Tag: Jodi

  • ಮಂಡ್ಯದಲ್ಲಿ ದಂಡುಪಾಳ್ಯ ರೀತಿಯ ಮರ್ಡರ್

    ಮಂಡ್ಯದಲ್ಲಿ ದಂಡುಪಾಳ್ಯ ರೀತಿಯ ಮರ್ಡರ್

    ಮಂಡ್ಯ: ಮಹಿಳೆಯ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

    ಜಿಲ್ಲೆಯ ಶ್ರೀರಂಗಪಟ್ಟಣದ ಲಾಡ್ಜ್ ನಲ್ಲಿ ಘಟನೆ ನಡೆದಿದ್ದು, ಮಹಿಳೆಯ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜೋಡಿಯೊಂದು ಲಾಡ್ಜ್ ಗೆ ಆಗಮಿಸಿದೆ. ರಾತ್ರಿ ವೇಳೆಗೆ ಮಹಿಳೆಯನ್ನು ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದಾನೆ.

    ಜೋಡಿ ಇದ್ದ ರೂಮ್‍ನಿಂದ ರಕ್ತ ಹೊರ ಬರುತ್ತಿದ್ದದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಹಿಳೆಯ ಕತ್ತು ಕೊಯ್ದು ಚಾಕು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ ಎಂದು ಶಂಕಿಸಲಾಗಿದೆ. ಭೀಕರ ಕೊಲೆ ನಡೆದ ಘಟನೆಯಿಂದ ಶ್ರೀರಂಗಪಟ್ಟಣ ಜನತೆ ಬೆಚ್ಚಿ ಬಿದ್ದಿದ್ದಾರೆ. ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    ಪೊಲೀಸ್ರು ಬಂದು ಮುಂದೆ ನಿಂತ್ರೂ ಸೆಕ್ಸ್ ನಿಲ್ಲಿಸಲು ಒಪ್ಪದ ಜೋಡಿ

    – ಕಡಲ ತೀರದಲ್ಲಿ ಎಲ್ಲರ ಮುಂದೆ ಬೆತ್ತಲಾದ್ರು

    ಮನಿಲಾ: ಬ್ರಿಟಿಷ್ ಯುವತಿ ಮತ್ತು ಆಸ್ಟ್ರೇಲಿಯಾದ ಯುವಕ ಹಾಡಹಗಲೇ ಜನರು ಓಡಾಡುವ ಬೀಚ್‍ನಲ್ಲಿ ಸೆಕ್ಸ್ ಮಾಡಿದ್ದು, ಪೊಲೀಸರು ಬಂದರೂ ಮುಂದುವರಿಸಿರುವ ಘಟನೆ ಫಿಲಿಪೈನ್ಸ್ ನಲ್ಲಿ ನಡೆದಿದೆ.

    ಜಾಸ್ಮಿನ್ ನೆಲ್ಲಿ ಮತ್ತು ಆಂಥೋನಿ ಕ್ಯಾರಿಯೊ ಎಂದು ಗುರುತಿಸಲಾಗಿದೆ. ಇಬ್ಬರೂ 26 ನೇ ವಯಸ್ಸಿನವರಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

    ಯುವಕ ಮತ್ತು ಯುವತಿ ಸಂಜೆ ಬೀಜ್ ಬಳಿ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಇಬ್ಬರೂ ನಗ್ನವಾಗಿ ಲೈಂಗಿಕ ಸಂಬಂಧ ಹೊಂದಿದ್ದಾರೆ. ಆ ಬೀಚ್‍ನಲ್ಲಿ ಅನೇಕ ಮಕ್ಕಳು ತಮ್ಮ ಕುಟುಂಬದವರೊಂದಿಗೆ ಬಂದಿದ್ದು, ತುಂಬಾ ಜನರು ಕೂಡ ಓಡಾಡುತ್ತಿದ್ದರು. ಆದರೂ ಜೋಡಿ ಅಸಭ್ಯವಾಗಿ ಜೋಡಿ ಸೆಕ್ಸ್ ಮಾಡಿದ್ದಾರೆ.

    ಪೊಲೀಸರು ಸ್ಥಳಕ್ಕೆ ಬಂದು ಜೋಡಿ ಮುಂದೆ ನಿಂತಿದ್ದಾರೆ. ಆದರೆ ಜೋಡಿ ಸೆಕ್ಸ್ ಮಾಡುವುದನ್ನು ನಿಲ್ಲಿಸದೆ ಮುಂದುವರಿಸಿದ್ದಾರೆ. ನಂತರ ಅವರನ್ನು ಪೊಲೀಸರು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

    ಯುವವ-ಯುವತಿ ಕಾರಿನಲ್ಲಿ ಬೀಚ್‍ಗೆ ಹೋಗಿದ್ದಾರೆ. ಆದರೆ ಅವರು ಬೀಚ್‍ಗೆ ಹೋಗುವ ಮೊದಲು ತುಂಬಾ ಕುಡಿದಿದ್ದರು. ನಂತರ ಇಬ್ಬರು ಸುತ್ತಮುತ್ತಲೂ ಜನರು ಇದ್ದಾರೆ ಎಂದು ನೋಡದೆ ಸೆಕ್ಸ್ ಮಾಡಲು ಮುಂದಾಗಿದ್ದಾರೆ. ನಮ್ಮ ಪೊಲೀಸರು ಅವರ ಪಕ್ಕದಲ್ಲಿ ಹೋಗಿ ನಿಂತರೂ ಸೆಕ್ಸ್ ಮಾಡುವುದನ್ನು ಮುಂದುವರಿಸಿದ್ದಾರೆ. ಕೊನೆಗೆ ಪೊಲೀಸರು ಇಬ್ಬರನ್ನು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ದಂಡ ವಿಧಿಸಲಾಗಿದೆ. ನಂತರ ಜಾಮೀನಿನ ಮೇಲೆ ಜೋಡಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಇದೇ ತಿಂಗಳು ವಿಚಾರಣೆಗೆಂದು ನ್ಯಾಯಾಲಯಕ್ಕೆ ಹಾಜರಾಗಬೇಕು. ಇನ್ನೂ ನಿಖರವಾದ ದಿನಾಂಕವನ್ನು ಸೂಚಿಸಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.