Tag: kabaddi

  • ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಏಷ್ಯನ್ ಗೇಮ್ಸ್ ಕಬಡ್ಡಿಯಲ್ಲಿ ಭಾರತಕ್ಕೆ ಆಘಾತ!

    ಜಕಾರ್ತ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗ್ಯಾರಂಟಿ ಎಂದು ನಿರೀಕ್ಷೆಯಲ್ಲಿದ್ದ ಭಾರತದ ಪುರುಷರ ಕಬಡ್ಡಿ ತಂಡ ಸೆಮಿಫೈನಲ್ ನಲ್ಲಿ ಸೋತಿದೆ.

    ಏಷ್ಯನ್ ಗೇಮ್ಸ್ ನ 18 ನೇ ಆವೃತ್ತಿಯ 5ನೇ ದಿನವಾದ ಇಂದು ನಡೆದ ಕಬಡ್ಡಿ ಸೆಮಿಫೈನಲ್ ನಲ್ಲಿ ಇರಾನ್ ಭಾರತವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. 27-18 ಅಂತರದಿಂದ ಇರಾನ್ ಏಷ್ಯನ್ ಗೇಮ್ಸ್ ನಲ್ಲಿ 7 ಬಾರಿ ಚಿನ್ನದ ಪದಕ ಗೆದ್ದಿದ್ದ ತಂಡವನ್ನು ಮಣಿಸಿದೆ.

    ಭಾರತ 1990 ರಲ್ಲಿ ಏಷ್ಯನ್ ಗೇಮ್ಸ್ ಆರಂಭಗೊಂಡ ಬಳಿಕ ಭಾರತ ಕಬಡ್ಡಿಯಲ್ಲಿ ಪ್ರಾಬಲ್ಯ ಮೆರೆದಿತ್ತು. ಆದರೆ ಈಗ ಇರಾನ್ ವಿರುದ್ಧ ಸೋತಿದ್ದು, ಕಂಚಿನ ಪದಕಕ್ಕಾಗಿ ಪಾಕ್ ಜೊತೆ ಹೋರಾಟ ಮಾಡಬೇಕಿದೆ. ಪಾಕಿಸ್ತಾನ 24-27 ಅಂತರದಿಂದ ಕೊರಿಯಾ ವಿರುದ್ಧ ಸೋತಿದೆ.

    ಭಾರತ ಸೋತಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದ್ದು, ಪ್ರೀಮಿಯರ್ ಲೀಗ್ ಗೆ ಹೆಚ್ಚು ಆಸಕ್ತಿ ನೀಡಿದ ಪರಿಣಾಮ ಭಾರತ ಸೋತಿದೆ. ಫ್ರಾಂಚೈಸಿಗಳ ಪರ ಆಡಿ ಈಗ ದೇಶದ ಪರ ಆಡಲು ವಿಫಲರಾಗಿದ್ದಾರೆ ಎಂದು ಜನ ಕಮೆಂಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಪುಟ್ಟಣ್ಣಯ್ಯರ ಕೊನೆ ಕ್ಷಣಗಳನ್ನ ನೆನೆದು ಕಣ್ಣೀರು ಹಾಕಿದ ಪತ್ನಿ, ಮಗ

    ಪುಟ್ಟಣ್ಣಯ್ಯರ ಕೊನೆ ಕ್ಷಣಗಳನ್ನ ನೆನೆದು ಕಣ್ಣೀರು ಹಾಕಿದ ಪತ್ನಿ, ಮಗ

    ಮಂಡ್ಯ: ರೈತ ಬಂಧು ಶಾಸಕ ಕೆ.ಎಸ್ ಪುಟ್ಟಣ್ಣಯ್ಯ ಪತ್ನಿ ಸುನೀತ ಪುಟ್ಟಣ್ಣಯ್ಯ ಹಾಗೂ ಮಗ ದರ್ಶನ್ ಅವರು ಪುಟ್ಟಣ್ಣಯ್ಯ ಅವರೊಂದಿಗಿನ ಕೊನೆ ಕ್ಷಣಗಳನ್ನು ನೆನೆದು ಕಣ್ಣೀರಾಗುತ್ತಿದ್ದಾರೆ.

    ಮಗ ದರ್ಶನ್ ತಂದೆಗೆ ಚುನಾವಣೆಯಲ್ಲಿ ಸಹಾಯ ಮಾಡಲು ಅಮೇರಿಕಾದಿಂದ ಬಂದು ಕೆಲವೇ ದಿನಗಳಾಗಿತ್ತು. ಕೊನೆಯ ಬಾರಿಗೆ ದರ್ಶನ್ ತಂದೆಯೊಂದಿಗೆ ಫೋನಿನಲ್ಲಿ ಮಾತನಾಡಿದ್ದರು. ಇದೀಗ ತನ್ನ ತಂದೆಯ ಕಾಲುಚೀಲವನ್ನು ಕೈಯಾರೆ ಬಿಚ್ಚಿದ್ದನ್ನು ನೆನೆದು ಮಗ ದರ್ಶನ್ ಕಣ್ಣೀರು ಹಾಕಿದ್ರು.

    ಪತ್ನಿ ಸುನೀತ ಅವರು ಇಡೀ ದಿನ ಪುಟ್ಟಣ್ಣಯ್ಯ ಅವರ ಜೊತೆಯಿದ್ದರಂತೆ. ಬೇಬಿ ಬೆಟ್ಟದಲ್ಲಿ ನಡೆದ ಕಾರ್ಯಕ್ರಮಕ್ಕೂ ಜೊತೆಯಲ್ಲೇ ಹೋಗಿದ್ರಂತೆ. ಆದ್ರೆ ಚೆನ್ನಾಗಿಯೇ ಇದ್ದ ಪುಟ್ಟಣ್ಣಯ್ಯ ಅವರು ಸಾವನ್ನಪ್ಪಿದ್ದು ಸಂಕಟ ತಂದಿದೆ ಎಂದು ದುಃಖಿಸಿದ್ರು.

    ಅಮೇರಿಕಾದಲ್ಲಿರಿರುವ ಹೆಣ್ಣಮಕ್ಕಳು ಮತ್ತು ಕುಟುಂಬಸ್ಥರು ಬರಬೇಕಾಗಿರುವುದರಿಂದ ಅಂತ್ಯಕ್ರಿಯೆ ಬುಧವಾರ ನಡೆಯುತ್ತದೆ. ತಡವಾಗಿ ಅಂತ್ಯಕ್ರಿಯೆ ನಡೆಯುತ್ತಿರುವುದಕ್ಕೆ ಅಭಿಮಾನಿಗಳು ಕ್ಷಮಿಸಬೇಕು ಪುಟ್ಟಣ್ಣಯ್ಯ ಪತ್ನಿ ಸುನೀತ ಮನವಿ ಮಾಡಿಕೊಂಡ್ರು.

    ವೇದಿಕೆಯಲ್ಲಿಯೇ ಹೃದಯಾಘಾತ: ರೈತ ಬಂಧು, ಅಭಿಮಾನಿಗಳಲ್ಲಿ ಮೇಲುಕೋಟೆ ಮಾಣಿಕ್ಯ ಎಂದೇ ಖ್ಯಾತರಾಗಿದ್ದ ಕೆ.ಎಸ್.ಪುಟ್ಟಣ್ಣಯ್ಯ ಅವರು ಓರ್ವ ಕಬಡ್ಡಿ ಹಾಗೂ ಕುಸ್ತಿ ಪಟುವಾಗಿದ್ದರು. ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯ ವೀಕ್ಷಣೆಗೆ ಆಗಮಿಸಿದ್ದರು. ಈ ಪಂದ್ಯದಲ್ಲಿ ಪುಟ್ಟಣ್ಣಯ್ಯ ಬೆಂಬಲಿತ ಪಾಂಡವಪುರ ಟೀಂ ಗೆದ್ದಿತ್ತು. ಹೀಗಾಗಿ ಗೆದ್ದ ತಂಡವನ್ನು ಸನ್ಮಾನಿಸಲು ಪುಟ್ಟಣ್ಣಯ್ಯ ವೇದಿಕೆ ಮೇಲೆ ಆಸೀನರಾಗಿದ್ದರು.

    ಅಭಿಮಾನಿಗಳು, ಸ್ಥಳೀಯ ಮುಖಂಡರೊಂದಿಗೆ ಕುಳಿತು ಖುಷಿಯಾಗಿಯೇ ಪಂದ್ಯ ವೀಕ್ಷಿಸಿದ್ದ ಪುಟ್ಟಣ್ಣಯ್ಯರಿಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ವೇದಿಕೆಯಲ್ಲೇ ಕುಸಿದು ಬಿದ್ದ ಅವರನ್ನು ಕೂಡಲೇ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯ್ತು. ಆದ್ರೆ ವಿಧಿ ಅದಾಗಲೇ ಪುಟ್ಟಣ್ಣಯ್ಯ ಬದುಕಿನ ಹೋರಾಟವನ್ನು ಕಿತ್ತುಕೊಂಡು ಬಿಟ್ಟಿತ್ತು. ಬಳಿಕ ಪುಟ್ಟಣ್ಣಯ್ಯ ಮೃತದೇಹವನ್ನು ಹುಟ್ಟೂರು ಕ್ಯಾತನಹಳ್ಳಿಗೆ ರವಾನಿಸಲಾಯಿತು. ಈ ವೇಳೆ ಸಾವಿರಾರು ಅಭಿಮಾನಿಗಳು ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಮುಗಿಬಿದ್ದರು. ಇನ್ನು ನಟ ದರ್ಶನ್ ರಾತ್ರೋರಾತ್ರಿ ಪುಟ್ಟಣ್ಣಯ್ಯರ ಅಂತಿಮ ದರ್ಶನ ಪಡೆದರು. ಈ ವೇಳೆ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

  • ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಮಾನ ಮರ್ಯಾದೆ ಇದ್ರೆ ಕ್ಷೇತ್ರ ಬಿಟ್ಟು ತೊಲಗು- ಶಾಸಕ ಸಿ.ಟಿ. ರವಿ ವಿರುದ್ಧ ತಿರುಗಿಬಿದ್ದ ರೈತರು

    ಚಿಕ್ಕಮಗಳೂರು: `ಮೂರು ಬಾರಿ ಶಾಸಕ, ಒಮ್ಮೆ ಮಂತ್ರಿಯಾಗಿದ್ದೀಯಾ. ಆದ್ರೂ ನಿನ್ನ ಕೊಡುಗೆ ಶೂನ್ಯ. ಚಿಕ್ಕ ಚಿಕ್ಕ ಯೋಜನೆಗಳನ್ನೂ ಮುಗಿಸಿಲ್ಲ. ಚುನಾವಣೆ ಸಂದರ್ಭ ಗ್ರಾಮವಾಸ್ತವ್ಯ, ಕಬ್ಬಡಿ, ಡ್ಯಾನ್ಸ್ ಮಾಡೋ ಗಿಮಿಕ್ ಮಾಡೋದ್ರಲ್ಲಿ ನೀನು ನಿಸ್ಸೀಮ. ನಿನ್ನ ಕೈಲಿ ಆಗದಿದ್ರೆ ಕ್ಷೇತ್ರ ಬಿಟ್ಟು ಹೋಗು’ ಅಂತ ಶಾಸಕ ಸಿಟಿ ರವಿಯವರನ್ನು ಚಿಕ್ಕಮಗಳೂರಿನ ಮತದಾರರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.

    ಇದಕ್ಕೆ ಕಾರಣ ಬೆಳವಾಡಿ, ಕಳಸಾಪುರ, ಲಕ್ಯಾ, ದೇವನೂರು ಭಾಗದ 60-70 ಹಳ್ಳಿಗಳಿಗೆ ನೀರು ಒದಗಿಸುವ ಉದ್ದೇಶದಿಂದ ಕರಗಡ ಯೋಜನೆ ಪ್ರಾರಂಭಿಸಲಾಗಿತ್ತು. ಆದ್ರೆ ಇದನ್ನ ಮುಗಿಸದ ಕಾರಣ ಶಾಸಕ ರವಿಯನ್ನ ಮುಂದಿನ ಎಲೆಕ್ಷನ್‍ನಲ್ಲಿ ಸೋಲಿಸಬೇಕು ಅಂತಾ ಮತದಾರರು ಪಣ ತೊಟ್ಟಿರುವುದಾಗಿ ಕರಗಡ ನೀರಾವರಿ ಹೋರಾಟ ಸಮಿತಿ ಸಂಚಾಲಕ ರವೀಶ್ ಕ್ಯಾತನಬೀಡು ಹೇಳಿದ್ದಾರೆ.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    `ಶಾಸಕ ಸಿ.ಟಿ. ರವಿಯನ್ನ ಸೋಲಿಸಿ’ ಎಂಬ ಸ್ಲೋಗನ್ ಅಡಿ ಊರೂರು ಪ್ರಚಾರ ಮಾಡೋಕೆ ರೈತರು, ಕರಗಡ ಹೋರಾಟ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆ. ಈಗಾಗಲೇ ಐದಾರು ಗ್ರಾಮಗಳಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಶಾಸಕ ಸಿ.ಟಿ. ರವಿ ಈ ಹಿಂದೆ ಕರಗಡ ಯೋಜನೆ ಶೀಘ್ರದಲ್ಲೇ ಮುಗಿಸ್ತೀವಿ ಅಂತಾ ಹೇಳಿ ಮಣ್ಣು ಅಗೆಯೋ ಕೆಲಸ ಮಾಡಿದ್ರು. ಆದ್ರೆ ಇದು ಬರೀ ಪೋಸ್ ಕೊಡಲಷ್ಟೇ ಅನ್ನೋದು ರೈತರ ಆರೋಪ.

    ಒಟ್ಟಿನಲ್ಲಿ ಕರಗಡ ನೀರಾವರಿ ಹೋರಾಟ ಸಮಿತಿ ಸಿಟಿ ರವಿ ವಿರುದ್ಧ ತಾಲೂಕಿನಾದ್ಯಂತ ಜನಜಾಗೃತಿ ಮೂಡಿಸಲು ಮುಂದಾಗಿದೆ.

    ಇದನ್ನೂ ಓದಿ: ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

     

  • ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ವಿಡಿಯೋ: ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ ಸ್ಟೆಪ್ ಹಾಕಿದ ಶಾಸಕ ಸಿ.ಟಿ ರವಿ!

    ಚಿಕ್ಕಮಗಳೂರು: ಈ ಹಿಂದೆ ಕಬಡ್ಡಿ, ವಾಲಿಬಾಲ್ ಆಡುವ ಮೂಲಕ ಜನರನ್ನು ಮನರಂಜಿಸಿದ್ದ ಶಾಸಕ ಸಿ.ಟಿ ರವಿ, ಇದೀಗ ಗ್ರಾಮಸ್ಥರೊಂದಿಗೆ ವೇದಿಕೆಯೇರಿ ಸಖತ್ತಾಗಿ ಸ್ಟೆಪ್ ಹಾಕೋ ಮೂಲಕ ಡ್ಯಾನ್ಸ್ ಗೂ ಸೈ ಎಂದಿದ್ದಾರೆ.

    ಚಿಕ್ಕಮಗಳೂರು ತಾಲೂಕಿನ ಗಾಳಿಪೂಜೆಯಲ್ಲಿ ಶನಿವಾರ ಗ್ರಾಮ ವಾಸ್ತವ್ಯದ ವೇಳೆ ಗ್ರಾಮಸ್ಥರೊಂದಿಗೆ ವೇದಿಕೆ ಮೇಲೆಯೇರಿ ಕುಣಿದು ಕುಪ್ಪಳಿಸಿದ್ದಾರೆ. ಗ್ರಾಮ ವಾಸ್ತವ್ಯದಲ್ಲಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಬಳಿಕ ಸಿಟಿ ರವಿ ವೇದಿಕೆಯೇರಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ ಟಿ ರವಿ ಅವರು ಗ್ರಾಮ ಸಭೆಯ ಬಳಿಕ ಚಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳೀಯ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿಕೊಂಡಿದ್ದರು.

    ಇದನ್ನೂ ಓದಿ: ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ-ಫೋಟೋಗಳಲ್ಲಿ ನೋಡಿ

    ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ದರು. ಶಾಸಕರು ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ದರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ದರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಅಂತ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು.

    ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದ್ದರು.

  • ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    ಶಾಸಕ ಸಿ.ಟಿ ರವಿಯಿಂದ ಕಬಡ್ಡಿ, ವಾಲಿಬಾಲ್ ಮೋಡಿ!

    ಚಿಕ್ಕಮಗಳೂರು: ಬಿಜೆಪಿ ಮುಖಂಡ, ಶಾಸಕ ಸಿ.ಟಿ.ರವಿ ಒಳ್ಳೆ ಕಬಡ್ಡಿ ಆಟಗಾರ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಅವರ ಕಬಡ್ಡಿ ಆಟವನ್ನ ನೋಡ್ದೋರು ತುಂಬಾ ವಿರಳ. ಆದ್ರೆ, ಇಂದು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಬೂಲನಹಳ್ಳಿ ತಾಂಡ್ಯದ ಜನರಿಗೆ ಅದನ್ನ ನೋಡೋ ಭಾಗ್ಯ ಸಿಕ್ತು.

    ಇಂದು ಬೂಲನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಶಾಸಕ ಸಿ.ಟಿ.ರವಿ ಗ್ರಾಮ ಸಭೆಯ ಬಳಿಕ ಚೆಡ್ಡಿ ಹಾಗೂ ಟೀ ಶರ್ಟ್ ತೊಟ್ಟು ಸ್ಥಳಿಯ ಯುವಕರೊಂದಿಗೆ ಕಬಡ್ಡಿ ಆಡಿ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಂಡ್ರು.

    ಕ್ರೀಡಾಂಗಣಕ್ಕಿಳಿದ ಬಳಿಕ ಪ್ರೋಫೆಷನಲ್ ಆಟಗಾರನಂತೆ ಮೈದಾನದಲ್ಲಿದ್ದ ಕಲ್ಲುಗಳನ್ನ ಆಯ್ದು ಗ್ರೌಂಡ್ ಗೆ ನಮಸ್ಕರಿಸಿ ಕೋರ್ಟ್ ಒಳಗೆ ಪ್ರವೇಶಿಸಿದ್ರು. ಶಾಸಕ ರವಿ ಕಬಡ್ಡಿ ಆಡುವುದನ್ನು ನೋಡಲು ಗ್ರಾಮದ ಜನರೆಲ್ಲಾ ಆಸೀನರಾಗಿದ್ರು. ಮಹಿಳೆಯರು ಕೂಡ ಮಕ್ಕಳ ಸಮೇತ ಗ್ರೌಂಡ್ ಸುತ್ತಲೂ ಕಿಕ್ಕಿರಿದು ಸೇರಿದ್ರು. ಶಾಸಕ ರವಿ ರೈಡ್ ಗೆ ಇಳಿಯುತ್ತಿದ್ದಂತೆ ಕೂಗುತ್ತಾ ಬೆಂಬಲಿಸಿದ್ರು. ನಾನು ವಿಧಾನಸೌಧದ ಶಾಸಕನಲ್ಲ, ಜನಸಾಮಾನ್ಯರ ಶಾಸಕ ಎಂದು ಹೇಳ್ತಿದ್ದ ರವಿ ಅದೇ ರೀತಿ ನಡೆದುಕೊಂಡ್ರು ಎನ್ನುವುದು ಗ್ರಾಮಸ್ಥರ ಮಾತು.

    ಕಬಡ್ಡಿಯ ಬಳಿಕ ಗ್ರಾಮೀಣ ಕ್ರೀಡಾಕೂಟವಾದ ಹಗ್ಗಜಗ್ಗಾಟದಲ್ಲೂ ಭಾಗವಹಿಸಿ, ವಾಲಿಬಾಲ್ ಆಡುವ ಮೂಲಕ ಎಲ್ಲರ ಮನರಂಜಿಸಿದರು.