Tag: jonty rhodes

  • ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಸಚಿನ್ ತೆಂಡೂಲ್ಕರ್ ಕಾಲಿಗೆ ನಮಸ್ಕರಿಸಿದ ಜಾಂಟಿ ರೋಡ್ಸ್

    ಮುಂಬೈ: ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ವರ್ಷಗಳೇ ಕಳೆದರೂ ಎಷ್ಟು ಆಟಗಾರಿಗೆ ತಮ್ಮ ಸ್ಟಾರ್‌ಗಳ ಮೇಲಿನ ಭಕ್ತಿ ಕಡಿಮೆಯಾಗಿಲ್ಲ ಎಂಬುದಕ್ಕೆ ಬುಧವಾರ ಐಪಿಎಲ್ ವೇಳೆ ಕಂಡುಬಂದ ದೃಶ್ಯವೊಂದು ಸಾಕ್ಷಿಯಾಯಿತು.

    ROADS

    ಹೌದು… 2022ನೇ ಸಾಲಿನ 15ನೇ ಆವೃತ್ತಿಯ ವೇಳೆ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಸಚಿನ್ ತೆಂಡೂಲ್ಕರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಕಿಂಗ್ಸ್ ಪಂಜಾಬ್ ನಡುವಣ ಪಂದ್ಯದ ಬಳಿಕ ಎರಡೂ ತಂಡದ ಆಟಗಾರರೂ ಪರಸ್ಪರ ಹಸ್ತಲಾಘವ ಮಾಡುತ್ತಿದ್ದ ವೇಳೆ ರೋಡ್ಸ್ ಸಚಿನ್ ಕಾಲಿಗೆ ನಮಸ್ಕರಿಸಿದ್ದಾರೆ. ಈ ವೇಳೆ ಸಚಿನ್ ತಡೆಯಲು ಪ್ರಯತ್ನಿಸಿದ್ದಾದರೂ ರೋಡ್ಸ್ ತಮ್ಮ ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದಿದ್ದಾರೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್

    ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚ್ಚಿನ್‌ಗಿಂತಲೂ ನಾಲ್ಕು ವರ್ಷ ದೊಡ್ಡವರಾಗಿರುವ ಜಾಂಟಿ ರೋಡ್ಸ್ (52) ಅವರ ವಿನಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 2009ರಿಂದ 2017ರ ವರೆಗೆ ಮುಂಬೈ ತಂಡದ ಫೀಲ್ಡಿಂಗ್ ಕೋಚ್ ಆಗಿ ಜಾಂಟಿ ರೋಡ್ಸ್ ಕರ್ತವ್ಯ ನಿರ್ವಹಿಸಿದ್ದರು. ಈ ಮೂಲಕ ಸಚಿನ್ ತೆಂಡೂಲ್ಕರ್ ಜೊತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಇದನ್ನೂ ಓದಿ: ಧೋನಿಯೇ ಮುಖ್ಯವಾದ್ರೆ ಉಳಿದ ಆಟಗಾರರು ಲಸ್ಸಿ ಕುಡಿಯಲು ಹೋಗಿದ್ರಾ: ಭಜ್ಜಿ ಪ್ರಶ್ನೆ

    ಪಂಜಾಬ್ ಕಿಂಗ್ಸ್ ತಂಡದ ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಜವಾಬ್ದಾರಿಯನ್ನು ಜಾಂಟಿ ರೋಡ್ಸ್ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂಬೈ ವಿರುದ್ಧದ ಪಂದ್ಯದಲ್ಲಿ ಪಂಜಾಬ್ 12 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಹಿಂದೆ ಭಾರತದ ಮೇಲಿನ ಪ್ರೀತಿಗಾಗಿ ಜಾಂಟಿ ರೋಡ್ಸ್ ತನ್ನ ಮಗಳಿಗೆ `ಇಂಡಿಯಾ’ ಎಂದು ಹೆಸರಿಟ್ಟಿದ್ದರು ಎನ್ನುವುದು ಇಲ್ಲಿ ವಿಶೇಷ.

  • ಪವಿತ್ರ ಗಂಗೆಯಲ್ಲಿ ಮಿಂದೆದ್ದ ರೋಡ್ಸ್‌ಗೆ ಹರ್ಭಜನ್ ವಿಶೇಷ ಮನವಿ

    ಪವಿತ್ರ ಗಂಗೆಯಲ್ಲಿ ಮಿಂದೆದ್ದ ರೋಡ್ಸ್‌ಗೆ ಹರ್ಭಜನ್ ವಿಶೇಷ ಮನವಿ

    – ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಆಗುವ ಪ್ರಯೋಜನ ತಿಳಿಸಿದ ಜಾಂಟಿ

    ನವದೆಹಲಿ: ಗಂಗಾ ನದಿಯಲ್ಲಿ ಮಿಂದೆದ್ದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್‌ಗೆ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು, ವಿಶೇಷ ಮನವಿಯನ್ನು ಸಲ್ಲಿಸಿದ್ದಾರೆ.

    ಸಧ್ಯ ಭಾರತದಲ್ಲಿರುವ ಜಾಂಟಿ ರೋಡ್ಸ್ ಅವರು, ಬುಧವಾರ ಋಷಿಕೇಶಕ್ಕೆ ಹೋಗಿ ಅಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ. ಗಂಗೆಯಲ್ಲಿ ಮುಳಗಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿರುವ ಜಾಂಟಿ, ಪವಿತ್ರ ಗಂಗೆಯ ತಣ್ಣೀರಿನಲ್ಲಿ ಮುಳುಗುವುದರಿಂದ ದೈಹಿಕ ಮತ್ತು ಆಧ್ಯಾತ್ಮಿಕ ಮೋಕ್ಷ ಸಿಗುತ್ತದೆ ಎಂದು ಬರೆದುಕೊಂಡಿದ್ದರು.

    ಈ ಟ್ವೀಟ್‍ಗೆ ರೀಟ್ವೀಟ್ ಮಾಡಿರುವ ಹರ್ಭಜನ್ ಅವರು, ನೀವು ನನಗಿಂತ ಹೆಚ್ಚು ಭಾರತೀಯರನ್ನು ನೋಡಿದ್ದೀರಾ. ನೀವು ಪವಿತ್ರವಾದ ಗಂಗೆಯಲ್ಲಿ ಮುಳುಗಿ ಆನಂದಿಸುತ್ತಿರುವುದನ್ನು ನೋಡಲು ಬಹಳ ಸಂತೋಷವಾಗುತ್ತದೆ. ಮುಂದಿನ ಬಾರಿ ನೀವು ಅಲ್ಲಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗಿ ಎಂದು ಹರ್ಭಜನ್ ಸಿಂಗ್ ಅವರು ಟ್ವೀಟ್ ಮಾಡುವ ಮೂಲಕ ರೋಡ್ಸ್‌ಗೆ ಮನವಿ ಸಲ್ಲಿಸಿದ್ದಾರೆ.

    ಈ ತಿಂಗಳ ಕೊನೆಯಲ್ಲಿ ಆರಂಭವಾಗುವ ಐಪಿಎಲ್ 2020ಯಲ್ಲಿ ಭಾಗವಹಿಸಲು ಜಾಂಟಿ ರೋಡ್ಸ್ ಇಂಡಿಯಾಗೆ ಬಂದಿದ್ದಾರೆ. ಈ ಆವೃತ್ತಿಯಲ್ಲಿ ಅವರು, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜಾಂಟಿ ಅವರು 2009 ರಿಂದ 2017ರ ವರೆಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ಕೋಚ್ ಆಗಿ ಕಾರ್ಯನಿರ್ವವಹಿಸಿದ್ದರು. ಈ ತಂಡ ಇವರ ಅವದಿಯಲ್ಲಿ ಮೂರು ಬಾರಿ ಕಪ್ ಗೆದ್ದಿತ್ತು.

    2019 ರ ಡಿಸೆಂಬರ್ ನಲ್ಲಿ ಪಂಜಾಬ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಆಯ್ಕೆಯಾದ ರೋಡ್ಸ್, ಮುಂಬರುವ ಐಪಿಎಲ್ 2020ರಲ್ಲಿ ಅನಿಲ್ ಕುಂಬ್ಳೆ, ವೆಸ್ಟ್ ಇಂಡೀಸ್‍ನ ಕರ್ಟ್ನಿ ವಾಲ್ಷ್, ಭಾರತದ ಮಾಜಿ ಸ್ಪಿನ್ನರ್ ಮತ್ತು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸುನಿಲ್ ಜೋಶಿ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಜಾರ್ಜ್ ಬೈಲಿಯವರನ್ನು ಸೇರಿಕೊಳ್ಳಲಿದ್ದಾರೆ.

    ಭಾರತದ ಮೇಲೆ ವಿಶೇಷ ಪ್ರೀತಿ ಇಟ್ಟಿಕೊಂಡಿರುವ ಜಾಂಟಿ ರೋಡ್ಸ್, 2016ರಲ್ಲಿ ಜನಿಸಿದ ಅವರ ಮಗಳಿಗೆ ಇಂಡಿಯಾ ಎಂದು ನಾಮಕಾರಣ ಮಾಡಿದ್ದರು. ಜೊತೆಗೆ ನಾನು ಬಹುಕಾಲ ಇಂಡಿಯಾದಲ್ಲೇ ಸಮಯ ಕಳೆದಿದ್ದಾನೆ. ಇಲ್ಲಿನ ಶ್ರೀಮಂತ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ನನಗೆ ಬಹಳ ಇಷ್ಟ. ಇಂಡಿಯಾ ಒಂದು ಆಧ್ಯಾತ್ಮಿಕ ದೇಶ, ಬಹಳ ಮುಂದಾಲೋಚನೆಯ ರಾಷ್ಟ್ರ ಎಂದು ಹೇಳಿದ್ದರು.

  • ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಭಾರತದ ಪ್ರಸಿದ್ಧ ಸ್ಥಳವೊಂದರ ಹೆಸರನ್ನು ಇಡಲಿದ್ದಾರೆ ಎಬಿಡಿ ದಂಪತಿ

    ಬೆಂಗಳೂರು: ಭಾರತದ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಹಲವು ವಿದೇಶಿ ಆಟಗಾರರು ಫಿದಾ ಆಗಿದ್ದು, ಈ ಹಿಂದೆ ಜಾಂಟಿ ರೋಡ್ಸ್ ತಮ್ಮ ಪುತ್ರಿಗೆ ಇಂಡಿಯಾ ಎಂದು ಹೆಸರು ಇಡುವ ಮೂಲಕ ಪ್ರೀತಿಯನ್ನು ಮೆರೆದಿದ್ದರು. ಸದ್ಯ ಈ ಸಾಲಿಗೆ ಆರ್ ಸಿಬಿ ಆಟಗಾರ ಎಬಿಡಿ ಸೇರ್ಪಡೆಯಾಗಲಿದ್ದಾರೆ.

    ಈ ಕುರಿತು ಮಾತನಾಡಿರುವ ಎಬಿಡಿ, ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಪ್ರೀತಿಗೆ ಸಾಕ್ಷಿಯಾಗಿ ತಮ್ಮ ಮೂರನೇ ಮಗುವಿಗೆ `ಕರ್ನಾಟಕ’ ಎಂದು ಹೆಸರಿಡಲು ನಿರ್ಧರಿಸಿದ್ದೆವು. ಆದರೆ ಸದ್ಯ `ತಾಜ್’ ಎಂದು ನಾಮಕರಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ತಾಜ್ ಎಂದು ಹೆಸರಿಡಲು ಕಾರಣವನ್ನು ಬಿಚ್ಚಿಟ್ಟ ಎಬಿಡಿ, ತಾನು ಮೊದಲ ಬಾರಿಗೆ ತನ್ನ ಗೆಳತಿಗೆ ತಾಜ್ ಮಹಲ್ ಮುಂದೇ ಪ್ರೇಮ ನಿವೇದನೆ ಮಾಡಿದ್ದು, ಅದ್ದರಿಂದ ತಮ್ಮ ಮೂರನೇ ಮಗುವಿಗೆ ತಾಜ್ ಎಂದು ಹೆಸರಿಡುವುದಾಗಿ ತಿಳಿಸಿದ್ದಾರೆ.

    ಎಬಿಡಿ ಹಾಗೂ ಡೇನಿಯಲ್ ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದು, 2015 ರಲ್ಲಿ ಜನಿಸಿದ ತಮ್ಮ ಮೊದಲ ಮಗನಿಗೆ ಜೂನಿಯರ್ ಎಬಿಡಿ ಹಾಗೂ 2017 ರಲ್ಲಿ ಜನಿಸಿದ ಮಗನಿಗೆ ಜಾನ್ ರಿಚರ್ಡ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಎಬಿಡಿ ದಂಪತಿ ಇದ್ದಾರೆ.

    ಭಾರತದ ಸಂಸ್ಕೃತಿಗೆ ಮನಸೋತಿರುವ ಎಬಿಡಿ ಹಲವು ಬಾರಿ ಈ ಕುರಿತು ಬಹಿರಂಗವಾಗಿ ಮಾತನಾಡಿದ್ದರು. ಅಲ್ಲದೇ ಕೆಲ ದಿನಗಳ ಹಿಂದೆ ಬೆಂಗಳೂರು ನಗರದಲ್ಲಿ ಆಟೋ ಏರಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಈ ವೇಳೆ ಎಬಿಡಿ ಜೊತೆಗಿದ್ದ ಪತ್ನಿ ಹಾಗೂ ಮಕ್ಕಳು ಸಹ “ಈ ಸಲ ಕಪ್ ನಮ್ದೆ” ಎಂದು ಹೇಳುವ ಮೂಲಕ ಮೆಚ್ಚುಗೆ ಪಡೆದಿದ್ದರು.

    ಟೂರ್ನಿಯಲ್ಲಿ ಸತತ ಸೋಲುಗಳ ಮೂಲಕ ನಿರಾಸೆ ಮೂಡಿಸಿದ್ದ ಆರ್ ಸಿಬಿ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಗೆಲ್ಲುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿತ್ತು. ಆದರೆ ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿ ಹೊರನಡೆದಿದೆ.