Tag: japan

  • ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಧೂಮಪಾನ ಮಾಡದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದ ಐಟಿ ಕಂಪನಿ

    ಟೋಕಿಯೋ: ಧೂಮಪಾನ ಆರೋಗ್ಯಕ್ಕೆ ಹಾನಿಕರ ಅಂತ ಪ್ರತಿ ಸಿಗರೇಟು ಪ್ಯಾಕ್ ಮೇಲೂ ಬರೆದಿರುತ್ತೆ. ಆದರೂ ಜನರು ಅದನ್ನು ಸೇದುವುದನ್ನು ಬಿಡಲ್ಲ. ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಧೂಮಪಾನ ಹಾನಿಕರ ಎಂದು ಸಾಫ್ಟ್‌ವೇರ್ ಕಂಪನಿಯೊಂದು ಸಿಗರೇಟ್ ಸೇದದ ಸಿಬ್ಬಂದಿಗೆ ಬಂಪರ್ ಆಫರ್ ನೀಡಿದೆ.

    ಹೌದು ಜಪಾನ್ ಮೂಲದ ಸಾಫ್ಟ್‌ವೇರ್ ಕಂಪನಿ ಹೊಸ ಉಪಾಯ ಮಾಡಿದೆ. ಧೂಮಪಾನ ಮಾಡದ ಸಿಬ್ಬಂದಿಗೆ ವೇತನ ಸಹಿತ 6 ರಜೆಗಳನ್ನು ಹೆಚ್ಚು ತೆಗೆದುಕೊಳ್ಳುವ ಭರ್ಜರಿ ಆಫರ್ ನೀಡಿದೆ. ಧೂಮಪಾನ ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಕೆಲಸಕ್ಕೂ ಹಾನಿಕಾರಕವಾಗಿದೆ. ಅದಕ್ಕೆ ಈ ನಿರ್ಧಾರ ಮಾಡಿದ್ದೇವೆ ಎಂದು ಕಂಪನಿ ತಿಳಿಸಿದೆ.

    ಕಂಪನಿಯ ಓರ್ವ ಸಿಬ್ಬಂದಿ 1 ಸಿಗರೇಟು ಸೇದಿ ರೆಸ್ಟ್ ಮಾಡಿ ಬರಲು ಕನಿಷ್ಠ ಹದಿನೈದು ನಿಮಿಷ ತೆಗೆದುಕೊಳ್ಳುತ್ತಾರೆ. ಹೀಗೆ ಕಂಪನಿಯಲ್ಲಿ ಸುಮಾರು 42 ಮಂದಿ ಇದ್ದಾರೆ. ಎಲ್ಲರೂ 15 ನಿಮಿಷ ಸಮಯ ತೆಗೆದುಕೊಂಡರೆ ಕೆಲಸಕ್ಕೆ ಅಡ್ಡಿಯಾಗುತ್ತದೆ. ಸಮಯ ಹಾಳಾಗುತ್ತದೆ. ಇದರಿಂದ ಕೆಲಸದ ವಾತಾವರಣದ ಮೇಲೂ ಪರಿಣಾಮ ಬೀರುತ್ತದೆ ಎಂದು ಮನಗಂಡ ಕಂಪನಿ ವೇತನ ಸಹಿತ ರಜೆ ಉಪಾಯವನ್ನು ಪ್ರಯೋಗಿಸಿದೆ.

    ಈ ಬಗ್ಗೆ ಕಂಪನಿ ಸಿಇಒ ಮಾತನಾಡಿ, ಈ ಉಪಾಯವು ಸಿಬ್ಬಂದಿ ಧೂಮಪಾನ ಬಿಡುವುದಕ್ಕೆ ಸಹಾಯ ಮಾಡುತ್ತದೆ. ಅವರನ್ನು ಧೂಪಪಾನ ಬಿಟ್ಟು ಆರೋಗ್ಯವಾಗಿರಲು ಪ್ರೋತ್ಸಾಹಿಸುತ್ತದೆ. ಅಲ್ಲದೆ ಈಗಾಗಲೇ 42ರಲ್ಲಿ 4 ಮಂದಿ ಸಿಗರೇಟ್ ಸೇದುವುದನ್ನು ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.

  • ಕಣ್ಣಿದ್ದವರನ್ನು ನಾಚಿಸುವಂತೆ ಸ್ಕೇಟಿಂಗ್ ಮಾಡುತ್ತಾನೆ ಈ ಅಂಧ ಯುವಕ- ವಿಡಿಯೋ

    ಕಣ್ಣಿದ್ದವರನ್ನು ನಾಚಿಸುವಂತೆ ಸ್ಕೇಟಿಂಗ್ ಮಾಡುತ್ತಾನೆ ಈ ಅಂಧ ಯುವಕ- ವಿಡಿಯೋ

    ನವದೆಹಲಿ: ಅಂಧ ಯುವಕ ಕಣ್ಣಿದ್ದವರನ್ನೂ ಮೀರಿಸುವಂತೆ ಸ್ಕೇಟಿಂಗ್ ಮಾಡುವ ಮೂಲಕ ನೆಟ್ಟಿಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ.

    ಜಪಾನ್ ಮೂಲಕ ಕಿಡ್_ಎಂ.ಸಿ ಎಂಬ ಖಾತೆಯಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಹಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಆದರೆ, ಈ ಯುವಕ ತನ್ನ ಅದ್ಭುತ ವಿಡಿಯೋಗಳನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಇತರರು ನಿಬ್ಬೆರಗಾಗುವಂತೆ ಮಾಡಿದ್ದಾನೆ.

    https://www.instagram.com/p/B5DA2Czh2ob/?utm_source=ig_embed

    ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಬಹುತೇಕರು ಇದರಿಂತ ಪ್ರೇರಿತರಾಗುತ್ತಿದ್ದಾರೆ. ಯುವಕನಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ವಿಡಿಯೋದಲ್ಲಿ ಬಿಳಿ ಟಿ ಶರ್ಟ್ ಧರಿಸಿದ ಅಂಧ ಯುವಕ ಸ್ಕೇಟ್ ಬೋರ್ಡ್ ಪಾರ್ಕಿನಲ್ಲಿ ತನ್ನ ಅದ್ಭುತ ಸ್ಕೇಟಿಂಗ್ ಕೌಶಲವನ್ನು ಪ್ರದರ್ಶಿಸಿದ್ದಾನೆ. ಕಣ್ಣಿದ್ದವರು ಸಹ ಇಂತಹ ಸ್ಟಂಟ್ ಮಾಡಲು ಭಯಪಡುತ್ತಾರೆ. ಆದರೆ ಈ ಯುವಕ ಒಂದು ಕೈಯಲ್ಲಿ ಸ್ಟಿಕ್ ಹಿಡಿದು ಸರ್ರನೆ ಹೋಗುವ ಮೂಲಕ ನೋಡುಗರು ನಿಬ್ಬೆರಗಾಗುವಂತೆ ಮಾಡಿದ್ದಾನೆ. ಒಂದು ಬಾರಿಯೂ ಎಡವಿ ಬೀಳದೇ ಸರಾಗವಾಗಿ ಸ್ಕೇಟಿಂಗ್ ವ್ಹೀಲ್ ಮೂಲಕ ಜಾರುತ್ತಾನೆ.

    https://www.instagram.com/p/B4ueAFfBkrV/?utm_source=ig_embed

    ತಾನು ಸ್ಕೇಟಿಂಗ್ ಮಾಡಿರುವ ಹತ್ತಾರು ವಿಡಿಯೋವನ್ನು ಯುವಕ ಇನ್‍ಸ್ಟಾದಲ್ಲಿ ಹಾಕಿದ್ದು, ಭರ್ಜರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು ಹಾಡಿ ಹೊಗಳಿದರೆ, ನೀವು ನಮಗೆಲ್ಲ ಸ್ಪೂರ್ತಿ ಎಂದು ಕೊಂಡಾಡಿದ್ದಾರೆ.

  • ಕುಸುಮಾಳೊಂದಿಗೆ ಜಪಾನಿನತ್ತ ಡಿಟೆಕ್ಟಿವ್ ದಿವಾಕರ!

    ಕುಸುಮಾಳೊಂದಿಗೆ ಜಪಾನಿನತ್ತ ಡಿಟೆಕ್ಟಿವ್ ದಿವಾಕರ!

    ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ನೂರಾ ಇಪ್ಪತೈದು ದಿನದಾಚೆಗೆ ಪ್ರೇಕ್ಷಕರನ್ನು ಸೆಳೆಯುತ್ತಿರೋ ಅಪರೂಪದ ದಾಖಲೆಯೊಂದಕ್ಕೂ ಈ ಸಿನಿಮಾ ರೂವಾರಿಯಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೇ ವಿದೇಶದಲ್ಲಿಯೂ ಡಿಟೆಕ್ಟಿವ್ ದಿವಾಕರನ ಹವಾ ಜೋರಾಗಿಯೇ ಇದೆ. ಇದೀಗ ಜಪಾನ್ ದೇಶದಲ್ಲಿಯೂ ದಿವಾಕರ ಕಮಾಲ್ ಸೃಷ್ಟಿಸಲಿರೋ ಸುದ್ದಿಯೊಂದು ಹೊರ ಬಿದ್ದಿದೆ.

    ಈ ಸುದ್ದಿಯನ್ನು ಬೆಲ್ ಬಾಟಂ ಚಿತ್ರತಂಡವೇ ಜಾಹೀರು ಮಾಡಿದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಜಪಾನಿನಲ್ಲಿ ದಿವಾಕರನ ಮೋಡಿಗೆ ಸಕಲ ತಯಾರಿಯೂ ನಡೆದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಜಪಾನಿನಲ್ಲಿ ಬೆಲ್ ಬಾಟಂ ಚಿತ್ರ ಬಿಡುಗಡೆಯಾಗಲಿದೆ. ಜಪಾನಿನಲ್ಲಿರೋ ಕನ್ನಡಿಗರು ಈ ಚಿತ್ರಕ್ಕಾಗಿ ಬಹು ದಿನಗಳಿಂದಲೂ ಕಾತರಿಸುತ್ತಿದ್ದರು. ಇನ್ನೆರಡು ತಿಂಗಳಲ್ಲಿ ಜಪಾನ್ ಕನ್ನಡಿಗರ ಮನದಿಂಗಿತ ಸಾಕಾರಗೊಳ್ಳಲಿದೆ.

    ಈಗಾಗಲೇ ಯುಎಸ್, ಸಿಂಗಾಪೂರ್, ಯುಕೆ ಮುಂತಾದೆಡೆಗಳಲ್ಲಿ ಬೆಲ್ ಬಾಟಮ್ ಚಿತ್ರ ಬಿಡುಗಡೆಯಾಗಿದೆ. ಈ ಚಿತ್ರವನ್ನು ಆ ಭಾಗದಲ್ಲಿ ನೆಲೆಸಿರುವ ಕನ್ನಡಿಗರೆಲ್ಲ ನೋಡಿ ಸಂಭ್ರಮಿಸಿದ್ದಾರೆ. ಈಗ ಕರ್ನಾಟಕದಲ್ಲಿ ನೂರಾ ಇಪ್ಪತೈದು ದಿನಗಳ ಯಶಸ್ವೀ ಯಾತ್ರೆ ಮುಗಿಸಿಕೊಂಡಿರುವ ಈ ಚಿತ್ರ ಈ ಘಳಿಗೆಯಲ್ಲಿಯೇ ಜಪಾನಿನತ್ತಲೂ ಪ್ರಯಾಣ ಬೆಳೆಸಿದೆ.

    ಇದು ನಿರ್ದೇಶಕ ಜಯತೀರ್ಥ ಮತ್ತವರ ತಂಡದ ಪರಿಶ್ರಮದ ಫಲ. ಎಂಭತ್ತರ ದಶಕದ ಕಥೆಯೊಂದನ್ನು ಈ ಕಾಲಮಾನಕ್ಕೆ ತಕ್ಕಂತೆ ಕಟ್ಟಿಕೊಡುವ ಮೂಲಕ ಈ ತಂಡ ಸಾರ್ವಕಾಲಿಕ ದಾಖಲೆಯನ್ನೇ ಬರೆದಿದೆ. ಸಂಪೂರ್ಣ ಮನೋರಂಜನೆಯನ್ನೇ ಜೀವಾಳವಾಗಿಟ್ಟುಕೊಂಡು ಕಡೇ ತನಕ ಸಸ್ಪೆನ್ಸ್ ಆಗಿರುವಂಥಾ ಕಥೆಯೊಂದನ್ನು ಬೆಲ್ ಬಾಟಂ ಮೂಲಕ ಅನಾವರಣಗೊಳಿಸಲಾಗಿದೆ. ಈ ಮೂಲಕವೇ ಚಿತ್ರತಂಡ ಭರಪೂರ ಗೆಲುವನ್ನೂ ತನ್ನದಾಗಿಸಿಕೊಂಡಿದೆ.

  • ಭಯೋತ್ಪಾದನೆ ಮಾನವೀಯತೆಗೆ ಅತೀ ದೊಡ್ಡ ಬೆದರಿಕೆ – ಜಪಾನ್‍ನಲ್ಲಿ ಮೋದಿ

    ಭಯೋತ್ಪಾದನೆ ಮಾನವೀಯತೆಗೆ ಅತೀ ದೊಡ್ಡ ಬೆದರಿಕೆ – ಜಪಾನ್‍ನಲ್ಲಿ ಮೋದಿ

    ಒಸಾಕಾ: ಭಯೋತ್ಪಾದನೆ ಮಾನವೀಯತೆಗೆ ಅತಿದೊಡ್ಡ ಬೆದರಿಕೆಯಾಗಿದೆ. ಭಯೋತ್ಪಾದನೆ ಅಮಾಯಕರನ್ನು ಹತ್ಯೆ ಮಾಡುವುದಷ್ಟೇ ಅಲ್ಲದೇ ಸಾಮಾಜಿಕ ಸ್ಥಿರತೆ ಮತ್ತು ಆರ್ಥಿಕ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ಜಪಾನ್‍ನ ಒಸಾಕಾದಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ಭಾಗವಹಿಸಿದ್ದ ಮೋದಿ, ಇಂದು ಬ್ರಿಕ್ಸ್ ದೇಶಗಳ ಮುಖಂಡರ ಜತೆ ಅನೌಪಚಾರಿಕ ಸಭೆಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ಮತ್ತು ವರ್ಣಭೇದ ನೀತಿಗೆ ಬೆಂಬಲಿಸುವ ಎಲ್ಲ ಶಕ್ತಿಗಳನ್ನು ನಿಯಂತ್ರಿಸಬೇಕಾಗಿದೆ ಎಂದು ಹೇಳಿದ್ದಾರೆ.

    ಸಂಪನ್ಮೂಲಗಳ ಕೊರತೆಯಿದೆ ಮೂಲಭೂತ ಸೌಕರ್ಯಗಳಲ್ಲಿ ಹೂಡಿಕೆಗೆ ಬಹುತೇಕ 1.3 ಟ್ರಿಲಿಯನ್ ಡಾಲರ್‍ಗಳ (1,30,000 ಕೋಟಿ) ಕೊರತೆಯಾಗಿದೆ. ಅಭಿವೃದ್ಧಿಯನ್ನು ಸುಸ್ಥಿರಗೊಳಿಸಿ ಎಲ್ಲರನ್ನೂ ಒಳಗೊಳ್ಳಿಸುವುದು ಮತ್ತೊಂದು ಸವಾಲು. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳಾದ ಡಿಜಿಟಲೀಕರಣ ಮತ್ತು ಹವಾಮಾನ ಬದಲಾವಣೆಯಿಂದ ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಇಂದು ಮಾರಕ ಎಂದು ಮೋದಿ ಹೇಳಿದರು.

    ವಿಶ್ವ ವಾಣಿಜ್ಯ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸುವ, ರಕ್ಷಣಾತ್ಮಕ ಧೋರಣೆ ವಿರುದ್ಧ ಹೋರಾಡುವ, ಇಂಧನ ಭದ್ರತೆ ಖಾತ್ರಿಪಡಿಸುವ ಮತ್ತು ಭಯೋತ್ಪಾದನೆ ವಿರುದ್ಧ ಒಗ್ಗೂಡಿ ಹೋರಾಡುವ ಅಗತ್ಯವಿದೆ. ಇಂದು ನಮ್ಮ ಮುಂದಿರುವ ಮೂರು ಪ್ರಮುಖ ಸವಾಲುಗಳ ಬಗ್ಗೆ ನಾನು ಗಮನಹರಿಸುತ್ತೇನೆ. ಮೊದಲನೆಯದಾಗಿ ಜಾಗತಿಕ ಆರ್ಥಿಕತೆಯ ಅಸ್ಥಿರತೆ ಮತ್ತು ಅವನತಿ. ನಿಯಮಗಳ ಆಧಾರಿತ ಬಹುಪಕ್ಷೀಯ ಜಾಗತಿಕ ವ್ಯಾಪಾರ ವ್ಯವಸ್ಥೆಯಲ್ಲಿ ಏಕಪಕ್ಷೀಯವಾದ ಮತ್ತು ಸ್ಪರ್ಧಾತ್ಮಕತೆಗಳ ಪರಸ್ಪರ ವಿರೋಧಾಭಾಸ ಸೃಷ್ಟಿಸುತ್ತಿವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಬ್ರೆಜಿಲ್ ಅಧ್ಯಕ್ಷರಾಗಿ ಚುನಾಯಿತರಾದ ಜೈರ್ ಬೊಲ್ಸೊನಾರೊ ಅವರಿಗೆ ಅಭಿನಂದನೆ ಸಲ್ಲಿಸಿದರು. ಅಲ್ಲದೆ ಬ್ರಿಕ್ಸ್ ಕುಟುಂಬಕ್ಕೆ ಅವರನ್ನು ಸ್ವಾಗತಿಸಿದರು. ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ) ಮುಖಂಡರ ಸಭೆ ನಡೆಸಿ, ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ಚುನಾಯಿತರಾದ ಸಿರಿಲ್ ರಮಫೋಸಾ ಅವರಿಗೂ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು.

  • ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಎಫ್‍ಐಎಚ್ ಫೈನಲ್ ಗೆದ್ದ ಮಹಿಳೆಯರು – ಬಸ್ಸಿನಲ್ಲಿ ಸಂಭ್ರಮಿಸಿದ ವಿಡಿಯೋ ವೈರಲ್

    ಹಿರೋಶೀಮಾ: ಭಾರತೀಯ ಮಹಿಳಾ ಹಾಕಿ ತಂಡ ಎಫ್‍ಐಹೆಚ್ ಸೀರಿಸ್ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದು, ಈ ಗೆಲುವನ್ನು ಆಟಗಾರ್ತಿಯರು ಸಂಭ್ರಮಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಏಷ್ಯಾನ್ ಚಾಂಪಿಯನ್ ಜಪಾನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಖುಷಿಯನ್ನು ಭಾರತ ತಂಡದ ಆಟಗಾರ್ತಿಯರು ಸಖತ್ ಜೋಶ್‍ನಲ್ಲಿ ಸಂಭ್ರಮಿಸಿದ್ದಾರೆ.

    ಪಂದ್ಯದ ಬಳಿಕ ಬಸ್ಸಿನಲ್ಲಿ ಬರುತ್ತಿದ್ದಾಗ `ಸುನೋ ಗೌರ್ ಸೆ ದುನಿಯಾ ವಾಲೋ’ ಹಿಂದಿ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವೀಡಿಯೋವನ್ನು ಮೊದಲು ಹಾಕಿ ಇಂಡಿಯಾದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

    ಭಾರತೀಯ ಹಾಕಿ ಮಹಿಳಾ ತಂಡದ ಆಟಗಾರ್ತಿಯರು ಸಂಭ್ರಮಿಸಿರುವ ವಿಡಿಯೋ ಸದ್ಯ ಎಲ್ಲೆಡೆ ಸಖತ್ ವೈರಲ್ ಆಗಿದೆ.

    ಭಾರತದ ಕೀರ್ತಿಯನ್ನು ಹೆಚ್ಚಿಸಿದ ತಂಡದ ಆಡಗಾರ್ತಿಯರ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಂಡವನ್ನು ಅಭಿನಂದಿಸಿದ್ದಾರೆ.

    ಫೈನಲ್ ಪ್ರವೇಶಿಸುವ ಮೂಲಕ ಭಾರತ ಮತ್ತು ಜಪಾನ್ 2020 ಒಲಿಂಪಿಕ್ಸ್ ಅರ್ಹತಾ ಪಂದ್ಯಗಳ ಅಂತಿಮ ಸುತ್ತಿಗೆ ಅರ್ಹತೆ ಗಳಿಸಿಕೊಂಡಿವೆ.

  • ಒಲಿಂಪಿಕ್ಸ್ ಅರ್ಹತಾ ಫೈನಲ್‍ಗೆ ಎಂಟ್ರಿ ಪಡೆದ ಭಾರತ ಮಹಿಳಾ ಹಾಕಿ ತಂಡ

    ಒಲಿಂಪಿಕ್ಸ್ ಅರ್ಹತಾ ಫೈನಲ್‍ಗೆ ಎಂಟ್ರಿ ಪಡೆದ ಭಾರತ ಮಹಿಳಾ ಹಾಕಿ ತಂಡ

    ಹಿರೋಷಿಮಾ: ಶನಿವಾರ ಎಫ್‍ಐಎಚ್ ಹಾಕಿ ಸರಣಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಚಿಲಿ ತಂಡವನ್ನು ಸೋಲಿಸಿ, ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಆಡುವ ಅವಕಾಶವನ್ನು ತನ್ನದಾಗಿಸಿಕೊಂಡಿದೆ.

    ಗುರ್ಜಿತ್ ಕೌರ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಚಿಲಿ ತಂಡದ ವಿರುದ್ಧ ಭಾರತ 4-2 ಗೋಲುಗಳಿಂದ ಜಯಗಳಿಸಿದೆ. ಈ ಮೂಲಕ ಟೋಕಿಯೊ ಒಲಿಂಪಿಕ್ಸ್ ಅಂತಿಮ ಅರ್ಹತಾ ಸುತ್ತಿನಲ್ಲಿ ಭಾರತ ಸ್ಥಾನ ಪಡೆದಿದೆ. ಭಾನುವಾರ ನಡೆಯುವ ಫೈನಲ್‍ ಸುತ್ತಿನಲ್ಲಿ ಜಪಾನ್ ತಂಡದ ವಿರುದ್ಧ ಭಾರತ ಆಡಲಿದೆ.

    ಜಪಾನ್ ತಂಡವು ಇನ್ನೊಂದು ಸೆಮಿಫೈನಲ್‍ನಲ್ಲಿ ರಷ್ಯಾದ ವಿರುದ್ಧ ಆಟವಾಡಿತ್ತು. ಈ ವೇಳೆ `ಪೆನಾಲ್ಟಿ ಶೂಟೌಟ್’ ನಂತರ 3-1 ಗೋಲುಗಳಿಂದ ರಷ್ಯಾ ತಂಡವನ್ನು ಮಣಿಸಿ, ನಿಗದಿತ 60 ನಿಮಿಷಗಳ ಆಟದ ನಂತರ ಸ್ಕೋರ್ 1-1 ರಲ್ಲಿ ಸಮಬಲ ಸಾಧಿಸಿತು.

    ಭಾರತ ಹಾಗೂ ಚಿಲಿ ಮಧ್ಯೆ ನಡೆದ ಮೊದಲ ಸೆಮಿಫೈನಲ್‍ನ ಮೊದಲ ಕ್ವಾರ್ಟರ್ ಗೋಲಿಲ್ಲದೇ ಅಂತ್ಯವಾಗಿತ್ತು. ಬಳಿಕ ಅಚ್ಚರಿ ಎನ್ನುವಂತೆ ಚಿಲಿ ತಂಡ 18ನೇ ನಿಮಿಷ ಮುನ್ನಡೆಯಲ್ಲಿತ್ತು. ಆದರೆ ಪ್ರತಿದಾಳಿಯೊಂದರಲ್ಲಿ ಒದಗಿದ ಅವಕಾಶದಲ್ಲಿ ಕ್ಯಾರೊಲಿನಾ ಗಾರ್ಸಿಯಾ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದರು. ಈ ವೇಳೆ ಭಾರತ ಸ್ವಲ್ಪ ವಿಚಲಿತಗೊಂಡರೂ ತಮ್ಮ ಪ್ರತಿದಾಳಿ ನಡೆಸಿತು. ನಾಲ್ಕು ನಿಮಿಷಗಳಲ್ಲೇ ‘ಪೆನಾಲ್ಟಿ ಕಾರ್ನರ್’ ಅವಕಾಶವೊಂದನ್ನು ಪರಿವರ್ತಿಸಿದ ಗುರ್ಜಿತ್ ಕೌರ್ ತಂಡ ಗೋಲಿನ ಅಂತರ ಸಮ ಮಾಡಿಕೊಳ್ಳಲು ನೆರವಾದರು. ಆ ಬಳಿಕ ವಿರಾಮದ ವೇಳೆ ಎರಡು ತಂಡದ ಸ್ಕೋರ್ 1-1ರಲ್ಲಿ ಸರಿಸಮವಾಯಿತು.

    ಸದ್ಯ ವಿಶ್ವ ಕ್ರಮಾಂಕದಲ್ಲಿ ಭಾರತ 9ನೇ ಸ್ಥಾನದಲ್ಲಿದ್ದು, ಸೆಮಿಫೈನಲ್ಸ್ ನ 31ನೇ ನಿಮಿಷದ ಆಟದಲ್ಲಿ ನವನೀತ್ ಕೌರ್ ಗಳಿಸಿದ ಗೋಲಿನಿಂದ ಮುನ್ನಡೆ ಸಾಧಿಸಿತು. 25 ಯಾರ್ಡ್ ವೃತ್ತದಲ್ಲಿ ಚೆಂಡನ್ನು ನಿಯಂತ್ರಿಸಿದ ನವನೀತ್ ಕೌರ್, ನಂತರ ಎದುರಾಳಿ ತಂಡವನ್ನು ಹಿಂದಿಕ್ಕಿ ಮುನ್ನುಗ್ಗಿ ಗೋಲ್ ಬಾರಿಸಿದರು. ಗುರ್ಜಿತ್ ಕೌರ್ 37ನೇ ನಿಮಿಷ ಮತ್ತೊಂದು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಯಶಸ್ಸು ಗಳಿಸಿ ಭಾರತ ಗೆಲುವಿನತ್ತ ಸಾಗಲು ನೆರವಾದರು.

    ಬಳಿಕ 43ನೇ ನಿಮಿಷ ಭಾರತ ರಕ್ಷಣಾ ಆಟಗಾರ್ತಿಯರು ಚಂಡನ್ನು ತಡೆಯುವ ಯತ್ನದಲ್ಲಿ ಕೊಂಚ ಎಡವಟ್ಟಾಗಿ ಚಿಲಿ ತಂಡ ಎರಡನೇ ಗೋಲ್ ಗಳಿಸಿ ಸ್ಕೋರ್ 3-2ಕ್ಕೆ ಇಳಿಸಿದರು. ಆದರೆ ಭಾರತ ತಂಡದ ಕ್ಯಾಪ್ಟನ್ ರಾಣಿ ರಾಮಪಾಲ್ ಅವರು 57ನೇ ನಿಮಿಷದಲ್ಲಿ ಗೋಲ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಈ ಮೂಲಕ 2020 ಒಲಿಂಪಿಕ್ಸ್ ಅರ್ಹತಾ ಫೈನಲ್ಸ್ ಗೆ ಜಪಾನ್ ಹಾಗೂ ಭಾರತ ಮಹಿಳಾ ಹಾಕಿ ತಂಡ ಆಡುವ ಅವಕಾಶ ಪಡೆದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮೌತ್ ಪರ್ಸ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

    ಮೌತ್ ಪರ್ಸ್ ವಿಡಿಯೋ ನೋಡಿ ದಂಗಾದ ನೆಟ್ಟಿಗರು

    ಟೋಕಿಯೋ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿ ದಿನವು ಹಲವಾರು ವಿಚಿತ್ರ ವಿಷಯಗಳು, ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಅದೇ ಸಾಲಿಗೆ ಸದ್ಯ ಮನುಷ್ಯನ ಬಾಯಿ ಆಕಾರದ ನಾಣ್ಯ ಸಂಗ್ರಹಿಸುವ ಮೌತ್ ಪರ್ಸ್ ಸೇರಿಕೊಂಡಿದೆ.

    ಜಪಾನ್ ಮೂಲದ ಡಿಜೆಯೊಬ್ಬರು ಈ ವಿಚಿತ್ರ ಪರ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಪರ್ಸ್ ವಿಶೇಷತೆ ಏನೆಂದರೆ ಇದರ ಆಕಾರ. ಹೌದು. ಮನುಷ್ಯನ ಬಾಯಿ ಆಕಾರದಲ್ಲಿ ಈ ಪರ್ಸ್ ವಿನ್ಯಾಸಗೊಂಡಿದೆ. ಪರ್ಸ್ ಗೆ ತುಟಿ, ಹಲ್ಲು ಕೂಡ ಇದೆ. ಇದನ್ನು ನೋಡಿದರೆ ನಿಜವಾದ ಮನುಷ್ಯನ ಬಾಯಿಯೇ ಇರಬೇಕು ಎನಿಸುತ್ತದೆ. ಈ ವಿಚಿತ್ರ ಪರ್ಸ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ಬರೋಬ್ಬರಿ 13 ಮಿಲಿಯನ್‍ಗೂ ಅಧಿಕ (1 ಕೋಟಿ 30 ಲಕ್ಷಕ್ಕೂ ಹೆಚ್ಚು) ಮಂದಿ ವೀಕ್ಷಿಸಿದ್ದಾರೆ.

    ವಿಡಿಯೋವನ್ನು ನೋಡಿದರೆ ನಿಜಕ್ಕೂ ವಿಚಿತ್ರ ಅನಿಸುತ್ತೆ. ಪರ್ಸ್‍ಗೆ ಇರುವ ತುಟಿಯನ್ನು ತೆರೆದು, ಅದರೊಳಗೆ ನಾಣ್ಯ ಹಾಕುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ಪರ್ಸ್ ಬರೀ ಹೊರಗಿಂದ ಮಾತ್ರ ಬಾಯಿ ಆಕಾರದಲ್ಲಿಲ್ಲ. ಇದರ ಒಳಗೆ ಕೂಡ ಬಾಯಿ ಒಳಗೆ ಹೇಗಿರುತ್ತದೆಯೇ ಹಾಗೆಯೇ ವಿನ್ಯಾಸ ಮಾಡಲಾಗಿದೆ.

    https://twitter.com/44doooo/status/1134776852784877569

    ಈ ವಿಡಿಯೋ ನೋಡಿದ ನೆಟ್ಟಿಗರು ದಂಗಾಗಿದ್ದಾರೆ. ಅಲ್ಲದೆ ಕೆಲವರು ಇದು ನೋಡಿದರೆ ಅಸಹ್ಯವಾಗುತ್ತದೆ ಎಂದು ಮೂಗು ಮುರಿದಿದ್ದಾರೆ. ಅದೇನೇಯಾಗಲಿ ವಿಚಿತ್ರವಾಗಿದ್ದರೂ ಕೂಡ ಈ ಪರ್ಸ್ ಸದ್ಯ ಬಾರೀ ಚರ್ಚೆಯಲ್ಲಿದೆ.

  • ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಬಳಿಕ ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.

    ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.

    ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‍ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ.

    ಈ ಪ್ರಕರಣದ ವಿಚಾರಣೆಗೆ ಬಿಸಿಸಿಐ ಒಂದು ಸಮಿತಿಯನ್ನು ನೇಮಿಸಲಿದ್ದು, ಈ ಸಮಿತಿ  ಒಂಬುಡ್ಸ್‌ಮನ್‌ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.

    ಈ ಹಿಂದೆ ಐಪಿಎಲ್ ಮಾಲೀಕರ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಲೋಧಾ ಸಮಿತಿ ತನಿಖೆ ನಡೆಸಿತ್ತು. ಇದಾದ ಬಳಿಕ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು.

    ಏನಿದು ಪ್ರಕರಣ?
    ಕಳೆದ ಮಾರ್ಚ್‍ನಲ್ಲಿ ನೆಸ್ ವಾಡಿಯಾ ಪ್ರವಾಸಕ್ಕೆಂದು ಜಪಾನ್‍ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ನ್ಯೂ ಚಿಟೋಸ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಅವರ ಬಳಿಯಿದ್ದ ಗಾಂಜಾವನ್ನು ಪತ್ತೆ ಹಚ್ಚಿತ್ತು. ನಂತರ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

    ವಿಚಾರಣೆಯ ಸಂದರ್ಭದಲ್ಲಿ ನಾನು ಸ್ವಂತ ಬಳಕೆಗಾಗಿ ಗಾಂಜಾವನ್ನು ಇಟ್ಟುಕೊಂಡಿದ್ದೆ ಎಂದು ನೆಸ್ ತಿಳಿಸಿದ್ದರು. ಈ ಹೇಳಿಕೆಯನ್ನು ಪುರಸ್ಕರಿಸಿದ ಕೋರ್ಟ್ ನೆಸ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಮರಳಿದ್ದರು.

    ಜಪಾನಿನಲ್ಲಿ ಡ್ರಗ್ಸ್ ಕುರಿತಂತೆ ಕಠಿಣ ಕಾನೂನು ಜಾರಿಯಾಗಿದ್ದು, ದೋಷಿಯಾದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಹುದಾಗಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತದೆ.

  • ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಇಮ್ರಾನ್ ಖಾನ್ ಕಾಲೆಳೆದ ನೆಟ್ಟಿಗರು

    ಜಪಾನ್-ಜರ್ಮನಿ ಗಡಿ ಹಂಚಿಕೊಂಡಿವೆ ಎಂದ ಇಮ್ರಾನ್ ಖಾನ್ ಕಾಲೆಳೆದ ನೆಟ್ಟಿಗರು

    – ಮಾಜಿ ಪತ್ನಿಯಿಂದಲೇ ವ್ಯಂಗ್ಯ, ವಿಡಿಯೋ ನೋಡಿ

    ಇಸ್ಲಾಮಾಬಾದ್: ಜಪಾನ್ ಹಾಗೂ ಜರ್ಮನಿ ದೇಶಗಳು ಗಡಿ ಹಂಚಿಕೊಂಡಿವೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಇಮ್ರಾನ್ ಖಾನ್ ಅವರ ಕಾಲೆಳೆದಿದ್ದಾರೆ.

    ಇಮ್ರಾನ್ ಖಾನ್ ಅವರು ಸೋಮವಾರ ಇರಾನ್‍ಗೆ ಭೇಟಿ ನೀಡಿದ್ದರು. ಈ ವೇಳೆ ಇರಾನ್ ಅಧ್ಯಕ್ಷ ರೌಹಾನಿ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿ ವೇಳೆ ಇಮ್ರಾನ್ ಖಾನ್, ಎರಡನೇ ವಿಶ್ವ ಯುದ್ಧ ನಂತರ ಜರ್ಮನಿ ಮತ್ತು ಜಪಾನ್ ಗಡಿಯಲ್ಲಿ ಎರಡೂ ದೇಶಗಳು ಜಂಟಿಯಾಗಿ ಕಾರ್ಖಾನೆ ಸ್ಥಾಪಿಸಿವೆ ಎಂದು ಹೇಳಿಕೆ ನೀಡಿದ್ದರು.

    ಇಮ್ರಾನ್ ಖಾನ್ ಅವರ ತಪ್ಪನ್ನು ಗುರುತಿಸಿದ ಪಾಕ್ ಪತ್ರಕರ್ತರು, ಜಪಾನ್ ಈಶಾನ್ಯ ಏಷ್ಯಾದ ಪೆಸಿಫಿಕ್ ದ್ವೀಪದಲ್ಲಿದೆ. ಜರ್ಮನಿಯು ಯುರೋಪ್‍ನ ಮಧ್ಯದಲ್ಲಿದೆ. ಎರಡನೇ ಮಹಾಯುದ್ಧದ ವೇಳೆ ಎರಡೂ ದೇಶಗಳು ಮಿತ್ರರಾಷ್ಟ್ರಗಳಾಗಿದ್ದವು. ಆದರೆ ಪ್ರಧಾನಿ ಇಮ್ರಾನ್ ಅವರು ತಪ್ಪಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಅವರು ವೀಡಿಯೊವನ್ನು ಟ್ವೀಟ್ ಮಾಡಿ ಮಾಡಿದ್ದು, ಜರ್ಮನಿ ಹಾಗೂ ಜಪಾನ್ ಗಡಿ ಹಂಚಿಕೊಂಡಿದ್ಯಾ? ಇದು ಪಾಕಿಸ್ತಾನದ ಪ್ರಧಾನಿಯವರ ಅಧ್ಯಯನ ಎಂದು ವ್ಯಂಗ್ಯವಾಡಿದ್ದಾರೆ.

    ಇಮ್ರಾನ್ ಖಾನ್ ಹೇಳಬೇಕಿದ್ದದ್ದು ಯುರೋಪಿಯನ್ ದೇಶಗಳಾದ ಜರ್ಮನಿ ಹಾಗೂ ಫ್ರಾನ್ಸ್ ಹೆಸರು. ಎರಡನೇ ಮಹಾಯುದ್ಧದ ನಂತರ ಈ ಎರಡೂ ದೇಶಗಳು ಆರ್ಥಿಕ ಹಾಗೂ ಸೇನಾ ಸಹಕಾರಕ್ಕೆ ಸಹಿ ಹಾಕಿದ್ದವು.

    ಈ ಹಿಂದೆಯೂ ಇಮ್ರಾನ್ ಖಾನ್ ಇಂತಹದ್ದೇ ಎಡವಟ್ಟು ಮಾಡಿಕೊಂಡಿದ್ದರು. ಆಫ್ರಿಕಾ ಮುಂದುವರಿಯುತ್ತಿರುವ ರಾಷ್ಟ್ರ ಎಂದು ಕಳೆದ ವರ್ಷ ಡಿಸೆಂಬರ್ ನಲ್ಲಿ ಹೇಳಿ ನೆಟ್ಟಿಗರ ಟೀಕೆಗೆ ಗುರಿಯಾಗಿದ್ದರು.

  • ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಹೈದರಾಬಾದ್: ‘ಬಾಹುಬಲಿ’ ಸಿನಿಮಾ ಯಶಸ್ವಿಯಾದ ಬಳಿಕ ಅಭಿಮಾನಿಗಳು ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಮಾತನಾಡುತ್ತಿದ್ದರು. ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಈಗ ಮತ್ತೆ ಒಟ್ಟಿಗೆ ಬಾಹುಬಲಿ ಜೋಡಿ ಜಪಾನ್‍ಗೆ ಪ್ರಯಾಣ ಬೆಳಸಲಿದ್ದಾರೆ.

    ನಟ ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು 5-6 ವರ್ಷಗಳನ್ನ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಹಾಗೂ ‘ಬಾಹುಬಲಿ 2’ ಸಿನಿಮಾಕ್ಕೆ ಮೀಸಲಿಟ್ಟಿದ್ದರು. ಇದರಿಂದಾಗಿ ಅವರು ಪಟ್ಟಂತಹ ಶ್ರಮಕ್ಕೆ ಪ್ರತಿಫಲ ಎಂಬಂತೆ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ಜೊತೆಗೆ ಈ ಎರಡು ಸಿನಿಮಾದ ಅಭಿನಯದ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

    ಅದೇ ರೀತಿ ಜಪಾನ್‍ನಲ್ಲಿ ಪ್ರಭಾಸ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅಲ್ಲಿ ಕೂಡ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿವೆ. ನಟ ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ‘ಮಿರ್ಚಿ’ ಹಾಗೂ ‘ಡಾರ್ಲಿಂಗ್’ ಸಿನಿಮಾಗಳು ಮುಂದಿನ ತಿಂಗಳ ಮಾರ್ಚ್ 2 ರಂದು ಜಪಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ.

    ‘ಮಿರ್ಚಿ’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮತ್ತು ‘ಡಾರ್ಲಿಂಗ್’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಹೀಗಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಜಪಾನ್ ಗೆ ಹೋಗಲಿದ್ದಾರೆ. ಈ ಬಗ್ಗೆ ತಿಳಿದ ಅವರ ಅಭಿಮಾನಿಗಳು ಮತ್ತೆ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈಗಾಗಲೇ ಪ್ರಭಾಸ್ ‘ಕಾಫಿ ವಿಥ್ ಕರಣ್’ ಶೋನಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವೆ ಏನೂ ಇಲ್ಲ. ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತ ಅನುಷ್ಕಾ ಕೂಡ ನನ್ನ ಪ್ರಭಾಸ್ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಜ ಜೀವನದಲ್ಲಿ ಬಾಹುಬಲಿ-ದೇವಾಸೇನಾ ರೀತಿ ಕೆಮಿಸ್ಟ್ರಿ ನಿರೀಕ್ಷಿಸಬೇಡಿ. ಅದು ಕೇವಲ ಬೆಳ್ಳಿ ಪರದೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv