Tag: jayashree aradhya

  • ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ನ್ನಡ ಸಿನಿಮಾ ರಂಗದ ಹಿರಿಯ ನಟಿ ಮಾರಿಮುತ್ತು (Marimuttu) ಮೊಮ್ಮಗಳು ಜಯಶ್ರೀ ಆರಾಧ್ಯ ಕೂಡ ಸ್ಯಾಂಡಲ್‌ವುಡ್‌ನಲ್ಲಿ (Sandalwood) ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಶೋ (Bigg Boss Kannada) ಮುಗಿದ ಮೇಲೆ ತಮ್ಮ ಬ್ಯುಸಿನೆಸ್ ಕಡೆ ಗಮನ ಕೊಡುತ್ತಿದ್ದ ನಟಿ ಈಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಕಡಲ ಕಿನಾರೆಯಲ್ಲಿ ಮಿಂಚಿದ್ದಾರೆ.

    ‘ಪುಟ್ಟರಾಜು’ (Puttaraju) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜಯಶ್ರೀ ಆರಾಧ್ಯ ಅವರು ಒಟಿಟಿ ಬಿಗ್ ಬಾಸ್‌ಗೆ ಕಾಲಿಟ್ಟಿದ್ದರು. ನಂದು ಜೊತೆಗಿನ ಗುದ್ದಾಟದ ಮೂಲಕ ಜಯಶ್ರೀ ಹೈಲೆಟ್ ಆಗಿದ್ದರು. ಸದಾ ಒಂದಲ್ಲಾ ಒಂದು ಕಿರಿಕ್ ಮಾಡಿಕೊಳ್ಳುವ ಮೂಲಕ ಸದ್ದು ಮಾಡ್ತಿದ್ರು. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಹೇಳಿಕೊಳ್ಳುವಂತಹ ಅವಕಾಶ ಚಿತ್ರರಂಗದಲ್ಲಿ ಜಯಶ್ರೀ ಆರಾಧ್ಯಗೆ(Jayashree Aradhya) ಸಿಗಲಿಲ್ಲ.

    ಈ ವರ್ಷದ ಆರಂಭದಲ್ಲಿ ಜಯಶ್ರೀ ಹೊಸ ಮನೆಗೆ ಕಾಲಿಟ್ಟಿದ್ದಾರೆ. ಬಾಯ್‌ಫ್ರೆಂಡ್ ಸ್ಟಿವನ್ ಜೊತೆ ಬ್ಯುಸಿನೆಸ್ ಕ್ಷೇತ್ರದಲ್ಲಿ ಆಕ್ಟೀವ್ ಆಗಿದ್ದಾರೆ. ಈಗ ಕೆಲಸಕ್ಕೆಲ್ಲಾ ಬ್ರೇಕ್ ಹಾಕಿ ದೂರದ ಥೈಲ್ಯಾಂಡ್‌ಗೆ ಹಾರಿದ್ದಾರೆ. ಬಿಕಿನಿ ಧರಿಸಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಡಿಫರೆಂಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಇದನ್ನೂ ಓದಿ:ವಿಶೇಷ ಆಮ್ಲಜನಕ ಚಿಕಿತ್ಸೆಯ ಮೊರೆ ಹೋದ ಸಮಂತಾ

    ಥೈಲ್ಯಾಂಡ್‌ನ ಸುಂದರ ತಾಣಗಳಿಗೆ ನಟಿ ಭೇಟಿ ನೀಡ್ತಿದ್ದಾರೆ. ಜಯಶ್ರೀ ಆರಾಧ್ಯ ಟ್ರಿಪ್‌ಗೆ ವೈನಿಧಿ ಕೂಡ ಸಾಥ್ ನೀಡಿದ್ದಾರೆ. ಜೈಜಗದೀಶ್ ಪುತ್ರಿ ಕೂಡ ಇದ್ದಾರೆ. ಇಬ್ಬರ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಇನ್ನೂ ಸಾಕಷ್ಟು ವರ್ಷದಿಂದ ಸ್ಟೀವನ್‌ ಎಂಬುವವರ ಜೊತೆ ಜಯಶ್ರೀ ಡೇಟ್‌ ಮಾಡ್ತಿದ್ದಾರೆ.  ಇಬ್ಬರ ಪ್ರೀತಿಗೆ ಗುರುಹಿರಿಯರ ಸಮ್ಮತಿಯುಯಿದೆ. ಸದ್ಯದಲ್ಲೇ ಮದುವೆ ಬಗ್ಗೆ ಗುಡ್‌ ನ್ಯೂಸ್‌ ಕೊಡುತ್ತಾರಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಮತ್ತೆ ಜೊತೆಯಾದ ಬಿಗ್‌ ಬಾಸ್‌ ಸ್ಪರ್ಧಿಗಳು

    ಬಿಗ್ ಬಾಸ್ ಒಟಿಟಿ (Bigg Boss Kannada) ಮೂಲಕ ಸದ್ದು ಮಾಡಿದ್ದ ಸ್ಪರ್ಧಿಗಳು ಮತ್ತೆ ಜೊತೆಯಾಗಿದ್ದಾರೆ. ದೊಡ್ಮನೆ ಕಿಲಾಡಿಗಳು ಮೋಜು- ಮಸ್ತಿ ಮಾಡಿರುವ ವೀಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ದೀಪಿಕಾ ಪಡುಕೋಣೆ ಜೊತೆ ನಟಿಸಿದ್ದಕ್ಕೆ ಲಕ್ಕಿ ಎಂದ ಉಪೇಂದ್ರ

     

    View this post on Instagram

     

    A post shared by Chythrra (@chythrrahallikeriofficial)

    ಒಟಿಟಿ ಮೂಲಕ ಬಿಗ್ ಬಾಸ್ ಶೋ ಸಂಚಲನ ಸೃಷ್ಟಿಸಿತ್ತು. ಸಾನ್ಯ ಅಯ್ಯರ್, ರೂಪೇಶ್ ಶೆಟ್ಟಿ, ಚೈತ್ರಾ ಹಳ್ಳಿಕೇರಿ, ಅಕ್ಷತಾ ಕುಕ್ಕಿ, ಲೋಕೇಶ್, ಸೋನು ಗೌಡ ಹೀಗೆ ಹಲವರು ಶೋನಲ್ಲಿ ಭಾಗಿಯಾಗುವ ಮೂಲಕ ರಂಗೇರಿತ್ತು. ಇದೀಗ ಸಾಕಷ್ಟು ಸಮಯದ ನಂತರ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳು ಒಟ್ಟಾಗಿದ್ದಾರೆ. ಸಿಕ್ಕಾಪಟ್ಟೆ ಫನ್‌ ಮಾಡಿದ್ದಾರೆ.

    ನಟಿ ಚೈತ್ರಾ ಹಳ್ಳಿಕೇರಿ (Chythrra Hallikeri) ಮನೆಯಲ್ಲಿ ಅಕ್ಷತಾ ಕುಕ್ಕಿ, ಆರ್ಯವರ್ಧನ್ ಗುರೂಜಿ, ಜಯಶ್ರೀ ಆರಾಧ್ಯ, ಲೋಕೇಶ್ ಎಲ್ಲರೂ ಜೊತೆಗೂಡಿದ್ದಾರೆ. ಒಟ್ಟಿಗೆ ಒಂದೊಳ್ಳೆ ಸಮಯ ಕಳೆದಿದ್ದಾರೆ. ಬಳಿಕ ಮಸ್ತ್ ರೀಲ್ಸ್ ಹಾಗೂ ಫೋಟೋಶೂಟ್ ಮಾಡಿದ್ದಾರೆ.

    ನಟಿ ಅಕ್ಷತಾ ಕುಕ್ಕಿ ಅವರ ಮದುವೆಗೆ ಆಹ್ವಾನ ನೀಡಲು ಎಲ್ಲರೂ ಜೊತೆಯಾಗಿದ್ದಾರೆ. ಮಾರ್ಚ್ 27ಕ್ಕೆ ಅವಿನಾಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಟಿ ರೆಡಿಯಾಗಿದ್ದಾರೆ.

  • ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    ಮನೆಯಲ್ಲಿ ಹೆಚ್ಚು ಕ್ಷಮಾಪಣೆ ಕೇಳಿಸಿಕೊಂಡಿದ್ದು ಜಯಶ್ರೀ & ಸೋನು – ಕಾರಣ ಇಷ್ಟೆ!

    40 ದಿನಗಳ ಕಾಲ ಬಿಗ್ ಬಾಸ್ (Bigg Boss Kannada OTT)  ಮನೆಯಲ್ಲಿ ಕಳೆದಿದ್ದಾರೆ. ಆದರೆ ಒಂದಷ್ಟು ಜನ ಸಮಾನ ಮನಸ್ಕರಿದ್ದರೆ ಇನ್ನೊಂದು ಜನರಿಗೆ ಅಷ್ಟು ಕನೆಕ್ಟ್ ಆಗಿರಲಿಲ್ಲ. ಟಾಸ್ಕ್ ವಿಚಾರ ಬರುತ್ತೆ, ಮನೆಕೆಲಸದ ವಿಚಾರ ಬರುತ್ತೆ. ಆ ಸಮಯದಲ್ಲೆಲ್ಲಾ ಎಷ್ಟೋ ಸಲ ಜಗಳಗಳು ಆಗಿರುತ್ತವೆ. ಆ ಜಗಳ ಬೇರೆಯವರಿಗೆ ಹರ್ಟ್ ಆಗುವ ಹಂತಕ್ಕೂ ತಲುಪಿರುತ್ತದೆ. ಬಿಗ್ ಬಾಸ್ ಮುಗಿದ ಮೇಲೆ ಯಾರು, ಎಲ್ಲೆಲ್ಲಿ ಇರುತ್ತಾರೆ ಗೊತ್ತಿಲ್ಲ. ಮತ್ತೆ ಎಲ್ಲರೂ ಒಟ್ಟಿಗೆ ಭೇಟಿಯಾಗುತ್ತಾರೆ ಎಂಬುದು ಭರವಸೆ ಇರುವುದಿಲ್ಲ. ಆದರೆ ಬಿಗ್ ಬಾಸ್ ಮನೆಯಿಂದ ಹೊರಡುವುದಕ್ಕೂ ಮುನ್ನ ಯಾರ ಮನಸ್ಸಲ್ಲೂ ಭಾರ ಇಲ್ಲದಂತೆ ಮಾಡಿದೆ. ಕ್ಷಮೆ ಕೇಳುವವರು ಕೇಳಿದ್ದಾರೆ, ಥ್ಯಾಂಕ್ಸ್ ಹೇಳುವವರು ಹೇಳಿದ್ದಾರೆ, ಗಿಫ್ಟ್ ಕೊಡುವವರು ಕೊಟ್ಟಿದ್ದಾರೆ. ಅದರಲ್ಲಿ ಹೆಚ್ಚಾಗಿ ಸೋನು ಮತ್ತು ಜಯಶ್ರೀಗೇನೆ ಹಲವು ಬಾರಿ ಬಂದಿದೆ.

    ಮೊದಲಿಗೆ ರಾಕಿ (Rakesh Adiga)  ಸೋನುಳ (Sonu Srinivas Gowda) ಹೆಸರನ್ನು ತೆಗೆದುಕೊಂಡ. ಆತನ ಮನಸ್ಸಲ್ಲಿ ಕ್ಷಮೆ ಹಾಗೂ ಥ್ಯಾಂಕ್ಸ್ ಎರಡು ಇತ್ತು. ಆದರೆ ಅದಾಗಲೇ ಒಬ್ಬರಿಗೆ ಕ್ಷಮೆ ಕೇಳಿದ್ದರಿಂದ ಕ್ಷಮಾಪಣಾ ರೀತಿಯಲ್ಲಿಯೇ ಥ್ಯಾಂಕ್ಸ್ ಹೇಳಿದ್ದಾನೆ. ಸಾಕಷ್ಟು ಸಲ ನಮ್ಮ ನೆನಪಿಗೆ ಬರುತ್ತಾ ಇದ್ರು. ಕ್ರೀಮ್ ಹಚ್ಚುವುದಾಗಲಿ, ಯಾವ ರೀತಿ ಬೈತಾ ಇದ್ರು, ಜೆನ್ಯೂನ್ ಆಗಿ ನನಗೆ ಎಲ್ಲದನ್ನು ಕೊಟ್ಟಿದ್ದು ಸೋನು. ಅವಳಿಗೆ ಟಾಸ್ಕ್ ಪ್ರಕಾರ ಕ್ಷಮೆ ಹೇಳುವುದಕ್ಕೆ ಆಗಲ್ಲ. ಆದರೆ ಥ್ಯಾಂಕ್ಸ್ ಎಂದಿದ್ದಾನೆ. ಇದನ್ನೂ ಓದಿ: ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಬಳಿಕ ಸೋನು ಹೆಸರನ್ನು ರೂಪೇಶ್ (Roopesh Shetty) ತೆಗೆದುಕೊಂಡಿದ್ದು, ನಾನೇನೋ ತಪ್ಪು ಮಾಡಿದ ವಿಚಾರಕ್ಕಲ್ಲ, ಎಗ್ ರೈಸ್ ಮಾಡಿಕೊಟ್ಟಿದ್ದಾಳೆ ಅನ್ನೋ ವಿಚಾರಕ್ಕೂ ಅಲ್ಲ. ಕೆಲವಾರು ವಿಚಾರಕ್ಕೆ ನಾನು ಅವಳನ್ನು ನಾಮಿನೇಟ್ ಮಾಡಿರುತ್ತೀನಿ, ಕೆಲವೊಂದು ವಿಚಾರಗಳು ಬಂದಾಗ ಅವಳ ಹೆಸರು ಎತ್ತಿರುತ್ತೀನಿ, ಕೆಲವೊಂದು ವಿಚಾರಗಳಲ್ಲಿ ಅವಳ ತಪ್ಪುಗಳನ್ನು ಹೇಳಿರುತ್ತೀನಿ ಎಲ್ಲರ ಮುಂದೆ. ಮೊನ್ನೆ ಕಳಪೆ ಬಂದಾಗಲೂ ಅವಳ ಹೆಸರನ್ನು ಎತ್ತಿದ್ದೀವಿ. ಆದರೆ ಅದರ ಹಿಂದೆ ಯಾವ ಉದ್ದೇಶವೂ ಇರಲ್ಲ. ಆದರೆ ನನ್ನಿಂದ ಹರ್ಟ್ ಆಗಿದ್ರೆ ನನ್ನನ್ನು ಕ್ಷಮಿಸು ಎಂದಿದ್ದಾನೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇನ್ನು ಸೋಮಣ್ಣ ಕೂಡ ಸೋನುಗೆ ಥ್ಯಾಂಕ್ಸ್ ಹೇಳಿದ್ದಾರೆ. ಯಾರಿಗೆ ಏನೇ ಇರಲಿ ಸೋನು ಅಂದ್ರೆ ಇಷ್ಟ. ನಂಗೆ ನೋವಾದಾಗ, ನಂಗೆ ನಗಿಸಿದ್ದು, ಎಂಗೇಜ್ ಮಾಡಿದ್ದು ಸೋನು ಎಂದಿದ್ದಾರೆ. ಆಗ ಸೋನು ರಿಯಾಕ್ಟ್ ಮಾಡಿದ್ದು, ನಾನು ಬೇಜಾರು ಮಾಡಲ್ಲ ಅಂತ ಅಲ್ಲ. ಖುಷಿನು ಕೊಟ್ಟಿದ್ದೀನಿ. ಆದರೆ ನನ್ನಿಂದ ನಕ್ಕಿದ್ದಾರೆ ಅಂದ್ರೆ ಅದು ನನಗೂ ಖುಷಿ ಕೊಟ್ಟಿದೆ ಎಂದಿದ್ದಾಳೆ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಬಳಿಕ ಸದಸ್ಯರ ಬಾಯಲ್ಲಿ ಬಂದ ಹೆಸರು ಜಯಶ್ರೀ, (Jayashree Aradhya) ಸೋಮಣ್ಣ (Somanna Machimada) ಜಯಶ್ರೀಗೆ ಕ್ಷಮೆ ಕೇಳಿದ್ದು, ಕ್ಷಮೆ ಕೇಳುವುದಕ್ಕೆ ನಾನು ಜಯಶ್ರೀಯನ್ನು ಕರೆಯುತ್ತೇನೆ. ಕ್ಯಾಪ್ಟೆನ್ಸಿ ಗೇಮ್ ನಲ್ಲೂ ನನಗೆ ಡಿಸ್ಟರ್ಬ್ ಮಾಡಿದ್ದರು. ಆ ಟಾಸ್ಕ್ ಆದ ಮೇಲೆ ನಾನು ತುಂಬಾ ರೂಡ್ ಆಗಿ ಬಿಹೇವ್ ಮಾಡಿದ್ದೆ. ಗೊತ್ತಿಲ್ಲ ಆ ಸಮಯದಲ್ಲಿ ಬೇಜಾರು ಆಗಿತ್ತು. ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಜಯಶ್ರೀ, ನಾನು ಎಲ್ಲರ ಬಳಿ ರಿಯಾಕ್ಟ್ ಮಾಡಿ ಬಿಡುತ್ತೇನೆ ಆದರೆ ನಿಮ್ಮ ಬಳಿ ನಾನು ಯಾಕೆ ಮಾಡಲ್ಲ ಎಂದರೆ ನಿಮ್ಮ ಮೇಲೆ ಗೌರವಾನು ಇದೆ, ಭಯಾನು ಇದೆ ಎಂದಿದ್ದಾರೆ.

    ಸಾನ್ಯಾ ಕೂಡ ಜಯಶ್ರೀ ಬಳಿ ಕ್ಷಮಾಪಣೆ ಕೇಳಿದ್ದಾಳೆ. ಇವಳಿಗೆ ಏನು ಮಾಡಿಯೇ ಇಲ್ಲ. ಆದರೂ ಪ್ರತಿಸಲ ನಾಮಿನೇಟ್ ಅಂತ ಬಂದಾಗ ನಿನ್ನ ಹೆಸರನ್ನೇ ಎತ್ತಿದ್ದೀನಿ. ಟಾಸ್ಕ್ ಆಡುವಾಗಲೂ ಫಿಟ್ನೆಸ್ ಇರಬೇಕು ಅಂತೆಲ್ಲಾ ಹೇಳಿದ್ದೀನಿ. ಆದರೆ ಈ ಮನೆಯಲ್ಲಿ ಅದು ಈಗ ಉಪಯೋಗಕ್ಕೆ ಇಲ್ಲ. ಗೊತ್ತೋ ಗೊತ್ತಿಲ್ಲದೆಯೋ ನಿನ್ನ ಹೆಸರನ್ನೇ ಹೆಚ್ಚು ಸಲ ಎತ್ತಿದ್ದೀನಿ ನನ್ನನ್ನು ಕ್ಷಮಿಸು. ನಿನ್ನ ಸದ್ಗುಣಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅರ್ಥಾನೆ ಮಾಡಿಕೊಳ್ಳಲಿಲ್ಲ. ನಾನು ನಿನ್ನ ಒಳ್ಳೆ ಗೆಳತಿಯಾಗಬೇಕು ಎಂದಿದ್ದಾಳೆ.

    Live Tv
    [brid partner=56869869 player=32851 video=960834 autoplay=true]

  • ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಜಯಶ್ರೀಗೆ ಮುತ್ತು ಕೊಟ್ಟ ರಾಕಿ – ಗಾಬರಿಯಲ್ಲಿಯೇ ಎಗ್ ರೈಸ್ ತಿಂದ ರೂಪೇಶ್

    ಸೋನು ಸದ್ಯಕ್ಕೆ ರಾಕಿ (Rakesh Adiga)  ಬಗ್ಗೆ ಇರುವ ಪೊಸೆಸಿವ್‍ನೆಸ್ ಅನ್ನು ಕಳೆಯುವುದಕ್ಕೆ ಯತ್ನಿಸುತ್ತಿದ್ದಾಳೆ. ಇಂದು ಬೆಳ್ಳಂ ಬೆಳ್ಳಗ್ಗೆಯೇ ಕುಳಿತು ರಾಕಿ ಬಗ್ಗೆ ಸೋಮಣ್ಣ (Somanna Machimada) ಹತ್ತಿರ ಮಾತನಾಡುತ್ತಿದ್ದಳು. ಬೇಬಿ ಥರ ಚೇಂಜ್ ಇರೋನು ಅಂದ್ರೆ ಅದು ನನ್ನ ಮೂರ್ಖತನ. ಅವನು ನನಗೆ ಆ ಸಲಿಗೆ ಕೊಟ್ಟು, ನನಗೆ ಕೇರ್ ಮಾಡಿದ್ದಾನೆ ಅಂದ್ರೆ ಅದು ನನಗೆ ಒಳ್ಳೆಯದ್ದೆ. ನಂಗೆ ಯಾವ ಥರದ್ದು ಫೀಲಿಂಗ್ಸ್ ಇಲ್ಲ ಸೋಮಣ್ಣ. ನಂಗೆ ಅವನ ಮೇಲೆ ಅಯ್ಯೋ ಎನಿಸಿದೆ. ಅಯ್ಯೋ ಎನಿಸಿದಾಗಲೇ ಒಬ್ಬ ಮನುಷ್ಯ ಇನ್ನೊಬ್ಬನಿಗೆ ಕೇರ್ ಮಾಡುವುದಕ್ಕೆ ಸಾಧ್ಯ. ಸದ್ಯಕ್ಕೆ ನನಗೆ ಏನು ಕೊರತೆಯಾಗಿದೆ ಅಂದ್ರೆ. ಅವನ ಕ್ಯಾರೆಕ್ಟರ್ ಇರುವುದೇ ಹಾಗೆ ಅಲ್ವಾ. ಅವನು ನನ್ನ ಜೊತೆ ಇರುವ ತರ ಬೇರೆ ಹುಡುಗಿಯರ ಬಳಿ ಇದ್ದರೆ ನನಗ್ಯಾಕೆ ಪೊಸೆಸಿವ್‍ನೆಸ್ ಆಗ್ತಿದೆ. ಲವ್ ಅಲ್ಲ ಮಣ್ಣು ಅಲ್ಲ ಮಸಿ ಅಲ್ಲ ಎಂದಿದ್ದಾರೆ.

    ನನ್ನ ಫ್ಯೂಚರೇ ಬೇರೆ, ಅವನ ಕನಸೇ ಬೇರೆ. ಆದರೆ ಅವನು ಎಲ್ಲಾ ಹುಡುಗಿಯರ ಜೊತೆ ಇದ್ದಾಗ ನಂಗ್ಯಾಕೆ ಪೊಸೆಸಿವ್‍ನೆಸ್ ಬರುತ್ತಿದೆ ಗೊತ್ತಾಗುತ್ತಿಲ್ಲ. ಅವನು ಮೊದಲಿನಿಂದಲೂ ಎಲ್ಲಾ ಹುಡುಗಿಯರ ಜೊತೆಗೂ ಒಂದೇ ರೀತಿಯಲ್ಲಿ ಇದ್ದಿದ್ದರೆ ನಂಗೆ ಈ ರೀತಿಯೆಲ್ಲಾ ಅನ್ನಿಸುತ್ತಾ ಇರಲಿಲ್ಲ. ಆದರೆ ಅವನು ಮಾತಲ್ಲಿ ಹೇಳುತ್ತಿದ್ದಾನೆ. ಎರಡು ದಿನದಿಂದ ನಡವಳಿಕೆ ಚೇಂಜ್ ಆಗುತ್ತಿದೆ. ನೀನು ಪೊಸೆಸಿವ್‍ ಆಗಬೇಡ. ನಾನು ಎಲ್ಲರ ಜೊತೆಗೂ ಹೀಗೆ ಇರೋದು ಅಂತಿದ್ದಾನಲ್ಲ. ಹಂಗೆಲ್ಲಾ ಎಲ್ಲಿದ್ದ. ಮೊದಲಿನಿಂದ ನನ್ನ ಜೊತೆಗೆ ಮಾತ್ರ ಅಲ್ವಾ ಇದ್ದದ್ದು ಎಂದಿದ್ದಾಳೆ. ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಬರಲು ನಂದಿನಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ?

    ಇದನ್ನೆಲ್ಲಾ ಕೇಳಿಸಿಕೊಂಡ ಗುರೂಜಿ, ಹಂಗೆಲ್ಲಾ ಏನಿಲ್ಲಾ ಕಣವ್ವ ನೀನೇ ಲೇಟ್ ಆಗಿ ಹೋಗಿ ನಂದೆ ಬಸ್ಸು ಅಂತ ಇದ್ದೀಯಾ. ಬಸ್ ಮುಂಚೆನೆ ಓಡಿದೆ, ಪಿಕಪ್ ಮಾಡಿದೆ, ಡ್ರಾಪ್ ಮಾಡಿದೆ ಎಲ್ಲಾ ಕಥೆ ಗೊತ್ತಿದ್ದರು, ನಂದೇ ಬಸ್ ನಂದೆ ಬಸ್ ಅಂದ್ರೆ. ಊರಿಗೆ ಗೊತ್ತು ಆ ಬಸ್ ಬೇರೆ ಹತ್ತಿದೆ ಅಂತ. ಟಿಕೆಟ್ ತಗೊಂಡ್ವಾ ಮನೆಗೋದ್ವಾ, ಇಳಿದ್ವಾ ಅಂತ ಅನ್ನೋದು ಬಿಡೋದು ಬಿಟ್ಟು ನಂದೆ ಬಸ್ ಅಂತಾ ಇದ್ರೆ ಅಂತ ಗುರೂಜಿ ಅಷ್ಟೆಲ್ಲಾ ಹೇಳಿದರೂ ಅದನ್ನು ಕೇಳುವುದಕ್ಕೆ ಸೋನು ರೆಡಿ ಇಲ್ಲ. ನಿನ್ನೆಯಿಂದ ನಾನು ಹ್ಯಾಪಿಯಾಗಿದ್ದೀನಿ. ಬಿಕಾಸ್ ನಿಮ್ಮತ್ರ ಎಲ್ಲಾ ಟೈಪಾಸ್ ಮಾಡುತ್ತಾ ಇದ್ದೀನಿ ಎಂದಿದ್ದಾಳೆ. ಜೊತೆಗೆ ನನಗೆ ಉರಿಸಬೇಕು ಅಂತ ಯಾರಾದರೂ ಮಾಡಿದರೆ ನಾನು ಉರಿದುಕೊಳ್ಳಲ್ಲ. ನಾಣು ಹೊರಗಡೆ ಬಂದು ಬಿಟ್ಟಿದ್ದೀನಿ. ಇದನ್ನೂ ಓದಿ: ಸಿದ್ಧಾರ್ಥ್‌ ಜೊತೆ ಡ್ಯುಯೆಟ್‌ ಹಾಡಲು ಕಾಲಿವುಡ್‌ಗೆ ಹೊರಟ ಆಶಿಕಾ ರಂಗನಾಥ್

    ಅದಾದ ಮೇಲೆ ರಾಕಿಗೆ ಉರಿಸುವುದಕ್ಕೆ ಸೋನು (Sonu Srinivas Gowda) ಶುರು ಮಾಡಿದಳು. ಸೋನುಗೆ ಉರಿಸಲು ರಾಕಿ ಮತ್ತು ಜಯಶ್ರೀ ಶುರು ಮಾಡಿದರು. ಇದರ ಪರಿಣಾಮ ರೂಪೇಶ್ ಬಳಿ ಒಂದು ಮೊಟ್ಟೆ ತೆಗೆದುಕೊಂಡು, ತನ್ನ ಬಳಿಯಿದ್ದ ಒಂದು ಮೊಟ್ಟೆ ಹಾಕಿದ ಸೋನು (Jayashree Aradhya) ಸೂಪರ್ ಆಗಿ ಎಗ್ ರೈಸ್ (Egg Rice) ಮಾಡಿದಳು. ಜಯಶ್ರೀ ಒಂದೇ ಒಂದು ತುತ್ತು ಕೊಡು ಎಂದರೂ ಕೊಡಲಿಲ್ಲ. ಆದರೆ ರೂಪೇಶ್ (Roopesh Shetty)  ಮೂರು ಸ್ಪೂನ್ ಕೊಟ್ಟಿದ್ದಾನೆ. ಎಗ್ ರೈಸ್  ತಿನ್ನುವಾಗ ಡೈನಿಂಗ್ ಟೇಬಲ್ ಮೇಲೆ ನಾನಾ ಫನ್‍ಗಳು ನಡೆದಿವೆ. ಸೋನು, ರೂಪೇಶ್‍ಗೆ ಎಗ್ ರೈಸ್ ತುತ್ತು ಕೊಟ್ಟಿದ್ದಾಳೆ. ಆಗ ಎದುರಿಗಿದ್ದ ರಾಕಿ, ಕಿಸ್ ಕೊಡೇ ಜಯಶ್ರೀ, ನೀನೆ ಕೊಡ್ತಿಯಾ ಅಥವಾ ನಾನು ಕೊಡ್ಲಾ ಅಂತ ಹೇಳಿ ರಾಕಿನೆ ಕಿಸ್ ಕೊಟ್ಟಿದ್ದಾನೆ. ಈ ಕಡೆ ರೂಪಿಗೆ ಭಯ. ಸೋನು ಎಲ್ಲಿ ನನಗೆ ಕಿಸ್ ಕೊಟ್ಟು ಬಿಡುತ್ತಾಳೋ ಅಂತ. ಮುಖ ಮುಖ ನೋಡಿ ಗಾಬರಿಯಲ್ಲಿಯೇ ಎಗ್ ರೈಸ್ ತಿಂದಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಚಪ್ಪಲಿಗೆ ಬಟ್ಟೆ ಸುತ್ತುಕೊಂಡು ಹೊಡಿತ್ತೀನಿ ಎಂದು ಜಯಶ್ರೀ ವಾರ್ನಿಂಗ್‌ ಕೊಟ್ಟಿದ್ಯಾರಿಗೆ?

    ಬಿಗ್ ಬಾಸ್ (Bigg Boss) ಮನೆಯಲ್ಲಿ ಜಯಶ್ರೀ ಹಾಗೂ ಸೋಮಣ್ಣ ನಡುವೆ ನಡೆಯುವ ಜಟಾಪಟಿ ಇದು ಹೊಸದೇನು ಅಲ್ಲ. ಆದರೆ ಇಂದು ಜಯಶ್ರೀ ಮಾತನಾಡಿದ ರೀತಿ ಯಾರಿಗೂ ಸರಿ ಎನಿಸಲೇ ಇಲ್ಲ. ಸೋಮಣ್ಣ ಈ ಸಲ ಒರಟಾಗಿ ಮಾತನಾಡಲೇ ಇಲ್ಲ. ಆದರೂ ಜಯಶ್ರೀ ನಾಲಿಗೆ ಹರಿಬಿಟ್ಟಿದ್ದಾರೆ.

    ಮಧ್ಯಾಹ್ನದ ಸಮಯದಲ್ಲಿ ಗುರೂಜಿ ಹಾಗೂ ಸೋಮಣ್ಣ ಇಬ್ಬರು ಅಡುಗೆ ತಯಾರಿ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಜಯಶ್ರೀ (Jayashree) ಕೂಡ ಬಂದಿದ್ದಾರೆ. ಅದಾಗಲೇ ಸೋನು ಅಲ್ಲಿಯೇ ಕುಳಿತಿದ್ದಳು. ಆಗ ಸೋಮಣ್ಣ ಕೂಡ ಗುರೂಜಿ ಜೊತೆಗೆ ಸೇರಿಕೊಂಡು ಬಿಟ್ಟರು ಎಂದಿದ್ದಾರೆ. ಅದಕ್ಕೆ ಸೋಮಣ್ಣ ಒಂದು ಇಡೀ ದಿನ ಅಡುಗೆ ಮಾಡುವುದಕ್ಕೆ ನನಗೆ ಅವಕಾಶವೇ ಸಿಗುತ್ತಿಲ್ಲ ಎಂದು ಸೋಮಣ್ಣ (Somanna) ಹೇಳಿದಾಗ, ಜಯಶ್ರೀ ಒಂದು ದಿನ ಅಡುಗೆ ಮಾಡಿ ಎಂದಿದ್ದಾರೆ. ಇದನ್ನೂ ಓದಿ:ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ನಂತರ ಸೋನು ಗುರೂಜಿ ನಿಮಗೆ ಗೊತ್ತಿರುವುದೆಲ್ಲವನ್ನು ಸೋಮಣ್ಣನಿಗೆ ಹೇಳಿಕೊಡಬೇಡಿ ಆಮೇಲೆ ಸೋಮಣ್ಣನು ಅಷ್ಟೇ ಎಂದು ಬೇರೆ ಮೀನಿಂಗ್‌ನಲ್ಲಿ ಮಾತನಾಡುತ್ತಾರೆ ಎಂದು ಹೇಳಿದ್ದಾರೆ. ಗುರೂಜಿ ಗದರಿಸಿ ಬಾ ಇಲ್ಲಿ ಅಂತ ಸೋನುಳನ್ನು ಕರೆದು ಸೋಮಣ್ಣ ಪಾಪ ಯಾರು ಸಿಕ್ಕಿಲ್ಲ ಅಂತ ಒದ್ದಾಡುತ್ತಿದ್ದಾರೆ ಎಂದಿದ್ದಾರೆ. ಮತ್ತೆ ಸೋನು ನಿಮ್ಮ ಡಬಲ್ ಮೀನಿಂಗ್‌ನ ಸೋಮಣ್ಣನಿಗೆ ಹೇಳಿಕೊಡಬೇಡಿ. ಅವರು ಹಾಳಾಗುತ್ತಾರೆ ಎಂದು ಸೋಮಣ್ಣನಿಗೆ ವಿವರಣೆ ನೀಡಿದಳು. ಹಾಗೂ ಸೋಮಣ್ಣ ನಾನು ಹಾಳಾಗುವುದಕ್ಕೆ ಕಾರಣ ಜಯಶ್ರೀ ಅಂತ ಹೇಳಿದ್ರು. ರೂಲ್ಸ್‌ನೆಲ್ಲಾ ಬ್ರೇಕ್ ಮಾಡಿ ಮಾತುನಾಡುವುದೆಲ್ಲ ನಮ್ಮ ಜಯಶ್ರೀ ಅವರು ಎಂದು ಈ ವೇಳೆ ಸೋಮಣ್ಣ ಮಾತನಾಡಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಅರ್ಧ ಗಂಟೆ ಮಲಗುವ ಅವಕಾಶವನ್ನು ಆರ್ಯವರ್ಧನ್ ಹಾಗೂ ಸೋಮಣ್ಣ ಅವರಿಗೆ ನೀಡಿತ್ತು. ಅದರಂತೆ ಗುರೂಜಿ ಊಟ ಮಾಡಿ ಮಲಗಲು ಹೋಗಿದ್ದರು. ಆದ್ರೆ ಅದನ್ನು ತಲೆಯಲ್ಲಿ ಇಟ್ಟುಕೊಳ್ಳದೆ ಸೋನು ಹಾಗೂ ಜಯಶ್ರೀ ಬೆಡ್ ರೂಮಿನಲ್ಲಿಯೇ ಮಾತನಾಡುತ್ತಿದ್ದರು. ಜಯಶ್ರೀ ಮಾತನಾಡುತ್ತಾ ಸೋಮಣ್ಣ ಬಗ್ಗೆ ಕಿಡಿಕಾರಿದ್ದಾರೆ. ಕಚಕಚ ಅಂತ ಬಾಯಿಗೆ ಬಂದಂಗೆ ಮಾತನಾಡುತ್ತಾರೆ. ಸೋಮಣ್ಣ ಮಾತನಾಡುವುದು ನನಗೆ ಇಷ್ಟವೇ ಆಗುವುದಿಲ್ಲ. ನಾನು ಒಂದು ಸಲ ನೋಡುತ್ತೀನಿ ಎರಡು ಸಲ ನೋಡ್ತೀನಿ, ಮೂರನೇ ಸಲ ಚಪ್ಪಲಿಗೆ ಬಟ್ಟೆ ಸುತ್ತಿಕೊಂಡು ಹೊಡೆದಂಗೆ ಮಾತನಾಡ್ತೀನಿ ಎಂದು ಸೋಮಣ್ಣ ವಿರುದ್ಧ ಜಯಶ್ರೀ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಳಿ ಕೇಳಿ ರಾಕೇಶ್ ಕಡೆಯಿಂದ ಕಿಸ್ ಕೊಡಿಸಿಕೊಂಡ ಸೋನು ಶ್ರೀನಿವಾಸ್ ಗೌಡ

    ಕೇಳಿ ಕೇಳಿ ರಾಕೇಶ್ ಕಡೆಯಿಂದ ಕಿಸ್ ಕೊಡಿಸಿಕೊಂಡ ಸೋನು ಶ್ರೀನಿವಾಸ್ ಗೌಡ

    ಬಿಗ್ ಬಾಸ್ ಮನೆಯಲ್ಲಿ ಏನಾಗುತ್ತದೆ ಎನ್ನುವುದು ಸ್ವತಃ ಬಿಗ್ ಬಾಸ್ ಗೆ ಅರ್ಥವಾಗುತ್ತಿಲ್ಲ. ಅದರಲ್ಲೂ ಸೋನು ಶ್ರೀನಿವಾಸ್ ಗೌಡ ವರ್ತನೆ ಮಿತಿ ಮೀರುತ್ತಿದೆಯಾ ಎನ್ನುವ ಅನುಮಾನ ನೋಡುಗರನ್ನು ಕಾಡುತ್ತಿದೆ. ಈಗಾಗಲೇ ಸಾಕಷ್ಟು ಟ್ರೋಲ್ ಆಗಿರುವ ಸೋನು, ನೆಟ್ಟಿಗರಿಗೆ ಮತ್ತೆ ಮತ್ತೆ ಆಹಾರವಾಗುವಂತಹ ಕೆಲಸಗಳನ್ನೇ ಸೋನು ಬಿಗ್ ಬಾಸ್ ಮನೆಯಲ್ಲಿ ಮಾಡುತ್ತಿದ್ದಾರೆ. ಹಾಗಾಗಿ ಸೋನು ಮೇಲೆ ಪ್ರೀತಿಗಿಂತ, ಆ ಹುಡುಗಿಗೆ ಏನೋ ಸಮಸ್ಯೆ ಇದೆ ಎನ್ನುವ ಅನುಕಂಪ ವ್ಯಕ್ತವಾಗುತ್ತಿದೆ.

    ಸೋನು ವರ್ತನೆಗೆ ಸ್ವತಃ ಕಿಚ್ಚ ಸುದೀಪ್ ಕಿವಿ ಹಿಂಡಿದ್ದಾರೆ. ಮನೆಯ ಅಷ್ಟೂ ಸದಸ್ಯರು ಆ ಹುಡುಗಿಗೆ ಬುದ್ದಿ ಮಾತು ಹೇಳಿದ್ದಾರೆ. ಅದರಲ್ಲೂ ಆರ್ಯವರ್ಧನ್ ಗುರೂಜಿ, ನಿನ್ನೆಯಷ್ಟೇ ಹೆಚ್ಚಿಗೆ ಮಾತನಾಡಿದರೆ ಬಾಯಲ್ಲಿ ಪೊರಕೆ ಇಡುವುದಾಗಿಯೂ ಸೋನುಗೆ ಗದರಿಸಿದ್ದರು. ಆದರೂ, ಸೋನು ಹುಚ್ಚಾಟ ನಿಲ್ಲುತ್ತಿಲ್ಲ. ತನಗೆ ಏನು ಅನಿಸುತ್ತದೆಯೋ ಅದನ್ನು ಮಾಡಿಯೇ ಮುಂದಕ್ಕೆ ಸಾಗುತ್ತಿದ್ದಾರೆ. ಹಾಗಾಗಿ ಸೋನು ಅಷ್ಟೊಂದು ಸುಲಭಕ್ಕೆ ಯಾರಿಗೂ ಅರ್ಥವಾಗುತ್ತಿಲ್ಲ. ಇದನ್ನೂ ಓದಿ:ಸಿನಿಮಾಗೆ 2 ಕೋಟಿ, ಟಿವಿಗೆ ಹೋದರೆ 3 ಕೋಟಿ ಸಂಭಾವನೆ ಪಡೆಯುತ್ತಾರಂತೆ ಜಗ್ಗೇಶ್: ತಮ್ಮ ಸಂಭಾವನೆ ಬಹಿರಂಗ ಪಡಿಸಿದ ನಟ

    ಸೋನು ಮತ್ತು ರಾಕೇಶ್ ಅಡಿಗೆ ಇಬ್ಬರೂ ಕ್ಲೋಸ್ ಇರುವ ವಿಚಾರ ಗುಟ್ಟಿನ ಸಂಗತಿಯೇನೂ ಅಲ್ಲ. ಒಟ್ಟೊಟ್ಟಿಗೆ ಇರುತ್ತಾರೆ. ಇಲಿ ಬೆಕ್ಕಿನಂತೆ ಆಟವಾಡುತ್ತಾರೆ. ಒಬ್ಬರಿಗೊಬ್ಬರು ಕಾಲು ಎಳೆದುಕೊಂಡು ತಮಾಷೆ ಮಾಡುತ್ತಾರೆ. ಅದೆಲ್ಲವೂ ಸರಿ. ಆದರೆ, ನಿನ್ನೆ ರಾಕೇಶ್ ಅಡಿಗ ಹತ್ತಿರ ವಿಚಿತ್ರ ಬೇಡಿಕೆ ಇಟ್ಟು ನೋಡುಗರನ್ನೇ ಬೆಚ್ಚಿ ಬೀಳಿಸಿದ್ದಾರೆ. ಪಕ್ಕದಲ್ಲೇ ಇದ್ದ ರಾಕೇಶ್ ಕರೆದು, ನನಗೊಂದು ಕಿಸ್ ಮಾಡು ಎಂದು ಕೇಳುತ್ತಾರೆ. ಆ ಹುಡುಗಿ ಏನೋ ಕೇಳಿತು, ಬಿಡು ಅತ್ಲಾಗೆ ಎಂದು ರಾಕೇಶ್ ಹೇಳಿದ್ದರೆ, ಒಳ್ಳೆಯ ಹುಡುಗ ಅನಿಸಿಕೊಳ್ಳುತ್ತಿದ್ದರೋ ಏನೋ? ಆದರೆ, ರಾಕೇಶ್ ಹಾಗೆ ಮಾಡಲಿಲ್ಲ.

    ನನಗೊಂದು ಕಿಸ್ ಮಾಡು ಅಂತ ಸೋನು ಬೇಡಿಕೆ ಇಟ್ಟ ತಕ್ಷಣ, ಕ್ಷಣವೂ ಯೋಚಿಸಿದ ರಾಕೇಶ್ ಕೆನ್ನೆಗೆ ಮುತ್ತಿಟ್ಟೇ ಬಿಡ್ತಾರೆ. ಅದನ್ನು ನೋಡಿದ ಜಯಶ್ರೀ ಜೀವ ಸುಮ್ಮನಿರದೇ ನನಗೂ ಒಂದು ಕಿಸ್ ಮಾಡು ಎಂದು ಕೇಳಿಕೊಳ್ಳುತ್ತಾರೆ. ಅವಳ ಕೆನ್ನೆಗೂ ಸಿಹಿಮುತ್ತೊಂದನ್ನು ನೀಡಿ ಕೃತಾರ್ಥರಾಗುತ್ತಾರೆ ರಾಕೇಶ್. ಅಯ್ಯ, ಈ ಮನೆಯಲ್ಲಿ ಏನಾಗುತ್ತದೆ? ಆ ಹುಡುಗಿಯರು ಯಾಕೆ ಹಾಗೆ ಆಡುತ್ತಿದ್ದಾರೆ ಎಂದು ಪ್ರೇಕ್ಷಕರು ಇತ್ತ ತಲೆ ತಲೆ ಚೆಚ್ಚಿಕೊಂಡು ಮತ್ತೆ ಬಿಗ್ ಬಾಸ್ ನೋಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಸೋನು ಶ್ರೀನಿವಾಸ್ ಗೌಡಗೆ ಉರಿಸಲು ಜಯಶ್ರೀ ಕೆನ್ನೆಗೆ ಮುತ್ತಿಟ್ಟ ನಟ ರಾಕೇಶ್ ಅಡಿಗ

    ಬಿಗ್ ಬಾಸ್ ಮನೆಯಲ್ಲಿ ಈವರೆಗೂ ಕೇವಲ ಬಾಯಿ ಮಾತಿನಲ್ಲೇ ಲವ್ವಿಡವ್ವಿ ವಿಷಯಗಳು ಬಂದು ಹೋಗುತ್ತಿದ್ದವು. ರಾಕೇಶ್ ಅಡಿಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಜಯಶ್ರೀ ಆರಾಧ್ಯ ಕೆನ್ನೆಗೆ ಮುತ್ತುಕೊಟ್ಟು ಸುದ್ದಿಯಾಗಿದ್ದಾರೆ. ಈ ಸಿಹಿ ಮುತ್ತು ಕೊಟ್ಟಿದ್ದು ಬೇರೆ ಕಾರಣಕ್ಕೆಯಾದರೂ, ಈ ನಡೆ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ರಾಕೇಶ್ ಅಡಿಗ ಮತ್ತು ಸೋನು ಶ್ರೀನಿವಾಸ್ ಗೌಡ ಇಬ್ಬರೂ ತುಂಬಾ ಹತ್ತಿರವಾಗುತ್ತಿದ್ದಾರೆ. ರಾಕೇಶ್ ಸದಾ ತನ್ನ ಜೊತೆಯೇ ಇರಬೇಕು ಎನ್ನುವುದು ಸೋನು ಆಸೆ. ರಾಕೇಶ್ ಅಡಿಗ ಬೇರೆಯವರ ಜೊತೆ ಕ್ಲೋಸ್ ಆಗುವುದನ್ನು ಸೋನು ಸಹಿಸಿಕೊಳ್ಳುತ್ತಿಲ್ಲ. ಅದನ್ನು ಪರೀಕ್ಷಿಸಲೆಂದೇ ರಾಕೇಶ್ ಮತ್ತು ಜಯಶ್ರೀ ಪ್ಲ್ಯಾನ್ ಮಾಡಿ ಸೋನು ಎದುರೇ ಜಯಶ್ರೀಗೆ ರಾಕೇಶ್ ಕಿಸ್ ಮಾಡುತ್ತಾನೆ. ಅದನ್ನು ಗಮನಿಸುವ ಸೋನು ವಿಚಿತ್ರ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ಜಯಶ್ರೀ ಆರಾಧ್ಯ

    ರಾಕೇಶ್ ಮತ್ತು ಸೋನು ಗೌಡ ಇಬ್ಬರ ಮಧ್ಯೆ ಲವ್ವಿಡವ್ವಿ ಶುರುವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಬಿಗ್ ಬಾಸ್ ಮನೆಯಲ್ಲಿ ಸದಾ ಅಂಟಿಕೊಂಡೇ ಇರುತ್ತಾರೆ. ಮೊನ್ನೆ ಇಬ್ಬರೂ ಸ್ಮೋಕಿಂಗ್ ಕೋಣೆಯಲ್ಲೂ ಒಟ್ಟಾಗಿಯೇ ಕಾಣಿಸಿಕೊಂಡಿದ್ದರು. ಅಲ್ಲದೇ, ಇಡೀ ಮನೆ ಕೂಡ ಇವರಿಬ್ಬರ ಬಗ್ಗೆಯೇ ಮಾತನಾಡುತ್ತಿದೆ. ಒಬ್ಬರಿಗೊಬ್ಬರೂ ಬಿಟ್ಟಿರಲಾರದಷ್ಟು  ಹಚ್ಚಿಕೊಂಡಿದ್ದಾರೆ. ಇದನ್ನು ಪರೀಕ್ಷಿಸಲು ರಾಕೇಶ್ ಮುತ್ತಿನಾಟದ ಮಾರ್ಗವನ್ನು ಕಂಡುಕೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋದ ತಕ್ಷಣವೇ ಮದುವೆ ಆಗುವುದಾಗಿ ಘೋಷಿಸಿದ ಜಯಶ್ರೀ

    ‘ಬಿಗ್ ಬಾಸ್’ ಮನೆಯಿಂದ ಹೊರಗೆ ಹೋದ ತಕ್ಷಣವೇ ಮದುವೆ ಆಗುವುದಾಗಿ ಘೋಷಿಸಿದ ಜಯಶ್ರೀ

    ನ್ನಡದ ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕ ಸ್ಪರ್ಧಿಗಳು ಮೊದಲನೇ ದಿನವೇ ತಮ್ಮ ಖಾಸಗಿ ಜೀವನದ ಕಥನ ಹೇಳಿಕೊಂಡರು. ಅಫೇರ್ ಇಟ್ಟುಕೊಂಡಿರುವ, ಕದ್ದುಮುಚ್ಚಿ ಮದುವೆ ಆಗಿರುವ, ಡಿವೋರ್ಸ್ ತಗೆದುಕೊಂಡಿರುವ, ಹುಡುಗನಿಂದ ತಮಗಾದ ಅನ್ಯಾಯ, ಹುಡುಗಿಯಿಂದ ತಮಗಾದ ನೋವು ಹೀಗೆ ಎಲ್ಲವನ್ನೂ ಖುಲ್ಲಂ ಖುಲ್ಲಾ ಹಂಚಿಕೊಂಡಿದ್ದರು. ಈಗ ಆ ನೋವುಗಳು ಅವರ ಬದುಕಿಗೆ ಬೆಳಕಾದಂತೆ ಕಾಣುತ್ತಿವೆ.

    ನಟಿ, ಮಾಡಲ್ ಜಯಶ್ರೀ ಆರಾಧ್ಯ, ತಾವು ಮದುವೆ ಆಗಿರುವ ಹುಡುಗನ ಜೊತೆ ಅಫೇರ್ ಇಟ್ಟುಕೊಂಡಿದ್ದ ವಿಷಯವನ್ನು ಹಂಚಿಕೊಂಡಿದ್ದರು. ಅಲ್ಲದೇ, ಇದೀಗ ಮತ್ತೊಬ್ಬ ಹುಡುಗನನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದರು. ಈಗ ಮನೆಯಿಂದ ಹೊರ ಬಂದ ತಕ್ಷಣವೇ ತಾವು ಇಷ್ಟಪಟ್ಟ ಹುಡುಗನ ಜೊತೆ ರೆಜಿಸ್ಟರ್ ಮದುವೆ ಆಗುವುದಾಗಿ ಹೇಳಿಕೊಂಡಿದ್ದಾರೆ. ಮನೆಯಿಂದ ಆಚೆ ಹೋದ ತಕ್ಷಣ ತಾವು ಮಾಡುವ ಮೊದಲ ಕೆಲಸವದು ಎಂದು ಸಹ ಸ್ಪರ್ಧಿಗಳ ಜೊತೆ ಮಾತನಾಡಿದ್ದಾರೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಬಿಗ್ ಬಾಸ್ ಮನೆಗೆ ಬರುವ ಮುನ್ನ ಜಯಶ್ರೀ ಪ್ರೀತಿಸುತ್ತಿದ್ದ ಹುಡುಗ, ಮದುವೆ ಆಗಲು ಕೇಳಿಕೊಂಡನಂತೆ. ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಜಯಶ್ರೀ ಬದಲಾಗುತ್ತಾರೆ ಎನ್ನುವ ಅಪನಂಬಿಕೆ ಅವನದ್ದಾಗಿತ್ತಂತೆ. ಆದರೆ, ನಾನು ಬದಲಾಗಿಲ್ಲ. ಮನೆಯಿಂದ ಹೊರ ಹೋದ ತಕ್ಷಣವೇ ಅದೇ ಹುಡುಗನ ಜೊತೆ ಹೊಸ ಬದುಕಿಗೆ ಕಾಲಿಡುವುದಾಗಿ ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ಬಿಗ್ ಬಾಸ್ ಮನೆಯಿಂದ ಈ ವಾರ ಜಯಶ್ರೀ ಆರಾಧ್ಯಗೆ ಗೇಟ್ ಪಾಸ್?

    ದಿನದಿಂದ ದಿನಕ್ಕೆ ಬಿಗ್ ಬಾಸ್ ಮನೆಯ ಆಟ ಹೊರ ಬಗೆಯ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳ ಮಧ್ಯೆ ಜಟಾಪಟಿ ಜೋರಾಗಿದೆ. ಬಿಗ್ ಬಾಸ್ ಮನೆ ಇದೀಗ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು, ಈ ವಾರ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬುದು ವೀಕ್ಷಕರ ಕೌತುಕಕ್ಕೆ ಕಾರಣವಾಗಿದೆ.

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಉಳಿವಿಗೆ, ನಾ ನಾ ರೀತಿಯಲ್ಲಿ ಪೈಪೋಟಿ ನೀಡುತ್ತಿದ್ದಾರೆ. ಇನ್ನು ಪ್ರತಿ ವಾರದಂತೆ ಈ ವಾರ ಮನೆಯಿಂದ ಹೊರ ನಡೆಯುವ ಸ್ಪರ್ಧಿಯ ಯಾರಿರಬಹುದು ಎಂದು ಕುತೂಹಲ ಸೃಷ್ಟಿಯಾಗಿದೆ. ಈಗಾಗಲೇ ಕಿರಣ್ ಯೋಗೇಶ್ವರ್, ಸ್ಪೂರ್ತಿ ಗೌಡ ಮನೆಯಿಂದ ಹೊರನಡೆದಿದ್ದಾರೆ. ಅರ್ಜುನ್ ರಮೇಶ್ ಮತ್ತು ಲೋಕೇಶ್ ಅನಾರೋಗ್ಯದ ಹಿನ್ನಲೆ ಚಿಕಿತ್ಸೆಗಾಗಿ ಮನೆಯಿಂದ ಹೊರನಡೆದಿದ್ದಾರೆ. ಈಗಾಗಲೇ ಕಳಪೆ ಬೋರ್ಡ್‌ ಪಡೆದುಕೊಂಡಿರುವ ಜಯಶ್ರೀ ಆರಾಧ್ಯ ಇದೀಗ ಮನೆಯವರಿಂದ ಟಾರ್ಗೆಟ್‌ ಕೂಡ ಆಗಿದ್ದಾರೆ. ಇದನ್ನೂ ಓದಿ:ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ಇನ್ನು ಇತ್ತೀಚಿನ ಟಾಸ್ಕ್‌ವೊಂದರಲ್ಲಿ ಜಶ್ವಂತ್ ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು. ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.

    ಇನ್ನು ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದು, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್‌ಗೆ ನೀರು ಹಾಕಿ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಮನೆಯಲ್ಲಿರುವ ರೀತಿಯ  ಜತೆಗೆ ಜಯಶ್ರೀ ಅವರ ಒರಟುತನ ಈ ಎಲ್ಲಾ ಕಾರಣಾದಿಂದಾಗಿ ಜಯಶ್ರೀ ಈ ವಾರ ಬಿಗ್‌ ಬಾಸ್‌ ಮನೆಯಿಂದ ಹೊರನಡೆಯಲಿದ್ದಾರಾ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ನಂದು -ಜಯಶ್ರೀ ಜಟಾಪಟಿ: ನಟಿ ಜಯಶ್ರೀಗೆ ಶಿಕ್ಷೆ ಕೊಟ್ಟ ಬಿಗ್ ಬಾಸ್

    ಬಿಗ್ ಬಾಸ್ ಓಟಿಟಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗುತ್ತಿದೆ. ಇದೀಗ ಟಾಸ್ಕ್‌ವೊಂದರಲ್ಲಿ ಜಯಶ್ರೀ ಮಾಡಿದ ಎಡವಟ್ಟಿನಿಂದ ನಂದು ಕಣ್ಣಿಗೆ ನೋವಾಗಿದೆ. ಇದರಿಂದ ಬಿಗ್ ಬಾಸ್ ಕೆಂಗಣ್ಣಿಗೂ ಗುರಿಯಾಗಿರುವ ಜಯಶ್ರೀ, ಈ ವಾರ ಬಿಗ್ ಬಾಸ್ ಅವರಿಂದಲೇ ನೇರವಾಗಿ ನಾಮಿನೇಟ್ ಆಗಿದ್ದಾರೆ.

    ದೊಡ್ಮನೆಯ ಆಟ ಇದೀಗ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಜಶ್ವಂತ್ ನಂತರ ವಾರದ ಕ್ಯಾಪ್ಟನ್ ಆಗಲು ಸ್ಪರ್ಧಿಗಳ ನಡುವೆ ಜಟಾಪಟಿ ನಡೆದಿದೆ. ವಾರದ ಕ್ಯಾಪ್ಟನ್ ಪಟ್ಟ ಎರಲು ಬಿಗ್ ಬಾಸ್, ಮನೆ ಮಂದಿಗೆ ತಿರುಗುವ ಕುರ್ಚಿ ಟಾಸ್ಕ್ ನೀಡಿದ್ದರು. ತಿರುಗುವ ಕುರ್ಚಿಯ ಮೇಲೆ ಪ್ರತಿ ಸ್ಪರ್ಧಿ 15 ನಿಮಿಷ ಕೂರಬೇಕು. ಸ್ಪರ್ಧಿಗೆ ಸಮಯದ ಬಗ್ಗೆ ಅರಿವಿರಬೇಕು. ಈ ವೇಳೆ ಇತರೇ ಸ್ಪರ್ಧಿಗಳು ಟಾಸ್ಕ್ ಕಂಪ್ಲೀಟ್ ಮಾಡದಂತೆ ತಡೆಯಬಹುದು.

    ತಿರುಗುವ ಕುರ್ಚಿ ಟಾಸ್ಕ್‌ನಲ್ಲಿ ಎಲ್ಲಾ ಸ್ಪರ್ಧಿಗಳಂತೆ ನಂದು ಕೂಡ ಭಾಗವಹಿಸಿದ್ದಾರೆ. ಈ ವೇಳೆ ನಂದು ತಿರುಗುವ ಚೇರ್‌ನಲ್ಲಿ ಕಣ್ಣು ಮುಚ್ಚಿ ಕುಳಿತು ಸಂಖ್ಯೆಗಳನ್ನ ಏಣಿಸುತ್ತಿದ್ದಾರೆ. ಟಾಸ್ಕ್ ಕಂಪ್ಲೀಟ್ ಮಾಡದಂತೆ ಈ ವೇಳೆ ಜಯಶ್ರೀ ಕಣ್ಣಿಗೆ ಸ್ಪ್ರೈ ಹೊಡೆದಿದ್ದಾರೆ. ಬಳಿಕ ಕಣ್ಣಿಗೆ ಎರಚಿದ್ದಾರೆ. ಈ ಸಮಯದಲ್ಲಿ ನಂದು ಕಣ್ಣಿಗೆ ನೋವಾಗಿದೆ. ಇತರ ಸ್ಪರ್ಧಿಗಳು, ಮಾತನಾಡಿ, ಸ್ಪ್ರೈ ಹೊಡೆಯಬೇಡಿ ಎಂದು ಹೇಳಿದ್ದರು ಜಯಶ್ರೀ ಯಾರನ್ನ ಮಾತನ್ನ ಲೆಕ್ಕಿಸದೆ ವಾದ ಮಾಡಿದ್ದಾರೆ. ಟಾಸ್ಕ್ ನಂತರ ನಂದು ಬಳಿ ಜಯಶ್ರೀ ಕ್ಷಮೆ ಕೇಳಿದ್ದರು ಕೂಡ, ನಂದು ರಿಯಾಕ್ಟ್ ಮಾಡಲಿಲ್ಲ.

    ನಂತರ ನಾಲ್ಕನೇ ವಾರದ ಕ್ಯಾಪ್ಟನ್ ಆಗಿ, ಸೋಮಣ್ಣ ಜಯಭೇರಿ ಬಾರಿಸಿದ್ದಾರೆ. ಈ ವಿಚಾರವನ್ನು ಬಿಗ್ ಬಾಸ್ ಘೋಷಿಸಿದ್ದಾರೆ. ಸೋಮಣ್ಣ ಅವರಿಗಿಂತ ಜಯಶ್ರೀ ಜಾಸ್ತಿ ನಿಮಿಷವೇ ಆಡಿದ್ದರು ಕೂಡ, ಜಯಶ್ರೀ ಮಾಡಿದ ಎಡವಟ್ಟಿನಿಂದ ಸೋತಿದ್ದಾರೆ. ಆಟದ ವೇಳೆ ನಂದು ಕಣ್ಣಿಗೆ ಸ್ಪ್ರೈ ಹಾಕಿದ್ದೆ, ಜಯಶ್ರೀಗೆ ಮುಳುವಾಗಿತ್ತು. ಜೊತೆಗೆ ಆಟದ ವೇಳೆ ಮೈಕ್ ಕೂಡ ಜಯಶ್ರೀ ಹಾನಿ ಮಾಡಿದ್ದರು. ಹಾಗಾಗಿ ಈ ವಾರ ಎಲಿಮಿನೇಟ್ ಆಗದೇ ಉಳಿದರೆ ಮುಂದಿನ ವಾರ ಕೂಡ ಜಯಶ್ರೀ ನೇರ ನಾಮಿನೇಟ್ ಆಗುವುದಾಗಿ ಬಿಗ್ ಬಾಸ್ ತಿಳಿಸಿದ್ದಾರೆ. ಇದನ್ನೂ ಓದಿ:ಆ ಒಂದು ಹೆಸರಿನ ಟ್ಯಾಟೋನಿಂದ ಎರಡನೇ ಮದುವೆ ವದಂತಿಗೆ ಫುಲ್ ಸ್ಟಾಪ್ ಹಾಕಿದ ಮೇಘನಾ ರಾಜ್

    ಈ ವೇಳೆ ವಾರದ ಆಕ್ಟಿವಿಟಿ ಗಮನಿಸಿ, ಬೆಸ್ಟ್ ಸ್ಪರ್ಧಿಯಾಗಿ ಗುರೂಜಿ ಹೊರಹೊಮ್ಮಿದರೆ, ಕಳಪೆ ಸ್ಪರ್ಧಿಯಾಗಿ ಜಯಶ್ರೀ ಬಿಗ್ ಬಾಸ್ ಮನೆಯ ಜೈಲಿಗೆ ಸೇರಿದ್ದಾರೆ. ಜಯಶ್ರೀ ಮಾಡಿದ ಎಡವಟ್ಟಿನಿಂದ ಬಿಗ್ ಬಾಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ವಾರ ಕೂಡ ನಾಮಿನೇಟ್ ಆಗಿರುವ ಜಯಶ್ರೀಗೆ ಬಿಗ್ ಬಾಸ್ ಮನೆಯ ಆಟ ಅಂತ್ಯವಾಗುತ್ತಾ ಎಂಬುದನ್ನ ಕಾದುನೋಡಬೇಕಿದೆ

    Live Tv
    [brid partner=56869869 player=32851 video=960834 autoplay=true]