Tag: Janardhan Pujari

  • ಬಂಟ್ವಾಳದಲ್ಲಿ ರಾಹುಲ್ ಗಾಂಧಿ, ಸಿಎಂಗಿಂತ ಪೂಜಾರಿಗೆ ಹೆಚ್ಚು ಜೈಕಾರ!

    ಬಂಟ್ವಾಳದಲ್ಲಿ ರಾಹುಲ್ ಗಾಂಧಿ, ಸಿಎಂಗಿಂತ ಪೂಜಾರಿಗೆ ಹೆಚ್ಚು ಜೈಕಾರ!

    ಮಂಗಳೂರು: ರಾಹುಲ್ ಗಾಂಧಿ ಕಳೆದ ಎರಡು ದಿನದಿಂದ ಕರಾವಳಿ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಬೃಹತ್ ಸಮಾವೇಶ ಮಾಡಿದ್ದಾರೆ. ಆದರೆ ಸಮಾವೇಶದಲ್ಲಿ ಶೈನ್ ಆಗಿದ್ದು ಸಿಎಂ ಅಲ್ಲ, ರಾಗಾ ಅಲ್ಲ ಬದಲಾಗಿ ಜನಾರ್ದನ ಪೂಜಾರಿ.

    ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಅವರ ಮನೆಯ ವಠಾರದಲ್ಲೇ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅನಾರೋಗ್ಯದಿಂದಾಗ ಪೂಜಾರಿ ಸಮಾವೇಶಕ್ಕೆ ಬರ್ತಾರೋ ಇಲ್ವೋ ಎಂಬ ಸಂಶಯ ಇತ್ತು. ಆದರೆ ರಾಹುಲ್ ಭಾಷಣ ಮುಗಿಯುತ್ತಿದ್ದಂತೆ, ಅನಾರೋಗ್ಯದ ಹೊರತಾಗಿಯೂ ಪೂಜಾರಿ ನಿಧಾನವಾಗಿ ನಡೆದು ಬಂದು ವೇದಿಕೆ ಹತ್ತಿದರು.

    ಈ ವೇಳೆ ಕೇಳಿ ಬಂದ ಜಯಘೋಷಕ್ಕೆ ಸಿಎಂ ಸಿದ್ದರಾಮಯ್ಯ ಕೆಲಕಾಲ ಭಾಷಣ ಸ್ಥಗಿತಗೊಳಿಸಬೇಕಾಯ್ತು. ಸಿಎಂ , ರಾಹುಲ್ ಗಾಂಧಿ ಗಿಂತ ಜಾಸ್ತಿ ಜನಾರ್ದನ ಪೂಜಾರಿಗೆ ಬಂಟ್ವಾಳದಲ್ಲಿ ಜೈಕಾರ ಬಿದ್ದಿದೆ. ಪೂಜಾರಿಗೆ ವ್ಯಕ್ತವಾದ ಜನಬೆಂಬಲಕ್ಕೆ ಕೆಲಕಾಲ ಸಿಎಂ ಕೂಡಾ ಕಕ್ಕಾಬಿಕ್ಕಿಯಾದರು.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಪ್ರವಾಸ ನಮಾಜ್ ವಿಚಾರಕ್ಕೂ ಗಮನ ಸೆಳೆಯಿತು. ಅತೀ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಶುಕ್ರವಾರದ ದಿನ ಸಮಾವೇಶ ಹಮ್ಮಿಕೊಂಡ ಕಾರಣ ಕಾಂಗ್ರೇಸ್ ಪಕ್ಷ ತರಾತುರಿಯ ಕಾರ್ಯಕ್ರಮ ನಡೆಸಿತು.

    ಸರಿಯಾದ ಸಮಯಕ್ಕ ಆರಂಭವಾದ ಸಮಾವೇಶದಲ್ಲಿ ವೇದಿಕೆ ಏರುತ್ತಿದ್ದಂತೆ ರಾಹುಲ್ ಗಾಂಧಿ ಭಾಷಣ ಆರಂಭಿಸಿದರು. ಈ ಮೂಲಕ ಮಧ್ಯಾಹ್ನದ ನಮಾಝ್ ಗೂ ಮುನ್ನ ಸಮಾವೇಶ ಮುಗಿಸಲು ಪ್ರಯತ್ನಿಸಲಾಯ್ತು. ಸಿಎಂ ಸಿದ್ದರಾಮಯ್ಯ ಕೂಡಾ ತಮ್ಮ ಭಾಷಣಕ್ಕೂ ಮುನ್ನ, ನಮಾಜ್ ಗೆ ಅಡ್ಡಿಯಾಗದಂತೆ ಶೀಘ್ರ ಭಾಷಣೆ ಮುಗಿಸುವ ಭರವಸೆ ನೀಡಿ ಭಾಷಣ ಮುಗಿಸಿದರು.

  • ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ ರಮಾನಾಥ ರೈ

    ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ ರಮಾನಾಥ ರೈ

    ಮಂಗಳೂರು: ಬಂಟ್ವಾಳ ಕ್ಷೇತ್ರದ ಶಾಸಕರು ಹಾಗೂ ಈ ಬಾರಿ ಅಭ್ಯರ್ಥಿಯೂ ಆಗಿರುವ ಸಚಿವ ರಮಾನಾಥ ರೈ ಅವರು ಇಂದು ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ಮನೆಗೆ ಭೇಟಿ ನೀಡಿದ್ದರು.

    ನಾಳೆ ನಾಮಪತ್ರ ಸಲ್ಲಿಸಲಿರುವ ಸಚಿವರು ಅದಕ್ಕೂ ಮುನ್ನ ಜನಾರ್ದನ ಪೂಜಾರಿ ಅವರ ಆಶೀರ್ವಾದ ಪಡೆದರು. ರಮಾನಾಥ ರೈ ತಮ್ಮನ್ನು ನಿಂದಿಸಿದರೆಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಜನಾರ್ದನ ಪೂಜಾರಿ ಅತ್ತಿದ್ದರು. ಇದೇ ವಿಚಾರವಾಗಿ ಕ್ಷೇತ್ರದ ಬಿಲ್ಲವ ಮತದಾರರಲ್ಲಿ ರೈ ವಿರುದ್ಧ ಆಕ್ರೋಶ ಮೂಡುವಂತಾಗಿತ್ತು.

    ಪೂಜಾರಿಯವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಿದ್ದೇ ರಮಾನಾಥ ರೈ ಎಂಬ ಆರೋಪವೂ ಕೇಳಿಬಂದಿತ್ತು. ಆ ನಂತರ ಒಂದು ವರ್ಷ ಕಾಲ ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ನಡುವೆ ಅಂತರ ಕಂಡುಬಂದಿತ್ತು.

    ಚುನಾವಣೆ ಹೊಸ್ತಿಲಲ್ಲಿ ಸಚಿವ ರಮಾನಾಥ ರೈಯವರು ಜನಾರ್ದನ ಪೂಜಾರಿಯವರ ಕಾಲು ಮುಟ್ಟಿ ಆಶೀರ್ವಾದ ಕೋರಿದ್ದಾರೆ. ವೈಮನಸ್ಸು ಏನಿದ್ದರೂ, ಪೂಜಾರಿಯವರು ರಮಾನಾಥ ರೈ ಭೇಟಿ ಸಂದರ್ಭ ತೋರಿಸಿಕೊಂಡಿಲ್ಲ. ಬೆಂಬಲಿಗರ ಜೊತೆ ಮನೆಗೆ ಬಂದ ರೈ ಅವರನ್ನು ವಾಹನದ ವರೆಗೂ ಬಂದು ಬೀಳ್ಕೊಟ್ಟಿದ್ದಾರೆ.