Tag: Jupiter

  • ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಸಮೋಸ, ಬಾಳೆಹಣ್ಣು ತಿಂದು 2023ರ ಚಂದ್ರಗ್ರಹಣಕ್ಕೆ ಸ್ವಾಗತ – ಪ್ರಗತಿಪರರಿಂದ ವಿನೂತನ ಜಾಗೃತಿ

    ಬೆಂಗಳೂರು: ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ಹಲವು ಪ್ರಗತಿಪರರು ಆಹಾರ ಸೇವನೆ ಮಾಡುತ್ತಾ ಚಂದ್ರಗ್ರಹಣ ವೀಕ್ಷಣೆ ಮಾಡಿದ್ದಾರೆ. ʻಖಗೋಳ ವಿಸ್ಮಯ ಚಂದ್ರಗ್ರಹಣ ಸಂಭ್ರಮಿಸೋಣ, ಮೂಡನಂಭಿಕೆ ಅಳಿಸೋಣ, ಮಾನವೀಯತೆ ಉಳಿಸೋಣ, ವಿಜ್ಞಾನದೆಡೆಗೆ ನಮ್ಮ ನಡಿಗೆʼ ಎಂಬ ಘೋಷವಾಕ್ಯದೊಂದಿಗೆ ಸಮೋಸ (Samosa), ಬಾಳೆಹಣ್ಣು ತಿನ್ನುತ್ತಾ 2023ರ ಚಂದ್ರಗ್ರಹಣಕ್ಕೆ ಸ್ವಾಗತ ಕೋರಿದರು.

    ಇಲ್ಲಿನ ಚಾಲುಕ್ಯ ವೃತ್ತದ ಬಳಿಯಿರುವ ಬಸವಣ್ಣ ಪ್ರತಿಮೆ (Basavanna Statue) ಮುಂದೆ ಜಮಾಯಿಸಿದ್ದ ಹಲವು ಪ್ರಗತಿಪರರು ʻಗ್ರಹಣದ ಸಮಯದಲ್ಲಿ ಊಟ ಮಾಡಬಾರದುʼ ಅನ್ನೋ ಜೋತಿಷಿಗಳ ನಂಬಿಕೆಗೆ ಸೆಡ್ಡು ಹೊಡೆದು ಆಹಾರ ಸೇವನೆ ಮಾಡಿದರು. ಗ್ರಹಣದ ಸಮಯದಲ್ಲಿ ಊಟ ಮಾಡಬಾರದು ಅನ್ನೋದು ಮೌಢ್ಯ, ಅದನ್ನ ವಿರೋಧಿಸಿ ಚಂದ್ರಗ್ರಹಣ ಸಂಭ್ರಮಿಸೋಣ ಎಂದು ಪ್ರಗತಿಪರರು ಕರೆ ನೀಡಿದ್ದಾರೆ. ನಟ ಚೇತನ್‌ ದಂಪತಿ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಮೂಢನಂಬಿಕೆ ವಿರೋಧಿ ಒಕ್ಕೂಟದಿಂದ ವಿಜ್ಞಾನದೆಡಗೆ ನಮ್ಮ ನಡಿಗೆ ಘೋಷವಾಕ್ಯದೊಂದಿಗೆ ಗ್ರಹಣದ ಬಗ್ಗೆ ಮೌಢ್ಯ ಬೇಡವೆಂದು ನೆಹರೂ ತಾರಾಲಯದಲ್ಲಿ (Nehru Planetarium) ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡಿತು. ಇದನ್ನೂ ಓದಿ: ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಗ್ರಹಣ ವೀಕ್ಷಣೆಗೆ ಅಡ್ಡಿಯಾದ‌ ಮೋಡ: ಇನ್ನೂ ಚಂದ್ರಗ್ರಹಣ ವೀಕ್ಷಣೆಗೆ ಮೋಡ ಅಡ್ಡಿಯುಂಟು ಮಾಡಿದೆ. ನಸುಕಿನ 1:04 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಿತ್ತು. 1 ಗಂಟೆ 30 ನಿಮಿಷಗಳ ವರೆಗೂ ಗ್ರಹಣ ಗೋಚರವಾಗುತ್ತಿತ್ತು. ಆ ನಂತರ ಸ್ಬಲ್ಪ ಸಮಯ ಮೋಡ ಅಡ್ಡಿಯಾಗಿದ್ದರಿಂದ ಗ್ರಹಣ ವೀಕ್ಷಣೆಗೂ ಅಡಚಣೆಯುಂಟಾಗಿತ್ತು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    Web Stories 
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಚಂದ್ರಗ್ರಹಣ – ನೆಹರೂ ತಾರಾಲಯದಲ್ಲಿ ನಭೋಮಂಡಲ ವಿಸ್ಮಯ ದರ್ಶನ

    ಬೆಂಗಳೂರು: ಇಂದು (ಭಾನುವಾರ) ರಾತ್ರಿ ನಭೋಮಂಡಲದಲ್ಲಿ ಸಂಭವಿಸಿದ ರಾಹುಗ್ರಸ್ಥ, ಖಂಡಗ್ರಾಸ ಚಂದ್ರಗ್ರಹಣದ (Lunar Eclipse) ವಿಸ್ಮಯವನ್ನು ನೆಹರೂ ತಾರಾಲಯದಲ್ಲಿ (Nehru Planetarium) ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇಸ್ರೋ (ISRO) ಸಿಬ್ಬಂದಿ ಸೇರಿದಂತೆ ಅನೇಕರು ಕಣ್ತುಂಬಿಕೊಂಡರು.

    ಚಂದ್ರಗ್ರಹಣವನ್ನು ಬರಿಗಣ್ಣಿನಿಂದಲೂ ವೀಕ್ಷಣೆ ಮಾಡಬಹುದೆಂದು ವಿಜ್ಞಾನಿಗಳು ಹೇಳಿದ್ದಾರೆ. ಇದರ ಹೊರತಾಗಿಯೂ ನೆಹರೂ ತಾರಾಲಯದಲ್ಲಿ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿದೆ. ಚಂದ್ರನ ಕೌತುಕ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಮೂಲೆಗಳಿಂದಲೂ ಶಿಕ್ಷಕರು, ವಿದ್ಯಾರ್ಥಿಲೂ (Students) ನೆಹರೂ ತಾರಾಲಯಕ್ಕೆ ಆಗಮಿಸಿದ್ದರು. ಇದನ್ನೂ ಓದಿ: ಯಾವ ದೇಶದಲ್ಲೂ ಪೂರ್ಣ ಚಂದ್ರಗ್ರಹಣ ಕಾಣೋದಿಲ್ಲ: ವಿಜ್ಞಾನಿ ಆನಂದ್‌

    ಈ ಸಂತದವನ್ನು `ಪಬ್ಲಿಕ್ ಟಿವಿ’  (Public TV) ಜೊತೆಗೆ ಹಂಚಿಕೊಂಡರು. ಚಂದ್ರಗ್ರಹಣ ವೀಕ್ಷಣೆಯಿಂದ ಸಾಕಷ್ಟು ವೈಜ್ಞಾನಿಕ ಬೆಳವಣಿಗೆಗಳ ಬಗ್ಗೆ ತಿಳಿದುಕೊಂಡೆವು. ಶಾಲೆಗಳಲ್ಲಿ ಈ ಬಗ್ಗೆ ಮಕ್ಕಳಿಗೆ ಹೆಚ್ಚಿನ ತಿಳಿವಳಿಕೆ ನೀಡಬಹುದು. ಇಷ್ಟು ಹತ್ತಿರದಿಂದ ಚಂದ್ರನನ್ನು ನೋಡುತ್ತಿದ್ದೇವೆ. ಜೊತೆಗೆ ಗುರುಗ್ರಹವನ್ನೂ (Jupiter) ನೋಡುತ್ತಿರುವುದು ಖುಷಿ ಸಿಕ್ಕಿದೆ ಎಂದು ಹಾವೇರಿಯಿಂದ ಬಂದ ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಚಂದ್ರಗ್ರಹಣ ಹಿನ್ನೆಲೆ – ರಾಯರ ವೃಂದಾವನಕ್ಕೆ ನಿರಂತರ ಜಲಾಭಿಷೇಕ

    ಇನ್ನೂ ಕೆಲ ಮಕ್ಕಳು, ನಾವು ಪುಸ್ತಕಗಳಲ್ಲಿ ಮಾತ್ರವೇ ಗ್ರಹಣದ ಬಗ್ಗೆ ಓದಿದ್ದೆವು, ಕೇಳಿದ್ದೆವು. ಆದ್ರೆ ಈಗ ಕಣ್ಣಾರೆ ವೀಕ್ಷಿಸುತ್ತಿರುವುದು ವಿಸ್ಮಯವೇ ಅನ್ನಿಸಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮೋದಿಯಂತಹ ನಾಯಕ ದೇಶಕ್ಕೆ ಅನಿವಾರ್ಯ.. ಮತ್ತೊಮ್ಮೆ ಮೋದಿ ನಾಯಕತ್ವ ಬೇಕು ಅನ್ನೋದು ತಪ್ಪಲ್ಲ: ಮಂತ್ರಾಲಯ ಶ್ರೀ

    ಚಂದ್ರಗ್ರಹಣ ಕುರಿತು ಮಾಹಿತಿ ನೀಡಿದ್ದ ನೆಹರೂ ತಾರಾಲಯದ ವಿಜ್ಞಾನಿ ಆನಂದ್, ಮಧ್ಯರಾತ್ರಿ ಜಾವ 1:05 ಗಂಟೆಗೆ ಪೂರ್ಣ ಪ್ರಮಾಣದ ಗ್ರಹಣ ಆರಂಭವಾಗಲಿದೆ. 3:05 ಕ್ಕೆ ಮೋಕ್ಷ ಆಗುತ್ತದೆ. ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ನೆರಳಿನ ಶಂಕು ದೊಡ್ಡದು. ಚಂದ್ರನನ್ನ ಇದು ಆವರಿಸಿಕೊಳ್ಳುತ್ತದೆ. ಚಂದ್ರಗ್ರಹಣ ಎಲ್ಲಾ ದೇಶಗಳಲ್ಲೂ ವೀಕ್ಷಣೆ ಮಾಡಬಹುದು. ಆದರೆ ಪ್ರಮಾಣ ಹೆಚ್ಚುಕಮ್ಮಿ ಇರುತ್ತದೆ. ಚಂದ್ರನ ಒಂದು ಭಾಗ ಮಾತ್ರ ನೆರಳಿನಿಂದ ಆವೃತವಾಗುತ್ತದೆ. 1:05ಕ್ಕೆ ಆರಂಭವಾಗಿ 1:45 ಗಂಟೆಗೆ ದಟ್ಟವಾಗುತ್ತದೆ. ಬೆಂಗಳೂರಿನಲ್ಲಿ 6% ಮಾತ್ರ ಛಾಯೆ ಸುತ್ತುವರಿಯುತ್ತದೆ. ಗರಿಷ್ಟ ಮಟ್ಟದ ಪ್ರಮಾಣ 1:45 ಗಂಟೆಗೆ ತಲುಪುತ್ತದೆ ಎಂದು ವಿವರಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ಜೇಮ್ಸ್‌ವೆಬ್‌ ಕಣ್ಣಲ್ಲಿ ಗುರು ಗ್ರಹದ ರಹಸ್ಯ

    ವಾಷಿಂಗ್ಟನ್: ಇತ್ತೀಚೆಗಷ್ಟೇ ತನ್ನ ಕಾರ್ಯಾಚರಣೆ ಆರಂಭಿಸಿರುವ ಜಗತ್ತಿನ ಅತ್ಯಂತ ದೊಡ್ಡ ಮತ್ತು ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ `ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್’ ಮತ್ತೊಂದು ಮೋಡಿಮಾಡುವಂತಹ ಚಿತ್ರವನ್ನು ಸೆರೆಹಿಡಿದಿದೆ.

    ಕೆಲ ದಿನಗಳ ಹಿಂದೆಯಷ್ಟೇ ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ನಕ್ಷತ್ರಪುಂಜದ ಚಿತ್ರವನ್ನು ಸೆರೆ ಹಿಡಿದು ತನ್ನ ಬ್ಲಾಗ್‌ನಲ್ಲಿ ಪ್ರಕಟಿಸಿತ್ತು. ಇದೀಗ ಗುರು ಗ್ರಹದ ಚಿತ್ರಗಳನ್ನು ಸೆರೆ ಹಿಡಿದು ಅಚ್ಚರಿ ಮೂಡಿಸಿದೆ. ಅಲ್ಲದೇ ವಿಜ್ಞಾನಿಗಳಿಗೆ ಗುರುಗ್ರಹದ ಒಳನೋಟಗಳ ಬಗ್ಗೆ ತನ್ನ ಬ್ಲಾಗ್‌ಪೋಸ್ಟ್ನಲ್ಲಿ ಮಾಹಿತಿ ನೀಡುವುದಾಗಿ ಹೇಳಿದೆ. ಇದನ್ನೂ ಓದಿ: ಧರ್ಮ ನಿಂದನೆ ಆರೋಪ – ಹಿಂದೂ ವ್ಯಕ್ತಿ ಅಪಾರ್ಟ್ಮೆಂಟ್ ಸುತ್ತ ಜನವೋ ಜನ

    ಈಗ ಸೆರೆಹಿಡಿದಿರುವ ಗುರುಗ್ರಹದ ಚಿತ್ರದಲ್ಲಿ ಅಲಂಕಾರಿಕಾ ವಿನ್ಯಾಸಗಳನ್ನೂ ತೋರಿಸಿದೆ. ಜೊತೆಗೆ ಉತ್ತರ ಮತ್ತು ದಕ್ಷಿಣ ಧ್ರುವಗಳ ಮೇಲೆ ನೈಸರ್ಗಿಕ ಬೆಳಕಿನ ಪ್ರದರ್ಶನ(ಆರೋರಾ) ನೋಟವನ್ನೂ ಕಾಣುವಂತೆ ಗುರುತಿಸಿದೆ.

    ಇದರಿಂದ ಗುರು ಗ್ರಹ ಇಷ್ಟು ಉತ್ತಮ ಸ್ಥಿತಿಯಲ್ಲಿದೆ ಎಂದು ಊಹಿಸಿರಲಿಲ್ಲ ಎಂಬುದಾಗಿ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಎಮೆರಿಟಾ ಹಾಗೂ ಗ್ರಹಗಳ ಖಗೋಳಶಾಸ್ತ್ರಜ್ಞ ಇಮ್ಕೆ ಡಿ ಪಾಟರ್ ಪ್ರಶಂಸೆ ವ್ಯಕ್ತಪಡಿಸಿರುವುದಾಗಿ ನಾಸಾ ಉಲ್ಲೇಖಿಸಿದೆ. ಇದನ್ನೂ ಓದಿ: ಭಾರತದಲ್ಲಿ ಆತ್ಮಾಹುತಿ ದಾಳಿಗೆ ಸ್ಕೆಚ್ ಹಾಕಿದ್ದ ISIS ಭಯೋತ್ಪಾದಕ ರಷ್ಯಾದಲ್ಲಿ ಅರೆಸ್ಟ್

    ಗುರುಗ್ರಹದ ಸುತ್ತಲೂ ಇರುವ ಉಂಗುರಗಳು, ಸಣ್ಣ-ಸಣ್ಣ ಉಪಗ್ರಹಗಳು ಹಾಗೂ ಗೆಲಾಕ್ಸಿಗಳನ್ನು ಒಂದೇ ಚಿತ್ರದಲ್ಲಿ ಬರುವಂತೆ ಸೆರೆ ಹಿಡಿಯಲಾಗಿದೆ. ಜೇಮ್ಸ್ ವೆಬ್ ವೀಕ್ಷಣಾಲಯದ ನಿಯರ್-ಇನ್‌ಫ್ರಾರೆಡ್ ಕ್ಯಾಮೆರಾ ಗ್ರಹದ ವಿವರಗಳನ್ನು ಪ್ರದರ್ಶಿಸುವ ವಿಶೇಷ ಫಿಲ್ಟರ್‌ಗಳನ್ನೂ ಹೊಂದಿದೆ.

    ಗ್ರಹದ ಸುತ್ತಲೂ ಹೊಳೆಯುವ ಅರೋರಾ (ನೈಸರ್ಗಿಕ ಬೆಳಕಿನ ಪ್ರದರ್ಶನ) ಇದು ಮೋಡಗಳ ಮೇಲಿನ ಮಬ್ಬುಗಳನ್ನು ಸರಿಸಿ ಪ್ರತಿಫಲಿಸುವ ಬೆಳಕನ್ನು ತೋರಿಸುತ್ತದೆ. ಉತ್ತರ ಹಾಗೂ ದಕ್ಷಿಣ ದ್ರುವಗಳಲ್ಲಿ ಹೊಳೆಯುವ ಬೆಳಕನ್ನೂ ಗುರುತಿಸಿದೆ.

    ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು 2021 ರಲ್ಲಿ ಫ್ರೆಂಚ್ ಗಯಾನಾದಿಂದ ಏರಿಯನ್ 5 ರಾಕೆಟ್ ಮೇಲೆ ಉಡಾವಣೆ ಮಾಡಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ

    ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ ಸೆರೆ ಸಿಕ್ಕ ಗುರು-ಚಂದ್ರನ ಬೆರಗುಗೊಳಿಸುವ ಫೋಟೋ

    ನವದೆಹಲಿ: ಜೇಮ್ಸ್ ವೆಬ್ ಟೆಲಿಸ್ಕೋಪ್‍ನಲ್ಲಿ(JWST) ಸೆರೆಹಿಡಿಯಲಾದ ಗುರು-ಚಂದ್ರನ ಹಲವಾರು ಬೆರಗುಗೊಳಿಸುವ ಫೋಟೋವನ್ನು ನಾಸಾ ಬಿಡುಗಡೆ ಮಾಡಿದೆ.

    ಕಳೆದ ವಾರ ಜೇಮ್ಸ್ ವೆಬ್ ಬಾಹ್ಯಾಕಾಶ ದೂರದರ್ಶಕದಿಂದ ತೆಗೆದ ಯೂನಿವರ್ಸ್‍ನ ಹೊಸ ಚಿತ್ರಗಳನ್ನು ನಾಸಾ ಹಂಚಿಕೊಂಡಿತ್ತು. ಅಮೇರಿಕದ ಬಾಹ್ಯಾಕಾಶ ಸಂಸ್ಥೆಯು ಸಹ ಮತ್ತೊಂದು ಅದ್ಭುತ ಫೋಟೋ ಬಿಡುಗಡೆ ಮಾಡಿತ್ತು. ಈ ಸಮಯದಲ್ಲಿ ಗುರು ಮತ್ತು ಚಂದ್ರನ ಸುತ್ತ ಕೇಂದ್ರೀಕೃತವಾಗಿ ತೆಗೆದ ಫೋಟೋಗಳನ್ನು ನಾಸಾ ರಿಲೀಸ್ ಮಾಡಿದೆ. ಇದನ್ನೂ ಓದಿ: ಬ್ರಹ್ಮಾಂಡ ಹುಟ್ಟಿದಾಗಿನ ಮೊದಲ ಚಿತ್ರ – ನಾಸಾದ ವೆಬ್ ಟೆಲಿಸ್ಕೋಪ್‌ನಿಂದ ಸೆರೆ

    ಈ ಸುಂದರವಾದ ಫೋಟೋಗಳನ್ನು ನಾಸಾ ವಿಜ್ಞಾನಿಗಳ ಅಧ್ಯಯನಕ್ಕೆ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿಯೂ ಶೇರ್ ಮಾಡಿಕೊಂಡಿದೆ. ಟ್ವೀಟ್‍ನಲ್ಲಿ ಫೋಟೋ ಶೇರ್ ಮಾಡಿದ ನಾಸಾ, ಈ ಚಿತ್ರಗಳನ್ನು ಇಂಜಿನಿಯರಿಂಗ್ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ ಇವುಗಳನ್ನು ಈ ವಾರ ನಾವು ಮೊದಲು ರಿಲೀಸ್ ಮಾಡಿದ ರೀತಿಯಲ್ಲಿಯೇ ಸಂಸ್ಕರಿಸಿಲ್ಲ ಎಂದು ಬರೆದುಕೊಂಡಿದೆ.

    ಗುರುಗ್ರಹದಂತಹ ಸೌರವ್ಯೂಹದ ವಸ್ತುಗಳನ್ನು ದೂರದರ್ಶಕವು ಹೇಗೆ ಟ್ರ್ಯಾಕ್ ಮಾಡುತ್ತದೆ ಎಂಬುದನ್ನು ನಾವು ಪರೀಕ್ಷಿಸಿದ್ದೇವೆ. ವೆಬ್ ನಿರೀಕ್ಷೆಗಿಂತ ಉತ್ತಮವಾಗಿ ಕೆಲಸ ಮಾಡಿದೆ. ಗುರುಗ್ರಹದ ಚಂದ್ರ ಯುರೋಪಾವನ್ನು ಸಹ ಸೆರೆ ಹಿಡಿದಿದೆ ಎಂದು ನಾಸಾ ಮತ್ತೊಂದು ಟ್ವೀಟ್‍ನಲ್ಲಿ ತಿಳಿಸಿದೆ. ಇದನ್ನೂ ಓದಿ:  ಅಮರನಾಥ ಯಾತ್ರೆ: ನೈಸರ್ಗಿಕ ವಿಕೋಪದಿಂದ 8 ಯಾತ್ರಾರ್ಥಿಗಳು ಸಾವು 

    Live Tv
    [brid partner=56869869 player=32851 video=960834 autoplay=true]

  • ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    ಗುರು- ಶನಿ ಸಮ್ಮಿಲನದ ಪರಿಣಾಮ, ಪರಿಹಾರ, ಯಾವ ಪೂಜೆ ಮಾಡಬೇಕು?

    – ಗುರು ಜೊತೆ ಶನಿ ಬರೋದರಿಂದ ಏನಾಗುತ್ತೆ?

    ಬೆಂಗಳೂರು: ಇಂದು ನಡೆಯುವ ಗುರು-ಶನಿ ಸಮ್ಮಿಲದ ಖಗೋಳ ತಜ್ಞರಿಗೆ ನಭೋಮಂಡಲದ ಕೌತಕದ ವಿದ್ಯಮಾನ ಅಷ್ಟೆ. ಆದ್ರೆ ಜ್ಯೋತಿಷ್ಯದಲ್ಲಿ ಈ ಸಂಯೋಗಕ್ಕೆ ಬೇರೆ ಬೇರೆ ವ್ಯಾಖ್ಯಾನಗಳು ಸಿಗುತ್ತವೆ. ಈ ಮಹಾಸಂಯೋಗದ ಬಗ್ಗೆ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಮಾಹಿತಿ ನೀಡಿದ್ದಾರೆ.

    ಗುರು,ಶನಿ ಸಂಯೋಗ ಹೇಗೆ?: 60 ಸಂವತ್ಸರದಲ್ಲಿ ಶಾರ್ವರಿ ನಾಮ ಸಂವತ್ಸರವೂ ಒಂದಾಗಿದೆ. ಈ ಸಂಯೋಗ ಇದು ಯುಗ ಯುಗಗಳಲ್ಲಿ ನಡೆಯುವ ವೈಶಿಷ್ಯ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರಕ್ರಿಯೆ. 9 ಗ್ರಹಗಳು 12 ಮನೆಗಳಲ್ಲಿ ಸಂಚಾರ ಇರುತ್ತೆ. 9 ಗ್ರಹಗಳು 12 ಮನೆಗಳಲ್ಲಿ ಇಂತಿಷ್ಟು ವರ್ಷವೆಂದು ಸಂಚಾರ ಮಾಡುತ್ತವದೆ. ಮಕರ ರಾಶಿಗೆ ಶನಿ ಮತ್ತು ಗುರು ಗ್ರಹ ಪ್ರವೇಶವಾಗುತ್ತೆ. ಇಂದು ಸಂಧ್ಯಾಕಾಲ ಎರಡು ಗ್ರಹಗಳ ಪ್ರವೇಶ ಆಗಲಿದೆ.

    ಒಂದು ಸಂವತ್ಸರದಲ್ಲಿ ನಾಲ್ಕು ಕಾಲಗಳು ಬರುತ್ತೆ. ಪೂರ್ವ ಜನ್ಮದ ಕರ್ಮಗಳಿಗೆ ಅನುಸಾರವಾಗಿ ಫಲ ಲಭಿಸುತ್ತೆ. ಗ್ರಹಗಳು ರಾಶಿಗಳ ಮನೆಗೆ ಬಂದಾಗ ಹಿಂದಿನ ಸಂಸ್ಕಾರಗಳೇ ಫಲವಾಗಿ ಲಭಿಸುತ್ತೆ. ಗ್ರಹ ಪ್ರವೇಶ ಆದಾಗ ಒಳ್ಳೆಯದು ಆಗುತ್ತೆ.. ಕೆಟ್ಟದ್ದು ಆಗುವ ಸಾಧ್ಯತೆಗಳಿರುತ್ತವೆ. ಗುರು ಗ್ರಹ ಪ್ರವೇಶ ಆದಾಗ ಶುಭವೇ ಹೆಚ್ಚಾಗುತ್ತದೆ. ಒಳ್ಳೆಯದು ಮಾಡುವ ಗುರು ಜೊತೆ ಶನಿ ಬಂದಾಗ ಆತಂಕ ಜಾಸ್ತಿ. ಒಳ್ಳೆಯ ಗುರು ಜೊತೆ ಶನಿ ಬಂದಾಗ ಸ್ವಲ್ಪ ಕೆಡುಕಾಗಬಹುದು. ಮಕರ ರಾಶಿಯಲ್ಲಿ ಎರಡು ಗ್ರಹಗಳ ಸಮ್ಮಿಲನ ಒಂದು ವರ್ಷ ಇರುತ್ತೆ. ಗುರು ಗ್ರಹ 2 ತಿಂಗಳು ಬಿಟ್ಟು ವಾಪಾಸ್ ಹೋಗ್ತಾನೆ. 2 ತಿಂಗಳು ಬಿಟ್ಟು ಮತ್ತೆ ವಾಪಸ್ ಹೋಗುವಾಗ ಫಲ ಲಭಿಸಲಿದೆ ಎಂದು ಸೋಮಸುಂದರ್ ದೀಕ್ಷಿತ್ ಹೇಳುತ್ತಾರೆ.

    ರಾಶಿಗಳ ಮೇಲೆ ಬೀಳುವ ಪರಿಣಾಮ ಏನು?: ಗುರು-ಶನಿ ಸಂಯೋಗ ಎಲ್ಲಾ ರಾಶಿಗಳ ಮೇಲೆ ಪ್ರಭಾವ ಇದ್ದೇ ಇರುತ್ತದೆ. ಪಂಚಮ ಶನಿ ಅಂದರೆ 5ನೇ ಮನೆಯಲ್ಲಿ ಶನಿ ಇದ್ದಾಗ ತೊಂದರೆ. ಮಕರ ರಾಶಿಯವರಿಗೆ ಏಳೂವರೆ ವರ್ಷದ ಶನಿ ಕಾಟದಿಂದ ಮುಕ್ತವಾಗಲಿದೆ. ಶನಿಕಾಟ ವಿಮೋಚನೆದಿಂದ ಗುರು-ಶನಿಯಿಂದ ಅನುಕೂಲ. ಗುರು ಜೊತೆ ಶನಿ ಬರುತ್ತಿರುವುದರಿಂದ ಒಳ್ಳೆಯದು ಆಗಲಿದೆ. ಮಕರ ರಾಶಿಯವರ ಸಮೀಪ ಇರುವ ರಾಶಿಗಳಿಗೆ ಆತಂಕ. ಆತಂಕ ದೂರ ಮಾಡಿಕೊಳ್ಳಲು ಶನಿ ದೇವರನ್ನು ಪ್ರಾರ್ಥಿಸಬೇಕು ಎಂದು ಸೂಚಿಸಿದ್ದಾರೆ.

    ರಾಶಿಗಳಿಗೆ ಪರಿಹಾರ ಏನು?: ಗುರು ಅಂದರೆ ದಕ್ಷಿಣಾಮೂರ್ತಿ, ಶನಿ ಅಂದರೆ ಈಶ್ವರ. ಹಾಗಾಗಿ ಈಶ್ವರನ ಆರಾಧನೆ ಮತ್ತು ಪೂಜೆ ಮಾಡಬೇಕು ಮತ್ತು ನವಗ್ರಹ ಪ್ರದಕ್ಷಿಣೆ ಮಾಡಬೇಕು. ತಮ್ಮ ಅನುಕೂಲಕ್ಕೆ ತಕ್ಕಂತೆ ಎಳ್ಳು, ಎಳ್ಳೆಣ್ಣೆ, ಕಡ್ಲೆಕಾಳು ದಾನ ಮಾಡಬೇಕು. ಗುರು, ಶನಿ ಇಬ್ಬರೂ ಇರುವುದರಿಂದ ಈ ವೇಳೆ ಪ್ರಾರ್ಥನೆ ಮುಖ್ಯವಾಗುತ್ತದೆ. ಈ ಸಮಯದಲ್ಲಿ ಏನಾದ್ರು ದೋಷಗಳಿದ್ರೂ ಪರಿಹಾರ ಆಗುತ್ತೆ.

    ಪರಿಸರದ ಮೇಲೆ ಏನು ಪರಿಣಾಮ?: ಶನಿ ಅಂದರೆ ಯುದ್ಧ ಭೀತಿ ಎಂದರ್ಥ. ಗುರು ಅಂದರೆ ಸೌಮ್ಯ ಅಂತರ್ಥ. ಎಲ್ಲಾ ದೇಶದವರಿಗೂ ಪ್ರಾಕೃತಿಕ ಸಂಯಮ ಇದೆ. ಒಂದೇ ಮನೆಯಲ್ಲಿ 2 ಗ್ರಹಗಳ ಬರುತ್ತಿರೋದರಿಂದ ಒಳ್ಳೆಯದು ಆಗುತ್ತೆ ಕೆಟ್ಟದ್ದು ಆಗುತ್ತೆ. ಇಂಥದ್ದೇ ಆಗುತ್ತೆಂದು ಹೇಳಲಾಗಲ್ಲ. ಜಲಪ್ರವಾಹ, ಅಗ್ನ ಅವಘಡ, ಭೂಕಂಪ ಸಂಭವಿಸಬಹುದು ಎಂದು ಸೋಮಸುಂದರ್ ದೀಕ್ಷಿತ್ ಹೇಳಿದ್ದಾರೆ. ಇದನ್ನೂ ಓದಿ: ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ರಾಜಕೀಯದ ಮೇಲೆ ಪರಿಣಾಮ ಏನು?: ಗ್ರಹಣಗಳ ಕಾಲದಲ್ಲಿ ರಾಜಕೀಯದ ವಿಶ್ಲೇಷಣೆ ಮಾಡಬಹುದು, ಗ್ರಹಗಳ ನಡುವೆ ನಡೆಯುವ ಸಮ್ಮಿಲನದಿಂದ ಹೇಳಲು ಆಗಲ್ಲ. ಯುಗಾದಿ ನಂತರ ಕುಜ ರಾಜನಾಗಿ ಬರ್ತಾನೆ. ಅನುಕೂಲ, ಅನಾನುಕೂಲ ಎರಡೂ ಆಗಬಹುದು.

  • ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    ‘ಗುರು ಶನಿ’ ಮಹಾಸಂಗಮ – ದ್ವಾದಶ ರಾಶಿಗಳ ಫಲಾಫಲ

    – ಯಾವ ರಾಶಿಗಳಿಗೆ ಕಂಟಕ ಎದುರಾಗಬಹುದು?

    ಬೆಂಗಳೂರು: ಇಂದು ಸಂಜೆ ನಭೋಮಂಡಲ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ. ಈ ಮಹಾಸಂಗಮದಿಂದ ಯಾವ ರಾಶಿಗಳಿಗೆ ಕಂಟಕ ಆಗಬಹುದು? ಇಲ್ಲಿದೆ ದ್ವಾದಶ ರಾಶಿಗಳ ಫಲಾಫಲ

    ಮೇಷ: ಹಣಕಾಸಿನ ತೊಂದರೆ ಹೆಚ್ಚಾಗಬಹುದು, ನಿಮ್ಮ ಪ್ರಯಾಣದಲ್ಲಿ ಸಂಕಷ್ಟ ಎದುರಾಗಬಹುದು, ಪಿತ್ರಾರ್ಜಿತ ಆಸ್ತಿಯಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ಅನಾರೋಗ್ಯ ಸಮಸ್ಯೆ ಕಾಡಲಿದೆ.

    ವೃಷಭ: ಉದ್ಯೋಗದ ಸ್ಥಳದಲ್ಲಿ ಒತ್ತಡ, ಮೇಲಾಧಿಕಾರಿಗಳಿಂದ ಕಿರುಕುಳ ಸಾಧ್ಯತೆ, ಉದ್ಯೋಗ ಕಳೆದುಕೊಳ್ಳುವ ಸಂಭವ.

    ಮಿಥುನ: ಜೀವನದಲ್ಲಿ ಏರುಪೇರು ಸಾಧ್ಯತೆ, ಆಕಸ್ಮಿಕ ದುರಂತ ಸಂಭವ, ರಾಜಕೀಯ ವ್ಯಕ್ತಿಗಳಿಗೆ ಸಮಸ್ಯೆ,ಪಿತ್ರಾರ್ಜಿತ ಆಸ್ತಿಯಲ್ಲಿ ತೊಂದರೆ, ಆರ್ಥಿಕ ಪರಿಸ್ಥಿತಿ ಉಲ್ಬಣ.

    ಕಟಕ: ದಾಂಪತ್ಯದಲ್ಲಿ ಜಗಳ, ಮುನಿಸು, ಪಾಲುದಾರಿಕೆ ವ್ಯವಹಾರದಲ್ಲಿ ಸಮಸ್ಯೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು, ರೋಗಬಾಧೆ ಉಲ್ಪಣ ಸಂಭವ, ಆನಾರೋಗ್ಯ ಸಮಸ್ಯೆ ಹೆಚ್ಚಾಗಬಹುದು.

    ಸಿಂಹ: ಶತ್ರುಗಳ ಕಾಟ ಹೆಚ್ಚಾಗಬಹುದು, ಆರ್ಥಿಕ ಸಮಸ್ಯೆ ಹೆಚ್ಚಿನ ಸಾಲ, ಮನಸ್ಸಿನ ಭಾವನಾತ್ಮಕ ವಿಚಾರದಲ್ಲಿ ಹಿನ್ನಡೆ, ಮಕ್ಕಳಿಂದ ಕಿರಿಕಿರಿ ಅಥವಾ ನಷ್ಟ, ಕೆಲಸಗಾರರಿಂದ ಸಮಸ್ಯೆ.

    ಕನ್ಯಾ: ಪ್ರೀತಿ-ಪ್ರೇಮ ವಿಚಾರದಲ್ಲಿ ತೊಂದರೆ, ದಾಂಪತ್ಯದಲ್ಲಿ ಜಗಳ, ವಿರಸ, ಸಂಗಾತಿಗೆ ಆರೋಗ್ಯ ಕೈ ಕೊಡಬಹುದು, ಉದ್ಯೋಗದಲ್ಲಿ ಒತ್ತಡ, ಕಿರುಕುಳ, ವಿದ್ಯಾಭ್ಯಾಸದಲ್ಲಿ ಹಿನ್ನಡೆ.

    ತುಲಾ: ಮಾನಸಿಕ ಆಘಾತ, ನೆಮ್ಮದಿ ಘಾಸಿ, ದೈವವನ್ನ ದಿಕ್ಕರಿಸೋ ಸಾಹಸ, ಕುಟುಂಬ ಕಲಹ, ಗೌರವಕ್ಕೆ ಧಕ್ಕೆ, ಆರೋಗ್ಯದಲ್ಲಿ ವ್ಯತ್ಯಾಸ, ಅನಗತ್ಯ ಪ್ರಯಾಣ, ಶತ್ರು ಕಾಟ

    ವೃಶ್ಚಿಕ: ಬಂಧು-ಬಾಂಧವರೊಂದಿಗೆ ಕಿರಿಕಿರಿ, ಪತ್ರ ವ್ಯವಹಾರದಲ್ಲಿ ಎಚ್ಚರ ಇರಲಿ, ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ, ಪ್ರೀತಿ ಪ್ರೇಮ ವಿಚಾರದಲ್ಲಿ ಎಚ್ಚರ, ಆದಷ್ಟು ಎಚ್ಚರದಿಂದ ಇದ್ದರೆ ಒಳಿತು.

    ಧನಸ್ಸು: ಆರ್ಥಿಕ ವ್ಯವಹಾರದಲ್ಲಿ ಜಾಗ್ರತೆ, ಸ್ವಂತ ವ್ಯವಹಾರ ಬೇಡ, ಶುಭಕಾರ್ಯದಲ್ಲಿ ಸಮಸ್ಯೆ, ಅಂದುಕೊಂಡ ಕೆಲಸಗಳು ವಿಳಂಬ

    ಮಕರ: ಆರೋಗ್ಯದಲ್ಲಿ ಮುಂಜಾಗ್ರತೆ ಇರಲಿ, ಸ್ವಂತ ಉದ್ಯಮದ ಬಗ್ಗೆ ಜಾಗ್ರತೆ, ಕೋರ್ಟ್ ವ್ಯಾಜ್ಯ ಸಂಭವ, ಜೈಲುವಾಸ ಸಾಧ್ಯತೆ

    ಕುಂಭ: ಲಾಭದ ಪ್ರಮಾಣದಲ್ಲಿ ಕುಂಠಿತ, ಖರ್ಚು ಹೆಚ್ಚಳ, ಕುಟುಂಬದಲ್ಲಿ ವಿರೋಧ, ಮಾತಿನಿಂದ ಸಮಸ್ಯೆ, ದಾಯಾದಿ ಕಲಹ, ಹೆಸರಿಗೆ ಅಪಖ್ಯಾತಿ, ಅಪವಾದ

    ಮೀನ: ಮುಂಬರುವ 15 ದಿನಗಳ ಕಾಲ ಜಾಗ್ರತೆ, ಧನ ಲಾಭ ನಿರೀಕ್ಷೆ, ಸೇವಾ ವೃತ್ತಿದಾರರು ಎಚ್ಚರ, ಆರೋಗ್ಯ ವಿಚಾರದಲ್ಲಿ ಜಾಗ್ರತೆ

  • ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    ನಭೋ ಮಂಡಲದಲ್ಲಿ ಖಗೋಳ ವಿಸ್ಮಯ – ಸಂಜೆ ಭೂಮಿಯ ಅತೀ ಸಮೀಪಕ್ಕೆ ಗುರು, ಶನಿಗಳು

    – ಮಹಾ ಸಂಗಮ ನೋಡೋಕೆ ಆಗಸದತ್ತ ಜನರ ನೋಟ

    ಬೆಂಗಳೂರು: ಇಂದು ಸಂಜೆ ಬಾನಂಗಳದಲ್ಲಿ 800 ವರ್ಷಗಳ ಬಳಿಕ ಅಪರೂಪದ ವಿದ್ಯಮಾನ ಜರುಗಲಿದೆ. ಸೂರ್ಯಾಸ್ತದ ಬಳಿಕ ಗುರು, ಶನಿ ಗ್ರಹಗಳ ಸಂಗಮ ದೃಶ್ಯ ಬರಿಗಣ್ಣಿಗೆ ಗೋಚರಿಸಲಿದೆ. ಈ ಎರಡು ಗ್ರಹಗಳು ಕ್ರಿಸ್‍ಮಸ್ ಸ್ಟಾರ್ ರೀತಿಯಲ್ಲಿ ಕಾಣಲಿವೆ. ಈ ವಿಶೇಷಕ್ಕಾಗಿ ಮತ್ತೆ 60 ವರ್ಷಗಳ ಬಳಿಕ ಕಾಯಬೇಕು.

    ಗುರು-ಶನಿ ಸಂಯೋಗ: ಈ ಎರಡು ಗ್ರಹಗಳು ಭೂಮಿಗೆ ನೇರವಾಗಿ ಒಂದೇ ರೇಖೆಯಲ್ಲಿ ಬರುವುದರಿಂದ ಒಂದೇ ಗ್ರಹದಂತೆ ಗೋಚರವಾಗುತ್ತವೆ. ಆದರೆ, ಗ್ರಹಗಳು ಒಂದರ ಹಿಂದೆ ಒಂದು ಇರಲಿದೆ. ಹಾಗಾಗಿ ಇದನ್ನು ಬಾಹ್ಯಾಕಾಶ ವಿಜ್ಞಾನಿಗಳು ಮಹಾ ಸಂಗಮ ಎಂದು ಕರೆಯುತ್ತಾರೆ. ಒಂದೇ ರೇಖೆಯಲ್ಲಿ ಗುರು, ಶನಿ, ಚಂದ್ರ ಬರೋದರಿಂದ ಆಗಸದಲ್ಲಿ ತ್ರಿಕೋನಾಕೃತಿಯಲ್ಲಿ ಸಂಯೋಗ ಗೋಚರವಾಗುತ್ತದೆ. ಮುಂದೆ 2080ರಲ್ಲಿ ಈ ವಿದ್ಯಮಾನ ಘಟಿಸಲಿದೆ.

    ಸಮಯ: ಇಂದು ಸಂಜೆ 6 ಗಂಟೆ 15 ನಿಮಿಷದಿಂದ ರಾತ್ರಿ 8 ಗಂಟೆವರೆಗೆ ಗುರು-ಶನಿ ಸಂಯೋಗ ಕಾಣಬಹುದಾಗಿದೆ. ಸಂಜೆ ವೇಳೆ ಪಶ್ಚಿಮ ದಿಕ್ಕಿನಲ್ಲಿ ಗುರು-ಶನಿ ಸಂಯೋಗ ಕಾಣಸಿಗಲಿದೆ. 1 ಗಂಟೆ 45 ನಿಮಿಷಗಳ ಕಾಲ ಖಗೋಳ ವಿಸ್ಮಯವನ್ನ ಬರೀಗಣ್ಣಿನಿಂದ ನೋಡಬಹುದಾಗಿದೆ. ಗುರು ಗ್ರಹದ ಪಕ್ಕದಲ್ಲಿ ಬಿಂದುವಿನ ರೀತಿಯಲ್ಲಿ ಶನಿ ಗೋಚರಿಸಲಿದೆ.

    ಗುರು,ಶನಿ ಸಮಾಗಮ ಎಂದರೇನು?: ಆಕಾಶಕಾಯಗಳ ಸಾಮೀಪ್ಯದ ವಿಶೇಷವೇ ಖಗೋಳ ವಿದ್ಯಮಾನ. 20 ವರ್ಷಗಳಿಗೊಮ್ಮೆ ಕಾಣುವ ವಿದ್ಯಮಾನವನ್ನ ಗ್ರೇಟ್ ಕಂಜಂಕ್ಷನ್ ಅಂತ ಕರೆಯುತ್ತಾರೆ. ಈ ಎರಡು ಗ್ರಹಗಳ ಅಂತರ 6.1 ಅರ್ಕ್ ಮಿನಿಟ್, ಅಂದ್ರೆ 0.1 ಡಿಗ್ರಿ ಇರುತ್ತೆ. ಹಿಂದೆ 1623ರಲ್ಲಿ ಈ ವಿದ್ಯಮಾನ ನಡೆದಿತ್ತು ಆದರೆ ಅದು ಗೋಚರಿಸಿರಲಿಲ್ಲ. ಅದಕ್ಕೂ ಹಿಂದೆ 1226 ರಲ್ಲಿ ಅದ್ರೆ 794 ವರ್ಷದ ಹಿಂದೆ ಗೋಚರಿಸಿತ್ತು. ಮತ್ತೊಮ್ಮೆ, 0.1 ಡಿಗ್ರಿ ಅಂತರದ ಸಮಾಗಮ ವೀಕ್ಷಿಸಲು 2080ರವರೆಗೆ ಕಾಯಬೇಕು. ಈ ವೈಶಿಷ್ಯವನ್ನು ನೋಡುವುದನ್ನು ಮಿಸ್ ಮಾಡಿಕೊಳ್ಳಬೇಡಿ. ಈ ಸಮಾಗಮ 1 ಗಂಟೆ 45 ನಿಮಿಷ ಮಾತ್ರ ಕಾಣಸಿಗುತ್ತದೆ ಎಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರದ ಉಪನ್ಯಾಸಕ ಅತುಲ್ ಭಟ್ ಹೇಳಿದ್ದಾರೆ.

    ಸೌರ ಮಂಡಲದ ಎಲ್ಲ ಗ್ರಹಗಳು ಸೂರ್ಯನ ಸುತ್ತ ತಿರುಗುತ್ತಿರುತ್ತದೆ. ಭೂಮಿಯಿಂದ ನೋಡಿದಾಗ ಈ ಗ್ರಹಗಳೂ ಗೋಚರವಾಗುತ್ತವೆ. ಇಂತಹ ಸಂದರ್ಭದಲ್ಲಿ ಗುರು, ಶನಿ ಗ್ರಹಗಳು ಸಮೀಪ ಬಂದಂತೆ ಭಾಸವಾಗುತ್ತೆ. ಈ ವಿದ್ಯಮಾನವೇ ಯುತಿ ಅಥವಾ ಸಮಾಗಮ ಅಂತಾರೆ. ಎಲ್ಲ ಗ್ರಹಗಳು ಸಮಾಗಮ ಹೊಂದುತ್ತವೆ. ಇಂದು ಗುರು-ಶನಿ ಗ್ರಹಗಳು ಭೂಮಿ ಸಮೀಪ ಬಂದತೆ ಭಾಸವಾಗುತ್ತೆ. 800 ವರ್ಷಗಳ ಬಳಿಕ ನಡೆಯುತ್ತಿದೆ. 800 ವರ್ಷಗಳ ಬಳಿಕ ಇಷ್ಟು ಹತ್ತಿರ ಬಂದಿರುವುದು ಇದೇ ಮೊದಲು ಎಂದು ಖಗೋಳಶಾಸ್ತ್ರಜ್ಞ ಸುಂದರ್ ಮಾಹಿತಿ ನೀಡಿದ್ದಾರೆ.