Tag: Jayanth T

  • ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

    ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದ್ರೆ ಶಿಕ್ಷೆ ಅನುಭವಿಸಬೇಕು: ಜಯಂತ್

    – ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ

    ಮಂಗಳೂರು: ಕಾನೂನು ಅರಿವಿಲ್ಲದೇ ತಪ್ಪು ಮಾಡಿದ್ರೆ ಅದಕ್ಕೆ ತಕ್ಕದಾದ ಶಿಕ್ಷೆ ತೆಗೆದುಕೊಳ್ಳಲೇಬೇಕು. ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು ಎಂದು ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಎರಡನೇ ದೂರುದಾರ ಜಯಂತ್  (Jayanth T) ಹೇಳಿದ್ದಾರೆ.

    ಎಸ್‌ಐಟಿ (SIT) ವಿಚಾರಣೆಗೆ ತೆರಳುವ ಮುನ್ನ ಪ್ರತಿಕ್ರಿಯೆ ನೀಡಿದ ಅವರು, ನಾನು ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಹೊಡೆದಿದ್ದಾರಾ ಎಂದು ಕೇಳುತ್ತಿದ್ದಾರೆ. ಆದರೆ ಎಸ್‌ಐಟಿ ಅಧಿಕಾರಿಗಳು ನಿಯಮ ಪ್ರಕಾರ ತನಿಖೆ ಮಾಡುತ್ತಿದ್ದಾರೆ. ನನಗೆ ಎಸ್‌ಐಟಿಯವರು ಹೊಡೆದಿಲ್ಲ, ದಾಖಲೆ ಇಟ್ಟುಕೊಂಡು ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು

    ಎಸ್‌ಐಟಿಯವರ ಮುಂದೆ ಯಾವುದೇ ಸುಳ್ಳು ಹೇಳಲು ಆಗಲ್ಲ. ಯಾರು ತನಿಖೆಗೆ ಬಂದರೂ ಸಹ ಸತ್ಯವನ್ನೇ ಹೇಳಿ. ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ. ಎಫ್‌ಎಸ್‌ಎಲ್‌ಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್‌ ಹಿಂದುತ್ವ – ಸಿಟಿ ರವಿ

  • ಚಿನ್ನಯ್ಯ ಈಗ ಡಬಲ್‌ ಗೇಮ್‌ ಆಡುತ್ತಿದ್ದಾನೆ: ಜಯಂತ್‌

    ಚಿನ್ನಯ್ಯ ಈಗ ಡಬಲ್‌ ಗೇಮ್‌ ಆಡುತ್ತಿದ್ದಾನೆ: ಜಯಂತ್‌

    ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala) ಚಿನ್ನಯ್ಯ (Chinnayya) ಈಗ ಡಬಲ್ ಗೇಮ್ ಮಾಡುತ್ತಿದ್ದಾನೆ, ತನಿಖೆಯ ದಾರಿ ತಪ್ಪಿಸುತ್ತಿದ್ದಾನೆ ಎಂದು ಜಯಂತ್‌ ಟಿ (Jayanth T) ಹೇಳಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಸೌಜನ್ಯ ಹೋರಾಟದ ದಾರಿ ತಪ್ಪಿಲ್ಲ. ಚಿನ್ನಯ್ಯ ಈಗ ಸುಳ್ಳು ಹೇಳಿ ಬಚಾವಾಗಲು ಪ್ರಯತ್ನ ಮಾಡುತ್ತಿದ್ದಾನೆ ಎಂದು ಆರೋಪಿಸಿದರು. ಇದನ್ನೂ ಓದಿ: ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ

    ಈ ಪ್ರಕರಣದಲ್ಲಿ ಆತ ಪಾರಾಗುವುದಿಲ್ಲ. ಎಲ್ಲೋ ಯಾರೋ ಕರೆ ಮಾಡಿ ದಾರಿ ತಪ್ಪಿಸಿದ್ದಾರೆ. ಬುರುಡೆ ಹೊರಗೆ ಬಂದರೆ ನಿನಗೆ ಜೈಲೇ ಗತಿ ಎಂದು ಯಾರೋ ಭಯಪಡಿಸಿದ್ದಾರೆ. ನಿಜವಾದ ಜಾಗವನ್ನು ತೋರಿಸದೇ ಸುಳ್ಳು ಜಾಗವನ್ನು ತೋರಿಸುತ್ತಿದ್ದಾನೆ. ಎಷ್ಟು ದಿನಗಳ ಕಾಲ ನಡೆದ ಘಟನೆ ಎಲ್ಲವೂ ಹಾಗಾದರೆ ಸುಳ್ಳಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದೇ ಬೆಂಗಳೂರಿನ ಲಾಡ್ಜ್‌ನಲ್ಲಿ!

    ಇಬ್ಬರು ಸ್ವಾಮೀಜಿಯ ಬಳಿ ತೆರಳಿ ಮಾತುಕತೆ ಮಾಡಲಾಗಿತ್ತು. ಸ್ವಾಮೀಜಿ ಯಾರು ಎಂದು ಕೆಲವರಿಗೆ ಗೊತ್ತಾಗಿರಬಹುದು ನಾನು ಹೇಳುವುದಿಲ್ಲ. ಸ್ವಾಮೀಜಿ ಮುಂದೆ ಚಿನ್ನಯ್ಯ ಒಂದೂವರೆ ಗಂಟೆ ಮಾತಾಡಿದ್ದಾನೆ. ಮಟ್ಟಣ್ಣನವರು, ಮಹೇಶ್ ಶೆಟ್ಟಿ ಸ್ವಾಮೀಜಿ ಬಳಿ ತೆರಳಿದ್ದಾರೆ. ನನಗೆ ಮೊದಲೇ ಕಮ್ಯುನಿಸ್ಟ್ ಎಂಬ ಹಣೆಪಟ್ಟೆ ಇದೆ. ಹಾಗಾಗಿ ನಾನು ದೂರ ಉಳಿದೆ ಎಂದರು.