Tag: Jatka Cut

  • ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿ

    ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದ್ದು, ಅದಕ್ಕೆ ಸಿದ್ದು, ಡಿಕೆಶಿ, ಹೆಚ್‍ಡಿಕೆ ನಾಯಕರು: ಪ್ರಶಾಂತ್ ಸಂಬರಗಿ

    ಬೆಂಗಳೂರು: ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದೆ. ಅದಕ್ಕೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಾಯಕರಾಗಿದ್ದಾರೆ ಎಂದು ಕಿಡಿಕಾರಿದರು.

    ಬೆಂಗಳೂರಿನಲ್ಲಿ ನಡೆಯುತ್ತಿರುವ ಹಲಾಲ್ ಮತು ಜಟ್ಕಾ ವಿಚಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಭಾರತದಲ್ಲಿ ಆಹಾರ ಸಂಸ್ಕøತಿ ಮೊದಲು ಇದ್ದಿದ್ದು ಜಟ್ಕಾ ಕಟ್. ಮಾಂಸವನ್ನು ಕತ್ತರಿಸಿ ಮಾಂಸವನ್ನು ತಿನ್ನುವುದು. ಈ ಬಗ್ಗೆ ಕ್ಷತ್ರೀಯರು ಯುದ್ಧದ ಕಾಲದಲ್ಲಿ ಮಹಾಭಾರತ, ರಾಮಾಯಣದಲ್ಲಿಯೂ ಉಲ್ಲೇಖವಾಗಿದೆ. ಅನೇಕ ರಾಜ-ಮಹಾರಾಜರೂ ಸಹ ಈ ರೀತಿಯ ಬೇಟೆಯಾಡುತ್ತಿದ್ದರು ಎಂದು ವಿವರಿಸಿದರು. ಇದನ್ನೂ ಓದಿ: ಹಲಾಲ್ ಕಟ್ ಮಾಂಸ ಖರೀದಿ ಉತ್ತೇಜಿಸಲು ಅಭಿಯಾನ: ದೇವನೂರ ಮಹಾದೇವ ನೇತೃತ್ವ

    ನಾನು ಕುಮಾರಸ್ವಾಮಿ ಅವರಿಗೆ ಚಾಲೆಂಜ್ ಮಾಡುತ್ತೇನೆ. ಅವರು ಕಾಲಭೈರವೇಶ್ವರನ ಮೇಲೆ ಹಣೆ ಮಾಡಿ ಅವರು ಎಲ್ಲಿಂದ ಆಹಾರ ತಂದಿದ್ದಾರೆ ಎಂದು ಹೇಳಲಿ ಎಂದು ಸವಾಲನ್ನು ಹಾಕಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕೂಸ್ಕರ ಅವರು ಹಲಾಲ್ ತೆಗೆದುಕೊಂಡು ಬಂದಿದ್ದಾರೆ. ಈ ಮೂಲಕ ಅವರು ತಮಗೆ ಬರುತ್ತಿದ್ದ 10% ವೋಟ್‍ನಲ್ಲಿ 40% ಅಗುತ್ತೆ ಎಂದು ಕನಸು ಕಾಣುತ್ತಿದ್ದಾರೆ ಎಂದು ಕಿಡಿಕಾರಿದರು.

    ಈಗ ನಮ್ಮ ದೇಶದಲ್ಲಿ ಹೊಸದೊಂದು ಧರ್ಮ ಪ್ರಾರಂಭವಾಗಿದೆ. ಅದೇ ಆಂಟಿ ಹಿಂದೂ ಧರ್ಮ. ಹಿಂದೂ ಧರ್ಮದ ವಿರುದ್ಧ ಒಂದು ಧರ್ಮ ಪ್ರಾರಂಭವಾಗಿದೆ. ಅದರ ನಾಯಕರು ಕುಮಾರಸ್ಟಾಮಿ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ. ಅದಕ್ಕೆ ಅವರ ವಿರುದ್ಧ ನಮ್ಮ ಧಿಕ್ಕಾರವಿದೆ ಎಂದು ಆಕ್ರೋಶ ಹೊರಹಾಕಿದರು.

    ಹಲಾಲ್ ಕಟ್ ಪದ್ಧತಿಯನ್ನು ಮರುಭೂಮಿಯಿಂದ ಬಂದ ಅನ್ಯಧರ್ಮದ ಜನರು ನಮ್ಮ ಮೇಲೆ ಏರಿದ್ದಾರೆ. ಅನೇಕ ಹಿಂದೂಗಳು ಮಾಂಸದಂಗಡಿಯನ್ನು ನಡೆಸುತ್ತಿದ್ದು, ಅನೇಕ ಮುಸ್ಲಿಮರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ. ಅವರು ಟೋಪಿ ಹಾಕಿಕೊಂಡೆ ಹಲಾಲ್ ಮಿಟ್ ರೆಡಿ ಮಾಡುತ್ತಾರೆ. ಅದಕ್ಕೆ ಅವರಿಗೆ ದುಡ್ಡನ್ನು ಕೊಡಲಾಗುತ್ತೆ. ಅಂತಹವರನ್ನು ನಾನು ತುಂಬಾ ನೋಡಿದ್ದೇನೆ ಎಂದು ವಿರೋಧ ವ್ಯಕ್ತಪಡಿಸಿದರು.

    ಹಿಂದೂಗಳೇ ಕುರಿಗಳನ್ನು ಬೆಳೆಸಿ ಅವನೇ ಮಾಂಸವನ್ನು ಮಾರಬೇಕು. ಅವನೇ 360 ಡಿಗ್ರಿಯಲ್ಲಿ ಎಲ್ಲ ಕೆಲಸವನ್ನು ಮಾಡಬೇಕು. ನನ್ನ ಹಿಂದೂ ಅಣ್ಣತಮ್ಮದರಿಗೆ ಈ ಮೂಲಕ ಉದ್ಯೋಗ ಸಂಪೂರ್ಣ ಸಿಗಬೇಕು. ಇದು ಯಾವ ಜಾತಿ-ಧರ್ಮದ ವಿರುದ್ಧವಲ್ಲ. ರಾಜಕೀಯದ ಗಿಮಿಕ್ ಇಲ್ಲದೇ ನಮ್ಮ ಹಿಂದೂ ಧರ್ಮದ ಹಕ್ಕನ್ನ, ಹಿಂದೂ ಯುವಕರ ಹಕ್ಕನ್ನ ಯಾರು ಕಿತ್ತುಕೊಂಡಿದ್ದಾರೆ ಅವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಪ್ರತಿಯೊಂದು ವ್ಯವಹಾರವನ್ನು ನಾವೇ ಹಿಟ್ಟುಕೊಳ್ಳಬೇಕು ಎಂಬ ಮುಸ್ಲಿಮರ ಹೇಳಿಕೆ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಹಲವು ವರ್ಷಗಳ ಹೋರಾಟ ಇಂದು ಬಯಲಿಗೆ ಬಂದಿದೆ. ಹಲಾಲ್ ಮತ್ತು ಜಟ್ಕಾ ಕಟ್ ಬಗ್ಗೆ ಈಗ ವಿಶ್ವವೇ ಮಾತನಾಡುತ್ತಿದೆ ಎಂದರು.

    ಜಟ್ಕಾ ಎಂಬುದು ಹಿಂದೂ ಧರ್ಮ ಮಾಡುವ ಪದ್ಧತಿ, ಹಲಾಲ್ ಮುಸ್ಲಿಮರು ಮಾಡುವ ಪದ್ಧತಿ ಎಂಬುದು ಈಗ ಜನರಿಗೆ ತಿಳಿದುಬಂದಿದೆ. ಈ ಅಭಿಯಾನ ಹಿಂದೂಗಳು ಮಾಡುವ ಬೀಗರೂಟ ಮತ್ತು ಪ್ರತಿ ಭಾನುವಾರ ಹಿಂದೂ ಮಾಡುವ ಮಾಂಸಡೂಟಕ್ಕೆ ನಮ್ಮ ಸಾಂಪ್ರದಾಯದ ಜಟ್ಕಾ ಕಟ್ ಪದ್ದತಿಯನ್ನು ಸಂಪೂರ್ಣವಾಗಿ ಅಳವಾಡಿಸಿಕೊಳ್ಳುವವರಿಗೂ ಈ ಅಭಿಯಾನ ಮುಂದುವರಿಯುತ್ತೆ ಎಂದು ತಿಳಿಸಿದರು.

    ಇದು ಶಾಶ್ವತವಾದ ಅಭಿಮಾನವಾಗಿದೆ. ನಾವು ಈಗ ಮಗುವಾಗಿದ್ದು, ಮುಂದೆ ಓಡುತ್ತೇವೆ. ಗೌಡ, ಒಕ್ಕಲಿಗ, ಕುಮಾರ್ ಎಂದು ಕ್ಷತ್ರೀಯರ ಹೆಸರನ್ನು ಇಟ್ಟುಕೊಂಡು ಹಲಾಲ್ ಮಾಡುವುದನ್ನು ನಿಲ್ಲಿಸಬೇಕು. ಹಿಂದೂ ಮಾಂಸದಂಗಡಿಯಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಮರು ಟೋಪಿ ಹಾಕಿಕೊಂಡು ಪ್ರಾಣಿಗಳನ್ನು ಕಟ್ ಮಾಡಿ ‘ಅಲ್ಲಾ’ ಹೆಸರು ಹೇಳಿ ಅವರ ದೇವರಿಗೆ ಅರ್ಪಣೆ ಮಾಡುತ್ತಿರುತ್ತಾರೆ ಎಂದು ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಟ್ಕಾ ಕಟ್ ಮಟನ್ ಅಂಗಡಿಗಳ ಮುಂದೆ ಕೇಸರಿ ಧ್ವಜ

    ಈ ಪದ್ದತಿಯನ್ನು ತಡೆಯಲು ನಾವು ಹಿಂದೂ ಯುವಕರನ್ನು ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಹಿಂದೂ ಸಂಘಗಳ ಬಳಿಗೆ ಹೋಗಿ ಮನವಿ ಮಾಡುತ್ತೇವೆ. ಇಲ್ಲವಾದರೆ ಗ್ರಾಹಕರಿಗೆ ಜಟ್ಕಾ ಮತ್ತು ಹಲಾಲ್ ಎಂದು ಎರಡು ಆಯ್ಕೆಗಳನ್ನು ಕೊಡಿ. ನಾವು ಯಾವುದೇ ಜಾತಿ, ಧರ್ಮದ ವಿರುದ್ಧ ಮಾಡುತ್ತಿರುವ ಹೋರಾಟವಲ್ಲ. ಇದು ಗ್ರಾಹಕರ ಹಕ್ಕಿನ ವಿರುದ್ಧ ಮಾಡುತ್ತಿರುವ ಹೋರಾಟವಾಗಿದೆ ಎಂದರು.

  • ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಹಲಾಲ್ ಕಟ್, ಜಟ್ಕಾ ಕಟ್ ಎಂದರೇನು?

    ಬೆಂಗಳೂರು: ಕರಾವಳಿಯಲ್ಲಿ ಹಿಜಬ್‌ನಿಂದ ಆರಂಭಗೊಂಡ ವಿವಾದ ಈಗ ಎಲ್ಲೆಲ್ಲೋ ಹೋಗುತ್ತಿದೆ. ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ನಿರ್ಬಂಧ ಅಭಿಯಾನ ಹೊಸ ರೂಪ ಪಡೆದುಕೊಂಡಿದೆ. ಯುಗಾದಿ ಹೊಸತೊಡಕು ವೇಳೆ ಹಲಾಲ್ ಮಾಂಸ ಬಹಿಷ್ಕರಿಸಿ, ಹಿಂದೂಗಳ ಬಳಿಯೇ ಮಾಂಸ ಖರೀದಿ ಮಾಡುವಂತೆ ಸೋಷಿಯಲ್ ಮೀಡಿಯಾಗಳಲ್ಲಿ ದೊಡ್ಡ ಅಭಿಯಾನವೇ ನಡೆದಿದೆ.

    ಇದಿಗ ಹಲಾಲ್ ತ್ಯಜಿಸಿ, ಜಟ್ಕಾ ಬಾಡು ಖರೀದಿಸಿ ಎಂದು ಹಿಂದೂ ಸಮುದಾಯದವರು ಕರೆ ನೀಡುತ್ತಿದ್ದಾರೆ. ಇದಕ್ಕೆ ಬಿಜೆಪಿಯೂ ಬಹಿರಂಗ ಬೆಂಬಲ ನೀಡಿದೆ. ಹಲಾಲ್ ಅನ್ನು ಆರ್ಥಿಕ ಜಿಹಾದ್ ಎಂದು ಸಿಟಿ ರವಿ ಆರೋಪಿಸಿದ್ದಾರೆ. ಹಲಾಲ್ ಮಾಂಸವನ್ನು ಉಪಯೋಗಿಸಬಾರದು ಅಂದರೆ ತಪ್ಪೇನು? ಮುಸಲ್ಮಾನರು ಹಿಂದೂಗಳ ಬಳಿ ಮಾಂಸ ಖರೀದಿ ಮಾಡಲ್ಲ. ಹಿಂದೂಗಳೇಕೆ ಮುಸ್ಲಿಮರ ಬಳಿ ಮಾಂಸ ಖರೀದಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಯಾವ ಅಂಶ ಪ್ರಚೋದನೆ ಕೊಡ್ತಿದೆ ನೀವೇ ಹೇಳಿ ಎಂದು ಸಿಟಿ ರವಿ ಕೇಳಿದ್ದಾರೆ. ಇದನ್ನೂ ಓದಿ: ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಕಲ್ಲಡ್ಕ ಭಟ್‌ಗೆ ಆಹ್ವಾನ – ಎಸ್‌ಎಫ್‌ಐ ವಿರೋಧ

    ಹಲಾಲ್ ಮಾಂಸದ ವಿಚಾರ ವಿವಾದ ಆಗಿರೋದು ಹೋಟೆಲ್ ಮಾಲೀಕರಿಗೆ ಹೊಸ ಪೀಕಲಾಟ ತಂದಿಟ್ಟಿದೆ. ಬೆಂಗಳೂರಿನ ಜಿಎಫ್‌ಸಿ ಬಿರಿಯಾನಿ ಮಳಿಗೆಯ ಬೋರ್ಡ್‌ನಲ್ಲಿ ಉಲ್ಲೇಖಿಸಿದ್ದ ಹಲಾಲ್ ಎಂಬ ಪದ ಮುಚ್ಚಲಾಗಿದೆ. ಹಲಾಲ್ ಬಹಿಷ್ಕಾರ ಅಭಿಯಾನಕ್ಕೆ ವಿರೋಧವೂ ವ್ಯಕ್ತವಾಗುತ್ತಿದೆ. ಆಯ್ತು ಹಲಾಲ್ ತ್ಯಜಿಸುತ್ತೇವೆ. ಆರ್‌ಎಸ್‌ಎಸ್‌ನವರು ಪ್ರತಿ ಹಳ್ಳಿಯಲ್ಲೂ ಮಾಂಸದಂಗಡಿ ತೆರೆಯಲಿ. ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ನೀಡಲಿ ಎಂಬ ಟ್ವೀಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

     

    ಇದೀಗ ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ಎಂದರೇನು ಎಂಬ ಪ್ರಶ್ನೆ ಎದ್ದಿದೆ. ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೆ ಇರುವ ವ್ಯತ್ಯಾಸ ಇಲ್ಲಿದೆ.

    ಹಲಾಲ್ ಕಟ್:
    ಹಲಾಲ್ ಎಂಬುದು ಅರೇಬಿಕ್ ಪದ. ಇದರ ಅರ್ಥ ಅನುಮತಿ ಇದೆ ಎಂಬುದು. ಹಲಾಲ್ ಕಟ್ ಪ್ರಕಾರ ಪ್ರಾಣಿಯ ಗಂಟಲು ಸೀಳಿ ರಕ್ತ ಬರಿದಾಗಿಸಿ ಕೊಲ್ಲಲಾಗುತ್ತದೆ. ಪ್ರಾಣಿ ಮೊದಲೇ ಸತ್ತಿದ್ದರೆ ಅಥವಾ ಅನಾರೋಗ್ಯವಿದ್ದರೆ ಇದನ್ನು ಪರಿಗಣಿಸಲಾಗುವುದಿಲ್ಲ.

    ಹಲಾಲ್ ಕಟ್ ಮಾಡುವವರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಬೇಕು. ಪ್ರಾಣಿಯನ್ನು ಕೊಲ್ಲುವಾಗ ಮುಸಲ್ಮಾನರ ಪವಿತ್ರ ಸ್ಥಳ ಮೆಕ್ಕಾದ ದಿಕ್ಕಿಗೆ ಮುಖ ಮಾಡಿ ಪ್ರಾರ್ಥನೆ ಮಾಡಬೇಕು. ಮಾಂಸ ತಿನ್ನುವವರೂ ಪ್ರಾಣಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡಬೇಕು.

    ಹಲಾಲ್ ಕಟ್ ಮಾಡುವವರು ಜಮಿಯತ್ ಉಲಾಮ ಐ ಹಿಂದ್ ಹಲಾಲ್ ಟ್ರಸ್ಟ್ ವತಿಯಿಂದ ಹಣ ಪಾವತಿಸಿ ಪ್ರಮಾಣ ಪತ್ರ ಪಡೆದಿರಬೇಕು. ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಎನ್ನುವ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್‌ಡಿಕೆ ಆಗ್ರಹ

    ಜಟ್ಕಾ ಕಟ್:
    ಜಟ್ಕಾ ಕಟ್ ಎಂದರೆ ಬಲಿ ಅಥವಾ ದೈವ ಬಲಿ ಎಂದರ್ಥ. ಈ ರೀತಿಯ ಪ್ರಾಣಿ ಬಲಿ ಬಗ್ಗೆ ಸನಾತನ ಹಿಂದೂ ಪದ್ಧತಿಯಲ್ಲಿ ಉಲ್ಲೇಖವಿದೆ. ಜಟ್ಕಾ ಕಟ್ ಪ್ರಕಾರ ಒಂದೇ ಏಟಿಗೆ ಪ್ರಾಣಿಯ ರುಂಡ ಹಾಗೂ ಮುಂಡವನ್ನು ಬೇರ್ಪಡಿಸಲಾಗುತ್ತದೆ. ಈ ರೀತಿಯಲ್ಲಿ ಪ್ರಾಣಿಯ ಜೀವ ಒಂದೇ ಬಾರಿಗೆ ಹೋಗುತ್ತದೆ.

    ಇವೇ ಹಲಾಲ್ ಕಟ್ ಹಾಗೂ ಜಟ್ಕಾ ಕಟ್‌ಗೂ ಇರುವ ವ್ಯತ್ಯಾಸ. ಮಾಂಸದ ಖರೀದಿಯಲ್ಲೂ ಧರ್ಮದ ವೈವಿಧ್ಯತೆ ಇರುವ ಕಾರಣಕ್ಕೆ ಇದೀಗ ಮತ್ತೆ ಹಿಂದೂ-ಮುಸ್ಲಿಂ ವಿವಾದ ಭುಗಿಲೇಳುತ್ತಿದೆ.