Tag: jeep

  • ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ಒಂದೇ ಜೀಪ್ ಎರಡು ಕಡೆ ಡಿಕ್ಕಿ- ಇಬ್ಬರು ಬೈಕ್ ಸವಾರರ ಸಾವು

    ದಾವಣಗೆರೆ: ಒಂದೇ ಜೀಪ್ ಪ್ರತ್ಯೇಕ ಎರಡು ಅಪಘಾತದಲ್ಲಿ ಇಬ್ಬರು ಬೈಕ್ ಸವಾರರನ್ನು ಬಲಿ ಪಡೆದ ಘಟನೆ ದಾವಣಗೆರೆಯ ಚನ್ನಗಿರಿಯಲ್ಲಿ ನಡೆದಿದೆ.

    ಮೊದಲನೇ ಅಪಘಾತದಲ್ಲಿ ಸಂತೋಷ್( 30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಎರಡನೇ ಅಪಘಾತದಲ್ಲಿ ಶಿವಮೊಗ್ಗ ಮೂಲಕ ಜ್ಞಾನೇಶ್ವರ (23) ಮೃತಪಟ್ಟಿದ್ದಾರೆ. ಜ್ಞಾನೇಶ್ವರ ಜೊತೆ ಇದ್ದ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದು, ಚನ್ನಗಿರಿ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಮೊದಲು ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಬಳಿ ರಭಸದಿಂದ ಬಂದ ಬುಲೇರೋ ಜೀಪ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ. ಈ ಅಪಘಾತ ಮಾಡಿ ಗಾಬರಿಗೊಂಡ ಜೀಪ್ ಚಾಲಕ ವಾಹನ ನಿಲ್ಲಿಸದೇ ವೇಗವಾಗಿ ಮುಂದೆ ಹೋಗಿ ಚನ್ನಗಿರಿಯ ನವಚೇತನ ಶಾಲೆಯ ಮುಂಭಾಗ ಇನ್ನೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಇಬ್ಬರನ್ನು ಬಲಿ ಪಡೆದಿದ್ದಾನೆ.

    ಈ ಸಂಬಂಧ ಚನ್ನಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಜೀಪ್ ಚಾಲಕನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಟೆಲಿಕಾಂ ಅಂಗಡಿಗೆ ನುಗ್ಗಿದ ಬೊಲೆರೋ- ಅಪಾಯದಿಂದ ಬಾಲಕ ಪಾರು

    ಬೆಂಗಳೂರು: ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬೊಲೆರೋ ಜೀಪ್ ಚಾಲಕನ ನಿಯಂತ್ರಣ ತಪ್ಪಿ ಟೆಲಿಕಾಂ ಅಂಗಡಿಗೆ ನುಗ್ಗಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ಈ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸುಧಾನಗರದ ಸತ್ಯಂ ಹೋಟೆಲ್ ಬಳಿ ನಡೆದಿದೆ. ಜೀಪ್ ಚಾಲಕ ಪಾನಮತ್ತನಾಗಿ ಹಾಗೂ ಗಾಂಜಾ ನಶೆಯಲ್ಲಿದ್ದ ಎನ್ನಲಾಗಿದೆ.

    ಎಸ್.ಎಸ್ ಶೀಟ್‍ಗಳನ್ನು ತುಂಬಿಕೊಂಡು ಬಂದಿದ್ದ ಜೀಪ್, ರಸ್ತೆಯಿಂದ ಏಕಾಏಕಿ ಅಂಗಡಿಗೆ ನುಗ್ಗಿದೆ. ಪರಿಣಾಮ ಒಂದು ಬೈಕ್, ಸೈಕಲ್, ಕಾರು ಹಾಗೂ ಅಂಗಡಿ ಜಖಂ ಆಗಿದೆ. ಈ ಜೀಪ್ ಸುಮಾರು ಹೆದ್ದಾರಿ ರಸ್ತೆಯಿಂದ 150 ಮೀಟರ್ ಅಂಗಡಿಯ ಒಳಗೆ ನುಗ್ಗಿದೆ ಎನ್ನಲಾಗಿದೆ.

    ಅದೃಷ್ಟವಶಾತ್ ಅಲ್ಲಿಯೇ ಇದ್ದ ವೇಣುಗೋಪಾಲ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

  • ಮೈ ಮೇಲೆ ಜೀಪ್ ಹರಿದರು ಸಾವಿನಿಂದ ಪಾರಾದ ಅಮ್ಮ, ಮಗು

    ಮೈ ಮೇಲೆ ಜೀಪ್ ಹರಿದರು ಸಾವಿನಿಂದ ಪಾರಾದ ಅಮ್ಮ, ಮಗು

    ಮಂಗಳೂರು: ಯುವಕನೊಬ್ಬನ ಅಚಾತುರ್ಯದಿಂದ ಜೀಪ್ ಅಡ್ಡಾದಿಡ್ಡಿ ಚಲಿಸಿ, ಸರಣಿ ಅಪಘಾತಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

    ಜೀಪ್ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ, ಕೀ ಬಿಟ್ಟು ಹೋಗಿದ್ದೆ ಘಟನೆಗೆ ಪ್ರಮುಖ ಕಾರಣವಾಗಿದ್ದು, ಈ ವೇಳೆ ಸ್ಥಳದಲ್ಲಿ ಇದ್ದ ಯುವಕ ಕುತೂಹಲದಿಂದ ಜೀಪ್ ಸ್ಟಾರ್ಟ್ ಮಾಡಿದ್ದಾನೆ. ಆದರೆ ವಾಹನ ಗೇರ್ ನಲ್ಲೇ ಇದ್ದ ಪರಿಣಾಮ ಜೀಪು ಅಡ್ಡಾದಿಡ್ಡಿ ಚಲಿಸಿದೆ.

    ಎರಡು ಕಾರು, ನಾಲ್ಕು ಬೈಕಿಗೆ ಡಿಕ್ಕಿಯಾಗಿದ್ದ ಜೀಪು ಮಗು ಎತ್ತಿಕೊಂಡಿದ್ದ ಮಹಿಳೆಗೆ ಡಿಕ್ಕಿಯಾಗಿ ಬಳಿಕ ಮೈ ಮೇಲಿಂದ ಹರಿದು ಹೋಗಿದೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ಮಹಿಳೆ ತನ್ನ ಕೈಲಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಪರಿಣಾಮ ಸಂಭವಿಸ ಬೇಕಾಗಿದ್ದ ದುರಂತ ತಪ್ಪಿದ್ದು, ಜೀಪು ಮಹಿಳೆಯ ಮೇಲೆ ಹರಿದು ಹೋಗಿದ್ದರು ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಬಳಿಕ ಜೀಪು ನಿಂತಿದ್ದು, ಯುವಕನ ಈ ಕೃತ್ಯಕ್ಕೆ ಸ್ಥಳೀಯರು ಆಕ್ರೋಶಗೊಂಡು ಹೊಡೆತ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಮೈಸೂರು: ರೈತರ ಪ್ರತಿಭಟನೆಗೆ ಹೆದರಿ ಜೀಪ್ ಬಿಟ್ಟು ಅರಣ್ಯಾಧಿಕಾರಿ ಓಡಿ ಹೋಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಗುಪ್ಪೆ ವಲಯದಲ್ಲಿ ನಡೆದಿದೆ.

    ಮೇಟಿಗುಪ್ಪೆ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಹುಲಿ ಹತ್ತಾರು ಹಸುಗಳ ತಿಂದು ಕೊಂದು ಹಾಕಿದೆ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎ.ಸಿ.ಎಫ್ ಕೇಶವಗೌಡ ತಮ್ಮ ಸಿಬ್ಬಂದಿಯ ಜೊತೆ ಬಂದಿದ್ದಾರೆ.

    ಈ ವೇಳೆ ಸ್ಥಳದಲ್ಲೇ ಪರಿಹಾರ ಘೋಷಣೆ ಆಗಬೇಕು. ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅಧಿಕಾರಿ ನೀಡಿದ ಉತ್ತರದಿಂದ ಜನರು ಸಮಾಧಾನಗೊಂಡಿಲ್ಲ. ಬಳಿಕ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಯ ಜೀಪಿಗೆ ಅಡ್ಡ ಕುಳಿತ್ತಿದ್ದಾರೆ. ಹೀಗಾಗಿ ಅಧಿಕಾರಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಅರಣ್ಯಾಧಿಕಾರಿ ತಮ್ಮ ಜೀಪನ್ನು ಅಲ್ಲೆ ಬಿಟ್ಟು ಅಲ್ಲಿಂದ ಓಡಿಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯನ್ನ ಜೀಪ್ ಮೇಲೆ ಕಟ್ಟಿ, ನಗರ ಸುತ್ತಾಡಿಸಿ ಪೊಲೀಸರಿಂದ ಅಮಾನವೀಯ ಕೃತ್ಯ

    ಮಹಿಳೆಯನ್ನ ಜೀಪ್ ಮೇಲೆ ಕಟ್ಟಿ, ನಗರ ಸುತ್ತಾಡಿಸಿ ಪೊಲೀಸರಿಂದ ಅಮಾನವೀಯ ಕೃತ್ಯ

    ಚಂಡೀಗಡ: ಪೊಲೀಸರು 35 ವರ್ಷದ ಮಹಿಳೆಯನ್ನು ಆಕೆಯ ಗ್ರಾಮದಿಂದ ಬಲವಂತವಾಗಿ ಜೀಪ್ ಮೇಲೆ ಕಟ್ಟಿ ಹಾಕಿ ಇಡೀ ನಗರವನ್ನು ಸುತ್ತಾಡಿಸಿರುವ ಅಮಾನವೀಯ ಘಟನೆ ಪಂಜಾಬಿನ ಅಮೃತಸರ ಜಿಲ್ಲೆಯ ನಡೆದಿದೆ.

    ಪಂಜಾಬ್ ಪೊಲೀಸರ ಈ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ಹಾಕಿ ನಗರ ಸುತ್ತಾಡಿಸುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. ಪೊಲೀಸರು ಮಹಿಳೆಯ ಮಾವನನ್ನು ಬಂಧಿಸಲು ಹೋಗಿದ್ದಾಗ ಈ ರೀತಿಯಾಗಿ ಮಾಡಿದ್ದಾರೆ.

    ಪೊಲೀಸ್ ಜೀಪ್ ಮೇಲೆ ಮಹಿಳೆ ಮಲಗಿದ್ದು, ಆಕೆ ಸಹಾಯಕ್ಕಾಗಿ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ವೇಳೆ ಮಹಿಳೆ ಜೀಪಿನಿಂದ ಕೆಳಗೆ ಬಿದ್ದಿದ್ದರಿಂದ ಆಕೆಯ ತಲೆಗೆ ತೀವ್ರವಾಗಿ ಗಾಯವಾಗಿದ್ದು, ಮಹಿಳೆಯನ್ನು ಸ್ಥಳೀಯರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪೊಲೀಸರು ಮಹಿಳೆ ಮಾಡಿರುವ ಆರೋಪವನ್ನು ತಳ್ಳಿಹಾಕಿದ್ದಾರೆ.

    ಅಮೃತಸರ ಜಿಲ್ಲೆಯ ಷಾಝಾಡಾ ಹಳ್ಳಿಯಲ್ಲಿ ಪೊಲೀಸ್ ಇಲಾಖೆಯ ತಂಡವು ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ನಮ್ಮ ಮಾವ ಬಲ್ವಂತ್ ಸಿಂಗ್ ನನ್ನು ಬಂಧಿಸಲು ಮನೆಯ ಮೇಲೆ ದಾಳಿ ನಡೆಸಿದ್ದರು. ಆದರೆ ಮನೆಯಲ್ಲಿ ಮಾವ ಪತ್ತೆಯಾಗಿಲ್ಲ. ನಂತರ ಪೊಲೀಸರು ನನ್ನನ್ನು ವಾಹನದ ಮೇಲೆ ಕುಳಿತುಕೊಳ್ಳುವಂತೆ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಮಹಿಳೆ ಆರೋಪಿ ಏನು ಅಲ್ಲ. ಆಕೆಯ ಮಾವವನ್ನು ಬಂಧಿಸಲು ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಆತ ಮನೆಯಲ್ಲಿ ಇರಲಿಲ್ಲ. ಈ ವೇಳೆ ಕುಟುಂಬದವರು ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್ ವಾಹನದ ಮೇಲೆ ಕಲ್ಲು ಎಸೆದು ಹಾನಿ ಮಾಡಿದ್ದಾರೆ. ಆದ್ದರಿಂದ ಕುರಿತು ಐಪಿಸಿ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿ ತೇಜಿಂದರ್ ಸಿಂಗ್ ಮೌರ್ ತಿಳಿಸಿದ್ದಾರೆ.

    ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡುವವರೆಗೂ ನಾನು ಮಹಿಳೆಯ ಆರೋಪದ ಬಗ್ಗೆ ಮಾತನಾಡುವುದಿಲ್ಲ. ಪೋಲಿಸ್ ತಂಡ ಈಗ ನಮ್ಮನ್ನು ಸಂಪರ್ಕಿಸಿದೆ. ಪೋಲೀಸ್ ತಂಡದ ಮೇಲೆ ದಾಳಿ ಮಾಡಿ ಪೊಲೀಸ್ ವಾಹನವನ್ನು ಹಾನಿಗೊಳಿಸಿದ್ದಕ್ಕಾಗಿ ಆಕೆಯ ವಿರುದ್ಧ ದೂರು ದಾಖಲಾಗಿದೆ ಎಂದು ಸೂಪರಿಟೆಂಡೆಂಟ್ ಪೊಲೀಸ್ ಪರ್ಮಲ್ ಸಿಂಗ್ ಹೇಳಿದ್ದಾರೆ.

    ಇನ್ಸ್ ಪೆಕ್ಟರ್ ವಿಜಯ್ ಪ್ರತಾಪ್ ಸಿಂಗ್ ಈ ಆರೋಪಗಳನ್ನು ನಿರಾಕರಿಸಿ ಈ ಫಟನೆ ಕುರಿತು ತನಿಖೆ ನಡೆಸಲಾಗುವುದು ಮತ್ತು ಸತ್ಯಾಸತ್ಯತೆಯನ್ನು ಪತ್ತೆ ಮಾಡಲಾಗುವುದು ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಬೊಲೆರೋ ಪಲ್ಟಿ – ಓರ್ವ ಸಾವು

    ಬಾಗಲಕೋಟೆ: ರಸ್ತೆ ವಿಭಜಕಕ್ಕೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿ ನಿಂಗಪ್ಪ ಬೀರಗೊಂಡ (48) ಮೃತಪಟ್ಟ ವ್ಯಕ್ತಿ. ಇಳಕಲ್ ಪಟ್ಟಣದಿಂದ ವಿಜಯಪುರಕ್ಕೆ ಗ್ರಾನೈಟ್ ಸಾಗಿಸುತ್ತಿದ್ದ ವೇಳೆ ಘಟನೆ ಸಂಭವಿಸಿದೆ.

    ಚಾಲಕನ ನಿಯಂತ್ರ ತಪ್ಪಿದ ಜೀಪ್, ರೋಡ್ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಲ್ಟಿ ಹೊಡೆದಿದ್ದು, ಸ್ಥಳದಲ್ಲಿಯೇ ನಿಂಗಪ್ಪ ಅವರು ಮೃತಪಟ್ಟಿದ್ದಾರೆ. ಚಾಲಕ ರವಿ ಹಾಗೂ ಸೇರಿದಂತೆ ಮತ್ತೊಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಹುನಗುಂದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಲೆರೋದಲ್ಲಿದ್ದ ಮೂವರು ವಿಜಯಪುರ ಜಿಲ್ಲೆಯ ಡವಳಗಿ ನಿವಾಸಿಗಳಾಗಿದ್ದಾರೆ. ಘಟನಾ ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ಜೀಪು ಹರಿದು ಮನೆ ಅಂಗಳದಲ್ಲಿ ಆಡುತ್ತಿದ್ದ ಕಂದಮ್ಮ ಸಾವು!

    ವಿಜಯಪುರ: ಜೀಪ್ ಹತ್ತಿ ಇಳಿದ ಪರಿಣಾಮ ಮನೆಯ ಮುಂದೆ ಆಟವಾಡುತ್ತಿದ್ದ ಮಗುವೊಂದು ಮೃತಪಟ್ಟ ಘಟನೆ ವಿಜುಯಪುರ ನಗರ ಹೊರ ವಲಯದ ಬಾರಾಕುಟ್ರೆ ತಾಂಡಾದಲ್ಲಿ ನಡೆದಿದೆ.

    ಅಮನ್ ಕಾಂತು ರಾಠೋಡ (3) ಮೃತ ಕಂದಮ್ಮ. ತಕ್ಷಣವೇ ಚಾಲಕ ಜೀಪ್ ಸಮೇತ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

    ಬಾರಾಕುಟ್ರೆ ತಾಂಡದ ಅಮನ್ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ. ಅಮನ್ ಆಟವಾಡುತ್ತಿರುವುದನ್ನು ಗಮನಿಸದ ಚಾಲಕ ಜೀಪ್ ಅಮನ್ ಮೇಲೆ ಹಾಯಿಸಿದ್ದಾನೆ. ಕೆಳಗೆ ಬಿದ್ದಿದ್ದ ಅಮನ್ ತಲೆ ಮೇಲೆ ಜೀಪ್ ಹತ್ತಿಹೋಗಿದ್ದು, ಸ್ಥಳದಲ್ಲಿ ಬಾಲಕ ಅಮನ್ ಮೃತಪಟ್ಟಿದ್ದಾನೆ. ತನ್ನ ತಪ್ಪು ಗಮನಕ್ಕೆ ಬರುತ್ತಿದ್ದಂತೆ ಚಾಲಕ ಜೀಪನ್ನು ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾನೆ.

    ಘಟನೆಯು 15 ನಿಮಿಷ ತಡವಾಗಿ ಪೋಷಕರು ಗಮನಕ್ಕೆ ಬಂದಿದ್ದು, ಈ ಹೊತ್ತಿನಲ್ಲಿ ಚಾಲಕ ಪರಾರಿಯಾಗಿದ್ದ. ಈ ಕುರಿತು ಮೃತ ಅಮನ್ ಪೋಷಕರು ಜೀಪ್ ಚಾಲಕನ ವಿರುದ್ಧ ವಿಜಯಪುರ ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

  • ಪ್ರವಾಸಿಗರ ಜೀಪ್ ಮೇಲೆ ಒಂಟಿಸಲಗ ದಾಳಿ!

    ಪ್ರವಾಸಿಗರ ಜೀಪ್ ಮೇಲೆ ಒಂಟಿಸಲಗ ದಾಳಿ!

    ಬೆಂಗಳೂರು: ದಾರಿಯಲ್ಲಿ ಹೋಗುತ್ತಿದ್ದ ಪ್ರವಾಸಿಗರ ಜೀಪ್ ಮೇಲೆ ಏಕಾಏಕಿ ಒಂಟಿಸಲಗ ದಾಳಿ ನಡೆಸಿದ ಘಟನೆ ತಮಿಳುನಾಡಿದ ಪ್ರಸಿದ್ಧ ಪ್ರವಾಸಿ ತಾಣ ಊಟಿ ಬಳಿಯ ಕುನ್ನೂರುನಲ್ಲಿ ನಡೆದಿದೆ.

    ಕುನ್ನೂರು ಮಾರ್ಗವಾಗಿ ಪ್ರಯಾಣಿಸುತ್ತಿದ್ದ ಪ್ರವಾಸಿ ವಾಹನಕ್ಕೆ ಏಕಾಏಕಿ ಒಂಟಿಸಲಗ ಅಡ್ಡ ಬಂದಿದೆ. ಆನೆ ಬರುತ್ತಿರುವುದನ್ನು ಕಂಡ ಪ್ರಯಾಣೀಕರು ಕೂಡಲೇ ಜೀಪ್‍ನಿಂದ ಇಳಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

    ರೊಚ್ಚಿಗೆದ್ದ ಒಂಟಿಸಲಗವು ಜೀಪ್ ಮೇಲೆಯೇ ದಾಳಿ ನಡೆಸಿದೆ. ಈ ಮಾರ್ಗವಾಗಿ ಸಂಚರಿಸುತ್ತಿದ್ದ ವಾಹನ ಸವಾರರಿಗೆ ಆತಂಕ ಎದುರಾಗಿದೆ. ಕೂಡಲೇ ಸ್ಥಳೀಯರು ಜೆಸಿಬಿ ಸಹಾಯದಿಂದ ಒಂಟಿ ಸಲಗವನ್ನು ಹೆದರಿಸಿ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಒಂಟಿಸಲಗದ ದಾಳಿಯನ್ನು ಸೆರೆಹಿಡಿದ ಸಹ ಪ್ರಯಾಣಿಕರು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಒಂಟಿ ಸಲಗದ ವಿಡಿಯೋ ಸದ್ಯ ವೈರಲ್ ಆಗಿದ್ದು, ಪ್ರಯಾಣಿಕರು ಇಂತಹ ಮಾರ್ಗ ಮಧ್ಯೆ ಎಚ್ಚರಿಕೆ ವಹಿಸುವುದು ಕೂಡ ಅಗತ್ಯವಾಗಿದೆ.

    https://www.youtube.com/watch?v=J_MikaoW8xw

  • ಚಾಲಕನಿಲ್ಲದೇ ಚಲಿಸಿದ ಜೀಪ್-ಬಾಲಕನಿಗೆ ಡಿಕ್ಕಿ

    ಚಾಲಕನಿಲ್ಲದೇ ಚಲಿಸಿದ ಜೀಪ್-ಬಾಲಕನಿಗೆ ಡಿಕ್ಕಿ

    ಮಂಗಳೂರು: ಚಾಲಕನಿಲ್ಲದ ಸಂದರ್ಭದಲ್ಲಿ ಚಲಿಸಿದ ಜೀಪೊಂದು 5 ವರ್ಷದ ಬಾಲಕನಿಕೆ ಡಿಕ್ಕಿ ಹೊಡೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಂಜಲ್ಪಡ್ಪು ಎಂಬಲ್ಲಿ ನಡೆದಿದೆ.

    ಪುತ್ತೂರಿನ ಮಂಜಲ್ಪಡು ರಸ್ತೆಯೊಂದರಲ್ಲಿ ಜೂನ್ 3ರಂದು ಕಾರಿನ ಹಿಂಬದಿಯ ಡಿಕ್ಕಿಯಿಂದ ತಾಯಿ ಮತ್ತು ಮಗು ಏನನ್ನೋ ತೆಗೆಯುತ್ತ ನಿಂತಿದ್ದರು. ಈ ಕಾರಿನ ಹಿಂಬದಿಯಲ್ಲಿ ಜೀಪೊಂದನ್ನು ನಿಲ್ಲಿಸಲಾಗಿತ್ತು. ಏಕಾಏಕಿಯಾಗಿ ಜೀಪು ಚಲಿಸಿ ತಾಯಿ ಹಾಗೂ ಮಗುವಿನ ಮೇಲೆ ಎರಗಿದೆ. ಕೂಡಲೇ ಎಚ್ಚೆತ್ತ ತಾಯಿ ಅಲ್ಲಿಂದ ಸರಿದಿದ್ದಾಳೆ. ಆದರೆ ಆ 5 ವರ್ಷದ ಮಗು ಎರಡೂ ವಾಹನಗಳ ನಡುವೆಯೇ ಸಿಕ್ಕಿಹಾಕಿಕೊಂಡಿದೆ.

    ಕೂಡಲೇ ತಾಯಿ ಅಕ್ಕಪಕ್ಕದಲ್ಲಿದ್ದ ಜನರನ್ನು ಸಹಾಯಕ್ಕಾಗಿ ಕೂಗಿ ಕರೆಸಿದ್ದಾಳೆ. ತಕ್ಷಣವೇ ಜನರು ಸೇರಿ ಜೀಪನ್ನು ಹಿಂದಕ್ಕೆ ನೂಕಿ ಮಗುವನ್ನು ಆಪತ್ತಿನಿಂದ ರಕ್ಷಿಸುತ್ತಿರುವ ದೃಶ್ಯ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ.

    ಯಾರೂ ಇಲ್ಲದಿದ್ದರೂ ಜೀಪು ತಾನಾಗಿಯೇ ಚಲಿಸಿ ತಾಯಿ-ಮಗುವಿನ ಮೇಲೆರಗಿದೆ. ಅಲ್ಲದೇ ಜೀಪನ್ನು ಚಾಲಕ ಏರು ಪ್ರದೇಶಕ್ಕೆ ಮುಖ ಮಾಡಿಯೇ ನಿಲ್ಲಿಸಿ ಹೋಗಿದ್ದ. ಆದರೂ ಜೀಪು ಮುಂಬದಿಗೆ ಚಲಿಸಿದ್ದು ಮಾತ್ರ ಅಲ್ಲಿದ್ದವರ ಆಶ್ಚರ್ಯಕ್ಕೆ ಕಾರಣವಾಗಿದೆ.

  • ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

    ಪ್ರವಾಸಿಗನ ಜೀಪ್ ಏರಿ ಕುಳಿತ ಚಿರತೆ- ಮುಂದೇನಾಯ್ತು ವಿಡಿಯೋ ನೋಡಿ

    ಕೇಪ್‍ಟೌನ್: ಚಿರತೆಯೊಂದು ಸಫಾರಿಗೆ ಬಂದಿದ್ದ ಪ್ರವಾಸಿಗನ ಜೀಪ್ ಒಳಗಡೆ ನುಗ್ಗಿ ಕುಳಿತಿದ್ದು, ಪ್ರವಾಸಿಗ ಬೆಚ್ಚಿಬಿದ್ದ ಘಟನೆ ಆಫ್ರಿಕಾದಲ್ಲಿ ನಡೆದಿದೆ.

    ಅಫ್ರಿಕಾದ ಸಿರೆನ್ಗಟಿಯಲ್ಲಿ ಈ ಘಟನೆ ನಡೆದಿದ್ದು, ಮೂರ್ನಾಲ್ಕು ಪ್ರವಾಸಿಗರಿದ್ದ ವಾಹನವೊಂದು ಸಫಾರಿಗೆ ತೆರಳಿತ್ತು. ಈ ವೇಳೆ ಮಾರ್ಗ ಮಧ್ಯೆ ಆನೇಕ ವನ್ಯಜೀವಿಗಳನ್ನು ಕಂಡು ರೋಮಾಂಚನಗೊಂಡಿದ್ದ ಪ್ರವಾಸಿಗರಿಗೆ ಚಿರತೆಯೊಂದು ಎದುರಾಗಿದೆ.

    ಅಮೇರಿಕದ ಪ್ರವಾಸಿ ಬ್ರಿಟನ್ ಹಯೆಸ್ ತಂಡ ಸಫಾರಿಗೆಂದು ಕಾಡಿಗೆ ಹೋಗಿದ್ದ ವೇಳೆ ಮೂರು ಚಿರತೆಗಳು ಮುಂದೆ ಬಂದವು. ಅದರಲ್ಲಿ ಚಿರತೆಯೊಂದು ಜೀಪ್ ಹತ್ತಿರ ಬಂದಿದೆ. ಚಿರತೆ ಕಂಡಾಕ್ಷಣ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಕೂಡಲೇ ಚಿರತೆ ವಾಹನದೊಳಗೆ ನುಗ್ಗಿಯೇ ಬಿಟ್ಟಿದೆ.

    ಇದರಿಂದಾಗಿ ಪ್ರವಾಸಿಗರು ಮತ್ತಷ್ಟು ಗಾಬರಿಗೊಳಗಾಗಿದ್ದಾರೆ. ವಾಹನ ಏರಿದ್ದ ಚಿರತೆ ಖಾಲಿ ಇದ್ದ ಸೀಟನ್ನು ನೆಕ್ಕಿದ್ದಲ್ಲದೇ, ಟಾಪ್ ಗ್ಲಾಸಿಗೂ ಮೂತಿ ಉಜ್ಜಿದೆ. ಕೆಲ ಹೊತ್ತಿನ ಬಳಿಕ ವಾಹನದಿಂದ ಇಳಿದು ಹೋಗಿದೆ. ಬದುಕಿದೆಯಾ ಬಡಜೀವವೇ ಅಂತ ಇತ್ತ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಪ್ರವಾಸಿಗರು ವಿಡಿಯೋ ಮಾಡಿದ್ದಾರೆ.

    ಇದೀಗ ಈ ವಿಡಿಯೋವನ್ನು ಪ್ರವಾಸಿಗ ತಮ್ಮ ಫೇಸ್‍ ಬುಕ್ ನಲ್ಲಿ ಫೋಸ್ಟ್ ಮಾಡಿದ್ದು, ಆ ಕ್ಷಣದಲ್ಲಿ ಆದ ಅನುಭವನ್ನು ಹಂಚಿಕೊಂಡಿದ್ದಾರೆ.

    https://www.facebook.com/EJKOMO/videos/1721927467866774/