Tag: japan

  • ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    ಚೀನಾಗೆ ಟಕ್ಕರ್ ನೀಡಲು ಜಪಾನ್, ಆಸ್ಟ್ರೇಲಿಯಾ, ಭಾರತ ಮಾಸ್ಟರ್ ಪ್ಲಾನ್

    – ಮೂರು ದೇಶಗಳ ಚೈನ್ ಲಿಂಕ್ ಮೂಲಕ ವ್ಯಾಪಾರ
    – ವರ್ಷಾಂತ್ಯದೊಳಗೆ ಸಪ್ಲೈ ಚೈನ್ ಬಲಪಡಿಸಲು ಕ್ರಮ
    – ಚೀನಾ ವಸ್ತುಗಳಿಗೆ ಬ್ರೇಕ್ ಹಾಕಲು ಕ್ರಮ
    – ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರು ದೇಶಗಳ ಸಚಿವರ ಸಭೆ

    ನವದೆಹಲಿ: ಬಹುತೇಕ ರಾಷ್ಟ್ರಗಳು ಚೀನಾದ ಉದ್ಧಟತನದಿಂದ ರೊಚ್ಚಿಗೆದ್ದಿದ್ದು, ಚೀನಾಗೆ ವ್ಯಾಪಾರ, ವಹಿವಾಟಿನ ಮೂಲಕವೇ ಟಕ್ಕರ್ ಕೊಡಲು ಮುಂದಾಗಿವೆ. ಈ ಹಿಂದೆ ಭಾರತ ಟಿಕ್ ಟಾಕ್ ಸೇರಿದಂತೆ ಚೀನಾದ ಹಲವು ಆ್ಯಪ್‍ಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಇದೇ ಹಾದಿಯನ್ನು ಅಮೆರಿಕ ಸಹ ತುಳಿದಿದೆ. ಆದರೆ ಇದೀಗ ಚೀನಾ ಸೊಕ್ಕು ಮುರಿಯಲು ಮತ್ತಷ್ಟು ದೇಶಗಳು ಪ್ಲಾನ್ ಮಾಡುತ್ತಿದ್ದು, ಭಾರತದೊಂದಿಗೆ ಕೈ ಜೋಡಿಸುತ್ತಿವೆ.

    ಇದರ ಭಾಗವಾಗಿ ಇದೀಗ ಜಪಾನ್, ಭಾರತ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳ ವಾಣಿಜ್ಯ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದು, ಇಂಡೋ- ಪೆಸಿಫಿಕ್ ಸಪ್ಲೈ ಚೈನ್(ಪೂರೈಕೆ ಸರಪಳಿ) ಸ್ಥಿತಿಸ್ಥಾಪಕತ್ವ ಸಾಧಿಸಲು ನಿರ್ಣಯ ಕೈಗೊಳ್ಳಲಾಗಿದೆ. ವ್ಯಾಪಾರ ವಲಯದಲ್ಲಿ ಚೀನಾ ತಾನೇ ಎಲ್ಲಾ ಎಂದು ಮೆರೆಯುತ್ತಿದೆ. ಈ ಅಹಂ ತೊಲಗಿಸಲು, ವ್ಯಾಪಾರದ ಮೇಲಿನ ಚೀನಾ ಪ್ರಾಬಲ್ಯವನ್ನು ಎದುರಿಸಲು ಮೂರು ದೇಶಗಳು ಒಟ್ಟಾಗುತ್ತಿವೆ. ಅಲ್ಲದೆ ಇನ್ನೂ ಹೆಚ್ಚಿನ ದೇಶಗಳು ಈ ಒಕ್ಕೂಟದಲ್ಲಿ ಸೇರುವ ಇಚ್ಛೆ ವ್ಯಕ್ತಪಡಿಸಿವೆ.

    ಈ ಮೂರು ದೇಶಗಳ ನಾಯಕರ ಜಂಟಿ ಹೇಳಿಕೆ ಪ್ರಕಾರ, ಈ ವರ್ಷದ ಕೊನೆಯ ವೇಳೆ ಸಪ್ಲೈ ಚೈನ್ ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗ ಇದಕ್ಕೆ ಬೇಕಾದ ವಿವರಗಳನ್ನು ಕಲೆ ಹಾಕುವಂತೆ ಆದೇಶಿಸಿದ್ದಾರೆ.

    ಮಂಗಳವಾರ ಮಧ್ಯಾಹ್ನ ನಡೆದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಜಪಾನ್‍ನ ಹಿರೋಷಿ ಕಾಜಿಯಾಮಾ, ಭಾರತದ ಪಿಯೂಷ್ ಗೋಯಲ್, ಆಸ್ಟ್ರೇಲಿಯಾದ ಸೈಮನ್ ಬರ್ಮಿಂಗ್‍ಹ್ಯಾಮ್ ಭಾಗವಹಿಸಿದ್ದು, ಸಪ್ಲೈ ಚೈನ್ ಬಲಪಡಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಈ ಇಂಡೋ- ಪೆಸಿಫಿಕ್ ಭಾಗದ ಇತರ ದೇಶಗಳು ಈ ಕುರಿತು ತಮ್ಮ ಅನಿಸಿಕೆ, ಅಭಿಪ್ರಾಯ, ಸಲಹೆ ತಿಳಿಸಿ ಭಾಗವಹಿಸುವಂತೆ ಕರೆ ನೀಡಿದ್ದಾರೆ.

    ಇಂಡೋ- ಪೆಸಿಫಿಕ್ ಭಾಗದಾದ್ಯಂತ ವ್ಯಾಪಾರ ಹಾಗೂ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆ ಚೀನಾದ ಪ್ರಾಬಲ್ಯವನ್ನು ಎದುರಿಸಲು ಈ ಮೂರು ರಾಷ್ಟ್ರಗಳು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ. ಬ್ಲೂಮ್ಬರ್ಗ್ ಸಹ ಸಪ್ಲೈ ಚೈನ್ ಬಲಪಡಿಸಲು ಹಲವು ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಭಾರತ ಹಾಗೂ ಜಪಾನ್ ಜನರನ್ನು ಉಲ್ಲೇಖಿಸಿ ಆಗಸ್ಟ್ ನಲ್ಲಿ ವರದಿ ಮಾಡಿತ್ತು.

    ರಾಷ್ಟ್ರೀಯ ಭದ್ರತಾ ಸಮಾಲೋಚನೆಗಾಗಿ ಅಮೆರಿಕ ಜೊತೆಗೆ ಜಪಾನ್, ಆಸ್ಟ್ರೇಲಿಯಾ ಹಾಗೂ ಭಾರತ ಗುಂಪು ರಚಿಸಿಕೊಂಡಿದ್ದು, ಈ ಮೂಲಕ ಚತುರ್ಭುಜ ಭದ್ರತಾ ಸಂವಾದ ಅಥವಾ ಕ್ವಾಡ್‍ನ ಸದಸ್ಯ ರಾಷ್ಟ್ರಗಳಾಗಿವೆ. ಇದೀಗ ವ್ಯಾಪರಕ್ಕೂ ಇದೇ ರೀತಿಯ ಸಮಾಲೋಚನೆ ನಡೆಸಲಾಗುತ್ತಿದೆ.

  • ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

    ಜಪಾನ್ ಪ್ರಧಾನಿ ಶಿಂಜೊ ಅಬೆ ರಾಜೀನಾಮೆ

    ಟೋಕಿಯೊ: ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜಪಾನ್ ಪ್ರಧಾನಿ ಶಿಂಬೊ ಅಬೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಯನ್ನು ಶಿಂಬೊ ಅಬೆ ಪಡೆದಿದ್ದಾರೆ.

    ರಾಜೀನಾಮೆ ನಿರ್ಧಾರದ ಕುರಿತು ಮಾತನಾಡಿರುವ 65 ವರ್ಷದ ಅಬೆ, ಜನರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ ನಾನು ಪ್ರಧಾನಿಯಾಗಲು ಸಾಧ್ಯವಿಲ್ಲ. ಆದ್ದರಿಂದ ನಾನು ಹುದ್ದೆಯಿಂದ ಕೆಳಗಿಳಿಯಲು ನಿರ್ಧಸಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಶಿಂಜೊ ಅಬೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿತ್ತು.

    ಸದ್ಯ ಶಿಂಜೊ ಅಬೆ ರಾಜೀನಾಮೆಯಿಂದ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್‍ಡಿಪಿ)ಯಲ್ಲಿ ನಾಯಕತ್ವದ ಸ್ಪರ್ಧೆ ಹೆಚ್ಚಾಗಿದೆ. ಮುಂದಿನ ಎರಡು ಅಥವಾ ಮೂರು ವಾರಗಳಲ್ಲಿ ನಿಯಮಗಳ ಅನ್ವಯ ಸಂಸತ್ತಿನಲ್ಲಿ ಹೊಸ ನಾಯಕರನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಆಯ್ಕೆಯಾಗುವ ಹೊಸ ನಾಯಕ ಅಬೆ ಅವರ ಉಳಿದ ಅವಧಿವರೆಗೂ ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.

    ಅಬೆ ರಾಜೀನಾಮೆ ನೀಡುತ್ತಿದ್ದಂತೆ ಜಪಾನ್ ಷೇರು ಮಾರುಕಟ್ಟೆ ಭಾರೀ ಕುಸಿತಕಂಡಿದೆ. ಷೇರು ಸೂಚಂಕ್ಯ ನಿಕ್ಕಿ ಇಂದು ಆರಂಭಗೊಂಡಾಗ 23,208ರಲ್ಲಿ ಇತ್ತು. ಆದರೆ ರಾಜೀನಾಮೆ ನೀಡುತ್ತಿದ್ದಾರೆ ಎಂಬ ಸುದ್ದಿ ಪ್ರಕಟವಾದ ಬಳಿಕ 22,735ಕ್ಕೆ ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡಿತ್ತು.

    ಅಂದಹಾಗೇ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012 ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.

  • ರಾಜೀನಾಮೆಗೆ ಮುಂದಾದ ಜಪಾನ್ ಪ್ರಧಾನಿ ಶಿಂಜೊ ಅಬೆ

    ರಾಜೀನಾಮೆಗೆ ಮುಂದಾದ ಜಪಾನ್ ಪ್ರಧಾನಿ ಶಿಂಜೊ ಅಬೆ

    ಟೋಕಿಯೊ: ಜಪಾನಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆ ಪಡೆದಿರುವ ಶಿಂಜೊ ಅಬೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಜಪಾನ್ ಸಾರ್ವಜನಿಕ ಪ್ರಸಾರ ವಾಹಿನಿ ಎನ್‍ಎಚ್‍ಕೆ ವರದಿ ಮಾಡಿದೆ.

    ದೀರ್ಘಕಾಲದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸರ್ಕಾರಕ್ಕೆ ಸಮಸ್ಯೆ ಆಗುವುದನ್ನು ತಪ್ಪಿಸಲು ಬಯಸಿ ಶಿಂಜೊ ಅಬೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಂದಹಾಗೇ ಅಬೆ ಅವರ ಆಡಳಿತಾವಧಿ 2021 ಸೆಪ್ಟೆಂಬರ್ ಗೆ ಕೊನೆಯಾಗಲಿದೆ.

    ಶಿಂಜೊ ಅಬೆ ಹಲವು ವರ್ಷಗಳಿಂದ ಅಲ್ಸರೇಟಿವ್ ಕೊಲೈಟಿಸ್ (ದೊಡ್ಡ ಕರಳಿನ ಭಾಗದಲ್ಲಿ ಅಲ್ಸರ್)ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇತ್ತೀಚೆಗಷ್ಟೇ ಒಂದು ವಾರದಲ್ಲಿ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದರು. ಈ ನಡೆ ಅವರು ತಮ್ಮ ಪದವಿಯಲ್ಲಿ ಮುಂದುವರಿಯುವ ಕುರಿತು ಅನುಮಾನಕ್ಕೆ ಕಾರಣವಾಗಿತ್ತು.

    ಇಂದು ಸಂಜೆ ಈ ಕುರಿತು ಇಂದು ಸಂಜೆ 5 ಗಂಟೆಗೆ ಅಧಿಕೃತ ಪತ್ರಿಕಾಗೋಷ್ಠಿ ನಡೆಯುವ ಸಾಧ್ಯತೆ ಇದೆ. ಉಳಿದಂತೆ ಕಳೆದ ಸೋಮವಾರದಂದು ಜಪಾನ್ ಪ್ರಧಾನಿಯಾಗಿ ಶಿಂಜೊ ಅಬೆ ಅವರು ದೀರ್ಘ ಕಾಲ ಸೇವೆ ಸಲ್ಲಿಸಿದ ದಾಖಲೆ ಬರೆದರು. ಈ ಹಿಂದೆ ಶಿಂಜೊ ಅಬೆ ಅವರ ದೊಡ್ಡಪ್ಪ ಐಸಾಕು ಸಾಟೊ ಅವರು 1964 ರಿಂದ 1972ರ ವರೆಗೂ 2798 ದಿನ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದರು. ಈ ದಾಖಲೆಯನ್ನು ಶಿಂಜೊ ಮುರಿದ್ದರು. 2012ರಿಂದ ಈವರೆಗೂ ಶಿಂಜೊ ಅಧಿಕಾರದಲ್ಲಿದ್ದು, ಸೋಮವಾರಕ್ಕೆ 2,799 ದಿನಗಳನ್ನು ಪೂರೈಸಿದ್ದರು. ಉಳಿದಂತೆ ಮುಂದಿನ ತಿಂಗಳು ಶಿಂಜೊ ಅಬೆ ತಮ್ಮ 66ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ.

    ಕೊರೊನಾ ನಿರ್ವಹಣೆ ಹಾಗೂ ಪಕ್ಷದ ನಾಯಕರು ನಡೆಸಿದ ಹಗರಣಗಳನ್ನು ಉತ್ತಮವಾಗಿ ನಿಭಾಯಿಸದ ಹಿನ್ನೆಲೆಯಲ್ಲಿ ಅವರ ಬೆಂಬಲದ ಸಂಖ್ಯೆ ಸುಮಾರು 8 ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಇಳಿದಿತ್ತು. ಅಬೆ ತಮ್ಮ ಆಡಳಿತ ಅವಧಿಯಲ್ಲಿ ಸಶಸ್ತ್ರ ಪಡೆಗಳ ಖರ್ಚು ಹಾಗೂ ಅವುಗಳ ಪಾತ್ರವನ್ನು ವಿಸ್ತರಿಸಿದ್ದರು. ಅಲ್ಲದೇ ಅವರ ಶಾಂತಿ ಮಂತ್ರದ ಕನಸು ಸಾರ್ವಜನಿಕ ಅಭಿಪ್ರಾಯದಿಂದಾಗಿ ದೂರವಾಗಿತ್ತು ಎನ್ನಲಾಗಿದೆ. 2007 ರಲ್ಲಿ ಸರ್ಕಾರದಲ್ಲಾದ ಹಗರಣ ಹಾಗೂ ಭಾರೀ ಚುನಾವಣಾ ನಷ್ಟವನ್ನುಂಟು ಮಾಡಿದ ಕಾರಣ ಅವರು ಏಕಾಏಕಿ ರಾಜೀನಾಮೆ ನೀಡಿದ್ದರು.

  • ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಆನ್‍ಲೈನ್‍ಲ್ಲಿ ನಡತೆಯ ಬಗ್ಗೆ ಟೀಕೆ – 22ನೇ ವಯಸ್ಸಿಗೆ ಜಪಾನಿಸ್ ನಟಿ ಸಾವು

    ಟೋಕಿಯೊ: ಸಾಮಾಜಿಕ ಜಾಲತಾಣದಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಜಪಾನಿಸ್ ನಟಿ ಹಾಗೂ ವೃತ್ತಿಪರ ಕುಸ್ತಿಪಟು ಸಾವನ್ನಪ್ಪಿದ್ದಾರೆ.

    ಸಾವನ್ನಪ್ಪಿದ ನಟಿಯನ್ನು 22 ವರ್ಷದ ಹಾನಾ ಕಿಮುರಾ ಎಂದು ಗುರುತಿಸಲಾಗಿದೆ. ಈಕೆ ನೆಟ್‍ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಜಪಾನಿಸ್‍ನ ಜನಪ್ರಿಯ ವೆಬ್ ಸೀರೀಸ್ ‘ಟೆರೇಸ್ ಹೌಸ್’ ನಲ್ಲಿ ನಟಿಸುತ್ತಿದ್ದರು. ಜೊತೆಗೆ ಈಕೆ ವೃತ್ತಿಪರ ಕುಸ್ತಿಪಟು ಆಗಿದ್ದರು. ಆದರೆ ಆನ್‍ಲೈನ್ ಅಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸಾವನ್ನಪ್ಪಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಹಾನಾ ಕಿಮುರಾಳ ಕುಸ್ತಿ ಸಂಸ್ಥೆ, ಆಕೆಯ ಸಾವಿಗೆ ನಿಖರವಾದ ಕಾರಣ ನಮಗೂ ಗೊತ್ತಿಲ್ಲ. ಆಕೆ ತುಂಬ ಪ್ರತಿಭಾನ್ವಿತ ನಟಿ ಮತ್ತು ಕುಸ್ತಿಪಟು. ಬಹಳ ಗಟ್ಟಿ ಮನಸ್ಸು ಇದ್ದ ಹುಡುಗಿ ಎಂದು ಹೇಳಿದ್ದಾರೆ. ಜೊತೆಗೆ ಅವಳು ಸಾಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ಗುಡ್‍ಬಾಯ್ ಎಂಬ ಪೋಸ್ಟ್ ಅನ್ನು ಹಾಕಿಕೊಂಡಿದ್ದಾಳೆ ಎಂದು ಕುಸ್ತಿ ಸಂಸ್ಥೆ ತಳಿಸಿದೆ.

    ಈ ಬಗ್ಗೆ ಜಪಾನಿನ ಲೋಕಲ್ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದು, ಹಾನಾ ಕಿಮುರಾ ಟೆರೇಸ್ ಹೌಸ್‍ ನಲ್ಲಿ ಮಾಡಿದ ಪಾತ್ರವನ್ನು ಗುರಿಯಾಗಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಡತೆಯ ಬಗ್ಗೆ ಕೆಟ್ಟದಾಗ ಟ್ರೋಲ್ ಮಾಡಲಾಗಿತ್ತು. ಈ ಕಾರಣದಿಂದ ಆಕೆ ಮನನೊಂದು ಸಾವನ್ನಪ್ಪಿರಬಹುದು ಎಂದು ಹೇಳಿದೆ. ಆದರೆ ಆಕೆ ಶನಿವಾರ ಸಾವನ್ನಪ್ಪಿದ್ದು, ಹಾನಾ ಯಾಕೆ ಸಾವನ್ನಪ್ಪಿದಳು ಎಂದು ನಿಖರ ಕಾರಣ ತಿಳಿದು ಬಂದಿಲ್ಲ.

    ಈ ಬಗ್ಗೆ ನೆಟ್‍ಫ್ಲಿಕ್ಸ್ ಮತ್ತು ಜಪಾನ್‍ನ ಫ್ಯೂಜಿ ಟೆಲಿವಿಷನ್ ಕೂಡ ಸುದ್ದಿ ಪ್ರಸಾರ ಮಾಡಿದ್ದು, ನಟಿ ಹಾನಾ ಕಿಮುರಾ ಸಾವನ್ನಪ್ಪಿದರು ಎಂದು ಹೇಳಲು ದುಖಃವಾಗುತ್ತಿದೆ. ಜಪಾನಿನ ಮಹಿಳಾ ಕುಸ್ತಿಪಟು ಆಗಿದ್ದ ಹಾನಾ ಸಾವಿಗೆ ಗೌರವ ಸಿಗಲಿ. ಅವಳ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಆಕೆಯ ಸಾವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಎರಡು ಮಾಧ್ಯಮಗಳು ಹೇಳಿವೆ.

    https://www.instagram.com/p/CAf_XFcJ8jQ/

    ಹಾನಾ ತಾನು ಸಾಯುವುದಕ್ಕೂ ಮುನ್ನಾ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕಿದ್ದು, ಇದರಲ್ಲಿ ಒಂದು ಬೆಕ್ಕಿನ ಜೊತೆ ಫೋಟೋ ಹಾಕಿ ‘ಐ ಲವ್ ಯು, ಖುಷಿಯಾದ ಜೀವನ, ನನ್ನನ್ನು ಕ್ಷಮಿಸು’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಸಾವು ದೃಢಪಟ್ಟ ಕೂಡಲೇ ಮಾಧ್ಯಮವೊಂದು ಆಕೆಯ ಶವದ ಫೋಟೋವನ್ನು ಪ್ರಸಾರ ಮಾಡಿದೆ. ಆದರ ಜೊತೆಗೆ ಆಕೆ ಕೊನೆಯದಾಗಿ ಗುಡ್‍ಬಾಯ್ ಎಂದು ಪೋಸ್ಟ್ ಮಾಡಿದ್ದಾಳೆ ಎಂದು ಹೇಳಿದೆ.

    https://www.instagram.com/p/BwHSq4HnBDF/

    ಜಪಾನ್‍ನಲ್ಲಿ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ಇಬ್ಬರು ಕೆ-ಪಾಪ್ ಸಿಂಗರ್‍ಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲಿಗೆ ಹಾನಾ ಕಿಮೂರಾ ಅವರು ಸೇರಿದ್ದಾರೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಪಾನಿನ ಸೈಬರ್ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

  • ಸ್ಟಂಟ್ ಅಳವಡಿಕೆ ವೇಳೆ ಭಯ, ವೈದ್ಯರಿಂದ ಯಡವಟ್ – ಸರ್ವಾಧಿಕಾರಿ ಕಿಮ್ ಸಾವು?

    ಸ್ಟಂಟ್ ಅಳವಡಿಕೆ ವೇಳೆ ಭಯ, ವೈದ್ಯರಿಂದ ಯಡವಟ್ – ಸರ್ವಾಧಿಕಾರಿ ಕಿಮ್ ಸಾವು?

    ಟೋಕಿಯೋ: ಕಳೆದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮೃತಪಟ್ಟಿದ್ದಾರೆ ಎಂದು ಜಪಾನ್ ಮತ್ತು ಚೀನಾದ ಮಾಧ್ಯಮಗಳು ವರದಿ ಮಾಡಿವೆ.

    ಕೆಲ ದಿನಗಳ ಹಿಂದೆ ಕಿಮ್ ಜಾಂಗ್ ಹೃದಯ, ರಕ್ತನಾಳದ ಶಸ್ತ್ರಚಿಕಿತ್ಸೆಗೊಳಪಟ್ಟಿದ್ದು, ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ  ಎನ್ನಲಾಗಿತ್ತು. ಇದೀಗ ಕಿಮ್ ಜಾಂಗ್ ಮೃತಪಟ್ಟಿದ್ದಾರೆ ಎಂಬ ಸುದ್ದಿ ಚೀನಾ, ಹಾಂಕಾಂಗ್, ಜಪಾನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೃತಪಟ್ಟ ವಿಚಾರದ ಬಗ್ಗೆ ಉತ್ತರ ಕೊರಿಯಾದ ಸರ್ಕಾರಿ ಟಿವಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಿಮ್ ಹೃದಯಕ್ಕೆ ಸ್ಟಂಟ್ ಅಳವಡಿಸುವಾಗ ವೈದ್ಯರ ಕೈ ಭಯದಿಂದ ವಿಪರೀತವಾಗಿ ನಡುಗಿ ಎಡವಟ್ ಆಗಿದೆ. ಇದರಿಂದಲೇ ಕಿಮ್ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    https://twitter.com/DontDregMeBro/status/1254224923662278656

    ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಅಂತರರಾಷ್ಟ್ರೀಯ ಸಂಪರ್ಕ ವಿಭಾಗದ ಹಿರಿಯ ಸದಸ್ಯರ ನೇತೃತ್ವದಲ್ಲಿ ವೈದ್ಯರ ನಿಯೋಗವು ಬೀಜಿಂಗ್‍ನಿಂದ ಪ್ಯೊಂಗ್ಯಾಂಗ್‍ಗೆ ಗುರುವಾರ ಹೋಗಿತ್ತು. ಕಿಮ್ ಜಾಂಗ್-ಉನ್ ಚೈನ್ ಸ್ಮೋಕರ್ ಆಗಿದ್ದು, ಅವರ ದೇಹದ ತೂಕ ಜಾಸ್ತಿಯಾಗಿದೆ. ಜೊತೆಗೆ ಅವರ ಕುಟುಂಬ ಈ ಹಿಂದೆಯಿಂದಲೂ ಹೃದಯರಕ್ತನಾಳದ ಸಮಸ್ಯೆಯನ್ನು ಬಳಲಿದ್ದ ಇತಿಹಾಸವನ್ನು ಹೊಂದಿತ್ತು.

    https://twitter.com/DontDregMeBro/status/1254222123779801088

    ಈ ಮುಂಚೆಯಿಂದಲೂ ಚೀನಾ ಮತ್ತು ಉತ್ತರ ಕೊರಿಯಾದ ಸಂಬಂಧ ಉತ್ತಮವಾಗಿದೆ. ಕಳೆದ ಕೆಲ ವರ್ಷಗಳಿಂದ ಚೀನಾದ ಅಧಿಕಾರಿಗಳು ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಸೇರಿ ಹಲವಾರು ಬಾರಿ ಕಿಮ್ ಜಾಂಗ್-ಉನ್ ಅನ್ನು ಭೇಟಿಯಾಗಿ ಬಂದಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಕಿಮ್ ಜಾಂಗ್-ಉನ್ ಆರೋಗ್ಯ ಹದೆಗೆಟ್ಟ ಸಮಯದಲ್ಲಿ ಚೀನಾ ವೈದ್ಯರನ್ನು ಕಳುಹಿಸಿಕೊಟ್ಟಿದೆ. ಆದರೆ ಈ ಬಗ್ಗೆ ಚೀನಾ ಎಲ್ಲೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

    https://www.youtube.com/watch?time_continue=20&v=mCobSW8aYK8&feature=emb_title

    ಕಿಮ್ ಜಾಂಗ್-ಉನ್ ಸರ್ವಾಧಿಕಾರಿಯಾಗಿದ್ದು, ಹೆಚ್ಚು ಹೆಚ್ಚು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿದ್ದರು. ಆದರೆ ಏಪ್ರಿಲ್ 11ರ ನಂತರ ಕಿಮ್ ಜಾಂಗ್-ಉನ್ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ವರದಿಗಳ ಪ್ರಕಾರ ಕಿಮ್ ಏಪ್ರಿಲ್ 15 ರಂದು ನಡೆದ ತನ್ನ ಅಜ್ಜ ಮತ್ತು ಉತ್ತರ ಕೊರಿಯಾ ಸಂಸ್ಥಾಪಕ ಕಿಮ್ ಇಲ್ ಸುಂಗ್ ಅವರ ಹುಟ್ಟುಹಬ್ಬದ ಆಚರಣೆಗೂ ಗೈರು ಹಾಜರಾಗಿದ್ದರು. ಅಧಿಕಾರಕ್ಕೆ ಏರಿದ ಬಳಿಕ ಇಲ್ಲಿಯವರೆಗೆ ಈ ಕಾರ್ಯಕ್ರಮಕ್ಕೆ ಗೈರಾಗಿರಲಿಲ್ಲ. ಈ ಕಾರಣದಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.

    ಉತ್ತರ ಕೊರಿಯಾ ತಮ್ಮ ದೇಶದ ನಾಯಕರ ಆರೋಗ್ಯದ ವಿಚಾರವನ್ನು ರಾಷ್ಟ್ರದ ಭದ್ರತೆಯ ವಿಚಾರವೆಂದು ಪರಿಗಣಿಸುತ್ತದೆ. ಈ ಕಾರಣಕ್ಕೆ ಕಿಮ್ ಆರೋಗ್ಯ ಬಗ್ಗೆ ಎಲ್ಲಿಯೂ ಸುದ್ದಿ ಪ್ರಕಟವಾಗಿಲ್ಲ. ಆದರೆ ಈ ಎಲ್ಲದರ ಮಧ್ಯೆ ಸರ್ಕಾರಿ ಸ್ವಾಮ್ಯದ ಕೊರಿಯಾದ ಕೇಂದ್ರ ಸುದ್ದಿ ಸಂಸ್ಥೆಯೊಂದು ಕಿಮ್ ಕಳೆದ ಬುಧವಾರ ಸಿರಿಯಾ ದೇಶದ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಅವರಿಗೆ ಸಂದೇಶವೊಂದನ್ನು ಕಳುಹಿಸಿದ್ದಾರೆ ಎಂದು ಸುದ್ದಿ ಮಾಡಿದೆ.

    ಈ ಹಿಂದೆ ಅಮೆರಿಕ ಮೂಲದ ಸುದ್ದಿ ಸಂಸ್ಥೆಯೊಂದು ಕಿಮ್ ಹೃದಯರಕ್ತನಾಳದ ಸರ್ಜರಿಗೆ ಒಳಗಾಗಿದ್ದರು ಎಂದು ಸುದ್ದಿ ಮಾಡಿತ್ತು. ಜೊತೆಗೆ ನಮಗೆ ಬಂದ ಗುಪ್ತ ಮಾಹಿತಿ ಪ್ರಕಾರ ಈ ಸರ್ಜರಿಯ ನಂತರ ಕಿಮ್ ಆರೋಗ್ಯ ಪರಿಸ್ಥಿತಿ ತುಂಬ ಹದಗೆಟ್ಟಿದೆ ಎಂದು ವರದಿ ಮಾಡಿತ್ತು. ಬುಧವಾರ ಈ ಬಗ್ಗೆ ಮಾಹಿತಿ ನೀಡಿದ್ದ ಚೀನಾ ರಾಯಭಾರಿ ಕಚೇರಿ ವಕ್ತಾರ, ನಮಗೆ ಕಿಮ್ ಆರೋಗ್ಯದ ಬಗ್ಗೆ ಮಾಹಿತಿ ಇದೆ. ಆದರೆ ಈ ಸಮಯದಲ್ಲಿ ಅದನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

  • ಕೊರೊನಾ ನಿಯಂತ್ರಣ – ಕುವೈತ್‍ನಲ್ಲಿ ಇಳಿಯಿತು ಭಾರತೀಯ ವೈದ್ಯರ ತಂಡ

    ಕೊರೊನಾ ನಿಯಂತ್ರಣ – ಕುವೈತ್‍ನಲ್ಲಿ ಇಳಿಯಿತು ಭಾರತೀಯ ವೈದ್ಯರ ತಂಡ

    ನವದೆಹಲಿ: ಕೊರೊನಾ ನಿಯಂತ್ರಣ ಸಂಬಂಧ ಭಾರತದ 15 ಮಂದಿ ವೈದ್ಯರ ತಂಡ ಕುವೈತ್ ದೇಶಕ್ಕೆ ತೆರಳಿದೆ.

    ಕ್ಷಿಪ್ರ ಪ್ರತಿಕ್ರಿಯೆ ಪಡೆಯ 15 ಮಂದಿ ಸದಸ್ಯರು ವಾಯುಸೇನೆ ಸಿ130 ವಿಮಾನದಲ್ಲಿ ಇಂದು ಕುವೈತ್ ತಲುಪಿದ್ದಾರೆ. ಕೊರೊನಾ ನಿಯಂತ್ರಣ ಸಂಬಂಧ ಎರಡು ದೇಶಗಳ ಪ್ರಧಾನಿಗಳು ಮಾತುಕತೆ ನಡೆಸಿದ್ದರು. ಕುವೈತ್ ಜೊತೆಗಿನ ಉತ್ತಮ ಬಾಂಧವ್ಯದ ಹಿನ್ನೆಲೆಯಲ್ಲಿ ಭಾರತ ವೈದ್ಯರನ್ನು ಕಳುಹಿಸಿಕೊಟ್ಟಿದೆ.

    ಭಾರತದ ವೈದ್ಯರ ತಂಡ ಕೊರೊನಾ ಪರೀಕ್ಷೆ ಮತ್ತು ಚಿಕಿತ್ಸೆ ನಡೆಸುವ ವಿಧಾನದ ಬಗ್ಗೆ ಅಲ್ಲಿನ ಆರೋಗ್ಯ ಸಿಬ್ಬಂದಿಗೆ 2 ವಾರಗಳ ಕಾಲ ತರಬೇತಿ ನೀಡಲಿದ್ದಾರೆ. ಕುವೈತ್ ಸರ್ಕಾರದ ಮನವಿಯ ಮೇರೆಗೆ ಭಾರತದ ವೈದ್ಯರ ತಂಡ ತೆರಳಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

    ಕುವೈತ್ ನಲ್ಲಿ 993 ಮಂದಿಗೆ ಕೊರೊನಾ ಬಂದಿದ್ದು ಓರ್ವ ರೋಗಿ ಮೃತಪಟ್ಟಿದ್ದು, 133 ಮಂದಿ ಗುಣಮುಖರಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಸಹಾಯ ಮಾಡಲೆಂದು ಭಾರತದ ವೈದ್ಯರು ಒಂದು ದೇಶಕ್ಕೆ ತೆರಳುತ್ತಿರುವುದು ಇದು ಮೊದಲು. ಕೊರೊನಾ ನಿಯಂತ್ರಣ ಸಂಬಂಧ ನೆರೆಯ ರಾಷ್ಟ್ರಗಳ ಜೊತೆಗಿನ ಮಾತುಕತೆಯ ವೇಳೆ ಪ್ರಧಾನಿ ಮೋದಿ ಭಾರತದ ಕ್ಷಿಪ್ರ ಪ್ರತಿಕ್ರಿಯೆ ಪಡೆ ಸಹಾಯ ಪಡೆಯಬಹುದು ಎಂದು ತಿಳಿಸಿದ್ದರು. ಮುಂದೆ ಭಾರತದ ಒಂದು ತಂಡ ನೇಪಾಳ ಮತ್ತು ಮಾಲ್ಡೀವ್ಸ್ ಗೆ ತೆರಳುವ ಸಾಧ್ಯತೆಯಿದೆ.

    ಸಾರ್ಕ್ ರಾಷ್ಟ್ರಗಳು ಅಲ್ಲದೇ ವಿಶ್ವದ ಹಲವು ರಾಷ್ಟ್ರಗಳ ನಾಯಕರ ಜೊತೆ ಮೋದಿ ಮಾತನಾಡಿದ್ದಾರೆ. ಶುಕ್ರವಾರ ನೇಪಾಳ ಪ್ರಧಾನಿ ಕೆ.ಪಿ ಶರ್ಮಾ  ಒಲಿ ಮತ್ತು ಜಪಾನ್ ಪ್ರಧಾನಿ ಶಿಂಜೋ ಅಬೆಯ ಜೊತೆ ಕೊರೊನಾ ವೈರಸ್ ನಿಯಂತ್ರಣ ಸಂಬಂಧ ಮಾತನಾಡಿದ್ದರು.

    ಕೊರೊನಾಗೆ ಸದ್ಯಕ್ಕೆ ಯಾವುದೇ ಔಷಧಿ ಇಲ್ಲ. ಆದರೆ ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿದ ಹಿನ್ನೆಲೆಯಲ್ಲಿ ಅಮೆರಿಕ, ಸ್ಪೇನ್, ಜರ್ಮನಿ, ಬಹರೇನ್, ಬ್ರೆಜಿಲ್, ನೇಪಾಳ, ಭೂತಾನ್, ಅಫ್ಘಾನಿಸ್ತಾನ, ಶ್ರೀಲಂಕಾ, ಮಾಲ್ಡೀವ್ಸ್, ಬಾಂಗ್ಲಾದೇಶ, ಸೀಶೆಲ್ಸ್, ಮಾರಿಷಸ್ ಮತ್ತು ಡೊಮಿನಿಕನ್ ರಿಪಬ್ಲಿಕ್ ದೇಶಗಳಿಗೆ ಮಾತ್ರೆಯನ್ನು ಭಾರತ ರಫ್ತು ಮಾಡಿದೆ.

  • ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ಕೊರೊನಾಗೆ ದೇಶದಲ್ಲಿ 4ನೇ ಬಲಿ – ಪಂಜಾಬ್‍ನಲ್ಲಿ ವ್ಯಕ್ತಿ ಸಾವು

    ನವದೆಹಲಿ: ದಿನದಿಂದ ದಿನಕ್ಕೆ ಆತಂಕ ಸೃಷ್ಟಿಸುತ್ತಿರುವ ಕೊರೊನಾ ವೈರಸ್ ಸೋಂಕಿಗೆ ಪಂಜಾಬ್ ನಲ್ಲಿ ಮೊದಲ ಬಲಿಯಾಗಿದ್ದು ದೇಶದಲ್ಲಿ ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.

    ಕೊರೊನಾ ಸೋಂಕಿನಿಂದ ವ್ಯಕ್ತಿ ಮೃತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಮೃತ ವ್ಯಕ್ತಿ 70 ವರ್ಷದವರಾಗಿದ್ದು ಜಪಾನ್ ನಿಂದ ಭಾರತಕ್ಕೆ ವಾಪಸ್ ಆಗಿದ್ದರು. ತಪಾಸಣೆ ವೇಳೆ ಇವರಲ್ಲಿ ಕೊರೊನಾ ಸೋಂಕಿರುವುದು ದೃಢಪಟ್ಟಿತ್ತು.

    ಮೃತ ವೃದ್ಧನಿಗೆ ಕೊರೊನಾ ಸೊಂಕಿನ ಜೊತೆಗೆ ಅಧಿಕ ರಕ್ತದೊತ್ತಡ, ಮಧುಮೇಹದಿಂದ ಬಳಲುತ್ತಿದ್ದರು. ಇಂದು ಅವರು ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.

    ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಇದುವರೆಗೂ ದೇಶದಲ್ಲಿ 142 ಮಂದಿ ಭಾರತೀಯರು 25 ವಿದೇಶಿ ಪ್ರವಾಸಿಗರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ. ಇದುವರೆಗೂ 15 ಮಂದಿ ಸಂಪೂರ್ಣ ಗುಣ ಮುಖರಾಗಿದ್ದಾರೆ.

    ಕರ್ನಾಟಕದಲ್ಲಿ 14 ಮಂದಿಯಲ್ಲಿ ವೈರಸ್ ಸೋಂಕು ದೃಢಪಟ್ಟಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

  • ಜಪಾನ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರು ವಾಪಸ್

    ಜಪಾನ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರು ವಾಪಸ್

    – ವಿಶೇಷ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಭಾರತೀಯರು
    – 4 ದೇಶಗಳ ಪ್ರಜೆಗಳನ್ನು ಕರೆತಂದ ಭಾರತ

    ನವದೆಹಲಿ/ಕಾರವಾರ: ಜಪಾನ್ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿದ್ದ ಕಾರವಾರದ ಅಭಿಷೇಕ್ ಸೇರಿದಂತೆ 119 ಭಾರತೀಯರನ್ನು ಭಾರತ ಸರ್ಕಾರ ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದೆ.

    119 ಮಂದಿ ಭಾರತೀಯರಿದ್ದ ಏರ್ ಇಂಡಿಯಾ ವಿಶೇಷ ವಿಮಾನ ಟೋಕಿಯೋದಿಂದ ಹೊರಟು ಇಂದು ಬೆಳಗ್ಗೆ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.

    ಈ ವೇಳೆ ಸರ್ಕಾರ ಮಾನವೀಯತೆ ತೋರಿಸಿದ್ದು, ಹಡಗಿನಲ್ಲಿದ್ದ ಶ್ರೀಲಂಕಾ, ನೇಪಾಳ, ದಕ್ಷಿಣ ಆಫ್ರಿಕಾ, ಪೆರು ದೇಶದ ಪ್ರಜೆಗಳನ್ನು ಕರೆದುಕೊಂಡು ಬಂದಿದೆ.

    ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಸಿಬ್ಬಂದಿ ಸೇರಿ 132 ಭಾರತೀಯರು ಸೇರಿ ಬೇರೆ ದೇಶದ 6 ಮಂದಿ ಪ್ರಯಾಣಿಸುತ್ತಿದ್ದರು. ಪರೀಕ್ಷೆ ನಡೆಸಿದ ವೇಳೆ 16 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದ ಹಿನ್ನೆಲೆಯಲ್ಲಿ ಅವರು ಜಪಾನಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಳಿದ ಭಾರತೀಯರು ಇಂದು ಲ್ಯಾಂಡ್ ಆಗಿದ್ದಾರೆ.

    ಅಭಿಷೇಕ್ ಅವರ ನವದೆಹಲಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಕಾರವಾರದ ಪದ್ಮನಾಭ ನಗರದ ಅಭಿಷೇಕ್ ಮನೆಗೆ ತರಳಿ ಸಂಪರ್ಕಿಸಲು ಪ್ರಯತ್ನಿಸಿದೆ. ಈ ವೇಳೆ ದೆಹಲಿಗೆ ಬಂದಿರುವ ಅಭಿಷೇಕ್ ಅವರನ್ನು ಹೆಚ್ಚಿನ ತಪಾಸಣೆಗೆ ಹರ್ಯಾಣಕ್ಕೆ ಕರೆದುಕೊಂಡು ಹೋಗಿದ್ದಾರೆ. 14 ದಿನಗಳ ಕಾಲ ಅವರ ಆರೋಗ್ಯವನ್ನು ಪರೀಕ್ಷಿಸಿ ಬಳಿಕ ಅವರು ಆಸ್ಪತ್ರೆಯಿಂದ ಹೊರ ಬರಲಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.

    ಜಪಾನಿನ ಯೊಕೊಹಾಮ ಬಂದರಿನಿಂದ ಜ.20 ರಂದು ಹೊರಟಿದ್ದ ಡೈಮಂಡ್ ಪ್ರಿನ್ಸೆಸ್ ಹಡಗು ಜ.25 ರಂದು ಹಾಂಕಾಂಗ್ ತಲುಪಿತ್ತು. ಈ ವೇಳೆ ಕೊರೊನಾ ವೈರಸ್ ಹರಡಿತ್ತು. ಫೆ.1 ರಂದು ಯೊಕೊಹಾಮ ಬಂದ­ರಿನಲ್ಲಿ ನಿಂತಿದ್ದ ಈ ಹಡಗಿನಿಂದ ಯಾರೂ ಹೊರ ಬಾರದಂತೆ ದಿಗ್ಭಂದನ ವಿಧಿಸಲಾಗಿತ್ತು. ಇದಾದ ಬಳಿಕ ಹಡಗಿನಲ್ಲಿದ್ದ ಇಬ್ಬರು ವೃದ್ಧರು ಮೃತಪಟ್ಟಿದ್ದರು.

  • ಬೆತ್ತಲಾಗಿ ದೇಗುಲಕ್ಕೆ ಬಂದ 10 ಸಾವಿರ ಭಕ್ತಾದಿಗಳು

    ಬೆತ್ತಲಾಗಿ ದೇಗುಲಕ್ಕೆ ಬಂದ 10 ಸಾವಿರ ಭಕ್ತಾದಿಗಳು

    – ಹಡಕಾ ಮತ್ಸುರಿ ಹಬ್ಬದಲ್ಲಿ ವಿಚಿತ್ರ ಆಚರಣೆ

    ಟೋಕಿಯೋ: ಜಗತ್ತಿನಾದ್ಯಂತ ಚಿತ್ರ ವಿಚಿತ್ರ ಸಂಪ್ರದಾಯ, ಆಚರಣೆಗಳನ್ನು ಪಾಲಿಸುವ ಸಮುದಾಯ, ಜನರು ಇರುತ್ತಾರೆ. ಅದರಲ್ಲೂ ಕೆಲ ವಿಚಿತ್ರ ಪದ್ಧತಿ, ಆಚರಣೆಗಳು ಹೆಚ್ಚು ಸದ್ದು ಮಾಡುತ್ತವೆ. ಅದರಲ್ಲಿ ಬೆತ್ತಲಾಗಿ ದೇಗುಲಕ್ಕೆ ತೆರಳಿ ಪೂಜೆ ಮಾಡುವ ಆಚರಣೆ ಕೂಡ ಒಂದಾಗಿದೆ.

    ಜಪಾನ್‍ನಲ್ಲಿ ಇಂತಹ ವಿಚಿತ್ರ ಆಚರಣೆಯೊಂದನ್ನು ಜನ ಪಾಲಿಸಿಕೊಂಡು ಬಂದಿದ್ದಾರೆ. ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದಿರುವ ಜಪಾನ್ ಅಂತಹ ರಾಷ್ಟ್ರದಲ್ಲೂ ಇಂತಹ ವಿಚಿತ್ರ ಆಚರಣೆ ನಡೆಯುತ್ತದೆ ಎಂದರೆ ನಂಬಲು ಆಗಲ್ಲ. ಆದರೂ ಇದು ಸತ್ಯ.

    ಇದಕ್ಕೆ ‘ಹಡಕಾ ಮತ್ಸುರಿ’ ಹಬ್ಬ ಎಂದು ಕರೆಯಲಾಗುತ್ತೆ. ಪ್ರತಿ ವರ್ಷ ಫೆಬ್ರವರಿ ತಿಂಗಳ ಎರಡನೇ ಶನಿವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಬೆತ್ತಲಾಗಿ ದೇವಸ್ಥಾನಕ್ಕೆ ಹೋಗಿ, ಪೂಜೆ ಸಲ್ಲಿಸುವುದು ಈ ಹಬ್ಬದ ವಿಶೇಷತೆಯಾಗಿದ್ದು, ‘ಹಡಕಾ ಮತ್ಸುರಿ’ ಹಬ್ಬಕ್ಕೆ ಬೆತ್ತಲೆ ಹಬ್ಬ ಎಂದು ಕೂಡ ಕರೆಯಲಾಗುತ್ತದೆ.

    ಜಪಾನ್‍ನ ಓಕಾಯಾಮಾ ನಗರದಲ್ಲಿ ನಿರ್ಮಿಸಲಾಗಿರುವ ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಪುರುಷ ಭಕ್ತರು ಬೆತ್ತಲಾಗಿ ಪೂಜೆ ಮಾಡಲು ಹೋಗುತ್ತಾರೆ. ಪ್ರತಿ ವರ್ಷದಂತೆ ಈ ಬಾರಿಯೂ ‘ಹಡಕಾ ಮತ್ಸುರಿ’ ಹಬ್ಬ ಆಚರಿಸಲಾಯಿತು. ಈ ಆಚರಣೆಯಲ್ಲಿ ಸುಮಾರು 10 ಸಾವಿರ ಮಂದಿ ಭಾಗಿಯಾಗಿದ್ದರು. ಈ ಹಬ್ಬದಲ್ಲಿ ಪಾಲ್ಗೊಳ್ಳುವವರು ಅತ್ಯಂತ ಕಡಿಮೆ ಬಟ್ಟೆಯನ್ನು ಮೈಮೇಲೆ ಧರಿಸುವುದು ಸಂಪ್ರದಾಯವಾಗಿದೆ. ಆದ್ದರಿಂದ ‘ಪುಂದೇಶೀ ಹಾಗೂ ತಬೀ’ ಎನ್ನುವ ಒಂದು ಪುಟ್ಟ ಬಟ್ಟೆ ತುಂಡು ಸುತ್ತಿಕೊಂಡು ಭಕ್ತರು ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

    ಈ ಹಬ್ಬದಲ್ಲಿ ಪಾಲ್ಗೊಳ್ಳುವ ಭಕ್ತರು ಮೊದಲು ಸೈದಾಯೀಜಿ ಕಾನೌನೀನ್ ದೇಗುಲವನ್ನು ಸ್ವಚ್ಛಗೊಳಿಸುತ್ತಾರೆ. ಬಳಿಕ ಸಂಜೆ ತಣ್ಣೀರಲ್ಲಿ ಸ್ನಾನ ಮಾಡಿ, ಪುಂದೇಶೀ ಹಾಗೂ ತಬೀ ಸುತ್ತುಕೊಂಡು ಬೆತ್ತಲಾಗಿ ಮುಖ್ಯ ದೇಗುಲದ ಆವರಣಕ್ಕೆ ತೆರಳುತ್ತಾರೆ. ನಂತರ ರಾತ್ರಿ ದೇಗುಲದ ಅರ್ಚಕರು ದೇಗುಲದ ಮಹಡಿಯ ಕಿಟಕಿ ತೆರೆದು ಭಕ್ತರಿದ್ದಲ್ಲಿ ಧ್ವಜಗಳನ್ನು ಎಸೆಯುತ್ತಾರೆ.

    ಅರ್ಚಕರು ಎಸೆದ ಧ್ವಜಗಳು ಯಾರಿಗೆ ಸಿಗುತ್ತದೆ ಅವರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದ್ದು, ಇದನ್ನು ಪಡೆಯಲು ಭಕ್ತರು ಹರಹಾಸ ಪಡುತ್ತಾರೆ. ಈ ಇಡೀ ಪ್ರಕ್ರಿಯೆ ಕೇವಲ 30 ನಿಮಿಷದಲ್ಲಿ ನಡೆದು ಮುಗಿಯುತ್ತದೆ. ಹೀಗೆ ಧ್ವಜಗಳನ್ನು ಹಿಡಿಯುವ ಬರದಲ್ಲಿ ಸಾಕಷ್ಟು ಮಂದಿ ಗಾಯಗೊಂಡಿರುವ ಉದಾಹರಣೆ ಕೂಡ ಇದೆ.

  • 8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    8 ಓವರ್‌ಗೆ 5 ರನ್ ನೀಡಿ, 4 ವಿಕೆಟ್ ಕಿತ್ತ ಬಿಷ್ಣೋಯ್- ಜಪಾನ್ ವಿರುದ್ಧ ಯುವ ಭಾರತಕ್ಕೆ 10 ವಿಕೆಟ್ ಗೆಲುವು

    – 41 ರನ್‍ಗೆ ಜಪಾನ್ ಆಲೌಟ್
    – ಕೆಟ್ಟ ಇತಿಹಾಸ ಬರೆದ ಜಪಾನ್

    ಬ್ಲೂಮ್‍ಫಾಂಟೈನ್: ಸ್ಪಿನ್ನರ್ ರವಿ ಬಿಷ್ಣೋಯ್ ಹಾಗೂ ಕಾರ್ತಿಕ್ ತ್ಯಾಗಿ ಅದ್ಭುತ ಬೌಲಿಂಗ್‍ನಿಂದ ಜಪಾನ್ ವಿರುದ್ಧ ಯುವ ಭಾರತ ತಂಡವು 10 ವಿಕೆಟ್‍ಗಳ ಭರ್ಜರಿ ಗೆಲುವು ಸಾಧಿಸಿದೆ.

    ಅಂಡರ್-19 ವಿಶ್ವಕಪ್ ಟೂರ್ನಿಯ ಭಾಗವಾಗಿ ಬ್ಲೂಮ್‍ಫಾಂಟೈನ್‍ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಜಪಾನ್ ತಂಡವನ್ನು 22.5 ಓವರ್‌ಗೆ ಆಲೌಟ್ ಮಾಡಿತು. ಜಪಾನ್ ನೀಡಿದ್ದ 41 ರನ್‍ಗಳ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಭಾರತ 4.5 ಓವರ್‌ನಲ್ಲೇ ಗೆದ್ದು ಬೀಗಿದೆ. ಈ ಮೂಲಕ ಟೂರ್ನಿಯಲ್ಲಿ ಯುವ ಭಾರತ ಸತತ ಎರಡನೇ ಪಂದ್ಯವನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಧೋನಿಯಂತೆ ರಾಹುಲ್‍ಗೆ ಹೆಚ್ಚು ಅವಕಾಶ ಸಿಗಲಿ- ಕನ್ನಡಿಗನ ಬೆಂಬಲಕ್ಕೆ ನಿಂತ ವೀರು

    ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಜಪಾನ್‍ನ ಇಡೀ ತಂಡವು ಕೇವಲ 41 ರನ್‍ಗಳಿಗೆ ಆಲೌಟ್ ಆಗಿತ್ತು. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ. ಜಪಾನ್ ತಂಡದ ಶು ನಾಗೋಚಿ, ಕೆಕೆ ದೊಬೆಲ್ ತಲಾ 7 ರನ್ ಹಾಗೂ ಎಂ.ಕ್ಲೆಮೆಂಟ್ಸ್ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉಳಿದಂತೆ ಮೂರು ಆಟಗಾರರು ತಲಾ ಒಂದು ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, 5 ಜನ ಆಟಗಾರರು ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಪೆವಿಲಿಯನ್‍ಗೆ ಪರೇಡ್ ನಡೆಸಿದರು. ಇದನ್ನೂ ಓದಿ:  ಗಂಟೆಗೆ 175 ಕಿ.ಮೀ ವೇಗದಲ್ಲಿ ಲಂಕಾ ವೇಗಿಯಿಂದ ಬೌಲಿಂಗ್ – ವಿಡಿಯೋ ನೋಡಿ

    ಬಿಷ್ಣೋಯ್, ಕಾರ್ತಿಕ್ ಕಮಾಲ್:
    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಪಾನ್ ಕಳಪೆ ಆರಂಭವನ್ನು ತೋರಿತು. 20 ರನ್‍ಗಳ ಒಳಗೆ ಅವರ ಐದು ವಿಕೆಟ್‍ಗಳು ಕಳೆದುಕೊಂಡಿತು. ಯುವ ಭಾರತ ತಂಡದ ಸ್ಪಿನ್ನರ್ ರವಿ ಬಿಷ್ಣೋಯ್ 8 ಓವರ್ ಬೌಲಿಂಗ್ ಮಾಡಿ, ಕೇವಲ 5 ರನ್ ನೀಡಿ 4 ವಿಕೆಟ್ ಪಡೆದರು. ಈ ಮೂಲಕ ಪಂದ್ಯಶ್ರೇಷ್ಠಕ್ಕೆ ಭಾಜನರಾದರು. ಇತ್ತ ವೇಗದ ಬೌಲರ್ ಗಳಾದ ಕಾರ್ತಿಕ್ ತ್ಯಾಗಿ ಮೂರು ವಿಕೆಟ್ ಮತ್ತು ಆಕಾಶ್ ಸಿಂಗ್ ಎರಡು ವಿಕೆಟ್ ಪಡೆದರು.

    ಯುವ ಭಾರತದ ಬೌಲರ್ ಗಳ ದಾಳಿ ಎದುರು ಜಪಾನ್ ತಂಡದ ಐದು ಬ್ಯಾಟ್ಸ್‍ಮನ್‍ಗಳಿಗೆ ಖಾತೆ ತೆರೆಯಲು ವಿಫಲರಾದರು. ಅಷ್ಟೇ ಅಲ್ಲದೆ ಒಬ್ಬ ಬ್ಯಾಟ್ಸ್‍ಮನ್ ಹತ್ತು ರನ್ ದಾಟಲು ಸಾಧ್ಯವಾಗಲಿಲ್ಲ.

    ಜಪಾನ್ ತಂಡ ನೀಡಿದ್ದ ಸಾಧಾರಣ ಗುರಿ ಬೆನ್ನಟ್ಟಿದ ಭಾರತ ತಂಡವು ಯಾವುದೇ ವಿಕೆಟ್ ಕಳೆದುಕೊಳ್ಳದೆ 4.5 ಓವರ್ ನಲ್ಲಿ 42 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 29 ರನ್ (18 ಎಸೆತ, 5 ಬೌಂಡರಿ, ಸಿಕ್ಸ್) ಮತ್ತು ಕುಮಾರ್ ಕುಶಾಗ್ರಾ 13 ರನ್ (11 ಎಸೆತ, ಎರಡು ಬೌಂಡರಿ) ಗಳಿಸಿದರು.

    ಈ ಹಿಂದಿನ ಪಂದ್ಯದಲ್ಲಿ ಯುವ ಭಾರತವು ಶ್ರೀಲಂಕಾವನ್ನು 90 ರನ್‍ಗಳಿಂದ ಸೋಲಿಸಿತ್ತು. ಭಾರತದ ಮೂರನೇ ಲೀಗ್ ಪಂದ್ಯ ಜನವರಿ 24ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.