Tag: jds

  • ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟ ಜೆಡಿಎಸ್

    ಬೆಂಗಳೂರು: ಚುನಾವಣಾ ತಂತ್ರವಾಗಿ ಹೊಸ ಪ್ಲಾನ್ ಮಾಡಿರೋ ಜೆಡಿಎಸ್, ಬಿಜೆಪಿ-ಕಾಂಗ್ರೆಸ್‍ಗೆ ಸೆಡ್ಡು ಹೊಡೆಯಲು ಮತ್ತೆ ಹಳ್ಳಿಗೆ ಕಡೆ ಹೊರಟಿದೆ.

    ಗ್ರಾಮ ವಾಸ್ತವ್ಯಕ್ಕೆ ಹೊಸ ಟಚ್ ಕೊಟ್ಟಿರೋ ಜೆಡಿಎಸ್ ಒಂದೂವರೆ ತಿಂಗಳು ಉತ್ತರ ಕರ್ನಾಟಕ, ಹೈದರಬಾದ್ ಕರ್ನಾಟಕ ಭಾಗಗಳ ಹಳ್ಳಿಗಳಲ್ಲಿ ಬೀಡಾರ ಹೂಡಲಿದ್ದಾರಂತೆ. ಯಾದಗಿರಿಯಿಂದ ಪಾದ ಯಾತ್ರೆ, ಬಿಜಾಪುರ ಭಾಗದಲ್ಲಿ ಬಹೃತ್ ರೈತ ಸಮಾವೇಶ ಮಾಡೋ ಉದ್ದೇಶವೂ ಇದೆ.

    ಕೃಷ್ಣೆಯ ಭಾಗದ ರಾಜಕೀಯವನ್ನ ಹೆಚ್‍ಡಿ ಕುಮಾರಸ್ವಾಮಿ ನೋಡಿಕೊಂಡ್ರೆ, ಕಾವೇರಿ ಭಾಗದ ರಾಜಕೀಯವನ್ನ ಅನಿತಾ ಕುಮಾರಸ್ವಾಮಿ ಅವರ ಹೆಗಲಿಗೆ ಹೊರಿಸೋ ಪ್ಲಾನ್ ಕೂಡ ರೆಡಿ ಇದೆ ಎಂದು ಹೇಳಲಾಗಿದೆ.

  • ವಿಶ್ವನಾಥ್ ಸೇರ್ಪಡೆಯಿಂದ ಅಸಮಾಧಾನ ಇಲ್ಲ, ಜೆಡಿಎಸ್‍ನಲ್ಲಿ ಹೆಚ್‍ಡಿಕೆ-ದೇವೇಗೌಡರ ಮಾತೇ ಅಂತಿಮ: ರೇವಣ್ಣ

    ವಿಶ್ವನಾಥ್ ಸೇರ್ಪಡೆಯಿಂದ ಅಸಮಾಧಾನ ಇಲ್ಲ, ಜೆಡಿಎಸ್‍ನಲ್ಲಿ ಹೆಚ್‍ಡಿಕೆ-ದೇವೇಗೌಡರ ಮಾತೇ ಅಂತಿಮ: ರೇವಣ್ಣ

    ಮೈಸೂರು: ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿರುವುದರಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ, ದೇವೇಗೌಡರು ಹೇಳುವ ಮಾತೇ ಅಂತಿಮ ಎಂದು ಜೆಡಿಎಸ್ ನ ಹಿರಿಯ ನಾಯಕ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ಇಂದು ಮೈಸೂರಿನಲ್ಲಿ ಆಷಾಢ ಶುಕ್ರವಾರದ ಪ್ರಯುಕ್ತ ನಾಡಿನ ಆಧಿದೇವತೆ ಚಾಮುಂಡೇಶ್ವರಿ ದೇವಿಗೆ ಪತ್ನಿ ಜೊತೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಜೆಡಿಎಸ್ ನಲ್ಲಿ ಯಾವುದೇ ರೀತಿಯ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ಜೆಡಿಎಸ್ ಪಕ್ಷಕ್ಕೆ ಸಂಬಂಧಿಸಿದಂತೆ ಪುತ್ರ ಪ್ರಜ್ಚಲ್ ನೀಡಿರುವ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ. ಜೆಡಿಎಸ್ ನಲ್ಲಿ ಕುಮಾರಸ್ವಾಮಿ, ದೇವೇಗೌಡರು ಹೇಳುವ ಮಾತೇ ಅಂತಿಮ, ಅವರ ಮಾತನ್ನು ಯಾರೂ ಮೀರುವುದಿಲ್ಲ. ಜೆಡಿಎಸ್ ನಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ಅಂದ್ರು.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ಜೆಡಿಎಸ್‍ಗೆ ಸೇರ್ಪಡೆಯಾಗಿರುವುದರಿಂದ ಯಾವುದೇ ರೀತಿಯ ಅಸಮಾಧಾನ ಉಂಟಾಗಿಲ್ಲ. ಅವರು ಹಿರಿಯ ರಾಜಕೀಯ ನಾಯಕರು, ಅವರ ಸೇರ್ಪಡೆಯಿಂದ ಜೆಡಿಎಸ್ ಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.

    ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

  • ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

    ಪ್ರಜ್ವಲ್ ರೇವಣ್ಣ ಸ್ಫೋಟದಿಂದ ತೆನೆಯಲ್ಲಿ ತಳಮಳ- ಮೊಮ್ಮಗನ ಮೇಲೆ ದೇವೇಗೌಡ್ರು ಬೇಸರ

    ಮೈಸೂರು: ಜೆಡಿಎಸ್ ಕುಟುಂಬದಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಹುಣಸೂರು ಕ್ಷೇತ್ರದಿಂದ ಟಿಕೆಟ್ ಮಿಸ್ಸಾಗಿದ್ದಕ್ಕೆ ಕುಟುಂಬದ ವಿರುದ್ಧವೇ ಸಿಟ್ಟಾಗಿರುವ ರೇವಣ್ಣ ಪುತ್ರ ಜೆಡಿಎಸ್ ಯುವ ಮುಖಂಡ ಪ್ರಜ್ವಲ್ ರೇವಣ್ಣ, ಚಿಕ್ಕಪ್ಪ ಕುಮಾರಸ್ವಾಮಿ ಹಾಗೂ ತಾತನ ವಿರುದ್ದವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹುಣಸೂರಿನಲ್ಲಿ ನಿಂತು ಜೆಡಿಎಸ್ಸೇ ಹುಬ್ಬೇರುವಂತೆ ಮಾಡಿದ್ದಾರೆ.

    ಮೈಸೂರಿನ ಹುಣಸೂರು ಇದೀಗ ಜೆಡಿಎಸ್ ಪಕ್ಷಕ್ಕೆ ಹುಳಿ ಹುಳಿಯಾಗಿ ಪರಿಣಮಿಸಿದೆ. ಒಂದೆಡೆ ಕ್ಷೇತ್ರದಲ್ಲಿ ಸತತ 4 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ ಶಾಸಕ ಜಿ.ಟಿ.ದೇವೆಗೌಡರ ಪುತ್ರ ಟಿಕೆಟ್ ಆಕಾಂಕ್ಷಿಯಾಗಿದ್ರೆ. ಮತ್ತೊಂದೆಡೆ ಈಗಷ್ಟೆ ಪಕ್ಷ ಸೇರಿರುವ ಮಾಜಿ ಸಂಸದ ವಿಶ್ವನಾಥ್ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ. ಇವರಿಬ್ಬರ ಮಧ್ಯೆ ನಾನೇನು ಕಮ್ಮಿ ಅನ್ನೋ ಹಾಗೆ ಬಂದಿದೆ ದೇವೇಗೌಡರ ಕುಟುಂಬದ ಕುಡಿ, ಶಾಸಕ ರೇವಣ್ಣನವರ ಪುತ್ರ ಪ್ರಜ್ವಲ್ ರೇವಣ್ಣ.

    ಕಳೆದ 3 ತಿಂಗಳಿನಿಂದ ಹುಣಸೂರಿನಲ್ಲಿ ಬಿರುಗಾಳಿಯಂತೆ ಓಡಾಡಿ ಪಕ್ಷ ಸಂಘಟನೆ ಮಾಡಿದ್ರು. ತನ್ನದೇ ಗುಂಪು ಕಟ್ಟಿಕೊಂಡು ನಾನು ಟಿಕೆಟ್ ಆಕಾಂಕ್ಷಿ ಅನ್ನೋದನ್ನ ತನ್ನ ತಾತ ದೇವೇಗೌಡ ಹಾಗೂ ಚಿಕ್ಕಪ್ಪ ಕುಮಾರಸ್ವಾಮಿಗೆ ಪರೋಕ್ಷವಾಗಿ ತಿಳಿಸಿದ್ರು. ಆದ್ರೆ ವಿಶ್ವನಾಥ್ ಪಕ್ಷ ಸೇರ್ಪಡೆ ಅಧಿಕೃತವಾದ ಮೇಲೆ ಲೆಕ್ಕಾಚಾರ ತಲೆಕೆಳಗಾಗಿದೆ. ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೂಡಾ ಸಿಗಲ್ಲ ಎನ್ನಲಾಗಿದೆ. ಅದಕ್ಕೀಗ ಪ್ರಜ್ವಲ್ ತನ್ನ ಕುಟುಂಬಸ್ಥರ ವಿರುದ್ಧವೇ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಸೂಟ್‍ಕೇಸ್ ತಂದವರಿಗೆ ಮುಂದಿನ ಕುರ್ಚಿ, ಪ್ರಮಾಣಿಕರಿಗೆ ಹಿಂದಿನ ಕುರ್ಚಿ ಅಂತಾ ಹೇಳೋ ಮೂಲಕ ತನ್ನ ಚಿಕ್ಕಪ್ಪನಿಗೆ ಟಾಂಗ್ ನೀಡಿದ್ದಾರೆ.

    ತಾತ, ಚಿಕ್ಕಪ್ಪನ ಜೊತೆಗೆ ಸ್ಥಳೀಯ ನಾಯಕರನ್ನು ಟಾರ್ಗೆಟ್ ಮಾಡಿರುವ ಪ್ರಜ್ವಲ್, ನಮ್ಮನ್ನು ಬೆಳೆಸಿದ ನಾಯಕರು ನಮ್ಮನ್ನೇ ವಿರೋಧಿಸುತ್ತಾರೆ. ಎರಡು ದೋಣಿಗಳ ಮೇಲೆ ಕಾಲಿಟ್ಟು ಅವರು ಆರಾಮಾಗಿದ್ದಾರೆ ಅಂತ ಕಿಡಿಕಾರಿದ್ರು. ಇನ್ನು ಪಕ್ಷಕ್ಕಾಗಿ ಎಂಥಾ ತ್ಯಾಗಕ್ಕೂ ಸಿದ್ಧ ಎಂದ ಪ್ರಜ್ವಲ್, ಕ್ಷೇತ್ರ ಬಿಟ್ಟುಕೊಡುವುದಾಗಿ ಹೇಳಿದ್ರು.

    ಅಂತಿಮವಾಗಿ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದ ಪ್ರಜ್ವಲ್, ಟಿಕೆಟ್ ಕೈ ತಪ್ಪಿದ್ದಕ್ಕೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ರು. ಅಲ್ಲದೆ ಈ ಸಭೆ ಯಾರ ವಿರುದ್ಧವೂ ಅಲ್ಲ. ನನ್ನ ಬೆಂಬಲಿಗರು ಹಾಗೂ ಅಭಿಮಾನಿಗಳು ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಿ. ದೇವೇಗೌಡರ ಕೈ ಬಲಪಡಿಸಿ. ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡೋಣ ಎಂದರು.

    ರಾಜಕೀಯದಲ್ಲಿ ಅಂಬೆಗಾಲಿಡುತ್ತಿರುವ ಪ್ರಜ್ವಲ್, ಮಾಜಿ ಪ್ರಧಾನಿ ಹಾಗೂ ಮಾಜಿ ಮುಖ್ಯಮಂತ್ರಿಯಾಗಿರುವ ತಾತ ಹಾಗೂ ಚಿಕ್ಕಪ್ಪನ ವಿರುದ್ಧವೇ ಸಿಟ್ಟಾಗಿದ್ದು ಮಾತ್ರ ಎಲ್ಲರನ್ನು ಹುಬ್ಬೇರಿಸಿದೆ. ಪಕ್ಷದ ನಾಯಕತ್ವದ ಬಹಿರಂಗ ಟೀಕೆ ಹಿನ್ನೆಲೆ ದೇವೇಗೌಡರು ಬೇಸರಗೊಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಸಮಾಧಾನಗೊಂಡಿದ್ದಾರೆ. ಪ್ರಜ್ವಲ್ ರೇವಣ್ಣರಿಂದ ಈ ಬಗ್ಗೆ ಸ್ಪಷ್ಟೀಕರಣ ಕೊಡಿಸಲು ಕುಟುಂಬದಲ್ಲಿ ಪ್ರಯತ್ನ ನಡೆದಿದ್ದು, ಇಂದು ಯುವ ನಾಯಕ ಪ್ರಜ್ವಲ್ ರೇವಣ್ಣ ಸ್ಪಷ್ಟೀಕರಣ ಕೊಡ್ತಾರಾ ಎಂದು ಕಾದುನೋಡಬೇಕಿದೆ.

  • ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಝಂಡಾ ಬದಲಾದ್ರೂ ಜಾತ್ಯಾತೀತ ಅಜೆಂಡಾವನ್ನು ಮುಂದುವರಿಸ್ತೇನೆ: ವಿಶ್ವನಾಥ್

    ಬೆಂಗಳೂರು: ತೆನೆಹೊತ್ತ ಮಹಿಳೆಯನ್ನು ಕೊರಳಿಗೆ ಸುತ್ತಿಕೊಂಡಿದ್ದೇನೆ. ಇದು ಇಡೀ ರಾಜ್ಯಾದ್ಯಂತ ಸುತ್ತಿಕೊಳ್ಳುವಂತೆ ಆಗಬೇಕು ಎಂದು ಮಾಜಿ ಸಂಸದ ಎಚ್ ವಿಶ್ವನಾಥ್ ಹೇಳಿದ್ದಾರೆ.

    ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್‍ಗೆ ಸೇರ್ಪಡೆಯಾದ ಬಳಿಕ ಮಾತನಾಡಿದ ಅವರು, ಪ್ರಾದೇಶಿಕ ಪಕ್ಷವಾದರೂ ಪ್ರಧಾನ ಮಂತ್ರಿಯನ್ನು ಕೊಟ್ಟ ಪಕ್ಷ ಜೆಡಿಎಸ್. ಮುಖ್ಯಮಂತ್ರಿಗಳನ್ನ ಮಾಡಿದ್ದು ಜೆಡಿಎಸ್. ಇದು ಹುಡುಗಾಟವಲ್ಲ. ಮುಂದೆ ದೇವೇಗೌಡರ ನೆರಳಾಗಿ, ಕುಮಾರಸ್ವಾಮಿ ಸ್ನೇಹಿತರಾಗಿ ನಿಮ್ಮಲ್ಲರ ಜೊತೆ ಹೆಜ್ಜೆ ಹಾಕುತ್ತೇವೆ ಎಂದು ತಿಳಿಸಿದರು.

    ಹರಿಯುವ ನೀರು: ನನ್ನ 40 ವರ್ಷದ ರಾಜಕೀಯ ಇತಿಹಾಸದಲ್ಲಿ ಐತಿಹಾಸಿಕ ತಿರುವು ಇದು. ಬೆಳಗ್ಗೆ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದಿದ್ದೇನೆ. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತ ದೇವರಲ್ಲಿ ಕೇಳಿಕೊಂಡಿದ್ದೇನೆ. ಹಾಗಾಗಿ ರಾಜಕಾರಣ ನಿಂತ ನೀರಲ್ಲ. ರಾಜಕಾರಣ ಹರಿಯುವ ನೀರು ಎಂದರು.

    ಝಂಡಾ ಬದಲಾಗಿದೆ: ಸನ್ನಿವೇಶ, ಸಮಯಗಳು ನಡುವೆ ಹೊಸ ಮನೆಗೆ ಪಾದಾರ್ಪಣೆ ಮಾಡಿದ್ದೇನೆ. ರಾಷ್ಟ್ರೀಯ ಪಕ್ಷದಲ್ಲಿ ಕಲಿತ ಕೆಲಸ ಜೆಡಿಎಸ್‍ನಲ್ಲೂ ಮುಂದುವರೆಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್ ಅಧಿಕಾರಿಕ್ಕೆ ತರಲು ನಾನು ಎಲ್ಲ ಪ್ರಯತ್ನ ಮಾಡುತ್ತೇನೆ. ಇವತ್ತಿನಿಂದ ನನ್ನ ಝಂಡಾ ಬದಲಾಗಿದೆ. ತೆನೆ ಹೊತ್ತ ಮಹಿಳೆ ಝಂಡಾ ಹಿಡಿದುಕೊಂಡಿದ್ದೇನೆ. ಆದರೆ ನನ್ನ ಜಾತ್ಯಾತೀತ ಅಜೆಂಡಾವನ್ನು ಜೆಡಿಎಸ್ ನಲ್ಲೂ ಮುಂದುವರೆಸುತ್ತೇನೆ ಎಂದರು.

    ಲಾಭ ಇಲ್ಲ: ಪಕ್ಷ ಪರಿಸ್ಥಿತಿ ಸನ್ನಿವೇಶ ಇದನ್ನೇ ಪ್ರಶ್ನಿಸುತ್ತಿದ್ದರೆ ಯಾವ ಲಾಭವೂ ಇಲ್ಲ. ಇಂದು ಹೊಸ ಮನೆಗೆ ಬಂದಿದ್ದೇನೆ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ದುಡಿದ್ದೇನೋ ಅದೇ ಉತ್ಸಾಹದಿಂದ ಜೆಡಿಎಸ್ ನಲ್ಲಿ ದುಡಿಯುವೆ. 2006ರಲ್ಲಿ ಸಿಎಂ ಆಗಿದ್ದಾಗ ಕುಮಾರಸ್ವಾಮಿ ಬಗ್ಗೆ ವಿಧಾನಸೌಧದಲ್ಲಿ ಮೆಚ್ಚುಗೆ ಮಾತನಾಡಿದ್ದೆ. ಈಗ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ದೇವೇಗೌಡರು ದೇವರಲ್ಲಿ ಅಪಾರ ನಂಬಿಕೆ ಇಟ್ಟವರು. ಅಂತವರ ಜೊತೆ, ನಿಮ್ಮೆಲ್ಲರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಯೋಗ. ಮುಖಂಡರ ಜೊತೆ ಕುಳಿತು ಚರ್ಚಿಸಿ, ತಂತ್ರಗಾರಿಕೆ ಮಾಡಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಎಂದು ವಿಶ್ವನಾಥ್ ಹೇಳಿದರು.

    ಪ್ರಾಮಾಣಿಕ ರಾಜಕಾರಣಿ: ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಎಚ್. ವಿಶ್ವನಾಥ್ ಪ್ರಾಮಾಣಿಕ ರಾಜಕಾರಣಿ. ತಮ್ಮ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾರೆ. ಕಳೆದ ಹಲವಾರು ತಿಂಗಳಿನಲ್ಲಿ ಮಾಧ್ಯಮದವರು ವಿಶ್ವನಾಥ್ ಸೇರ್ಪಡೆ ಬಗ್ಗೆ ಕೇಳ್ತಿದ್ರು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ವಿಶ್ವನಾಥ್ ಪಕ್ಷ ಸೇರಲು ಮೈಸೂರು ಜಿಲ್ಲೆಯ ನಮ್ಮ ಶಾಸಕರೇ ಕಾರಣ ಎಂದು ಹೇಳಿದರು.

    10ರಲ್ಲಿ ಜಯ: ವಿಶ್ವನಾಥ್ ಅವರು ಮನಸ್ಸಿನಲ್ಲಿ ಎಷ್ಟು ನೊಂದಿದ್ದಾರೆ ಅನ್ನೊದು ನನಗೆ ಗೊತ್ತಿದೆ. 40 ವರ್ಷದ ದುಡಿಮೆ ಮಾಡಿಕೊಂಡ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಬರೋದು ಎಷ್ಟು ಕಷ್ಟ ಗೊತ್ತು. ವಿಶ್ವನಾಥ್ ಸೇರ್ಪಡೆಯಿಂದ ಮೈಸೂರು ಭಾಗದ 11 ಕ್ಷೇತ್ರಗಳ ಪೈಕಿ 10 ಕ್ಷೇತ್ರದಲ್ಲಿ ಜಯಗಳಿಸುವ ವಿಶ್ವಾಸ ಇದೆ. ದೇವೇಗೌಡರಿಂದ ಅನೇಕ ಜನ ಬೆಳೆದಿದ್ದಾರೆ. ಪಕ್ಷದಲ್ಲಿ ಬೆಳೆದವರೇ ಪಕ್ಷ ನಾಶ ಮಾಡಬೇಕು ಅಂತ ಓಡಾಡುತ್ತಿದ್ದಾರೆ. ಇಂತಹವರಿಗೇ ನೀವೇ ಪಾಠ ಕಲಿಸಬೇಕು ಎಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ನಾಯಕರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

    ಜೆಡಿಎಸ್ ಪಕ್ಷದಲ್ಲಿ ಬೆಳೆದ ಸಿಎಂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಆದರು. ಅವರು ಕಾಂಗ್ರೆಸ್ ಸೇರಲು ಪ್ರೇರೇಪಿಸಿದ್ದು ವಿಶ್ವನಾಥ್. 130 ವರ್ಷಗಳ ಇತಿಹಾಸದ ಬಗ್ಗೆ ಇವತ್ತು ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಸಿಎಂ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡುತ್ತಾರೆ. ನಾನೇನು ಸಿಎಂ ಆಗುವ ಕನಸು ಕಾಣ್ತಿಲ್ಲ. ಅಧಿಕಾರದ ಆಸೆ ನಮಗೆ ಇಲ್ಲ. ರಾಜ್ಯದ ಜನರ ಹಿತ ಕಾಯಲು ಜೆಡಿಎಸ್ ಗೆ ಅಧಿಕಾರ ಬೇಕು ಅಷ್ಟೇ. ಇದು ಅಪ್ಪಮಕ್ಕಳ ಪಕ್ಷ ಅಲ್ಲ. ಎಲ್ಲ ಸಮುದಾಯದವರು ಇಲ್ಲಿ ನಾಯಕರಾಗಿದ್ದಾರೆ ಎಂದರು.

    ಯಾರು ಏನೇ ಸಮೀಕ್ಷೆ ಮಾಡಲಿ. ಜೆಡಿಎಸ್ ಕೂಡಾ ಸಮೀಕ್ಷೆ ಮಾಡಿದೆ. ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದು ಗೊತ್ತಿದೆ. ಈ ಬಾರಿ ಅಷ್ಟು ಸುಲಭವಲ್ಲ. ಜೆಡಿಎಸ್ ಬಗ್ಗೆ ಮುಂದಿನ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಎಚ್‍ಡಿಕೆ ತಿಳಿಸಿದರು.

    ಎಚ್.ವಿಶ್ವನಾಥ್ ಜೊತೆ ಅವರ ಹಲವು ಬೆಂಬಲಿಗರು, ಕಾಂಗ್ರೆಸ್ ಮುಖಂಡರು ಜೆಡಿಎಸ್‍ಗೆ ಸೇರ್ಪಡೆಯಾದರು. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಪಕ್ಷದ ಬಾವುಟ, ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ವಿಶ್ವನಾಥ್ ಅವರ ಮಗ ಅಮಿತ್ ವಿಶ್ವನಾಥ್ ಕೂಡಾ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.

    ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಶ್ರೀಕಂಠೇಗೌಡ, ಶಾಸಕ ಜಿ.ಟಿ.ದೇವೆಗೌಡ, ಮಧು ಬಂಗಾರಪ್ಪ, ಮಾಜಿ ಶಾಸಕ ಬಂಡೇಪ್ಪ ಕಾಶಂಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

  • ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆಯಿಂದ ಆಂಬುಲೆನ್ಸ್ ಗೆ ದಾರಿ ಸಿಗದೆ ಪರದಾಟ

    ಚಿಕ್ಕಬಳ್ಳಾಪುರದಲ್ಲಿ ಕೆಂಪೇಗೌಡ ಜಯಂತಿ ಮೆರವಣಿಗೆಯಿಂದ ಆಂಬುಲೆನ್ಸ್ ಗೆ ದಾರಿ ಸಿಗದೆ ಪರದಾಟ

    – ಕೈ ಕೈ ಮಿಲಾಯಿಸಿದ ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು

    ಚಿಕ್ಕಬಳ್ಳಾಪುರ: ಜಿಲ್ಲಾಸ್ಪತ್ರೆಯ ಬಳಿ ಕೆಂಪೇಗೌಡ ಜಯಂತಿಯ ಮೆರವಣಿಗೆಯಿಂದಾಗಿ ಆಸ್ಪತ್ರೆಗೆ ಹೋಗಬೇಕಾಗಿದ್ದ ಆಂಬುಲೆನ್ಸ್ ಕೆಲಕಾಲ ದಾರಿ ಸಿಗದೆ ಪರದಾಡುವಂತಾದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

    ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾಗವಹಿಸಿದ್ದ ಮೆರವಣಿಗೆಯಲ್ಲಿ ಸಾವಿರಾರು ಜನರು ಹಾಗೂ ಟ್ರ್ಯಾಕ್ಟರ್‍ಗಳು ಇದ್ದ ಕಾರಣ ಆಂಬುಲೆನ್ಸ್‍ಗೆ ದಾರಿ ಸುಲಭವಾಗಲಿಲ್ಲ. ಆಂಬುಲೆನ್ಸ್ ನಲ್ಲಿ ತಾಯಿ ಮಗು ಆಸ್ಪತ್ರೆಗೆ ಹೋಗಲು ರಸ್ತೆಯಲ್ಲಿ ಕೆಲಕಾಲ ಪರದಾಡುವಂತಾಯಿತು. ನಂತರ ಪೋಲಿಸರು ಆಂಬುಲೆನ್ಸ್ ಗೆ ದಾರಿ ಮಾಡಿಕೊಡಲು ಸಾಕಷ್ಟು ಹರಸಾಹಸಪಟ್ಟರು.

    ಜೆಡಿಎಸ್-ಕಾಂಗ್ರೆಸ್ ಗಲಾಟೆ: ಕೇಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡ ಘಟನೆಯೂ ನಡೆದಿದೆ. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಜಯಂತಿ ವೇಳೆ ವೇದಿಕೆ ಮುಂಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ತಳ್ಳಾಟ ನೂಕಾಟ ನಡೆಸಿ ಗಲಾಟೆ ನಡೆಸಿದ್ದಾರೆ.

    ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಶಾಸಕ ಡಾ.ಕೆ.ಸುಧಾಕರ್ ಗನ್‍ಮ್ಯಾನ್ ತಿಮ್ಮಯ್ಯ ಜೆಡಿಎಸ್ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಆರೋಪಿಸಿ, ಜೆಡಿಎಸ್ ಕಾರ್ಯಕರ್ತರು ಗನ್ ಮ್ಯಾನ್ ಜೊತೆ ವಾಗ್ವಾದಕ್ಕಿಳಿದಾಗ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ತಕ್ಷಣ ಪೊಲೀಸರ ಮಧ್ಯಪ್ರವೇಶದಿಂದಾಗಿ ಪರಿಸ್ಥಿತಿ ತಿಳಿಗೊಂಡಿತು.

  • ಜಂತಕಲ್ ಮೈನಿಂಗ್ ಪ್ರಕರಣ- ಹೆಚ್‍ಡಿಕೆಯ ನಿರೀಕ್ಷಣಾ ಜಾಮೀನು ಅವಧಿ ಅಂತ್ಯ

    ಜಂತಕಲ್ ಮೈನಿಂಗ್ ಪ್ರಕರಣ- ಹೆಚ್‍ಡಿಕೆಯ ನಿರೀಕ್ಷಣಾ ಜಾಮೀನು ಅವಧಿ ಅಂತ್ಯ

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್‍ಡಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗುವ ಭೀತಿ ಇದೆ. ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತಾತ್ಕಾಲಿಕ ನಿರೀಕ್ಷಣಾ ಜಾಮೀನು ಅವಧಿ ಇಂದಿಗೆ ಮುಕ್ತಾಯವಾಗಲಿದೆ.

    ಕಳೆದ ಐದು ದಿನದ ಹಿಂದೆ ಹೆಚ್‍ಡಿಕೆ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮಂಗಳವಾರದವರೆಗೆ ಹೆಚ್‍ಡಿಕೆ ಬಂಧಿಸದಂತೆ ಸೂಚಿಸಿತ್ತು. ಈ ಅವಧಿ ಇಂದಿಗೆ ಅಂತ್ಯವಾಗಲಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿಗೆ ಬಂಧನ ಭೀತಿ ಉಂಟಾಗಿದೆ. ಅಲ್ದೆ ಜೂನ್ 13ರಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಎಸ್‍ಐಟಿಗೆ ಸಿಡಿ ಸಮೇತ ಹಲವು ದಾಖಲೆ ನೀಡಿದ್ರು.

    ಏನಿದು ಜಂತಕಲ್ ಮೈನಿಂಗ್ ಕೇಸ್?: ವಿನೋದ್ ಗೋಯಲ್ ಮಾಲೀಕತ್ವದ ಜಂತಕಲ್ ಮೈನಿಂಗ್ ಎಂಟರ್ ಪ್ರೈಸಸ್ ಕಂಪೆನಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೀರೆಕಂದವಾಡಿ ಮತ್ತು ತನಿಗೇಹಳ್ಳಿಯಲ್ಲಿ ಅದಿರು ಸಾಗಿಸಲು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಆಗಿನ ಸರ್ಕಾರ 2007ರಲ್ಲಿ ಅನುಮತಿ ನೀಡಿತ್ತು. ಕಪ್ಪು ಪಟ್ಟಿಯಲ್ಲಿದ್ದ ವಿನೋದ್ ಗೋಯಲ್ ಮಾಲೀಕತ್ವದ ಕಂಪೆನಿಗೆ ಅನುಮತಿ ನೀಡಿದ ಪರಿಣಾಮ ಪಾಕಿಸ್ತಾನಕ್ಕೆ ಅಕ್ರಮ ಅದಿರು ಸಾಗಾಟವಾಗಿದ್ದು, ರಾಜ್ಯದ ಬೊಕ್ಕಸಕ್ಕೆ 250 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಹಿಂದಿನ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ವರದಿ ನೀಡಿದ್ದರು.

    ಇದನ್ನೂ ಓದಿ: ಜಂತಕಲ್ ಮೈನಿಂಗ್: ಹೆಚ್‍ಡಿಕೆ ವಿರುದ್ಧ ಎಸ್‍ಐಟಿಗಿಂದು ಸಾಕ್ಷಿ, ಕುಮಾರಸ್ವಾಮಿ ವಿರುದ್ಧ ರೆಡ್ಡಿ ಕೆಂಡಾಮಂಡಲ

    ಇದನ್ನೂ ಓದಿ: ಜಂತಕಲ್ ಮೈನಿಂಗ್ ಅಕ್ರಮ: ಎಚ್‍ಡಿ ಕುಮಾರಸ್ವಾಮಿಗೆ ಬಿಗ್ ರಿಲೀಫ್

    ಇದನ್ನೂ ಓದಿ: ಜಂತಕಲ್ ಮೈನಿಂಗ್ ಪ್ರಕರಣ ರಾಜಕೀಯ ಪ್ರೇರಿತ: ಹೆಚ್‍ಡಿಕೆ

    ಇದನ್ನೂ ಓದಿ: ಜಂತಕಲ್ ಅಕ್ರಮ ಮೈನಿಂಗ್ ಕೇಸ್: ಎಚ್‍ಡಿಕೆ ಜಾಮೀನು ಅರ್ಜಿ ವಜಾ

    ಇದನ್ನೂ ಓದಿ: ಎಚ್‍ಡಿಕೆಗೆ ಬಿಗ್ ರಿಲೀಫ್: ಏನಿದು ಜಂತಕಲ್ ಮೈನಿಂಗ್ ಕೇಸ್? ಕೋರ್ಟ್ ನಲ್ಲಿ  ಏನಾಯ್ತು?

  • ಪಕ್ಷ ಸಂಘಟನೆ ಕೈಬಿಡದಿದ್ರೆ ಕೊಲೆ ಮಾಡ್ತೀವಿ- ಜೆಡಿಎಸ್ ಮುಖಂಡನಿಗೆ ಪತ್ರದ ಮೂಲಕ ಬೆದರಿಕೆ

    ಪಕ್ಷ ಸಂಘಟನೆ ಕೈಬಿಡದಿದ್ರೆ ಕೊಲೆ ಮಾಡ್ತೀವಿ- ಜೆಡಿಎಸ್ ಮುಖಂಡನಿಗೆ ಪತ್ರದ ಮೂಲಕ ಬೆದರಿಕೆ

    ಕೊಪ್ಪಳ: ಪಕ್ಷ ಸಂಘಟನೆ ಕೈಬಿಡದಿದ್ರೆ ಕೊಲೆ ಮಾಡುವುದಾಗಿ ಜೆಡಿಎಸ್ ಮುಖಂಡನಿಗೆ ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಹಾಕಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿಗೆ ಅನಾಮಧೇಯ ಪತ್ರ ಬಂದಿದೆ. “ಜೆಡಿಎಸ್ ಪಕ್ಷವನ್ನ ಸಂಘಟಿಸುತ್ತೇನಲೆ. ಪಕ್ಷ ಸಂಘಟಿಸಿ ಜೆಡಿಎಸ್ ಗೆಲ್ಲಿಸುತ್ತೇನಲೆ. ನಿನಗೆ ನಾವೂ ಅನೇಕ ಸಹಿತ ತೊಂದರೆ ಕೊಟ್ಟಋಉ, ಕೊಡುತ್ತಿದ್ದರೂ ಸಹಿತ ಬುದ್ಧಿ ಕಲಿಯದ ನೀನು ಇನ್ನೂ ಪಕ್ಷ ಸಂಘಟನೆ ಮಾಡುತ್ತಿದ್ದೀಯಾ? ಇಲ್ಲಿಗೆ ನೀನು ಪಕ್ಷ ಸಂಘಟನೆ ಮಾಡೋದನ್ನ ಬಿಟ್ಟು ಬಿಡು. ಇಲ್ಲವಾದರೆ ನಿನ್ನ ಮೇಲೆ ವಾಹನ ಹಾಯಿಸಿ ಸಾಯಿಸಿಬಿಡುತ್ತೇವೆ. ನಿನ್ನನ್ನು ಜೀವಸಹಿತ ಬಿಡುವುದಿಲ್ಲ. ಇಲ್ಲಿಗೆ ಬುದ್ಧಿ ಕಲಿತು ಜೆಡಿಎಸ್ ಪಕ್ಷವನ್ನು ಬಿಟ್ಟು ಬಿಡು ಹುಷಾರ್” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ಈ ಕುರಿತು ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಹೊಸಮನಿ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

  • ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧಾರ- ಕುತೂಹಲ ಮೂಡಿಸಿದೆ ಜೆಡಿಎಸ್ ನಡೆ

    ಹೊರಟ್ಟಿಗೆ ಸಭಾಪತಿ ಸ್ಥಾನ ನೀಡಲು ಕಾಂಗ್ರೆಸ್ ನಿರ್ಧಾರ- ಕುತೂಹಲ ಮೂಡಿಸಿದೆ ಜೆಡಿಎಸ್ ನಡೆ

    ಬೆಂಗಳೂರು: ವಿಧಾನ ಪರಿಷತ್ ಸಭಾಪತಿಗಳ ವಿರುದ್ಧದ ಅವಿಶ್ವಾಸ ನಿರ್ಣಯದ ಕ್ಲೈಮ್ಯಾಕ್ಸ್ ಇಂದು ನಡೆಯಲಿದ್ದು, ಕ್ಷಣಕ್ಷಣಕ್ಕೂ ರಾಜಕೀಯ ಲೆಕ್ಕಾಚಾರ ಬದಲಾಗ್ತಿದೆ. ಮುಖಭಂಗದಿಂದ ಪಾರಾಗಲು ಕಾಂಗ್ರೆಸ್ ಪಾಳಯದಿಂದ ಹೊಸ ದಾಳ ಉರುಳಿದೆ. ಸಭಾಪತಿ ಸ್ಥಾನವನ್ನು ಜೆಡಿಎಸ್‍ಗೆ ನೀಡಲು ಕಾಂಗ್ರೆಸ್ ಮುಂದಾಗಿದ್ದು, ಬಸವರಾಜ ಹೊರಟ್ಟಿಗೆ ನೀಡಲು ಸಮ್ಮತಿಸಿದೆ.

    ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಸಿಎಂ ಸಿದ್ದರಾಮಯ್ಯ ಕರೆಮಾಡಿ ಸಭಾಪತಿ ಶಂಕರಮೂರ್ತಿ ಅವರನ್ನ ಕೆಳಗಿಳಿಸಲು ಜೆಡಿಎಸ್ ಬೆಂಬಲ ಕೋರಿದ್ದಾರೆ. ಕಾಂಗ್ರೆಸ್ ನಿರ್ಣಯವನ್ನು ಬೆಂಬಲಿಸುವಂತೆ ಜೆಡಿಎಸ್‍ಗೆ ಸಚಿವ ಪರಮೇಶ್ವರ್ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಿರ್ಣಯ ಏನು? ಎಂಬ ಕುತೂಹಲ ಮೂಡಿಸಿದೆ

    ಜೆಡಿಎಸ್ ಬೆಂಬಲ ನಮಗೇ ಇದೇ ಎಂದು ಸಭಾಪತಿ ಡಿಹೆಚ್ ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಬೆಂಬಲ ಬಿಜೆಪಿಗೆ ಎಂದು ಕುಮಾರಸ್ವಾಮಿಯವರೇ ಹೇಳಿರುವಾಗ ಗೊಂದಲ ಏಕೆ ಎಂದು ಶಂಕರಮೂರ್ತಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಸ್‍ಗೆ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ ತೀವ್ರ ಆಕ್ರೋಶ ಹೊರಹಾಕಿದ್ದಾರೆ

    ಕಾಂಗ್ರೆಸ್ ಸದಸ್ಯರ ಅವಿಶ್ವಾಸ ನಿರ್ಣಯದ ಬಳಿಕ ಮತದಾನ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಮೂರು ಪಕ್ಷಗಳು ಸದನದಲ್ಲಿ ಕಡ್ಡಾಯವಾಗಿ ಇಂದು ಹಾಜರಿರುವಂತೆ ತಮ್ಮ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಈವರೆಗೂ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಜೆಡಿಎಸ್ ಶಾಸಕರಿಗೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೂಚಿಸಿಲ್ಲ. ಹೀಗಾಗಿ ಇಂದು ಪರಿಷತ್ ನಲ್ಲಿ ಬೇರೆ ಹೈಡ್ರಾಮಾ ನಡೆದರೂ ಅಚ್ಚರಿ ಪಡಬೇಕಿಲ್ಲ. ಸಂಖ್ಯಾಬಲದ ಪ್ರಕಾರ ಬಿಜೆಪಿ- ಜೆಡಿಎಸ್ ದೋಸ್ತಿ ಮುಂದುವರೆದ್ರೆ ಬಿಜೆಪಿಗೆ ಯಾವುದೇ ಆತಂಕವಿಲ್ಲ. ಒಂದು ವೇಳೆ ಜೆಡಿಎಸ್ ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದರೆ ಬಿಜೆಪಿಯಿಂದ ಸಭಾಪತಿ ಸ್ಥಾನ ಕೈ ತಪ್ಪಲಿದೆ.

    ಇವತ್ತಿನ ಪರಿಷತ್ ಅವಿಶ್ವಾಸ ನಿರ್ಣಯ ಪ್ರಕ್ರಿಯೆಯಲ್ಲಿ ಪಕ್ಷೇತರ ಅಭ್ಯರ್ಥಿಗಳು ಕಿಂಗ್ ಮೇಕರ್. ಸದ್ಯ 5 ಪಕ್ಷೇತರರ ಪೈಕಿ ಮೂರು ಸದಸ್ಯರು ಕಾಂಗ್ರೆಸ್ ಬೆಂಬಲಿತರಿದ್ದು, ಇಬ್ಬರು ಬಿಜೆಪಿ ಜೆಡಿಎಸ್ ಬೆಂಬಲಿತ ಸದಸ್ಯರಿದ್ದಾರೆ. ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಇಬ್ಬರಲ್ಲಿ ಒಬ್ಬರು ಹಿಂದೆ ಸರಿದರೂ ಬಿಜೆಪಿಗೆ ಸಭಾಪತಿ ಸ್ಥಾನ ಮಿಸ್ ಆಗಲಿದೆ. ಹೀಗಾಗಿ ಪಕ್ಷೇತರ ಅಭ್ಯರ್ಥಿಗಳು ಇಂದಿನ ಮತದಾನದಲ್ಲಿ ಕಿಂಗ್ ಮೇಕರ್ ಸ್ಥಾನ ಅಲಂಕರಿಸಿದ್ದಾರೆ.

    ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33 , ಬಿಜೆಪಿ 22, ಜೆಡಿಎಸ್ 13 ,ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ. ಇನ್ನು ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರಿಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಲಿದೆ.

  • ಸಭಾಪತಿ ಚುನಾವಣೆ: ಕಾಂಗ್ರೆಸ್‍ನತ್ತ ದೇವೇಗೌಡರ ಒಲವು- ಬಿಜೆಪಿಗೆ ಬೆಂಬಲ ಅಂದ್ರು ಹೆಚ್‍ಡಿಕೆ

    ಸಭಾಪತಿ ಚುನಾವಣೆ: ಕಾಂಗ್ರೆಸ್‍ನತ್ತ ದೇವೇಗೌಡರ ಒಲವು- ಬಿಜೆಪಿಗೆ ಬೆಂಬಲ ಅಂದ್ರು ಹೆಚ್‍ಡಿಕೆ

    ಬೆಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು 10 ತಿಂಗಳಷ್ಟೇ ಬಾಕಿ ಇರುವಂತೆ ಪರಿಷತ್ ಸಭಾಪತಿ ಬಿಜೆಪಿಯ ಡಿಹೆಚ್ ಶಂಕರಮೂರ್ತಿಯವರನ್ನು ಕೆಳಗಿಳಿಸುವ ಕಾಂಗ್ರೆಸ್ ತಂತ್ರ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

    ಸಭಾಪತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಜೆಡಿಎಸ್ ಮೇಲ್ಮನೆಯಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸಬೇಕೇ ಅಥವಾ ಕಾಂಗ್ರೆಸ್‍ನೊಂದಿಗೆ ಕೈ ಜೋಡಿಸಬೇಕೇ ಅನ್ನೋ ಗೊಂದಲದಲ್ಲಿದೆ.

    ಸಭಾಪತಿ ಚುನಾವಣೆ ಸಂಬಂಧ ಪರಿಷತ್ ಸದಸ್ಯರ ಜೊತೆಗೆ ತಡರಾತ್ರಿ ಸಭೆ ನಡೆಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿ ನಂತರ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದರು. ದೇವೇಗೌಡರು ಕಾಂಗ್ರೆಸ್ ಜೊತೆಗೆ ಮೈತ್ರಿಗೆ ಒಲುವು ತೋರಿದ್ದರೆ ಕುಮಾರಸ್ವಾಮಿ ಮನಸ್ಸು ಬಿಜೆಪಿಯತ್ತ ವಾಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ದೇವೇಗೌಡರ ವಿವೇಚನೆಗೆ ಬಿಡಲಾಗಿದೆ.

    ಸಭಾಪತಿ ಸ್ಥಾನ ಬಿಟ್ಟುಕೊಡುವ ಪಕ್ಷಕ್ಕೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಯೋಚಿಸುತ್ತಿದೆ. ಮಂಗಳವಾರದಂದು ಕೆಪಿಸಿಸಿ ಅಧ್ಯಕ್ಷ ಗೃಹ ಸಚಿವ ಪರಮೇಶ್ವರ್ ದೇವೇಗೌಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಪಾಲಿಕೆಯಲ್ಲಿನ ಮೈತ್ರಿಯಂತೆ ಪರಿಷತ್‍ನಲ್ಲೂ ಕೈ ಜೋಡಿಸೋಣ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಪರಮೇಶ್ವರ್. ಇತ್ತ ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

    ವಿಧಾನ ಪರಿಷತ್‍ನ ಸಂಖ್ಯಾಬಲದ ಡಿಟೇಲ್ಸ್ ಹೀಗಿದೆ:
    * ಒಟ್ಟು ಸದಸ್ಯರ ಸಂಖ್ಯೆ -75
    * ಪ್ರಸ್ತುತ ಸದಸ್ಯರ ಸಂಖ್ಯೆ – 74 (ವಿಮಲಾ ಗೌಡ ನಿಧನದಿಂದ 1 ಸ್ಥಾನ ಖಾಲಿ)
    * ಬಹುಮತಕ್ಕೆ- 38
    * ಕಾಂಗ್ರೆಸ್ – 33
    * ಜೆಡಿಎಸ್ – 13
    * ಬಿಜೆಪಿ – 22
    * ಪಕ್ಷೇತರ – 05
    * ಸಭಾಪತಿ – 01

    ಪರಿಷತ್ ನಲ್ಲಿ ಒಟ್ಟಾರೆ 75 ಸದಸ್ಯರು ಇದ್ದಾರೆ. ಇತ್ತೀಚೆಗೆ ನಿಧನರಾದ ಬಿಜೆಪಿಯ ವಿಮಲಗೌಡರ ಸ್ಥಾನ ಹೊರತುಪಡಿಸಿದ್ರೆ ಒಟ್ಟಾರೆ ಸದನದಲ್ಲಿ ಸದ್ಯ ಸಂಖ್ಯಾಬಲ 74 ಆಗಲಿದೆ. ಇದರ ಅನ್ವಯ ಸರಳ ಬಹುಮತಕ್ಕೆ 38 ಸ್ಥಾನಗಳು ಅವಶ್ಯಕವಾಗಿದೆ.

    ಸಂಖ್ಯಾಬಲದ ಪ್ರಕಾರ ಪೂರ್ಣ ಬಹುಮತ ಪಡೆಯಲು ಕಾಂಗ್ರೆಸ್‍ಗೆ 2 ಸ್ಥಾನಗಳ ಕೊರತೆಯಿದೆ. ಸದ್ಯ ಸದನದಲ್ಲಿ ಕಾಂಗ್ರೆಸ್ 33, ಬಿಜೆಪಿ 22, ಜೆಡಿಎಸ್ 13, ಪಕ್ಷೇತರರು 5 ಸ್ಥಾನಗಳಿವೆ. ಸಭಾಪತಿಗಳ ಒಂದು ಸ್ಥಾನ ಇದೆ. ಕಾಂಗ್ರೆಸ್ ಜೊತೆ ಪಕ್ಷೇತರ ಮೂರು ಸದಸ್ಯರು ಗುರುತಿಸಿಕೊಂಡಿದ್ದು 33 ಕಾಂಗ್ರೆಸ್ ಸದಸ್ಯರ ಜೊತೆ 3 ಪಕ್ಷೇತರರು ಸೇರಿದ್ರೆ ಒಟ್ಟು 36 ಸ್ಥಾನವಾಗಲಿದೆ.

    ಬಿಜೆಪಿ-ಜೆಡಿಎಸ್ ದೋಸ್ತಿ ಮುಂದುವರೆಸಿದ್ರೆ ಸರಳ ಬಹುಮತದೊಂದಿಗೆ ಹಾಲಿ ಸಭಾಪತಿಗಳೇ ಮುಂದುವರೆಯುತ್ತಾರೆ. ಇಬ್ಬರು ಪಕ್ಷೇತರರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದು, ಬಿಜೆಪಿ 33 + ಜೆಡಿಎಸ್ 13 ಸೇರಿ ಒಟ್ಟು 37 ಸ್ಥಾನವಾಗಲಿದೆ. ಸಭಾಪತಿಗಳು ಬಿಜೆಪಿಯವರಾಗಿರೋದ್ರೀಂದ ಅವರ ಮತ ಬಿಜೆಪಿಗೆ ಸಿಗಲಿದ್ದು ಒಟ್ಟಾರೆ 38 ಸ್ಥಾನಗಳ ಮೂಲಕ ಬಿಜೆಪಿಗೆ ಸಭಾಪತಿ ಸ್ಥಾನ ದೊರೆಯಬಹುದಾಗಿದೆ.

  • ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    ಕುಮಾರಸ್ವಾಮಿಗೆ ನಂಬಿಕೆದ್ರೋಹ ಮಾಡಿದ್ದು ನಾವಲ್ಲ, ಬಿಎಸ್‍ವೈಗೆ ಹೆಚ್‍ಡಿಕೆಯಿಂದ ದ್ರೋಹ: ಚೆಲುವರಾಯಸ್ವಾಮಿ

    – ಮುಂದಿನ ಚುನಾವಣೆಗೆ ನಾಗಮಂಗಲದಿಂದಲೇ ಸ್ಪರ್ಧೆ

    ಬೆಂಗಳೂರು: ಕುಮಾರಸ್ವಾಮಿ ಅವರಿಗೆ ದ್ರೋಹ ಮಾಡಿದ್ದು ನಾವಲ್ಲ. ಯಡಿಯೂರಪ್ಪಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದು ಎಂದು ಜೆಡಿಎಸ್ ರೆಬಲ್ ಶಾಸಕ ಚಲುವರಾಯಸ್ವಾಮಿ ಹೇಳಿದ್ದಾರೆ.

    ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರೋ ಚಲುವರಾಯಸ್ವಾಮಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕುಮಾರಸ್ವಾಮಿಯವರಿಗೆ ನಂಬಿಕೆ ದ್ರೋಹ ಮಾಡಿದ್ದು ನಾವಲ್ಲ. ರಾಮಕೃಷ್ಣ ಹೆಗಡೆ ಬೊಮ್ಮಯ್ಯ ಜೆಡಿಎಸ್ ಪಕ್ಷದಲ್ಲಿ ಏನಾಯ್ತು. ಯಡಿಯೂರಪ್ಪರಿಗೆ ನಂಬಿಕೆ ದ್ರೋಹ ಮಾಡಿದ್ದು ಕುಮಾರಸ್ವಾಮಿ. ಬಿಜೆಪಿ ಬೆಂಬಲ ಇಲ್ಲದೆ ಕುಮಾರಸ್ವಾಮಿ ಸಿಎಂ ಆಗ್ತಿದ್ರಾ? ದೇವೇಗೌಡರು ಸಿಎಂ ಆಗೋಕೆ ಬೆಂಬಲ ನೀಡಿದ್ದು ಯಾರು? ಬಿಎಸ್‍ವೈ ಗೆ 20 ತಿಂಗಳು ಅಧಿಕಾರ ಕೊಡದೆ ದ್ರೋಹ ಮಾಡಿದ್ದು ಯಾರು? ನಂಬಿಕೆ ದ್ರೋಹ ಮಾಡಿದ್ದು ಯಾರು ಮೊದಲು ಅರ್ಥ ಮಾಡಿಕೊಳ್ಳಲಿ ಅಂದ್ರು.

    ಮುಂದಿನ ಚುನಾವಣೆಯಲ್ಲಿ ನಾಗಮಂಗಲದಿಂದಲೇ ಸ್ಪರ್ಧೆ ಮಾಡುತ್ತೇನೆ. ಜೆಡಿಎಸ್ ಪಕ್ಷದಿಂದ ನಿಲ್ಲೋದಿಲ್ಲ. ಯಾವ ಪಕ್ಷ ಅಂತ ಮುಂದೆ ಗೊತ್ತಾಗುತ್ತೆ. ಯಾವ ಪಕ್ಷ ಅಂತ ಆದಷ್ಟು ಬೇಗ ನಿರ್ಧಾರ ಮಾಡ್ತೀನಿ. ಬಿಜೆಪಿ ಜೊತೆ ಮಾತುಕತೆ ಆಗಿಲ್ಲ. ಎಸ್.ಎಂ.ಕೃಷ್ಣ ಜೊತೆ ನಾನು ಮಾತಾಡಿಲ್ಲ. ಬಿಜೆಪಿಯ ಯಾವ ನಾಯಕರ ಜೊತೆ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಡಿಕೆ ಶಿವಕುಮಾರ್, ಪರಮೇಶ್ವರ್ ಮಾತಿಗೂ ನಮಗೂ ಸಂಬಂಧವಿಲ್ಲ. ಅವರೊಂದಿಗೆ ನಾವು ಚರ್ಚೆ ಮಾಡಿಲ್ಲ. ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸಿ ನಾವು ತೀರ್ಮಾನ ಮಾಡ್ತೀವಿ. ಆದಷ್ಟು ಬೇಗ ರಾಜಕೀಯ ನಿರ್ಧಾರ ಪ್ರಕಟ ಮಾಡ್ತೀವಿ ಅಂದ್ರು.