Tag: James Bond

  • ಹಾಲಿವುಡ್ ‘ಹ್ಯಾರಿ ಪಾಟರ್’ ಸರಣಿಯ ರುಬೆಸ್ ಪಾತ್ರಧಾರಿ ನಿಧನ

    ಹಾಲಿವುಡ್ ‘ಹ್ಯಾರಿ ಪಾಟರ್’ ಸರಣಿಯ ರುಬೆಸ್ ಪಾತ್ರಧಾರಿ ನಿಧನ

    ಜೇಮ್ಸ್ ಬಾಂಡ್, ಹ್ಯಾರಿ ಪಾಟರ್ (Harry Potter) ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಸ್ಕಾಟಿಶ್ ನಟ ರಾಬಿ ಕೋಲ್ಟ್ರೇನ್ (Robbie Coltrane) ನಿಧನರಾಗಿದ್ದಾರೆ. ಹ್ಯಾರಿ ಪಾಟರ್ ಸಿನಿಮಾದ ರುಬೆಸ್ ಹ್ಯಾಗ್ರಿಡ್ ಪಾತ್ರದ ಮೂಲಕ ರಾಬಿ ಸಾಕಷ್ಟು ಹೆಸರು ಮಾಡಿದ್ದರು. ಕ್ರ್ಯಾಕರ್ ಸಿರೀಸ್ ನಿಂದಲೂ ಅವರು ಭಾರೀ ಜನಪ್ರಿಯತೆಯನ್ನು ಪಡೆದಿದ್ದರು.

    72ರ ವಯಸ್ಸಿನ ರಾಬಿ ಕೋಲ್ಟ್ರೇನ್ ನಿಧನದ ಸುದ್ದಿಯನ್ನು ಅಲ್ಲಿನ ಮಾಧ್ಯಮಗಳು ಖಚಿತ ಪಡಿಸಿದ್ದು, ಸಾವಿಗೆ ಕಾರಣವನ್ನೂ ಮಾತ್ರ ತಿಳಿಸಿಲ್ಲ. ಶುಕ್ರವಾರ ತಡರಾತ್ರಿ ನಟ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ರಾಬಿ ಅವರ ಏಜೆಂಟ್ ತಿಳಿಸಿದ್ದಾರೆ. 40 ವರ್ಷದಿಂದ ಅವರ ಏಜೆಂಟ್ ಆಗಿ ಕೆಲಸ ಮಾಡಿದ್ದಕ್ಕೆ ಹೆಮ್ಮೆಯಿದೆ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ


    ರಾಬಿ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಟಿವಿ ಮತ್ತು ವೆಬ್ ಸಿರೀಸ್ ನಲ್ಲೂ ಕಾಣಿಸಿಕೊಂಡಿದ್ದಾರೆ. 1990ರಲ್ಲಿ ಮೊದಲ ಬಾರಿಗೆ ಕ್ರ್ಯಾಕರ್ ಸಿರೀಸ್ ನಲ್ಲಿ ಅವರು ಡಿಟೆಕ್ಟಿವ್ ಪಾತ್ರ ಮಾಡಿದ್ದಾರೆ. ಆ ಪಾತ್ರ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಈ ನಟನೆಗಾಗಿ ಅವರಿಗೆ ಅಕಾಡಮಿ ಟೆಲಿವಿಷನ್ ಪ್ರಶಸ್ತಿ ಕೂಡ ಬಂದಿತ್ತು. ಅಲ್ಲದೇ, ಜೇಮ್ಸ್ ಬಾಂಡ್ (James Bond) ಸೇರಿದಂತೆ ಹಲವು ಸಿನಿಮಾಗಳಲ್ಲೂ ರಾಬಿ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜೇಮ್ಸ್ ಬಾಂಡ್ ಖ್ಯಾತಿಯ ಸೀನ್ ಕಾನರಿ ನಿಧನ

    ಜೇಮ್ಸ್ ಬಾಂಡ್ ಖ್ಯಾತಿಯ ಸೀನ್ ಕಾನರಿ ನಿಧನ

    ಲಂಡನ್: ಜೇಮ್ಸ್ ಬಾಂಡ್ ಸಿನಿಮಾ ಖ್ಯಾತಿಯ ನಟ ಸೀನ್ ಕಾನರಿ (90) ಇಂದು ನಿಧನ ಹೊಂದಿದ್ದಾರೆ. ಜೇಮ್ಸ್ ಬಾಂಡ್ ಸಿನಿಮಾದಲ್ಲಿ ನಟಿಸಿದ್ದ ಸೀನ್ ಕಾನರಿ, ತಮ್ಮ ಅದ್ಭುತ ನಟನೆ ಮೂಲಕ ವಿಶ್ವದಾದ್ಯಂತ ಅಭಿಮಾನಿಗಳನ್ನ ಹೊಂದಿದ್ದರು.

    ತಮ್ಮ ಅದ್ಧೂರಿ ಸಿನಿಮಾಗಳ ಮೂಲಕ ಚಿರಪರಿಚಿತರಾಗಿದ್ದ ಸೀನ್ ಕಾನರಿ ಅವರನ್ನ ಹಲವು ಪ್ರಶಸ್ತಿಗಳು ಅರಸಿ ಬಂದಿದ್ದವು. ಇವುಗಳಲ್ಲಿ ಆಕ್ಸರ್, ಮೂರು ಗ್ಲೋಡ್ ಗ್ಲೋಬ್ ಮತ್ತು ಎರಡು ಬಾಫ್ಟಾ ಅವಾರ್ಡ್ ಸಹ ಸೇರಿವೆ. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ನಟಿಸಿದ ಎಲ್ಲ ಕಲಾವಿದರಲ್ಲಿ ಸೀನ್ ಕಾನರಿ ನೋಡುಗರಿಗೆ ಹೆಚ್ಚು ಇಷ್ಟವಾಗಿದ್ದರು. ಜೇಮ್ಸ್ ಬಾಂಡ್ ಅಲ್ಲದೇ ‘ದಿ ಹಂಟ್ ಫಾರ್ ರೆಡ್ಡ್ ಅಕ್ಟೋಬರ್’ ಮತ್ತು ಇಂಡಿಯನಾ ಜೋನ್ಸ್ ಎಂಡ್ ದಿ ಲಾಸ್ಟ್ ಕ್ರೂಸೆಡ್ ಮತ್ತು ದಿ ರಾಕ್ ಸೀನ್ ಕಾನರಿ ಯಶಸ್ವಿ ಚಿತ್ರಗಳು.

    1988ರಲ್ಲಿ ಮೊದಲ ಬಾರಿಗೆ ಸೀನ್ ಕಾನರಿ ಅವರಿಗೆ ‘ದಿ ಅನ್‍ಟಚೇಬಲ್ಸ್’ ಸಿನಿಮಾದಲ್ಲಿಯ ನಟನೆಗೆ ಆಸ್ಕರ್ ಪ್ರಶಸ್ತಿಗೆ ಮುತ್ತಿಟ್ಟಿದ್ದರು. ಈ ಸಿನಿಮಾದಲ್ಲಿ ಸೀನ್ ಕಾಲರಿ ಐರಿಷ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದರು. ಕಳೆದ ಆಗಸ್ಟ್ ನಲ್ಲಿ ಸೀನ್ ಕಾಲರಿ ತಮ್ಮ 90ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದರು.

  • ಶಾಂತಿ ಪಾಲನೆಗೆ ದೆಹಲಿ ರಸ್ತೆಗಿಳಿದ ಜೇಮ್ಸ್ ಬಾಂಡ್ ದೋವಲ್

    ಶಾಂತಿ ಪಾಲನೆಗೆ ದೆಹಲಿ ರಸ್ತೆಗಿಳಿದ ಜೇಮ್ಸ್ ಬಾಂಡ್ ದೋವಲ್

    ನವದೆಹಲಿ: ಪೌರತ್ವ ಕಾಯಿದೆ ಪರ ಮತ್ತು ವಿರೋಧಿ ಹಿಂಸಾಚಾರದಿಂದಾಗಿ ದೆಹಲಿ ಧಗಧಗಿಸ್ತಿದೆ. ಕ್ಷಣಕ್ಷಣಕ್ಕೂ ಹೊತ್ತಿ ಉರೀತಿದೆ. ಸಾವಿನ ಸಂಖ್ಯೆ ಏರಿಕೆ ಆಗ್ತಲೇ ಇದೆ. ಕರ್ಫ್ಯೂ, ನಿಷೇಧಾಜ್ಞೆ ಹೇರಿದ್ದರೂ, ಸಿ.ಆರ್.ಪಿ.ಎಫ್ ಸೇರಿದಂತೆ 800 ಹೆಚ್ಚುವರಿ ಭದ್ರತಾ ಪಡೆ ನಿಯೋಜಿಸಿದರೂ ಕೂಡ ಪರಿಸ್ಥಿತಿ ಸುಧಾರಿಸ್ತಿಲ್ಲ.

    ಪ್ರಧಾನಿ, ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಆತಂಕ ಹೆಚ್ಚಾಗಿದ್ದರೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಧೃತಿಗೆಟ್ಟಿಲ್ಲ. ಭಾರತದ ಜೇಮ್ಸ್ ಬಾಂಡ್ ಅಂತಲೇ ಹೆಸರಾಗಿರೋ ದೋವಲ್, ಹಿಂಸಾಚಾರ ನಿಯಂತ್ರಣದ ಹೊಣೆ ಹೊತ್ತಿದ್ದಾರೆ. ಜೀವದ ಹಂಗು ತೊರೆದು ಈಶಾನ್ಯ ದೆಹಲಿ ಹಿಂಸಾಚಾರದ ಕೇಂದ್ರ ಸ್ಥಾನಗಳಾದ ಸೀಲಂಪುರ, ಜಾಫ್ರಾಬಾದ್, ಮೌಜ್‍ಪುರ್, ಭಜನ್‍ಪುರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಭದ್ರತೆಯ ಇಂಚಿಂಚೂ ಮಾಹಿತಿ ಪಡೆಯುವ ಜೊತೆಗೆ ಭೀತಿಗೊಂಡಿದ್ದ ಸ್ಥಳೀಯರಲ್ಲಿ ಧೈರ್ಯ ತುಂಬಿದ್ದಾರೆ. ಯಾರೂ ಭಯಪಡುವ ಅವಶ್ಯಕತೆಯೇ ಇಲ್ಲ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬೇಡಿ ಅಂತ ಹೇಳಿದರು. ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಲ್ಲಿ ಆತ್ಮಸ್ಥೈರ್ಯ ತುಂಬಿದ್ದಾರೆ. ಶಾಂತಿ ಪುನರ್ ಸ್ಥಾಪಿಸಲು ಅಗತ್ಯ ಸೂಚನೆ ರವಾನಿಸಿದ್ದಾರೆ.

    ಈ ವೇಳೆ, ಮಾಧ್ಯಮಗಳ ಜೊತೆ ಮಾತನಾಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪೊಲೀಸರು ಅವರ ಕೆಲಸ ಅವರು ಮಾಡುತ್ತಿದ್ದಾರೆ ಎಂದು ಹೇಳಿದರು. ಭೇಟಿ ಬಳಿಕ ಗೃಹ ಸಚಿವ ಅಮಿತ್ ಶಾಗೆ ವರದಿ ಸಲ್ಲಿಸಿದ್ರು. ಅಂದಹಾಗೆ, ಆರ್ಟಿಕಲ್ 370 ರದ್ದಾದ ಬಳಿಕ ಈ ಹಿಂದೆ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಿದ್ದ ಡೇರ್ ಡೆವಿಲ್ ದೋವಲ್, ಅಲ್ಲಿನ ಸ್ಥಳೀಯರ ಜೊತೆ ಚರ್ಚೆ ನಡೆಸಿದ್ದರು.

    ಸಾವಿನ ಸಂಖ್ಯೆ 22ಕ್ಕೆ ಏರಿಕೆ:
    ಸತತ 4 ದಿನವೂ ದೆಹಲಿ ಹೊತ್ತಿ ಉರಿದಿದೆ. ಇದುವರೆಗೆ ಹಿಂಸಾಚಾರಕ್ಕೆ 22 ಮಂದಿ ಬಲಿಯಾಗಿದ್ದಾರೆ. ಈಶಾನ್ಯ ದೆಹಲಿಯಲ್ಲಿ ನಿನ್ನೆ ರಾತ್ರಿ 13ರಲ್ಲಿದ್ದ ಸಾವಿನ ಸಂಖ್ಯೆ ಇವತ್ತು 22ಕ್ಕೆ ಏರಿದೆ. 200ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಹಿಂಸಾಚಾರದ ಕೇಂದ್ರ ಬಿಂದುವಾಗಿರುವ ಸೀಲಂಪುರದಲ್ಲಿ ಮುಂದಿನ 1 ತಿಂಗಳ ಕಾಲ ನಿಷೇಧಾಜ್ಞೆ ಹೇರಲಾಗಿದೆ.

    ಹಿಂಸಾಚಾರ ನಿಯಂತ್ರಣಕ್ಕಾಗಿ 45 ಪ್ಯಾರಾಮಿಲಿಟರಿ ತುಕಡಿಗಳು ಸಿ.ಆರ್.ಪಿ.ಎಫ್, ಸಶಸ್ತ್ರ ಸೀಮಾ ಬಲ, ಸಿಐಎಸ್‍ಎಫ್ ಸೇರಿದಂತೆ 800 ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಗೋಕುಲ್ ಪುರಿ ಪ್ರದೇಶದಲ್ಲಿ ಭದ್ರತಾ ಪಡೆಗಳು ಪರೇಡ್ ನಡೆಸಿ, ಜನತೆಯಲ್ಲಿ ಧೈರ್ಯ ತುಂಬಿವೆ. ಇನ್ನು, ಇಲ್ಲಿವರೆಗೆ 200 ಪೇಷಂಟ್ಸ್ ಗೆ ಚಿಕಿತ್ಸೆ ಕೊಟ್ಟಿದ್ದೇವೆ ಅಂತ ಜಿಟಿಬಿ (ಗುರು ತೇಗ್ ಬಹದ್ದೂರ್) ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿ ನೋವಿನಿಂದಾಗಿ ಗೋಳಾಟ ಆರ್ತನಾದ ಹೇಳತೀರದಾಗಿದೆ. ಈ ಮಧ್ಯೆ, ಇಲ್ಲಿವರೆಗೆ 18 ಎಫ್‍ಐಆರ್ ದಾಖಲಾಗಿದ್ದು, 106 ಜನರನ್ನು ವಶಕ್ಕೆ ಪಡೆಯಲಾಗಿದೆ.