Tag: Jayaraj

  • ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

    ನಟ ಧನಂಜಯ್ ಗೆ ‘ಅಗ್ನಿ’ ಪರೀಕ್ಷೆ: ಕಾನೂನು ಹೋರಾಟ ಮಾಡ್ತೀನಿ ಅಂತಾರೆ ಜಯರಾಜ್ ಪುತ್ರ

    ಕೋಟಿ ಕೋಟಿ ಬಂಡವಾಳ ಸುರಿದು ‘ಹೆಡ್ ಬುಷ್’ ಸಿನಿಮಾ ಮಾಡಿದ್ದಾರೆ ಡಾಲಿ ಧನಂಜಯ್. ಅವರೇ ಮುಖ್ಯ ಪಾತ್ರದಲ್ಲಿ ನಟಿಸಿ, ಹೆಸರಾಂತ ತಾರಾ ಬಳಗವನ್ನೇ ಹಾಕಿಕೊಂಡು ಹೊಸ ರೀತಿಯ ಚಿತ್ರ ಮಾಡಲಾಗಿದೆ. ಆದರೆ, ಏಕಾಏಕಿ ಸಿನಿಮಾದ ಕುರಿತು ಅಪಸ್ವರ ಎದ್ದಿದ್ದು, ಸಿನಿಮಾದ ಶೂಟಿಂಗ್ ಮುಗಿದ ಹೊತ್ತಿನಲ್ಲಿ ಈ ವಿವಾದ ಶುರುವಾಗಿದ್ದರಿಂದ ಧನಂಜಯ್ ಅವರಿಗೆ ಇದೊಂದು ರೀತಿಯಲ್ಲಿ ಅಗ್ನಿ ಪರೀಕ್ಷೆಯೇ ಆಗಿದೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಸಿನಿಮಾ ತಂಡವೇ ಘೋಷಿಸಿಕೊಂಡಂತೆ ಅಗ್ನಿ ಶ್ರೀಧರ್ ಅವರ ಪುಸ್ತಕವನ್ನು ಆಧರಿಸಿದ ಚಿತ್ರವಿದು. ಈ ಸಿನಿಮಾದಲ್ಲಿ ಧನಂಜಯ್ ಬೆಂಗಳೂರು ಭೂಗತ ಜಗತ್ತಿನ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವಿಷಯವನ್ನು ಸಿನಿಮಾ ತಂಡವೇ ಈ ಹಿಂದೆ ಹೇಳಿಕೊಂಡಿದೆ. ಹಾಗಾಗಿ ಜಯರಾಜ್ ಪುತ್ರ ಅಜಿತ್ ಈ ಸಿನಿಮಾದ ಬಗ್ಗೆ ಅಪಸ್ವರ ತಗೆದಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ನನ್ನ ತಂದೆಯ ಕುರಿತು ಸಿನಿಮಾ ಮಾಡುತ್ತಿದ್ದಾರೆ ಎಂದು ಗೊತ್ತಾದಾಗ ಸಿನಿಮಾ ತಂಡವನ್ನು ಸಂಪರ್ಕಿಸಿದೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಗಲಿಲ್ಲ. ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಮಾಡಿರುವ ಸಿನಿಮಾವನ್ನು ರಿಲೀಸ್ ಮಾಡಕೂಡದು ಎಂದು ಅಜಿತ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನು ನೀಡಿದ್ದಾರೆ. ಅಲ್ಲದೇ, ಈ ಕುರಿತಾಗಿ ಕಾನೂನು ಹೋರಾಟವನ್ನೂ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಅಸಲಿ ವಿಷಯ ಹೇಳುವುದಾದರೆ, ಧನಂಜಯ್ ಮತ್ತು ಅಜಿತ್ ಇಬ್ಬರೂ ಆತ್ಮೀಯರು. ಒಟ್ಟೊಟ್ಟಿಗೆ ಅನೇಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನಂಜಯ್ ಅವರು ಸ್ವತಃ ಅಜಿತ್ ಮದುವೆಗೂ ಹೋಗಿದ್ದರು. ಹೆಡ್ ಬುಷ್ ಸಿನಿಮಾ ಆಗುವ ಸಂದರ್ಭದಲ್ಲಿ ಅಜಿತ್ ಚಿತ್ರಕ್ಕೆ ಶುಭ ಹಾರೈಸಿದ್ದರು. ಇದೀಗ ಏಕಾಏಕಿ ಉಲ್ಟಾ ಹೊಡೆದಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ಕೋಟಿ ಕೋಟಿ ಸುರಿದು ಸಿನಿಮಾ ಮಾಡಿದ್ದೇವೆ. ರಿಲೀಸ್ ಹೊತ್ತಿನಲ್ಲಿ ತೊಂದರೆ ಮಾಡುವುದು ಸರಿಯಲ್ಲ. ಅವರ ತಂದೆಯವರನ್ನು ನಾನು ಕೆಟ್ಟದಾಗಿ ಬಿಂಬಿಸಿಲ್ಲ. ಸಿನಿಮಾ ನೋಡಿದ ನಂತರ ಅವರು ಮಾತನಾಡಿದರೆ ಅದಕ್ಕೊಂದು ಅರ್ಥವಿರುತ್ತದೆ. ಅಗ್ನಿ ಶ್ರೀಧರ್ ಅವರು ಬರೆದ ಪುಸ್ತಕದ ಹಕ್ಕನ್ನು ಪಡೆದು ಸಿನಿಮಾ ಮಾಡಲಾಗಿದೆ’ ಎನ್ನುತ್ತಾರೆ. ಹೆಡ್ ಬುಷ್ ಸಿನಿಮಾ ಮಾಡುವಾಗಲೇ ಕಥೆ, ಪಾತ್ರದ ಬಗ್ಗೆ ಸಿನಿಮಾ ತಂಡ ಹೇಳಿಕೊಂಡಿದೆ. ಪಾತ್ರಗಳ ಪರಿಚಯದ ಪೋಸ್ಟರ್ ರಿಲೀಸ್ ಮಾಡುವಾಗಲೇ ಪಾತ್ರದ ಬಗ್ಗೆ ಪರಿಚಯಿಸಿದೆ. ಇದೀಗ ಸಿನಿಮಾ ಮುಗಿದ ಮೇಲೆ ಏಕಾಏಕಿ ಸಿನಿಮಾ ನಿಲ್ಲಿಸಬೇಕು ಎನ್ನುವುದು ಎಷ್ಟು ಸರಿ ಎನ್ನುತ್ತಿದೆ ಹೆಡ್ ಬುಷ್ ತಂಡ.

  • ಡಾಲಿ ಧನಂಜಯ್ ತುಳಿಯಲು ಸಜ್ಜಾಗಿವೆಯಾ ಕಾಣದ ಕೈಗಳು?

    ಡಾಲಿ ಧನಂಜಯ್ ತುಳಿಯಲು ಸಜ್ಜಾಗಿವೆಯಾ ಕಾಣದ ಕೈಗಳು?

    ಡವ ರಾಸ್ಕಲ್ ಯಶಸ್ವಿ ಅಲೆಯಲ್ಲಿ ತೇಲುತ್ತಿರುವ ಡಾಲಿ ಧನಂಜಯ್ ಅವರನ್ನು ತುಳಿಯಲು ಸ್ಯಾಂಡಲ್ ವುಡ್ ನಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆಯಾ? ಹಾಗಂತ ಸ್ವತಃ ಧನಂಜಯ್ ಅವರೇ ಮಾಧ್ಯಮವೊಂದಕ್ಕೆ ನೀಡಿದ ಆಡಿಯೋ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ‘ಹೆಡ್ ಬುಷ್’ ಸಿನಿಮಾಗೆ ಸಂಬಂಧಿಸಿದ ವಿವಾದವೊಂದರ ಕುರಿತು ಮಾತನಾಡಿರುವ ಅವರು ಕಾಣದ ಕೈಗಳು ಯಾಕೆ ಈ ರೀತಿ ಕೆಲಸ ಮಾಡುತ್ತಿವೆ ಎನ್ನುವುದು ನನಗೂ ಅರ್ಥವಾಗುತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಡಾಲಿ ಧನಂಜಯ್ ‘ಹೆಡ್ ಬುಷ್’ ಚಿತ್ರಕ್ಕಾಗಿ ಹಣ ಮತ್ತು ಶ್ರಮ ಎರಡನ್ನೂ ಹೂಡಿದ್ದಾರೆ. ಈಗಾಗಲೇ ಸಿನಿಮಾದ ಬಹುತೇಕ ಶೂಟಿಂಗ್ ಕೂಡ ಮುಗಿದಿದೆ. ಅಗ್ನಿ ಶ್ರೀಧರ್ ಅವರ ಪುಸ್ತಕವೊಂದನ್ನು ಆಧರಿಸಿ ಈ ಸಿನಿಮಾ ಬರುತ್ತಿದ್ದು, ಅದರಲ್ಲಿ ಬೆಂಗಳೂರಿನ ಅಂಡರ್ ವರ್ಲ್ಡ್ ಡಾನ್ ಎಂದೇ ಖ್ಯಾತರಾಗಿದ್ದ ಜಯರಾಜ್ ಅವರ ಪಾತ್ರವೂ ಇದೆ. ಈ ಪಾತ್ರದ ಕುರಿತಾಗಿ ಜಯರಾಜ್ ಪುತ್ರ ಅಜಿತ್ ಆಕ್ಷೇಪವನ್ನು ವ್ಯಕ್ಯ ಪಡಿಸಿದ್ದಾರೆ. ತಮ್ಮ ಅನುಮತಿ ಇಲ್ಲದೇ ತಮ್ಮ ತಂದೆಯ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ ಎಂದು ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಸಿನಿಮಾ ರಿಲೀಸ್ ಮಾಡದಂತೆ ಕೋರ್ಟ್ ಗೂ ಹೋಗುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಧನಂಜಯ್, ‘ನನಗೂ ಫಿಲ್ಮ್ ಚೇಂಬರ್ ನಿಂದ ಕರೆ ಬಂದಿತ್ತು. ನಾನು ಆಸ್ಪತ್ರೆಯಲ್ಲಿ ಇರುವ ಕಾರಣಕ್ಕಾಗಿ ಮೇ.13ರ ನಂತರ ಚೇಂಬರ್ ಗೆ ಬರುವುದಾಗಿ ತಿಳಿಸಿದ್ದೇನೆ. ಅಷ್ಟಕ್ಕೂ ನಾವು ಸಿನಿಮಾ ಮಾಡುವ ವಿಚಾರ ಅಜಿತ್ ಅವರಿಗೆ ಗೊತ್ತಿದೆ. ಅವರು ನನ್ನ ಒಳ್ಳೆಯ ಫ್ರೆಂಡ್. ಈ ಸಿನಿಮಾ ಮಾಡುವಾಗ ವಿಶ್ ಮಾಡಿದ್ದರು. ತಮ್ಮ ತಂದೆಯ ಪಾತ್ರವು ಹೇಗೆ ಬರುತ್ತಿದೆ ಎಂದು ಕೇಳುತ್ತಿದ್ದರು. ಆದರೆ, ದಿಢೀರ್ ಅಂತ ಹೀಗೆ ಕಂಪ್ಲೆಂಟ್ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಅವರು ಹೀಗೆ ಮಾಡಿದ್ದಾರೆ ಅಂದರೆ, ಅದರ ಹಿಂದೆ ಕಾಣದ ಕೈಗಳು ಇವೆ ಅನಿಸುತ್ತದೆ’ ಎಂದಿದ್ದಾರೆ ಡಾಲಿ ಧನಂಜನ್. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಅವರು ಕೋರ್ಟ್, ಕಾನೂನು ಅಂತ ಹೋಗುವುದಾದರೆ ಅಥವಾ ಈ ಕುರಿತು ಏನೇ ಮಾತುಕತೆ ಇದ್ದರೆ ಅದನ್ನು ಅಗ್ನಿ ಶ್ರೀಧರ್ ಅವರ ಜತೆ ಮಾಡಬೇಕು. ನಾವು ಅವರ ಕೃತಿಯ ಹಕ್ಕು ಪಡೆದುಕೊಂಡೇ ಸಿನಿಮಾ ಮಾಡಿದ್ದೇವೆ. ಶ್ರೀಧರ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಮ್ಮ ಸಿನಿಮಾಗೂ, ಅಜಿತ್ ಅವರ ಆರೋಪಕ್ಕೂ ಸಂಬಂಧ ಇರದು. ಅವರು ಅಗ್ನಿ ಶ್ರೀಧರ್ ಅವರ ಜತೆಯೇ ಮಾತುಕತೆ ಆಡಬೇಕು ಎಂದಿದ್ದಾರೆ ಧನಂಜಯ್.

  • ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರಕ್ಕೆ ಕಂಟಕ

    ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಚಿತ್ರಕ್ಕೆ ಕಂಟಕ

    ಡಾಲಿ ಧನಂಜಯ್ ನಟನೆಯ ಹೆಡ್ ಬುಷ್ ಚಿತ್ರಕ್ಕೆ ಕಂಟಕವೊಂದು ಎದುರಾಗಿದೆ. ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಬೆಂಗಳೂರು ಭೂಗತ ಲೋಕದ ಮೊದಲ ಡಾನ್ ಎಂದು ಕರೆಯಲ್ಪಡುವ ಜಯರಾಜ್ ಪುತ್ರ ಅಜಿತ್ ಜಯರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ : ಕೇಂದ್ರ ಸಚಿವ ಅನುರಾಗ್ ಠಾಕೂರ್ ಜತೆ ಸಿನಿರಂಗದ ಸಮಸ್ಯೆ ಚರ್ಚೆ

    ಹೆಡ್ ಬುಷ್ ಸಿನಿಮಾ ಡಾನ್ ಜಯರಾಜ್ ಜೀವನವನ್ನು ಆಧರಿಸಿದ ಸಿನಿಮಾ ಎಂದು ಹೇಳಲಾಗಿತ್ತು. ಈ ಸಿನಿಮಾದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಅವರೇ ಈ ಹಿಂದೆ ಹೇಳಿದಂತೆ 1970ರ ಕಾಲದಲ್ಲಿ ಬೆಂಗಳೂರಿನಲ್ಲಿ ನಡೆದ ಭೂಗತ ಲೋಕದ ಕಥೆಯಿದೆ ಮತ್ತು ಅಲ್ಲಿ ಜಯರಾಜ್ ಇದ್ದಾರೆ ಎಂದು ಹೇಳಲಾಗಿತ್ತು. ಹಾಗಾಗಿ ತಮ್ಮ ತಂದೆಯ ಸಿನಿಮಾವನ್ನು ಯಾರೂ ಮಾಡದಂತೆ ಫಿಲ್ಮ್ ಚೇಂಬರ್ ಗೆ ಅಜಿತ್ ಜಯರಾಜ್ ಪತ್ರವೊಂದನ್ನು ಕೊಟ್ಟಿದ್ದಾರೆ. ಇದನ್ನೂ ಓದಿ : ಹಿರಿಯ ರಂಗಕರ್ಮಿ, ಏಣಗಿ ಬಾಳಪ್ಪನವರ ಪತ್ನಿ ಲಕ್ಷ್ಮೀಬಾಯಿ ನಿಧನ

    ಫಿಲ್ಮ್ ಚೇಂಬರ್ ಗೆ ಕೊಟ್ಟ ಪತ್ರದಲ್ಲಿ ‘ನನ್ನ ತಂದೆ ಜಯರಾಜ್ ಕುರಿತಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದಾರೆ. ಅಲ್ಲದೇ, ನಟ ಡಾಲಿ ಧನಂಜಯ್ ಅವರು ನನ್ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಹಾಗಾಗಿ ನನ್ನ ತಂದೆಯ ಕುರಿತಾಗಿ ಯಾರೂ ಸಿನಿಮಾ ಮಾಡಬಾರದು. ಒಂದು ವೇಳೆ ಮಾಡಿದರೆ, ಕಾನೂನು ರೀತಿಯಲ್ಲಿ ಕ್ರಮ ತಗೆದುಕೊಳ್ಳುವುದಾಗಿ’ ಅವರು ಬರೆದಿದ್ದಾರೆ. ಇದನ್ನೂ ಓದಿ : ಶಿವಣ್ಣನ ಹುಲಿ ಅವತಾರ: ಬೈರಾಗಿ ಹಾಡಿಗೆ ಭೀಮನ ಬಲ

    ಇತ್ತೀಚೆಗಷ್ಟೇ ಹೆಡ್ ಬುಷ್ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಸಿರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಧನಂಜಯ್ ನಾಯಕನಾದರೆ, ಪಾಯಲ್ ರಜಪೂತ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಿರಿಯ ನಟ ಕ್ರೇಜಿಸ್ಟಾರ್ ರವಿಚಂದ್ರನ್, ಶ್ರುತ ಹರಿಹರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಸೇರಿದಂತೆ ಹೆಸರಾಂತ ಕಲಾವಿದೇ ಈ ಸಿನಿಮಾದಲ್ಲಿ ಇದ್ದಾರೆ.