Tag: Kajol

  • ‘ಆಸ್ಕರ್’ ಕಮಿಟಿಯಲ್ಲಿ ಭಾರತದ ಮೂವರಿಗೆ ಸ್ಥಾನ : ತಮಿಳು ನಟ ಸೂರ್ಯಗೂ ಚಾನ್ಸ್

    ‘ಆಸ್ಕರ್’ ಕಮಿಟಿಯಲ್ಲಿ ಭಾರತದ ಮೂವರಿಗೆ ಸ್ಥಾನ : ತಮಿಳು ನಟ ಸೂರ್ಯಗೂ ಚಾನ್ಸ್

    ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಆಯ್ಕೆಯ ಸಮಿತಿಯಲ್ಲಿ ಈ ಬಾರಿ ಭಾರತದ ಮೂವರಿಗೆ ಸ್ಥಾನ ಸಿಕ್ಕಿದೆ. ಅದರಲ್ಲೂ ತಮಿಳಿನ ಖ್ಯಾತ ನಟ ಸೂರ್ಯ ಕೂಡ ಈ ಬಾರಿಯ ಆಯ್ಕೆಯ ಕಮಿಟಿಯಲ್ಲಿ ಇರಲಿದ್ದಾರೆ ಎನ್ನುವುದು ವಿಶೇಷ. ಬಾಲಿವುಡ್ ನಿಂದ ಖ್ಯಾತ ನಟಿ ಕಾಜೋಲ್ ಮತ್ತು ನಿರ್ದೇಶಕಿ ರೀಮಾ ಕಗ್ತಿ ಆಯ್ಕೆಯಾಗಿದ್ದರೆ, ದಕ್ಷಿಣದಿಂದ ಸೂರ್ಯ ಅವರಿಗೆ ಈ ಗೌರವ ಲಭಿಸಿದೆ.

    ಸೂರ್ಯ ನಟನೆಯ ಜೈ ಭೀಮ್, ಸೂರರೈ ಪೊಟ್ರೊ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದವು. ಅದರಲ್ಲೂ ಜೈ ಭೀಮ್ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಆಸ್ಕರ್ ಕಮಿಟಿಗೆ ಆಯ್ಕೆ ಆಗುವ ಮೂಲಕ, ಈ ಗೌರವಕ್ಕೆ ಪಾತ್ರರಾದ ಮೊದಲ ದಕ್ಷಿಣದ ತಾರೆ ಎಂಬ ಹೆಗ್ಗಳಿಕೆ ಇವರು ಪಾತ್ರರಾಗಿದ್ದಾರೆ. ಇಂಥದ್ದೊಂದು ಕಮಿಟಿಗೆ ಆಯ್ಕೆ ಆಗಿರುವುದಕ್ಕೆ ಅವರ ಅಭಿಮಾನಿಗಳಿಂದ ಶುಭಾಶಯದ ಮಹಾಪೂರವೇ ಹರಿದು ಬಂದಿದೆ. ಇದನ್ನೂ ಓದಿ:ಪಿಂಕ್ ಕಲರ್ ಸೀರೆಯಲ್ಲಿ ಹಾಟ್ ಆಗಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ

    ನಿರ್ದೇಶಕ, ಬರಹಗಾರ ಸೇರಿದಂತೆ ಒಟ್ಟು ಆಸ್ಕರ್ ನಲ್ಲಿ 17 ಶಾಖೆಗಳು ಇರಲಿವೆ. ಅವುಗಳಲ್ಲಿ ಒಂದನ್ನು ಸೂರ್ಯ ಅವರು ಆಯ್ಕೆ ಮಾಡಿಕೊಳ್ಳಬೇಕಿದೆ.  ಸೂರ್ಯ ಅವರು ಯಾವ ಶಾಖೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಎಲ್ಲರದ್ದು. ನಟ, ನಿರ್ಮಾಪಕರೂ ಆಗಿರುವ ಸೂರ್ಯ ಬಹುಶಃ ಈ ಎರಡರ ಆಯ್ಕೆಯಲ್ಲಿ ಇರಬಹುದು ಎನ್ನಲಾಗುತ್ತಿದೆ.

    Live Tv

  • ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ

    ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ

    ಮುಂಬೈ: ಬಾಲಿವುಡ್ ನಟಿ ಕಾಜೋಲ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.

    ದೇಶಾದ್ಯಂತ ಕೊರೊನಾ 3ನೇ ಅಲೆ ಆರ್ಭಟ ನಡೆಸುತ್ತಿದೆ. ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ಕಾಜೋಲ್‍ಗೆ ಕೊರೊನಾ ಪಾಸಿಟಿವ್ ಬಂದಿದೆ. ಸದ್ಯ ಈ ಕುರಿತಂತೆ ಇನ್‍ಸ್ಟಾಗ್ರಾಮ್‍ನಲ್ಲಿ ಮಾಹಿತಿ ನೀಡಿರುವ ಕಾಜೋಲ್ ತಮ್ಮ ಪ್ರೀತಿಯ ಪುತ್ರಿ ನೈಸಾ ದೇವಗನ್ ಫೋಟೋವನ್ನು ಶೇರ್ ಮಾಡಿ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

    ಫೋಟೋದಲ್ಲಿ ನೈಸಾ ದೇವಗನ್ ಮೆಹೆಂದಿ ಹಾಕಿಸಿಕೊಂಡು ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ನೆಗಡಿ ಹೊಂದಿರುವ ನನ್ನ ಮೂಗನ್ನು ತೋರಿಸಲು ನನಗೆ ಇಷ್ಟವಿಲ್ಲ. ನಾನು ವಿಶ್ವದ ಸಿಹಿಯಾದ ನಗುವನ್ನು ಪೋಸ್ಟ್ ಮಾಡುತ್ತೇನೆ ಮಿಸ್ ಯೂ ನೈಸಾ ದೇವ್‍ಗನ್ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತಮ್ಮ ಜೊತೆ ಸಮಯ ಕಳೆಯುವಂತೆ ನಿರ್ದೇಶಕರೊಬ್ಬರು ಹೇಳಿದ್ದರು- ಕಾಸ್ಟಿಂಗ್ ಕೌಚ್ ಬಗ್ಗೆ ದಿವ್ಯಾಂಕ ಮಾತು

     

    View this post on Instagram

     

    A post shared by Kajol Devgan (@kajol)

    ಸದ್ಯ ನಿರ್ದೇಶಕಿ ರೇವತಿ ಆ್ಯಕ್ಷನ್ ಕಟ್ ಹೇಳುತ್ತಿರುವ ದಿ ಲಾಸ್ಟ್ ಹುರ್ರೇ ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಕಾಜೋಲ್ ಪುತ್ರಿ ನೈಸಾ ಪ್ರಸ್ತುತ ಸಿಂಗಾಪುರದ ಗ್ಲಿಯನ್ ಇನ್‍ಸ್ಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್‍ನಲ್ಲಿ ಅಂತರರಾಷ್ಟ್ರೀಯ ಹಾಸ್ಪಿಟಾಲಿಟಿ ಅಧ್ಯಯನ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಶಾಲಾ ಶಿಕ್ಷಣಕ್ಕಾಗಿ ಸಿಂಗಾಪುರದಲ್ಲಿದ್ದರು. ಇದನ್ನೂ ಓದಿ: ಯಾತ್ರಾರ್ಥಿಗಳಿಗಾಗಿ ಪಾಕಿಸ್ತಾನದ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆಸಲು ಭಾರತ ಸಿದ್ಧ

  • ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ವಾಶ್‌ರೂಂ ಹೋಗೋ ಅರ್ಜೆಂಟಲ್ಲಿದ್ದಾರೆ – ಕಾಜೊಲ್ ಟ್ರೋಲ್ ಮಾಡಿದ ನೆಟ್ಟಿಗರು

    ಮುಂಬೈ: ಬಾಲಿವುಡ್‌ನ ಖ್ಯಾತ ನಟಿಯರಲ್ಲಿ ಕಾಜೊಲ್ ಅವರು ಕೂಡ ಒಬ್ಬರು. ಇತ್ತೀಚೆಗೆ ಕಾಜೊಲ್ ವಿಭಿನ್ನ ರೀತಿಯಲ್ಲಿ ಟ್ರೋಲ್ ಆಗುತ್ತಿದ್ದಾರೆ. ಕಾಜೊಲ್ ಅವರ ನಡೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಭಾನುವಾರದಂದು ಕಾಜೊಲ್ ಅವರು ಏರ್‌ಪೋರ್ಟ್ನಲ್ಲಿ ಬರುವಾಗ ಈ ವೀಡಿಯೋವನ್ನು ಮಾಡಲಾಗಿದೆ. ಈ ವೀಡಿಯೋದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದ ನಟಿ ಯಾವುದೋ ಆತುರದಲ್ಲಿದ್ದಂತೆ ಕಾಣುತ್ತಿದ್ದರು. ಈ ಬಗ್ಗೆ ನೆಟ್ಟಿಗರು ಸಿಕ್ಕಾಪಟೆ ಟ್ರೋಲ್ ಮಾಡಿದ್ದಾರೆ. ಈ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ರಾಜಧಾನಿ ಎಕ್ಸ್ಪ್ರೆಸ್’ ಎಂದು ಶೀರ್ಷಿಕೆಯನ್ನು ನೀಡಿದ್ದಾರೆ.

     

    View this post on Instagram

     

    A post shared by Viral Bhayani (@viralbhayani)

    ಈ ವೀಡಿಯೋವನ್ನು ನೋಡಿದ ಒಬ್ಬರು ಕಾಮೆಂಟ್ ಮಾಡಿ ವಾಶ್‌ರೂಂಗೆ ಹೋಗುವ ಅರ್ಜೆಂಟ್‌ನಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತಿದ್ದಾರೆ ಎಂದರೆ, ಮತ್ತೊಬ್ಬರೂ ಮೆಕಪ್ ಇಲ್ಲದೇ ಹೊರ ಬಂದಿದ್ದಾರೆ ಎಂದು ಹೇಳಿದ್ದಾರೆ. ಮನೆಯನ್ನು ಸ್ವಚ್ಛಗೊಳಿಸುವ ಟೆನ್ಶನ್‌ಲ್ಲಿದ್ದಾರೆ ಎಂದು ಇನ್ನೊಬ್ಬರು ಬರೆದಿದ್ದಾರೆ.

    ವೀಡಿಯೋದಲ್ಲಿ ಕಾಜೊಲ್ ಹಳದಿ ಬಣ್ಣದ ದುಪ್ಪಟ್ಟವನ್ನು ಹೊದ್ದು ಏರ್‌ಪೋರ್ಟ್ನಿಂದ ಬರುತ್ತಿದ್ದಾರೆ. ಅವರು ವೇಗವಾಗಿ ಹಜ್ಜೆ ಹಾಕಿ, ಯಾರ ಮಾತಿಗೂ ಲಕ್ಷ್ಯ ಕೊಡದೇ ಹಾಗೇ ಕಾರನ್ನು ಹತ್ತಿರುವ ದೃಶ್ಯವನ್ನು ವೀಡಿಯೋದಲ್ಲಿ ನೋಡಬಹುದು. ಇದನ್ನೂ ಓದಿ: ಭಾರೀ ಮಳೆಗೆ ಮಲೇಷ್ಯಾದ 7 ರಾಜ್ಯಗಳಲ್ಲಿ ಪ್ರವಾಹ – ಸಾವಿರಾರು ಮಂದಿ ಪಲಾಯನ

    ಈ ಹಿಂದೆ ಕಾಜೊಲ್ ಅವರ ಹುಟ್ಟುಹಬ್ಬದ ದಿನ ಟ್ರೋಲ್‌ಗೆ ಒಳಗಾಗಿದ್ದರು. ಅಭಿಮಾನಿಗಳು ಆಕೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೊರಲು ಆಗಮಿಸಿದ್ದರು. ಆಗ ಅವರಿಗೆ ಧನ್ಯವಾದವನ್ನು ತಿಳಿಸದೇ ಕೇಕ್ ಕಟ್ ಮಾಡಿ ಹಾಗೆ ಬಂಗಲೆಯೊಳಗೆ ತೆರಳಿದ್ದರು. ಆಕೆಯ ವರ್ತನೆಗೆ ಆಗ ನೆಟ್ಟಿಗರಿಂದ ಭಾರೀ ಟ್ರೋಲ್ ಮಾಡಿದ್ದರು. ಇದನ್ನೂ ಓದಿ: ಜನ ಸಹಕಾರ ಕೊಡದಿದ್ದರೆ ಲಾಕ್‍ಡೌನ್ ಅನಿವಾರ್ಯ: ಆರಗ ಜ್ಞಾನೇಂದ್ರ

    1999ರಲ್ಲಿ ನಟ ಅಜಯ್ ದೇವಗನ್ ಅವರನ್ನು ವಿವಾಹವಾಗಿದ್ದರು. ಈ ಜೋಡಿ ಇಷ್ಕ್, ಗುಂಡರಾಜ್, ಪ್ಯಾರ್ ತೋ ಹೋನಾ ಹಿ ಥಾ ಮತ್ತು ಯು ಮೆ ಔರ್ ಹಮ್ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಕಳೆದ ಬಾರಿ, ಅವರು 2020 ರಲ್ಲಿ ಬಿಡುಗಡೆಯಾದ ತನ್ಹಾಜಿ ದಿ ಅನ್‌ಸಂಗ್ ವಾರಿಯರ್‌ನಲ್ಲಿ ಈ ಜೋಡಿ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

  • ನವರಾತ್ರಿ ಸಂಭ್ರಮ: ಕಾಜೊಲ್ ಫುಲ್ ಮಿಂಚಿಂಗ್

    ನವರಾತ್ರಿ ಸಂಭ್ರಮ: ಕಾಜೊಲ್ ಫುಲ್ ಮಿಂಚಿಂಗ್

    ಮುಂಬೈ: ನವರಾತ್ರಿ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಾಜೊಲ್ ಮುಂಬೈನಲ್ಲಿ ದುರ್ಗಾ ಪೂಜೆಯನ್ನು ಕುಟುಂಬದೊಂದಿಗೆ ಮಾಡಿದ್ದು, ಫುಲ್ ಮಿಂಚಿದ್ದಾರೆ.

    ಕಾಜೊಲ್ ಮುಂಬೈನಲ್ಲಿ ಕುಟುಂಬದೊಂದಿಗೆ ದುರ್ಗಾ ಪೂಜೆಯಲ್ಲಿ ಪಾಲ್ಗೊಂಡಿದ್ದು, ಈ ವೇಳೆ ಸೋದರ ಸಂಬಂಧಿ, ನಟಿ ಶರ್ಬಾನಿ ಮುಖರ್ಜಿ ಅವರನ್ನು ಭೇಟಿಯಾಗಿದ್ದಾರೆ. ಪೂಜೆಯಲ್ಲಿ, ಕಾಜೋಲ್ ಫುಲ್ ದೇಸಿ ಲುಕ್ ನಲ್ಲಿ ಮಿಂಚಿದ್ದಾರೆ. ಕಾಜೊಲ್ ಗುಲಾಬಿ ಬಣ್ಣದ ಸೀರೆಯನ್ನು ಉಟ್ಟಿದ್ದು, ಸಾಂಪ್ರದಾಯಿಕ ಆಭರಣ ಮತ್ತು ಬಿಂದಿಯೊಂದಿಗೆ ದೇಸಿ ಹುಡುಗಿಯಾಗಿ ಫುಲ್ ಮಿಂಚಿದ್ದಾರೆ. ಇದನ್ನೂ ಓದಿ: ಲವ್ ಸ್ಟೋರಿ ಬಹಿರಂಗ ಪಡಿಸಿದ ರಕುಲ್ ಪ್ರೀತಿ ಸಿಂಗ್

     

    View this post on Instagram

     

    A post shared by Kajol Devgan (@kajol)

    ಶರ್ಬನಿ ಮುಖರ್ಜಿ ಸಹ ಸಖತ್ ಆಗಿ ಕಾಣಿಸಿಕೊಂಡಿದ್ದು, ಹಳದಿ ಸೀರೆ ಮತ್ತು ರೆಟ್ರೊ ಬ್ಲೌಸ್ ಹಾಕಿಕೊಂಡಿದ್ದರು. ಈ ವಿಶೇಷ ಫೋಟೋವನ್ನು ಕಾಜೊಲ್ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.

    ಕಾಜೊಲ್ ಹಲವು ವರ್ಷಗಳ ನಂತರ ಓಟಿಟಿಯಲ್ಲಿ ‘ತ್ರಿಭಂಗ’ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಕಾಜೊಲ್ ಮೊದಲ ಓಟಿಟಿ ಸಿನಿಮಾವಾಗಿತ್ತು. ಈ ಚಿತ್ರವನ್ನು ಪತಿ ಅಜಯ್ ದೇವಗನ್ ನಿರ್ಮಿಸಿದ್ದು, ‘ತ್ರಿಭಂಗ’ವನ್ನು ರೇಣುಕಾ ಸಹಾನೆ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ತನ್ವಿ ಅಜ್ಮಿ ಮತ್ತು ಮಿಥಿಲಾ ಪಾಲ್ಕರ್ ಕೂಡ ನಟಿಸಿದ್ದರು. ಕಾಜೊಲ್ ಕಳೆದ ವರ್ಷ ‘ದೇವಿ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

    ಪ್ರಸ್ತುತ ಕಾಜೊಲ್ ರೇವತಿ ಆಕ್ಷನ್ ಕಟ್ ಹೇಳುತ್ತಿರುವ ‘ದಿ ಲಾಸ್ಟ್ ಹರ್ರೆ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತು ಕಾಜೊಲ್ ಇನ್‍ಸ್ಟಾಗ್ರಾಮ್ ನಲ್ಲಿ, ರೇವತಿಯೊಂದಿಗೆ ನನ್ನ ಮುಂದಿನ ಚಿತ್ರವನ್ನು ಘೋಷಿಸಲು ತುಂಬಾ ಸಂತೋಷವಾಗಿದೆ ಎಂದು ಬರೆದು ಪೋಸ್ಟ್ ಮಾಡಿದ್ದರು.

  • 25ರ ಸಂಭ್ರಮದಲ್ಲಿ ಡಿಡಿಎಲ್‍ಜೆ

    25ರ ಸಂಭ್ರಮದಲ್ಲಿ ಡಿಡಿಎಲ್‍ಜೆ

    ಮುಂಬೈ: ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ‘ದಿಲ್‍ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾ 25 ವರ್ಷವನ್ನ ಪೂರ್ಣಗೊಳಿಸಿದೆ. ಚಿತ್ರದಲ್ಲಿ ನಟಿಸಿದ ಕಲಾವಿದರು ಸೇರಿದಂತೆ ತಂತ್ರಜ್ಞರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಬಾಲಿವುಡ್ ಬಾದ್‍ಶಾ ಶಾರೂಖ್ ಖಾನ್ ಮತ್ತು ಕಾಜೋಲ್ ನಟನೆಯ ಡಿಡಿಎಲ್‍ಜೆ ಇಂದಿಗೂ ಎವರ್ ಗ್ರೀನ್.

    ಆರಂಭದಲ್ಲಿ ನೆಗೆಟಿವ್ ಶೇಡ್ ಗಳಲ್ಲಿ ಮಿಂಚಿದ್ದ ಶಾರೂಖ್ ಖಾನ್‍ಗೆ ಡಿಡಿಎಲ್‍ಜೆ ಲವರ್ ಬಾಯ್ ಇಮೇಜ್ ನೀಡಿತ್ತು. 90ರ ದಶಕದಲ್ಲಿ ಅದಾಗಲೇ ಸ್ಟಾರ್ ಪಟ್ಟಕ್ಕೇರಿದ್ದ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ನಡುವೆ ಶಾರೂಖ್ ಖಾನ್ ದೊಡ್ಡ ಹಿಟ್ ನಿರೀಕ್ಷೆಯಲ್ಲಿದ್ದರು. ಡಿಡಿಎಲ್‍ಜೆ ಶಾರೂಖ್ ಕಲ್ಪನೆಗೂ ಊಹಿಸಲಾಗದ ಯಶಸ್ಸನ್ನು ಕಿಂಗ್‍ಖಾನ್‍ಗೆ ನೀಡಿತ್ತು. ಅದರ ಜೊತೆಗೆ ಕಾಜೋಲ್ ತಾವು ಏನು ಎಂಬುದನ್ನ ಡಿಡಿಎಲ್‍ಜೆ ಮೂಲಕ ಸಾಬೀತು ಮಾಡುವ ಮೂಲಕ ಬಾಲಿವುಡ್ ಅಂಗಳದ ಟಾಪ್ ನಟಿಯರ ಪಟ್ಟಕ್ಕೇರಿದರು.

    ಇಂದಿನ ಯುವಕರಿಗೆ ಡಿಡಿಎಲ್‍ಜೆ ಪ್ರೇಮಕಥೆ ಇಷ್ಟವಾಗುತ್ತೆ. ಸಿನಿಮಾ ನೋಡುತ್ತಾ ಅವರೊಳಗಿರುವ ಪ್ರೇಮದ ಅಲೆ ಅಪ್ಪಳಿಸುತ್ತೆ. ರಾಜ್ ಮತ್ತು ಸಿಮ್ರನ್ ಪಾತ್ರಗಳಿಗೆ ಜೀವ ತುಂಬಿದ್ದ ಶಾರೂಖ್ ಮತ್ತು ಕಾಜೋಲ್ ನೋಡುಗರಿಗೆ ಹತ್ತಿರವಾಗಿದ್ದರು. ಇಂದಿಗೂ ಚಿತ್ರದ ಹಾಡುಗಳು ಹಚ್ಚ ಹಸಿರಾಗಿವೆ. ಸಿನಿಮಾದಲ್ಲಿ ಶಾರೂಖ್ ಹೇಳುವ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಇಂದಿಗೂ ಸದ್ದು ಮಾಡುತ್ತಿವೆ.

    ಮೊದಲಿಗೆ ನಿರ್ದೇಶಕ ಆದಿತ್ಯ ಚೋಪ್ರಾ ಕಥೆ ಹೇಳಿದಾಗ ಸಿನಿಮಾದಲ್ಲಿ ನಟಿಸಲು ಶಾರೂಖ್ ಖಾನ್ ಒಪ್ಪಿರಲಿಲ್ಲವಂತೆ. ಪ್ರೀತಿಸಿದ ಯುವತಿಯನ್ನ ಓಡಿಸಿ ಹೋಗಿಕೊಂಡು ಹೋಗುವದರಿಂದ ಮತ್ತೆ ನೆಗೆಟಿವ್ ಶೇಡ್ ಆಗಬಹುದು ಎಂದು ಶಾರೂಖ್ ಸಿನಿಮಾದಲ್ಲಿ ನಟಿಸಲು ಹಿಂಜರಿದ್ದರು. ಶಾರೂಖ್ ಖಾನ್ ಇದಕ್ಕೆ ಸೂಕ್ತ ಎಂದು ನಟ ನಿರ್ಧರಿಸಿದ ಆದಿತ್ಯ ಚೋಪ್ರಾ ಪದೇ ಪದೇ ಕಥೆ ಹೇಳಿದ್ದರು. ಕೊನೆಗೆ ಶಾರೂಖ್ ಒಪ್ಪದಿದ್ರೆ ಸೈಫ್ ಅಲಿ ಖಾನ್ ಆ ಪಾತ್ರಕ್ಕೆ ತರಲು ಆದಿತ್ಯ ಚೋಪ್ರಾ ಮುಂದಾಗಿದ್ದರು ಎಂದು ವರದಿಯಾಗಿದೆ. ಕೊನೆಗೆ ಶಾರೂಖ್ ಪಾತ್ರ ಒಪ್ಪಿ ನಟಿಸಿದ್ದು ಸಿನಿ ಇತಿಹಾಸದ ಪುಟಗಳಲ್ಲಿ ಸೇರಿದೆ.

    ಈ ಹಿಂದೆ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ್ದ ಕಾಜೋಲ್, ಕಥೆ ಕೇಳಿದಾಗ ಸಿಮ್ರನ್ ಬೋರಿಂಗ್ ಹುಡುಗಿ ಅನ್ನಿಸಿದಳು. ನಂತರ ಪ್ರತಿಯೊಬ್ಬರಲ್ಲಿಯೂ ಒಬ್ಬ ಸಿಮ್ರನ್ ಇರುತ್ತಾಳೆ. ಸಿಮ್ರನ್ ಹೃದಯದ ಮಾತು ಕೇಳುವ ಹುಡಗಿಯಾಗಿದ್ದು, ಸದಾ ಸತ್ಯ ಹೇಳುತ್ತಿದ್ದರಿಂದ ಆಕೆ ನನಗೆ ಇಷ್ಟವಾದಳು ಎಂದು ಹೇಳಿದ್ದರು.

  • ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ನನ್ನ, ಕಾಜೋಲ್‍ನ ಜಡ್ಜ್ ಮಾಡಿ, ನನ್ನ ಮಕ್ಕಳನ್ನ ಅಲ್ಲ: ಟ್ರೋಲರ್ಸ್ ವಿರುದ್ಧ ಸಿಡಿದ ಅಜಯ್

    ಮುಂಬೈ: ತಮ್ಮ ಮಕ್ಕಳನ್ನು ಟ್ರೋಲ್ ಮಾಡುತ್ತಿದ್ದ ಟ್ರೋಲರ್ಸ್ ವಿರುದ್ಧ ಬಾಲಿವುಡ್ ನಟ ಅಜಯ್ ದೇವಗನ್ ರೊಚ್ಚಿಗೆದ್ದಿದ್ದಾರೆ.

    ಅಜಯ್ ದೇವಗನ್ ಹಾಗೂ ಕಾಜೋಲ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 15 ವರ್ಷದ ಮಗಳು ನೈಸಾ ಹಾಗೂ 8 ವರ್ಷದ ಮಗ ಯುಗ್‍ನನ್ನು ಟ್ರೋಲ್ ಮಾಡುತ್ತಿದ್ದಕ್ಕೆ ಅಜಯ್ ದೇವಗನ್ ಗರಂ ಆಗಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ನೈಸಾ ಧರಿಸಿದ ಉಡುಪಿನ ಬಗ್ಗೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದರು. ಈ ಬಗ್ಗೆ ದೆಹಲಿಯಲ್ಲಿ ‘ಟೋಟಲ್ ಧಮಾಲ್’ ಚಿತ್ರದ ಪ್ರಮೋಶನ್ ವೇಳೆ ಮಾಧ್ಯಮದೊಂದಿಗೆ ಅಜಯ್ ದೇವಗನ್ ಮಾತನಾಡಿ. “ನೀವು ಬೇಕಾದರೆ ನನ್ನ ಮತ್ತು ಕಾಜೋಲ್ ಬಗ್ಗೆ ಜಡ್ಜ್ ಮಾಡಿ. ಅದನ್ನು ಬಿಟ್ಟು ನಮ್ಮ ಮಕ್ಕಳನ್ನು ಜಡ್ಜ್ ಮಾಡಬೇಡಿ. ನಾನು ಹಾಗೂ ಕಾಜೋಲ್ ಕಲಾವಿದರಾದ ಕಾರಣ ನಮ್ಮ ಮಕ್ಕಳು ಕ್ಯಾಮೆರಾಗೆ ಕಾಣಿಸಿಕೊಳ್ಳುತ್ತಿರುತ್ತಾರೆ” ಎಂದು ಹೇಳಿದ್ದಾರೆ.

     

    View this post on Instagram

     

    Thank you babies for 57k ????????❤️ • #nysadevgan

    A post shared by nysa devgan ♡ (@nysadevganx) on

    ಒಬ್ಬರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ಬೇರೆ ವ್ಯಕ್ತಿಗಳ ಬಗ್ಗೆ ಮಾತನಾಡಲು ಶುರು ಮಾಡಿದರೆ, ಆ ವ್ಯಕ್ತಿ ಹೇಗೆ ಬೇಸರವಾಗುತ್ತೋ, ಹಾಗೆ ನನ್ನ ಮಕ್ಕಳಿಗೂ ಬೇಸರವಾಗುತ್ತೆ. ನಿಜ ಹೇಳಬೇಕೆಂದರೆ ನಾನು ಟ್ರೋಲ್ ಮಾಡುವ ವ್ಯಕ್ತಿಗಳ ಬಗ್ಗೆ ಯೋಚಿಸುವುದಿಲ್ಲ. ಆದರೆ ನನ್ನ ಮಕ್ಕಳು ಇಂತಹ ಟ್ರೋಲ್‍ಗೆ ಒಳಗಾಗುವುದು ನನಗೆ ಇಷ್ಟವಿಲ್ಲ. ಅದು ನನಗೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.

     

    View this post on Instagram

     

    ???????? • #nysadevgan

    A post shared by nysa devgan ♡ (@nysadevganx) on

    ಆರಂಭದಲ್ಲಿ ನನ್ನ ಮಗಳು ಮೊದಲಿಗೆ ಈ ಟ್ರೋಲ್‍ಗಳನ್ನು ನೋಡಿ ಬೇಸರಪಡುತ್ತಿದ್ದಳು. ಆದರೆ ಈಗ ಆಕೆ ಇಂತಹ ಟ್ರೋಲ್‍ಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನನ್ನ ಮಗಳಿಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿದಿದೆ. ನಾವು ಏನೇ ಮಾಡಿದರೂ ಕೆಲವರು ನಮ್ಮನ್ನು ಜಡ್ಜ್ ಮಾಡಲು ಕಾಯುತ್ತಿರುತ್ತಾರೆ. ನಾವು ಪ್ರತಿಕ್ರಿಯೆ ನೀಡಿದರೆ, ಅವರು ಇನ್ನಷ್ಟು ಹೆಚ್ಚಾಗಿ ಪ್ರತಿಕ್ರಿಯಿಸುತ್ತಾರೆ ಎಂದು ಅಜಯ್ ತಮ್ಮ ಮಗಳ ಬಗ್ಗೆ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ಅಭಿಮಾನಿಗಳಿಗೆ ಕಾಜೋಲ್ ವಾಟ್ಸಪ್ ನಂಬರ್ ಕೊಟ್ಟ ಅಜಯ್ ದೇವಗನ್!

    ನವದೆಹಲಿ: ಬಾಲಿವುಡ್ ನಟ ಅಜಯ್ ದೇವಗನ್ ಅಭಿಮಾನಿಗಳ ಕಾಳೆಯಲು ಹೋಗಿ ಪತ್ನಿ ಕಾಜೋಲ್ ಅವರ ವಾಟ್ಸಪ್ ನಂಬರ್ ಅನ್ನು ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದಾರೆ.

    ಅಭಿಮಾನಿಗಳ ಜೊತೆಗಿನ ಚರ್ಚೆಯ ವೇಳೆ ಅಜಯ್, ಕಾಜೋಲ್ ಈಗ ದೇಶದಲ್ಲಿ ಇಲ್ಲ. ಅವರನ್ನು ಸಂಪರ್ಕಿಸಲು ಈ ನಂಬರ್ ಬಳಸಿ ಎಂದು ವಾಟ್ಸಪ್ ನಂಬರ್ ಟೈಪ್ ಮಾಡಿ ಎಂದು  ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ್ದರು.

    ಅಭಿಮಾನಿಗಳು ಕಾಜೋಲ್ ನಂಬರ್ ಸಿಕ್ಕಿದ್ದೇ ತಡ ಟ್ವೀಟ್ ಮಾಡಿದ್ದನ್ನು ಸ್ಕ್ರೀನ್‍ಶಾರ್ಟ್ ಮಾಡಿಕೊಂಡು ಕಾಜೋಲ್ ಅವರಿಗೆ ನಿಮ್ಮ ಪತಿ ನಂಬರ್ ನೀಡಿದ್ದಾರೆ ಎಂದು ಫೋಟೋವನ್ನು ಸೆಂಡ್ ಮಾಡಿದ್ದಾರೆ.

    ಸಿನಿಮಾ ಸೆಟ್‍ನಲ್ಲಿ ತಮಾಷೆಗಳು ಮಾಡಿ ಸಾಕಾಗಿತ್ತು. ಹೀಗಾಗಿ ಅಭಿಮಾನಿಗಳ ಮೂಲಕ ಕಾಲೆಳೆಯಲು ಪತ್ನಿಯ ನಂಬರ್ ಹಾಕಿದ್ದೇನೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಕಾಜೋಲ್ ಪ್ರತಿಕ್ರಿಯಿಸಿ, ನಿಮ್ಮ ಚೇಷ್ಟೆಗಳು ಸಿನಿಮಾ ಸೆಟ್‍ನಿಂದ ಹೊರಗೆ ಬಂದಂತೆ ಕಾಣುತ್ತಿದೆ. ಈ ರೀತಿಯ ಚೇಷ್ಟೆಗಳಿಗೆ ಮನೆಯಲ್ಲಿ ಪ್ರವೇಶವಿಲ್ಲ ಎಂದು ಬರೆದು ಕೊನೆಯಲ್ಲಿ ಕೋಪದ ಎಮೋಜಿಯನ್ನು ಹಾಕಿದ್ದಾರೆ.

    ಸದ್ಯ ಅಜಯ್ ದೇವಗಾನ್ ಅವರು ‘ತಾನಾಜೀ’ ಎಂಬ ಹೊಸ ಸಿನಿಮಾ ಚಿತ್ರಿಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕಾಜೋಲ್ ಅವರು ಕೂಡಾ ಬಹಳ ದಿನಗಳ ನಂತರ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಮ್ಮ ಬಂದಿದ್ದಾರೆ, ಯಾರು ಮನೆಗೆ ಕರೆದುಕೊಂಡು ಹೋಗ್ತೀರಾ: ಕಾಜೋಲ್

    ಅಮ್ಮ ಬಂದಿದ್ದಾರೆ, ಯಾರು ಮನೆಗೆ ಕರೆದುಕೊಂಡು ಹೋಗ್ತೀರಾ: ಕಾಜೋಲ್

    ಮುಂಬೈ: ಬಾಲಿವುಡ್ ನಟಿ ಕಾಜೋಲ್ ತನ್ನ ಪತಿ ಅಜಯ್ ದೇವ್‍ಗನ್ ನಟಿಸಿದ್ದ ‘ರೇಡ್’ ಚಿತ್ರದಲ್ಲಿ 85 ವರ್ಷದ ಸಹನಟಿ ಪುಷ್ಪಾ ಜೋಶಿ ಅವರ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ವಿಡಿಯೋದಲ್ಲಿ ಪುಷ್ಪಾ ಅವರು ವಯಸ್ಸಾದ ಕಾಲದಲ್ಲಿ ಮಕ್ಕಳ ಪದ್ಯವನ್ನು ಹಾಡುತ್ತಿದ್ದು, ಕಾಜೋಲ್ ಇದ್ದಕ್ಕೆ, “ಈಗ ಬಂದರು ಅಮ್ಮ.. ಇವರನ್ನು ಯಾರು ಮನೆಗೆ ಕರೆದುಕೊಂಡು ಹೋಗುತ್ತೀರಾ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಚಿತ್ರವನ್ನು ನಿರ್ದೇಶಕ ರಾಜ್‍ಕುಮಾರ್ ನಿರ್ದೇಶಿಸಿದ್ದು, ಬಿಡುಗಡೆಯಾದ 2 ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ 23 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಚಿತ್ರದಲ್ಲಿ ಅಜಯ್ ದೇವ್‍ಗನ್ ಜೊತೆ ಸೌರಬ್ ಶುಕ್ಲಾ ಹಾಗೂ ಇಲಿಯಾನಾ ಡಿಕ್ರೂಜ್ ನಟಿಸಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗಳಿಸಿದೆ.

    ಚಿತ್ರದಲ್ಲಿ ಅಜಯ್ ಹಾಗೂ ಸೌರಭ್ ಮೆಚ್ಚುಗೆ ಪಡೆದರೆ, ಅಮ್ಮ(ಪುಷ್ಪಾ) ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಅಜಯ್ ದೇವಗನ್ ಈ ಚಿತ್ರದಲ್ಲಿ ಲಕ್ನೋ ಆದಾಯ ತೆರಿಗೆ ಇಲಾಖೆಯ ಉಪ ಕಮಿಷನರ್ ಆಗಿ ನಟಿಸಿದ್ದು, ಪುಷ್ಪಾ ಅವರು ಈ ಚಿತ್ರದಲ್ಲಿ ಸೌರಭ್ ಅವರ ತಾಯಿಯಾಗಿ ನಟಿಸಿದ್ದಾರೆ. 1980ರಲ್ಲಿ ನಡೆದ ದೇಶದ ಅತೀ ದೊಡ್ಡ ರೇಡ್‍ನನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ.

    Here comes Amma… you will want to take her home. #Raid

    A post shared by Kajol Devgan (@kajol) on

  • ಸೆಲೆಬ್ರಿಟಿಗಳಿಗೆ, ಹೊಸದಾಗಿ ಸಿನಿಮಾಗೆ ಸೇರೋ ಮಂದಿಗೆ ಕಾಜೋಲ್ ನೀಡಿದ್ರು ಅತ್ಯುತ್ತಮ ಸಲಹೆ

    ಸೆಲೆಬ್ರಿಟಿಗಳಿಗೆ, ಹೊಸದಾಗಿ ಸಿನಿಮಾಗೆ ಸೇರೋ ಮಂದಿಗೆ ಕಾಜೋಲ್ ನೀಡಿದ್ರು ಅತ್ಯುತ್ತಮ ಸಲಹೆ

    ಮುಂಬೈ: ಸಿನಿಮಾ ರಂಗದಲ್ಲಿ ಹಲವಾರು ಮಂದಿ ಇಲ್ಲ ಸಲ್ಲದ ಕಾರಣ ಹೇಳಿ ಶೂಟಿಂಗ್ ತಪ್ಪಿಸಿಕೊಂಡು ಕಿರಿಕ್ ಮಾಡುತ್ತಾರೆ. ಆರಂಭದಲ್ಲಿ ಒಪ್ಪಿ ಕೊನೆಗೆ ಕೈ ಕೊಡುತ್ತಾರೆ. ಆದರೆ ಅಂತಹವರಿಗೆಲ್ಲ ಬಿಟೌನ್ ನಟಿ ಕಾಜೋಲ್ ಮಾದರಿಯಾಗಿದ್ದಾರೆ.

    `ದಿಲ್ವಾಲೆ ದುಲ್ಹನಿಯಾ ಲೇಜಾಯೆಂಗೆ’, `ಕುಚ್ ಕುಚ್ ಹೋತಾ ಹೈ’ ಮತ್ತು `ಕಭಿ ಖುಷಿ ಕಭಿಯೇ ಗಮ್’ ನಟಿಸಿ ಅಭಿಮಾನಿಗಳ ಮನಗೆದ್ದ ಕಾಜೋಲ್ ತಾವು ಮಾಡುತ್ತಿರುವ ಕೆಲಸವನ್ನು ಗೌರವಿಸುತ್ತಾರೆ. ಹೀಗಾಗಿ ಇವರ 25 ವರ್ಷಗಳ ಸಿನಿಮಾ ವೃತ್ತಿ ಜೀವನದಲ್ಲಿ ಒಂದು ದಿನವು ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲವಂತೆ.

    ಕಾಜೋಲ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟು ಬರೋಬ್ಬರಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾವು ಒಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಅನಾರೋಗ್ಯಕ್ಕೆ ಒಳಗಾಗಿ ಒಂದು ದಿನ ಚಿತ್ರೀಕರಣವನ್ನು ಕ್ಯಾನ್ಸಲ್ ಮಾಡಿದರೂ ಲಕ್ಷಗಟ್ಟಲೆ ಹಣ ನಷ್ಟವಾಗುತ್ತದೆ. ಆದ್ದರಿಂದ ನಮ್ಮ ಮೇಲೆ ಬಹುದೊಡ್ಡ ಜವಾಬ್ದಾರಿ ಇರುತ್ತದೆ ಎಂದು ಹೇಳಿದರು.

    ನನ್ನ 25 ವರ್ಷದ ವೃತ್ತಿಜೀವನದಲ್ಲಿ ಒಂದು ದಿನವೂ ನಾನು ಶೂಟಿಂಗ್ ಕ್ಯಾನ್ಸಲ್ ಮಾಡಬೇಕೆಂದು ಯೋಚನೆ ಮಾಡಿಲ್ಲ. ಅಷ್ಟೇ ಅಲ್ಲದೇ ವಿಮಾನವನ್ನು ಮಿಸ್ ಮಾಡಿಕೊಂಡಿಲ್ಲ. ನಾನು ಪ್ರಮಾಣಿಕತೆಯಿಂದ ಇದ್ದೇನೆ ಎಂದು ಹೇಳಿದರು.

    ಒತ್ತಡದ ಕೆಲಸ, ಆಹಾರ, ಮಲಗುವ ಸಮಯದಲ್ಲಿ ಹೆಚ್ಚು ಕಡಿಮೆಯಾದಾಗ ನಮ್ಮ ಜೀವನದಲ್ಲೂ ಆರೋಗ್ಯ ಸಮಸ್ಯೆ ಇರುತ್ತದೆ. ನನ್ನ 43 ವಯಸ್ಸಿನಲ್ಲಿ ನನ್ನ ಮಗಳು ನೈಸಾ ಅಸ್ವಸ್ಥಳಾಗಿದ್ದಾಗ ಮಾತ್ರ ಶೂಟಿಂಗ್ ಒಮ್ಮೆ ಕ್ಯಾನ್ಸಲ್ ಮಾಡಿದ್ದೆ ಎಂದು ಪ್ರಮಾಣಿಕತೆಯಿಂದ ಹೇಳಿಕೊಂಡಿದ್ದಾರೆ.

    ನನ್ನ ಮಗಳಿಗೆ ಒಂದು ದಿನ 104 ಡಿಗ್ರಿ ಜ್ವರ ಬಂದಿತ್ತು. ಅಂದು ಮಾತ್ರ ನಾನು ನಿರ್ಮಾಪಕರಿಗೆ ಈ ದಿನ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೆ ನನಗೆ ಆನಾರೋಗ್ಯ ಇದ್ದಾಗ ಶೂಟಿಂಗ್ ಕ್ಯಾನ್ಸಲ್ ಮಾಡಿಲ್ಲ. ತುಂಬಾ ಜ್ವರ ಇದ್ದಾಗಲೂ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದೆ ಎಂದು ತಮ್ಮ ಸಿನಿ ಜೀವನದ ಕಥೆಯನ್ನು ಮೆಲುಕು ಹಾಕಿದ್ದಾರೆ.

  • ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಬಾಲಿವುಡ್‍ನ ಟಾಪ್ ಐವರು ನಟಿಯರೊಂದಿಗೆ ನಟಿಸಲಿದ್ದಾರೆ ಕಿಂಗ್ ಖಾನ್

    ಮುಂಬೈ: ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ಮುಂದಿನ ಚಿತ್ರದಲ್ಲಿ ಕಾಜೋಲ್, ಕರಿಶ್ಮಾ ಕಪೂರ್, ಶ್ರೀದೇವಿ, ರಾಣಿ ಮುಖರ್ಜಿ ಮತ್ತು ಆಲಿಯಾ ಭಟ್ ರೊಂದಿಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

    ಈಗಾಗಲೇ ಎಲ್ಲ ನಟಿಯರೊಂದಿಗೆ ನಟಿಸಿರುವ ಶಾರುಖ್ ಮೊದಲ ಬಾರಿಗೆ ಎಲ್ಲರೊಂದಿಗೆ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆನಂದ್ ಎಲ್ ರೈ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಕತ್ರೀನಾ ಕೈಫ್ ಮತ್ತು ಅನುಷ್ಕಾ ಶರ್ಮಾ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದೇ ಸಿನಿಮಾದ ಪಾರ್ಟಿ ದೃಶ್ಯವೊಂದರಲ್ಲಿ ಈ ಎಲ್ಲ ನಟಿಯರು ಆಗಮಿಸಿರುತ್ತಾರೆ.

    ಪಾರ್ಟಿ ನಂತರ ಶಾರುಖ್ ಖಾನ್ ಎಲ್ಲ ನಟಿಯರೊಂದಿಗೆ ಕ್ಲಿಕಿಸಿಕೊಂಡಿರುವ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಟ್ಟು ಎರಡು ಫೋಟೋಗಳನ್ನು ಅಪ್ಲೋಡ್ ಮಾಡಿರುವ ಶಾರುಖ್ ಒಂದರಲ್ಲಿ ಶ್ರೀದೇವಿ, ಕರಿಶ್ಮಾ ಕಪೂರ್ ಮತ್ತು ಆಲಿಯಾ ಭಟ್ ಇದ್ದಾರೆ. ಮತ್ತೊಂದು ಫೋಟೋದಲ್ಲಿ ರಾಣಿ ಮತ್ತು ಕಾಜೋಲ್ ಜೊತೆಯಾಗಿದ್ದಾರೆ. ಸಿನಿಮಾದಲ್ಲಿ ರಾಣಿ ಮತ್ತು ಕಾಜೋಲ್ ಸಹೋದರಿಯಾಗಿದ್ದರಿಂದ ಬೇರೆ ಶೂಟಿಂಗ್ ಟೈಮ್‍ನಲ್ಲಿ ಬಂದಿದ್ದರಿಂದ ಬೇರೆ ಫೋಟೋ ತೆಗೆಯಲಾಗಿದೆ.

    ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಲು ಐವರು ನಟಿಯರು ಯಾವುದೇ ಸಂಭಾವನೆಯನ್ನು ಪಡೆದಿಲ್ಲ. ಕೇವಲ ಶಾರುಖ್ ಸ್ನೇಹಕ್ಕಾಗಿ ಬಂದು ನಟಿಸಿದ್ದಾರೆ. ಶೂಟಿಂಗ್ ಬಂದಿದ್ದ ನಟಿಯರಿಗೆ ಶಾರುಖ್ ವೈಯಕ್ತಿಕವಾಗಿ ಬೆಲೆ ಬಾಳುವ ಗಿಫ್ಟ್‍ಗಳನ್ನು ನೀಡಿದ್ದಾರೆ.

    ಈ ಹಿಂದೆ ಶಾರುಖ್ ಖಾನ್ `ಓಂ ಶಾಂತಿ ಓಂ’ ಸಿನಿಮಾದ ಹಾಡೊಂದರಲ್ಲಿ ಇದೇ ರೀತಿಯಾಗಿ ಬಾಲಿವುಡ್‍ನ ಅನೇಕ ಗಣ್ಯ ನಟ-ನಟಿಯರೊಂದಿಗೆ ನಟಿಸಿದ್ದರು. ಓಂ ಶಾಂತಿ ಓಂ ಸಿನಿಮಾದ ಟೈಟಲ್ ಸಾಂಗ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು.

    https://www.instagram.com/p/BZujV6-jmEJ/?taken-by=iamsrk