Tag: kannada fim industry

  • ರಕ್ಷಿತ್ ಶೆಟ್ಟಿ ಸಿನಿಮಾ ರಂಗ ಪ್ರವೇಶಿಸಿ 10 ವರ್ಷ- ಗೆಳೆಯರಿಂದ ಶುಭಾಶಯ

    ರಕ್ಷಿತ್ ಶೆಟ್ಟಿ ಸಿನಿಮಾ ರಂಗ ಪ್ರವೇಶಿಸಿ 10 ವರ್ಷ- ಗೆಳೆಯರಿಂದ ಶುಭಾಶಯ

    ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ 10 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅವರ ಸ್ನೇಹಿತರು ಶುಭಾಶಯಗಳ ಸುರಿಮಳೆಗೈಯುತ್ತಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನಿರ್ದೇಶಕ ರಿಷಬ್ ಶೆಟ್ಟಿ, ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನನ್ನ ಸ್ನೇಹಿತ ರಕ್ಷಿತ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 10 ವರ್ಷ. ಮಗಾ, ಕನ್ನಡ ಚಿತ್ರರಂಗದವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ನಿನ್ನ ಆಸೆ, ಕನಸು, ಹಂಬಲ ಎಲ್ಲದಕ್ಕೂ ಮೀರಿದ್ದು. ನಿನ್ನ ಮುಂದಿನ ಸಿನಿ ಜೀವನ ಇನ್ನಷ್ಟು ಸಿಹಿಯಾಗಿರಲಿ ಎಂದು ಹಾರೈಸುವುದಾಗಿ ಬರೆದುಕೊಂಡಿದ್ದಾರೆ. ಅಲ್ಲದೆ ರಕ್ಷಿತ್ ಶೆಟ್ಟಿ ಫೋಟೋವನ್ನು ಕಾಮನ್ ಡಿಪಿಯಾಗಿ ಬಳಸಿದ್ದಾರೆ.

    ಇನ್ನು ನಟಿ ಶೀತಲ್ ಶೆಟ್ಟಿ ವಿಶ್ ಮಾಡಿದ್ದು, ಅಭಿನಂದನೆಗಳು ರಕ್ಷಿತ್ ಶೆಟ್ಟಿ, ಇನ್ನಷ್ಟು ಅದ್ಭುತ ಅನುಭಗಳೊಂದಿಗೆ ನಿನ್ನ ಭವಿಷ್ಯ ಹೀಗೆಯೇ ಮುಂದುವರಿಯಲಿ ಎಂದು ಬರೆದುಕೊಂಡಿದ್ದಾರೆ. ಇನ್ನು ವಿಶ್ ಮಾಡಿದ ಎಲ್ಲರಿಗೂ ರಕ್ಷಿತ್ ಶೆಟ್ಟಿ ಧನ್ಯವಾದಗಳನ್ನು ತಿಳಿಸಿದ್ದಾರೆ.

    ಕನ್ನಡ ಪ್ರತಿಭಾನ್ವಿತ ನಟ, ನಿರ್ದೇಶಕ ರಾಜ್ .ಬಿ ಶೆಟ್ಟಿ ಕೂಡ ರಕ್ಷಿತ್ ಶೆಟ್ಟಿಗೆ ಶುಭಾಶಯ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಅವರು, ರಕ್ಷಿತ್ ಶೆಟ್ಟಿ ಎಂಬ ಕನಸಿಗೆ ಹತ್ತು ವರ್ಷಗಳು. ಕರಾವಳಿಯ ಸಣ್ಣ ಪಟ್ಟಣ ಉಡುಪಿಯಿಂದ ಕನಸನ್ನಷ್ಟೇ ಹೊತ್ತುಕೊಂಡು ಬೆಂಗಳೂರು ಸೇರಿದ ರಕ್ಷಿತ್ ಇಂದು ತನ್ನ ಕನಸನ್ನು ನನಸಾಗಿದ್ದಷ್ಟೇ ಅಲ್ಲ ಸಣ್ಣ ಊರಿನ ಭವಿಷ್ಯದ ಸಿನಿಮಾ ಕರ್ತೃಗಳಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಹಿಟ್ ಸಿನಿಮಾಗಳು ಅನೇಕವಿದ್ದರೂ ನಾನು ಅವರ ಅಭಿಮಾನಿಯಾಗಿದ್ದು ಉಳಿದವರು ಕಂಡಂತೆಗೆ. ಕಾರಣ ನನ್ನೂರಿನ ಭಾಷೆ ಜನ ಮತ್ತು ಸಂಸ್ಕೃತಿಯನ್ನು ಆ ಸಿನಿಮಾದಲ್ಲಿ ಅವರು ಬಿಂಬಿಸಿದ ರೀತಿ. ಉಳಿದವರು ಕಂಡಂತೆ ಇಲ್ಲದಿದ್ದಲ್ಲಿ ಒಂದು ಮೊಟ್ಟೆಯ ಕಥೆ ಮಂಗಳೂರು ಕನ್ನಡ ಭಾಷೆಯಲ್ಲಿಯೇ ಆಗುತ್ತಿತ್ತು ಎನ್ನುವುದು ಸಂಶಯ. ಅಷ್ಟರ ಮಟ್ಟಿಗೆ ನಮ್ಮಲ್ಲಿ ನಂಬಿಕೆ ತಂದದ್ದು ರಕ್ಷಿತ್ ಮತ್ತವರ ಸಿನಿಮಾ. ರಕ್ಷಿತ್ ಇನ್ನಷ್ಟು ಬೆಳೆಯಲಿ ಎಂಬ ಆಶಯದೊಂದಿಗೆ ಅವರಿಗೆ ಒಳ್ಳೆಯಾದಾಗಲಿ ಎಂದು ಬರೆದುಕೊಂಡಿದ್ದಾರೆ.

    ರಕ್ಷಿತ್ ಸಿನಿಜರ್ನಿ:
    ಕರಾವಳಿಯ ಅಪ್ಪಟ ಪ್ರತಿಭೆಯಾಗಿರುವ ರಕ್ಷಿತ್ ಶೆಟ್ಟಿ, ಎರಡು ವರ್ಷ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿದ್ದರು. ಆ ಬಳಿಕ ಸಿನಿಮಾ ರಂಗ ಪ್ರವೇಶಿಸಿದ ಅವರು, ಆರಂಭದಲ್ಲಿ ತಾವು ನಟಿಸಿದ ಎರಡು ಸಿನಿಮಾಗಳು ಅಷ್ಟೊಂದು ಹೆಸರು ತಂದುಕೊಡಲಿಲ್ಲ. ಆದರೆ ಛಲಬಿಡದ ರಕ್ಷಿತ್ ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಸಿನಿಮಾದಲ್ಲಿ ನಟನೆ ಮಾಡಿ ಸೈ ಅನಿಸಿಕೊಂಡಿದ್ದಲ್ಲದೇ ಎಲ್ಲರ ಹಾಟ್ ಫೇವರೇಟ್ ಆಗಿ ಮಿಂಚಿದ್ದರು. ಆ ಬಳಿಕದ ‘ಉಳಿದವರು ಕಂಡಂತೆ’ ಒಂದು ಲೆವೆಲ್‍ನಲ್ಲಿ ರಕ್ಷಿತ್‍ಗೆ ಹೆಸರು ತಂದುಕೊಟ್ಟಿದ್ದು, ನಂತರ ನಟಿಸಿದ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ಕೂಡ ಸೆಟ್ಟೇರಿತು.

    ಇದಾದ ಬಳಿಕ ಅಮದರೆ 2016ರಲ್ಲಿ ‘ಕಿರಿಕ್ ಪಾರ್ಟಿ’ ಸನಿಮಾ ತೆರೆಕಂಡಿದೆ. ಆನಂತರ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ರಿಲೀಸ್ ಆಗಿದ್ದು, ಜನರ ಮನಸ್ಸಲ್ಲಿ ಸಿಂಪಲ್ ಸ್ಟಾರ್ ಉಳಿದುಕೊಂಡರು. ಕೇವಲ ನಟರಾಗದೆ ನಿರ್ದೇಶಕರೂ ಆಗಿರುವ ರಕ್ಷಿತ್, ಸದ್ಯ ‘ಪುಣ್ಯಕೋಟಿ’, ‘ಸಪ್ತಸಾಗರದಾಚೆ ಎಲ್ಲೋ’, ‘777 ಚಾರ್ಲಿ’ ಸಿನಿಮಾಗಳನ್ನು ಕೂಡ ಒಪ್ಪಿಕೊಂಡಿದ್ದಾರೆ.

  • 40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    40ನೇ ಹುಟ್ಟುಹಬ್ಬ ಆಚರಿಸಿಕೊಂಡ ಜಗ್ಗುದಾದ: ಅಭಿಮಾನಿಗಳಿಂದ ಹಾಡು ಗಿಫ್ಟ್

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಕ್ಸಾಫೀಸ್ ಸುಲ್ತಾನ್ ಅಂತಾನೇ ಖ್ಯಾತಿ ಹೊಂದಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಇಂದು 40ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ತಮ್ಮ ಅಭಿಮಾನಿಗಳ ಸಮುಖದಲ್ಲಿ ಕೇಕ್ ಕತ್ತಿರುಸುವ ಮೂಲಕ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.

    ತಡ ರಾತ್ರಿ 2 ಗಂಟೆಯತನಕ ನೆಚ್ಚಿನ ನಟನಿಗೆ ಶುಭಾಶಯ ಕೊರಲು ಕೇಕ್ ಹಿಡಿದು ಬಾರಿ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಮನೆ ಹತ್ತಿರ ಧಾವಿಸಿ ಶುಭಾಶಯ ಕೋರಿದರು. ಅಲ್ಲದೇ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತಡ ರಾತ್ರಿಯವರೆಗೂ ಅಭಿಮಾನಿಗಳು ಬಂದು ಶುಭಾಶಯ ಕೋರಿದ್ದೇ ನಾನು ಇಷ್ಟು ವರ್ಷ ಸಂಪಾದಿಸಿದ್ದು ಅಂತ ನಟ ದರ್ಶನ್ ಹೇಳಿದರು. ದರ್ಶನ್ ಮನೆಯ ಹತ್ತಿರ ಬರೀ ಬೆಂಗಳೂರಿನವರಷ್ಟೇ ಅಲ್ಲದೇ ಮೈಸೂರು ಶಿವಮೊಗ್ಗ ಯಾದಗಿರಿ ದಾವಣಗೆರೆ ಹಾಸನ ಜಿಲ್ಲೆಗಳಿಂದಲೂ ದರ್ಶನ್ಗೆ ಶುಭಾಶಯ ಕೊರಲು ಅವರ ಮನೆ ಹತ್ತಿರ ಬಂದಿದ್ದರು ಎನ್ನಲಾಗಿದೆ.

    ಹಾಡು ಉಡುಗೊರೆ: ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಾಲೆಜಿಂಗ್ ಸ್ಟಾರ್ ದರ್ಶನ್ ಅವ್ರಿಗೆ ಹಾಡೊಂದು ಉಡುಗೊರೆಯಾಗಿ ನೀಡಿದ್ದಾರೆ. ಸಂಗೀತ ನಿರ್ದೇಶಕ ಸುಪ್ರೀತ್ ಗಾಂಧಾರ ಅಂಡ್ ಟೀಮ್ ಈ ಹಾಡು ರೆಡಿ ಮಾಡಿದ್ದಾರೆ. ಹಾಡಿಗೆ ಶ್ರೀರವಿ ಸಾಹಿತ್ಯ ಬರೆದಿದ್ದು, ಸಂಜೀತ್ ಹೆಗಡೆ ಕಂಠದಾನ ಮಾಡಿದ್ದಾರೆ. ದರ್ಶನ್ 40 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಅಭಿಮಾನಿಗಳಿಗೆ ಈ ಹಾಡು ಮತ್ತಷ್ಟು ಕಿಕ್ ಕೊಡಲಿದೆ. ದರ್ಶನ್ ಅಭಿನಯಿಸಿರೋ ಬಹುತೇಕ ಸಿನಿಮಾದ ಟೈಟಲ್‍ಗಳನ್ನ ಹಾಡಿನಲ್ಲಿ ಬಳಸಲಾಗಿದ್ದು ಲಹರಿ ಮ್ಯೂಸಿಕ್ಸ್ ಸಂಸ್ಥೆ ಈ ಹಾಡನ್ನ ಮಾರುಕಟ್ಟೆಗೆ ತಂದಿದೆ.