Tag: Jakarta

  • ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಸೆಕ್ಸ್ ಮಾಡಿದ್ದಾರೆಂದು ರೂಮಿನಿಂದ ಹೊರಗೆಳೆದು ಜೋಡಿಯ ಮೇಲೆ ಚರಂಡಿ ನೀರು ಹಾಕಿದ್ರು- ವಿಡಿಯೋ ವೈರಲ್

    ಜಕಾರ್ತಾ: ಯುವತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಆತನ ರೂಮಿಗೆ ಹೋಗಿದಾಗ ಅಲ್ಲಿದ್ದ ಸಾರ್ವಜನಿಕರು ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿದ್ದಾರೆಂದು ಅನುಮಾನಗೊಂಡು ಅವರನ್ನು ರೂಮಿನಿಂದ ಎಳೆದು ತಂದು ಚರಂಡಿ ನೀರನ್ನು ಹಾಕಿದ ಘಟನೆ ಸುಮಾತ್ರಾ ದ್ವೀಪದ ಕೇಯಿ ಲೀ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಮಾರ್ಚ್ 7ರಂದು ನಡೆದಿದ್ದು, ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಯುವಕ ಕಂದು ಬಣ್ಣದ ಶರ್ಟ್, ಜಿನ್ಸ್ ಧರಿಸಿ ಚರಂಡಿ ಮುಂದೆ ತಲೆ ತಗ್ಗಿಸಿ ನಿಂತಿದ್ದು, ಯುವತಿ ಆತನ ಪಕ್ಕದಲ್ಲೇ ಕುಳಿತಿದ್ದಾಳೆ.

    ನಂತರ ವ್ಯಕ್ತಿಯೊಬ್ಬ ಇವರ ಮೇಲೆ ಚರಂಡಿ ನೀರನ್ನು ಹಾಕಿ ನೀನು ಮಾಡಿದ್ದು ಇಸ್ಲಾಂ ಧರ್ಮಕ್ಕೆ ವಿರುದ್ಧ. ಇದು ನಿನಗೆ ತಕ್ಕ ಪಾಠ ಎಂದು ಗುಂಪಿನಲ್ಲಿ ಸಾರ್ವಜನಿಕರು ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಆ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

    18 ವರ್ಷದ ಯುವತಿ ತನ್ನ ಪ್ರಿಯಕರನನ್ನು ಭೇಟಿ ಮಾಡಲು ಯಾರೂ ಇಲ್ಲದ ವೇಳೆ ಆತನ ರೂಮಿಗೆ ಹೋಗಿದ್ದಳು. ಅಕ್ಕಪಕ್ಕದ ಮನೆಯವರ ಪ್ರಕಾರ ಅವರಿಬ್ಬರು ಅಲ್ಲಿ ಸೆಕ್ಸ್ ಮಾಡಲು ಯೋಚಿಸುತ್ತಿದ್ದರು. ನಂತರ ಸಾರ್ವಜನಿಕರು ಅವರನ್ನು ಎಳೆದು ತಂದು ಶಿಕ್ಷೆ ನೀಡಿದ್ದಾರೆ ಎಂದು ಇಂಗಿನ್ ಜಯಾ ಪೊಲೀಸ್ ಅಧಿಕಾರಿಯಾದ ನಜರುಲ್ ಪಿತ್ರಾ ತಿಳಿಸಿದ್ದಾರೆ.

    ಸದ್ಯ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ. ಈ ಜೋಡಿಯ ಮೇಲಿರುವ ಆರೋಪ ನಿಜವಾದರೆ 100 ಹೊಡೆತ ಹಾಗೂ 15 ತಿಂಗಳ ಬಂಧನ ಅಥವಾ 150 ಗ್ರಾಂ ಚಿನ್ನಕ್ಕೆ ಸಮನಾದ ಹಣವನ್ನು ನೀಡಬೇಕೆಂದು ಪಿತ್ರಾ ಹೇಳಿದ್ದಾರೆ.

    https://www.youtube.com/watch?v=LBtKc85tZBE

  • ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ನೋಡ ನೋಡ್ತಿದ್ದಂತೆ ದಿಢೀರನೇ ಕುಸಿದು ಬಿತ್ತು ಶೇರು ವಿನಿಮಯ ಕೇಂದ್ರದ ಮಹಡಿ

    ಜಕಾರ್ತ: ಇಂಡೋನೇಷ್ಯಾದ ರಾಜಧಾನಿ ಜಕಾರ್ತದಲ್ಲಿರುವ ಶೇರು ವಿನಿಮಯ ಕೇಂದ್ರದ ಮಳಿಗೆಯೊಂದು ಇದ್ದಕ್ಕಿದ್ದಂತೆ ಕುಸಿದು 77ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಸೋಮವಾರ ಬಳಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಎರಡನೇ ಮಳಿಗೆ ಕುಸಿಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಶೇರು ವಿನಿಮಯ ಕೇಂದ್ರವನ್ನು ವೀಕ್ಷಿಸಲು ಬಂದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

    ಕೂಡಲೇ ಎಲ್ಲರನ್ನೂ ಸ್ಟ್ರೆಚರ್ ಸಾಗಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವು ಮಂದಿಯ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದೆ. 2000ನೇ ಇಸ್ವಿಯಲ್ಲಿ ಉಗ್ರರ ಆತ್ಮಹತ್ಯೆ ಬಾಂಬ್ ದಾಳಿಯ ಬಳಿಕ ಇಲ್ಲಿ ನಡೆದ ಎರಡನೇ ಅತಿ ದೊಡ್ಡ ದುರಂತ ಇದಾಗಿದೆ. ಮೊದಲ ಮಹಡಿಯಲ್ಲಿ ಈ ದುರಂತ ಸಂಭವಿಸಿದ್ದು. ಕಾಂಕ್ರೀಟ್ ಕಲ್ಲುಗಳು ಬಿದ್ದಿದ್ದು, ನೀರಿನ ಪೈಪ್‍ಗಳು ಒಡೆದು ಹೋಗಿವೆ.

    ಈ ಘಟನೆ ನಡೆದು ಮಧ್ಯಾಹ್ನದ ಬಳಿಕ  ಶೇರು ವಿನಿಮಯ ಕೇಂದ್ರದಲ್ಲಿ ಎಂದಿನಂತೆ ವ್ಯವಹಾರ ನಡೆದಿದೆ.

    https://www.youtube.com/watch?v=mqltuw7ban8

     

  • ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

    ಜಕಾರ್ತ: ಸತ್ತ ವ್ಯಕ್ತಿಗಳ ಶವವನ್ನು ಸಮಾಧಿಯಿಂದ ಹೊರ ತೆಗೆದು ಅದನ್ನು ಅಲಂಕರಿಸಿ ಮೆರವಣಿಗೆ ಮಾಡುವ ವಿಚಿತ್ರ ಆಚರಣೆಯನ್ನು ಇಂಡೋನೇಷ್ಯಾದಲ್ಲಿದೆ.

    ಇಂಡೋನೇಷ್ಯಾದ ದಕ್ಷಿಣ ಸುಲವೇಸಿಯಾ ಎಂಬಲ್ಲಿಯ ಗುಡ್ಡಗಾಡು ಜನಾಂಗದವರು `ತೋರ್ಜಾ’ ಎಂಬ ವಿಚಿತ್ರವಾದ ಆಚರಣೆ ಮಾಡ್ತಾರೆ. ಈ ಆಚರಣೆಯಲ್ಲಿ ತಮ್ಮ ಪೂರ್ವಜರ ದೇಹಗಳನ್ನು ಹೊರ ತೆಗೆಯುತ್ತಾರೆ. ಹೊರ ತೆಗೆದ ಶವಗಳನ್ನು ಮನೆಗೆ ತಂದು ಅಲಂಲಕರಿಸಲಾಗುತ್ತದೆ. ಅಲಂಕೃತಗೊಂಡ ಶವಗಳನ್ನು ಊರ ತುಂಬೆಲ್ಲಾ ನಡೆಸುತ್ತಾರೆ. ಕೊನೆಗೆ ಸ್ಮಶಾನಕ್ಕೆ ತೆರಳಿ ಅವುಗಳಿದ್ದ ಜಾಗದಲ್ಲಿ ಮತ್ತೆ ಹೂಳುತ್ತಾರೆ.

    ಗ್ರಾಮದ ಪ್ರತಿಯೊಬ್ಬರು ಸತ್ತ ದೇಹಗಳನ್ನು ಅಲಂಕರಿಸಿ, ಶವಪೆಟ್ಟಿಗೆಯಲ್ಲಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮನೆಯ ಕೋಣೆಯೊಂದರಲ್ಲಿ ತಮ್ಮ ಪೂರ್ವಜರ ಶವಗಳನ್ನು ಇಟ್ಟುಕೊಳ್ಳುತ್ತಿದ್ದಾರೆ.