Tag: jersey

  • ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ  ಹಿಂದಿದೆ ಕಥೆ

    ಟೀಂ ಇಂಡಿಯಾ ಜರ್ಸಿ ಮೇಲಿನ 3 ಸ್ಟಾರ್‌ಗಳ ಹಿಂದಿದೆ ಕಥೆ

    ಬೆಂಗಳೂರು: ನಾವು ಕ್ರಿಕೆಟ್ ಅಭಿಮಾನಿಗಳು. ಅದರಲ್ಲೂ ಟೀಂ ಇಂಡಿಯಾ ಮ್ಯಾಚ್ ಇದ್ರೆ ಸಾಕು ಎಷ್ಟೇ ಕೆಲಸ ಇದ್ದರೂ ಕೊಂಚ ಬಿಡುವು ಮಾಡಿಕೊಂಡು ಮ್ಯಾಚ್ ನೋಡುತ್ತೇವೆ. ಆದರೆ ಕೆಲವರಿಗೆ ಕೆಲವು ವಿಚಾರಗಳೇ ಗೊತ್ತಿರುವುದಿಲ್ಲ.

    ಟೀಂ ಇಂಡಿಯಾ ಆಟಗಾರರ ಜರ್ಸಿಯ ಎಡಭಾಗದಲ್ಲಿ ಬಿಸಿಸಿಐ ಲೋಗೋ ಇರುತ್ತದೆ. ಅದನ್ನು ನಾವೆಲ್ಲರೂ ನೋಡಿರುತ್ತೇವೆ. ಅದರ ಮೇಲೆ ಮೂರು ಸ್ಟಾರ್‌ಗಳೂ ಇರುತ್ತವೆ. ಆದರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಟೀಂ ಇಂಡಿಯಾ ಆಟಗಾರರ ಜರ್ಸಿಯ ಮೇಲೆ ಎರಡು ಸ್ಟಾರ್ ಮಾತ್ರ ಇದ್ವು. ಹಾಗಾದ್ರೆ ಈ ಸ್ಟಾರ್‌ಗಳು ಏನನ್ನ ಪ್ರತಿನಿಧಿಸುತ್ತವೆ? ಯಾರು ನೀಡುತ್ತಾರೆ ಗೊತ್ತಾ?

    ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ನಡೆಸುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೆಸ್ಟ್ ವರ್ಲ್ಡ್ ಚಾಂಪಿಯನ್‍ಶಿಪ್ ಕೂಡ ಆರಂಭಿಸಿದೆ. ಈ ಪೈಕಿ ಟೀಂ ಇಂಡಿಯಾ ಎರಡು ಬಾರಿ ಏಕದಿನ ವಿಶ್ವಕಪ್ ಹಾಗೂ ಒಂದು ಬಾರಿ ಟಿ20 ವಿಶ್ವಕಪ್ ಗೆದ್ದುಗೊಂಡಿದೆ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಅದಾದ 28 ವರ್ಷಗಳ ಬಳಿಕ ಅಂದ್ರೆ 2011ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಈ ಸಾಧನೆ ಮಾಡಿತ್ತು. ಅಷ್ಟೇ ಅಲ್ಲದೆ 2007ರಲ್ಲಿ ಐಸಿಸಿ ಆರಂಭಿಸಿದ್ದ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಭಾರತ ಧೋನಿ ನಾಯಕತ್ವದಲ್ಲಿ ತನ್ನ ಮುಡಿಗೆ ಏರಿಸಿಕೊಂಡಿತ್ತು.

    ಇದನ್ನೆಲ್ಲ ಯಾಕೆ ತಿಳಿಯಬೇಕು ಗೊತ್ತಾ? ಟೀಂ ಇಂಡಿಯಾ ಜರ್ಸಿ ಮೇಲೆ ಇರುವ ಸ್ಟಾರ್ ಗಳಿಗೂ ವಿಶ್ವಕಪ್ ಚಾಂಪಿಯನ್‍ಶಿಪ್‍ಗೂ ನಂಟಿದೆ. ಹೌದು, ಐಸಿಸಿ ನಡೆಸುವ ಎರಡು ಮಾದರಿಯ ವಿಶ್ವಕಪ್‍ನಲ್ಲಿ ಭಾರತ ಇದುವರೆಗೂ ಮೂರು ಬಾರಿ ಚಾಂಪಿಯನ್‍ಶಿಪ್ ಆಗಿದೆ. ಹೀಗಾಗಿ ಮೂರು ಸ್ಟಾರ್‌ಗಳು ಟೀಂ ಇಂಡಿಯಾ ಜರ್ಸಿ ಮೇಲಿವೆ.

    ಹಾಗಾದ್ರೆ 2019ರಲ್ಲಿ ಇಂಗ್ಲೆಂಡ್‍ನಲ್ಲಿ ನಡೆದ ಏಕದಿನ ವಿಶ್ವಕಪ್ ವೇಳೆ ಭಾರತದ ಆಟಗಾರರು ಎರಡು ಸ್ಟಾರ್‌ಗಳಿರುವ ಜರ್ಸಿಯನ್ನು ಧರಿಸಿದ್ದು ಯಾಕೆ ಗೊತ್ತಾ? ಟೀಂ ಇಂಡಿಯಾ ಇದುವೆರೆಗೂ ಎರಡು ಬಾರಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿದೆ. ಹೀಗಾಗಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಆಟಗಾರರು ಎರಡು ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಇದೇ ಸಮಯದಲ್ಲಿ ಐದು ಬಾರಿ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಆಟಗಾರರು 5 ಸ್ಟಾರ್ ಇದ್ದ ಜರ್ಸಿ ಧರಿಸಿದ್ದರು. ಎರಡು ಬಾರಿ ಚಾಂಪಿಯನ್ ಗರಿಮೆ ಪಡೆದಿರುವ ವೆಸ್ಟ್ ಇಂಡೀಸ್ ತಂಡದ ಆಟಗಾರರು 2 ಸ್ಟಾರ್ ಹಾಗೂ ತಲಾ ಒಂದು ಬಾರಿ ಚಾಂಪಿಯನ್ ಆಗಿರುವ ಶ್ರೀಲಂಕಾ ಮತ್ತು ಪಾಕಿಸ್ತಾನದ ಆಟಗಾರರು ಒಂದು ಸ್ಟಾರ್ ಹೊಂದಿದ್ದ ಜರ್ಸಿ ಧರಿಸಿದ್ದರು.

  • ಶೂಟಿಂಗ್ ಸೆಟ್‍ನಲ್ಲಿ ಶಾಹಿದ್ ಕಪೂರ್‌ಗೆ ಗಂಭೀರ ಗಾಯ – ಮುಖಕ್ಕೆ 13 ಹೊಲಿಗೆ

    ಶೂಟಿಂಗ್ ಸೆಟ್‍ನಲ್ಲಿ ಶಾಹಿದ್ ಕಪೂರ್‌ಗೆ ಗಂಭೀರ ಗಾಯ – ಮುಖಕ್ಕೆ 13 ಹೊಲಿಗೆ

    ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ಶೂಟಿಂಗ್ ಸೆಟ್‍ನಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ಮುಖಕ್ಕೆ 13 ಹೊಲಿಗೆ ಹಾಕಲಾಗಿದೆ.

    ಶಾಹಿದ್ ತೆಲುಗಿನ ‘ಜೆರ್ಸಿ’ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ನಡೆಸುತ್ತಿದ್ದಾಗ ಶಾಹಿದ್ ಅವರ ಮುಖಕ್ಕೆ ಗಂಭೀರವಾಗಿ ಗಾಯವಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಈ ವಿಷಯ ತಿಳಿದ ಶಾಹಿದ್ ಪತ್ನಿ ಮೀರಾ ರಜ್‍ಪುತ್ ಕೂಡಲೇ ಚಂಢೀಗಢ್‍ಗೆ ತೆರಳಿದ್ದಾರೆ.

    ಜೆರ್ಸಿ ಸಿನಿಮಾದಲ್ಲಿ ಶಾಹಿದ್ ಕ್ರಿಕೆಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಚಂಡೀಗಢ್‍ನಲ್ಲಿ ನಡೆಯುತ್ತಿದ್ದು, ಈ ಚಿತ್ರಕ್ಕಾಗಿ ಶಾಹಿದ್ ಹಗಲು-ರಾತ್ರಿ ಕಷ್ಟಪಡುತ್ತಿದ್ದಾರೆ. ಪ್ರತಿದಿನದಂದೇ ಶಾಹಿದ್ ಇಂದು ಕೂಡ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದರು. ಚಿತ್ರದ ಸೀನ್‍ವೊಂದರಲ್ಲಿ ಶಾಹಿದ್ ಕ್ರಿಕೆಟ್ ಆಡಬೇಕಿತ್ತು. ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಅವರ ಮುಖಕ್ಕೆ ತಾಗಿದೆ. ಪರಿಣಾಮ ಶಾಹಿದ್ ಅವರ ಲೋವರ್ ಲಿಪ್ ಕಟ್ ಆಗಿದ್ದು, ತುಂಬಾ ರಕ್ತ ಬಂದಿದೆ.

    ವರದಿಗಳ ಪ್ರಕಾರ ಶಾಹಿದ್ ಅವರ ಆರೋಗ್ಯದ ಸ್ಥಿತಿ ಈಗ ಸುಧಾರಿಸುತ್ತಿದೆ. ಚೆಂಡು ಬಿದ್ದು ಅವರ ಮುಖ ಊದಿಕೊಂಡಿದ್ದು, ಆ ಊತ ಕಡಿಮೆಯಾಗಲು ಸ್ವಲ್ಪ ದಿನ ಬೇಕಾಗುತ್ತದೆ. ಅಲ್ಲದೆ ಕೆಲವು ದಿನಗಳ ಕಾಲ ಶಾಹಿದ್ ಚಿತ್ರೀಕರಣಕ್ಕೆ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಐದು ದಿನಗಳ ನಂತರ ಶಾಹಿದ್ ಅವರ ಗಾಯ ಹೇಗಿದೆ ಎಂದು ತಿಳಿಯಲಿದೆ ಎಂದು ಹೇಳಲಾಗುತ್ತಿದೆ.

  • ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟನೆ?

    ಶಾಹಿದ್ ಕಪೂರ್ ಜೊತೆ ರಶ್ಮಿಕಾ ಮಂದಣ್ಣ ನಟನೆ?

    ಮುಂಬೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್ ಸ್ಟಾರ್ ನಟ ಶಾಹಿದ್ ಕಪೂರ್ ಅವರ ಜೊತೆ ನಟಿಸಲಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ.

    ಶಾಹಿದ್ ಕಪೂರ್ ತೆಲುಗಿನಲ್ಲಿ ನಟ ನಾನಿ ನಟಿಸಿದ ‘ಜೆರ್ಸಿ’ ಸಿನಿಮಾದ ಹಿಂದಿ ರಿಮೇಕ್‍ನಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಹರಿದಾಡುತ್ತಿದೆ. ಈ ಚಿತ್ರಕ್ಕೆ ಶಾಹಿದ್‍ಗೆ ನಾಯಕಿ ಆಗಿ ನಟಿಸಲು ರಶ್ಮಿಕಾ ಅವರಿಗೆ ಆಫರ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

    ಚಿತ್ರತಂಡ ಈಗಾಗಲೇ ರಶ್ಮಿಕಾ ಮಂದಣ್ಣ ಅವರ ಬಳಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ರಶ್ಮಿಕಾ ಅವರು ಈ ಸಿನಿಮಾ ಮಾಡುವುದರ ಕಡೆ ಒಲವು ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಮಂದಣ್ಣ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    ಶಾಹಿದ್ 2017ರಲ್ಲಿ ತೆಲುಗಿನಲ್ಲಿ ಬಿಡುಗಡೆಗೊಂಡಿದ್ದ `ಅರ್ಜುನ್ ರೆಡ್ಡಿ’ ಚಿತ್ರದ ಹಿಂದಿ ರಿಮೇಕ್ ‘ಕಬೀರ್ ಸಿಂಗ್’ ಸಿನಿಮಾದಲ್ಲಿ ನಟಿಸಿದ್ದರು. ಶಾಹಿದ್‍ಗೆ ನಾಯಕಿಯಾಗಿ ಕಿಯಾರ ಅದ್ವಾನಿ ನಟಿಸಿದ್ದರು. ಈ ಚಿತ್ರ 200 ಕೋಟಿ ರೂ. ಗಳಿಸಿ ಬಾಲಿವುಡ್‍ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.

    ರಶ್ಮಿಕಾ ಮಂದಣ್ಣ ಕೊನೆಯದಾಗಿ ನಟ ವಿಜಯ್ ದೇವರಕೊಂಡ ಜೊತೆ `ಡಿಯರ್ ಕಾಮ್ರೆಡ್’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದು, ಭರತ್ ಕಮ್ಮಾ ಈ ಚಿತ್ರವನ್ನು ನಿರ್ದೇಶಿಸಿದ್ದರು.

  • ಟೀಂ ಇಂಡಿಯಾ ಜೆರ್ಸಿ ಮೇಲೆ ಬೆಂಗ್ಳೂರು ಮೂಲದ ಕಂಪನಿ ಲೋಗೋ

    ಟೀಂ ಇಂಡಿಯಾ ಜೆರ್ಸಿ ಮೇಲೆ ಬೆಂಗ್ಳೂರು ಮೂಲದ ಕಂಪನಿ ಲೋಗೋ

    ಮುಂಬೈ: ಟೀಂ ಇಂಡಿಯಾ ಕ್ರಿಕೆಟ್ ಆಟಗಾರರು ಧರಿಸುತ್ತಿದ್ದ ಬ್ಲೂ ಜೆರ್ಸಿ ಮೇಲೆ ಇತ್ತೀಚಿನ ಸಮಯದವರೆಗೂ ಕಾಣಿಸಿಕೊಳ್ಳುತ್ತಿದ್ದ ಮೊಬೈಲ್ ಸಂಸ್ಥೆ ಒಪ್ಪೋ ಲೋಗೋ ಕಾಣೆಯಾಗಲಿದೆ. ಈ ಸ್ಥಳದಲ್ಲಿ ಬೆಂಗಳೂರು ಮೂಲದ ಶಿಕ್ಷಣಕ್ಕೆ ಸಂಬಂಧಿಸಿದ ಬೈಜು’ಸ್ ಲರ್ನಿಂಗ್ ಆ್ಯಪ್ ಲೋಗೋ ಕಾಣಿಸಿಕೊಳ್ಳಲಿದೆ.

    2017 ರಲ್ಲಿ ಟೀಂ ಇಂಡಿಯಾ ಜೆರ್ಸಿ ಮೇಲೆ ಕಾಣುವ ಬ್ರಾಂಡ್ ಹಕ್ಕುಗಳನ್ನು 5 ವರ್ಷಗಳ ಅವಧಿಗೆ ಒಪ್ಪೋ ಸಂಸ್ಥೆ ಭಾರೀ ಬೆಲೆಗೆ ಖರೀದಿ ಮಾಡಿತ್ತು. ಆದರೆ ಒಪ್ಪೋ ಸಂಸ್ಥೆಯ ಒಪ್ಪಂದ ಇನ್ನೂ 2 ವರ್ಷ ಬಾಕಿ ಇರುವ ಸಂದರ್ಭದಲ್ಲೇ ಸಂಸ್ಥೆ ಒಪ್ಪಂದದಿಂದ ಹೊರ ನಡೆಯಲು ತೀರ್ಮಾನಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಂದಹಾಗೆ, ಒಪ್ಪೋ ಸಂಸ್ಥೆ 2017 ರಲ್ಲಿ ನಡೆದ ಹರಾಜಿನಲ್ಲಿ ಸುಮಾರು 1,079 ಕೋಟಿ ರೂ. ನೀಡಿ ಈ ಹಕ್ಕುಗಳನ್ನು ಪಡೆದುಕೊಂಡಿತ್ತು. ಆದರೆ ಈ ಮೊತ್ತವನ್ನು ಬಿಸಿಸಿಐ ಸಲ್ಲಿಕೆ ಮಾಡುವುದು ಕಷ್ಟಸಾಧ್ಯವಾದ ಹಿನ್ನೆಲೆಯಲ್ಲಿ ಸಂಸ್ಥೆ 2 ವರ್ಷಗಳ ಮುನ್ನವೇ ಒಪ್ಪಂದದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

    ಒಪ್ಪೋ ಒಪ್ಪಂದಿಂದ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದ 2022ರ ಮಾರ್ಚ್ ತಿಂಗಳವರೆಗೂ ಬೈಜು’ಸ್ ಸಂಸ್ಥೆಯ ಲೋಗೋ ಕಾಣಿಸಲಿದೆ. ಸೆಪ್ಟೆಂಬರ್ 15 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾಗಲಿರುವ ಟೂರ್ನಿಯ ವೇಳೆಗೆ ಈ ಬದಲಾವಣೆ ಆಗಲಿದೆ. ಬೈಜುಸ್ ತಂತ್ರಜ್ಞಾನ ಮತ್ತು ಆನ್‍ಲೈನ್ ಬೋಧನಾ ಸಂಸ್ಥೆಯಾಗಿದೆ.

  • ಯಾರಿಗೆ ಸಿಗಲಿದೆ ಧೋನಿ ನಂ.7 ಜೆರ್ಸಿ?

    ಯಾರಿಗೆ ಸಿಗಲಿದೆ ಧೋನಿ ನಂ.7 ಜೆರ್ಸಿ?

    ಮುಂಬೈ: ಮುಂದಿನ ತಿಂಗಳ ಮೊದಲ ವಾರದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ನಡುವೆ ಆರಂಭವಾಗಲಿರುವ ಆ್ಯಷಸ್ ಸೀರಿಸ್‍ನಲ್ಲಿ ಕ್ರಿಕೆಟ್ ಆಟಗಾರರು ಮೊದಲ ಬಾರಿಗೆ ನಂಬರ್ ಹಾಗೂ ತಮ್ಮ ಹೆಸರು ಇರುವ ಬಿಳಿ ಜೆರ್ಸಿಗಳನ್ನು ಧರಿಸಿ ಕಣಕ್ಕೆ ಇಳಿಯಲಿದ್ದಾರೆ. ಟೆಸ್ಟ್ ಕ್ರಿಕೆಟನ್ನು ಮತ್ತಷ್ಟು ಆಸಕ್ತಿಕರವಾಗಿ ಮಾಡಲು ಐಸಿಸಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಇದರೊಂದಿಗೆ ಭಾರತ ಹಾಗೂ ವೆಸ್ಟ್ ಇಂಡೀಸ್ ಟೂರ್ನಿಯಲ್ಲೂ ಇತ್ತಂಡಗಳು ಇದೇ ಮಾದರಿಯಲ್ಲಿ ಕಣಕ್ಕೆ ಇಳಿಯಲಿವೆ.

    ಆಗಸ್ಟ್ 22 ರಿಂದ ಟೀಂ ಇಂಡಿಯಾ – ವೆಸ್ಟ್ ಇಂಡೀಸ್ ಟೆಸ್ಟ್ ಟೂರ್ನಿ ಆರಂಭವಾಗಲಿದ್ದು, ಏಕದಿನ ಮತ್ತು ಟಿ20 ಮಾದರಿಯಲ್ಲೇ ಆದೇ ನಂಬರ್ ನೊಂದಿಗೆ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ತಂಡದ ನಾಯಕರಾದ ಕೊಹ್ಲಿ 18, ರೋಹಿತ್ 45ನೇ ನಂಬರಿನ ಜೆರ್ಸಿ ಧರಿಸುವ ನಿರೀಕ್ಷೆ ಇದೆ. ಆದರೆ ಟೆಸ್ಟ್ ಕ್ರಿಕೆಟ್‍ಗೆ 2014 ರಲ್ಲಿ ಧೋನಿ ನಿವೃತ್ತಿ ಹೇಳಿರುವುದರಿಂದ ಅವರು ಧರಿಸುತ್ತಿದ್ದ ನಂ.7 ಜೆರ್ಸಿಯನ್ನು ಯಾರು ಪಡೆಯಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

    ಇದರ ನಡುವೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರೊಬ್ಬರು ಧೋನಿ ಅವರ ನಂ. 7ರ ಜೆರ್ಸಿಯನ್ನು ಯಾರಿಗೂ ನೀಡುವುದಿಲ್ಲ ಎಂದಿದ್ದಾರೆ. ಈ ನಂಬರ್ ಗೆ ಹಾಗೂ ಧೋನಿಗೆ ಅವಿನಾಭವ ಸಂಬಂಧ ಇದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಆದ್ದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೇ ಯಾವುದೇ ನಂಬರ್ ಗೆ ಅಧಿಕೃತವಾಗಿ ನಿವೃತ್ತಿ ಹೇಳಲು ಅಧಿಕಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಈ ಹಿಂದೆ ಸಚಿನ್ ತೆಂಡೂಲ್ಕರ್ ಅವರ ನಂ.10 ಜೆರ್ಸಿಯನ್ನು ಶಾದೂಲ್ ಠಾಕೂರ್ ಧರಿಸಿದ್ದ ಸಂದರ್ಭದಲ್ಲಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪರಿಣಾಮ ಈ ಏಕದಿನ ಹಾಗೂ ಟಿ20 ಮಾದರಿಯಲ್ಲಿ ನಂ.10 ನ್ನು ಯಾರಿಗೂ ನೀಡದೆ ಬಿಸಿಸಿಐ ಅನಧಿಕೃತವಾಗಿ ನಿವೃತ್ತಿ ನೀಡಿದೆ.

  • ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಕಿತ್ತಳೆ ಬಣ್ಣದ ಜರ್ಸಿ ತೊಟ್ಟ ಟೀಂ ಇಂಡಿಯಾ

    ಲಂಡನ್: ವಿಶ್ವಕಪ್‍ನಲ್ಲಿ ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಭಾರತ ಕಿತ್ತಳೆ ಬಣ್ಣದ ಜರ್ಸಿ ತೊಟ್ಟು ಆಡಲಿದೆ.

    ಹೊಸ ಜರ್ಸಿ ತೊಟ್ಟ ಟೀಂ ಇಂಡಿಯಾ ಆಟಗಾರರ ಫೋಟೋವನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೊಸ ಜರ್ಸಿ ತೊಟ್ಟು ಆಟಗಾರು ಪೋಸ್ ನೀಡಿರುವ ಫೋಟೋಗಳು ತುಂಬಾ ವೈರಲ್ ಆಗಿವೆ.

    ಹೊಸ ಜರ್ಸಿತೊಟ್ಟ ತಮ್ಮ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಭಾರತದ ಸ್ಪಿನ್ನರ್ ಯಜುವೇಂದ್ರ ಚಹಲ್ ಅವರು “ಹೊಸ ಜರ್ಸಿಯಲ್ಲಿ ಮಿಂಚಲು ಸಿದ್ಧ” ಎಂದು ಬರೆದಿದ್ದಾರೆ. ಇನ್ನೂ ಕೆ.ಎಲ್ ರಾಹುಲ್ ಜೊತೆ ಹಿಮ್ಮುಖವಾಗಿ ಪೋಸ್ ನೀಡಿ ಫೋಟೋ ಹಾಕಿರುವ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಹೊಸ ಜರ್ಸಿಯಲ್ಲಿ ಮುಂದಿನ ಪಂದ್ಯಕ್ಕೆ ರೆಡಿ ಎಂದು ಬರೆದುಕೊಂಡಿದ್ದಾರೆ.

    ಎಂ.ಎಸ್ ಧೋನಿ, ಬೌಲರ್ ಭುವನೇಶ್ವರ್ ಕುಮಾರ್, ಕೇದಾರ್ ಜಾಧವ್ ಮತ್ತು ದಿನೇಶ್ ಕಾರ್ತಿಕ್ ಅವರ ಫೋಟೋವನ್ನು ಬಿಸಿಸಿಐ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದೆ. ಅದರಂತೆ ಐಸಿಸಿ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು, ವಿಶೇಷ ಸಮಯದಲ್ಲಿ ವಿಶೇಷ ಜರ್ಸಿ, ಇಂಡಿಯಾ ಈ ಜರ್ಸಿಯನ್ನು ಧರಿಸಿ ಇಂಗ್ಲೆಂಡ್ ವಿರುದ್ಧ ಆಡಲಿದೆ ಎಂದು ಬರೆದುಕೊಂಡಿದೆ.

    https://www.instagram.com/p/BzQzO8EArLx/

    ಹೊಸ ಜರ್ಸಿ ಯಾಕೆ?
    ಐಸಿಸಿ ನಿಯಮದಂತೆ 2 ತಂಡಗಳು ಒಂದೇ ಬಣ್ಣದ ಜರ್ಸಿ ಧರಿಸುವಂತಿಲ್ಲ. ಎರಡೂ ತಂಡಗಳು ಒಂದೇ ವರ್ಣದ ಜರ್ಸಿ ತೊಟ್ಟು ಮೈದಾನಕ್ಕೆ ಇಳಿದರೆ ಪ್ರೇಕ್ಷಕರಿಗೆ ಗೊಂದಲ ಉಂಟಾಗುತ್ತದೆ. ಈ ನಿಟ್ಟಿನಲ್ಲಿ ಒಂದು ತಂಡವು ತನ್ನ ಜರ್ಸಿಯನ್ನು ಬದಲಾಯಿಸಬೇಕಾಗುತ್ತದೆ.

    ಫುಟ್ಬಾಲ್‍ನಲ್ಲಿರುವ `ಹೋಮ್’ ಮತ್ತು `ಅವೇ’ ನಿಯಮವನ್ನು ಕ್ರಿಕೆಟ್‍ಗೆ ಅಳವಡಿಸಲಾಗಿದೆ. ಈ ನಿಯಮದ ಪ್ರಕಾರ ಅತಿಥೇಯ ತಂಡ ಇಂಗ್ಲೆಂಡ್ ತನ್ನದೇ ಜರ್ಸಿಯನ್ನು ತೊಟ್ಟು ಆಡಲಿದ್ದು, ಕೊಹ್ಲಿ ಪಡೆ ಬೇರೆ ಬಣ್ಣದ ಜರ್ಸಿ ಧರಿಸಬೇಕಿದೆ. ಹೀಗಾಗಿ ಭಾರತ ನೀಲಿಯ ಬದಲು ಕೇಸರಿ ಬಣ್ಣ ಇರುವ ಜರ್ಸಿಯನ್ನು ಧರಿಸಲಿದೆ.

    ವಿಪಕ್ಷಗಳಿಂದ ಟೀಕೆ:
    ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಕೇಸರಿ ಬಣ್ಣದ ಜರ್ಸಿಗೆ ಆಕ್ಷೇಪ ಎತ್ತಿದೆ. ಈ ಬಗ್ಗೆ ಅಸಮಾಧಾನ ಹೊರ ಹಾಕಿರುವ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕ ಅಬು ಅಸಿಮ್ ಅಜ್ಮಿ ಅವರು, ಬಿಸಿಸಿಐ ನಿರ್ಧಾರದ ಹಿಂದೆ ಕೇಂದ್ರ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಕೇಸರಿಮಯವಾಗಿಸಲು ಹೊರಟಿದ್ದಾರೆ. ಭಾರತದ ತ್ರಿವರ್ಣ ಧ್ವಜವನ್ನು ವಿನ್ಯಾಸಗೊಳಿಸಿದ್ದು ಒಬ್ಬ ಮುಸ್ಲಿಂ. ತ್ರಿವರ್ಣ ಧ್ವಜದ ಮೂರು ಬಣ್ಣಗಳಲ್ಲಿ ಕೇಸರಿಯನ್ನೇ ಆಯ್ಕೆ ಮಾಡಿದ್ದು ಯಾಕೆ? ಜರ್ಸಿಯಲ್ಲಿ ಮೂರು ವರ್ಣಗಳನ್ನು ಬಳಸಿದ್ದರೆ ಉತ್ತಮವಾಗಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಹೇಳಿಕೆಗಳಿಗೆ ತಿರುಗೇಟು ನೀಡಿದ ಟೀಂ ಇಂಡಿಯಾ ಅಭಿಮಾನಿಗಳು ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ಭಾರತದ ಫುಟ್‍ಬಾಲ್ ಮತ್ತು ಹಾಕಿ ಆಟಗಾರರು ಕೇಸರಿ ಬಣ್ಣದ ಜರ್ಸಿಯಲ್ಲಿ ಆಡಿದ್ದಾರೆ. ಈ ವೇಳೆ ಆಕ್ಷೇಪ ಎತ್ತದ ರಾಜಕೀಯ ನಾಯಕರು ಈಗ ಪ್ರಚಾರಕ್ಕಾಗಿ ವಿವಾದವನ್ನು ಎತ್ತಿದ್ದಾರೆ ಎಂದು ಟೀಕಿಸಿದ್ದಾರೆ.

  • ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

    ಇಂಡೋ-ಪಾಕ್ ಪಂದ್ಯ- ಕೆನಡಾ ದಂಪತಿಗಳ ಜೆರ್ಸಿಗೆ ನೆಟ್ಟಿಗರು ಫಿದಾ

    ನವದೆಹಲಿ: ಭಾನುವಾರ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕ್ ನಡುವಿನ ಪಂದ್ಯ ನೋಡಲು ಅಭಿಮಾನಿಗಳು ತಮ್ಮದೇ ವಿನೂತನ ಶೈಲಿಯಲ್ಲಿ ಬಂದು ತಮ್ಮ ತಮ್ಮ ತಂಡಗಳನ್ನು ಹುರಿದುಂಬಿಸಿದರು.

    ಅದರಂತೆ ಕೆನಡಾ ದಂಪತಿ ಧರಿಸಿದ್ದ ವಿನೂತನ ಶೈಲಿಯ ಜೆರ್ಸಿ ಈಗ ಎಲ್ಲರ ಗಮನ ಸೆಳೆದಿದೆ. ಪಂದ್ಯವನ್ನು ವಿಕ್ಷೀಸಲು ಬಂದಿದ್ದ ಕೆನಡಾ ಜೋಡಿ ಪಾಕಿಸ್ತಾನ ಮತ್ತು ಭಾರತ ಎರಡು ದೇಶಗಳನ್ನು ಪ್ರತಿನಿಧಿಸುವ ಉಡುಪನ್ನು ಧರಿಸಿ ಕ್ರೀಡಾಭಿಮಾನ ಮೆರೆದಿದ್ದಾರೆ.

    ದಂಪತಿಗಳು ಅವರ ಟಿ-ಶರ್ಟ್‍ನಲ್ಲಿ ಅರ್ಧದಷ್ಟು ಭಾಗ ಭಾರತದ ಜೆರ್ಸಿಯಾದರೆ ಇನ್ನುಳಿದ ಅರ್ಧದಷ್ಟು ಭಾಗ ಪಾಕಿಸ್ತಾನ ಜೆರ್ಸಿ ಇರುವ ಟಿ-ಶರ್ಟ್ ಧರಿಸಿ ಬಂದಿದ್ದರು. ಈ ಮೂಲಕ ಎರಡು ರಾಷ್ಟ್ರಗಳ ಮೇಲೆ ತಮಗಿರುವ ಅಭಿಮಾನವನ್ನು ತೋರಿದ್ದಾರೆ.

    ಈ ಫೋಟೋವನ್ನು ಲಂಡನ್ ಮೂಲದ ಲಕ್ಷ್ಮಿ ಕೌಲ್ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡಿದ್ದು ಈಗ ಈ ಫೋಟೋ ಸಖತ್ ವೈರಲ್ ಆಗಿದೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ಟ್ವೀಟ್‍ಗೆ 2,500 ರೀಟ್ವೀಟ್‍ಗಳು ಮತ್ತು 13,305 ಲೈಕ್‍ಗಳು ಬಂದಿವೆ.

    ಈ ದಂಪತಿಗಳ ಫೋಟೋ ಹಾಕಿದ ಲಕ್ಷ್ಮಿ ಕೌಲ್ ಅವರು, ಈ ವ್ಯಕ್ತಿ ಪಾಕಿಸ್ತಾನ ಮೂಲದವನು ಮತ್ತು ಅವನ ಹೆಂಡತಿ ಭಾರತ ಮೂಲದವಳು ಎಂದು ಬರೆದುಕೊಂಡಿದ್ದಾರೆ. ಈ ದಂಪತಿಗಳು ಕ್ರಿಕೆಟ್ ಆಟವನ್ನು ಆಚರಿಸಲು ಬಂದಿದ್ದಾರೆ. ಕ್ರಿಕೆಟ್ ಆಟದ ನಿಜವಾದ ಸಾರವನ್ನು ಪ್ರಪಂಚಕ್ಕೆ ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ.

    ಈ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೇವಲ 113 ಎಸೆತಗಳಿಗೆ ಭರ್ಜರಿ 140 (14 ಬೌಂಡರಿ, 3 ಸಿಕ್ಸರ್) ಬಾರಿಸಿದ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಸ್ಥಾನಕ್ಕೆ ಭಾಜನರಾದರು.

  • ಧೋನಿ ಜೆರ್ಸಿ ಪ್ರದರ್ಶಿಸಿದ ಕೋಚ್ ರವಿಶಾಸ್ತ್ರಿ

    ಧೋನಿ ಜೆರ್ಸಿ ಪ್ರದರ್ಶಿಸಿದ ಕೋಚ್ ರವಿಶಾಸ್ತ್ರಿ

    ಲಂಡನ್: ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ಕದನಕ್ಕೆ ಅಭಿಮಾನಿಗಳು ಕಾದು ಕಳಿತು ನಿರಾಸೆ ಅನುಭವಿಸಿದ್ರು. ಆದರೆ ಈ ವೇಳೆ ಅಚ್ಚರಿಯ ಘಟನೆಯೊಂದು ನಡೆದಿದ್ದು, ಕೋಚ್ ರವಿಶಾಸ್ತ್ರಿ ಅವರು ಅಭಿಮಾನಿಗಳಿಗೆ ಧೋನಿ ಜೆರ್ಸಿ ತೋರಿಸಿದ್ದಾರೆ.

    ನಾಟಿಂಗ್ ಹ್ಯಾಮ್ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಬದ್ಧ ಅಭಿಮಾನಿಗಳು ಮಳೆಯಿಂದ ಟಾಸ್ ತಡವಾದ ಕಾರಣ ಮೊದಲು ಕಾದು ಕಳಿತ್ತಿದ್ದರು. ಆದರೆ ಮಳೆ ನಿಲ್ಲದ ಕಾರಣ ಪಂದ್ಯ ರದ್ದಾಗಿತ್ತು. ಈ ವೇಳೆ ಅಭಿಮಾನಿಗಳು ಧೋನಿ ಧೋನಿ ಎಂದು ಕೂಗಿದ್ದಾರೆ. ಇತ್ತ ಆಟಗಾರರ ಕೊಠಡಿಯ ಬಾಲ್ಕನಿಗೆ ಬಂದ ಕೋಚ್ ರವಿಶಾಸ್ತ್ರಿ ಅವರು ಧೋನಿ ಜೆರ್ಸಿ ತೋರಿಸಿದ್ದರು.

    ಕೋಚ್ ಜೆರ್ಸಿ ತೋರಿಸಿದ ಸಂದರ್ಭದಲ್ಲಿ ತಂಡದ ಇತರೇ ಎಲ್ಲಾ ಆಟಗಾರರು ಹತ್ತಿರದಲ್ಲೇ ಇದ್ದರು ಕೂಡ ಧೋನಿ ಎಲ್ಲಿಗೆ ತೆರಳಿದ್ದರು ಎಂಬುವುದು ತಿಳಿದು ಬಂದಿಲ್ಲ. ಆದರೆ ಆ ಬಳಿಕ ಧೋನಿ ಬಾಲ್ಕನಿಗೆ ಬಂದಿದ್ದರು, ಧೋನಿ ಕಂಡ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ. ಇತ್ತ ಪಂದ್ಯ ರದ್ದಾಗಿದ್ದ ಕಾರಣ ಎರಡು ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಮಳೆಯಿಂದ ಕೊಚ್ಚಿ ಹೋದ 4ನೇ ಪಂದ್ಯ ಇದಾಗಿದೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ನಂ. 1 ಪಟ್ಟ ಪಡೆದಿದ್ದು, ಟೀಂ ಇಂಡಿಯಾ 5 ಅಂಕ ಪಡೆದು 3ನೇ ಸ್ಥಾನ ಪಡೆದಿದ್ದಾರೆ.

    ಪಂದ್ಯದ ಬಳಿಕ ಮಾತನಾಡಿದ ನಾಯಕ ಕೊಹ್ಲಿ, ಮಳೆಯಿಂದ ಪಂದ್ಯ ರದ್ದಾಗಿದ್ದು, ಟೂರ್ನಿಯ ಆರಂಭದಲ್ಲೇ ಈ ರೀತಿ ಆಗಿದ್ದು ದುರದೃಷ್ಟಕರ. ಹವಾಮಾನವನ್ನು ನಮ್ಮಿಂದ ತಡೆಯಲು ಸಾಧ್ಯವಿಲ್ಲ ಎಂದರು.

    https://twitter.com/msdfansofficial/status/1139227096075476992

  • ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ಸಮಂತಾ ಸ್ಥಾನ ಆಕ್ರಮಿಸಿಕೊಂಡರಾ ಕನ್ನಡತಿ ಶ್ರದ್ಧಾ?

    ನ್ನಡ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದುಕೊಂಡ ನಟಿಯರು ಪರಭಾಷೆಗಳಿಗೆ ಹೋದ ಸುದ್ದಿಗಳು ಆಗಾಗ ಹೊರ ಬೀಳುತ್ತಲೇ ಇರುತ್ತವೆ. ಆದರೆ ಹಾಗೆ ಬೇರೆ ಭಾಷೆಗಳಿಗೆ ಹೋಗಿ ನೆಲೆ ನಿಂತು ಆ ಮೂಲಕವೇ ಸುದ್ದಿ ಮಾಡುವವರು ಕೊಂಚ ವಿರಳ. ಇದೀಗ ಕನ್ನಡದಲ್ಲಿ ಪ್ರತಿಭಾವಂತ ನಟಿಯಾಗಿ ಹೆಸರು ಮಾಡಿರೋ ಶ್ರದ್ಧಾ ಶ್ರೀನಾಥ್ ಆ ವಿರಳರ ಸಾಲಿಗೆ ಸೇರಿಕೊಂಡಂಥಾ ಸುದ್ದಿಯೊಂದು ಹರಿದಾಡಲು ಶುರುವಿಟ್ಟಿದೆ!

    ಶ್ರದ್ಧಾ ಶ್ರೀನಾಥ್ ಇದೀಗ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿ ಹೊರ ಹೊಮ್ಮಿದ್ದಾರೆ. ಶ್ರದ್ಧಾ ನಾಯಕಿಯಾಗಿ ಅಭಿನಯಿಸಿದ್ದ ಜೆರ್ಸಿ ಬಿಡುಗಡೆಗೊಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿನ ಪಾತ್ರ, ನಟನೆ ಕಂಡು ತೆಲುಗು ಪ್ರೇಕ್ಷಕರೂ ಶ್ರದ್ಧಾ ಅವರನ್ನು ಮೆಚ್ಚಿ ಒಪ್ಪಿಕೊಂಡಿದ್ದಾರೆ.

    ಹೀಗೆ ಜೆರ್ಸಿ ಚಿತ್ರ ಗೆಲುವಿನತ್ತ ನಾಗಾಲೋಟ ಆರಂಭಿಸಿರುವ ಘಳಿಗೆಯಲ್ಲಿಯೇ ಶ್ರದ್ಧಾ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈಗ ಹರಿದಾಡುತ್ತಿರೋ ಸುದ್ದಿಯೊಂದನ್ನು ಆಧರಿಸಿ ಹೇಳೋದಾದರೆ ಶ್ರದ್ಧಾ ವಿಶಾಲ್ ನಟನೆಯ ಚಿತ್ರವೊಂದಕ್ಕೂ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ವಿಶಾಲ್ ಈ ಹಿಂದೆ ಅಭಿಮನ್ಯುಡು ಎಂಬ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಅಭಿಮನ್ಯುಡು ಎಂಬ ಆ ಚಿತ್ರ ಹಿಟ್ ಆಗಿತ್ತು.

    ಇದೀಗ ಆ ಚಿತ್ರದ ಎರಡನೇ ಭಾಗಕ್ಕೆ ತಯಾರಿ ಆರಂಭವಾಗಿದೆ. ಮೊದಲ ಭಾಗದಲ್ಲಿ ವಿಶಾಲ್ ಗೆ ಜೋಡಿಯಾಗಿ ಸಮಂತಾ ನಟಿಸಿದ್ದರು. ಆದರೆ ಈಗ ಶ್ರದ್ಧಾ ಸಮಂತಾ ಜಾಗವನ್ನು ಆವರಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶ್ರದ್ಧಾ ಸಮಂತಾ ವಿರುದ್ಧ ಅದೇನೋ ಮಾತಾಡಿದ್ದಾರೆಂದು ಅಭಿಮಾನಿಗಳು ಕೆಂಡ ಕಾರಿದ್ದರು. ಈಗ ನೋಡಿದರೆ ಸಮಂತಾ ಸ್ಥಾನವನ್ನೇ ಶ್ರದ್ಧಾ ಆವರಿಸಿಕೊಂಡಿದ್ದಾರೆ.

    ಒಟ್ಟಾರೆಯಾಗಿ ಶ್ರದ್ಧಾ ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ಏಕಕಾಲದಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರು ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲಿದೆ. ಅದಾಗಲೇ ಕನ್ನಡದಲ್ಲಿ ಮತ್ತೊಂದಷ್ಟು ಅವಕಾಶಗಳನ್ನು ಪಡೆದುಕೊಂಡಿರೋ ಶ್ರದ್ಧಾ ತೆಲುಗಿನಲ್ಲಿಯೂ ಬಿಡುವಿಲ್ಲದಂತಾಗಿದ್ದಾರೆ.

  • ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯ ವಿಶೇಷತೆಗಳೇನು ಗೊತ್ತಾ?

    ಟೀಂ ಇಂಡಿಯಾ ವಿಶ್ವಕಪ್ ಜೆರ್ಸಿಯ ವಿಶೇಷತೆಗಳೇನು ಗೊತ್ತಾ?

    ಮುಂಬೈ: 2019 ಐಸಿಸಿ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಹೊಸ ವಿನ್ಯಾಸದ ಆಟಗಾರರ ಜರ್ಸಿಯನ್ನು ರಿವೀಲ್ ಮಾಡಿದ್ದು, ತಂಡದ ಆಟಗಾರರು ಜೆರ್ಸಿಯನ್ನು ತೊಟ್ಟು ಪೋಸ್ ಕೊಟ್ಟಿದ್ದಾರೆ.

    ಜೆರ್ಸಿಯಲ್ಲಿ ಮೂರು ವಿಶೇಷ ಸ್ಟಾರ್ ಗಳನ್ನು ನೀಡಲಾಗಿದ್ದು, ಇವು ಭಾರತ ಗೆದ್ದಿರುವ ವಿಶ್ವಕಪ್‍ಗಳ ಸಂಕೇತಗಳಿದೆ. ಜೆರ್ಸಿಯ ಹಿಂದಿನ ಒಳಭಾಗದಲ್ಲಿ ಮೂರು ವಿಶ್ವಕಪ್ ಬಗ್ಗೆ ಮಾಹಿತಿ ಪ್ರಿಂಟ್ ಮಾಡಲಾಗಿದೆ. ಇದರಲ್ಲಿ ವಿಶ್ವಕಪ್ ಗೆದ್ದ ದಿನಾಂಕ ಹಾಗೂ ಸ್ಕೋರ್ ವಿವರಗಳನ್ನು ನೀಡಲಾಗಿದೆ.

    ಜೆರ್ಸಿಯ ಭುಜದ ಭಾಗ ಸ್ಕೈ ಬ್ಲೂ ಬಣ್ಣದಿಂದ ಕೂಡಿದ್ದರೆ, ಎದೆ ಭಾಗ ಡಾರ್ಕ್ ಸ್ಕೈ ಬ್ಲೂ ಬಣ್ಣ ಹೊಂದಿದೆ. ಆದರೆ ಈ ಹಿಂದೆ ಜೆರ್ಸಿ ಮೇಲಿದ್ದ ತ್ರಿವರ್ಣ ಧ್ವಜದ ಚಿಹ್ನೆಯನ್ನು ಕೈ ಬಿಡಲಾಗಿದೆ.

    ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಧೋನಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಜೆರ್ಸಿಯನ್ನು ಅನಾವರಣ ಮಾಡಿದ್ದಾರೆ. ವಿಶೇಷವೆಂದರೆ 1983, 2011 ಏಕದಿನ ವಿಶ್ವಕಪ್ ಹಾಗೂ 2007ರ ಟಿ20 ವಿಶ್ವಕಪ್ ವೇಳೆ ಧರಿಸಿದ್ದ ಜೆರ್ಸಿಯ ಎಲ್ಲಾ ಬಣ್ಣಗಳನ್ನು ಈ ಭಾರಿ ವಿನ್ಯಾಸ ಮಾಡಲಾಗಿದೆ. ಇದು ತಂಡಕ್ಕೆ ಪ್ರೇರಣೆ ಆಗಲಿದೆ ಎಂದು ಮಾಜಿ ನಾಯಕ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.

    ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿ ಟೀಂ ಇಂಡಿಯಾ ಇದ್ದು, ಆಸೀಸ್ ವಿರುದ್ಧ ಏಕದಿನ ಸರಣಿ ತಂಡ ಕಂಬಿನೇಷನ್ ರೂಪಿಸಲು ಸಹಾಯಕವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

    ಇತ್ತೀಷೆಗಷ್ಟೇ ಮುಕ್ತಾಯವಾದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋತಿದ್ದು, ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವಕಪ್ ಟೂರ್ನಿಗೆ ವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಭಾರತ ತನ್ನ ವಿಶ್ವಕಪ್ ಜರ್ನಿಯನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ಆರಂಭಿಸಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv