Tag: Jayamala

  • ಡೋಂಟ್ ವರಿ, ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ: ಜಯಮಾಲಾ ವಿಶ್ವಾಸ

    ಡೋಂಟ್ ವರಿ, ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ: ಜಯಮಾಲಾ ವಿಶ್ವಾಸ

    ಉಡುಪಿ: ಕನ್ನಡದ ಕಲಾವಿದರೆಲ್ಲರೂ ಪ್ರಾಮ್ಟ್ ಇರ್ತಾರೆ. ಅವರು ಕ್ರಮ ಪ್ರಕಾರ ತೆರಿಗೆ ಕಟ್ಟಿರುತ್ತಾರೆ. ಐಟಿ ದಾಳಿ ವಿಚಾರದಲ್ಲಿ ಯಾರೂ ಆತಂಕಪಡಬೇಡಿ ಎಂದು ಸಚಿವೆ, ನಟಿ ಜಯಮಾಲಾ ವಿಶ್ವಾಸ ವ್ಯಕ್ತಪಡಿಸಿದರು.

    ಸ್ಯಾಂಡಲ್ ವುಡ್ ಮೇಲೆ ಐಟಿ ದಾಳಿ ಮಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಐಟಿಯವರು ಅವರ ಕೆಲಸ ಮಾಡುತ್ತಾರೆ. ಯಾರಿಗೂ ಇದರಿಂದ ತೊಂದರೆ ಆಗುವುದಿಲ್ಲ. ಕನ್ನಡ ಚಿತ್ರರಂಗ ಎತ್ತರಕ್ಕೆ ಬೆಳೆದಿರೋದು ಈ ದಾಳಿ ನೋಡಿದಾಗ ಗೊತ್ತಾಗುತ್ತದೆ. ಕಲಾವಿದರಿಗೆ ಈ ದಾಳಿಯಿಂದ ಏನೂ ಹಿನ್ನಡೆ ಆಗೋದಿಲ್ಲ. ರಾಜ್ ಕುಮಾರ್ ಮಕ್ಕಳು ಯಶ್ – ಸುದೀಪ್ ಬಹಳ ಪ್ರಾಮ್ಟ್ ಇದ್ದಾರೆ ಎಂದರು. ಕಲಾವಿದರ ಬಳಿ ಎರಡು ಒಡವೆ, ಬೆಳ್ಳಿತಟ್ಟೆ, ಚೊಂಬು ಇರಬಹುದು ಎಂದು ನಕ್ಕರು.

    ನಿಯಮ ಪ್ರಕಾರ ಎಲ್ಲರೂ ತೆರಿಗೆ ಕಟ್ಟಲೇಬೇಕು. ಎಲ್ಲಾ ಕಲಾವಿದರು ತೆರಿಗೆ ಕಟ್ಟಿರುತ್ತಾರೆ ಅಂತ ಜಯಮಾಲಾ ಹೇಳಿದರು. ಇದೇ ವೇಳೆ ಪ್ರಧಾನಿ ಮೋದಿ ದಾಳಿ ಮಾಡಿಸಿದ್ದಾರಂತೆ ಹೌದಾ ಅಂತ ಕೇಳಿದ್ರೆ ಅದೆಲ್ಲ ನಂಗೆ ಗೊತ್ತಿಲ್ಲ ಅಂತ ಹೇಳಿದರು.

    ಶಬರಿಮಲೆ ವಿಚಾರಕ್ಕೆ ಗರಂ:
    ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಜಯಮಾಲಾ, ಶಬರಿಮಲೆ ಬಗ್ಗೆ ಮಾತಾಡಿ ನಾನು ಸುಸ್ತಾಗಿ ಬಿಟ್ಟೆ. ನಾನು ಈ ಬಗ್ಗೆ ಏನೂ ಮಾತಾಡಲ್ಲ. ದೇವರನ್ನು ಯಾರೂ ವ್ಯಾಪಾರಕ್ಕೆ ಇಡಬಾರದು. ನಾನು ದೇವರನ್ನು ನಂಬಿಕೆಯ ತಳಹದಿಯಲ್ಲಿ ನೋಡುವವಳು. ಶಬರಿಮಲೆಗೆ ಭಕ್ತಿಯಿಂದ ಹೋಗಬೇಕು ಎಂಬುದು ನನ್ನ ಭಾವನೆ. ದೇವರ ದರ್ಶನ ಖುಷಿಯಾಗಿದ್ಯಾ ಅಂತ ಹೋದವರನ್ನು ಕೇಳಿ ಎಂದು ಅವರು ಕೋಪಗೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

    ಕಡಲ ಮಕ್ಕಳಲ್ಲಿ ಭಯಬೇಡ, 7 ಮೀನುಗಾರರು ಜೀವಂತ ಬರುತ್ತಾರೆ: ಸಚಿವೆ ಜಯಮಾಲಾ

    ಉಡುಪಿ: ಇಲ್ಲಿನ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿ ಡಿಸೆಂಬರ್ 15 ರಿಂದ ನಾಪತ್ತೆಯಾಗಿರುವ ಏಳು ಮೀನುಗಾರರು ವಾಪಾಸ್ ಬರುತ್ತಾರೆ ಎಂಬ ನಂಬಿಕೆ ಇದೆ. ಅವರನ್ನು ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಸರಕಾರದ ಮಟ್ಟದಲ್ಲಿ ಎಲ್ಲಾ ಶೋಧಕಾರ್ಯ ಮಾಡಿದ್ದೇವೆ ಎಂದು ಉಡುಪಿ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೀನುಗಾರರು ಸುರಕ್ಷಿತವಾಗಿ ವಾಪಾಸ್ ಬರುತ್ತಾರೆ ಎಂಬ ನಂಬಿಕೆಯಿದೆ. ಅಪಹರಿಸಿ ಒತ್ತೆ ಇಟ್ಟಿರುವ ಬಗ್ಗೆಯೂ ನಮಗೆ ಗುಮಾನಿ ಇದೆ. ಈ ಹಿಂದೆಯೂ ಒತ್ತೆ ಇಟ್ಟಿರುವ ಘಟನೆ ನಡೆದಿದೆ. ಕೇಂದ್ರ- ರಾಜ್ಯ ಸರ್ಕಾರ ಮೀನುಗಾರರ ಕುಟುಂಬದ ಜೊತೆಗಿದೆ. ನೌಕಾಸೇನೆ, ವಾಯುಸೇನೆ ಅಧಿಕಾರಿಗಳು, ಕೋಸ್ಟ್ ಗಾರ್ಡ್ ನಿರಂತರ ಹುಡುಕಾಟ ಮಾಡಿದ್ದಾರೆ. ಕೊಸ್ಟ್ ಗಾರ್ಡ್ ಇಲಾಖೆ ಕೂಡಾ ಕಾರ್ಯಾಚರಣೆ ಮಾಡುತ್ತಿದೆ ಎಂದು ಜಯಮಾಲಾ ಹೇಳಿದರು. ಇದನ್ನೂ ಓದಿ: ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ – ಭಾನುವಾರ ಬಂದರುಗಳು ಬಂದ್!

    ಪ್ರತಿಭಟನೆ ಕೈಬಿಡಿ:
    ಮೀನುಗಾರರು ನಾಳಿನ ಪ್ರತಿಭಟನೆ ಕೈಬಿಡಲಿ ಎಂದು ಮನವಿ ಮಾಡಿದ ಸಚಿವೆ, ಮೀನುಗಾರರ ನೋವು ನಮ್ಮ ನೋವೆಂದು ಭಾವಿಸಿದ್ದೇವೆ. ಗೃಹಸಚಿವರು ಉಡುಪಿಗೆ ಬಂದು ಸಭೆ ನಡೆಸುತ್ತಾರೆ. ಮೀನುಗಾರಿಕಾ ಸಚಿವರೂ ಉಡುಪಿಗೆ ಬರುತ್ತಾರೆ. ಭಯೋತ್ಪಾದಕ ಕೃತ್ಯ ಆಗಿದ್ದರೂ ಬಿಡಿಸಿಕೊಂಡು ತರುತ್ತೇವೆ. ಮೀನುಗಾರರು ಜೀವಂತ ಬಂದರೆ ಸಾಕು. ನಾನೂ ಕೂಡ ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕಸುಬಿಗಾಗಿ ಕಡಲಿಗಿಳಿದವರು 17 ದಿನದಿಂದ ಕಣ್ಮರೆ- ಇದು ಮಿಸ್ಸಿಂಗ್ ಸೆವೆನ್ ಮಿಸ್ಟರಿ

    ಡಿಸೆಂಬರ್13 ರಂದು ತೆರಳಿದ್ದ ಬೋಟ್ ಮಹಾರಾಷ್ಟ್ರ- ಗೋವಾ ಗಡಿಯಲ್ಲಿ ನಾಪತ್ತೆಯಾಗಿತ್ತು. ಬೋಟ್ ನಲ್ಲಿ ಉಡುಪಿಯ ಇಬ್ಬರು, ಉತ್ತರ ಕನ್ನಡದ ಐದು ಮೀನುಗಾರರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಂಪುಟದ ನಾಲ್ವರು ಹಾಲಿ ಸಚಿವರಿಗೆ ಕೈ ನಾಯಕರಿಂದ ಕೋಕ್?

    ಸಂಪುಟದ ನಾಲ್ವರು ಹಾಲಿ ಸಚಿವರಿಗೆ ಕೈ ನಾಯಕರಿಂದ ಕೋಕ್?

    ಬೆಳಗಾವಿ: ಸಂಪುಟ ವಿಸ್ತರಣೆಯಲ್ಲಿ ನಮಗೂ ಸಚಿವ ಸ್ಥಾನ ಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿರುವುದರಿಂದ ನಾಲ್ವರು ಹಾಲಿ ಶಾಸಕರನ್ನು ಕೈ ಬಿಡಲು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಈ ಮೂಲಕ ಡಿಸೆಂಬರ್ 22ರಂದು ನಡೆಯುವುದು ಸಂಪುಟ ವಿಸ್ತರಣೆಯೋ? ಅಥವಾ ಪುನರಚನೆಯೋ ಎನ್ನುವ ಪ್ರಶ್ನೆ ಶುರುವಾಗಿದೆ. ಸಂಪುಟ ಪುನರ್ ರಚನೆ ಮಾಡುವಂತೆ ಕಾಂಗ್ರೆಸ್‍ನ ಕೆಲವು ಹಿರಿಯ ಶಾಸಕರ ಪಟ್ಟು ಹಿಡಿದಿದ್ದಾರಂತೆ. ಹೀಗಾಗಿ ಅವರ ಒತ್ತಡಕ್ಕೆ ಮಣಿದ ನಾಯಕರು, ನಾಲ್ವರು ಸಚಿವರ ಹೆಸರನ್ನು ಮಂತ್ರಿಗಿರಿಯಿಂದ ಕೈಬಿಡುವ ಪಟ್ಟಿಗೆ ಸೇರಿಸಿದ್ದಾರೆ ಎನ್ನಲಾಗಿದೆ.

    ಯಾರೆಲ್ಲ ಸಂಪುಟದಿಂದ ಔಟ್:
    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ, ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಆರ್.ಶಂಕರ್, ಕಾರ್ಮಿಕ ಸಚಿವ ವೆಂಕಟರಮಣಪ್ಪ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರನ್ನು ಸಂಪುಟದಿಂದ ಕೈಬಿಡುವ ನಿರ್ಧಾರವನ್ನು ಕೈ ನಾಯಕರು ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಮಂತ್ರಿಗಳ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಕಳುಹಿಸಲಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿ ಮಾಹಿತಿ ಲಭಿಸಿದೆ.

    ಸಂಪುಟ ಪುನಾರಚನೆಯ ಕುರಿತು ಡಿಸೆಂಬರ್ 21ರಂದು ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಈ ವೇಳೆ ಚರ್ಚೆ ನಡೆಸಿ ಯಾರಿಗೆ ಮಂತ್ರಿಗಿರಿ ನೀಡಬೇಕು ಎನ್ನುವ ಕುರಿತು ಸುದೀರ್ಘ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

    ಸಂಪುಟ ವಿಸ್ತರಣೆ ವಿಚಾರ ಹೊರ ಬೀಳುತ್ತಿದ್ದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್, ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಅನೇಕರು ಮಂತ್ರಿಗಿರಿಗಾಗಿ ಲಾಭಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬಣದ ನಾಯಕರ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!

    ಸಾಮಾನ್ಯರು ಬಿಡಿ, ಜನಪ್ರತಿನಿಧಿಗಳ ಮನೆಯಲ್ಲೇ ಆಗ್ತಿಲ್ಲ ಕಸ ವಿಂಗಡಣೆ, ವಿಲೇವಾರಿ!

    – ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್‍ನಲ್ಲಿ ಬಯಲಾಯ್ತು ಅಸಲಿಯತ್ತು

    ಬೆಂಗಳೂರು: ಸಿಲಿಕಾನ್ ಸಿಟಿ ಕಸದ ನಗರಿ ಅಂತ ಈಗಾಗಲೇ ಜಗಜ್ಜಾಹೀರಾಗಿದೆ. ಬಿಬಿಸಿಯೇ ಬೆಂಗಳೂರು ನಗರವನ್ನು ಕೊಳಕು ನಗರ ಅಂತಲೂ ಘೋಷಿಸಿ ಬಿಟ್ಟಿದೆ. ಈ ಹಣೆಪಟ್ಟಿಯಿಂದ ಹೊರ ಬರೋದಕ್ಕೆ ಜಾಹೀರಾತಿಗಾಗಿ ಬಿಬಿಎಂಪಿ ಕೋಟಿಗಟ್ಟಲೇ ಹಣ ಕೂಡ ಖರ್ಚು ಮಾಡುತ್ತಿದೆ. ಹಸಿ ಕಸ, ಒಣ ಕಸ ಅಂತ ವಿಂಗಡಣೆ ಮಾಡದಿದ್ರೆ, ನಿಮ್ಮ ಮನೆ ಕಸ ಸ್ವೀಕರಿಸಲ್ಲ ಅಂತ ಬಿಬಿಎಂಪಿ ಫರ್ಮಾನು ಕೂಡ ಹೊರಡಿಸಿದೆ. ಬೆಳಗ್ಗೆ ಹೊತ್ತು ಮನೆ ಮುಂದೆ ಬರೋ ಪೌರ ಕಾರ್ಮಿಕರು ಕಸ ವಿಂಗಡಣೆ ಮಾಡದಿದ್ದರೆ ನಾವು ಸ್ವೀಕರಿಸಲ್ಲ ಅಂತ ಬಿಸಾಡಿ ಹೊರಡುತ್ತಾರೆ. ಆದ್ರೆ, ಇದೀಗ ಈ ರೂಲ್ಸ್ ಗಳನ್ನ ಜನಪ್ರತಿನಿಧಿಗಳು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ.


    ಜನಪ್ರತಿನಿಧಿಗಳ ಮನೆಗಳಲ್ಲಿ ಕಸ ವಿಲೇವಾರಿ ಆಗುತ್ತಿದ್ಯಾ? ಅಥವಾ ಇಲ್ವಾ….? ಅಂತ ಪಬ್ಲಿಕ್ ಟಿವಿ ಬೆಳಗ್ಗೆ ಪರೀಕ್ಷೆ ನಡೆಸಲು ಹೊರಟಿತ್ತು. ರಾಜ್ಯದ ಅಧಿಪತಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಪ್ರಮುಖರ ಮನೆ ಬಳಿ ಸ್ಟಿಂಗ್ ಆಪರೇಷನ್ ಕೂಡ ನಡೆಸಿತ್ತು. ಈ ವೇಳೆ ಅಲ್ಲಿ ಕಂಡು ಬಂದ ದೃಶ್ಯ ನಿಜಕ್ಕೂ ಮುಜುಗರ ತರಿಸುವಂತಿತ್ತು.

    ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಜೆ.ಪಿ. ನಗರ ನಿವಾಸದ ಬಳಿಗೆ ಬೆಳಗ್ಗೆ 6 ಗಂಟೆ ಸುಮಾರಿಗೆ ತೆರಳಿದಾಗ ಅಲ್ಲಿಯ ದೃಶ್ಯ ಕಂಡು ನಿಜಕ್ಕೂ ಆಘಾತವುಂಟಾಗಿದೆ. ಯಾಕಂದ್ರೆ, ನಾಡಿನ ಅಧಿಪತಿ ನಿವಾಸದಲ್ಲೇ ಕಸ ವಿಲೇವಾರಿ ಆಗುತ್ತಿಲ್ಲ.
    ಪಬ್ಲಿಕ್ ಪ್ರತಿನಿಧಿ – ನೀವೇ ಮಾಡಿಕೊಳ್ಳಬೇಕಾ?
    ಪೌರ ಕಾರ್ಮಿಕ – ಹು…..
    ಪ್ರತಿನಿಧಿ – ಅವರು ಮಾಡಿಕೊಡಲ್ವಾ…?
    ಪೌರ ಕಾರ್ಮಿಕ – ಇಲ್ಲ. ಅವರ್ಯಾಕೆ ಮಾಡಿಕೊಡಬೇಕು?
    ಪ್ರತಿನಿಧಿ – ಹಸಿ, ಒಣ ಕಸ ಬೇರೆ ಮಾಡಿಕೊಡಬೇಕು ಅಲ್ವಾ…?
    ಪೌರ ಕಾರ್ಮಿಕ – ನಮ್ ಕೆಲಸ ಅದು ಮಾಡ್ತೀವಿ.

    ಮುಖ್ಯಮಂತ್ರಿಗಳ ಮನೆಯಲ್ಲಿ ಕಸ ವಿಲೇವಾರಿ ಆಗುತ್ತಿಲ್ಲ. ಬೆಂಗಳೂರು ಉಸ್ತುವಾರಿ ಸಚಿವರು ಅಂತ ಅನಿಸಿಕೊಂಡ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮನೆಯಲ್ಲಿ ಏನಾದರೂ ಕಸ ವಿಲೇವಾರಿ ಆಗುತ್ತಿದ್ಯಾ…? ಅಂತ ನೋಡಲು ಹೊರಟ್ರೆ ಅಲ್ಲೂ ಕಸ ವಿಲೇವಾರಿ ಆಗುತ್ತಿರಲಿಲ್ಲ.

    ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ನಗರಾಭಿವೃದ್ಧಿ ಸಚಿವರಾದ ಬೆರಳೆಣಿಕೆಯ ದಿನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಸಿ ಕಸ ಬೇರ್ಪಡಿಸಿ ಎಂದು ಸಂದೇಶ ನೀಡಿದ್ರು. ಆದ್ರೆ ಅವರು ವಾಸವಿರೋ ಸದಾಶಿವನಗರ ಮನೆಯಲ್ಲೇ ಕಸ ವಿಂಗಡನೆಯೇ ಆಗುತ್ತಿಲ್ಲ. ಕಡೆ ಪಕ್ಷ ಕಸವನ್ನ ತಂದು ಪೌರಕಾರ್ಮಿಕರ ಕೈಗೂ ಕೊಡಲ್ಲ. ಬದಲಾಗಿ ಅವರ ಮನೆ ಡೆಸ್ಟ್ ಬಿನ್ ತಂದು ಕಸ ಸುರಿದುಕೊಂಡು ಹೋಗ್ತಾರೆ.
    ಪ್ರತಿನಿಧಿ – ಎಲ್ಲ ರಾಜಕಾರಣಿಗಳು ಇರೋದು ಇಲ್ಲೇ ತಾನೇ?
    ಪೌರಕಾರ್ಮಿಕ – ಹೌದು.
    ಪ್ರತಿನಿಧಿ – ಕಸ ಬೇರ್ಪಡಿಸಿ ಕೊಡ್ತಾರಾ…?
    ಪೌರಕಾರ್ಮಿಕ – ಇಲ್ಲ
    ಪ್ರತಿನಿಧಿ – ಯಾಕೆ ಅಂತ ಕೇಳೋದು…?
    ಪೌರಕಾರ್ಮಿಕ – ನಿಮ್ ಕೆಲಸನೇ ಅದು. ಮಾಡಿದರೆ ಮಾಡಿ ಇಲ್ಲ ಬಿಡಿ ಅಂತಾರೆ. ನಮ್ ಕಷ್ಟ ಕೇಳೋರು ಯಾರು?
    ಪ್ರತಿನಿಧಿ – ಡಿಸಿಎಂ ಮನೆಯಲ್ಲಿ ಕಸ ಬೇರ್ಪಡಿಸ್ತಾರಾ?
    ಪೌರಕಾರ್ಮಿಕ – ಅವರೂ ಅಷ್ಟೇ.. ಕಸ ವಿಂಗಡಿಸಿಲ್ಲ

    ಸಿಎಂ, ಡಿಸಿಎಂ ಆಯ್ತು. ಬಳಿಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಏನಾಗ್ತಿದೆ ಅಂತ ಪದ್ಮನಾಭನಗರ ಕಡೆ ಹೊರಟ್ರೆ ಅಲ್ಲೂ ಕಂಡುಬಂದಿದ್ದು ಮಾಮೂಲಿ ಚಿತ್ರಣವೇ.
    ಪ್ರತಿನಿಧಿ – ದೇವೇಗೌಡರ ಕಸ ವಿಂಗಡಿಸಿ ಕೊಡ್ತಾರಾ ?
    ಪೌರಕಾರ್ಮಿಕ – ಯಾರ್ ಮನೆಯವ್ರು…?
    ಪ್ರತಿನಿಧಿ – ಗೌಡರ ಮನೆಯವ್ರು…?
    ಪೌರಕಾರ್ಮಿಕ – ಇಲ್ಲ. ಒಬ್ರು ಮಾಡ್ತಾರೆ. ಇನ್ನೊಬ್ಬರು ಮಾಡಲ್ಲ.

    ಗೌಡರ ನಿವಾಸದಲ್ಲೂ ಕಸ ವಿಲೇವಾರಿ ಆಗುತ್ತಿಲ್ಲ. ಬಳಿಕ ಅಲ್ಲಿಂದ ನೇರವಾಗಿ ಜಯಮಾಲಾ ಮನೆ ನೋಡಿ ಬಿಡೋಣ ಅಂತ ಡಾಲರ್ಸ್ ಕಾಲೋನಿಯತ್ತ ಹೊರಟ್ವಿ. ಸಚಿವೆ ಆಗಿರುವುದಕ್ಕಿಂತ ಗೃಹಿಣಿ ಆಗಿರೋದ್ರಿಂದ ನಮ್ಮ ನಿರೀಕ್ಷೆಗಳೂ ಹೆಚ್ಚಿದ್ವು. ಆದ್ರೆ ಆಗಿದ್ದೇ ಬೇರೆ. ಏನಂದ್ರೆ ಸಚಿವೆಯ ಮನೆಯಲ್ಲೂ ಕಸ ವಿಂಗಡಣೆಯೇ ಇಲ್ಲ.
    ಪ್ರತಿನಿಧಿ – ಮಿನಿಸ್ಟರ್ ಮನೆಯಲ್ಲಿ ಕಸ ವಿಂಗಡಿಸಲ್ವಂತೆ ?
    ಪೌರಕಾರ್ಮಿಕ – ಹೌದು. ಇಲ್ಲಿ ಒಬ್ಬರ ಮನೆ ಇದೆ .. ಜಯಮಾಲಾ ಮನೆ, ವಿಂಗಡಿಸ್ತಾರೆ.. ಆದ್ರೆ ಮಿಕ್ಸ್ ಮಾಡಿ ಹಾಕುತ್ತಾರೆ. ನಾವೇ ಕ್ಲೀನ್ ಮಾಡಬೇಕು.
    ಪ್ರತಿನಿಧಿ – ಹು..
    ಪೌರಕಾರ್ಮಿಕ – ಮೇಡಂ ನೋಡಿದ್ರೆ ಬೈಯ್ತಾರೆ.. ಆದ್ರೆ ಇದೆಲ್ಲಾ ಕೆಲಸಗಾರರ ಅವಾಂತರ

    ಪೌರಕಾರ್ಮಿಕ- ಯಾಕೆ ಕಸ ಸಪರೇಟ್ ಮಾಡಿ ಕೊಡ್ತಾ ಇಲ್ಲ
    ಮಂತ್ರಿ ಮನೆ ಕೆಲಸದಾಕೆ – ಗೊತ್ತಿಲ್ಲ ನನಗೆ.
    ಪ್ರತಿನಿಧಿ – ಯಾಕೆ ಮಾಡ್ತಾ ಇಲ್ಲ?
    ಮಂತ್ರಿ ಮನೆ ಕೆಲಸದಾಕೆ – ನನಗೆ ಗೊತ್ತಿಲ್ಲ, ಕಸ ಗುಡಿಸೋರು ಬೇರೆ? ಕ್ಲೀನ್ ಮಾಡೋರು ಬೇರೆ .. ಇನ್ನೊಬ್ರು ಕೇಳಿ ಗೊತ್ತಿಲ್ಲ..
    ಪೌರಕಾರ್ಮಿಕ – ಅವತ್ತೇ ಹಿಗ್ ಮಾಡ್ ಬಾರದು ಅಂತ ಹೇಳಿಲ್ವಾ…?
    ಪೌರಕಾರ್ಮಿಕ – ಬಕೆಟ್ ನಲ್ಲಿ ಪ್ಲಾಸ್ಟಿಕ್ , ಬಾಟೆಲ್ ಎಲ್ಲ ಸರ್ಪೆಟ್ ಮಾಡಿ, ಇಲ್ಲವಾದ್ರೆ ಮೇಡಂಗೆ ಹೇಳ್ತಿವಿ.. ಎಲ್ಲರೂ ಕಂಪ್ಲೇಂಟ್ ಮಾಡ್ತಾರೆ
    ಮಂತ್ರಿ ಮನೆ ಕೆಲಸದಾಕೆ – ಆಯ್ತು ಇನ್ಮುಂದೆ ಮಾಡ್ತಿನಿ

    ಆಡಳಿತ ಮೈತ್ರಿ ಪಕ್ಷದ ನಾಯಕರನ್ನ ಕಥೆ ಈ ರೀತಿಯಾಗಿತ್ತು. ಈಗ ಇದೆಲ್ಲ ಸರಿನಾ ಅಂತ ಕೇಳಬೇಕಾದ ವಿರೋಧ ಪಕ್ಷದ ನಾಯಕರ ಮನೆ ಬಳೀ ಹೋದ್ರೆ ಅವರದ್ದು ಇದೇ ಕಥೆ. ಡಾಲರ್ಸ್ ಕಾಲೋನಿಯಲ್ಲಿರೊ ಬಿ.ಎಸ್ ಯಡಿಯೂರಪ್ಪ ನಿವಾಸದಲ್ಲೂ ಕಸ ವಿಂಗಡನೆ ಮಾಡಲ್ಲ.
    ಪೌರಕಾರ್ಮಿಕ – ಎರಡು ಮನೆ ಕ್ಲಿನ್ ಮಾಡಿ ಕೊಡ್ತಾರೆ.. ಉಳಿದ ಇಬ್ರು ಹಾಗೇ ಕೊಡ್ತಾರೆ
    ಪ್ರತಿನಿಧಿ – ಯಡಿಯೂರಪ್ಪ ಪಿಎ ಗಾದ್ರೂ ಹೇಳಬೇಕಿತ್ತು.
    ಪೌರಕಾರ್ಮಿಕ – ಅವರೆಲ್ಲ ನಮ್ ಹತ್ರ ಎಲ್ಲಿ ಮಾತಾಡ್ತಾರೆ. ಬರ್ತಾರೆ. ಹೋಗ್ತಾರೆ.
    ಪ್ರತಿನಿಧಿ – ಯಾರಿಗಾದ್ರೂ ಹೇಳಿದ್ರಾ?
    ಪೌರಕಾರ್ಮಿಕ – ಯಾರಿಗೂ ಹೇಳಿಲ್ಲ.. ನಾವೇ ಮಾಡಿ ಕೊಳ್ತಿವಿ

    ಒಟ್ಟಿನಲ್ಲಿ ಬಾಯಿಯಲ್ಲಿ ಹೇಳೋದು ಸುಲಭ. ಮಾಡೊದು ಕಷ್ಟ. ಶ್ರೀಸಾಮಾನ್ಯರು ಕಸ ವಿಂಗಡಣೆ ಮಾಡದಿದ್ದರೆ ದಂಡ ವಿಧಿಸೋ ಬಿಬಿಎಂಪಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಗ್ಗೆ ಕೇಳಿದ್ರೆ, ಕೊಡೋ ಉತ್ತರನೇ ಬೇರೆಯದ್ದಾಗಿರುತ್ತದೆ.

    https://www.youtube.com/watch?v=bJyc-Nl-fEI

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 99ರ ಯುವಕನ ಮದ್ದಳೆಗೆ ಜಯಮಾಲಾ ಫಿದಾ!

    99ರ ಯುವಕನ ಮದ್ದಳೆಗೆ ಜಯಮಾಲಾ ಫಿದಾ!

    ಉಡುಪಿ: ಏರು ಮದ್ದಳೆಯ ಮಾಂತ್ರಿಕನಿಗೆ ವಯಸ್ಸು 99 ಆದ್ರೂ 19 ರ ಉತ್ಸಾಹ. ಮದ್ದಳೆಯ ನಾದಕ್ಕೆ ಮಂತ್ರಮುಗ್ಧರಾದ್ರು ನಟಿ ಜಯಮಾಲಾ. ವಿದೇಶಕ್ಕೆ ಯಕ್ಷಗಾನ ಕೊಂಡೊಯ್ದ ಗೋಪಾಲರಾಯರಿಗೆ ಮನೆಯಲ್ಲೇ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೋಟ ಶಿವರಾಮ ಕಾರಂತ ರ ಒಡನಾಡಿ, ಯಕ್ಷಗಾನವನ್ನು ಪಾಶ್ಚಾತ್ಯ ದೇಶಗಳಿಗೆ ಯಕ್ಷಗಾನವನ್ನು ಕೊಂಡೊಯ್ದ ಹಿರಿಯಡ್ಕ ಗೋಪಾಲರಾಯರಿಗೆ ಈ ಬಾರಿ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ. ಅನಾರೋಗ್ಯದಿಂದಿರುವ ಗೋಪಾಲರಾಯರು ಬೆಂಗಳೂರಿಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪಡೆದಿರಲಿಲ್ಲ. ಹಿರಿಯಡ್ಕದಲ್ಲಿರುವ ತನ್ನ ಮನೆಗೆ ಬಂದು ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಚಿವೆ ಜಯಮಾಲ ಮುಂದೆ ಕೆಲನಿಮಿಷಗಳ ಕಾಲ ಮದ್ದಳೆ ನುಡಿಸಿ ಮಂತ್ರಮುಗ್ದಗೊಳಿಸಿದರು. ತಾನೇ ಅನ್ವೇಷಿಸಿದ ಏರು ಮದ್ದಳೆಯಿಂದ ನಾದ ಹೊರಹೊಮ್ಮಿಸುತ್ತಿದ್ದಂತೆ, ಜಯಮಾಲಾ ಅಲ್ಲೇ ಕುಳಿತುಬಿಟ್ಟರು.

    ಹಿರಿಯ ತಾಳಮದ್ದಳೆ ಕಲಾವಿದ, ಯಕ್ಷಗಾನದ ಇತಿಹಾಸದಲ್ಲಿ ಉಡುಪಿಯ ಹಿರಿಯಡ್ಕ ಗೋಪಾಲ ರಾಯರದ್ದು ದೊಡ್ಡ ಹೆಸರು. ಮೊದಲಬಾರಿಗೆ ಯಕ್ಷಗಾನವನ್ನು ವಿದೇಶಕ್ಕೆ ತೆರಳಿ ಕಲಿಸಿ ಬಂದ ಗೋಪಾಲರಾಯರು ಮೇರು ಕಲಾವಿದ. ಇಳಿವಯಸ್ಸಿನಲ್ಲೂ ಅವರ ಯಕ್ಷ ಉತ್ಸಾಹ ಕಳೆದುಕೊಂಡಿಲ್ಲ. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಜಯಮಾಲ ಚಪ್ಪಾಳೆ ಹೊಡೆದು ತಾಳ ಹಾಕುತ್ತಿದ್ದಂತೆ 99 ರ ಹರೆಯದ ಗೋಪಾಲರಾಯರು ನಿರಂತರ ಮದ್ದಳೆ ನುಡಿಸಿ ಅಚ್ಚರಿಗೊಳಿಸಿದರು.

    ಅಮೇರಿಕಾದ ರಂಗತಜ್ಞೆ ಮಾರ್ಥಾ ಆಸ್ಟಿನ್ ಸೇರಿದಂತೆ ಹಲವಾರು ಕಲಾವಿದರಿಗೆ ಗೋಪಾಲರಾಯರು ಮಹಾಗುರುಗಳಾಗಿದ್ದಾರೆ. ಸಾವಿರಾರು ಮಂದಿ ಮದ್ದಳೆ ಕಲಿತು ಜೀವನ ರೂಪಿಸಿಕೊಂಡವರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಹಸಸಿಂಹನ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು – ಡಾ. ಜಯಮಾಲಾ

    ಸಾಹಸಸಿಂಹನ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು – ಡಾ. ಜಯಮಾಲಾ

    ಉಡುಪಿ: ಸಾಹಸಸಿಂಹ ವಿಷ್ಣುವರ್ಧನ್ ಸಮಾಧಿ ವಿಚಾರದಲ್ಲಿ ನಾವು ಅಸಹಾಯಕರು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಒಪ್ಪಿಕೊಂಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಿ ವಿಷ್ಣುವರ್ಧನ್ ಅವರ ಬೇಸರ ಸಹಜವಾದದ್ದು. ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿ ಒಂಬತ್ತು ವರ್ಷಗಳಾಗಿದೆ. ಭಾರತಿ ಅವರ ಕುಟುಂಬಕ್ಕೆ ನಾನು ಬೆಲೆ ಕೊಡುತ್ತೇನೆ. ಮೈಸೂರಿನಲ್ಲಿ ಸ್ಮಾರಕ ಆಗಬೇಕೆಂದು ಭಾರತಿ ಕೇಳುತ್ತಿದ್ದಾರೆ. ಏಕೆಂದರೆ ಮೈಸೂರು ಅಂದರೆ ವಿಷ್ಣುವರ್ಧನ್ ಅವರಿಗೆ ಪಂಚ ಪ್ರಾಣ. ಅಲ್ಲದೇ ವಿಷ್ಣು ಅವರ ಆಸೆ ಏನು ಎಂಬುದು ಅವರ ಕುಟುಂಬಕ್ಕೆ ಮಾತ್ರ ಗೊತ್ತಿರುತ್ತದೆ. ಅಲ್ಲದೇ ತನ್ನ ಆಸೆ ಏನು ಎಂಬುದನ್ನು ವಿಷ್ಣುವರ್ಧನ್ ಬದುಕಿದ್ದಾಗ ಕುಟುಂಬದವರಲ್ಲಿ ಹೇಳಿರುತ್ತಾರೆ ಎಂದು ಹೇಳಿದರು.

    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸಹ ಸಿನೆಮಾ ರಂಗದವರೇ. ಹೀಗಾಗಿ ವಿಷ್ಣು ಸ್ಮಾರಕ ವಿಚಾರಕ್ಕೆ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂಧಪಟ್ಟ ಸಣ್ಣ ತಕರಾರು ಇದೆ. ಗುರುವಾರ ಮುನಿರತ್ನ ಹಾಗೂ ಮಂಜು ಚರ್ಚೆ ನಡೆಸಿ, ಸಂಧಾನ ಮಾಡಿದ್ದಾರೆ. ಈ ಬಗ್ಗೆ ಖುದ್ದು ಪತ್ರದ ಮುಖಾಂತರ ಭಾರತಿ ಅವರಿಗೂ ವಿಚಾರ ತಿಳಿಸಿದ್ದಾರೆ ಎಂದರು.

    ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ಎಲ್ಲಿ ಸ್ಮಾರಕ ಮಾಡಲು ಹೋದರೂ, ಒಂದು ವಿವಾದ ಆಗುತ್ತಿದೆ. ರಾಜ್ಯದಲ್ಲಿ ಯಾಕೆ ಹೀಗಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಏನೇ ಆದರೂ ನಾವೆಲ್ಲರೂ ಭಾರತಿ ವಿಷ್ಣುವರ್ಧನ್ ಅವರ ಪರ ನಿಲ್ಲುತ್ತೇವೆಂದು ತಿಳಿಸಿದರು.

    ಅಂಬರಿಶ್ ಒಬ್ಬ ಮಹಾನ್ ನಾಯಕ. ನಿಜವಾದ ನಾಯಕ, ಜನರ ಹೃದಯದಲ್ಲಿ ವಾಸ ಮಾಡಿದ ನಟ ಅಂಬರೀಷ್ ಸ್ಮಾರಕಕ್ಕೆ ಯಾವುದೇ ತೊಂದರೆ ಇಲ್ಲ ಎಂದರು.

    ಇದೇ ವೇಳೆ ಸಚಿವ ಸ್ಥಾನ ಆಕಾಂಕ್ಷಿ ಶಾಸಕರು ಮುಂಬೈ ಗೆ ತೆರಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೋಗೋರು ಹೋಗ್ತಾ ಇರ್ತಾರೆ ಸಾರ್, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭದ್ರವಾಗಿದೆ. ಅಸಮಾಧಾನವೆಂಬುದು ಎಲ್ಲಾ ಸುಳ್ಳು ಇದೊಂದು ಅಪಪ್ರಚಾರ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಡಿಕೆ ಶಿವಕುಮಾರ್ ಶ್ರೀ ಕೃಷ್ಣನಿದ್ದಂತೆ: ಜಯಮಾಲಾ

    ಡಿಕೆ ಶಿವಕುಮಾರ್ ಶ್ರೀ ಕೃಷ್ಣನಿದ್ದಂತೆ: ಜಯಮಾಲಾ

    ಬೆಂಗಳೂರು: ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಸಾಕ್ಷಾತ್ ಶ್ರೀ ಕೃಷ್ಣನಂತಿದ್ದಾರೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಾಮಾಲ ಹೇಳಿದ್ದಾರೆ.

    ರಾಜ್ಯ ಸರ್ಕಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಸಂಧಾನ ಬಂದರೂ, ಹಗಲು ರಾತ್ರಿ ಎನ್ನದೇ ಡಿ.ಕೆ.ಶಿವಕುಮಾರ್ ಸಿದ್ಧರಿರುತ್ತಾರೆ. ಅಲ್ಲದೇ ಖುದ್ದು ಮಧ್ಯಸ್ಥಿಕೆ ವಹಿಸುವ ಮೂಲಕ ಕಾರ್ಯ ನಿರ್ವಹಿಸುತ್ತಾರೆ. ಅಚ್ಚುಕಟ್ಟಾಗಿ ಯಾವುದೇ ಕೆಲಸವನ್ನು ಶಿಸ್ತಿನಿಂದ ನಿರ್ವಹಿಸುತ್ತಾರೆ. ಹೀಗಾಗಿ ಅವರು ಸಾಕ್ಷಾತ್ ಶ್ರೀ ಕೃಷ್ಣ ಎಂದು ವೇದಿಕೆ ಮೇಲೆ ಡಿಕೆಶಿಯವರನ್ನು ಹಾಡಿ ಹೊಗಳಿದ್ದಾರೆ.

    ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 63 ಸಾಧಕರಿಗೆ ರಾಜ್ಯ ಸರ್ಕಾರದ ವತಿಯಿಂದ ಗೌರವಿಸುತ್ತಿದೆ. ಸಾಧಕರಿಗೆ 24 ಗ್ರಾಂ ಚಿನ್ನದ ಪದಕ ಹಾಗೂ 1 ಲಕ್ಷ ರೂಪಾಯಿ ನಗದು ಬಹುಮಾನವನ್ನು ನೀಡಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಗೌರವಿಸಿದ್ದಾರೆ.

    ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಹಾಪೌರರಾದ ಗಂಗಾಬಿಕೆ ಮಲ್ಲಿಕಾರ್ಜುನ್, ಸಚಿವರಾದ ಡಿಕೆ ಶಿವಕುಮಾರ್, ಜಮೀರ್ ಅಹಮ್ಮದ್ ಹಾಗೂ ವಿಧಾನಪರಿಷತ್ ಸದಸ್ಯರು ಶರವಣ ಸೇರಿದಂತೆ ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನಿಮಗೆ ಗೊತ್ತಿಲ್ಲದ ಅಂಬಿ ರಹಸ್ಯ ಬಿಚ್ಚಿಟ್ಟ ಸಚಿವೆ ಜಯಮಾಲಾ

    ನಿಮಗೆ ಗೊತ್ತಿಲ್ಲದ ಅಂಬಿ ರಹಸ್ಯ ಬಿಚ್ಚಿಟ್ಟ ಸಚಿವೆ ಜಯಮಾಲಾ

    ಬೆಂಗಳೂರು: ಇಂದು ನಟ, ರಾಜಕಾರಣಿ ಅಂಬರೀಶ್ ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದ್ರೆ ಅಂಬರೀಶ್ ಜೊತೆಗಿನ ನೆನಪುಗಳು ಅಭಿಮಾನಿಗಳನ್ನು ಕಾಡುತ್ತಿವೆ. ಸಚಿವೆ ಜಯಮಾಲಾ ಅವರು ಅಂಬರೀಶ್ ಜೊತೆಗಿನ ತಮ್ಮ ಸ್ನೇಹದ ದಿನಗಳನ್ನು ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದಾರೆ.

    ಅಂಬರೀಶ್ ಅವಾಜ್: ಒಂದು ಸಾರಿ ನಾನು ಅಂಬರೀಶ್ ಜೊತೆ ಮಂಡ್ಯಗೆ ಹೋದಾಗ ಅಭಿಮಾನಿಗಳು ನನ್ನನ್ನು ಕಾರಿನಿಂದ ವೇದಿಕೆವರೆಗೂ ಎತ್ತಿಕೊಂಡು ಹೋದರು. ಈ ವೇಳೆ ಏ, ನನ್ನ ಮರ್ಯಾದೆ ತೆಗ್ತೀರಾ? ವಾಪಾಸ್ಸು ಕರೆದುಕೊಂಡು ಬರ್ರೋ ಅಂತಾ ಒಂದೇ ಒಂದು ಅವಾಜ್ ಹಾಕಿದರು. ಅಂಬರೀಶ್ ಅವರಿಗೆ ಹೆದರಿದ ಯುವಕರು ಹಾಗೆ ನನ್ನನ್ನು ಅವರ ಪಕ್ಕ ತಂದು ನಿಲ್ಲಿಸಿದರು. ಇಂದಿಗೂ ನಾನು ಮಂಡ್ಯ ಹೋದರೆ ಆ ಘಟನೆ ನೆನಪಾಗುತ್ತದೆ. ನನ್ನನ್ನು ತಂದು ನಿಲ್ಲಿಸಿದಾಗ ಎಲ್ಲರಿಗೂ ತಮ್ಮ ಪ್ರೀತಿಯಿಂದ ಬೈದರು ಎಂದು ಜಯಮಾಲಾ ಹಳೆಯದನ್ನು ನೆನಪು ಮಾಡಿಕೊಂಡರು.

    ಅಂಬರೀಶ್ ತುಂಬಾನೇ ಪುಕ್ಕಲರು. ಅವರು ನಿಂತ ಸ್ಥಳದಲ್ಲಿ ಹಾವು ಅಥವಾ ಚೇಳು ತಂದರೆ ಅಲ್ಲಿ ಒಂದು ಕ್ಷಣ ಸಹ ನಿಲ್ಲಲ್ಲ. ಚಿತ್ರೀಕರಣದಲ್ಲಿ ಹುಲಿ ಮತ್ತು ಆನೆ ತಂದರು ಹೆದರಿಕೊಳ್ಳುತ್ತಿರಲಿಲ್ಲ. ಕೆಲವೊಮ್ಮೆ ಇಂಜೆಕ್ಷನ್ ಮಾಡಿಸಿಕೊಳ್ಳಲು ಅಂತಾ ಅಂಬರೀಶ್ ಆಸ್ಪತ್ರೆಯಿಂದ ಹೊರ ಬಂದಿದ್ದನ್ನು ನಾವು ನೋಡಿದ್ದೇವೆ. ಇಂಜೆಕ್ಷನ್ ಅಥವಾ ಒಂದು ಸಣ್ಣ ಗಾಯವಾದರೂ ಮಕ್ಕಳ ರೀತಿಯಲ್ಲಿ ಹೆದರಿಕೊಳ್ಳುತ್ತಿದ್ದರು ಎಂದು ಹೇಳಿ ಜಯಮಾಲಾ ನಕ್ಕರು.

    ನಗುವನ್ನು ಹಂಚುವ ವ್ಯಕ್ತಿ: ಅಂಬರೀಶ್ ಇದ್ದಲ್ಲಿ ನಗೆ ಇರುತ್ತೆ. ಅಂಬರೀಶ್ ಇದ್ದರೆ ಇಡೀ ಸೆಟ್ ನಗುವಂತೆ ಮಾಡುತ್ತಿದ್ದರು. ಸೆಟ್ ನಲ್ಲಿ ಅಂಬರೀಶ್ ಸುಮ್ಮನೆ ಕುಳಿತ್ರೆ ಟೀ ಕೊಡುವ ಹುಡುಗ ಸಹ ಯಾಕಣ್ಣ ಹೀಗಿದ್ದೀಯಾ ಎಂದು ಕೇಳುವಷ್ಟು ಎಲ್ಲರೊಂದಿಗೂ ಆತ್ಮೀಯವಾಗಿ ಇರುತ್ತಿದ್ದರು. ಅಂಬರೀಶ್ ಸೆನ್ಸ್ ಆಫ್ ಹ್ಯೂಮರ್ ಇದ್ದರೂ, ಅವರಿಗೆ ಎಲ್ಲರಿಗೂ ನಗುವನ್ನು ಹಂಚುವ ವ್ಯಕ್ತಿಯಾಗಿದ್ದರು ಎಂದು ಹೇಳುತ್ತಾ ಜಯಮಾಲಾ ಒಂದು ಕ್ಷಣ ಭಾವುಕರಾದರು.

    ಸುಮಲತಾ ಗರ್ಭಿಣಿಯಾಗಿದ್ದಾಗ ಅಂಬರೀಶ್ ಪತ್ನಿಯ ಹೊಟ್ಟೆಯನ್ನು ಮುಟ್ಟಿ ಮಗುವಿನ ಚಲನವಲನವನ್ನ ಫೀಲ್ ಮಾಡುತ್ತಿದ್ದರು. ಅಷ್ಟು ಸೀರಿಯಸ್ ಆಗಿದ್ದ ವ್ಯಕ್ತಿಯನ್ನು ಆ ಮಗು ಭಾವನಾತ್ಮಕವಾಗಿ ಬದಲಾವಣೆ ಮಾಡಿತ್ತು. ಶೂಟಿಂಗ್ ಬಿಡುವಿನ ವೇಳೆ ಆ ಎಲ್ಲ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು.

    ದೇವರು ಕೊಟ್ಟ ವ್ಯಕ್ತಿ ಅಂಬಿ: ಚುನಾವಣೆಯಲ್ಲಿ ನಾನು ಅಂಬರೀಶ್ ಅವರ ಜೊತೆ ಪ್ರಚಾರಕ್ಕೆ ಹೋದಾಗ, ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಮ್ಮು ಜಾಸ್ತಿಯಾಗಿತ್ತು. ಜನರಿಗೆ ನಮಗೆ ವೋಟ್ ಹಾಕಿ ಅಂತ ಅಂಬರೀಶ್ ಕೇಳುತ್ತಿದ್ದರೆ, ನಿಮಗೆ ಆರೋಗ್ಯ ಸರಿ ಇಲ್ಲ. ಹೊರಗಡೆ ಬಂದಿದ್ದು ಯಾಕೆ? ನಾವೇ ನಿಮಗೆ ವೋಟ್ ಹಾಕೋದು. ಮನೆಗೆ ಹೋಗಿ ರೆಸ್ಟ್ ಮಾಡಿ ಅಂತಾ ಬೈದು ಕಳುಹಿಸುತ್ತಿದ್ದರು. ಜನರು ಮಾತು ಕೇಳಿದಾಗ ದೇವರು ಕೊಟ್ಟು ಹುಟ್ಟಿರುವ ವ್ಯಕ್ತಿ ಅಂಬರೀಶ್ ಅಂತಾ ನನಗೆ ಗೊತ್ತಾಯಿತು. ನಿನಗೆ ನಾನು ವೋಟ್ ಹಾಕ್ತೀನಿ, ಕೇಳೋದಕ್ಕೆ ಬರಬೇಡ. ಈ ಎಲ್ಲ ಮಾತುಗಳನ್ನು ಕೇಳಿದರೆ ಅಂಬರೀಶ್ ಜನರ ಪ್ರೀತಿಯನ್ನು ಸಂಪತ್ತನ್ನಾಗಿ ಮಾಡಿಕೊಂಡಿದ್ದರು ಎಂಬುವುದು ಎಲ್ಲರಿಗೂ ಅರ್ಥವಾಗುತ್ತಿತ್ತು ಎಂದು ಹೇಳುತ್ತಾ ಜಯಮಾಲಾ ಕಣ್ಣಂಚಲಿ ನೀರು ಬಂತು.

    https://www.youtube.com/watch?v=vpV25SEDROE

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಶಬರಿಮಲೆ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಜಯಮಾಲಾ

    ಶಬರಿಮಲೆ ವಿಚಾರವನ್ನು ದೇವರೇ ನೋಡಿಕೊಳ್ಳಲಿ: ಜಯಮಾಲಾ

    ಉಡುಪಿ: ಶಬರಿಮಲೆ ಮಹಿಳೆಯರ ಪ್ರವೇಶದ ವಿಚಾರವನ್ನು ದೇವರೇ ನೋಡಿಕೊಳ್ಳಲಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃ ತಿ ಇಲಾಖೆ ಸಚಿವೆ ಜಯಮಾಲಾ ಹೇಳಿದ್ದಾರೆ.

    ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರೂ ಆತ್ಮಮುಟ್ಟಿಕೊಮಡು ವಿಚಾರ ಮಾಡಲಿ. ಈ ದೇಶ ಎಲ್ಲವನ್ನೂ ಗಮನಿಸುತ್ತಿದೆ. ಅರ್ಧ ಆಕಾಶ, ಅರ್ಧ ಭೂಮಿ ಇದ್ದಂತೆ. ದೇಶದಲ್ಲಿ ಅರ್ಧದಷ್ಟು ಹೆಣ್ಣುಮಕ್ಕಳಿದ್ದಾರೆ. ದೇವರು ನನಗೆ ನಂಬಿಕೆ ಮತ್ತು ನನ್ನ ಬದುಕು. ದೇವರನ್ನೇ ಟಾರ್ಗೆಟ್ ಮಾಡುವವರ ಬಗ್ಗೆ ನಾನೂ ಏನೂ ಹೇಳಲ್ಲ. ನಮಗೆ ಜೀವನದ ಗೆರೆ ಹಾಕಿಕೊಟ್ಟದ್ದು ದೇವರ ನಂಬಿಕೆ. ಹೀಗಾಗಿ ದೇವಸ್ಥಾನವೇ ನನ್ನ ಉಸಿರು. ಅಲ್ಲದೇ ಶಬರಿಮಲೆ ವಿಚಾರದ ಪರ ಹಾಗೂ ವಿರೋಧದ ಬಗ್ಗೆ ಏನನ್ನೂ ಹೇಳಲ್ಲ. ಎಲ್ಲವನ್ನೂ ದೇವರೇ ನೋಡಿಕೊಳ್ಳುತ್ತಾನೆ. ಕೊನೆಗೆ ದೇವರೆ ಒಂದು ತೀರ್ಮಾನಕ್ಕೆ ಬರುತ್ತಾನೆಂದು ವಿಶ್ವಾಸ ವ್ಯಕ್ತಪಡಿಸಿದರು.

    ಇದೇ ವೇಳೆ ಸಿಎಂ ಕುಮಾರಸ್ವಾಮಿ ಹೇಳಿಕೆಯ ಪರ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆಯ ವಿರುದ್ಧ ಇರಲಿಲ್ಲ. ಅವರು ಹೋರಾಟ ಮಾಡಿದ ರೈರ ಮಹಿಳೆಗೆ ಅವಮಾನ ಮಾಡಿಲ್ಲ. ಆದರೆ ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಗೂಡಾರ್ಥ ಇಟ್ಟುಕೊಂಡು ಮಾತನಾಡಿಲ್ಲ. ಹೆಣ್ಣುಮಕ್ಕಳನ್ನು ತಾಯಿ ಎಂದೇ ಗೌರವದಿಂದ ಕರೆದಿದ್ದಾರೆಂದು ಹೇಳಿದರು.

    ಶಬರಿಮಲೆ ಜಯಾಮಲಾ ವಿವಾದ:
    ಹೆಸರಾಂತ ಜ್ಯೋತಿಷಿ ಪಿ. ಉಣ್ಣಿಕೃಷ್ಣನ್ ಪಣಿಕ್ಕರ್ ತಂಡವು ಶಬರಿಮಲೆ ದೇವಸ್ಥಾನದಲ್ಲಿ 2006ರ ಜೂನ್‍ನಲ್ಲಿ ನಾಲ್ಕು ದಿನಗಳ ವರೆಗೆ `ದೇವಪ್ರಶ್ನೆ’ ಕೇಳಿ, ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯೊಬ್ಬರು ಪ್ರವೇಶಿಸಿದ್ದರು ಎಂದು ಹೇಳಿತ್ತು. `ದೇವಪ್ರಶ್ನೆ’ ಬಳಿಕ ನಟಿ ಜಯಮಾಲಾ 1987ರಲ್ಲಿ ತಾವು ಈ ದೇವಸ್ಥಾನದ ಗರ್ಭಗುಡಿಯೊಳಗೆ ಪ್ರವೇಶಿಸಿದ್ದಾಗಿ ಹೇಳಿಕೊಂಡಿದ್ದರು. ಪಣಿಕ್ಕರ್ ಅವರಿಗೆ ಪ್ರಚಾರಗೊಳಿಸುವುದಕ್ಕಾಗಿ ಜಯಮಾಲಾ ದೇವಸ್ಥಾನ ಪ್ರವೇಶಿಸಿದ್ದಾರೆ ಎಂಬ ಆರೋಪಗಳು ಅಂದು ಕೇಳಿ ಬಂದಿದ್ದವು.

    ಜಯಮಾಲಾ ದೇವಸ್ಥಾನ ಪ್ರವೇಸಿಸುವ ಮೂಲಕ ರಾಜ್ಯದ ಜನರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ ಆರೋಪದ ಮೇಲೆ ಪೊಲೀಸರು ಪಣಿಕ್ಕರ್, ಅವರ ಸಹಾಯಕ ರಘುಪತಿ ಹಾಗೂ ನಟಿ ಜಯಮಾಲಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ವಜಾಗೊಳಿಸುವಂತೆ ಈ ಮೂವರು ಕೇರಳ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದು ಮುಗಿದ ಅಧ್ಯಾಯವಾಗಿದ್ದು, ಆರೋಪಿಗಳ ವಿರುದ್ಧ ಹೊರಿಸಲಾಗಿರುವ ಆರೋಪ ಕಾನೂನು ಬದ್ಧ ಎಲ್ಲ ಅರ್ಜಿಯನ್ನು ವಜಾಗೊಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv