Tag: kalyana mantapa

  • ಕೊರೊನಾದಿಂದ ಕಲ್ಯಾಣ ಮಂಟಪ ಮಾಲೀಕರಿಗೆ 50 ಕೋಟಿ ನಷ್ಟ

    ಕೊರೊನಾದಿಂದ ಕಲ್ಯಾಣ ಮಂಟಪ ಮಾಲೀಕರಿಗೆ 50 ಕೋಟಿ ನಷ್ಟ

    – ಕಲ್ಯಾಣ ಮಂಟಪ ಅಧ್ಯಕ್ಷ ದಿನೇಶ್ ಸ್ಪಷ್ಟನೆ

    ಹಾಸನ: ಕೊರೊನಾ ವೈರಸ್ ಜಿಲ್ಲೆಯ ಕಲ್ಯಾಣ ಮಂಟಪದ ಮಾಲೀಕರನ್ನು ಅತಂತ್ರ ಸ್ಥಿತಿಗೆ ದೂಡಿದೆ. ಹಾಸನ ನಗರದಲ್ಲೇ ಕಲ್ಯಾಣ ಮಂಟಪ ಮಾಲೀಕರಿಗೆ ಬರೋಬ್ಬರಿ 50 ರಿಂದ 60 ಕೋಟಿ ನಷ್ಟ ಆಗಿದೆ ಎಂದು ಹಾಸನ ಕಲ್ಯಾಣ ಮಂಟಪದ ಅಧ್ಯಕ್ಷ ದಿನೇಶ್ ಹೇಳಿಕೆ ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಅವರು, ಕಲ್ಯಾಣ ಮಂಟಪ ಮಾಲೀಕರು ಈಗಾಗಲೇ ಮದುವೆಗೆ ಬುಕ್ ಮಾಡಿದವರ ಹಣ ವಾಪಸ್ ಕೊಡಲು ಅಸಾಹಯಕತೆ ತೋಡಿಕೊಂಡಿದ್ದಾರೆ. ಈ ಕುರಿತು ಹಾಸನ ಡಿಸಿ ಸಮ್ಮುಖದಲ್ಲಿ ಸಭೆ ನಡೆದಿದೆ. 40 ಸಾವಿರ ಹಣ ಕಟ್ಟಿದವರ ಹಣದಲ್ಲಿ 20% ಕಡಿತ ಹಾಗೂ 40 ಸಾವಿರ ಮೇಲೆ ಹಣ ಕಟ್ಟಿದವರಿಗೆ 30% ಹಣ ಕಡಿತ ಮಾಡಿ ವಾಪಸ್ ನೀಡಲು ಜಿಲ್ಲಾಧಿಕಾರಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ದಿನೇಶ್ ತಿಳಿಸಿದ್ದಾರೆ.

    ಸದ್ಯ ಕೊರೊನಾ ಅಟ್ಟಹಾಸ ಕಲ್ಯಾಣ ಮಂಟಪ ಮಾಲೀಕರನ್ನು ಪಾತಾಳಕ್ಕೆ ದೂಡಿದೆ. ಆದರೆ ಇತ್ತ ಕಲ್ಯಾಣ ಮಂಟಪಕ್ಕೆ ಅಡ್ವಾನ್ಸ್ ಹಣ ಕಟ್ಟಿರುವವರು ನಾವೂ ಕೂಡ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ್ದು, ನಮ್ಮ ಸಂಪೂರ್ಣ ಹಣ ವಾಪಸ್ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಸುಮಾರು 50ಕ್ಕೂ ಅಧಿಕ ಕಲ್ಯಾಣ ಮಂಟಪ ಇದೆ. ಇದರಿಂದ ಸುಮಾರು 50 ರಿಂದ 60 ಕೋಟಿಯಷ್ಟು ನಷ್ಟವಾಗಿದೆ ಎಂದು ದಿನೇಶ್ ಹೇಳಿದರು.

  • ಕೋಲಾರದಲ್ಲಿ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆ ಆರಂಭಿಸಿದ್ರು!

    ಕೋಲಾರದಲ್ಲಿ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆ ಆರಂಭಿಸಿದ್ರು!

    ಕೋಲಾರ: ನಗರದ ಖಾದರ್ ಲೇಔಟ್‍ನ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆಯನ್ನು ಆರಂಭಿಸಲಾಗಿದೆ.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ತನ್ನ ಪತ್ನಿ ಸುಗುಣ ಹೆಸರಿನಲ್ಲಿ ಕೆಸಿಆರ್ ಎಂಬ ಫಂಕ್ಷನ್ ಹಾಲ್ ನಿರ್ಮಿಸಿದ್ರು. ಇದಕ್ಕಾಗಿ ಸರ್ವೇ ನಂಬರ್ 1ರಲ್ಲಿ ರಸ್ತೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು.

    ಆದ್ರೆ ಇದೀಗ ಅದೇ ಕಟ್ಟಡದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ. ಕಳೆದ ವರ್ಷ ತರಾತುರಿಯಲ್ಲಿ ಕಟ್ಟಿರುವ ಈ ಕಟ್ಟಡದಲ್ಲಿ 37 ಮಕ್ಕಳು ದಾಖಲಾಗಿದ್ದಾರೆ. ಆದ್ರೆ ಇಲ್ಲಿ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆಗಳಿಲ್ಲ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಿಲ್ಲ ಎನ್ನಲಾಗಿದೆ.

    ಕೆ.ಚಂದ್ರಾರೆಡ್ಡಿ ತನ್ನ ಪ್ರಭಾವ ಬಳಸಿ ಗಡಿಗ್ರಾಮ ದೊಡ್ಡಪೊನ್ನಾಂಡಹಳ್ಳಿಗೆ ಮಂಜೂರಾದ ಶಾಲೆಯನ್ನು ಬಂಗಾರಪೇಟೆಯಲ್ಲಿ ಆರಂಭಿಸಿ, 1 ಲಕ್ಷದ 85 ಸಾವಿರದ 650 ರೂಪಾಯಿ ಬಾಡಿಗೆ ಪೀಕುತ್ತಿದ್ದಾನೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.