Tag: Kanakotsava

  • ರಾಮನಗರದಲ್ಲಿ ಕನಕೋತ್ಸವಕ್ಕೆ ಅದ್ಧೂರಿ ತೆರೆ- ಉಸಿರೇ… ಉಸಿರೇ… ಹಾಡು ಹಾಡಿ ಹುಚ್ಚೆಬ್ಬಿಸಿದ ಕಿಚ್ಚ

    ರಾಮನಗರದಲ್ಲಿ ಕನಕೋತ್ಸವಕ್ಕೆ ಅದ್ಧೂರಿ ತೆರೆ- ಉಸಿರೇ… ಉಸಿರೇ… ಹಾಡು ಹಾಡಿ ಹುಚ್ಚೆಬ್ಬಿಸಿದ ಕಿಚ್ಚ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆದ ಅದ್ಧೂರಿ ಕನಕೋತ್ಸವಕ್ಕೆ ರಾತ್ರಿ ತೆರೆ ಬಿದ್ದಿದೆ. ರಾತ್ರಿ ಕನಕೋತ್ಸವದ ಮುಕ್ತಾಯ ಸಮಾರಂಭಕ್ಕೆ ಆಗಮಿಸಿದ್ದ ಸ್ಯಾಂಡಲ್‍ವುಡ್‍ನ ಚಿತ್ರತಾರೆಯರ ದಂಡು ಮೆರಗು ತಂದಿತ್ತು.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ರವರ ಮೂಸಿಕಲ್ ನೈಟ್ಸ್ ನಗರದ ಪುರಸಭೆ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಸಾರ್ವಜನಿಕರನ್ನು ಹುಚ್ಚೆಬ್ಬಿಸಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನಕೋತ್ಸವಕ್ಕೆ ಆಗಮಿಸಿ ಹುಚ್ಚ ಚಿತ್ರದ ಉಸಿರೇ… ಉಸಿರೇ… ಹಾಡು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದ್ರು. ಇದೇ ವೇಳೆ ಕನಕಪುರ ನಿವಾಸಿ ಪ್ರಖ್ಯಾತ್ ಅಭಿನಯದ ನಡುವೆ ಅಂತರವಿರಲಿ ಚಿತ್ರದ ಟ್ರೇಲರನ್ನು ನಟ ಸುದೀಪ್ ಬಿಡುಗಡೆ ಮಾಡಿದ್ರು. ಅಲ್ಲದೇ ಕೆಲ ಸಮಯ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸಿದ್ರು.

    ಇದಲ್ಲದೇ ನಟಿ ಮಾನ್ವಿತಾ, ಶಾನ್ವಿ, ರಂಜಿತಾ ಇನ್ನೂ ಅನೇಕ ಚಿತ್ರ ತಾರೆಯರು ಕನಕೋತ್ಸವದಲ್ಲಿ ಪಾಲ್ಗೊಂಡಿದ್ರು. ಅಲ್ಲದೇ ಪ್ರತಿ ತಾರೆಯರು ಸಹ ಡ್ಯಾನ್ಸ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ರು. ಇದೇ ವೇಳೆ ಮಾತನಾಡಿದ ನಟ ಸುದೀಪ್ ಡಿಕೆ ಬ್ರದರ್ಸ್‍ರವರು ನಡೆಸುತ್ತಿರುವ ಕನಕೋತ್ಸವ ಕಾರ್ಯಕ್ರಮವನ್ನ ಶ್ಲಾಘಿಸಿದ್ರು.

    ಸುದೀಪ್‍ರನ್ನು ಇದೇ ವೇಳೆ ಸನ್ಮಾನಿಸಿದ ಇಂಧನ ಸಚಿವ ಡಿ.ಕೆ ಶಿವಕುಮಾರ್, ಸುದೀಪ್ ರಾಜ್ಯಕ್ಕೆ ದೊಡ್ಡ ಆಸ್ತಿ. ಅವರ ಕೀರ್ತಿ ಇದೀಗ ವಿಶ್ವದೆತ್ತರಕ್ಕೆ ಪಸರಿಸ್ತಾ ಇರುವುದಕ್ಕೆ ಅಭಿನಂದಿಸಿದ್ರು.

  • ಕನಕೋತ್ಸವಕ್ಕೆ ಮೆರುಗು ನೀಡಿದ ಡಾಗ್ ಶೋ- ದೇಶ, ವಿದೇಶಿ ತಳಿಯ ಶ್ವಾನಗಳ ಪ್ರದರ್ಶನ

    ಕನಕೋತ್ಸವಕ್ಕೆ ಮೆರುಗು ನೀಡಿದ ಡಾಗ್ ಶೋ- ದೇಶ, ವಿದೇಶಿ ತಳಿಯ ಶ್ವಾನಗಳ ಪ್ರದರ್ಶನ

    ರಾಮನಗರ: ಜಿಲ್ಲೆಯ ಕನಕಪುರದಲ್ಲಿ ನಡೆಯುತ್ತಿರುವ ಕನಕೋತ್ಸವದ ಹಬ್ಬದಲ್ಲಿ ದಿನನಿತ್ಯ ಜನಜಂಗುಳಿ. ಅದರಲ್ಲೂ ಜನರ ನಡುವೆ ಆಕರ್ಷಣೆಯಾಗಿದ್ದು ಶ್ವಾನಗಳ ಪ್ರದರ್ಶನ. ಶ್ವಾನ ಪ್ರಿಯರನ್ನ ಕನಕೋತ್ಸವ ಆಕರ್ಷಿಸಿದರೆ, ಉತ್ಸವಕ್ಕೆ ಬಂದಿದ್ದ ಶ್ವಾನಗಳು ಜನರನ್ನ ಆಕರ್ಷಿಸಿದವು.

    ವಿವಿಧ ತಳಿಯ ಶ್ವಾನಗಳ ramp ಶೋ ಕಂಡ ಜನರು ಶ್ವಾನಗಳ ಜೊತೆ ಸೆಲ್ಫಿಗೆ ಮುಗಿಬಿದ್ದರು. ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕನಕೋತ್ಸವದಲ್ಲಿ ಭಾನುವಾರದಂದು ಶ್ವಾನಗಳ ಪ್ರದರ್ಶನ, ಸವಿರುಚಿ ಹಾಗೂ ಡರ್ಟ್ ರೇಸ್ ಆಯೋಜಿಸಲಾಗಿತ್ತು.

    ರೂರಲ್ ಕಾಲೇಜು ಮೈದಾನದಲ್ಲಿ ನಡೆದ ಶ್ವಾನ ಪ್ರದರ್ಶನದಲ್ಲಿ ಹತ್ತಾರು ತಳಿಯ ಶ್ವಾನಗಳು ಶ್ವಾನಪ್ರಿಯರನ್ನು ಆಕರ್ಷಿಸಿದವು. ಶ್ವಾನ ಪ್ರದರ್ಶನದಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿದ್ದು ಸೈಬೀರಿಯಾದ ಐಸ್ ಡಾಗ್. ಐಸ್ ಡಾಗ್‍ನ ಆಕರ್ಷಣೆಗೆ ಶ್ವಾನದ ಮಾಲೀಕರಿಗೆ ಹೆಚ್ಚಿನ ಸಂತಸ ಉಂಟುಮಾಡಿತ್ತು.

    ಡಾಗ್ ಶೋನಲ್ಲಿ 44 ದಿನಗಳ ಮರಿಗಳಿಂದ ಸುಮಾರು 4 ವರ್ಷದವರೆಗಿನ ದೊಡ್ಡ ನಾಯಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಡಾಬರ್ ಮನ್, ಬಗ್, ಉಮೇರಿಯನ್, ಸೈಂಟ್ ಬರ್ನಾಡ್, ಆಲ್‍ಶೇಷಿಯನ್, ಸ್ಥಳೀಯ ಬೇಟೆ ನಾಯಿ, ಮುಧೋಳ ನಾಯಿಗಳು ಈ ಸ್ಪರ್ಧೆಯಲ್ಲಿ ಜನರನ್ನು ಆಕರ್ಷಿಸಿದವು.

    ಸೈಬೀರಿಯಾದಿಂದ ಆಮದು ಮಾಡಿಕೊಂಡ ಐಸ್ ಡಾಗ್ ಜೊತೆಗೆ ಪೊಮೇರಿಯನ್ ನಾಯಿ ಆಕರ್ಷಿಸಿದವು. ವಿವಿಧ ತಳಿಯ ಶ್ವಾನಗಳ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

  • ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ಕಣ್ಮನ ಸೆಳೆಯುತ್ತಿದೆ ಕನಕೋತ್ಸವದ ಫಲಪುಷ್ಪ ಪ್ರದರ್ಶನ

    ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ತೋಟಗಾರಿಕೆ ಇಲಾಖೆ ಕನಕೋತ್ಸವದ ಅಂಗವಾಗಿ ನಾಲ್ಕು ದಿನಗಳ ಕಾಲ ಫಲಪುಷ್ಪ ಪ್ರದರ್ಶನವನ್ನ ಹಮ್ಮಿಕೊಂಡಿದೆ. ಕನಕೋತ್ಸವದ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ.

    ನಗರದ ಮುನ್ಸಿಪಾಲ್ ಕಾಲೇಜು ಬಳಿ ನಡೆದ ಕಾರ್ಯಕ್ರಮವನ್ನು ಸಂಸದ ಡಿ.ಕೆ ಸುರೇಶ್ ಉದ್ಘಾಟಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 30 ಸಾವಿರ ವಿವಿಧ ಬಗೆಯ ಪುಷ್ಪಗಳಿಂದ ತಾಲೂಕಿನ ಶಕ್ತಿದೇವತೆ ಕಬ್ಬಾಳಮ್ಮ ದೇವಿಯ ದೇವಾಲಯವನ್ನು ನಿರ್ಮಿಸಲಾಗಿದ್ದು, ಅತ್ಯಂತ ಆಕರ್ಷಣಿಯವಾಗಿ ನೋಡುಗರ ಮನ ಸೆಳೆದಿದೆ.

    ರೈತರ ಕ್ಯಾಪ್ಸಿಕಂ ನಿಂದ ಮಾಡಿದ ಗೋಪುರದಾಕಾರದ ಮಾದರಿ, ಜೊತೆಗೆ ಹಸು ಹಾಗೂ ಕರುವಿನ ಪುಷ್ಪಗಳಿಂದಾದ ಮಾದರಿ ನೋಡುಗರ ಕಣ್ಮನ ಸೆಳೆಯುತ್ತಿದೆ. ಇದಲ್ಲದೇ ಪುಷ್ಪದಲ್ಲಿ ವಿವಿಧ ಆಕಾರಗಳು, ರೈತರ ತರಕಾರಿ ಬೆಳೆಗಳ ವಸ್ತು ಪ್ರದರ್ಶನ, ತಾರಸಿ ಕೈ ತೋಟ, ಮಾದರಿ ತೋಟ ನೋಡುಗರಿಗೆ ಮುದ ನೀಡಿತು. ವಿಶೇಷವಾಗಿ ರೈತ ಉತ್ಪಾದಕರ ಸಂಸ್ಥೆಯ ಮಾದರಿಯನ್ನು ರೈತರಿಗಾಗಿ ಸಿದ್ಧಪಡಿಸಿ ಮಾಹಿತಿಯನ್ನು ನೀಡಲಾಯಿತು.

    ಫಲಪುಷ್ಪ ಪ್ರದರ್ಶನದಲ್ಲಿ ಕೇವಲ ಅಲಂಕಾರಿಕ ವಸ್ತುಗಳಿಗೆ ಆದ್ಯತೆ ನೀಡದೆ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಸಲುವಾಗಿ ರೈತರು ಬೆಳೆದ ಬೆಳೆಗಳ ಪ್ರದರ್ಶನ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವನ್ನು ಸಹ ಆಯೋಜಿಸಲಾಗಿದೆ. ತೋಟಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಾಗಿರುವ ಹೊಸ ಆವಿಷ್ಕಾರಗಳು, ತಾಂತ್ರಿಕತೆಯ ಸದ್ಬಳಕೆ ಬಗ್ಗೆ ರೈತರಿಗೆ ಸಾಕಷ್ಟು ಮಾಹಿತಿ ಜೊತೆಗೆ ಮಾರ್ಗದರ್ಶನ ನೀಡಿ ಸವಾಲನ್ನ ಎದುರಿಸುವ ಅರಿವನ್ನು ಪ್ರದರ್ಶನದಲ್ಲಿ ಅಧಿಕಾರಿಗಳು ನೀಡಿದ್ದಾರೆ. ರೇಷ್ಮೆ ಚಾಕಿ ಸಾಕಾಣಿಕೆಯಲ್ಲಿ ಹಂತಕ್ಕೊಂದು ಸೊಪ್ಪು ಪದ್ದತಿ ರೈತರ ಮನ ಮುಟ್ಟುವಂತಿದ್ದವು. ಫಲಪುಷ್ಪ ಪ್ರದರ್ಶನ ಕೇವಲ ಅಲಂಕಾರಿಕೆ ವಸ್ತುಗಳಿಗೆ ಸೀಮಿತವಾಗದೆ ರೈತಾಪಿ ವರ್ಗಕ್ಕೆ ಅರಿವು ಮೂಡಿಸುವ ಕಾರ್ಯಾಗಾರವಾಗಿತ್ತು.

    ಅಧಿಕ ಸಾಂದ್ರತೆಯಲ್ಲಿ ಮಾವು, ಹಸಿರು ಮನೆ ತಂತ್ರಜ್ಞಾನ, ಎರೆಹುಳು ಘಟಕ, ಅಂಗಾಂಶ ಕೃಷಿ, ಅಣಬೆ ಬೇಸಾಯ, ತೋಟಗಾರಿಕೆಯಲ್ಲಿ ಬಳಸುವ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಗಳನ್ನು ಈ ಪ್ರದರ್ಶನದಲ್ಲಿ ಏರ್ಪಡಿಸಲಾಗಿತ್ತು. ಅಷ್ಟೇ ಅಲ್ಲದೇ ಕುಂಬಳಕಾಯಿಯಲ್ಲಿ ಕೆತ್ತನೆ ಮಾಡಿದ ವಿವೇಕಾನಂದ, ಗಾಂಧೀಜಿ, ಅಂಬೇಡ್ಕರ್, ಹಾಗೂ ವಿವಿಧ ಪಕ್ಷಿಗಳ ಕಲಾಕೃತಿಗಳನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.