Tag: kalaburgi

  • ಮನೆಗಳಿಗೆ ಬಂದು ಮಹಿಳೆಯರನ್ನ ಯಾಮಾರಿಸ್ತಾರೆ – ಜೋಗತಿ ವೇಷದಲ್ಲಿ ಬಂದು ದರೋಡೆ ಮಾಡ್ತಾರೆ

    ಮನೆಗಳಿಗೆ ಬಂದು ಮಹಿಳೆಯರನ್ನ ಯಾಮಾರಿಸ್ತಾರೆ – ಜೋಗತಿ ವೇಷದಲ್ಲಿ ಬಂದು ದರೋಡೆ ಮಾಡ್ತಾರೆ

    ಕಲಬುರಗಿ: ಭವಿಷ್ಯ ಹೇಳುವ ನೆಪದಲ್ಲಿ ಜನರಿಗೇ ಯಾಮಾರಿಸಿ ಹಣ ಲೂಟಿ ಮಾಡುವಂತಹ, ಖತರನಾಕ್ ಕುಂಕುಮ ಗ್ಯಾಂಗ್ ಇದೀಗ ಕಲಬುರಗಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿದೆ. ಪ್ರತಿಷ್ಟಿತ ಮನೆಗಳ ಹೆಣ್ಣುಮಕ್ಕಳೇ ಈ ಕುಂಕುಮ ಗ್ಯಾಂಗ್‍ನ ಪ್ರಮುಖ ಟಾರ್ಗೆಟ್ ಆಗಿದೆ.

    ಜೋಗತಿ ವೇಷ ಹಾಕಿಕೊಂಡು ಮನೆಗೆ ಬಂದು ಮಹಿಳೆಯರಿಗೆ ಕುಂಕುಮ ಹಚ್ಚಿ ದರೋಡೆ ಮಾಡುತ್ತಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತಿಷ್ಟಿತ ಕುಟುಂಬದ ಮನೆಗೆ ಈಕೆ ಹೋಗಿದ್ದು, ಮನೆಯ ಯಜಮಾನತಿಗೇ ಕುಂಕುಮ್ಮ ಹಚ್ಚಿ ಯಾಮಾರಿಸಿದ್ದಾಳೆ. ನಂತರ ಅವರ ಕೈಯಿಂದಲ್ಲೇ 60 ಸಾವಿರ ರೂಪಾಯಿ ಹಣ ಹಾಗೂ 30 ಸಾವಿರ ಬೆಲೆ ಬಾಳುವ ರೇಷ್ಮೆ ಸೀರೆ ಪಡೆದು ಎಸ್ಕೇಪ್ ಆಗಿದ್ದಾಳೆ.

    ಪ್ರಕರಣ ಕುರಿತು ಸ್ಟೇಷನ್ ಬಜಾರ್ ಪೊಲೀಸರು ತನಿಖೆ ನಡೆಸಿದಾಗ ಭಯಾನಕ ಸತ್ಯ ಬಯಲಾಗಿದೆ. ಮಹಾರಾಷ್ಟ್ರದ ಸೊಲ್ಲಾಪುರ ಮತ್ತು ಇತರೆಡೆ ಈ ಕುಂಕುಮ್ಮ ಗ್ಯಾಂಗ್ ಸಕ್ರೀಯವಾಗಿದೆ ಎನ್ನಲಾಗಿದೆ. ಈ ಕುಂಕುಮ್ ಗ್ಯಾಂಗ್‍ನ ಕೈ ಚಳಕದಿಂದ ಕಲಬುರಗಿಯ ಜನರು ಬೆಚ್ಚಿ ಬಿದ್ದಿದ್ದಾರೆ.

  • ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ರೈತನ ಮೇಲೆ ಕಾಡು ಹಂದಿಯ ಭಯಾನಕ ಅಟ್ಯಾಕ್: ವಿಡಿಯೋ ವೈರಲ್

    ಕಲಬುರಗಿ: ಜಿಲ್ಲೆಯಲ್ಲಿ ಕಾಡು ಹಂದಿಯೊಂದು ರೈತನ ಮೇಲೆ ಭಯಾನಕವಾಗಿ ಅಟ್ಯಾಕ್ ಮಾಡಿದ್ದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಚಿಂಚೋಳಿ ತಾಲೂಕಿನ ಸಿರೋಳಿ ತಾಂಡಾದಲ್ಲಿ ಈ ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ತಾರಾಸಿಂಗ್ ಎಂಬ ರೈತ ಸುಮಾರು 10 ರಿಂದ 15 ನಿಮಿಷ ಕಾಡು ಹಂದಿಯೊಂದಿಗೆ ಸೆಣಿಸಿದ್ದಾರೆ. ರೈತ ಸಹಾಯಕ್ಕಾಗಿ ಅಂಗಲಾಚಿದ್ದರು ಯಾರು ಮುಂದೆ ಬಂದಿರಲಿಲ್ಲ. ಆದರೆ ರೈತನನ್ನು ಅಲ್ಲಿರುವ ಶ್ವಾನಗಳ ಗುಂಪು ರಕ್ಷಣೆ ಮಾಡಿದೆ.

    ಈ ದೃಶ್ಯವನ್ನು ಪಕ್ಕದ ಜಮೀನಿನಲ್ಲಿದ್ದ ರೈತರೊಬ್ಬರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    https://www.youtube.com/watch?v=fpq3b7wCTWk

  • ದಸರಾ ಹಬ್ಬಕ್ಕೆ ರಜೆ ಕೇಳಿದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಸ್ಕಾಂ ಅಧಿಕಾರಿ

    ದಸರಾ ಹಬ್ಬಕ್ಕೆ ರಜೆ ಕೇಳಿದಕ್ಕೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಸ್ಕಾಂ ಅಧಿಕಾರಿ

    ಕಲಬುರಗಿ: ಸದಾ ಒಂದಿಲ್ಲಾ ಒಂದು ರೀತಿ ಸುದ್ದಿಯಲ್ಲಿರುವ ಕಲಬುರಗಿಯ ಜೆಸ್ಕಾಂ ಇಲಾಖೆ ಇದೀಗ ಮತ್ತೆ ಸುದ್ದಿಯಲ್ಲಿದೆ. ದಸರಾ ಹಬ್ಬದ ರಜೆ ಕೇಳಿದ್ದಕ್ಕೆ ಕಿರಿಯ ಅಧಿಕಾರಿಗಳಿಗೆ ಹಿರಿಯ ಅಧಿಕಾರಿಗಳು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದ ಮಹಿಳಾ ಸಿಬ್ಬಂದಿ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆಸ್ಪತ್ರೆಯ ಬೆಡ್ ಮೇಲಿರುವ ಮಹಿಳೆ ಹೆಸರು ರೂಪಾ. ಕಲಬುರಗಿಯ ಜೆಸ್ಕಾಂ ಇಲಾಖೆಯ ಲೆಕ್ಕಪತ್ರ ವಿಭಾಗದಲ್ಲಿ ಎಫ್‍ಡಿಎ ಆಗಿದ್ದಾರೆ. ಇವರು ಹಬ್ಬಕ್ಕೆ ರಜೆ ಕೊಡಿ ಅಂತಾ ಕೇಳಿದ್ದಕ್ಕೆ ಮೇಲಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ರು ಎಂದು ಹೇಳಿದ್ದಾರೆ.

    ಸಹಾಯಕ ಲೆಕ್ಕಾಧಿಕಾರಿ ಜಗದೇವಿ ಮತ್ತು ಡಿಸಿಎ ಶ್ರೀನಿವಾಸ್ ಬಾಯಿಗೆ ಬಂದಂತೆ ಬೈದಿದ್ದಾರೆ ಎನ್ನಲಾಗಿದೆ. ಇದರಿಂದ ಮಾನಸಿಕ ಅಘಾತಕ್ಕೆ ತುತ್ತಾದ ರೂಪ ಕಚೇರಿಯಲ್ಲಿಯೇ ಕುಸಿದುಬಿದ್ದಿದ್ದಾರೆ. ಕೂಡಲ್ಲೇ ಇತರೆ ಸಿಬ್ಬಂದಿ ರೂಪಾರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಇಬ್ಬರು ಆಫೀಸರ್‍ಗಳು ಕೇವಲ ರೂಪಾಗೆ ಮಾತ್ರವಲ್ಲದೇ ಇತರರಿಗೂ ಟಾರ್ಚ್‍ರ್ ಕೊಡ್ತಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಈ ಇಬ್ಬರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಎಲ್ಲಾ ಸಿಬ್ಬಂದಿ ದೂರು ನೀಡಿದ್ದಾರೆ. ಆದರೆ ಈ ಆರೋಪವನ್ನು ಶ್ರೀನಿವಾಸ್ ನಿರಾಕರಿಸುತ್ತಿದ್ದಾರೆ.

  • ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಹೋಟೆಲ್‍ನಲ್ಲಿ ಸೀಮೆಎಣ್ಣೆ ಸ್ಟೋವ್ ಸ್ಫೋಟ- 4 ಬಾಲಕರ ಸಾವು

    ಕಲಬುರಗಿ: ಹೋಟೆಲ್‍ನಲ್ಲಿದ್ದ ಸೀಮೆಎಣ್ಣೆ ಸ್ಟೋವ್ ಸ್ಫೋಟಗೊಂಡು ನಾಲ್ಕು ಬಾಲಕರು ಸಾವನ್ನಪ್ಪಿರುವ ದಾರುಣ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಫತ್ತುನಾಯಕ ತಾಂಡಾದಲ್ಲಿ ನಡೆದಿದೆ.

    ಪ್ರೀತಮ್(03), ರತಿಕ್(03) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಇನ್ನಿಬ್ಬರು ಬಾಲಕರಾದ ಖುತೀಶ್ ಮತ್ತು ಅಕ್ಷತಾ ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ ಹೋಟೆಲ್ ಮಾಲಿಕ ವೀರಶೆಟ್ಟಿ ಅವರಿಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲೂಕಿನ ಮನ್ನಾಖೇಳಿ ಪಿಎಚ್‍ಸಿಯಲ್ಲಿ ದಾಖಲಿಸಲಾಗಿದೆ.

     

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿಯ ಜಿಲ್ಲಾಧಿಕಾರಿ ಎನ್. ವೆಂಕಟೇಶಕುಮಾರ್ ತಾಂಡಾಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಇಂದು ಬೃಹತ್ ರ‍್ಯಾಲಿ

    ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಇಂದು ಬೃಹತ್ ರ‍್ಯಾಲಿ

    ಕಲಬುರಗಿ: ಪರ ವಿರೋಧದ ಮಧ್ಯೆ ಕಲಬುರಗಿಯಲ್ಲಿಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಬೃಹತ್ ರ‍್ಯಾಲಿ ನಡೆಸಲಾಗುತ್ತಿದೆ. ಈ ಮೂಲಕ ಬಸವ ತತ್ವದವರು ವೈಧಿಕ ಮಠಾಧೀಶರ ವಿರುದ್ಧ ಮತ್ತೆ ತಿರುಗಿ ಬಿದಿದ್ದಾರೆ. ಇನ್ನು ಈ ರ‍್ಯಾಲಿಯನ್ನು ಯಶಸ್ವಿ ಮಾಡಲು ಸಚಿವ ಎಂ.ಬಿ.ಪಾಟೀಲ್ ಸಂಪೂರ್ಣ ನೇತೃತ್ವವನ್ನು ವಹಿಸಿಕೊಂಡಿದ್ದಾರೆ.

    ಗಡಿ ಜಿಲ್ಲೆ ಬೀದರ್‍ನಿಂದ ಆರಂಭವಾದ ಪ್ರತ್ಯೇಕ ಲಿಂಗಾಯತ ಧರ್ಮ ಚಳುವಳಿ ಇದೀಗ ಕಲಬುರಗಿಗೆ ಕಾಲಿಟ್ಟಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಇಂದು ನಗರದ ಎನ್‍ವಿ ಮೈದಾನದಲ್ಲಿ ಬೃಹತ್ ರ‍್ಯಾಲಿ ಆಯೋಜಿಸಲು ಸಕಲ ಸಿದ್ಧತೆ ನಡೆದಿದೆ. ರ‍್ಯಾಲಿ ಹಿನ್ನೆಲೆ ನಗರದ ಬಹುತೇಕ ರಸ್ತೆಗಳಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಬ್ಯಾನರ್ ಮತ್ತು ಕಟೌಟ್‍ಗಳು ರಾರಾಜಿಸುತ್ತಿವೆ.

    ಲಿಂಗಾಯತ ಧರ್ಮಕ್ಕೆ ಕಟಿಬದ್ಧರಾಗಿರೋ ಸಚಿವ ಎಂ.ಬಿ.ಪಾಟೀಲ್ ರ‍್ಯಾಲಿಯ ಸಂಪೂರ್ಣ ಉಸ್ತುವಾರಿ ವಹಿಸಿದ್ದು, ಸಮಾವೇಶದ ಯಶ್ವಸಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ರ‍್ಯಾಲಿ ನಡೆಯುವ ಎನ್‍ವಿ ಮೈದಾನಕ್ಕೆ ತೆರಳಿದ ಸಚಿವ ಎಂಬಿ ಪಾಟೀಲ್ ಎಲ್ಲಾ ಸಿದ್ಧತೆಗಳನ್ನು ತಾವೆ ಖುದ್ದಾಗಿ ನಿಂತು ಪರಿಶೀಲನೆ ನಡೆಸಿದ್ದಾರೆ.

    ಈ ಬೃಹತ್ ಸಮಾವೇಶದಲ್ಲಿ ಲಿಂಗಾತ ಧರ್ಮ ಬೇಕೆಂದು ಪ್ರತಿಪಾದಿಸುವ ಸ್ವಾಮೀಜಿಗಳು, ಮಠಾಧೀಶರು, ರಾಜಕಾರಣಿಗಳು ಪಾಲ್ಗೊಳ್ಳಲಿದ್ದಾರೆ. ಲಿಂಗಾಯತ ಸಮುದಾಯದ ಬರೋಬ್ಬರಿ 2 ಲಕ್ಷ ಮಂದಿ ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು ಪ್ರತ್ಯೇಕ ಧರ್ಮದ ಕಹಳೆ ಮೊಳಗಿಸಲಿದ್ದಾರೆ.

    ಈ ಮಧ್ಯೆ ಲಿಂಗಾಯತ ರ‍್ಯಾಲಿಯಲ್ಲಿ ಯಾರು ಪಾಲ್ಗೊಳ್ಳಬಾರದು ಎಂದು ವೀರಶೈವ ಲಿಂಗಾಯತರು ಜಾಗೃತಿ ಮೂಡಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರತ್ಯೇಕ ಧರ್ಮ ರ‍್ಯಾಲಿ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಕೈಗೊಳ್ಳಲಾಗಿದೆ.

  • ಇಂದು ಮಾಜಿ ಸಚಿವ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ: ಹೆಲಿಕಾಪ್ಟರ್ ವ್ಯವಸ್ಥೆ ಮಾಡದ ಸಿಎಂ

    ಇಂದು ಮಾಜಿ ಸಚಿವ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ: ಹೆಲಿಕಾಪ್ಟರ್ ವ್ಯವಸ್ಥೆ ಮಾಡದ ಸಿಎಂ

    ಬೆಂಗಳೂರು: ಸೋಮವಾರ ನಿಧನರಾದ ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ಇವತ್ತು ನಡೆಯಲಿದೆ. ರಾತ್ರಿ 10 ಗಂಟೆಗೆ ಕಲ್ಬುರ್ಗಿಯ ಆನಂದ ನಗರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನದಲ್ಲಿ ಮುಸ್ಲಿಂ ವಿಧಿವಿಧಾನದಂತೆ ದಫನ ಮಾಡಲಾಗುತ್ತದೆ. ಇವತ್ತು ಬೆಳಗ್ಗೆ 7 ರಿಂದ 9 ಗಂಟೆವರೆಗೆ ಖಮರುಲ್ ಇಸ್ಲಾಂರ ಪಾರ್ಥಿವ ಶರೀರವನ್ನು ಸ್ವಗೃಹದಲ್ಲಿ ಇಡಲಾಗುತ್ತದೆ. ನಂತರ ತೆರದ ವಾಹನದಲ್ಲಿ ಕೆಸಿಟಿ ಮೈದಾನದವರೆಗೆ ಮೆರವಣಿಗೆಯಲ್ಲಿ ತರಲಾಗುತ್ತದೆ.

    ಮಧ್ಯಾಹ್ನ 1 ಗಂಟೆಯಿಂದ 5 ಗಂಟೆವರೆಗೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅದಾದ ಬಳಿಕ ಕೆಸಿಟಿ ಮೈದಾನದಿಂದ 5 ಕಿಲೋ ಮೀಟರ್ ದೂರದಲ್ಲಿರುವ ಖಲಂದರ್ ಖಾನ್ ಕಬರಸ್ಥಾನಕ್ಕೆ ತರಲಾಗುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

    ಇನ್ನು ಖಮರುಲ್ ಇಸ್ಲಾಂ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಕಲಬುರಗಿಗೆ ಸಾಗಿಸಲು ವಿಶೇಷ ವಿಮಾನದ ವ್ಯವಸ್ಥೆ ಮಾಡುವಂತೆ ಕುಟುಂಬದವರು ಸಿಎಂ ಬಳಿ ಅಂಗಾಲಾಚಿದ್ದರು. ಆದರೆ ವಿಶೇಷ ಫ್ಲೈಟ್ ಇಲ್ಲ ಅಂತ ಸರ್ಕಾರ ರಸ್ತೆ ಮಾರ್ಗವಾಗಿಯೇ ಪಾರ್ಥಿವ ಶರೀರವನ್ನು ಕಲಬುರಗಿಗೆ ಸಾಗಿಸಿದೆ. ಖಮರುಲ್ ಪತ್ನಿ ಕೂಡ ಅಂಬುಲೆನ್ಸ್ ನಲ್ಲಿ 700 ಕಿ.ಮೀಟರ್ ಪ್ರಯಾಣ ಮಾಡಿದ್ದಾರೆ. ಹೀಗಾಗಿ ಪ್ರಭಾವಿ ಮುಸ್ಲಿಂ ನಾಯಕರಾಗಿದ್ದ ಖಮರುಲ್ ಇಸ್ಲಾಂರಿಗೆ ಸಿಎಂ ಅಗೌರವ ತೋರಿಸಿದ್ದಾರೆ ಅಂತ ಬೆಂಬಲಿಗರು ಹಾಗೂ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=FZhrzJnGyic

    https://www.youtube.com/watch?v=RTg2swEv94U

  • ಕಲಬುರಗಿಯಲ್ಲಿ ಧಾರಕಾರ ಮಳೆ: ಭೀಮಾ ನದಿ ಸಂಪೂರ್ಣ ಭರ್ತಿ

    ಕಲಬುರಗಿಯಲ್ಲಿ ಧಾರಕಾರ ಮಳೆ: ಭೀಮಾ ನದಿ ಸಂಪೂರ್ಣ ಭರ್ತಿ

    ಯಾದಗಿರಿ: ಕಲಬುರಗಿಯಲ್ಲಿ ಭಾರೀ ಮಳೆಯಾದ ಹಿನ್ನಲೆಯಲ್ಲಿ ಈಗ ಭೀಮಾ ನದಿಯು ಉಕ್ಕಿ ಹರಿಯುತ್ತಿದೆ. ಯಾದಗಿರಿ ಜಿಲ್ಲೆಯ ಜೀವನಾಡಿಯಾದ ಭೀಮಾ ನದಿ ಈಗ ಸಂಪೂರ್ಣವಾಗಿ ಭರ್ತಿಯಾಗುತ್ತಿದೆ. ಕಳೆದ ವರ್ಷ ಸಂಪೂರ್ಣವಾಗಿ ಬರಗಾಲ ಆವರಿಸಿದ್ದರಿಂದ ಬತ್ತಿದ್ದ ಕೆರೆ, ಹಳ್ಳ-ಕೊಳ್ಳಗಳು ಇದೀಗ ತುಂಬಿ ಹರಿಯುತ್ತಿದ್ದು ನದಿಯ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.

    ಯಾದಗಿರಿ ಭೀಮಾ ನದಿಯಲ್ಲಿರುವ ಶಿವನ ದೇವಾಲಯವು ಜಲಾವೃತಗೊಂಡಿದೆ. ಭೀಮಾ ನದಿಯಲ್ಲಿ ದಿನೇ ದಿನೇ ನೀರಿನ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದ್ದು ವರುಣ ಇನ್ನಷ್ಟು ತನ್ನ ಅಬ್ಬರ ತೋರಿದರೆ ನದಿಯ ಒಡಲು ಸಂಪೂರ್ಣ ಭರ್ತಿಯಾಗಲಿದೆ. ಕಲಬುರಗಿ ಜಿಲ್ಲೆಯ ಸನ್ನತಿ ಬ್ಯಾರೇಜ್‍ನಲ್ಲಿ ಹಿನ್ನೀರು ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಯಾಗಿದ್ದರಿಂದ ಹೆಚ್ಚಿನ ಪ್ರಮಾಣದ ನೀರು ಭೀಮಾ ನದಿಯ ಹೊರಗಡೆ ಹರಿಸಲಾಗುತ್ತಿದೆ.

    ಹೀಗಾಗಿ ಯಾದಗಿರಿಯ ಅಡ್ಡಲಾಗಿ ನಿರ್ಮಿಸಲಾಗಿರುವ ಗುರುಸಣಗಿ ಬ್ಯಾರೇಜ್‍ನಲ್ಲಿ ಹದಿನೈದು ಮೀಟರ್ (0.56 ಟಿ.ಎಂ.ಸಿ) ನೀರು ಸಂಗ್ರಹವಾಗಿದ್ದು, ಹೆಚ್ಚಿನ ನೀರನ್ನು 142 ಗೇಟ್ ಮೂಲಕ 60-70 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಇದೇ ರೀತಿ ವರುಣ ಅಬ್ಬರಿಸಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾದರೆ ಪ್ರವಾಹ ಎದುರಾಗುವ ಸಾಧ್ಯತೆ ಇದೆ. ಇನ್ನು ನದಿ ಸಂಪೂರ್ಣವಾಗಿ ಮೈದುಂಬಿ ಹರಿಯುತಿರುವುದರಿಂದ ಮುನ್ನಚ್ಚರಿಕೆಯಾಗಿ ನದಿ ಪಕ್ಕಯಿರುವ ಗ್ರಾಮಸ್ಥರಿಗೆ ನದಿಯ ಕಡೆ ತೆರಳದಂತೆ ಕೃಷ್ಣಾ ಭಾಗ್ಯ ಜಲ ನಿಗಮ ಅಧಿಕಾರಿಗಳು ಸೂಚಿಸಿದ್ದಾರೆ.

  • ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮನೆಯಲ್ಲೇ ಹತ್ಯೆ ಆಗಿರೋದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಅನ್ನೋದನ್ನ ತೋರಿಸ್ತಿದೆ: ಕರಂದ್ಲಾಜೆ

    ಮಂಗಳೂರು: ಮನೆಯಲ್ಲೇ ಗೌರಿ ಲಂಕೇಶ್ ಹತ್ಯೆ ಆಗಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳುವ ಮೂಲಕ ಮಾಜಿ ಸಚಿವೆ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಕಲಬುರ್ಗಿ ಹಂತಕರನ್ನು ಇನ್ನೂ ಬಂಧಿಸಿಲ್ಲ. ಕೆಂಪಯ್ಯ ಮೂಲಕ ಸಿದ್ದರಾಮಯ್ಯ ಪೊಲೀಸರನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಡಿವೈಎಸ್‍ಪಿ ಗಣಪತಿ ಹತ್ಯೆ ವಿಚಾರದಲ್ಲಿ ಎಸಿಬಿ, ಸಿಐಡಿಯನ್ನು ದುರ್ಬಳಕೆ ಮಾಡಿಕೊಂಡಿದ್ದು, ಸಿಬಿಐ ತನಿಖೆಯಿಂದ ರಾಜ್ಯ ಸರಕಾರದ ಕೈವಾಡ ಹೊರಬರಲಿದೆ ಎಂದು ತಿಳಿಸಿದರು.

    ಬಿಜೆಪಿ ಮಂಗಳೂರು ಚಲೋ ರ‍್ಯಾಲಿ ಬಗ್ಗೆ ಮಾತನಾಡಿದ ಅವರು, ರ‍್ಯಾಲಿಯನ್ನು ಹತ್ತಿಕ್ಕುವ ಯತ್ನವನ್ನು ಸರ್ಕಾರ ಮಾಡುತ್ತಿದೆ ಸಿದ್ದರಾಮಯ್ಯ ಸರ್ಕಾರಕ್ಕೆ ಇದು ಎಚ್ಚರಿಕೆ ಗಂಟೆಯಾಗಲಿದೆ. ರಮಾನಾಥ ರೈಯನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಗುರುವಾರದ ಕಾರ್ಯಕ್ರಮವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದರು.

    ಗಣಪತಿ ಪ್ರಕರಣದಲ್ಲಿ ಸಚಿವ ಜಾರ್ಜ್ ಈಗಲೇ ರಾಜಿನಾಮೆ ನೀಡಬೇಕು. ರಮಾನಾಥ ರೈ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದರು.

     

     

  • ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಬಿಸಿಲಿನ ಬೇಗೆಯಿಂದ ರಕ್ಷಿಸಿಕೊಳ್ಳಲು ಕಲಬುರಗಿ ಪೊಲೀಸರಿಗೆ ಕೂಲಿಂಗ್ ಗ್ಲಾಸ್!

    ಕಲಬುರಗಿ: ಬಿಸಿಲಿನ ತಾಪಕ್ಕೆ ಕಲಬುರಗಿ ದೇಶದಲ್ಲಿಯೇ ನಾಲ್ಕನೇ ಸ್ಥಾನ ಪಡೆದಿದೆ. ಕೇಂದ್ರ ಹವಾಮಾನ ಇಲಾಖೆಯ ಈ ಮಾಹಿತಿ ಪ್ರಕಾರ ಮಹಾರಾಷ್ಟ್ರ ನಂಬರ್ ಒನ್ ಜಾಗದಲ್ಲಿದೆ. ಹೀಗಾಗಿ 42 ಡಿಗ್ರಿ ಉಷ್ಣಾಂಶದಲ್ಲಿ ಕೆಲಸ ಮಾಡೋ ಪೊಲೀಸರಿಗೆ ಸರ್ಕಾರ ಕೂಲ್ ಡೌನ್ ಅಂತ ಧೈರ್ಯ ಹೇಳ್ತಿದೆ.

    ಹೌದು. ಬಿಸಿಲೂರು ಎಂದೇ ಪ್ರಸಿದ್ಧಿಯಾಗಿರೋ ಕಲಬುರಗಿ ಇದೀಗ ಪಕ್ಕಾ ಸನ್ ಸಿಟಿಯಾಗಿದೆ. ಕಾರಣ 42 ಡಿಗ್ರಿಗೂ ಅಧಿಕ ತಲುಪಿರೋ ಉಷ್ಣಾಂಶ. ಇಂತಹ ಬಿಸಿಲಿಗೆ ಹೈರಾಣಾಗದಿರಲಿ ಅಂತ ಪೊಲೀಸ್ ಇಲಾಖೆ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸೋ ಸಿಬ್ಬಂದಿಗೆ ತಂಪು ಕನ್ನಡಕ ನೀಡ್ತಿದೆ. ಖುದ್ದು ಎಸ್ಪಿ ಶಶಿಕುಮಾರ್ ತಮ್ಮ ಸಿಬ್ಬಂದಿಗೆ ಮಜ್ಜಿಗೆ ನೀಡಿ ಸಂತೈಸಿದ್ದಾರೆ.

    ಎಲ್ಲೆಲ್ಲಿ ಎಷ್ಟು ಉಷ್ಣಾಂಶ ಇದೆ?: 

    ಮಹಾರಾಷ್ಟ್ರ ಚಂದ್ರಾಪುರ- 44.2 ಡಿಗ್ರಿ ಸೆಲ್ಸಿಯಸ್.
    ಮಹಾರಾಷ್ಟ್ರ ಬ್ರಹ್ಮಪುರಿ- 43..3 ಡಿಗ್ರಿ ಸೆಲ್ಸಿಯಸ್
    ಓರಿಸ್ಸಾ ಜರ್ಸುಗುಡಾ- 42.8 ಡಿಗ್ರಿ ಸೆಲ್ಸಿಯಸ್

    ಕರ್ನಾಟಕ…ಕಲಬುರಗಿ- 42.1 ಡಿಗ್ರಿ ಸೆಲ್ಸಿಯಸ್

    ಇಂತಹ ಸುಡುಬಿಸಿಲಿಗೆ ದೇಹ ದಣಿಯುತ್ತೆ ಮಾತ್ರವಲ್ಲ ಬಾಡಿ ಡಿಹೈಡ್ರೇಷನ್ ಆಗುತ್ತೆ. ಆದ್ದರಿಂದ ಎಳೆನೀರು, ಮಜ್ಜಿಗೆ ನೀಡ್ತಿರೋ ಜಿಲ್ಲಾಡಳಿತದ ಕ್ರಮಕ್ಕೆ ಪೇದೆಗಳು ಫುಲ್ ಖುಷ್ ಆಗಿದ್ದಾರೆ. ಇದಿಷ್ಟು ಏಪ್ರಿಲ್ ಬಿಸಿಲಾದ್ರೆ ಇನ್ನೂ ಮೇ ತಿಂಗಳಲ್ಲಿ ನೆಲ ಅದೆಷ್ಟು ಗರಂ ಆಗುತ್ತೋ ಅನ್ನೋ ಲೆಕ್ಕದಲ್ಲಿದ್ದಾರೆ ಜನ. ಹೀಗಾಗಿ ಜನ ಮಟಮಟ ಮಧ್ಯಾಹ್ನ ಹೊರಗೆ ಬರೋದೆ ದುಸ್ತರವಾಗೋ ಸಾಧ್ಯತೆ ಇದೆ.

  • ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ ಸೇಡಂ ಎಸಿ ಭೀಮಾಶಂಕರ್ ವರ್ಗಾವಣೆ

    ಕಲಬುರಗಿ: ಮರಳು ಮಾಫಿಯಾಗೆ ಸಿಂಹಸ್ವಪ್ನವಾಗಿದ್ದ, `ಜನರ ಎಸಿ’ ಅಂತಾನೇ ಖ್ಯಾತಿಯಾಗಿದ್ದ ಸೇಡಂ ಎಸಿ ಭೀಮಾಶಂಕರ್ ತೆಗಳ್ಳಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

    ಭೀಮಾಶಂಕರ್ ತೆಗಳ್ಳಿ ಅವರು ಕಳೆದ ಎರಡು ತಿಂಗಳಲ್ಲಿ 48 ಪ್ರಕರಣ ಪತ್ತೆ ಮಾಡಿದ್ದರು. ಮಾತ್ರವಲ್ಲದೇ 2016ರಲ್ಲಿ 276 ಅಕ್ರಮ ಮರಳು ದಂಧೆ ಪ್ರಕರಣ ದಾಖಲಿಸಿದ್ದರು. ರಾತ್ರಿ ವೇಳೆ ನಡೆಯೋ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರು.

    ಏಕ ಕಾಲದಲ್ಲಿ ಚಿತ್ತಾಪುರ, ಸೇಡಂ ಮತ್ತು ಚಿಂಚೋಳಿ ಎಸಿಯಾಗಿ ಕರ್ತವ್ಯ ನಿರ್ವಹಣೆ ಮಾಡ್ತಿದ್ದ ಇವರು `ಜನರ ಎಸಿ’ ಅಂತಾನೆ ಖ್ಯಾತಿ ಪಡೆದಿದ್ದರು. ಕಳೆದ ವಾರ ತೆಗಳ್ಳಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಭೀಮಾಶಂಕರ್ ಅವರ ವರ್ಗಾವಣೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

    ಸದ್ಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿ ಭೀಮಾಶಂಕರ್ ತೆಗಳ್ಳಿ ವರ್ಗಾವಣೆಗೊಂಡಿದ್ದಾರೆ.