Tag: Jaipur

  • ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

    ಶಾಲೆಯಲ್ಲೇ ಗ್ಯಾಂಗ್‍ರೇಪ್ ಆಗಿದ್ದ ವಿದ್ಯಾರ್ಥಿನಿಯ ಬ್ರೈನ್ ಡ್ಯಾಮೇಜ್!

    ಜೈಪುರ: ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಾಗಿರುವ 12 ನೇ ತರಗತಿಯ ಶಾಲಾ ಬಾಲಕಿಯ ಬ್ರೈನ್ ಡ್ಯಾಮೇಜ್ ಆಗಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಶಾಲೆಯ ಶಿಕ್ಷಕ ಜಗದೀಶ್ ಹಾಗೂ ನಿರ್ದೇಶಕ ಜಗತ್ ಸೇರಿ 18 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವನ್ನು ಎಸಗಿ ಬಳಿಕ ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು.

    ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪೂರ್ವ ತಯಾರಿ ನಡೆಸಿದ್ದ ಆರೋಪಿಗಳು ಬಾಲಕಿ ಶಾಲೆಯಲ್ಲಿ ಉಳಿಯುವಂತೆ ಮಾಡಲು ಹೆಚ್ಚಿನ ತರಗತಿಯನ್ನು ತೆಗೆದುಕೊಳ್ಳುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿವೆ.

    ಅತ್ಯಾಚಾರ ಮಾಡಿ ಯಾವುದೇ ಎಚ್ಚರಿಕೆ ವಹಿಸದೆ ಗರ್ಭಪಾತಕ್ಕೆ ಮಾಡಿಸಿದ್ದಾರೆ. ಇದರಿಂದ ಆಮ್ಲಜನಕದ ಕೊರತೆ ಉಂಟಾಗಿ ಶಾಶ್ವತ ಬ್ರೈನ್ ಡ್ಯಾಮೇಜ್ ಸಮಸ್ಯೆಯಾಗಿದೆ ಎಂದು ಜೈಪುರದ ಮೆಡಿಕಲ್ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಮೀನಾ ತಿಳಿಸಿದ್ದಾರೆ.

    ಪ್ರಕರಣದ ನಂತರ ಜಿಲ್ಲಾ ಆಡಳಿತ ಮಂಡಳಿ ಶಾಲೆಯನ್ನು ಮುಚ್ಚುವಂತೆ ಸೂಚಿಸಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿರುವುದಾಗಿ ಸಿಕಾರ್ ಜಿಲ್ಲಾ ಪೊಲೀಸ್ ಅಧಿಕಾರಿ ವಿನಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

    ಸಂತ್ರಸ್ತೆಯ ಆರೋಗ್ಯದ ಪರಿಸ್ಥತಿಯಿಂದ ಆಕೆಯ ಹೇಳಿಕೆಯನ್ನು ಪಡೆಯಲು ಸಾಧ್ಯವಾಗಿಲ್ಲ. ಗರ್ಭಪಾತ ಮಾಡಿದ ಕ್ಲಿನಿಕ್ ಮೇಲೆ ದಾಳಿ ನಡೆಸಿ ಆರೋಪಿಗಳಿಗೆ ಸಹಕಾರ ನೀಡಿದ್ದಕ್ಕೆ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಅಷ್ಟೇ ಅಲ್ಲದೇ ಕ್ಲಿನಿಕ್ ಇದುವರೆಗೂ ಮಾಡಿರುವ ಎಲ್ಲಾ ಪ್ರಕರಣಗಳ ಕುರಿತು ತನಿಖೆಯನ್ನು ನಡೆಸಲಾಗುತ್ತಿದೆ ಎಂದು ವಿನಿತ್ ಕುಮಾರ್ ತಿಳಿದರು.

  • 12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    12ನೇ ಕ್ಲಾಸ್ ವಿದ್ಯಾರ್ಥಿನಿಯ ಮೇಲೆ ಶಾಲೆಯ ನಿರ್ದೇಶಕ, ಶಿಕ್ಷಕನಿಂದ ಗ್ಯಾಂಗ್ ರೇಪ್

    ಜೈಪುರ: ಶಾಲಾ ನಿರ್ದೇಶಕ ಮತ್ತು ಶಿಕ್ಷಕ ಇಬ್ಬರು ಸೇರಿ 12 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವುದಲ್ಲದೇ ಗರ್ಭಪಾತ ಮಾಡಿಸಿರುವಂತಹ ಹೃದಯ ಕಲಕುವಂತಹ ಘಟನೆ ರಾಜಸ್ಥಾನದ ಸಿಕಾರ್ ಜಿಲ್ಲೆಯಲ್ಲಿ ನಡೆದಿದೆ.

    ಸಿಕರ್ ಜಿಲ್ಲೆಯ ಜನತಾ ಬಾಲ್ ನಿಕೇತನ್ ಶಾಲೆಯ ನಿರ್ದೇಶಕ ಜಗದೀಶ್ ಮತ್ತು ಶಿಕ್ಷಕ ಜಗತ್ ಸಿಂಗ್ ಸೇರಿ ಈ ಕೃತ್ಯವನ್ನು ಮಾಡಿದ್ದಾರೆ. ಸದ್ಯಕ್ಕೆ ಜಿಲ್ಲೆಯ ಅಜೀತ್‍ಗಢ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ನಡೆಯುತ್ತಿದೆ.

    ಏನಿದು ಪ್ರಕರಣ?: ಜನತಾ ಬಾಲ್ ನಿಕೇತನ್ ಶಾಲೆಯ 12 ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಈ ಇಬ್ಬರು ಆರೋಪಿಗಳು ಅತ್ಯಾಚಾರ ಮಾಡಿದ್ದಾರೆ. ಯಾವಾಗ ಆರೋಪಿಗಳಿಗೆ ಆಕೆ ಗರ್ಭಿಣಿ ಎಂದು ತಿಳಿಯಿತೋ ತಕ್ಷಣ ಆಕೆಯನ್ನು ಶಾಹಪುರ ಪ್ರದೇಶದ ಖಾಸಗಿ ಆಸ್ಪತ್ರೆಗೆ ಕರೆದಕೊಂಡು ಹೋಗಿ ಗರ್ಭಪಾತ ಮಾಡಿಸಿ ಮನೆಗೆ ಕಳುಹಿಸಿದ್ದಾರೆ.

    ಮನೆಗೆ ಹೋದ ಬಳಿಕ ಅತಿಯಾದ ರಕ್ತಸ್ರಾವದಿಂದ ಹುಡುಗಿ ಬಳಲಾರಂಭಿಸಿದ್ದಾಳೆ, ಅದನ್ನು ಗಮನಿಸಿದ ಪೋಷಕರು ತಕ್ಷಣ ಅಜೀತ್‍ಗಢನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವೈದ್ಯರು ಪರೀಕ್ಷಿಸಿ ಗರ್ಭಪಾತ ಚಿಕಿತ್ಸೆಯನ್ನು ಮಾಡಿಸಿದ್ದಾರೆ ಎಂದು ಕುಟುಂಬಕ್ಕೆ ತಿಳಿಸಿದ್ದಾರೆ. ಪೋಷಕರು ಆರೋಪಿಗಳ ಬಗ್ಗೆ ಮಾಹಿತಿ ತಿಳಿದು ಪೋಲಿಸರಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದು ಆರೋಪಿಗಳು ನಾಪತ್ತೆಯಾಗಿದ್ದಾರೆ.

    ಹುಡುಗಿಯ ಆರೋಗ್ಯದಲ್ಲಿ ಯಾವ ಚೇತರಿಕೆ ಕಂಡುಬಾರದ ಕಾರಣ ಆಕೆಯನ್ನು ಜೈಪುರ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯಕ್ಕೆ ಚಿಕಿತ್ಸೆ ಮುಂದುವರಿಯುತ್ತಿದೆ.

  • ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಈ ವ್ಯಕ್ತಿಯ ದೇಹದಲ್ಲಿ ಎಷ್ಟು ಸೂಜಿಗಳು ಸಿಕ್ಕಿಕೊಂಡಿವೆ ಗೊತ್ತಾ?

    ಜೈಪುರ: ಈ ವ್ಯಕ್ತಿಯನ್ನು ನೋಡಿ ವ್ಯದ್ಯರೇ ಶಾಕ್ ಆಗಿದ್ದಾರೆ. ಈದುವರೆಗೂ ಇಂಥ ವ್ಯಕ್ತಿಯನ್ನು ಯಾರೂ ನೋಡಿಯೇ ಇಲ್ಲ. ಇಂತಹದೊಂದು ಅಚ್ಚರಿಪಡುವಂತಹ ಘಟನೆ ರಾಜಸ್ತಾನದಲ್ಲಿ ನಡೆದಿದೆ.

    ಹೌದು, ಕೋಟಾದಲ್ಲಿ 56 ವರ್ಷದ ಬದ್ರಿಲಾಲ್ ಎಂಬವರ ದೇಹದಲ್ಲಿ ಬರೋಬ್ಬರಿ 150 ಗುಂಡು ಸೂಜಿಗಳು ಸಿಕ್ಕಿವೆ. ಆದರೆ ಈ ಸೂಜಿಗಳು ನನ್ನ ದೇಹದೊಳಗೆ ಹೇಗೆ ಹೋಗಿದೆ ಅನ್ನುವುದೆ ಗೊತ್ತಿಲ್ಲ ಅಂತ ಬದ್ರಿಲಾಲ್ ಹೇಳಿದ್ದಾರೆ.

    ದೇಹದ ಕೆಲವು ಕಡೆ ಅಂದರೆ ಗಂಟಲು, ಪಾದ, ಕುತ್ತಿಗೆ ಹೀಗೆ ಹಲವಾರು ಭಾಗಗಳಿಗೆ ಸೂಜಿ ಸಿಕ್ಕಿಕೊಂಡಿರುವುದು ಕಂಡು ಬಂದಿದೆ. ದೇಹದಲ್ಲಿ ಸಿಕ್ಕಿಕೊಂಡಿರುವ ಎಲ್ಲ ಸೂಜಿಗಳಲ್ಲಿ ಒಂದು ಮಾತ್ರ ತುಕ್ಕು ಹಿಡಿದಿದೆ. ಈ ಸೂಜಿಗಳು 6 ತಿಂಗಳ ಹಿಂದೆಯೇ ದೇಹಕ್ಕೆ ಹೋಗಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

    ಇದೂವರೆಗೂ ಆಸ್ಪತ್ರೆಗಳಿಗೆ ಬದ್ರಿಲಾಲ್ ಅವರು ಆರು ಬಾರಿ ಹೋಗಿ ಬಂದಿದ್ದಾರೆ. ಆದರೆ ಇಷ್ಟೆಲ್ಲಾ ಸೂಜಿಗಳು ದೇಹದಲ್ಲಿದ್ದರೂ ಇವರು ಬದುಕಿದ್ದೆ ಹೆಚ್ಚು ಎಂದು ವೈದ್ಯರು ಹೇಳಿದ್ದಾರೆ. ಈಗ 91 ಸೂಜಿಗಳನ್ನು ಹೊರ ತಗೆಯಲಾಗಿದೆ. ದೇಹದ ಸೂಕ್ಷ್ಮವಾದ ಜಾಗಗಳಲ್ಲಿ ಸೂಜಿಗಳು ಚುಚ್ಚಿಕೊಂಡಿದ್ದರಿಂದ ಹೊರ ತಗೆಯಲು ವೈದ್ಯರು ಹರ ಸಾಹಸಪಡುತ್ತಿದ್ದಾರೆ.

  • ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!

    ಮಗುವಿಗೆ `ಜಿಎಸ್‍ಟಿ’ ಅಂತಾ ಹೆಸರಿಟ್ರು!

    ಜೈಪುರ: ಭಾರತದಲ್ಲಿ ಜಿಎಸ್‍ಟಿ ಶಕೆ ಈಗಾಗಲೇ ಆರಂಭವಾಗಿದ್ದು, ಆಗ ತಾನೇ ಹುಟ್ಟಿದ ಮಗುವಿಗೆ `ಜಿಎಸ್‍ಟಿ’ ಅಂತಾ ನಾಮಕರಣ ಮಾಡಿದ ರಾಜಸ್ತಾನದ ದಂಪತಿ ಇದೀಗ ಸುದ್ದಿಯಾಗಿದ್ದಾರೆ.

    ಹೌದು. ಜುಲೈ 1 ರಿಂದ ಜಿಎಸ್‍ಟಿ(ಏಕರೂಪ ತೆರಿಗೆ ನೀತಿ) ಜಾರಿಯಾಗಿದೆ. ಶುಕ್ರವಾರ ಮಧ್ಯರಾತ್ರಿ ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜಿಎಸ್‍ಟಿಗೆ ಚಾಲನೆ ನೀಡಿದ ವೇಳೆ ಇತ್ತ ರಾಜಸ್ತಾನದ ಬೇವ್ವಾದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಗುವಿಗೆ ಜಿಎಸ್‍ಟಿ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ಟ್ವೀಟ್ ಮಾಡಿದ್ದು, ಬೇಬಿ `ಜಿಎಸ್ ಟಿ’ ಆರೋಗ್ಯವಾಗಿ, ಸುಖ-ಶಾಂತಿಯಿಂದ ಬಾಳಲಿ ಎಂದು ತಿಳಿಸಿದ್ದಾರೆ.

    ಜೂನ್ 30ರ ಮಧ್ಯರಾತ್ರಿ ಇತಿಹಾಸ ಪ್ರಸಿದ್ಧ ಪಾರ್ಲಿಮೆಂಟ್‍ನ ಸೆಂಟ್ರಲ್ ಹಾಲ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಜಿಎಸ್ ಟಿಗೆ ಚಾಲನೆ ನೀಡಿದ್ದಾರೆ. ಬಳಿಕ ಮಾತನಾಡಿದ ಮೋದಿ, ಇದೊಂದು ಗುಡ್ ಅಂಡ್ ಸಿಂಪಲ್ ಟ್ಯಾಕ್ಸ್ ಎಂದು ಬಣ್ಣಿಸಿದ್ದರು.

    ಜಿಎಸ್‍ಟಿ ಜಾರಿಗೆ ಸಂಸತ್‍ಗಿಂತ ಪವಿತ್ರ ಸ್ಥಳ ಮತ್ತೊಂದಿಲ್ಲ. ಬಡವರ ಹಿತದ ಬಗ್ಗೆ ಜಿಎಸ್‍ಟಿಯಲ್ಲಿ ಗಮನ ಹರಿಸಲಾಗಿದೆ. ನವಭಾರತ ಕಟ್ಟುವಲ್ಲಿ ಜಿಎಸ್‍ಟಿ ರಹದಾರಿಯಾಗಲಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ದೇಶದ ಏಕೀಕರಣ ಮಾಡಿದ್ರು. ಅದರಂತೆ ಜಿಎಸ್‍ಟಿ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ. ಲೇಹ್‍ನಿಂದ ಲಕ್ಷದ್ವೀಪದವರೆಗೆ, ಗಂಗಾನಗರದಿಂದ ಇಟಾ ನಗರದವರೆಗೆ ಒಂದೇ ತೆರಿಗೆ. ಜಿಎಸ್‍ಟಿ ಯಶಸ್ಸು ಕೇವಲ ಒಂದು ಸರ್ಕಾರಕ್ಕೆ ಸೇರಿದ್ದಲ್ಲ. ಹಿಂದಿನ ಎಲ್ಲ ಸರ್ಕಾರಗಳ ಸಾಮೂಹಿಕ ಶ್ರಮದ ಫಲವಾಗಿ ಎರಡು ದಶಕಗಳ ಕನಸು ಸಾಕಾರಗೊಂಡಿದೆ. ಭಗವದ್ಗೀತೆಯಲ್ಲಿನ 18 ಅಧ್ಯಾಯಗಳಂತೆ ಜಿಎಸ್‍ಟಿ ಮಂಡಳಿ ಸಹ 18 ಸಭೆ ನಡೆಸಿತ್ತು. ಕಪ್ಪುಹಣಕ್ಕೆ ಕಡಿವಾಣ ಬೀಳಲಿದೆ. ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಅಂತಾ ಹೇಳಿದ್ದರು.

    ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಮಾತನಾಡಿ, ಹೊಸ ತೆರಿಗೆ ವ್ಯವಸ್ಥೆ ದೇಶದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದ್ದು, ಡಿಜಿಟಲ್ ಮತ್ತು ಮಾಹಿತಿ ತಂತ್ರಜ್ಞಾನದಿಂದಾಗಿ ಜಿಎಸ್‍ಟಿ ಜಾರಿ ಸುಲಭವಾಗಲಿದೆ. ವ್ಯಾಟ್ ಜಾರಿಯಾದ ಹೊಸದರಲ್ಲಿ ಎದುರಾದ ತೊಂದರೆಯೇ ಈಗಲೂ ಆಗಬಹುದು. ಹೊಸ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ನಾನು ಕೂಡ ಜಿಎಸ್‍ಟಿ ಯಾತ್ರೆಯ ಭಾಗವಾಗಿದ್ದೆ. ದೇಶದ ಖ್ಯಾತ ಆರ್ಥಿಕ ತಜ್ಞರು, ಹಣಕಾಸು ಸಚಿವರ ಒಡನಾಟ ಲಭಿಸಿತು ಎಂದು ಮುಖರ್ಜಿ ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

    ಈ ವೇಳೆ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

  • ಓವರ್‍ಲೋಡ್ ಆಗಿದ್ದ ಲಾರಿ ಕಾರ್ ಮೇಲೆ ಬಿದ್ದು ಐವರ ಸಾವು

    ಓವರ್‍ಲೋಡ್ ಆಗಿದ್ದ ಲಾರಿ ಕಾರ್ ಮೇಲೆ ಬಿದ್ದು ಐವರ ಸಾವು

    ಜೈಪುರ: ಓವರ್‍ಲೋಡ್ ಆಗಿದ್ದ ಲಾರಿಯೊಂದು ಕಾರಿನ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಐವರು ಸಾವನ್ನಪ್ಪಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ಇಂದು ಮುಂಜಾನೆ 4 ಗಂಟೆ ವೇಳೆಯಲ್ಲಿ ಇಲ್ಲಿನ ಚೋಮು ಹೌಸ್ ಸರ್ಕಲ್ ಬಳಿ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ರಾಹುಲ್, ರೋಶಿನಿ, ಜ್ಯೋತಿ, ನಿತೇಶ್ ಹಾಗೂ ಸ್ವೀಟಿ ಎಂದು ಗುರುತಿಸಲಾಗಿದೆ.

    ಘಟನೆ ನಡೆದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಲಾರಿ ಬಿದ್ದ ಪರಿಣಾಮ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿ ಮೃತದೇಹಗಳನ್ನು ಹೊರತೆಗೆಯುವುದೇ ಕಷ್ಟವಾಯ್ತು ಎಂದು ಪೊಲೀಸ್ ಅಧಿಕಾರಿ ಕಮಲ್ ನಯನ್ ಹೇಳಿದ್ದಾರೆ.

    ಲಾರಿಯಲ್ಲಿ ಉಪ್ಪಿನ ಮೂಟೆಗಳನ್ನ ಕೊಂಡೊಯ್ಯಲಾಗುತ್ತಿತ್ತು ಎಂದು ವರದಿಯಾಗಿದೆ.

  • ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಕಾರಿನ ಮುಂಭಾಗದ ಗ್ಲಾಸ್ ಮೇಲೆ ಹಾರಿ ಸಿಲುಕಿಕೊಂಡ ಕುದುರೆ!

    ಜೈಪುರ: ಟಾಂಗಾಕ್ಕೆ ಕಟ್ಟಿದ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗಾಜಿನ ಮೇಲೆ ಹಾರಿದ ಪರಿಣಾಮ ಕಾರು ಚಾಲಕ ಹಾಗೂ ಕುದುರೆ ಗಾಯಗೊಂಡ ಘಟನೆ ಜೈಪುರದಲ್ಲಿ ನಡೆದಿದೆ.

    ಈ ಘಟನೆಯು ಭಾನುವಾರ ಸುಮಾರು 1.30ರ ವೇಳೆಗೆ ಜೈಪುರದ ಸಿವಿಲ್ ಲೈನ್ಸ್ ಪ್ರದೇಶದ ಬಳಿ ನಡೆದಿದೆ. ಈ ವೇಳೆ ಅಲ್ಲಿನ ಬಿಸಿಲಿನ ತಾಪ 42 ಡಿಗ್ರಿ ಸೆಲ್ಸಿಯಸ್ ಇತ್ತು. ಹೀಗಾಗಿ ಬಿಸಿಲಿನ ಬೇಗೆಗೆ ಕಂಗೆಟ್ಟ ಕುದುರೆ ತನ್ನ ನಿಯಂತ್ರಣ ತಪ್ಪಿ ಕಾರಿನ ಮುಂಬದಿಯ ಗ್ಲಾಸ್ ಮೇಲೆ ಹಾರಿದೆ. ಪರಿಣಾಮ ಮುಂಬದಿಯ ಗಾಜು ಪುಡಿಪುಡಿಯಾಗಿ ಕುದುರೆ ಕಾರೊಳಗೆ ಸಿಲುಕಿದೆ. ಇದರಿಂದ ಚಾಲಕ ಗಾಯಗೊಂಡಿದ್ದು, ಕುದುರೆಗೂ ಸಣ್ಣಪುಟ್ಟ ಗಾಯಗಳಾಗಿವೆ ಅಂತಾ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

    ಗಾಯಗೊಂಡ ಕಾರು ಚಾಲಕನನ್ನು ಪಂಕಜ್ ಜೋಶಿ ಅಂತಾ ಗುರುತಿಸಲಾಗಿದೆ. ಇನ್ನು ಸಾರ್ವಜನಿಕರು ಘಟನೆಯ ಫೊಟೋ ಹಾಗೂ ವಿಡಿಯೋ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    `ನಾನು ಆಗಷ್ಟೇ ನನ್ನ ಕಾರು ಸ್ಟಾರ್ಟ್ ಮಾಡಿದೆ. ಸಡನ್ ಆಗಿ ನನ್ನ ಕಾರಿನ ಮುಂಬದಿಯ ಗ್ಲಾಸ್ ಒಡೆದಿದ್ದು ಗೊತ್ತಾಗಿದೆ. ನೋಡನೋಡುತ್ತಲೇ ಕುದರೆ ತನ್ನ ಕಾರೊಳಗೆ ಸಿಲುಕಿಕೊಂಡಿದೆ. ಪರಿಣಾಮ ನನ್ನ ಎರಡೂ ಕೈಗಳಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಅಂತಾ ಜೋಶಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಘಟನೆ ನಡೆಯುತ್ತಿದ್ದಂತೆಯೇ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದು, ಕಾರೊಳಗಿನಿಂದ ಕುದುರೆಯನ್ನು ಹೊರ ತೆಗೆದಿದ್ದಾರೆ. ಘಟನೆಯಿಂದ ಗಾಯಗೊಂಡ ಕುದುರೆಗೆ ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಲಾಗಿದೆ. ವಿಪರೀತ ಬಿಸಿಲು ಇದ್ದ ಕಾರಣ ಈ ಘಟನೆ ನಡೆದಿದೆ ಅಂತಾ ಪೊಲೀಸರು ಹೇಳಿದ್ದಾರೆ.

    https://www.youtube.com/watch?v=zg1tBy-aZbI