಿಯಾ ರಿಲೀಸ್ ಆಗಲಿರುವ ಚಿತ್ರಕ್ಕೆ ಸಚಿನ್ ನಿರ್ದೇಶನವಿದೆ, ರಕ್ಷಿತ್ ಶೆಟ್ಟಿ- ಶಾನ್ವಿ ಜೋಡಿಯನ್ನು ಬೆಳ್ಳಿತೆರೆಯಲ್ಲಿ ಕಣ್ತುಂಬಿಕೊಳ್ಳುವ ಕಾತರತೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್ ಗೌಡ ನಿರ್ಮಿಸಿರೋ 30 ಕೋಟಿ ವೆಚ್ಚದ `ಅವನೇ ಶ್ರೀಮನ್ನಾರಾಯಣ’ ದರ್ಶನಕ್ಕೆ ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಒಟ್ಟಿನಲ್ಲಿ ಸಿನಿರಸಿಕರೇ ಚರಿತ್ರೆ ಸೃಷ್ಠಿಸುವ ಅವತಾರದಲ್ಲಿ `ಅವನೇ ಶ್ರೀಮನ್ನಾರಾಯಣ’ ಮತ್ತು ಅಮರಾವತಿಯಿಂದ ಬಂದಿರೋ ಲಕ್ಷ್ಮೀಯ ದರ್ಶನನ್ನ ಥಿಯೇಟರ್‍ನಲ್ಲೇ ಪಡೆಯಿರಿ.

  • ‘ಛಾಯ’ ಹಾಡುಗಳ ಅನಾವರಣ

    ‘ಛಾಯ’ ಹಾಡುಗಳ ಅನಾವರಣ

    ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿರುವ ಜಗ್ಗು ಇದೇ ಮೊದಲ ಬಾರಿಗೆ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಛಾಯ ಎಂಬ ಛಾಯೆ ಇರುವ ಹಾರಾರ್ ಸಿನಿಮಾ ಇದಾಗಿದ್ದು, ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ನೆರವೇರಿತು. ಸಿರಿ ಮ್ಯೂಜಿಕ್ ಆಡಿಯೋ ಕಂಪನಿ ಮುಖಾಂತರ ಈ ಆಡಿಯೋವನ್ನು ಹೊರತರಲಾಗಿದೆ.

    ಈಗಾಗಲೇ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಹಾಡುಗಳು ಹಾಗೂ ಸಾಹಸ ದೃಶ್ಯಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ. ಮಧುಗೌಡ್ರು ನಿರ್ಮಾಣದ ಮೊದಲ ಚಿತ್ರವಿದು. ವೀರೇಶ್ ಬಾಬು, ನಂದನ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

    ನಿರ್ಮಾಪಕ ಮಧುಗೌಡ್ರು ಮಾತನಾಡಿ, ನಿರ್ದೇಶಕ ಜಗ್ಗು ಒಳ್ಳೆ ಪ್ರಯತ್ನ ಮಾಡಿದ್ದಾರೆ. ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಬಾಹುಬಲಿ ತರಹದ ಸಿನಿಮಾ ಮಾಡುವ ಆಸೆಯಿದೆ. ಈ ಚಿತ್ರದಿಂದ ಒಳ್ಳೆಯ ಮೆಸೇಜ್ ಕೂಡ ಬೇಕೆಂಬುದು ನಮ್ಮ ಉದ್ದೇಶ. ಚಿತ್ರಕ್ಕೆ ಬೇಕಾದುದ್ದನ್ನು ಒದಗಿಸಿದ್ದೇವೆ ಎಂದು ಹೇಳಿದರು.

    ಆನಂದ್ ನಾಯಕನಾಗಿ ನಟಿಸಿದ್ದು ತೇಜುರಾಜು ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಹೇಮಂತ್, ನಂದನ್, ದರ್ಶನ್, ರಾಜಶೇಖರ್, ರಾಜು, ಉದಯ್, ಅನನ್ಯ, ಲಕ್ಷ್ಮಿ, ಗೋವಿಂದಪ್ಪ, ರಾಜ್‍ಪ್ರಭು, ನಯನ ಕೃಷ್ಣ, ಕಿಲ್ಲರ್ ವೆಂಕಟೇಶ್, ರೋಹಿಣಿ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹಾಡುಗಳಿಗೆ ಮಂಜುಕವಿ ಸಾಹಿತ್ಯ ರಚಿಸಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರುಣ್ ವೀರೂರ್ ಚಿತ್ರದ ಕ್ಯಾಮರಾ ವರ್ಕ್ ಮಾಡಿದ್ದಾರೆ. ದುರ್ಗಾ ಪಿ.ಎಸ್. ಸಂಕಲನ, ಅಪ್ಪುವೆಂಕಟೇಶ್, ಯಾರಿಶ್ ಜಾನಿ ಸಾಹಸವಿದೆ.

    ನಾಲ್ಕು ಜನ ಹುಡುಗರು ಒಂದು ಮನೆಗೆ ಬಂದಾಗ ಅಲ್ಲಿ ನಡೆಯುವ ವಿಚಿತ್ರ ಘಟನೆಗಳೇ ಈ ಚಿತ್ರದ ಕಥಾವಸ್ತು. ನಾಯಕ ಆನಂದ್ ನಾನು ಪುನೀತ್ ರಾಜ್ ಕುಮಾರ್ ತರ ಕಾಣಿಸಿಕೊಳ್ಳುತ್ತಿದ್ದೇನೆ ಎಂಬ ಹೆಮ್ಮೆಯಿದೆ. ಅತ್ಯಾಚಾರ ಎನ್ನುವುದು ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಅಂತಹವರನ್ನು ಹೇಗೆ ಶಿಕ್ಷಿಸಬಹುದು ಎನ್ನುವ ಕಥೆ ಚಿತ್ರದಲ್ಲಿದೆ. ನಾನು ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಅಭಿನಯಿಸಿದ್ದೇನೆ ಎಂದು ಹೇಳಿದರು.

    ನಾಯಕಿ ತೇಜುರಾಜ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ ನಾಯಕನ ಹೆಂಡತಿ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ನಟ ರಾಜ್ ಉದಯ್ ಈ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಸೋಮಶೇಖರ್ ಹಾಗೂ ಸಿರಿ ಮ್ಯೂಸಿಕ್ ಕಂಪನಿಯ ಮಾಲೀಕರಾದ ಸುರೇಶ್ ಚಿಕ್ಕಣ್ಣ ಮುಂತಾದವರು ಭಾಗವಹಿಸಿದ್ದರು.

  • ರೆಡಿಯಾಗ್ತಿದೆ ಹಾರರ್ ಮೂವಿ ‘ಛಾಯ’

    ರೆಡಿಯಾಗ್ತಿದೆ ಹಾರರ್ ಮೂವಿ ‘ಛಾಯ’

    ಬೆಂಗಳೂರು: ಕಳೆದ 22 ವರ್ಷಗಳಿಂದಲೂ ನೃತ್ಯ ಕಲಾವಿದರಾಗಿ ಹಾಗೂ ಸುಮಾರು ಚಿತ್ರಗಳಿಗೆ ನೃತ್ಯ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಜಗ್ಗು ಈಗ ಸಿನಿಮಾ ನಿರ್ದೇಶಕರಾಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಆಗ ಉಪೇಂದ್ರ ಅಭಿನಯದ ‘ಎ’ ಚಿತ್ರದಲ್ಲಿ ಕೂಡ ಕೆಲಸ ಮಾಡಿರುವ ಜಗ್ಗು ಈಗ ‘ಛಾಯ’ ಎಂಬ ಚಲನಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಕೊರಿಯೋಗ್ರಾಫರ್ ಆಗಿಯೂ ಕೆಲಸ ಮಾಡಿದ್ದಾರೆ.

    ಲವ್ ಹಾಗೂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರದ ಟಾಕಿ ಭಾಗ ಈಗಾಗಲೇ ಮುಕ್ತಾಯಗೊಂಡಿದ್ದು, ಚಿತ್ರದಲ್ಲಿ ಐದು ಹಾಡುಗಳು ಮತ್ತು ನಾಲ್ಕು ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಬೆಂಗಳೂರು, ಸಕಲೇಶಪುರ ಹಾಗೂ ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ನಾಲ್ಕು ಜನ ಸ್ನೇಹಿತರ ನಡುವೆ ನಡೆಯುವ ಕತೆ ಈ ಚಿತ್ರದಲ್ಲಿದ್ದು, ಇದರ ಜೊತೆಗೆ ಒಂದು ಹಾರರ್ ಎಲಿಮೆಂಟ್ ಕೂಡ ಇದೆ. ದೆವ್ವದ ರಿವೇಂಜ್ ಕಥೆಯನ್ನು ಕೂಡ ನಿರ್ದೇಶಕರು ಈ ಚಿತ್ರದಲ್ಲಿ ತಂದಿದ್ದಾರೆ.

    ನ್ಯೂ ಗ್ಲೋಬಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಮಧು ಗೌಡ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಅರುಣ್ ಬೀರೂರು ಛಾಯಾಗ್ರಹಣ, ಮಂಜು ಕವಿ ಸಂಗೀತ, ಅಪ್ಪು ವೆಂಕಟೇಶ್, ಹ್ಯಾರಿಸ್ ಡ್ಯಾನಿ ಸಾಹಸ, ದುರ್ಗ ಪಿ.ಎಸ್. ಸಂಕಲನ, ಮಂಜುಕವಿ ಸಾಹಿತ್ಯ, ನಂದನ್, ಪ್ರವೀರ್ಣ ಚಾಲ್ರ್ಸ್, ರಂಗರಾಜು (ಬಾಬಣ್ಣ) ಸಹ ನಿರ್ಮಾಪಕರಾಗಿದ್ದು, ಆನಂದ್ ತೇಜು, ರಾಜಶೇಖರ್, ಅನನ್ಯಾ, ನಯನ ಕೃಷ್ಣ, ಲಕ್ಪ್ಷ್ಮಣ್, ಗೋವಿಂದಪ್ಪ, ಲಕ್ಷ್ಮಿ, ಕಿಲ್ಲರ್ ವೆಂಕಟೇಶ್, ರಾಜ್ ಉದಯ್, ರೋಹಿಣಿ, ಅಮೃತ್ ರಾಜ್ ಮುಂತಾದವರ ತಾರಾಬಳಗವಿದೆ.

  • ನಿರ್ದೇಶಕ ದಿನೇಶ್ ಬಾಬು ಹಗಲುಗನಸು!

    ನಿರ್ದೇಶಕ ದಿನೇಶ್ ಬಾಬು ಹಗಲುಗನಸು!

    ಈವರೆಗೂ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶನ ಮಾಡೋ ಮೂಲಕ ಸ್ಟಾರ್ ನಿರ್ದೇಶಕ ಎಂದೇ ಹೆಸರಾಗಿರುವವರು ದಿನೇಶ್ ಬಾಬು. ಅವರು ಈ ಹಿಂದೆ ಪ್ರಿಯಾಂಕಾ ಎಂಬ ಚಿತ್ರ ನಿರ್ದೇಶನ ಮಾಡಿದ ನಂತರ ತೆಲುಗಿನತ್ತ ಪಯಣ ಬೆಳೆಸಿದ್ದರು. ಅಲ್ಲೊಂದು ಚಿತ್ರ ನಿರ್ದೇಶನ ಮಾಡಿ ಮತ್ತೆ ಕನ್ನಡಕ್ಕೆ ವಾಪಾಸಾಗಿರೋ ದಿನೇಶ್ ಬಾಬು ಇದೀಗ ಹಗಲುಗನಸು ಕಾಣಲಾರಂಭಿಸಿದ್ದಾರೆ.

    ತಮ್ಮ ಚಿತ್ರಗಳಿಗೆ ಭಿನ್ನವಾದ ಶೀರ್ಷಿಕೆಯನ್ನೇ ಇಡುತ್ತಾ ಬಂದಿರೋ ದಿನೇಶ್ ಬಾಬು ತಮ್ಮ ಹೊಸಾ ಚಿತ್ರಕ್ಕೆ ‘ಹಗಲುಗನಸು’ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಕೂಡಾ ಇದೀಗ ಬಿಡುಗಡೆಯಾಗಿದೆ.

    ಸನಿಹಾ ಯಾದವ್

    ಈ ಹಿಂದೆ ದಿನೇಶ್ ಬಾಬು ಅವರು ಇದು ಸಾಧ್ಯ ಎಂಬ ಚಿತ್ರದ ಮೂಲಕ ಹೊಸಾ ಸಾಧ್ಯತೆಯೊಂದನ್ನು ತೆರೆದಿಟ್ಟಿದ್ದರು. ಇದೀಗ ಅದೇ ದಾರಿಯಲ್ಲಿ ಹಗಲುಗನಸು ಚಿತ್ರವನ್ನು ನಿರ್ದೇಶನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಇದೊಂದು ಥ್ರಿಲ್ಲರ್ ಕಥನ ಎಂಬ ವಿಚಾರವನ್ನು ಜಾಹೀರು ಮಾಡಿದ್ದಾರೆ.

    ಈ ಚಿತ್ರದಲ್ಲಿ ನೀನಾಸಂ ಅಶ್ವತ್ಥ್, ಮಾಸ್ಟರ್ ಆನಂದ್, ಅಶ್ವಿನ್ ಹಾಸನ್ ನಟಿಸಿದ್ದಾರೆ. ಸನಿಹಾ ಯಾದವ್ ನಾಯಕಿಯಾಗಿ ನಟಿಸಿದ್ದಾರೆ. ಸದ್ದೇ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಇದರಿಂದ ದಿನೇಶ್ ಬಾಬು ಅವರಿಗೆ ಮತ್ತೊಂದು ಗೆಲುವು ಸಾಧ್ಯವಾಗುತ್ತಾ ಎಂಬುದು ಸದ್ಯದ ಕುತೂಹಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ಸನಿಹಾ ಯಾದವ್