Tag: kannada films

  • ದೊಡ್ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತ ಹೆಸರಿಟ್ಟ ಶಿವಣ್ಣ

    ದೊಡ್ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತ ಹೆಸರಿಟ್ಟ ಶಿವಣ್ಣ

    ರುನಾಡ ರಾಜಕುಮಾರ ಪುನೀತ್‌ಗಾಗಿ ಇಂದಿಗೂ ಅಭಿಮಾನಿಗಳು ಕಣ್ಣೀರಿಡುತ್ತಿದ್ದಾರೆ. ಅಪ್ಪು ಅಗಲಿಕೆ ಈಗಲೂ ಫ್ಯಾನ್ಸ್ಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೀಗ ಶಿವಣ್ಣ ಅವರಲ್ಲಿ ಅಪ್ಪು ಅವರನ್ನ ಕಾಣ್ತಿದ್ದಾರೆ. ದೂರದ ಬೀದರ್‌ನಿಂದ ಬಂದ ಅಭಿಮಾನಿ ದಂಪತಿಯ ಪುತ್ರನಿಗೆ ಅಪ್ಪು ಹೆಸರಿಟ್ಟು ಶಿವಣ್ಣ ನಾಮಕರಣ ಮಾಡಿದ್ದಾರೆ.

    ಅಪ್ಪು ಅಗಲಿ ಇದೀಗ 10 ತಿಂಗಳಾಗಿದೆ. ಶಿವಣ್ಣ ಅವರಲ್ಲಿ ಅಪ್ಪುನ ನೋಡಿ ಖುಷಿಪಡ್ತಿದ್ದಾರೆ. ಹೀಗಿರುವಾಗ ಶಿವಣ್ಣ ಅವರ ಕುಟುಂಬದ ಅಭಿಮಾನಿಯೊಬ್ಬರು ದೊಡ್ಮನೆಗೆ ಬಂದು ಶಿವಣ್ಣಗೆ ಭೇಟಿ ಕೊಟ್ಟಿದ್ದಾರೆ. ಇದೀಗ ಮನೆಗೆ ಬಂದ ಅಭಿಮಾನಿಯ ಮಗುವಿಗೆ ಅಪ್ಪು ಅಂತಾ ಶಿವಣ್ಣ ಹೆಸರಿಟ್ಟಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್‌ನಲ್ಲಿ ಲೈಟ್ ಆಫ್ ಆದ್ಮೇಲೆ ನಡೆಯೋದೆ ಬೇರೆ!

    ಬೀದರ್‌ನಿಂದ ಬೆಂಗಳೂರಿಗೆ ಆಗಮಿಸಿದ ಅಭಿಮಾನಿ ದಂಪತಿಯ ಮಗುವಿಗೆ ಅಪ್ಪು ಅಂತಾ ನಾಮಕರಣ ಮಾಡಿ, ದಂಪತಿಗೆ ಆತಿಥ್ಯ ನೀಡಿದ್ದಾರೆ. ಇದೀಗ ಶಿವಣ್ಣ ಅವರ ನಡೆ ನೋಡಿ ಫ್ಯಾನ್ಸ್ ಕೂಡ ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಚಿತ್ರರಂಗದಲ್ಲಿ ಶಿವಣ್ಣ- ರವಿಚಂದ್ರನ್ ಬರ್ತಡೇ ಸಂಭ್ರಮಕ್ಕೆ ಭರ್ಜರಿ ಪ್ಲ್ಯಾನ್

    ಚಿತ್ರರಂಗದಲ್ಲಿ ಶಿವಣ್ಣ- ರವಿಚಂದ್ರನ್ ಬರ್ತಡೇ ಸಂಭ್ರಮಕ್ಕೆ ಭರ್ಜರಿ ಪ್ಲ್ಯಾನ್

    ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಹೆಚ್ಚು ಕಮ್ಮಿ ಒಂದೇ ವಯಸ್ಸಿನ ಆಸುಪಾಸಿನವರು. ತಮ್ಮದೇ ರೀತಿಯಲ್ಲಿ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನ ನೀಡಿದ್ದಾರೆ. ಹಾಗಾಗಿ ಇಬ್ಬರ ಬರ್ತಡೇಯನ್ನ ವಿಶೇಷವಾಗಿ ಆಚರಿಸಲು ಕರ್ನಾಟಕ ಫಿಲ್ಮ್ಂ ಚೇಂಬರ್ ನಿರ್ಧರಿಸಿದೆ.

    ಸಿನಿಮಾರಂಗದಲ್ಲಿ ಶಿವಣ್ಣ ಅವರು 125ಕ್ಕೂ ಅಧಿಕ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ರವಿಚಂದ್ರನ್ ಅವರು ನಟನೆಯ ಜತೆಗೆ ನಿರ್ಮಾಪಕನಾಗಿ, ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. ಶಿವಣ್ಣಗೆ 60 ವರ್ಷ ವಯಸ್ಸು. ರವಿಚಂದ್ರನ್‌ಗೆ 61 ವರ್ಷ ತುಂಬಿದೆ. ಈಗ ಇಬ್ಬರ ಬರ್ತ್ಡೇಯನ್ನು ಒಟ್ಟಾಗಿ ಆಚರಿಸಲು ಕರ್ನಾಟಕ ಫಿಲಂ ಚೇಂಬರ್ ನಿರ್ಧರಿಸಿದೆ. ಶಿವರಾಜ್‌ಕುಮಾರ್ ಜುಲೈ 12ರಂದು ಜನಿಸಿದ್ದಾರೆ. ರವಿಚಂದ್ರನ್ ಅವರು ಜನಿಸಿದ್ದು ಮೇ 30ರಂದು. ಇವರ ಬರ್ತ್ಡೇಯನ್ನು ದೊಡ್ಡದಾಗಿ ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ. ಫಿಲ್ಮಂ ಚೇಂಬರ್ ವತಿಯಿಂದ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಫಿಲ್ಮ್ಂ ಚೇಂಬರ್ ಅಧ್ಯಕ್ಷ ಭಾ.ಮಾ. ಹರೀಶ್ ಯೋಚಿಸಿದ್ದಾರೆ.‌ ಇದನ್ನೂ ಓದಿ:ರಶ್ಮಿಕಾ ಮಂದಣ್ಣ ನಟನೆಯ `ಸೀತಾ ರಾಮಂ’ ಸಿನಿಮಾ ಹಲವು ದೇಶಗಳಲ್ಲಿ ಬ್ಯಾನ್

    ಶಿವರಾಜ್‌ಕುಮಾರ್ ಅವರು ಈ ಬಾರಿ 60ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸಲು ಪುನೀತ್ ರಾಜ್‌ಕುಮಾರ್ ಈ ಮೊದಲೇ ನಿರ್ಧರಿಸಿದ್ದರು. ಆದರೆ, ಪುನೀತ್ ಅಕಾಲಿಕ ಮರಣ ಇಡೀ ಚಿತ್ರರಂಗಕ್ಕೆ ಶಾಕ್ ಕೊಟ್ಟಂತೆ ಆಗಿದೆ. ಬಾರದ ಲೋಕಕ್ಕೆ ಅಪ್ಪು ಹೋಗಿರೋದು ಶಿವಣ್ಣನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಈ ನೋವಿನಲ್ಲಿ ಅವರು ಈ ಬಾರಿ ಬರ್ತ್ಡೇ ಆಚರಿಸಿಕೊಂಡಿಲ್ಲ. ಈ ಕಾರಣಕ್ಕೆ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಶಿವಣ್ಣ ಹಾಗೂ ರವಿಚಂದ್ರನ್ ಬರ್ತ್ಡೇ ದೊಡ್ಡದಾಗಿ ಆಯೋಜಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗವೇ ಸಾಥ್ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿಯಾದ ಕಿಚ್ಚ ಸುದೀಪ್ ದಂಪತಿ

    ವೀರೇಂದ್ರ ಹೆಗ್ಗಡೆ ಅವರನ್ನ ಭೇಟಿಯಾದ ಕಿಚ್ಚ ಸುದೀಪ್ ದಂಪತಿ

    ಕಿಚ್ಚ ಸುದೀಪ್ ನಟನೆಯ `ವಿಕ್ರಾಂತ್ ರೋಣ’ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಕಿಚ್ಚನ ಸಿನಿಮಾಗಾಗಿ ಕಾಯ್ತಿದ್ದ ಫ್ಯಾನ್ಸ್‌ಗೆ `ವಿಕ್ರಾಂತ್ ರೋಣ’ ಚಿತ್ರ ನೋಡಿ ಖುಷಿಪಡ್ತಿದ್ದಾರೆ. ಜೊತೆಗೆ ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ವಿಕ್ಟರಿ ಬಾರಿಸುತ್ತಿದೆ. ಈ ಬೆನ್ನಲ್ಲೇ ವೀರೇಂದ್ರ ಹೆಗ್ಗಡೆ ಅವರನ್ನು ಕಿಚ್ಚ ಸುದೀಪ್ ದಂಪತಿ ಭೇಟಿ ಮಾಡಿದ್ದಾರೆ.

    `ವಿಕ್ರಾಂತ್ ರೋಣ’ ಚಿತ್ರದ ಸಕ್ಸಸ್ ನಂತರ ದೆಹಲಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ವೀರೇಂದ್ರ ಹೆಗ್ಗಡೆ ಅವರನ್ನು ಕಿಚ್ಚ ಸುದೀಪ್ ದಂಪತಿ ಮತ್ತು ನಿರ್ಮಾಪಕ ಜಾಕ್ ಮಂಜು ಭೇಟಿ ಮಾಡಿ, ಆರ್ಶೀವಾದ ಪಡೆದಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಇಟಲಿ- ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾದ ನ್ಯಾಷನಲ್ ಸ್ಟಾರ್ ಯಶ್

    ಅನೂಪ್ ಭಂಡಾರಿ ನಿರ್ದೇಶನದ `ವಿಕ್ರಾಂತ್ ರೋಣ’ ಚಿತ್ರ ಚಿತ್ರಮಂದಿರದಲ್ಲಿ ಕಮಾಲ್ ಮಾಡುತ್ತಿದೆ. ಇದೀಗ ಕಿಚ್ಚನ ಸಿನಿಮಾದ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಇಟಲಿ- ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾದ ನ್ಯಾಷನಲ್ ಸ್ಟಾರ್ ಯಶ್

    ಇಟಲಿ- ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾದ ನ್ಯಾಷನಲ್ ಸ್ಟಾರ್ ಯಶ್

    `ಕೆಜಿಎಫ್’ ಸಿನಿಮಾ ಬಂದ ಮೇಲೆ ಗಡಿ ದಾಟಿ ಬೆಳೆದಿರುವ ನಟ ಯಶ್‌ಗೆ ದೇಶದೆಲ್ಲೆಡೆ ಅಭಿಮಾನಿಗಳಿದ್ದಾರೆ. ರಾಕಿಭಾಯ್ ನಟನೆ ನೋಡಿದ ಮೇಲಂತೂ ಪರಭಾಷೆ, ಹೊರ ದೇಶದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಇದೀಗ ವಿದೇಶದ ಪ್ರವಾಸದಲ್ಲಿರುವ ಯಶ್ ದಂಪತಿ, ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳನ್ನ ಭೇಟಿಯಾಗಿದ್ದಾರೆ.

    ರಾಕಿಭಾಯ್ ಆಗಿ `ಕೆಜಿಎಫ್ 2′ ಚಿತ್ರದ ಭರ್ಜರಿ ಸಕ್ಸಸ್ ನಂತರ ಪತ್ನಿ ರಾಧಿಕಾ ಪಂಡಿತ್ ಜೊತೆ ವಿದೇಶದ ಪ್ರವಾಸದಲ್ಲಿರುವ ಯಶ್‌ಗೆ ಇಟಲಿ ಮತ್ತು ಬಾಂಗ್ಲಾ ದೇಶದ ಅಭಿಮಾನಿಗಳ ಭೇಟಿಯಾಗಿದೆ. ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಸ್ಪೆಷಲ್ ಆಗಿ ಪೋಸ್ಟ್ ಮಾಡಿ, ತಮ್ಮ ಅಭಿಮಾನಿಗಳಿಗೆ ಯಶ್ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ:‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

     

    View this post on Instagram

     

    A post shared by Yash (@thenameisyash)

    ನನ್ನ ಮೇಲಿನ ನಿಮ್ಮ ಪ್ರೀತಿ, ಗಡಿಯನ್ನು ಮೀರಿದೆ. ಇಟಲಿ ಮತ್ತು ಬಾಂಗ್ಲಾದೇಶದಿಂದ ಭೇಟಿಯಾದ ನನ್ನ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಯಶ್ ಪೋಸ್ಟ್ ಮಾಡಿದ್ದಾರೆ. ಇನ್ನು ಯಶ್ ಮುಂದಿನ ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾಗಿಣಿ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ ಸಂಗೀತಾ ಭಟ್

    ನಾಗಿಣಿ ಅವತಾರದಲ್ಲಿ ಎಂಟ್ರಿ ಕೊಡಲಿದ್ದಾರೆ ಸಂಗೀತಾ ಭಟ್

    ಸ್ಯಾಂಡಲ್‌ವುಡ್‌ಗೆ `ರೂಪಾಂತರ’ ಚಿತ್ರದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ನಟಿ ಸಂಗೀತಾ ಭಟ್ ಈಗ ಕಿರುತೆರೆಗೆ ವಿಶೇಷ ಪಾತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ನಾಗಿಣಿ ಅವತಾರದಲ್ಲಿ ಸಂಗೀತಾ ಭಟ್ ಬರುತ್ತಿದ್ದಾರೆ.

    ಎರಡನೇ ಸಲ, ಪ್ರೀತಿ ಗೀತಿ ಇತ್ಯಾದಿ, ಮಾಮು ಟೀ ಅಂಗಡಿ, ದಯವಿಟ್ಟು ಗಮನಿಸಿ, ಸಿನಿಮಾಗಳ ಮೂಲಕ ಗಮನ ಸೆಳೆದಿರುವ ನಟಿ ಸಂಗೀತಾ ಭಟ್ ತಮ್ಮ ವೈಯಕ್ತಿಕ ಜೀವನದತ್ತ ಗಮನ ಹರಿಸುತ್ತಿದ್ದರು. ಇದೀಗ ಮತ್ತೆ ಸಿನಿಮಾಗೆ ಕಂಬ್ಯಾಕ್ ಆಗಿದ್ದಾರೆ. ಕಿರುತೆರೆಯಲ್ಲಿ ಛಾಪೂ ಮೂಡಿಸಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಅಪಪ್ರಚಾರ: ಗರಂ ಆದ ಸುದೀಪ್ ಅಭಿಮಾನಿಗಳು

    ಖಾಸಗಿ ವಾಹಿನಿಯ `ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಸೀರಿಯಲ್‌ನಲ್ಲಿ ವಿಶೇಷ ಪಾತ್ರದಲ್ಲಿ ಅತಿಥಿಯಾಗಿ ನಿರ್ವಹಿಸಿದ್ದಾರೆ. ನಾಗರಪಂಚಮಿ ಪ್ರಯುಕ್ತ ನಾಗಮಣಿ ರಹಸ್ಯ ಎಂಬ ಎಪಿಸೋಡ್‌ಗಾಗಿ ವಿಶೇಷ ಪಾತ್ರ ಮಾಡಿದ್ದಾರೆ. 3 ಗಂಟೆಗಳ ಮಹಾ ಸಂಚಿಕೆ ಇದಾಗಿದೆ. ಈ ಸೀರಿಯಲ್ ಸಂಗೀತಾ ಭಟ್ ನಾಗಿಣಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಜುಲೈ 31ರಂದು ಸಂಜೆ 6 ಗಂಟೆಗೆ ಸಂಚಿಕೆ ಪ್ರಸಾರವಾಗಲಿದೆ. ಸೀರಿಯಲ್ ಪ್ರೋಮೋ ಮೂಲಕ ಹೈಪ್ ಕ್ರಿಯೇಟ್ ಮಾಡಿರುವ ಸೀರಿಯಲ್, ಪ್ರಸಾರದ ನಂತರ ಹೇಗೆಲ್ಲಾ ಕಮಾಲ್ ಮಾಡಬಹುದು ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶದಲ್ಲಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್

    ವಿದೇಶದಲ್ಲಿ ಮಸ್ತ್ ಎಂಜಾಯ್ ಮಾಡ್ತಿದ್ದಾರೆ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್

    ಸ್ಯಾಂಡಲ್‌ವುಡ್‌ನ `ಪೆಟ್ರೋಮ್ಯಾಕ್ಸ್’ ನಟಿ ಕಾರುಣ್ಯ ರಾಮ್ ತನ್ನ ಸಹೋದರಿ ಜತೆ ವಿದೇಶಕ್ಕೆ ಹಾರಿದ್ದಾರೆ. ಬೇರೆ ಬೇರೆ ದೇಶಗಳಿಗೆ ಭೇಟಿ ನೀಡಿ ಮಸ್ತ್ ಮಜಾ ಮಾಡ್ತಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

     

    View this post on Instagram

     

    A post shared by Karunya Ram (@ikarunya)

    ವಜ್ರಕಾಯ, ಎರಡು ಕನಸು, ಮನೆ ಮಾರಾಟಕ್ಕಿದೆ ಚಿತ್ರದ ಮೂಲಕ ಗಮನ ಸೆಳೆದ ನಟಿ ಕಾರುಣ್ಯ ರಾಮ್ `ಪೆಟ್ರೋಮ್ಯಾಕ್ಸ್’ ಚಿತ್ರದ ರಿಲೀಸ್ ನಂತರ ವಿದೇಶಕ್ಕೆ ಹಾರಿದ್ದಾರೆ. ಸಹೋದರಿ ಸಮೃದ್ಧಿ ಜತೆ ಪ್ಯಾರಿಸ್, ಸ್ವೀಜರ್‌ಲ್ಯಾಂಡ್ ಮತ್ತು ಯುರೋಪ್ ದೇಶಕ್ಕೆ ಹೊಗಿದ್ದಾರೆ. ಅಲ್ಲಿನ ಸುಂದರ ತಾಣಗಳಿಗೆ ಭೇಟಿ ನೀಡಿ, ಸಹೋದರಿಯರಿಬ್ಬರು ಮಸ್ತ್ ಮಜಾ ಮಾಡ್ತಿದ್ದಾರೆ. ಇದನ್ನೂ ಓದಿ:3500 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ : ಪಾಕಿಸ್ತಾನ ಸೇರಿ 27 ದೇಶಗಳಲ್ಲಿ ಚಿತ್ರ ಪ್ರದರ್ಶನ

     

    View this post on Instagram

     

    A post shared by Karunya Ram (@ikarunya)

    ಕಳೆದ ವಾರವಷ್ಟೇ ತೆರೆಕಂಡ ಸತೀಶ್ ನೀನಾಸಂ ನಟನೆಯ `ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ಕಾರುಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ವ್ಯಕ್ತವಾಗುತ್ತಿದೆ.

     

    View this post on Instagram

     

    A post shared by Karunya Ram (@ikarunya)

    ಈ ಬೆನ್ನಲ್ಲೇ ಪ್ಯಾರಿಸ್, ಸ್ವೀಜರ್‌ಲ್ಯಾಂಡ್, ಯುರೋಪ್‌ನಲ್ಲಿ ಪ್ರವಾಸ ಮಾಡುತ್ತಾ ಫುಲ್ ಎಂಜಾಯ್ ಮಾಡ್ತಿದ್ದಾರೆ. ನಟಿ ಮುದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ಮಗನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿದ ಸಂಜನಾ ಗಲ್ರಾನಿ

    ಸ್ಯಾಂಡಲ್‌ವುಡ್ ಬ್ಯೂಟಿ ಸಂಜನಾ ಗಲ್ರಾನಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಸಂಜನಾ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇತ್ತೀಚೆಗಷ್ಟೇ ಮಗುವಿಗೆ `ಅಲಾರಿಕ್’ ಎಂಬ ಹೆಸರನ್ನ ಇಟ್ಟಿದ್ದರು. ಈಗ ಮುದ್ದು ಮಗನ ಜತೆ ಮೊದಲ ಬಾರಿಗೆ ರೀಲ್ಸ್ ಮಾಡಿ, ಸುದ್ದಿಯಲ್ಲಿದ್ದಾರೆ.

    ಮುದ್ದು ಮಗನ ಪೋಷಣೆಯಲ್ಲಿ ಬ್ಯುಸಿಯಾಗಿರುವ ಸಂಜನಾ ಗಲ್ರಾನಿ, ಇದೀಗ ಮಗುವಿನ ಜೊತೆ ಮೊದಲ ಬಾರಿಗೆ ರೀಲ್ಸ್ ಮಾಡಿ ಸಿನಿರಸಿಕರ ಗಮನ ಸೆಳೆದಿದ್ದಾರೆ. ಮುದ್ದು ಮಗ ಅಲಾರಿಕ್ ಜತೆ ಚೆಂದದೊಂದು ರೀಲ್ಸ್‌ಗೆ ಹೆಜ್ಜೆ ಸಂಜನಾ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ:ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಮಗನ ಲಾಲನೆ ಬ್ಯುಸಿಯಿರುವ ಸಂಜನಾ ಗಲ್ರಾನಿ, ಮುಂದಿನ ದಿನಗಳಲ್ಲಿ ಪವರ್‌ಫುಲ್ ಪಾತ್ರಗಳ ಮೂಲಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಮಿಂಚಲಿದ್ದಾರೆ. ಬ್ರೇಕ್‌ನ ನಂತರ ಮತ್ತೆ ಬೆಳ್ಳಿತೆರೆಯಲ್ಲಿ `ಗಂಡ ಹೆಂಡತಿ’ ಖ್ಯಾತಿಯ ನಾಯಕಿ ಸಂಜನಾ ಮಿಂಚೋದು ಗ್ಯಾರೆಂಟಿ.

    Live Tv
    [brid partner=56869869 player=32851 video=960834 autoplay=true]

  • ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಗುಮ್ಮನ ಜೊತೆ ಬಂದ `ವಿಕ್ರಾಂತ್ ರೋಣ’ ಟೀಮ್: ಹೊಸ ಸಾಂಗ್‌ ರಿಲೀಸ್

    ಚಿತ್ರರಂಗದಲ್ಲಿ ಸದ್ಯ ಕೇಳಿ ಬರುತ್ತಿರುವ ಚಿತ್ರದ ಹೆಸರು `ವಿಕ್ರಾಂತ್ ರೋಣ’ ಚಿತ್ರದ ಲುಕ್ ಮತ್ತು ಸಾಂಗ್ಸ್ ಮೂಲಕ ಧೂಳೆಬ್ಬಿಸುತ್ತಿದೆ. ಈ ಚಿತ್ರದಿಂದ ನಾಲ್ಕನೇ ಸಾಂಗ್ ರಿಲೀಸ್ ಆಗಿ ಸಿನಿಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ನಿರೀಕ್ಷಿತ ಸಿನಿಮಾ `ವಿಕ್ರಾಂತ್ ರೋಣ’ ಚಂದನವನದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿತ್ರದ ಮೊದಲ ಸಾಂಗ್ `ರಾ ರಾ ರಕ್ಕಮ್ಮ’ ಸಾಂಗ್‌ನಿಂದ ಹಿಡಿದು ಈಗ ರಿಲೀಸ್ ಆಗಿರುವ `ಗುಮ್ಮ ಬಂದ ಗುಮ್ಮ’ ಸಾಂಗ್‌ವೆರೆಗೂ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದೆ. ಇದನ್ನೂ ಓದಿ:ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಆಸ್ಪತ್ರೆಗೆ ದಾಖಲು

    ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದಲ್ಲಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ `ಗುಮ್ಮ ಬಂದ ಗುಮ್ಮ’ ಸಾಂಗ್ ಮೂಡಿ ಬಂದಿದೆ. ಈ ಹಾಡು ಸಿನಿರಸಿಕರ ಗಮನ ಸೆಳೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಾಂಗ್ ವೈರಲ್ ಆಗುತ್ತಿದೆ. ರಕ್ಕಮ್ಮನ ಕಿಕ್‌ನಲ್ಲಿರುವ ಫ್ಯಾನ್ಸ್ಗೆ ಗುಮ್ಮನ ಸಾಂಗ್ ದಿಲ್ ಗೆದ್ದಿದೆ.

    ಚಿತ್ರದಲ್ಲಿ ಕಿಚ್ಚ ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್ ಪ್ರಮುಖ ಪಾತ್ರದಲ್ಲಿ ಸಾಥ್ ನೀಡಿದ್ದಾರೆ. ಇದೇ ಜುಲೈ 28ಕ್ಕೆ 3ಡಿ ರೂಪದಲ್ಲಿ ತೆರೆಗೆ ಅಬ್ಬರಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಡ್ ಬಾಯ್ ಎಂದು ಆರೋಪಿಸಿದ ಮಗನಿಗೆ, ಯಶ್ ಆವಾಜ್

    ಬ್ಯಾಡ್ ಬಾಯ್ ಎಂದು ಆರೋಪಿಸಿದ ಮಗನಿಗೆ, ಯಶ್ ಆವಾಜ್

    ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರುವ ಯಶ್ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ತಾವು ಎಷ್ಟೇ ಬ್ಯುಸಿಯಿದ್ದರು ಕುಟುಂಬಕ್ಕಾಗಿ ಒಂದಿಷ್ಟು ಸಮಯವನ್ನು ಯಶ್ ಮೀಸಲಿಡುತ್ತಾರೆ. ಈಗ ತಮ್ಮ ಪುಟ್ಟ ಮಗ ಯಥರ್ವ್‌ನಿಂದ ಹೊಸ ಆರೋಪವೊಂದನ್ನ ಯಶ್ ಎದುರಿಸುತ್ತಿದ್ದಾರೆ. ಅಪ್ಪ ಬ್ಯಾಡ್ ಬಾಯ್ ಎಂದು ಆರೋಪಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Radhika Pandit (@iamradhikapandit)

    ರಾಧಿಕಾ ಪಂಡಿತ್ ಮಡಿಲಿನಲ್ಲಿ ಯಥರ್ವ್ ಸಪ್ಪೆ ಮುಖ ಮಾಡಿಕೊಂಡು ಕುಳಿತಿದ್ದಾನೆ. ಅಪ್ಪ ಬ್ಯಾಡ್ ಬಾಯ್ ಅಂತಾ ವಾದಿಸಿದ್ದಾನೆ. ಈ ಸ್ಪೆಷಲ್ ವಿಡಿಯೋವನ್ನ ನಟಿ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ. ಅಮ್ಮ ಗುಡ್ ಗರ್ಲ್, ಅಪ್ಪ ಬ್ಯಾಡ್ ಬಾಯ್ ಎಂದು ಮಗ ಯಥರ್ವ್ ಆರೋಪ ಮಾಡಿದ್ದಾನೆ. ಮಗನಿಂದ ಗುಡ್ ಬಾಯ್ ಎಂದು ಕರೆಯಿಸಿಕೊಳ್ಳಲು ಯಶ್ ಸಖತ್ ಪ್ರಯತ್ನ ಪಟ್ಟು ಸೋತಿದ್ದಾರೆ. ಅಪ್ಪ ಬ್ಯಾಡ್ ಬಾಯ್ ಎಂದೇ ಪದೇ ಪದೇ ಯಥರ್ವ್‌ ವಾದ ಮಾಡಿದ್ದಾನೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:`ಪಂಚತಂತ್ರ’ ನಟನಿಗೆ ರಕ್ಷಿತ್ ಶೆಟ್ಟಿ ಸಾಥ್: ವಿಹಾನ್‌ಗೆ ನಾಯಕಿಯಾದ ಅಂಕಿತಾ ಅಮರ್

     

    View this post on Instagram

     

    A post shared by Radhika Pandit (@iamradhikapandit)

    ಬಳಿಕ ಹೋಗಲೇ ಬಂದ್ಬಿಟ್ಟ, ಇವನೊಬ್ಬ ಬಾಕಿ ಇದ್ದ ಎಂದು ಮಗನಿಗೆ ಪ್ರೀತಿಯಿಂದ ಯಶ್ ಆವಾಜ್ ಹಾಕಿದ್ದಾರೆ. ಈ ವಿಡಿಯೋವನ್ನ ಶೇರ್ ಮಾಡಿರುವ ರಾಧಿಕಾ ಪಂಡಿತ್, ತೀರ್ಪು ಹೊರಬಿದ್ದಿದೆ ಎಂದು ಅಡಿಬರಹ ನೀಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ತುಂಬಾ ಕ್ಯೂಟ್ ಆಗಿದೆ ಅಂತಾ ಕಾಮೆಂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಗಿಟ್ಟಿಸಿಕೊಳ್ಳುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಜೀವನದ ಪ್ರಮುಖ ವ್ಯಕ್ತಿಗಳಿಗೆ ಕಿಸ್ ಮಾಡಿದ ಪ್ರಣಿತಾ ಸುಭಾಷ್

    ಜೀವನದ ಪ್ರಮುಖ ವ್ಯಕ್ತಿಗಳಿಗೆ ಕಿಸ್ ಮಾಡಿದ ಪ್ರಣಿತಾ ಸುಭಾಷ್

    ಸ್ಯಾಂಡಲ್‌ವುಡ್ ಚೆಲುವೆ ಪ್ರಣಿತಾ ಸುಭಾಷ್ ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಪ್ರಣಿತಾ ಜನ್ಮ ನೀಡಿದ್ದರು. ಈಗ ಹೊಸ ಅತಿಥಿಯ ಆಗಮನದ ಖುಷಿಯಿಂದ ಮನೆಯಲ್ಲಿ ಸಂತಸ ಮನೆ ಮಾಡಿದೆ. ಇನ್ನು ತನ್ನ ಜೀವನದ ಪ್ರಮುಖ ವ್ಯಕ್ತಿಗಳಿಗೆ ಕಿಸ್ ಮಾಡಿರುವ ಪೋಸ್ಟ್‌ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ಬಹುಭಾಷಾ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಯಕಿ ಪ್ರಣಿತಾ ಸದ್ಯ ತಾಯ್ತನದ ಖುಷಿಯನ್ನ ಸವಿಯುತ್ತಿದ್ದಾರೆ. ಮಗುವಿನ ಪೋಷಣೆಯಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ತನ್ನ ಜೀವನದ ಪ್ರಮುಖ ವ್ಯಕ್ತಿಗಳಿಗೆ ಪ್ರಣಿತಾ ಕಿಸ್ ಮಾಡಿರುವ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. ತಮ್ಮ ಮುದ್ದು ಮಗಳಿಗೆ ಮತ್ತು ಪತಿಗೆ ಕಿಸ್ ಮಾಡಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ಹಾಲಿವುಡ್‌ನತ್ತ ಮುಖ ಮಾಡಿದ ದಕ್ಷಿಣದ ಸ್ಟಾರ್ಸ್‌

    ಸದ್ಯ ಮಗುವಿನ ಪಾಲನೆಯಲ್ಲಿ ಬ್ಯುಸಿಯಿರುವ ನಟಿ ಪ್ರಣಿತಾ ಸದ್ಯದಲ್ಲೇ ಹೊಸ ಸಿನಿಮಾಗಳ ಮೂಲಕ ಕಂಬ್ಯಾಕ್ ಆಗಲಿದ್ದಾರೆ. ಪವರ್‌ಫುಲ್ ಪಾತ್ರದ ಮೂಲಕ ರಂಜಿಸಲು ನಟಿ ಸಜ್ಜಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]