Tag: Jim Ravi

  • ಜಿಮ್ ರವಿ ಸಿನಿಮಾ ರಂಗದಲ್ಲೂ ಗೆದ್ದರು : ಪುರುಷೋತ್ತಮನಿಗೆ 50ರ ಸಂಭ್ರಮ

    ಜಿಮ್ ರವಿ ಸಿನಿಮಾ ರಂಗದಲ್ಲೂ ಗೆದ್ದರು : ಪುರುಷೋತ್ತಮನಿಗೆ 50ರ ಸಂಭ್ರಮ

    ಜಿಮ್ ರವಿ ನಾಯಕನಾಗಿ ನಟಿಸಿರುವ ಪುರುಷೋತ್ತಮ ಸಿನಿಮಾ ಐವತ್ತು ದಿನಗಳನ್ನು ಪೂರೈಸಿದೆ. ಈ ದಿನಗಳಲ್ಲಿ ಸಿನಿಮಾವೊಂದು 50 ದಿನ ಪೂರೈಸುವುದು ಸಾಮಾನ್ಯ ಮಾತೇನಲ್ಲ. ಅದಕ್ಕಾಗಿ ರವಿ ಕಾರ್ಯಕ್ರಮವನ್ನೂ ಆಯೋಜನೆ ಮಾಡಿ, ಚಿತ್ರಕ್ಕೆ ಶ್ರಮಿಸಿದವರನ್ನು ನೆನಪಿಸಿಕೊಂಡರು. ಅಲ್ಲದೇ, ಇತ್ತೀಚೆಗಷ್ಟೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಬಾ.ಮ.ಹರೀಶ್ ಮಾತನಾಡಿ ಜಿಮ್ ರವಿರವರು ಬಹುಕಾಲದ ಗೆಳಯ. ಪರದೆ ಮೇಲೆ ಹೀರೋ ಅಲ್ಲದೆ ಯಾವಗಲೂ ಬೆಂಗಳೂರಿಗೆ ಹೀರೋ. ರವಿ ಅಂತ ಕರೆಯುವಾಗ ಗೊತ್ತಿಲ್ಲದಯೇ ಜಿಮ್ ಅಂತ ಸೇರಿಸಿಕೊಳ್ಳುತ್ತೇವೆ. ಅಂತಹ ಹೊಗಳಿಕೆಯನ್ನು ಸಂಪಾದಿಸಿದ್ದಾರೆ. ಮುಂದೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.

    ಸಂಗೀತ ಸಂಯೋಜಕ ಶ್ರೀಧರ್‌ಸಂಭ್ರಮ್ ಗಾಯಕರುಗಳಿಂದ ಗೀತೆಯ ಸಾಲುಗಳನ್ನು ಹಾಡಿಸಿದರು. ಕತೆ ನನ್ನದಲ್ಲ ಅದಕ್ಕಾಗಿ ಇಲ್ಲಿಯವರೆಗೂ ಹೆಚ್ಚು ಮಾತನಾಡಿಲ್ಲ. ಯುವಕರು ಡ್ರಗ್ಸ್ ತೆಗೆದುಕೊಂಡರೆ ಏನೇನು ಅನಾಹುತಗಳು ಆಗುತ್ತದೆ ಎಂಬುದನ್ನು ಹೇಳಲಾಗಿದೆ ಎಂದು ಕಡಿಮೆ ಸಮಯ ತೆಗೆದುಕೊಂಡುದ್ದು ನಿರ್ದೇಶಕ ಎಸ್.ವಿ.ಅಮರ್‌ನಾಥ್. ನಾಯಕಿ ಅಪೂರ್ವ, ಸಂಕಲನಕಾರ ಅರ್ಜುನ್‌ಕಿಟ್ಟು, ಛಾಯಾಗ್ರಾಹಕ ಕುಮಾರ್ ಸೇರಿದಂತೆ ಸಣ್ಣ ಮಟ್ಟದಿಂದ ಕೆಲಸ ಮಾಡಿದವರೆಲ್ಲನ್ನು ಗುರುತಿಸಿ ಅವರುಗಳನ್ನು ವೇದಿಕೆಗೆ ಆಹ್ವಾನಿಸಿ ಫಲಕಗಳನ್ನು ನೀಡಿದ್ದು ರವಿರವರ ದೊಡ್ಡಗುಣಕ್ಕೆ ಸಾಕ್ಷಿಯಾಗಿತ್ತು.  ಇದನ್ನೂ ಓದಿ:ದಿಗಂತ್ ಗೆ ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆ : ಅಬ್ಸರ್ವೇಶನ್ ನಲ್ಲಿ ನಟ

    ಗೀತಾ ಎನ್ನುವವರು ಚಿತ್ರವನ್ನು 19 ಬಾರಿ ವೀಕ್ಷಣೆ ಮಾಡಿದ್ದರಿಂದ ಅವರಿಗೆ ’ಅತ್ಯುತ್ತಮ ಪ್ರೇಕ್ಷಕಿ’ ಎಂದು ಸನ್ಮಾನ ಮಾಡಲಾಯಿತು. ಕಾಗಿನೆಲೆ ಮಠದ ಸ್ವಾಮಿಗಳು ಶುಭ ಹಾರೈಕೆಯ ಪತ್ರವನ್ನು ಕಳುಹಿಸಿಕೊಟ್ಟಿದ್ದರು. ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಎಲ್ಲರೂ ಹೊರಗೆ ಹೋಗದಂತೆ ಸಮಾರಂಭಕ್ಕೆ ಕಳೆ ತಂದುಕೊಟ್ಟರು.

    Live Tv

  • ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ಹೀರೋ ಆದ ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್

    ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಡಿ ಬಿಲ್ಡಿಂಗ್‌ನಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಮತ್ತು ರಾಜ್ಯ ಕಂಡಂತ ಉತ್ತಮ ಕ್ರೀಡಾ ಪಟು, ರಾಜ್ಯ ಪ್ರಶಸ್ತಿ ವಿಜೇತ (ಏಕಲವ್ಯ) ಜಿಮ್ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ’ಪುರುಷೋತ್ತಮ’ ಸೆನ್ಸಾರ್ ಆಗಿದ್ದು ಯುಎ ಪ್ರಮಾಣ ಪತ್ರ ಪಡೆದುಕೊಂಡಿದೆ. ಇದನ್ನೂ ಓದಿ : ವಿಜಯ್ ರಾಘವೇಂದ್ರ ನಟನೆಯ ಚಿತ್ರಕ್ಕೆ ರಾಘು ಟೈಟಲ್

    ‘ಚಿತ್ರವನ್ನು ಕಂಡಂತ ನಾನಾ ವಲಯದವರು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಾಬ್ದಾರಿ ಎಷ್ಟು ಸೂಕ್ಷ್ಮ ಇರುತ್ತದೆ ಎನ್ನುವುದು ಸಿನಿಮಾದ ಎಳೆಯಾಗಿದೆ’ ಎಂದಿದ್ದಾರೆ ಜಿಮ್ ರವಿ. ಇದನ್ನೂ ಓದಿ: ನಿರ್ದೇಶಕ ರಾಜಮೌಳಿ ಮೇಲೆ ಆಲಿಯಾ ಭಟ್ ಕೋಪ – ಬೇರೆ ರೀತಿಯಲ್ಲೇ ಸಿಟ್ಟು ತೋರಿಸಿ ಆಲಿಯಾ

    ಎಪ್ರಿಲ್ ಎರಡನೇ ವಾರದಲ್ಲಿ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ನಾಯಕ ಲಾಯರ್ ಪಾತ್ರ ಆಗಿರುವುದರಿಂದ ವಕೀಲ ಬಾಂದವರು ಕುತೂಹಲದಿಂದ ಕಾಯುತ್ತಿದ್ದಾರೆ. ’ಸಂಸಾರ ಅಂದ್ಮಲೆ’ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿರುವುದು, ಹಾಡಿನಲ್ಲಿ ಯಾರೂ ಊಹಿಸದ ನೃತ್ಯ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಇದನ್ನೂ ಓದಿ: ‘Lockup’ ಶೋಗೆ ಬರುವಂತೆ ವಿಲ್ ಸ್ಮಿತ್‍ಗೆ ಆಫರ್ ಕೊಟ್ಟ ಕ್ವಿನ್ ಕಂಗನಾ

    ’ದಿಲ್ದಾರ’ ಮತ್ತು ’ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ’ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ, ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ.