Tag: Kaanadante Maayavadanu

  • ಮರು ಬಿಡುಗಡೆಯಾಗಲಿದೆ ‘ಕಾಣದಂತೆ ಮಾಯಾವಾದನು’ ಚಿತ್ರ – ಅಕ್ಟೋಬರ್ 15ಕ್ಕೆ ರೀ ಎಂಟ್ರಿ

    ಮರು ಬಿಡುಗಡೆಯಾಗಲಿದೆ ‘ಕಾಣದಂತೆ ಮಾಯಾವಾದನು’ ಚಿತ್ರ – ಅಕ್ಟೋಬರ್ 15ಕ್ಕೆ ರೀ ಎಂಟ್ರಿ

    ಸುಮಾರು ಏಳು ತಿಂಗಳಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡದೆ ಬೇಸರದಲ್ಲಿದ್ದ ಕನ್ನಡ ಸಿನಿ ರಸಿಕರಿಗೆ ಅಕ್ಟೋಬರ್ 15ರಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡೋ ಭಾಗ್ಯ ಸಿಕ್ಕಿದೆ. ಚಿತ್ರಮಂದಿರ ಓಪನ್‍ಗೆ ಸರ್ಕಾರ ಅನುಮತಿ ನೀಡಿದ್ದೇ ತಡ ಹಲವು ಚಿತ್ರತಂಡಗಳು ಸಿನಿಮಾ ಬಿಡುಗಡೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದ್ರ ನಡುವೆ ಕೊರೊನಾ ಹೊಡೆತಕ್ಕೆ ಸಿಕ್ಕಿ ಕಡಿಮೆ ದಿನ ಪ್ರದರ್ಶನ ಕಂಡ ಚಿತ್ರಗಳು ಒಂದಾದ ಮೇಲೊಂದರಂತೆ ರೀ ರಿಲೀಸ್‍ಗೆ ರೆಡಿಯಾಗುತ್ತಿವೆ. ಈ ಸಾಲಿನಲ್ಲಿ ವಿಕಾಸ್ ನಾಯಕ ನಟನಾಗಿ ನಟಿಸಿರುವ ‘ಕಾಣದಂತೆ ಮಾಯವಾದನು’ ಚಿತ್ರ ಕೂಡ ಸೇರ್ಪಡೆಯಾಗಿದೆ.

    ಅಕ್ಟೋಬರ್ 15ರಂದೇ ‘ಕಾಣದಂತೆ ಮಾಯವಾದನು’ ಚಿತ್ರ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಚಿತ್ರದ ನಿರ್ದೇಶಕ ರಾಜ್ ಪಾತಿಪಾಟಿ ಹಾಗೂ ನಟ ವಿಕಾಸ್ ಸಿನಿಮಾಗೆ ಒಳ್ಳೆಯ ರಿವೀವ್ ಬಂದಿತ್ತು. ಜನರು ಮೆಚ್ಚಿಕೊಂಡಿದ್ರು. ಬಟ್ ನಾವು ಒಂದಿಷ್ಟು ಸೀನ್‍ಗಳನ್ನು ತುಂಬಾ ಟ್ರಿಮ್ ಮಾಡಿದ್ವಿ. ಕಥೆಗೆ ಹೆಚ್ಚು ಇಂಪಾರ್ಟೆನ್ಸ್ ಕೊಟ್ಟು ಕೆಲವು ಸೀನ್‍ಗಳನ್ನು ಟ್ರಿಮ್ ಮಾಡಿದ್ವಿ. ಆದ್ರೀಗ ಒಂದಿಷ್ಟು ಬದಲಾವಣೆಯೊಂದಿಗೆ ಮರು ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಜನರಿಗೆ ಖಂಡಿತ ಮೊದಲಿಗಿಂತ ಈ ಬಾರಿ ಹೆಚ್ಚಾಗಿ ಸಿನಿಮಾ ಇಷ್ಟವಾಗುತ್ತೆ ಅನ್ನೋದು ಚಿತ್ರತಂಡದ ಅಭಿಪ್ರಾಯ.

    ಅಕ್ಟೋಬರ್ 15ಕ್ಕೆ ಹತ್ತಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ‘ಕಾಣದಂತೆ ಮಾಯವಾದನು’ ಚಿತ್ರ ಮರುಬಿಡುಯಾಗುತ್ತಿದೆ. ಚಿತ್ರದಲ್ಲಿ ಲವರ್ ಬಾಯ್, ಆಕ್ಷನ್ ಹೀರೋ ಆಗಿ ವಿಕಾಸ್ ರಮ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕ ನಟಿಯಾಗಿ ಸಿಂಧೂ ಲೋಕನಾಥ್ ನಟಿಸಿದ್ದಾರೆ. ಲವ್ ಫ್ಯಾಂಟಸಿ, ಹಾರಾರ್, ಆಕ್ಷನ್, ಸಸ್ಪೆನ್ಸ್ ಎಲ್ಲಾ ಎಲಿಮೆಂಟ್‍ಗಳು ಚಿತ್ರದಲ್ಲಿದ್ದು, ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದ್ರಶೇಖರ್ ನಾಯ್ಡು, ಸೋಮ್ ಸಿಂಗ್, ಪುಷ್ಪ ಸೋಮ್ ಸಿಂಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಂದ್ಹಾಗೆ ಈ ಸಿನಿಮಾ ಜನವರಿ 31ಕ್ಕೆ ಮೊದಲು ಬಿಡುಗಡೆಯಾಗಿತ್ತು.

  • ಸಖತ್ ಸೌಂಡ್ ಮಾಡ್ತಿದೆ ‘ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ’ ಹಾಡು!

    ಸಖತ್ ಸೌಂಡ್ ಮಾಡ್ತಿದೆ ‘ಮಿಂಚಿನ ಬಳ್ಳಿ ಬಣ್ಣವ ಚೆಲ್ಲಿ’ ಹಾಡು!

    ವಿಕಾಸ್ ನಟನೆಯ ‘ಕಾಣದಂತೆ ಮಾಯಾವಾದನು’ ಸಿನಿಮಾ ಈಗಾಗಲೇ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರ ನಡುವೆಯೂ ಸಾಂಗ್ ಒಂದು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಯಾರ ಬಾಯಲ್ಲಿ ಕೇಳಿದ್ರು ಅದೇ ಹಾಡು ಗುನುಗುವಂತೆ ಮೋಡಿ ಮಾಡಿದೆ. ಯಾವ ಮೊಬೈಲ್ ರಿಂಗ್ ಟೋನ್ ಕೇಳಿದ್ರು ಅದೇ ಹಾಡು ರಿಂಗಾಯಿಸುತ್ತಿದೆ. ಅಷ್ಟರ ಮಟ್ಟಿಗೆ ‘ಕಾಣದಂತೆ ಮಾಯಾವಾದನು’ ಸಿನಿಮಾದ ಹಾಡುಗಳು ಎಲ್ಲರಿಗೂ ಹುಚ್ಚೆಬ್ಬಿಸಿದೆ.

    ‘ಮಿಂಚಿನ ಬಳ್ಳಿ, ಬಣ್ಣವ ಚೆಲ್ಲಿ’ ಎಂಬ ಹಾಡು ಎಲ್ಲೆಡೆ ವೈರಲ್ ಆಗಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈಗಲೂ ಕೂಡ ಲೀಡಿಂಗ್ ನಲ್ಲಿ ಈ ಹಾಡು ಓಡ್ತಾ ಇದೆ. ಜಯಂತ್ ಕಾಯ್ಕಿಣಿ ಅವರು ಬರೆದಿರುವ ಸಾಹಿತ್ಯಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ನಿಶ್ಕಲ್ಮಶ ಪ್ರೀತಿಯೊಂದು ಎಲ್ಲರಿಗೂ ಇಷ್ಟವಾಗಿದೆ. ತುಂಬಾ ಪ್ರೀತಿಸುವ ಹೃದಯ ಸತ್ತರೂ ಜೊತೆಯಲ್ಲಿರುತಚತೆ ಎಂಬ ಭಾವ ಮೂಡಿಸುತ್ತಿದೆ. ಹಾಡಿನಲ್ಲಿ ಪ್ರೀತಿಯ ಆಲಾಪನೆ ಇದ್ದು, ಪ್ರೇಮಿಗಳ ದಿನ ಬೇರೆ ಹತ್ತಿರವಿರುವ ಕಾರಣ, ವ್ಯಾಲೆಂಟೈನ್ಸ್ ಡೇ ಗೆ ಒಂದೊಳ್ಳೆ ಹಾಡು ಕೂಡ ಆಗಿದೆ. ಹಾಡಿನಲ್ಲಿ ನೋವಿದ್ದರು, ಮಧುರವಾದ ಪ್ರೀತಿ ಎಲ್ಲರ ಮನ ತಟ್ಟುತ್ತಿದೆ.

    ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದ ವಿಕಾಸ್ ‘ಕಾಣದಂತೆ ಮಾಯಾವಾದನು’ ಸಿನಿಮಾದಿಂದ ಗೆಲುವು ಕಂಡಿದ್ದಾರೆ. ಒಬ್ಬ ಒಳ್ಳೆ ನಟನಾಗುವ ಕ್ವಾಲಿಟಿ ಇದೆ ಎಂಬುದನ್ನು ಈ ಸಿನಿಮಾದಿಂದ ಪ್ರೂವ್ ಮಾಡಿದ್ದಾರೆ. ಸಿಂಧೂ ಲೋಕನಾಥ್ ನಾಯಕಿಯಾಗಿ ಅದ್ಭುತ ಅಭಿನಯ ಮಾಡಿದ್ದಾರೆ. ರಿಲೀಸ್ ಆದಾಗಿನಿಂದ ಸಿನಿಮಾ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ರಾಜ್ ಪತ್ತಿಪಾಟಿ ಸಿನಿಮಾ ನಿರ್ದೇಶನ ಮಾಡಿದ್ದು, ಸೋಮ್ ಸಿಂಗ್ ಮತ್ತು ಚಂದ್ರಶೇಖರ್ ನಾಯ್ಡು ಸಿನಿಮಾ ನಿರ್ಮಾಣ ಮಾಡಿದ್ದಾರೆ.

  • ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಕಾಮಿಡಿ, ಲವ್, ಆ್ಯಕ್ಷನ್, ಫ್ಯಾಂಟಸಿ ಹದವಾಗಿ ಬೆರೆತ ‘ಕಾಣದಂತೆ ಮಾಯಾದನು’

    ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ಹಾಗೂ ಸಿಂಧು ಲೋಕನಾಥ್ ನಟಿಸಿರುವ `ಕಾಣದಂತೆ ಮಾಯವಾದನು’ ಚಿತ್ರ ಇಂದು ಯಶಸ್ವಿಯಾಗಿ ತೆರೆಕಂಡಿದೆ. ಟ್ರೈಲರ್, ಹಾಡುಗಳ ಮೂಲಕ ಎಲ್ಲರ ಮನೆಗೆದ್ದಿದ್ದ ಚಿತ್ರ ಚಿತ್ರಮಂದಿರದಲ್ಲೂ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

    ‘ಕಾಣದಂತೆ ಮಾಯವಾದನು’ ಒಂದು ಕುತೂಹಲ ಭರಿತ ಸಿನಿಮಾವಾಗಿದ್ದು, ಚಿತ್ರದುದ್ದಕ್ಕೂ ಟ್ವಿಸ್ಟ್ ಅಂಡ್ ಟನ್ಸ್ರ್ಗಳು ಸಖತ್ ಮನರಂಜನೆಯನ್ನು ನೀಡುತ್ತೆ. ರಮ್ಮಿ ಚಿತ್ರದ ನಾಯಕ. ರೌಡಿ ಜಯಣ್ಣನಿಂದ ಕೊಲೆಯಾಗುವ ರಮ್ಮಿ ಮತ್ತೆ ಭೂತವಾಗಿ ಬಂದು ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಹೇಗೆ ಕಾಪಾಡಿಕೊಳ್ಳುತ್ತಾನೆ. ಹಾಗೆಯೇ ತನ್ನನ್ನು ಸಾಯಿಸಿದವನ ಮೇಲೆ ಯಾವ ರೀತಿ ರಿವೇಂಜ್ ತೀರಿಸಿಕೊಳ್ಳುತ್ತಾನೆ ಎಂದು ಫ್ಯಾಂಟಸಿ ರೂಪದಲ್ಲಿ ಕಟ್ಟಿಕೊಡಲಾಗಿದೆ.

    ವಿಭಿನ್ನ ಕಥಾಹಂದರ ಚಿತ್ರದಲ್ಲಿದ್ದು ಹೊಸ ಅಭಿರುಚಿಯಲ್ಲಿ ಕಟ್ಟಿಕೊಡೋ ಪ್ರಯತ್ನವನ್ನು ಮಾಡಲಾಗಿದೆ. ಅಲ್ಲಲ್ಲಿ ಕೊಂಚ ಲ್ಯಾಗ್ ಅನ್ಸಿದ್ರು ಹಾಸ್ಯ, ಆ್ಯಕ್ಷನ್ ಸೀಕ್ವೆನ್ ಗಳು ಅದನ್ನು ಸರಿದೂಗಿಸಿಕೊಂಡು ಹೋಗಿದೆ. ಧರ್ಮಣ್ಣ ಕಡೂರ್ ತಮ್ಮ ಹಾಸ್ಯದ ಮೂಲಕ ಎಲ್ಲರನ್ನು ನಕ್ಕು ನಗಿಸುತ್ತಾರೆ. ಇನ್ನು ಕಾಮಿಡಿ, ಆ್ಯಕ್ಷನ್, ಡಾನ್ಸ್ ಎಲ್ಲಾ ಕಡೆಗಳಲ್ಲೂ ವಿಕಾಸ್ ಅಭಿನಯ ಭರವಸೆಯನ್ನು ಮೂಡಿಸಿದ್ದು. ಸಿಂಧು ಲೋಕನಾಥ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ಒಂದೊಳ್ಳೆ ಮನರಂಜನೆಯನ್ನು ಚಿತ್ರಮಂದಿರದ ಒಳಗೆ ಹೋದವರಿಗೆ ನೀಡುವಲ್ಲಿ ಚಿತ್ರ ಯಶಸ್ವಿಯಾಗಿದೆ.

    ಚಿತ್ರ: ಕಾಣದಂತೆ ಮಾಯವಾದನು
    ನಿರ್ದೇಶಕ: ರಾಜ್ ಪತ್ತಿಪಾಟಿ
    ನಿರ್ಮಾಪಕ: ಚಂದ್ರಶೇಖರ್ ನಾಯ್ಡು
    ಸಂಗೀತ: ಗುಮ್ಮಿನೇನಿ ವಿಜಯ್
    ಛಾಯಾಗ್ರಹಣ: ಸುಜ್ಞಾನ್
    ತಾರಾಂಗಣ: ವಿಕಾಸ್, ಸಿಂಧು ಲೋಕನಾಥ್, ರಾಘವ್ ಉದಯ್, ಭಜರಂಗಿ ಲೋಕಿ, ಇತರರು

    ರೇಟಿಂಗ್: 3.5/5

  • ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಥಿಯೇಟರ್‌ನಿಂದ ಹೊರ ಬಂದ್ರು ‘ಕಾಣದಂತೆ ಮಾಯವಾದನು’ ಪ್ರೇಕ್ಷಕರ ತಲೆಯಲ್ಲಿರುತ್ತೆ!

    ಸ್ಯಾಂಡಲ್‍ವುಡ್‍ನಲ್ಲಿ ನಿರ್ದೇಶಕ, ಪೋಷಕ ನಟನಾಗಿ ಗುರುತಿಸಿಕೊಂಡಿದ್ದ ವಿಕಾಸ್ ನಾಯಕ ನಟನಾಗಿ ತೆರೆ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ರಾಜ್ ಪಾತಿಪಾಟಿ ನಿರ್ದೇಶನದಲ್ಲಿ ಮೂಡಿಬಂದಿರೋ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಕಾಸ್, ಸಿಂಧು ಲೋಕ್‍ನಾಥ್ ಜೋಡಿಯಾಗಿ ಅಭಿನಯಿಸಿದ್ದು, ಸಖತ್ ಕ್ಯೂರಿಯಾಸಿಟಿಯನ್ನು ಸ್ಯಾಂಡಲ್‍ವುಡ್‍ನಲ್ಲಿ ಈ ಚಿತ್ರ ಹುಟ್ಟಿಸಿದೆ.

    ಸಿನಿ ಪ್ರೇಕ್ಷಕನಿಗೆ ಬೇಕಾದ ಲವ್ ಆಕ್ಷನ್ ಹಾರಾರ್, ಸೆಂಟಿಮೆಂಟ್ ಎಲ್ಲಾ ಕಂಟೆಟ್ ಚಿತ್ರದಲ್ಲಿದ್ದೂ 5ಲಕ್ಕಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ಚಿತ್ರದ ಟ್ರೈಲರ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದ ಮೆಲೋಡಿ ಹಾಡಿಗೆ ದನಿಯಾಗುವುದರ ಜೊತೆಗೆ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪವರ್ ಸ್ಟಾರ್ ಹಾಡಿರುವ ಹಾಡು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಸಂಗೀತ ಮ್ಯಾಜಿಕ್ ಕ್ರಿಯೇಟ್ ಮಾಡಿದೆ. ಚಿತ್ರದ ಪ್ಯಾಥೊ ಹಾಡಿಗೆ ವಿಜಯ್ ಪ್ರಕಾಶ್ ದನಿಯಾಗಿದ್ದು, ವಿ.ನಾಗೇಂದ್ರ ಪ್ರಸಾಧ್, ಚೇತನ್ ಕುಮಾರ್ ಸಾಹಿತ್ಯ ಕೃಷಿ ಚಿತ್ರಕ್ಕಿದೆ.

    ಆಕ್ಷನ್ ಸೀಕ್ವೆನ್ಸ್ ಗಳು ಚಿತ್ರದಲ್ಲಿದ್ದು ಲೀಲಾಜಾಲವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ನಟ ವಿಕಾಸ್. ಚಿತ್ರದ ಮೊದಲ ಹಾಗೂ ಕೊನೆಯ ದೃಶ್ಯ ಇದುವರೆಗೂ ಕನ್ನಡ ಸಿನಿಮಾದಲ್ಲಿ ಬಂದಿಲ್ಲ. ಸಿನಿಮಾ ನೋಡಿ ಥಿಯೇಟರ್ ನಿಂದ ಹೊರ ಬಂದ ಮೇಲೆ ಬಹಳ ದಿನ ಪ್ರೇಕ್ಷರ ತಲೆಯಲ್ಲಿರುತ್ತೆ ಎಂದು ವಿಕಾಸ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸಿನಿಮಾ ಚಿತ್ರದ ತಾರಾಬಳಗವೂ ದೊಡ್ಡದಿದ್ದು ಸುಚೇಂದ್ರ ಪ್ರಸಾಧ್, ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್, ಧರ್ಮಣ್ಣ ಕಾಣದಂತೆ ಮಾಯವಾದನ್ನು ಬಳಗದಲ್ಲಿ ಬಣ್ಣ ಹಚ್ಚಿದ್ದಾರೆ. ಸೆನ್ಸಾರ್ ನಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿರೋ ಈ ಚಿತ್ರ ಇಂದು ಬಿಡುಗಡೆಯಾಗಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ , ಧರ್ಮಣ್ಣ ಚಿತ್ರದಲ್ಲಿ ನಟಿಸಿದ್ದು ಸ್ಟಾರ್ ಸಿನಿಮಾಟೋಗ್ರಾಫರ್ ಸುಜ್ಞಾನ್ ಕ್ಯಾಮೆರಾ ಕೈಚಳಕ ಚಿತ್ರಕ್ಕಿದೆ.

  • ಇದೇ ಸಿನಿ ಶುಕ್ರವಾರ ತೆರೆಗೆ ಬರಲಿದೆ ಬಹು ನಿರೀಕ್ಷಿತ ‘ಕಾಣದಂತೆ ಮಾಯವಾದನು’ ಚಿತ್ರ

    ಇದೇ ಸಿನಿ ಶುಕ್ರವಾರ ತೆರೆಗೆ ಬರಲಿದೆ ಬಹು ನಿರೀಕ್ಷಿತ ‘ಕಾಣದಂತೆ ಮಾಯವಾದನು’ ಚಿತ್ರ

    ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ‘ಕಾಣದಂತೆ ಮಾಯವಾದನು’ ಚಿತ್ರ ಸ್ಯಾಂಡಲ್‍ವುಡ್‍ನಲ್ಲಿ ಸಖತ್ ಟಾಕ್ ಕ್ರಿಯೇಟ್ ಮಾಡಿದೆ. ನಿರ್ದೇಶಕರಾಗಿದ್ದ ವಿಕಾಸ್ ನಟನಾಗಿ ಗಾಂಧಿನಗರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ವಿಕಾಸ್, ಸಿಂಧು ಲೋಕನಾಥ್ ಜೋಡಿಯಾಗಿ ನಟಿಸಿರುವ ಚಿತ್ರದ ಟ್ರೈಲರ್ ಗೆ ಸಿನಿ ಪ್ರೇಕ್ಷಕ ಕ್ಲೀನ್ ಬೋಲ್ಡ್ ಆಗಿದ್ದು, ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

    ಚಿತ್ರದಲ್ಲಿ ಲವರ್ ಬಾಯ್, ಆ್ಯಕ್ಷನ್ ಹೀರೋ ಆಗಿ ಮಿಂಚಿರುವ ವಿಕಾಸ್‍ಗೆ ಈ ಚಿತ್ರವನ್ನು ಒಪ್ಪಿಕೊಳ್ಳಲು ಕಥೆಯೇ ಪ್ರೇರಣೆ. ರಾಜ್ ಪಾತ್ತಿಪಾಟಿ ಚಿತ್ರದ್ರ ಸೂತ್ರಧಾರ. ಇನೋಸೆಂಟ್ ಪ್ರೇಮಕಥೆ ಚಿತ್ರದಲ್ಲಿದ್ದು, ಅದ್ರ ಜೊತೆಗೆ ಹಾರಾರ್, ಸಸ್ಪೆನ್ಸ್ ಹಾಗೂ ಥ್ರಿಲ್ ಕೊಡೊ ಎಲಿಮೆಂಟ್‍ಗಳು ಚಿತ್ರದಲ್ಲಿವೆ. ಒಟ್ಟಿನಲ್ಲಿ ಸಿನಿಮಾ ನೋಡಲು ಚಿತ್ರಮಂದಿರದ ಒಳಗೆ ಹೋದ ಪ್ರೇಕ್ಷಕರನಿಗೆ ಮನೋರಂಜನೆಯ ಮಹಾಪೂರದ ಜೊತೆ ಬೇರೆಯದ್ದೆ ಪ್ರಪಂಚ ಕಾಣಸಿಗಲಿದೆ ಎನ್ನುವುದು ಚಿತ್ರತಂಡದ ಮಾತು.

    ಕಥೆ ಈ ಚಿತ್ರದ ಜೀವಾಳವಾದರೆ ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಚಿತ್ರದ ಮತ್ತೊಂದು ಶಕ್ತಿ. ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿದ್ದು ಗುಮ್ಮಿನೇನಿ ವಿಜಯ್ ಮ್ಯೂಸಿಕ್ ಗಾನಪ್ರಿಯರ ಮನಸೆಳೆದಿದೆ. ಚಿತ್ರದ ಮೆಲೋಡಿ ಹಾಡೊಂದಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ದನಿಯಾಗಿದ್ದು ಈ ಹಾಡು ಸಖತ್ ವೈರಲ್ ಆಗೋದ್ರ ಜೊತೆ ಎಲ್ಲರ ಫೇವರೇಟ್ ಆಗಿದೆ.

    ಚಿತ್ರದ ಪ್ರತಿ ತುಣುಕಿಗಳು ಸೋಶಿಯಲ್ ಮೀಡಿಯಾದಲ್ಲಿ ಬೊಂಬಾಟ್ ರೆಸ್ಪಾನ್ಸ್ ಪಡೆದುಕೊಂಡಿದ್ದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಅಚ್ಯುತ್ ಕುಮಾರ್, ಭಜರಂಗಿ ಲೋಕಿ, ರಾಘವ್ ಉದಯ್ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಕಾಣದಂತೆ ಮಾಯವಾದನು ಟ್ರೈಲರ್‌‌ಗೆ ಪವರ್ ಸ್ಟಾರ್ ಫಿದಾ!

    ಕಾಣದಂತೆ ಮಾಯವಾದನು ಟ್ರೈಲರ್‌‌ಗೆ ಪವರ್ ಸ್ಟಾರ್ ಫಿದಾ!

    ಬೆಂಗಳೂರು: ಕೆಲ ಚಿತ್ರಗಳು ತಡವಾದಷ್ಟೂ ಕ್ಯೂರಿಯಾಸಿಟಿ ಹುಟ್ಟಿಸುತ್ತಾ ಸಾಗುತ್ತವೆ. ಅದು ಸಾಧ್ಯವಾಗೋದು ಒಳಗೇನೇ ವಿಶೇಷವಾದ ಕಂಟೆಂಟು, ಕ್ರಿಯೇಟಿವಿಟಿಗಳಿದ್ದಾಗ ಮಾತ್ರ. ಸದ್ಯ ಟ್ರೈಲರ್ ಮೂಲಕ ಎಲ್ಲೆಡೆ ಮೆಚ್ಚುಗೆ ಗಳಿಸಿಕೊಂಡಿರೋ ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರ ಕೂಡಾ ಅದೇ ಮಾದರಿಯದ್ದು. ಆಗಾಗ ಮರೆಗೆ ಸರಿದಂತೆ ಕಾಣಿಸಿದ್ದರೂ ಕೂಡಾ ಈ ಸಿನಿಮಾ ಅಡಿಗಡಿಗೆ ಸದ್ದು ಮಾಡಿದ್ದು ಕ್ರಿಯೇಟಿವಿಟಿಯಿಂದಲೇ. ಕೆಲ ದಿನಗಳ ಹಿಂದೆ ಬಿಡುಗಡೆಯಾಗಿರೋ ಟ್ರೈಲರ್ ಅಂತೂ ಇದೊಂದು ವಿಶಿಷ್ಟ ಚಿತ್ರ ಎಂಬುದನ್ನು ಪಕ್ಕಾ ಮಾಡಿದೆ.

    ಈ ಟ್ರೈಲರ್ ಅನ್ನು ವೀಕ್ಷಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೂ ಕೂಡಾ ಇದೀಗ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಟ್ರೈಲರಿನ ದೃಷ್ಯಾವಳಿಗಳೇ ಇದರಲ್ಲೇನೋ ಇದೆ ಎಂಬುದನ್ನು ಸೂಚಿಸುವಂತಿವೆ. ಕಮರ್ಶಿಯಲ್ ಸೇರಿದಂತೆ ಎಲ್ಲ ಅಂಶಗಳೂ ಮಿಳಿತವಾದಂತಿವೆ. ಈ ಚಿತ್ರಕ್ಕೆ ಯಶ ಸಿಗಲಿ ಅನ್ನುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಪವರ್ ಸ್ಟಾರ್ ಕಡೆಯಿಂದಲೇ ಇಂಥಾ ಮಾತುಗಳು ಬಂದಿರೋದರಿಂದ ಚಿತ್ರತಂಡವೂ ಖುಷಿಗೊಂಡಿದೆ.

    ಈ ಮೂಲಕ ವಿಕಾಸ್ ಅವರ ಹೊಸಾ ಅನ್ವೇಷಣೆಗೂ ಗೆಲುವಿನ ಮುನ್ಸೂಚನೆ ಸಿಕ್ಕಮತಾಗಿದೆ. ಅಷ್ಟಕ್ಕೂ ಈ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಕಥೆಯ ಜಾಡಿನ ಜೊತೆಗೇ ವಿಶಾಲ್ ಅವರ ನಟನೆಯನ್ನೂ ಮೆಚ್ಚಿಕೊಂಡಿದ್ದಾರೆ. ಆತ್ಮವೊಂದರ ಪ್ರೇಮಕಥೆ, ರಿವೇಂಜಿನ ಸ್ಟೋರಿ ಹೊಂದಿರೀ ಈ ಚಿತ್ರ ಮಾಮೂಲಿ ಶೈಲಿಯದ್ದಂತೂ ಅಲ್ಲ ಎಂಬ ವಿಚಾರವೂ ಈ ಮೂಲಕವೇ ಸಾಬೀತಾಗಿದೆ. ಅದುವೇ ಕಾಣದಂತೆ ಮಾಯವಾದವನಿಗಾಗಿ ಕಾಯುವಂತೆಯೂ ಮಾಡಿ ಬಿಟ್ಟಿದೆ.

    https://www.facebook.com/publictv/videos/323777685235397/

    ಇದು ರಾಜ್ ಪತ್ತಿಪಾಟಿ ನಿರ್ದೇಶನದ ಚಿತ್ರ. ಹಾರರ್ ಚಿತ್ರವೆಂದರೆ ಭೂತಗಳನ್ನು ಬಿಟ್ಟು ಹೆದರಿಸೋದು, ಅದಕ್ಕೆ ಸಪೋರ್ಟಿಗೆಂಬಂತೆ ಕಥೆಯೊಂದನ್ನು ಹರಿಯ ಬಿಡೋದು ಎಂಬಂಥಾ ಸೂತ್ರ ಸಾಕಷ್ಟು ಕಾಲದಿಂದಲೂ ಇದೆ. ಅದನ್ನು ಬ್ರೇಕ್ ಮಾಡುವಂತೆ ಬಂದಿರೋ ಚಿತ್ರಗಳು ವಿರಳ. ಹಾಗೆ ಬಂದವೆಲ್ಲ ಗೆದ್ದಿವೆ. ಸದ್ಯ ಕಾಣದಂತೆ ಮಾಯವಾದನು ಚಿತ್ರವೂ ಅದೇ ಹಾದಿಯಲ್ಲಿದೆ.

  • ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಕಾಣದಂತೆ ಮಾಯವಾದನು: ಎಲ್ಲರನ್ನೂ ಸೆಳೆಯೋ ಮಾಯೆಯಂಥಾ ಟ್ರೈಲರ್!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಚಿತ್ರವೀಗ ಬಿಡುಗಡೆಯ ಹೊಸ್ತಿಲಲ್ಲಿದೆ. ಒಂದಷ್ಟು ಕಾಲ ಯಾವ ಸುದ್ದಿಯೂ ಇಲ್ಲದಂತಿದ್ದ ಈ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದ ಕ್ಯಾರೆಕ್ಟರ್ ಪ್ರೋಮೋ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿತ್ತು. ಈ ಮೂಲಕವೇ ತನ್ನ ತಾರಾಗಣವನ್ನು ಪರಿಚಯಿಸಿದ್ದ ಚಿತ್ರತಂಡವೀಗ ಟ್ರೈಲರ್ ಮೂಲಕ ಇಡೀ ಸಿನಿಮಾದ ಆಂತರ್ಯವನ್ನು ಪ್ರೇಕ್ಷಕರ ಮುಂದೆ ತೆರೆದಿಟ್ಟಿದೆ.

    ಕಾಣದಂತೆ ಮಾಯವಾದನು ಚಿತ್ರದ ಟ್ರೈಲರ್ ಇದೀಗ ಬಿಡುಗಡೆಯಾಗಿದೆ. ವರ್ಷಾಂತರದಿಂದಲೂ ಸುದ್ದಿಯಾಗುತ್ತಾ ಸಾಗುತ್ತಿದ್ದ ಈ ಚಿತ್ರ ಯಾವ ಜಾನರಿನದ್ದು, ಇದರ ಕಥೆಯೇನು ಅಂತೆಲ್ಲ ಜನರಲ್ಲಿ ನಾನಾ ಪ್ರಶ್ನೆಗಳಿದ್ದವು. ಅದಕ್ಕೆ ಉತ್ತರಿಸುತ್ತಲೇ ಪ್ರೇಕ್ಷಕರ ನಿರೀಕ್ಷೆಯ ಮಟ್ಟವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ರೀತಿಯಲ್ಲಿ ಈ ಟ್ರೈಲರ್ ಮೂಡಿ ಬಂದಿದೆ.

    ಹಾರರ್ ಕಥೆಗಳೆಂದರೆ ದೆವ್ವ, ಪ್ರೇತಗಳ ಮೂಲಕ ಭೀತಗೊಳಿಸೋದು ಎಂಬಂಥಾ ಕಲ್ಪನೆಯಿದೆ. ಆದರೆ ಅದಕ್ಕೆ ತದ್ವಿರುದ್ಧ ರೀತಿಯಲ್ಲಿ, ಹೊಸತನದೊಂದಿಗೆ ಈ ಸಿನಿಮಾ ಮೂಡಿಬಂದಿದೆ ಅನ್ನೋದಕ್ಕೂ ಟ್ರೈಲರ್ ಸಾಕ್ಷಿಯಂತಿದೆ. ಈ ಹಿಂದೆ ಜಯಮ್ಮನ ಮಗ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರಿಲ್ಲಿ ಪಕ್ಕಾ ಆಕ್ಷನ್ ಹೀರೋ ಆಗಿ ವಿಜೃಭಿಸಿರೋ ಸ್ಪಷ್ಟ ಸೂಚನೆಯನ್ನೂ ಈ ಟ್ರೈಲರ್ ನೀಡಿದೆ.

    ಹಾರರ್ ಕಂಟೆಂಟಿದೆಯಾದರೂ ಇದು ಮಾಮೂಲಿ ಶೈಲಿಯ ಚಿತ್ರವಲ್ಲ. ಇಲ್ಲಿರೋ ಆತ್ಮ ಬದುಕಿರೋ ಘಳಿಗೆಯಲ್ಲಿ ಜೀವದಂತಿದ್ದ ಪ್ರೀತಿಯ ಕಾವಲಿಗೆ ನಿಲ್ಲುತ್ತಲೇ ಸೇಡು ತೀರಿಸಿಕೊಳ್ಳೋ ಕಥೆಯ ಹೊಳಹೂ ಕೂಡಾ ಈ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿದೆ. ಇದರ ಆಚೀಚೆಗೆ ಥ್ರಿಲ್ಲರ್ ಸ್ಟೋರಿ ಇರುವ ಲಕ್ಷಣಗಳೊಂದಿಗೇ ಮೇಕಿಂಗ್‍ನಲ್ಲಿಯೂ ಈ ಟ್ರೈಲರ್ ಗಮನ ಸೆಳೆಯುವಂತಿದೆ.

    ಆಗಾಗ ಸದ್ದು ಮಾಡುತ್ತಾ ಸೈಲೆಂಟಾಗುತ್ತಿದ್ದ ಈ ಚಿತ್ರ ಕೊಂಚ ತಡವಾಗಿದೆ ಎಂಬ ಕಂಪ್ಲೇಂಟು ಪ್ರೇಕ್ಷಕರಲ್ಲಿತ್ತು. ಆದರೆ ಈಗ ಬಿಡುಗಡೆಯಾಗಿರೋ ಟ್ರೈಲರ್ ಆ ಮುನಿಸನ್ನು ಮರೆಯಾಗಿಸಿ ಚಿತ್ರ ಬಿಡುಗಡೆಯಾಗೋದನ್ನ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡುವಲ್ಲಿಯೂ ಶಕ್ತವಾಗಿದೆ. ಈ ಮೂಲಕ ನಿರ್ದೇಶಕ ರಾಜ್ ಪತ್ತಿಪಾಟಿ ಭರವಸೆ ಹುಟ್ಟಿಸಿದ್ದಾರೆ. ಬಹುಶಃ ಮಾಸ್ತಿಗುಡಿ ದುರಂತದಲ್ಲಿ ಸಾವಿಗೀಡಾಗಿದ್ದ ಅನಿಲ್ ನಟಿಸಿರೋ ಕಡೆಯ ಚಿತ್ರವಿದು. ಈ ಮೂಲಕ ಉದಯ್ ಅವರನ್ನು ಅಬ್ಬರದ ಪಾತ್ರವೊಂದರ ಮೂಲಕ ಕಣ್ತುಂಬಿಕೊಳ್ಳೋ ಸದಾವಕಾಶವೂ ಪ್ರೇಕ್ಷಕರಿಗೆ ಸಿಕ್ಕಿದೆ.

    ಒಟ್ಟಾರೆಯಾಗಿ ಈ ಟ್ರೈಲರ್ ಮೂಲಕವೇ ಕಾಣದಂತೆ ಮಾಯವಾದನು ಚಿತ್ರ ಮತ್ತೆ ಜನಮಾನಸ ತಲುಪಿಕೊಂಡಿದೆ. ಬಿಡುಗಡೆಯಾದ ಕ್ಷಣದಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡುತ್ತಿದೆ. ಇದನ್ನು ಕಂಡು ಪ್ರೇಕ್ಷಕರು ಅದೆಷ್ಟು ಖುಷಿಗೊಂಡಿದ್ದಾರೆಂಬುದಕ್ಕೆ ಯೂ ಟ್ಯೂಬ್‍ನಲ್ಲಿ ಹರಿದು ಬರುತ್ತಿರೋ ಕಮೆಂಟುಗಳಿಗಿಂತಲೂ ಬೇರೆ ಪುರಾವೆ ಬೇಕಿಲ್ಲ.

    https://youtu.be/GNaimyGV1m4

  • ಕಾಣದಂತೆ ಮಾಯವಾದನು: ಪ್ರೋಮೋ ಮೂಲಕ ವಿಶಿಷ್ಟ ಪಾತ್ರಗಳ ದರ್ಶನ!

    ಕಾಣದಂತೆ ಮಾಯವಾದನು: ಪ್ರೋಮೋ ಮೂಲಕ ವಿಶಿಷ್ಟ ಪಾತ್ರಗಳ ದರ್ಶನ!

    ಬೆಂಗಳೂರು: ರಾಜ್ ಪತ್ತಿಪಾಟಿ ನಿರ್ದೇಶನದ ಕಾಣದಂತೆ ಮಾಯವಾದನು ಎಂಬ ಚಿತ್ರವೀಗ ಮತ್ತೆ ಸುದ್ದಿ ಕೇಂದ್ರದಲ್ಲಿದೆ. ತನ್ನ ವಿಶಿಷ್ಟವಾದ ಟೈಟಲ್ ಮತ್ತು ಕಥೆಯ ಸುಳಿವಿನೊಂದಿಗೇ ಪ್ರೇಕ್ಷಕರ ಆಸಕ್ತಿಯನ್ನು ತನ್ನತ್ತ ಸೆಳೆದುಕೊಂಡಿತ್ತು. ಇದೀಗ ಚಿತ್ರತಂಡ ಒಂದು ಕ್ಯಾರೆಕ್ಟರ್ ಪ್ರೋಮೋವನ್ನು ಬಿಡುಗಡೆಗೊಳಿಸಿದೆ. ಈ ಮೂಲಕ ಕೊಂಚ ತಡವಾದರೂ ಕೂಡಾ ಕಾಣದಂತೆ ಮಾಯವಾದನು ಚಿತ್ರ ಮತ್ತಷ್ಟು ನಿರೀಕ್ಷೆ ಮೂಡಿಸಿಕೊಂಡಿದೆ.

    ಸಿಂಧು ಲೋಕನಾಥ್ ಮತ್ತು ವಿಕಾಸ್ ಮುಖ್ಯಭೂಮಿಕೆಯಲ್ಲಿರೋ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸೀತಾ ಕೋಟಿ, ಭಜರಂಗಿ ಲೋಕಿ, ರಾಘವ್ ಉದಯ್, ಗೌತಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಝಲಕ್ ಪರಿಚಯ ಮಾಡಿಕೊಡುವಂತಿರುವ ಈ ಕ್ಯಾರೆಕ್ಟರ್ ಪ್ರೋಮೋಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿವೆ.

    ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಸೋಮ್ ಸಿಂಗ್ ನಿರ್ಮಾಣ ಮಾಡಿದ್ದಾರೆ. ಪುಷ್ಪಾ ಸೋಮ್ ಸಿಂಗ್ ಕೂಡಾ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ಈ ಚಿತ್ರದಲ್ಲಿ ಪ್ರತಿ ಪಾತ್ರಗಳೂ ಕೂಡಾ ಭಿನ್ನವಾಗಿದೆ ಎಂಬುದನ್ನೂ ಕೂಡಾ ಈ ಕ್ಯಾರೆಕ್ಟರ್ ಪ್ರೋಮೋ ಜಾಹೀರು ಮಾಡಿದೆ. ಜಯಮ್ಮನ ಮಗ ಚಿತ್ರವನ್ನು ನಿರ್ದೇಶನ ಮಾಡಿದ್ದ ವಿಕಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಸಿಂಧೂ ಲೋಕನಾಥ್ ಇಲ್ಲಿ ಎನ್‍ಜಿಓನಲ್ಲಿ ಕೆಲಸ ಮಾಡುವ ಹುಡುಗಿ ವಂದನಾ ಆಗಿ ನಟಿಸಿದ್ದಾರೆ.

    ಈ ಹಿಂದೆ ಮಫ್ತಿ ಚಿತ್ರದ ಪಾತ್ರದ ಮೂಲಕ ನಟರಾಗಿ ಬಹು ಬೇಡಿಕೆ ಪಡೆದುಕೊಂಡಿರೋ ಬಾಬು ಹಿರಣ್ಣಯ್ಯ ಕೂಡಾ ಕಾಣದಂತೆ ಮಾಯವಾದನು ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ನಟಿಸಿದ್ದಾರಂತೆ. ವಿಶೇಷವೆಂದರೆ ಈ ಚಿತ್ರ ಮಫ್ತಿಗಿಂತಲೂ ಮೊದಲೇ ಆರಂಭವಾಗಿತ್ತು. ಒಂದಷ್ಟು ಸುದೀರ್ಘ ಸಮಯ ಹಿಡಿದರೂ ಇದೀಗ ಈ ಚಿತ್ರ ಅಚ್ಚುಕಟ್ಟಾಗಿಯೇ ತಯಾರಾಗಿ ಬಿಡುಗಡೆಗೆ ರೆಡಿಯಾಗಿದೆ.