Tag: Jayashree

  • ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್  ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ‘ಬಿಗ್ ಬಾಸ್’ ಮನೆಯಲ್ಲಿ ಜಯಶ್ರೀ ಕಡೆಯಿಂದ ಮೇಕಪ್ ಮಾಡಿಸಿಕೊಂಡ ಆರ್ಯವರ್ಧನ್ ಗುರೂಜಿ

    ದೊಡ್ಮನೆ ಕಾಳಗ ಈಗಾಗಲೇ ಶುರುವಾಗಿ ಒಂದು ವಾರ ಪೂರೈಸಿದೆ. ಬಿಗ್ ಬಾಸ್ ಮನೆ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇದೆ. ಸ್ಪರ್ಧಿಗಳು ನಾ‌ನಾ ವಿಚಾರವಾಗಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಸದ್ಯ ಜಯಶ್ರೀ ಆರಾಧ್ಯ ಅವರು ಗುರೂಜಿ ಆರ್ಯವರ್ಧನ್ ಮೇಕಪ್ ಮಾಡಿರೋದು ನೆಟ್ಟಿಗರ ಗಮನ ಸೆಳೆದಿದೆ.

    ನಂಬರ್ ಅಂದ್ರೆ ನಾನು​, ನಾನು ಅಂದ್ರೆ ನಂಬರ್ ಎಂದು ಭವಿಷ್ಯ ಹೇಳುವ ಆರ್ಯವರ್ಧನ್​ ಗುರೂಜಿ ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೊಂದಿಗೆ ಬೆರೆತುಕೊಂಡು ಭಿನ್ನವಾಗಿ ಆಡುತ್ತಿದ್ದಾರೆ. ಹೀಗೆ ಬಿಗ್​ ಬಾಸ್​ ಮನೆಯ ಹೊರಾಂಗಣದಲ್ಲಿರುವಾಗ ಮೇಕಪ್​ ಹಚ್ಚಿಕೊಳ್ಳುವ ಬಯಕೆಯನ್ನು ತೋರ್ಪಡಿಸಿಕೊಂಡಿದ್ದಾರೆ. ಈ ವೇಳೆ ಹಿರಿಯ ಕಲಾವಿದೆ ಮಾರಿಮುತ್ತು ಅವರ ಮೊಮ್ಮಗಳು ಜಯಶ್ರೀ ಅವರು ಆರ್ಯವರ್ಧನ್​ ಗುರೂಜಿಗೆ ಮೇಕಪ್​ ಮಾಡಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಜಯಶ್ರೀ ಅವರ ಸಹಾಯದಿಂದ ಕಣ್ಣಿಗೆ ಕಾಜಲ್​, ಮುಖಕ್ಕೆ ಮೇಕಪ್​, ತುಟಿಗೆ ಲಿಪ್​ಸ್ಟಿಕ್​​ ಹಾಕಿಕೊಂಡಿದ್ದಾರೆ. ಬಳಿಕ ತುಟಿಗೆ ಹಚ್ಚಿರುವ ಮೇಕಪ್​ ಕೊಂಚ ಜಾಸ್ತಿಯಾದಂತೆ ಗುರೂಜಿಗೆ ಕಂಡಿದೆ. ಕೂಡಲೇ ಉಜ್ಜಲು ಪ್ರಯತ್ನಿಸಿದ್ದಾರೆ. ಈ ವೇಳೆ ಹತ್ತಿರವಿದ್ದ ಸ್ಪರ್ಧಿ ಸೋಮಣ್ಣ ಮಾಚಿವಾಡ ಅವರು ಗುರೂಜಿಗೆ ಹಾಗೆಯೇ ಇರಲಿ ತೆಗೆಯಬೇಡಿ ಎಂದು ಹೇಳಿದ್ದಾರೆ. ಕನ್ನಡಿ ನೋಡಿದ ಗುರೂಜಿ ಜಯಶ್ರೀ ಅವರ ಬಳಿ, ಇಷ್ಟೇನಾ ಮೇಕಪ್​ ಕರ್ರಗೆ ಕಾಣಿಸ್ತಾ ಇದ್ದೇನೆ, ಬೆಳ್ಳಗೆ ಮಾಡಿ ಎಂದಿದ್ದಾರೆ. ಒಟ್ನಲ್ಲಿ‌ ಈಗ ಗುರೂಜಿ ಹೊಸ ಲುಕ್ ಜತೆಗೆ ಜಯಶ್ರೀ ಮೇಕಪ್ ಮಾಡಿರುವ ರೀತಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ರೈತ ಸಂಘದ ಜಿಲ್ಲಾಧ್ಯಕ್ಷರನ್ನ ಏಕವಚನದಲ್ಲಿ ತರಾಟೆ ತೆಗೆದುಕೊಂಡ ರೈತ ಮಹಿಳೆ ಜಯಶ್ರೀ

    ಬೆಳಗಾವಿ: ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ಮತ್ತು ರೈತ ಮಹಿಳೆ ಜಯಶ್ರೀ ನಡುವೆ ಸಾರ್ವಜನಿಕವಾಗಿ ವಾಗ್ವಾದ ನಡೆದಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ನಡೆದಿದೆ.

    ಕೊಡಿಹಳ್ಳಿ ಚಂದ್ರಶೇಖರ ಅವರ ವಿರುದ್ಧ ಜಯಶ್ರೀ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಸಂಘದ ಅಧ್ಯಕ್ಷ ಸತ್ಯಪ್ಪಾ ಅವರು ಏಕವಚನದಲ್ಲಿ ಜಯಶ್ರೀ ಅವರ ಕುರಿತು ಮಾತನಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಜಯಶ್ರೀ ಅವರು ನನ್ನ ಬಗ್ಗೆ ಮಾತನಾಡ ಬೇಡ. ನನ್ನ ಬಗ್ಗೆ ಕೇವಲವಾಗಿ ಮಾತನಾಡಿದರೆ ಸರಿ ಇರುವುದಿಲ್ಲ. ನಿನ್ನ ಹಿಂದೆ ಎಷ್ಟು ಜನ ಬರುತ್ತಾರೆ ಎಂದು ಏಕವಚನದಲ್ಲೇ ಪ್ರಶ್ನಿಸಿ ತರಾಟೆ ತೆಗೆದುಕೊಂಡಿದ್ದಾರೆ.

    ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘದ ಮುಂದಾಳತ್ವದಲ್ಲಿ ಇಂದಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿತ್ತು. ಈ ವೇಳೆ ಘಟನೆ ನಡೆದಿದ್ದು, ಇಬ್ಬರ ಜಗಳವನ್ನು ಕಂಡ ಸಂಘದ ಇತರೇ ಸದಸ್ಯರು ಜಗಳ ಬಿಡಿಸಿದ್ದಾರೆ. ಬಳಿಕ ಸ್ಥಳದಿಂದ ರೈತ ಮಹಿಳೆ ಜಯಶ್ರೀ  ತೆರಳಿದ್ದಾರೆ.

    ಬೆಳಗಾವಿ ಅಧಿವೇಶನಕ್ಕೂ ಮುನ್ನ ಜಿಲ್ಲಾ ರೈತ ಸಂಘದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಆ ಬಳಿಕ ಸಂಘ ಎರಡು ಬಣಗಳಾಗಿ ವಿಭಜನೆ ಆಗಿದೆ ಎನ್ನಲಾಗಿದೆ. ಅಧಿವೇಶನಕ್ಕೂ ಮುನ್ನ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೂಡ ಸಂಘದಲ್ಲಿ ಉಂಟಾದ ಬಿರುಕಿನಿಂದ ಅಸಮಾಧಾನಗೊಂಡಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಅಂದು ಉಂಟಾದ ಅಸಮಾಧಾನವೇ ಇಂದು ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರು

    ಬೆಳಗಾವಿ: ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದ್ದು, ಇದರಿಂದ ರೈತ ಮಹಿಳೆ ಜಯಶ್ರೀ ಮತ್ತೆ ಕಣ್ಣೀರಿಟ್ಟಿದ್ದಾರೆ.

    ಇಂದು ಮತ್ತೆ ಬೆಳಗಾವಿ ಡಿಸಿ ಕಚೇರಿ ಎದುರು ಕಬ್ಬಿನ ಬೆಲೆ ನಿಗದಿ ಹಾಗೂ ಸಕ್ಕರೆ ಕಾರ್ಖಾನೆಗಳಿಂದ ಬಾಕಿ ಬಿಲ್ ಕೊಡಿಸುವಂತೆ ಆಗ್ರಹಿಸಿ ರೈತರು ಇಂದಿನಿಂದ ಆಹೋ ರಾತ್ರಿ ಧರಣಿ ಆರಂಭಿಸಿದ್ದಾರೆ. ಈ ವೇಳೆ ಜಯಶ್ರೀ ಹೆಸರಿಗೆ ಒಂದು ಅನಾಮಧೇಯ ವ್ಯಕ್ತಿಯಿಂದ ಪತ್ರ ಬಂದಿದೆ. ಪತ್ರ ನೋಡುತ್ತಿದ್ದಂತೆ ಜಯಶ್ರೀ ಕಣ್ಣೀರಿಟ್ಟಿದ್ದಾರೆ.

    ಪತ್ರ ನಾಲ್ಕು ಪುಟಗಳಲ್ಲಿದ್ದು, ರೈತ ಮಹಿಳೆ ಜಯಶ್ರೀಗೆ ಅವ್ಯಾಚ ಶಬ್ದಗಳಿಂದ ನಿಂದನೆ ಮಾಡಲಾಗಿದೆ. ಜೆಡಿಎಸ್ ಕಾರ್ಯಕರ್ತರೇ ಇದನ್ನ ಮಾಡಿರುವದಾಗಿ ಜಯಶ್ರೀ ಆರೋಪಿಸಿದ್ದು, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಬುದ್ಧಿವಾದ ಹೇಳುವಂತೆ ಜಯಶ್ರೀ ಮನವಿ ಮಾಡಿದ್ದಾರೆ.

    ಬೆಳಗಾವಿಯಲ್ಲಿ ತಣ್ಣಗಾಗಿದ್ದ ಕಬ್ಬು ಬೆಳೆಗಾರರ ಹೋರಾಟ ಮತ್ತೆ ಆರಂಭಾವಾಗಿದೆ. ಭಜನೆ ಮಾಡುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ಮಾಡಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದು ಮನೆಯಿಂದ ಊಟ ತಂದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಗೆ ಕಳಸಾ ಬಂಡೂರಿ ಹೋರಾಟಗಾರರು ಸಾಥ್ ನೀಡಿದ್ದು, ತಕ್ಷಣವೇ ಕಳಸಾ ಬಂಡೂರಿ ನಾಲಾ ಜೋಡಣೆ ಕಾಮಗಾರಿ ಆರಂಭವಾಗಬೇಕು ಹಾಗೂ ರೈತರ ಸಮಸ್ಯೆ ಬಗೆ ಹರಿಸಬೇಕು ಇಲ್ಲವಾದಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನ ರೈತರು ನೀಡಿದ್ದಾರೆ.

    ಈ ಹಿಂದೆ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಕುಮಾರಸ್ವಾಮಿ ಅವರು, ಇಷ್ಟು ದಿನ ಎಲ್ಲಿ ಮಲಗಿದ್ದೆ? ಎಂದು ರೈತ ಮಹಿಳೆ ಜಯಶ್ರೀಗೆ ಪ್ರಶ್ನಿಸಿದ್ದರು. ಇದರಿಂದ ಜಯಶ್ರೀ ತನ್ನ ವ್ಯಕ್ತಿತ್ವಕ್ಕೆ ಚ್ಯುತಿ ತಂದಿದೆ ಎಂದು ಕಣ್ಣೀರಿಟ್ಟಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

    ಸಿಎಂ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

    ಬೆಂಗಳೂರು: ಬೆಳಗಾವಿಯಲ್ಲಿ ಕಬ್ಬಿನ ಬಾಕಿ ಬಿಲ್ ಪಾವತಿ ಹಾಗೂ ಬೆಂಬಲ ಬೆಲೆ ನಿಗದಿಗಾಗಿ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಎಚ್‍ಡಿಕೆ ವಿರುದ್ಧ ದೂರು ದಾಖಲಾಗಿದೆ.

    ಸಿಎಂ ಕುಮಾರಸ್ವಾಮಿ ಅವರು ರೈತ ಮಹಿಳೆ ಜಯಶ್ರೀ ಬಗ್ಗೆ 4 ವರ್ಷದಿಂದ ಎಲ್ಲಿ ಮಲಗಿದ್ದೆ? ಎಂದು ಅವಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನವು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲಿಸಲಾಗಿದೆ.

    ಮಹಿಳೆಯರ ಗೌರವಕ್ಕೆ ಧಕ್ಕೆ ತಂದ ಆರೋಪದಡಿ ಐಪಿಸಿ ಸೆಕ್ಷನ್ 504 ಹಾಗೂ 509 ಅಡಿ ಸೂಕ್ತ ತನಿಖೆ ನಡೆಸಿ ಸಿಎಂ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಜಿ-ಐಜಿಪಿ ನೀಲಮಣಿ ಎನ್. ರಾಜುಗೆ ಮನವಿ ಮಾಡಿದ್ದಾರೆ.

    ಕಬ್ಬು ಬೆಳೆಗಾರರ ಹೋರಾಟದ ನಡುವೆಯೇ ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಕಬ್ಬು ರೈತರು ಮತ್ತು ಕಾರ್ಖಾನೆ ಮಾಲೀಕರ ಮಹತ್ವದ ಸಭೆ ನಡೆಯಲಿದೆ. ವಿಧಾನಸೌಧದಲ್ಲಿ ಮಧ್ಯಾಹ್ನ 12.30ಕ್ಕೆ ಗಂಟೆಗೆ ಸಭೆ ನಡೆಯಲಿದ್ದು, ಕಬ್ಬು ಬಾಕಿ ಪಾವತಿ ಮತ್ತು ರೈತರ ಇತರೆ ಬೇಡಿಕೆಗಳ ಕುರಿತು ಚರ್ಚೆ ನಡೆಯಲಿದೆ.

    ಈ ವೇಳೆ ರೈತರ ವಿರುದ್ಧ ಸಿಎಂ ಕುಮಾರಸ್ವಾಮಿ ಹೇಳಿಕೆ ಬಗ್ಗೆ ರೈತರು ತರಾಟೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇನ್ನೂ ರೈತರ ಸಭೆ ಮುಗಿದ ಬಳಿಕ ಬೆಂಬಲ ಬೆಲೆ ನಿಗದಿ ಮಾಡುವ ಕುರಿತು ಮಹತ್ವದ ಸಭೆ ನಡೆಯಲಿದ್ದು, ಇದರಲ್ಲಿ ಸಚಿವ ಜಾರ್ಜ್ ಸೇರಿದಂತೆ ಹಲವು ಸಚಿವರು, ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಕಬ್ಬು ಸೇರಿದಂತೆ ಇತರೆ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಿಗ್ ಮನೆಯಲ್ಲಿ ಜಯಶ್ರೀ, ಸೋನು ಕಣ್ಣೀರು

    ಬಿಗ್ ಮನೆಯಲ್ಲಿ ಜಯಶ್ರೀ, ಸೋನು ಕಣ್ಣೀರು

    ಬೆಂಗಳೂರು: ಬಿಗ್ ಬಾಸ್ ಸೀಸನ್ 6 ರ ಸ್ಪರ್ಧಿ ಆಂಡ್ರ್ಯೂ ಅಲಿಯಾಸ್ ಆ್ಯಂಡಿ ವಿನಾಕಾರಣ ಇಬ್ಬರ ತಲೆ ಮೇಲೆ ಮೊಟ್ಟೆ ಹೊಡೆದಿದ್ದು, ಪರಿಣಾಮ ಸ್ಪರ್ಧಿಗಳಾದ ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ.

    ಬಿಗ್ ಬಾಸ್ ಶುರುವಾದಗಿಂದಲೂ ಒಂದಲ್ಲ ಒಂದು ರೀತಿ ಆ್ಯಂಡಿ ಎಲ್ಲರಿಗೂ ಕಿತಾಪತಿ ಮಾಡುತ್ತಿದ್ದಾರೆ. ಜಯಶ್ರೀ ಮತ್ತು ಸೋನು ಪಾಟೀಲ್ ಸಸ್ಯಹಾರಿಗಳು. ಈ ಬಗ್ಗೆ ಆ್ಯಂಡಿಗೆ ತಿಳಿದಿದ್ದರೂ ಅವರನ್ನೇ ಟಾರ್ಗೆಟ್ ಮಾಡಿ ಮೊಟ್ಟೆ ಹೊಡೆದಿದ್ದಾರೆ. ಇದರಿಂದ ಜಯಶ್ರೀ ಮತ್ತು ಸೋನು ಅವರಿಗೆ ಬೇಸರವಾಗಿದ್ದು, ಗಳಗಳನೇ ಅತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆ್ಯಂಡಿ ಮನೆಯಲ್ಲಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ‘ಮಗು ಆಗೋಣ ಬಾ’ ಟಾಸ್ಕ್
    ಬಿಗ್ ಬಾಸ್ ಮನೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳಿಗೆ ‘ಮಗು ಆಗೋಣ ಬಾ’ ಟಾಸ್ಕ್ ಕೊಟ್ಟಿತ್ತು. ಅಂದರೆ ಮತ್ತೆ ಮಕ್ಕಳಾಗುವ ಅವಕಾಶವನ್ನ ಕೊಟ್ಟಿತ್ತು. ಇದರ ಪ್ರಕಾರ ಪ್ರತಿ ಬಾರಿ ಟಿವಿ ಪರದೆ ಮೇಲೆ ಯಾರ ಭಾವಚಿತ್ರ ಬರುತ್ತದೋ, ಅವರು ಮಗುವಿನ ಹಾಗೆ ವರ್ತಿಸಬೇಕು. ಉಳಿದ ಸ್ಪರ್ಧಿಗಳು ಮಗುವಿನ ಲಾಲನೆ-ಪಾಲನೆ ಮಾಡಬೇಕಿತ್ತು. ಈ ಟಾಸ್ಕ್ ನಲ್ಲಿ ಆಂಡ್ರ್ಯೂ ಮತ್ತು ಆಡಮ್ ಪಾಶಾ ಅವಳ-ಜವಳಿ ಮಕ್ಕಳ ಪಾತ್ರ ನಿಭಾಯಿಸಬೇಕಿತ್ತು.

    ಈ ವೇಳೆ ಆ್ಯಂಡಿ ನಾನು ಜೀವನದಲ್ಲಿ ತರ್ಲೆ ಮಾಡಲ್ಲ. ನನಗೆ ಇಬ್ಬರೂ ತುಂಬಾ ಇಷ್ಟ ಎಂದು ಹೇಳುತ್ತಾ ತನ್ನ ಜೇಬಿನಲ್ಲಿ ಇದ್ದ ಮೊಟ್ಟೆಗಳನ್ನ ತೆಗೆದುಕೊಂಡು ಸೋನು ಪಾಟೀಲ್ ಮತ್ತು ಜಯಶ್ರೀ ತಲೆ ಮೇಲೆ ಹೊಡೆದಿದ್ದಾರೆ. ಆದರೆ ಜಯಶ್ರೀ ಮತ್ತು ಸೋನು ಪಾಟೀಲ್ ಮೊಟ್ಟೆ ತಿನ್ನಲ್ಲ ಅಂತ ಆಂಡ್ರ್ಯೂಗೆ ಮೊದಲೇ ತಿಳಿದಿತ್ತು. ಆದರೂ ಅವರಿಗೆ ಮೊಟ್ಟೆ ಹೊಡೆದಿದ್ದಾರೆ.

    ಮೊಟ್ಟೆ ಹೊಡೆದಿದ್ದರಿಂದ ತಮ್ಮ ಭಾವನೆಗಳಿಗೆ ಧಕ್ಕೆ ಆದ ಪರಿಣಾಮ, ಜಯಶ್ರೀ ಮತ್ತು ಸೋನು ಪಾಟೀಲ್ ಕಣ್ಣೀರು ಹಾಕಿದ್ದಾರೆ. ತಮ್ಮ ತಾಯಿ ಜೊತೆಗೂ ಆಂಡ್ರ್ಯೂ ಇದೇ ರೀತಿ ನಡೆದುಕೊಳ್ಳುತ್ತಾರಾ ಅಂತ ಜಯಶ್ರೀ ಅಳುತ್ತಾ ಪ್ರಶ್ನಿಸಿದ್ದಾರೆ.

    ಟಾಸ್ಕ್ ನಲ್ಲಿ ಮೊಟ್ಟೆ ಹೊಡೆಯಲು ಬಿಗ್ ಬಾಸ್ ಮೊನ್ನೆ ಹೇಳಿದ್ದರು. ಅದು ಅವಮಾನನಾ? ಸಸ್ಯಹಾರಿಗೆ ಮೊಟ್ಟೆ ಹೊಡೆಯಬೇಕಿತ್ತು ಅಂತ ನೀವೆಲ್ಲ ಹೇಳಿದ್ದೀರಿ. ಅದಕ್ಕೆ ಮಾಡಿದೆ, ಆದರೆ ಈಗ ಫನ್ ಆಗಿ ಮಾಡಿದ್ದನ್ನ, ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎಂದು ಆಂಡ್ರ್ಯೂ ತಮ್ಮ ನಡೆಯನ್ನ ಸಮರ್ಥಿಸಿಕೊಂಡಿದ್ದಾರೆ. ಬಳಿಕ ಸೋನು ಪಾಟೀಲ್ ಮತ್ತು ಜಯಶ್ರೀಗೆ ನೇರವಾಗಿ ಕ್ಷಮೆ ಕೇಳುವ ಬದಲು ಲಿಖಿತ ರೂಪದಲ್ಲಿ ಬರೆದು ಕ್ಷಮೆ ಕೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಾಸ್ಟಿಂಗ್‍ಕೌಚ್ ಹೆಸರಲ್ಲಿ ಬಿಗ್‍ಬಾಸ್ ಹುಡುಗಿಯ ಚೆಲ್ಲಾಟ!

    ಕಾಸ್ಟಿಂಗ್‍ಕೌಚ್ ಹೆಸರಲ್ಲಿ ಬಿಗ್‍ಬಾಸ್ ಹುಡುಗಿಯ ಚೆಲ್ಲಾಟ!

    -ಈಕೆ ಶ್ರೀರೆಡ್ಡಿ ಅಭಿಮಾನಿ ಅಂದ್ರು ನಿರ್ದೇಶಕ!

    ಬೆಂಗಳೂರು: ಕಾಸ್ಟಿಂಗ್ ಕೌಚ್ ಹೆಸರಲ್ಲಿ ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ಚೆಲ್ಲಾಟ ಆಡುತ್ತಿದ್ದು, ಈಗ ತಾನು ನಿರ್ದೇಶಕರ ವಿರುದ್ಧ ಮಾಡಿದ್ದ ಆರೋಪ ಸುಳ್ಳು ಎಂದು ಫಿಲ್ಮ್ ಚೇಂಬರ್ ನಲ್ಲಿ ಮಾಧ್ಯಮಗಳ ಮುಂದೆ ಕ್ಷಮೆಯಾಚಿದ್ದಾರೆ.

    ಈ ಹಿಂದೆ ನಿರ್ದೇಶಕ ಮಂಜು ಹೆದ್ದೂರು ನನಗೆ ಕಾಸ್ಟಿಂಗ್ ಕೌಚ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಈ ಬಗ್ಗೆ ನಿರ್ದೇಶಕರ ಮಂಜು ಅವರು ಫಿಲ್ಮ್ ಚೇಂಬರ್ ಗೆ ದೂರು ನೀಡಿ ತಮ್ಮ ತಪ್ಪಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ನಟಿ ಜಯಶ್ರೀ ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪಿನ ಬಗ್ಗೆ ಹೇಳಿದ್ದಾರೆ.

    ಹಿರಿಯರ ಜೊತೆ ಮಾತನಾಡಿ ಕ್ಷಮೆ ಕೇಳಿದ್ದೇನೆ. ಅವರು ಊಟಕ್ಕೆ ಕರೆದಿದ್ದರು. ನಾನು ಅದಕ್ಕೆ ಓಕೆ ಡಿಯರ್ ಎಂದು ಹೇಳಿದ್ದೆ. ನಾನು ಅಪ್ಪ-ಅಮ್ಮನಿಗೂ ಡಿಯರ್ ಎಂದು ಕರೆಯುತ್ತೇನೆ. ಆದ್ದರಿಂದ ನಾನು ಕಾಮನ್ ಆಗಿ ಡಿಯರ್ ಎಂದು ಕರೆದೆ ಅಷ್ಟೇ. ಮೊದಲಿಗೆ ನಾನು ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿ ತಪ್ಪು ಮಾಡಿದೆ. ಆದ್ದರಿಂದ ಅದು ನನ್ನ ತಪ್ಪು ಎಂದು ಜಯಶ್ರೀ ಹೇಳಿದ್ದಾರೆ.

    ಈ ಬಗ್ಗೆ ನಿರ್ದೇಶಕ ಮಂಜು ಹೆದ್ದೂರು ಅವರು ಪ್ರತಿಕ್ರಿಯಿಸಿದ್ದು, ನನ್ನ ಸಂಸಾರ ಮುಳುಗೋದಲ್ಲ, ಹೆಚ್ಚು ಕಡಿಮೆ ಏನೇನೋ ಆಗಿರುತ್ತಿತ್ತು. ಸಿನಿಮಾದವರು ಎಂದು ನಮ್ಮನ್ನು ನೋಡುವ ರೀತಿಯ ಬದಲಾಗಿತ್ತು. ನಾನು ಲಾಂಗ್ ಡ್ರೈವ್ ಹೋಗೋಕೆ ಕರೆದರು ಎಂದು ಹೇಳಿದ್ದಾರೆ. ಆದರೆ ನನ್ನ ಬಳಿ ಪೆಟ್ರೋಲಿಗೆ ಹಣವಿಲ್ಲ ಅಂತಹ ಸಮಸ್ಯೆಗಳನ್ನು ನಾನು ಎದುರಿಸುತ್ತಿದ್ದೇನೆ. ಮೊದಲಿಗೆ ಈ ಕಾಸ್ಟಿಂಗ್ ಕೌಚ್ ಬಗ್ಗೆ ನನಗೆ ತಿಳಿದಿಲ್ಲ. ಯಾರೊ ಶ್ರೀ ರೆಡ್ಡಿ ಅವರ ಅಭಿಮಾನಿ ಇರಬೇಕು ಅದಕ್ಕೆ ಅವರನ್ನೇ ಫಾಲೋ ಮಾಡುತ್ತಿದ್ದಾರೆ. ಕೆಲಸಕ್ಕಾಗಿ ಯಾರು ಆ ರೀತಿ ಕೇಳುವುದಿಲ್ಲ. ಇದು ನಿಜವಾದರೆ ನಾನು ವಾಣಿಜ್ಯ ಮಂಡಳಿ ಹೇಳಿದ ರೀತಿ ಕೇಳ್ತಿನಿ ಎಂದು ಹೇಳಿದ್ದಾರೆ.

    ಈ ಹಿಂದೆ ಜಯಶ್ರೀ ಬಿಗ್‍ಬಾಸ್ ಶೋದಿಂದ ಹೊರ ಬಂದ ನಂತರ ಒಂದೆರಡು ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. “ನಟ ನಟಿಯರು ಬೇಕಾಗಿದ್ದಾರೆ” ಸಿನಿಮಾಕ್ಕೆ ಮೊದಲು ಜಯಶ್ರೀ ನಾಯಕಿಯಾಗಿ ಆಯ್ಕೆಯಾಗಿದ್ದರು. ಒಂದೆರಡು ದಿನ ಅಭಿನಯಿಸಿದ ಮೇಲೆ ಆಕೆಗೆ ಮತ್ತೆ ಚಿತ್ರತಂಡದಿಂದ ಬುಲಾವ್ ಬರಲಿಲ್ಲ. ಅಷ್ಟಕ್ಕೇ ಈಕೆ `ನನ್ನನ್ನು ಸಿನಿಮಾದಿಂದ ಕೈ ಬಿಡಲಾಗಿದೆ. ಇದಕ್ಕೆಲ್ಲ ನಿರ್ದೇಶಕನ ಮಾತನ್ನು ನಾನು ಕೇಳದೇ ಇರುವುದು ಕಾರಣ. ಲಾಂಗ್ ಡ್ರೈವ್ ಬಾ, ಎಣ್ಣೆ ಹಾಕೋಣ ಬಾ ಬೇಬಿ ಎನ್ನುತ್ತಿದ್ದರು. ಅದಕ್ಕೆ ನಾನು ವಿರೋಧಿಸಿದಕ್ಕೆ ಸಿನಿಮಾದಿಂದ ನನ್ನನ್ನು ಬಿಡಲಾಗಿದೆ ಎಂದು ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv