Tag: Jaipur

  • ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನ ದತ್ತು ಪಡೆದ ನಿರ್ಮಾಪಕ

    ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನ ದತ್ತು ಪಡೆದ ನಿರ್ಮಾಪಕ

    ಜೈಪುರ್: ರಾಜಸ್ಥಾನದಲ್ಲಿ ಆಗ ತಾನೇ ಹುಟ್ಟಿದ ಹೆಣ್ಣು ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದರು. ಇದೀಗ ಆ ಮಗುವನ್ನು ಚಲನಚಿತ್ರ ನಿರ್ಮಾಪಕರೊಬ್ಬರು ದತ್ತು ಪಡೆದಿದ್ದಾರೆ.

    ಬಾಲಿವುಡ್ ನಿರ್ಮಾಪಕ ವಿನೋದ್ ಕಾಪ್ರಿ ಮಗುವನ್ನು ದತ್ತು ತೆಗೆದುಕೊಳ್ಳುತ್ತಿದ್ದಾರೆ. ಕಸದ ತೊಟ್ಟಿಯಲ್ಲಿ ಮಗು ಪತ್ತೆಯಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ ವಿನೋದ್ ಕಾಪ್ರಿ ಅವರು ಮಗುವನ್ನು ದತ್ತು ಪಡೆಯಲು ನಿರ್ಧಾರ ಮಾಡಿದ್ದಾರೆ. ಅಷ್ಟೇ ಅಲ್ಲದೇ ವಿನೋದ್ ಅವರು ತಮ್ಮ ಕೊನೆಯ ಸಿನಿಮಾ ‘ಪಿಹು’ ಟೈಟಲ್ ಅನ್ನೇ ಮಗುವಿಗೆ ಹೆಸರಿಟ್ಟಿದ್ದಾರೆ.

    ಇದೀಗ ನಾವು ಪುಟ್ಟ ದೇವತೆ ಪ್ರೀತಿಯಲ್ಲಿ ಬಿದ್ದಿದ್ದೇವೆ. ಮುಂದೆ ಮಾಡುವುದು ಬಹಳಷ್ಟಿದೆ. ಸದ್ಯಕ್ಕೆ ದತ್ತು ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು, ಮಗು ನಮ್ಮ ಮನೆಗೆ ಬರುವವರೆಗೂ ಇದರ ಬಗ್ಗೆ ನಾನು ಮಾತನಾಡಲು ಇಷ್ಟಪಡುವುದಿಲ್ಲ. ಮಗು ಕೇವಲ 1.6 ಕಿಲೋಗ್ರಾಂ ತೂಕವಿತ್ತು ಮತ್ತು ಆಸ್ಪತ್ರೆಗೆ ದಾಖಲಾದಾಗ ಉಸಿರಾಡಲು ಸಮಸ್ಯೆಯಿತ್ತು. ಸದ್ಯಕ್ಕೆ ಮಗು ಆರೋಗ್ಯವಾಗಿದೆ ಎಂದು ವಿನೋದ್ ಹೇಳಿದ್ದಾರೆ.

    ಅಪ್ಪಂದಿರ ದಿನದಂದು ಮಗುವಿನ ವೀಡಿಯೊವನ್ನು ವಿನೋದ್ ಹಂಚಿಕೊಂಡಿದ್ದು, ವಿಡಿಯೋದಲ್ಲಿ ವಿನೋದ್ ಮಗವನ್ನು ತಮ್ಮ ಕೈಯಲ್ಲಿ ಎತ್ತಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ರಾಜಸ್ಥಾನದ ನಾಗೌರ್ ದಲ್ಲಿ ಆಗ ತಾನೇ ಹುಟ್ಟಿದ ಮಗವನ್ನು ಕಸದ ತೊಟ್ಟಿಯಲ್ಲಿ ಬಿಟ್ಟುಹೋಗಿದ್ದರು. ಮಗು ಒಂದೇ ಸಮನೆ ಅಳುತ್ತಿದ್ದ ಧ್ವನಿ ಕೇಳಿದ ಸ್ಥಳೀಯರು ಮಗವನ್ನು ಕಾಪಾಡಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿತ್ತು.

    ವಿಡಿಯೋವನ್ನು ನೋಡಿದ ವಿನೋದ್ ಕಾಪ್ರಿ ತಕ್ಷಣ ಆಸ್ಪತ್ರೆಗೆ ಹೋಗಿ ಹೆಣ್ಣುಮಗುವನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದ್ದರು. ಸದ್ಯಕ್ಕೆ ವಿನೋದ್ ಕಾಪ್ರಿ ‘155 Hours’  ಎಂಬ ಚಿತ್ರವನ್ನು ಮಾಡುವುದಾಗಿ ಹೇಳಿದ್ದಾರೆ.

  • ಜಲಕ್ಷಾಮದಿಂದ ಮದ್ವೆಯಾಗದೇ ಕುಳಿತ ಯುವಕರು

    ಜಲಕ್ಷಾಮದಿಂದ ಮದ್ವೆಯಾಗದೇ ಕುಳಿತ ಯುವಕರು

    ಜೈಪುರ: ರಾಜಸ್ಥಾನ ರಾಜ್ಯದ ಸಿಕಾರ್ ಜಿಲ್ಲೆಯ ಕೀರೋ ಕಿ ಧನಿ ಹಳ್ಳಿಯಲ್ಲಿನ ಯುವಕರನ್ನು ಮದುವೆಯಾಗಲು ಯುವತಿಯರು ನಿರಾಕರಿಸುತ್ತಿದ್ದಾರೆ.

    ಕೀರೋ ಕಿ ಧನಿ ಗ್ರಾಮದಲ್ಲಿ ನೀರಿನ ಅಭಾವವಿದ್ದು, ಹನಿ ನೀರಿಗೂ ಅಲ್ಲಿ ಪರದಾಡಬೇಕು. ಒಂದು ವೇಳೆ ಈ ಗ್ರಾಮಕ್ಕೆ ಮದುವೆಯಾಗಿ ಬಂದರೆ ನೀರು ಹೊರುವುದರಲ್ಲೇ ಜೀವನ ಸಾಗುತ್ತದೆ ಎಂಬ ಭಯದಿಂದ ಪೋಷಕರು ತಮ್ಮ ಪುತ್ರಿಯರನ್ನು ಇಲ್ಲಿಯ ಯುವಕರೊಂದಿಗೆ ಮದುವೆ ಮಾಡಿಸುತ್ತಿಲ್ಲ. ಕೆಲ ಯುವತಿಯರು ಕೀರೋ ಕಿ ಧನಿ ಗ್ರಾಮದ ಹುಡುಗ ಎಂದು ತಿಳಿದ್ರೆ ಸಾಕು ಈ ಮದುವೆ ಬೇಡ ಎಂದು ಹೇಳುತ್ತಾರೆ ಅಂತ ಗ್ರಾಮಸ್ಥರು ಹೇಳುತ್ತಾರೆ.


    ಈ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಒಂದೇ ಕೊಳವೆ ಬಾವಿಯಿದ್ದು, ಹಳ್ಳಿಯ 50 ಕುಟುಂಬಕ್ಕೂ ಅದೇ ನೀರಿನ ಮೂಲ. ಕೆಲವೊಮ್ಮೆ ಈ ಕೊಳವೆಬಾವಿಯಲ್ಲಿಯೂ ನೀರು ಸಿಗುವುದಿಲ್ಲ. ಹೀಗಾಗಿ ಕೆಲವೊಮ್ಮೆ ಕಿ.ಮೀ ಗಟ್ಟಲೆ ನೀರಿಗಾಗಿ ನಡೆಯುವ ಪರಿಸ್ಥಿತಿಗಳು ಎದುರಾಗುತ್ತವೆ.

    ನಾನು ನನ್ನ ಇಬ್ಬರು ಮಕ್ಕಳಿಗೆ ಮದುವೆ ಮಾಡಲು ಎರಡು ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇಲ್ಲಿ ನೀರಿಲ್ಲದ ಕಾರಣ ಮದುವೆ ಮುರಿದು ಬೀಳುತ್ತಿದೆ. ಇತ್ತೀಚೆಗಷ್ಟೆ ನನ್ನ ದೊಡ್ಡ ಮಗನಿಗೆ ಒಂದು ಕಡೆ ಒಪ್ಪಿಗೆಯಾಗಿದೆ. ಆದರೆ ಅವರು ಇಲ್ಲಿನ ಪರಿಸ್ಥಿತಿ ಕಂಡೂ ಮದುವೆ ಮಾಡುತ್ತಾರೆಂಬ ಭರವಸೆ ನನಗಿಲ್ಲ ಎಂದು ಗ್ರಾಮಸ್ಥೆ ರೇಖಾ ಹೇಳುತ್ತಾರೆ.

    ಗ್ರಾಮದ ಯುವಕ ನೇಮಿ ಚಂದ್, ನೀರಿಲ್ಲದ ಈ ಊರಿಗೆ ಮದುವೆಯಾಗಲು ಯಾರು ತಾನೆ ಬಯಸುತ್ತಾರೆ. ನನ್ನ ತಂದೆ-ತಾಯಿ ತುಂಬಾ ಪ್ರಯತ್ನ ಮಾಡಿ ಮದುವೆ ನಿಶ್ಚಯಿಸಿರುತ್ತಾರೆ. ಆದರೆ ನೀರಿಲ್ಲದ ಕಾರಣ ಎಲ್ಲ ಸಂಬಂಧಗಳು ಹಿಂದೆ ಸರಿದಿವೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ

    ಟಿಕ್‍ಟಾಕ್‍ಗೆ ಮತ್ತೊಂದು ಬಲಿ – ಮಂಗಳಸೂತ್ರ, ಬಳೆ ಧರಿಸಿ ನೇಣು ಹಾಕಿಕೊಂಡ 12ರ ಪೋರ

    – ಟಿಕ್‍ಟಾಕ್ ಇಲ್ಲದಿದ್ದರೆ ಮಗ ಜೀವಂತವಾಗಿರುತ್ತಿದ್ದ

    ಜೈಪುರ: ಇತ್ತೀಚಿನ ದಿನಗಳಲ್ಲಿ ಮನರಜಂನೆಗೆ ಬಳಕೆಯಾಗಬೇಕಿದ್ದ ಸಾಮಾಜಿಕ ಜಾಲತಾಣ ಮನುಷ್ಯರ ಜೀವವನ್ನು ಬಲಿ ಪಡೆದುಕೊಳ್ಳುತ್ತಿದೆ. ಇದಕ್ಕೆ ಪೂರಕ ಎಂಬಂತೆ 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೇಣು ಹಾಕಿಕೊಂಡ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

    ರಾಜಸ್ತಾನದ ಕೋಟಾ ಎಂಬಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, 12 ವರ್ಷದ ಬಾಲಕನೊಬ್ಬ ಟಿಕ್‍ಟಾಕ್‍ನಲ್ಲಿ ಬರುವ ವಿಡಿಯೋವನ್ನು ಸವಾಲಾಗಿ ತೆಗೆದುಕೊಂಡು ತಾನು ಅದೇ ರೀತಿ ಮಾಡಲು ಹೋಗಿ ಬಾತ್‍ರೂಮ್‍ನಲ್ಲಿ ನೇಣು ಹಾಕಿಕೊಂಡಿದ್ದಾನೆ.

    ನೇಣು ಹಾಕಿಕೊಳ್ಳುವ ಮೊದಲು, ಹುಡುಗ ಮಂಗಳಸೂತ್ರ ಮತ್ತು ಬಳೆಯನ್ನು ಧರಿಸಿದ್ದಾನೆ. ನಂತರ ಅವನು ತನ್ನ ಕುತ್ತಿಗೆಗೆ ದಪ್ಪವಾದ ಲೋಹದ ಸರಪಳಿಯನ್ನು ಸುತ್ತಿಕೊಂಡು ಬಾತ್‍ರೂಮ್‍ನಲ್ಲಿ ನೇಣುಹಾಕಿಕೊಂಡಿದ್ದಾನೆ. ಪ್ರತಿದಿನ ತುಂಬ ಟಿಕ್‍ಟಾಕ್ ವಿಡಿಯೋ ನೋಡುತ್ತಿದ್ದ ಬಾಲಕ ಟಿಕ್‍ಟಾಕ್‍ನಲ್ಲಿ ಬರುವ ಹಾಗೇ ತಾನು ಮಾಡಲು ಹೋಗಿ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ.

    ನನ್ನ ಮಗ ಇಡೀ ರಾತ್ರಿ ಟಿಕ್‍ಟಾಕ್ ಬಳಸುತ್ತಿದ್ದನು. ಅವನು ನಮಗೆ ಟಿಕ್‍ಟಾಕ್‍ನಲ್ಲಿ ಒಂದು ಸಾವಲಿನ ಬಗ್ಗೆ ಹೇಳುತ್ತಿದ್ದ. ಅದೇ ರೀತಿ ಮಂಗಳಸೂತ್ರ ಮತ್ತು ಬಳೆ ಧರಿಸಿ ಕಬ್ಬಿಣದ ಸರಪಳಿಯಿಂದ ನೇಣು ಹಾಕಿಕೊಂಡಿದ್ದಾನೆ. ಟಿಕ್‍ಟಾಕ್ ಇಲ್ಲದಿದ್ದರೆ ನನ್ನ ಮಗ ಜೀವಂತವಾಗಿ ಇರುತ್ತಿದ್ದ ಎಂದು ಬಾಲಕನ ತಂದೆ ದುಃಖ ವ್ಯಕ್ತಪಡಿಸಿದ್ದಾರೆ.

    ಈ ಘಟನೆ ತಡರಾತ್ರಿ ನಡೆದಿದ್ದು, ಬೆಳಗ್ಗೆ ಬಾಲಕ ಕಾಣುತ್ತಿಲ್ಲ ಎಂದು ಮನೆಯವರು ಹುಡುಕಿದಾಗ ಅವನು ಅವರ ಮನೆಯ ಬಾತ್‍ರೂಮಿನಲ್ಲೇ ನೇಣು ಹಾಕಿಕೊಂಡಿದ್ದಾನೆ. ತಕ್ಷಣ ಮನೆಯವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆಗಲೇ ಬಾಲಕ ಸಾವನ್ನಪ್ಪಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಭರತ್ ಸಿಂಗ್ ಹೇಳಿದ್ದಾರೆ.

    ಕೆಳೆದ ವಾರವಷ್ಟೇ ತಮಿಳುನಾಡಿನ ಚೆನ್ನೈನಲ್ಲಿ ಟಿಕ್‍ಟಾಕ್ ಮಾಡುವುದನ್ನು ಬಿಟ್ಟು ಮಕ್ಕಳನ್ನು ಚೆನ್ನಾಗಿ ನೋಡಿಕೋ ಎಂದು ಪತಿ ಬೈದಿದ್ದಕ್ಕೆ ಟಿಕ್‍ಟಾಕ್ ಮಾಡುತ್ತಲೇ ಕೀಟನಾಶಕ ಕುಡಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ರೋಗಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ದಂಗಾದ ವೈದ್ಯರು

    ರೋಗಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ನೋಡಿ ದಂಗಾದ ವೈದ್ಯರು

    ಜೈಪುರ್: ರಾಜಸ್ಥಾನದ ಉದಯ್‍ಪುರ್ ನ ಸರ್ಕಾರಿ ಆಸ್ಪತ್ರೆಯ ವೈದ್ಯರು ಮಾನಸಿಕ ರೋಗಿಯ ಹೊಟ್ಟೆಯಲ್ಲಿದ್ದ ವಸ್ತುಗಳನ್ನು ಕಂಡು ದಂಗಾಗಿದ್ದಾರೆ.

    ಹೌದು.. ಸೋಮವಾರ ನಾಲ್ವರು ವೈದ್ಯರ ತಂಡವು 90 ನಿಮಿಷಗಳ ಕಾಲ ಆಪರೇಷನ್ ಮಾಡಿದೆ. ಈ ವೇಳೆ ವ್ಯಕ್ತಿಯ ಹೊಟ್ಟೆಯಲ್ಲಿ ಚುಟ್ಟಾ, ಕೀಗಳು ಮತ್ತು ನಾಣ್ಯಗಳು ಸೇರಿದಂತೆ ಸುಮಾರು 80 ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ಹೊರ ತೆಗೆದಿದ್ದಾರೆ.

    ಇದನ್ನು ವಿಚಿತ್ರ ಕೇಸ್ ಎಂದು ಪರಿಗಣಿಸಲಾಗಿದೆ. ವ್ಯಕ್ತಿ ತೀವ್ರ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದನು. ನಂತರ ನಾವು ವ್ಯಕ್ತಿಗೆ ಎಕ್ಸ್-ರೇ ಮಾಡಿಸಿದ್ದೆವು. ಆಗ ಆತನ ಹೊಟ್ಟೆಯೊಳಗೆ ಉಗುರುಗಳು ಸೇರಿದಂತೆ ಸಣ್ಣ ಮತ್ತು ದೊಡ್ಡ ಮೆಟಲ್ ವಸ್ತುಗಳನ್ನು ಕಂಡು ಬಂದಿದ್ದು, ನಮಗೆ ನಿಜಕ್ಕೂ ಅಚ್ಚರಿಯಾಯಿತು ಎಂದು ಡಾ.ಡಿ.ಕೆ ಶರ್ಮಾ ತಿಳಿಸಿದ್ದಾರೆ.

    ವೈದ್ಯರು ತಡಮಾಡದೆ ತಕ್ಷಣ ಶಸ್ತ್ರಚಿಕಿತ್ಸೆಗೆ ರೋಗಿಯನ್ನು ಒಳಪಡಿಸಿ ಒಟ್ಟು 800 ಗ್ರಾಂ ತೂಕದ ವಸ್ತುಗಳನ್ನು ಹೊರ ತೆಗೆದಿದ್ದಾರೆ. ರೋಗಿಯು ಮಾನಸಿಕ ಅಸ್ವಸ್ಥ ಮತ್ತು ವ್ಯಸನಿಯಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ

    ರೋಗಿ ಮಾನಸಿಕ ಅಸ್ವಸ್ಥ, ವ್ಯಸನಿಯಾಗಿದ್ದನು. ಆತನಿಗೆ ನಿರಂತರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕುಟುಂಬದವರು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು ಎಂದು ಶರ್ಮಾ ಹೇಳಿದ್ದಾರೆ.

    ಸದ್ಯಕ್ಕೆ ರೋಗಿಯ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ತಿಂಗಳು 40 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲೂ ವೈದ್ಯರು 116 ಉಗುರುಗಳು, ಉದ್ದನೆಯ ತಂತಿಯನ್ನು ಆಪರೇಷನ್ ಮಾಡಿ ಹೊರ ತೆಗೆದಿದ್ದರು.

  • ನ್ಯಾಯ ತೀರ್ಮಾನಕ್ಕಾಗಿ ನ್ಯಾಯಾಲಯಕ್ಕೆ ಬಂದ ಹಸು

    ನ್ಯಾಯ ತೀರ್ಮಾನಕ್ಕಾಗಿ ನ್ಯಾಯಾಲಯಕ್ಕೆ ಬಂದ ಹಸು

    ಜೈಪುರ: ಸಾಮಾನ್ಯವಾಗಿ ನ್ಯಾಯ ತೀರ್ಮಾನಕ್ಕಾಗಿ ಜನರು ನ್ಯಾಯಾಲಯಕ್ಕೆ ಹೋಗುತ್ತಾರೆ. ಆದರೆ ಹಸುವೊಂದ ಮಾಲೀಕತ್ವದ ವಿವಾದಕ್ಕಾಗಿ ನ್ಯಾಯಾಲಯಕ್ಕೆ ಬರುವಂತಾದ ಘಟನೆ ರಾಜಸ್ಥಾನದ ಜೋಧ್‌ಪುರ್‌ನಲ್ಲಿ ನಡೆದಿದೆ.

    ಈ ಪ್ರಕರಣದಲ್ಲಿ ಹಸು ಯಾರಿಗೂ ಹಾನಿಯನ್ನುಂಟು ಮಾಡಿಲ್ಲ. ಜೊತೆಗೆ ಅದರ ತಪ್ಪೇನೂ ಇರಲಿಲ್ಲ. ಆದರೆ ಹಸುವಿನ ಮಾಲೀಕತ್ವಕ್ಕಾಗಿ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದರು. ಓಂ ಪ್ರಕಾಶ್ ಮತ್ತು ಶ್ಯಾಮ್ ಸಿಂಗ್ ಇಬ್ಬರ ನಡುವೆ 2018ರಿಂದಲೂ ಈ ಹಸುವಿನ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ವಿವಾದ ನಡೆಯುತ್ತಲೇ ಇದೆ.

    ಈ ಮಾಲೀಕತ್ವದ ವಿಚಾರವಾಗಿ ಇಬ್ಬರು ಕುಳಿತು ಮಾತುಕತೆ ನಡೆಸಿದ್ದಾರೆ. ಆದರೆ ಮಾತುಕತೆಯಲ್ಲಿ ಬಗೆಹರಿಯದ ಪರಿಣಾಮ ಇಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ನ್ಯಾಯಾಧೀಶರು ಈ ಪ್ರಕರಣ ಕುರಿತು ವಿಚಾರಣೆ ಮಾಡುವ ಸಂದರ್ಭದಲ್ಲಿ ಹಸುವನ್ನು ಕೂಡ ಕೋರ್ಟ್‍ಗೆ ಕರೆದುಕೊಂಡು ಬನ್ನಿ ಎಂದು ಆದೇಶಿಸಿದ್ದಾರೆ. ಹೀಗಾಗಿ ಹಸುವನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಬರಲಾಗಿತ್ತು.

    ನ್ಯಾಯಾಧೀಶರು ಎಲ್ಲ ಸಾಕ್ಷ್ಯಗಳನ್ನು ಪರಿಶೀಲನೆ ಮಾಡಿ ಹಸು ಓಂ ಪ್ರಕಾಶ್ ಸೇರಬೇಕಿದೆ ಎಂದು ತೀರ್ಪು ನೀಡಿದ್ದು, ಆತನ ಸುಪರ್ದಿಗೆ ಹಸುವನ್ನು ನೀಡಲಾಗಿದೆ.

    ವಿಚಾರಣೆ ಸಂದರ್ಭದಲ್ಲಿ ಲಾಯರ್ ಶ್ಯಾಮ್ ಸಿಂಗ್‍ಗೆ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆತ ಕೊಟ್ಟ ಉತ್ತರ ಅಸ್ಪಷ್ಟವಾಗಿತ್ತು. ಹೀಗಾಗಿ ಸಾಕ್ಷ್ಯಗಳ ಆಧಾರದ ಮೇಲೆ ಹಸುವನ್ನು ಓಂ ಪ್ರಕಾಶ್‍ಗೆ ಹಸುವನ್ನು ನೀಡುವಂತೆ ಕೋರ್ಟ್ ತೀರ್ಪು ನೀಡಿದೆ ವಕೀಲರು ತಿಳಿಸಿದ್ದಾರೆ. ಸದ್ಯಕ್ಕೆ ಈ ಪ್ರಕರಣ ರಾಜಸ್ಥಾನದಲ್ಲಿ ಚರ್ಚೆಯಾಗುತ್ತಿದೆ.

  • ಸೆಲ್ಫಿ ಕ್ಲಿಕ್ಕಿಸಿ ಒಬ್ಬರಿಗೊಬ್ಬರು ಗುಂಡಿಟ್ಟುಕೊಂಡ ಪ್ರೇಮಿಗಳು

    ಸೆಲ್ಫಿ ಕ್ಲಿಕ್ಕಿಸಿ ಒಬ್ಬರಿಗೊಬ್ಬರು ಗುಂಡಿಟ್ಟುಕೊಂಡ ಪ್ರೇಮಿಗಳು

    ಜೈಪುರ: ವಿವಾಹಿತ ಮಹಿಳೆ ಹಾಗೂ ಆಕೆಯ ಪ್ರಿಯಕರ ಒಬ್ಬರಿಗೊಬ್ಬರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ರಾಜಸ್ಥಾನದ ಬಾರ್ಮರ್ ನಲ್ಲಿ ನಡೆದಿದೆ.

    ಅಂಜು ಸುತಾರ್ ಹಾಗೂ ಶಮ್ಕರ್ ಚೌದ್ರಿ ಮೃತ ಪ್ರೇಮಿಗಳು. ಅಂಜು ಹಾಗೂ ಶಮ್ಕರ್ ಇಬ್ಬರು 21 ವಯಸ್ಸಿನವರಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಅಂಜುಗೆ ಮದುವೆಯಾಗಿತ್ತು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ಕಲ್ ಆಫಿಸರ್ ಅಜಿತ್ ಸಿಂಗ್ ತಿಳಿಸಿದ್ದಾರೆ.

    ಪ್ರೇಮ ವೈಫಲ್ಯ ಹಿನ್ನೆಲೆಯಲ್ಲಿ ಇಬ್ಬರು ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ನಡೆದ ಸ್ಥಳದಲ್ಲಿ ದೇಸಿ ಪಿಸ್ತೂಲ್ ಪತ್ತೆಯಾಗಿದ್ದು, ನಾವು ಅದನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಬಾರ್ಮರ್ ಎಸ್‍ಪಿ ರಾಶಿ ದೋಗ್ರಾ ಹೇಳಿದ್ದಾರೆ.

    ಪೊಲೀಸರು ಪಿಸ್ತೂಲ್ ಜೊತೆ ಮೊಬೈಲ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಮೊಬೈಲಿನಲ್ಲಿ ಇದ್ದ ಆಡಿಯೋ ಕ್ಲಿಪ್‍ನಲ್ಲಿ ಲವ್ ಫೇಲ್ಯೂರ್ ಆಗಿದ್ದಕ್ಕೆ ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರೇಮಿಗಳು ಹೇಳಿದ್ದಾರೆ ಎಂದು ಸರ್ಕಲ್ ಆಫಿಸರ್ ಅಜಿತ್ ಸಿಂಗ್ ತಿಳಿಸಿದ್ದಾರೆ.

    ಅಂಜು ಹಾಗೂ ಶಮ್ಕರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

  • ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮೇಲೆರಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್

    ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮೇಲೆರಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್

    ಜೈಪುರ: ವಿವಾಹಿತ ಮಹಿಳೆಯ ಮೇಲೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಲ್ಲದೇ ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.

    30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಸೋಮವಾರ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಐವರು ಆರೋಪಿಗಳು ಬಂದು ಬಲವಂತವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಭಾನುವಾರ ಸಂಜೆ ಐದು ಆರೋಪಿಗಳ ವಿರುದ್ಧ ಸಂತ್ರಸ್ತೆ ಬಂದು ದೂರು ದಾಖಲಿಸಿದ್ದಾರೆ. ಅವರ ವಿರುದ್ಧ ಗ್ಯಾಂಗ್‍ರೇಪ್, ದೌರ್ಜನ್ಯ ಮತ್ತು ಐಪಿಸಿ ಸೆಕ್ಷನ್ ವಿಭಾಗಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಕಿಶೋರ್ ಸಿಂಗ್ ಭಾಟಿ ಹೇಳಿದರು.

    ನಾಲ್ಕು ಆರೋಪಿಗಳಾದ ಜಿತೇಂದ್ರ ಭಟ್ (20), ಗೋವಿಂದ್ ಭಟ್ (20), ದಿನೇಶ್ ಭಟ್ (24) ಮತ್ತು ಮಹೇಂದ್ರ ಭಟ್ (22) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಂಜಯ್ ಭಟ್ ನಾಪತ್ತೆಯಾಗಿದ್ದು, ಆತನಿಗೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.

    ಸದ್ಯಕ್ಕೆ ಆರೋಪಿಗಳನ್ನು ವಿಚಾರಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತೆಯ ಪತಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ ಎಂದು ಭಾಟಿ ತಿಳಿಸಿದ್ದಾರೆ.

  • ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ

    ಭೀಕರ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ದುರ್ಮರಣ

    ಜೈಪುರ: ರಸ್ತೆ ಅಪಘಾತದಲ್ಲಿ ವಿಶ್ವ ಖ್ಯಾತಿಯ ಡ್ಯಾನ್ಸ್ ಕ್ವೀನ್ ಹರೀಶ್ ಮತ್ತು ಇತರೆ ಮೂರು ಜಾನಪದ ಕಲಾವಿದರು ಮೃತಪಟ್ಟಿದ್ದು, ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಜಸ್ಥಾನದ ಜೋಧ್ಪುರದ ಬಳಿ ನಡೆದಿದೆ.

    ಜೋಧ್ಪುರದ ಹೆದ್ದಾರಿಯ ಕಪಾರ್ಡಾ ಗ್ರಾಮದ ಬಳಿ ಭಾನುವಾರ ಈ ಅಪಘಾತ ಸಂಭವಿಸಿದೆ. ಮೃತರು ಜೈಸಲ್ಮೇರ್ ನಿಂದ ಅಜ್ಮೇರ್ ಕಡೆಗೆ ಎಸ್‍ಯುವಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಈ ವಾಹನ ವೇಗವಾಗಿ ಎದುರಿಗೆ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಹರೀಶ್, ರವೀಂದ್ರ, ಭಿಖೇ ಖಾನ್ ಮತ್ತು ಲತೀಫ್ ಖಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸೀತರಾಮ್ ಖೋಜಾ ತಿಳಿಸಿದ್ದಾರೆ.

    ಮೃತ ಕ್ವೀನ್ ಹರೀಶ್ ಅವರು ತಮ್ಮ ಜಾನಪದ ಕಲಾವಿದರ ತಂಡದೊಂದಿಗೆ ಸಮಾರಂಭಕ್ಕೆ ಪ್ರಯಾಣ ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಲಾವಿದರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಜೋಧ್ಪುರದ ರಸ್ತೆ ಅಪಘಾತದಲ್ಲಿ ಪ್ರಸಿದ್ಧ ಕಲಾವಿದ ಕ್ವೀನ್ ಹರೀಶ್ ಸೇರಿದಂತೆ ನಾಲ್ಕು ಮಂದಿ ಸಾವು ತುಂಬಾ ದುಃಖವಾಗಿದೆ. ರಾಜಸ್ಥಾನದ ಜಾನಪದ ಕಲೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದ್ದು, ಹರೀಶ್ ಜೈಸಲ್ಮೇರ್ ನಲ್ಲಿ ತಮ್ಮ ಹೊಸ ನೃತ್ಯ ಶೈಲಿಯ ಮೂಲಕ ಗುರುತಿಸಿಕೊಂಡಿದ್ದರು. ಅವರ ಸಾವಿನಿಂದ ಜಾನಪದ ಕಲೆಯ ಕ್ಷೇತ್ರಕ್ಕೆ ನಷ್ಟವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

    ಮೃತ ಹರೀಶ್ ಕುಮಾರ್ ಜೈಸಲ್ಮೇರ್ ನಲ್ಲಿ ಕ್ವೀನ್ ಹರೀಶ್ ಎಂದು ಜನಪ್ರಿಯರಾಗಿದ್ದು, ಅವರ ಜಾನಪದ ನೃತ್ಯ ಕೌಶಲ್ಯಗಳಿಂದ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದರು.

  • ಸದ್ಯದಲ್ಲೇ ಅನಾವರಣಗೊಳ್ಳಲಿದೆ ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆ

    ಸದ್ಯದಲ್ಲೇ ಅನಾವರಣಗೊಳ್ಳಲಿದೆ ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆ

    ಜೈಪುರ: ಜಗತ್ತಿನ ಅತೀ ಎತ್ತರದ ಏಕತಾ ಪ್ರತಿಮೆ (ಸ್ಟಾಚು ಆಫ್ ಯುನಿಟಿ) ಬಳಿಕ ಭಾರತ ಇನ್ನೊಂದು ಅತೀ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ಕೈ ಹಾಕಿದ್ದು, ಜಗತ್ತಿನ ಅತೀ ಎತ್ತರದ ಶಿವನ ಪ್ರತಿಮೆಯನ್ನು ರಾಜಸ್ಥಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

    ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಏಕತಾ ಪ್ರತಿಮೆ ನಿರ್ಮಿಸಿ ಭಾರತ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ. ಜಗತ್ತಿನಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆ ಎಂದು ಬಿರುದು ಪಡೆದಿದೆ. ಈಗ ರಾಜಸ್ಥಾನದ ನಾಥದ್ವಾರದ ಗಣೇಶ್ ತೆಕ್ರಿ ಪ್ರದೇಶದಲ್ಲಿ ಪ್ರಪಂಚದ ಅತೀ ಎತ್ತರದ ಶಿವನ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ಈ ಪ್ರತಿಮೆಗೆ ‘ಸ್ಟ್ಯಾಚ್ಯೂ ಆಫ್ ಬಿಲೀಫ್’ ಎಂದು ಹೆಸರಿಡಲಾಗಿದೆ.

    ಆಗಸ್ಟ್ ತಿಂಗಳ ಒಳಗೆ ಪೂರ್ಣವಾಗುವ ನಿರೀಕ್ಷೆ ಇದೆ. ಈ ಪ್ರತಿಮೆಯನ್ನು ಬರೋಬ್ಬರಿ 2,500 ಟನ್ ರಿಫೈಂಡ್ ಸ್ಟೀಲ್ ಬಳಸಿ ನಿರ್ಮಿಸಲಾಗುತ್ತಿದೆ. ಶಿವನ ಪ್ರತಿಮೆಯನ್ನು ಮಿರ್ಜಾ ಗ್ರೂಪ್ ಕಂಪನಿ ನಿರ್ಮಾಣ ಮಾಡುತ್ತಿದೆ. ಸ್ಟೀಲ್ ಮಾತ್ರವಲ್ಲದೆ ಪ್ರತಿಮೆಗೆ ಉತ್ತಮ ಗುಣಮಟ್ಟದ ತಾಮ್ರ ಹಾಗೂ ಸತು ಅನ್ನು ಬಳಸಲಾಗುತ್ತಿದೆ.

    ಶಿವನ ಪ್ರತಿಮೆಯು 351 ಅಡಿ ಎತ್ತರವಿದ್ದು, 20 ಅಡಿ ಎತ್ತರದಲ್ಲಿ ಮೂರು ವೀಕ್ಷಣಾ ಗ್ಯಾಲರಿ ಇದೆ. ಅಲ್ಲದೆ ಪ್ರತಿಮೆಯ 110 ಅಡಿ ಹಾಗೂ 270 ಅಡಿಗಳ ಎತ್ತರಕ್ಕೆ ಲಿಫ್ಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದು ಸ್ಟ್ಯಾಚ್ಯೂ ಆಫ್ ಯುನಿಟಿ, ಸ್ಪ್ರಿಂಗ್ ಟೆಂಪಲ್ ಬುದ್ಧ ಮತ್ತು ಲೇಕ್ಯುನ್ ಸೆಟ್‍ಕ್ಯಾರ್ ಬಳಿಕದ ಜಗತ್ತಿನ ಅತಿ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ. ಹಾಗೆಯೇ ಜಗತ್ತಿನ 4ನೇ ಅತೀ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

    2013ರ ಏ.17ರಂದು ಈ ಪ್ರತಿಮೆ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿತ್ತು. ಅಂದಿನ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

    ಶಿವನ ಪ್ರತಿಮೆಯ ಫೋಟೋ ಟ್ವಿಟ್ಟರ್ ನಲ್ಲಿ ಶೇರ್ ಆಗಿದ್ದು, ಅದರಲ್ಲಿ ಶಿವನ ಮುಖದ ಭಾಗವು ಸಂಪೂರ್ಣವಾಗಿ ನಿರ್ಮಾಣವಾಗಿದ್ದು, ಕೆಂಪು ಬಣ್ಣದಿಂದ ಕಂಗೊಳಿಸುತ್ತಿದೆ. ಹಾಗೆಯೇ ಪ್ರತಿಮೆ ನಿರ್ಮಾಣ ಕೆಲಸ ನಡೆಯುತ್ತಿರುವ ಚಿತ್ರಣವನ್ನು ನಾವು ಗಮನಿಸಬಹುದಾಗಿದೆ. ಶಿವನ ಪ್ರತಿಮೆ ಮುಂದೆ ಸುಮಾರು 25 ಅಡಿ ಎತ್ತರ ಹಾಗೂ 37 ಅಡಿ ಅಗಲದ ನಂದಿ ಪ್ರತಿಮೆ ಕೂಡ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಗರ್ಭಪಾತಕ್ಕೆ ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ 16ರ ಅಪ್ರಾಪ್ತೆ

    ಗರ್ಭಪಾತಕ್ಕೆ ಅವಕಾಶ ಕೋರಿ ಕೋರ್ಟ್ ಮೆಟ್ಟಿಲೇರಿದ 16ರ ಅಪ್ರಾಪ್ತೆ

    ಜೈಪುರ: 16 ವರ್ಷದ ಬಾಲಕಿಯೊಬ್ಬಳು ಆರುವರೆ ತಿಂಗಳ ತನ್ನ ಭ್ರೂಣ ತೆಗೆಸಿಕೊಳ್ಳಲು ಅವಕಾಶ ಮಾಡಿಕೊಡುವಂತೆ ರಾಜಸ್ಥಾನ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ.

    ಬಾಲಕಿಯ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಗರ್ಭಪಾತ ಮಾಡಿದರೆ ಬಾಲಕಿಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದೇ? ಈ ಬಗ್ಗೆ ಅಭಿಪ್ರಾಯ ತಿಳಿಸಲು ವೈದ್ಯಕೀಯ ಮಂಡಳಿ ರೂಪಿಸಿ ಅಭಿಪ್ರಾಯ ತಿಳಿಸಿ ಎಂದು ರಾಜಸ್ಥಾನ ಸರ್ಕಾರಕ್ಕೆ ಸೂಚಿಸಿದೆ.

    ಈ ವೈದ್ಯಕೀಯ ಮಂಡಳಿ ಸೋಮವಾರವೇ ತನ್ನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೇಂದು ಕೋರ್ಟ್ ಸೂಚಿಸಿದೆ.

    ಬಾಲಕಿ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾಳೆ. ಇದರಿಂದ ಆಕೆಯ ಜೀವಕ್ಕೆ ಅಪಾಯವಾಗಲಿದೆ. ಹೀಗಾಗಿ ಬಾಲಕಿಗೆ ಗರ್ಭಪಾತ ಮಾಡಿಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯದಲ್ಲಿ ಬಾಲಕಿಯ ಪರ ವಕೀಲರಾದ ರಾಜೇಂದ್ರ ಸಿಂಗ್ ಚರಣ್ ಮನವಿ ಮಾಡಿಕೊಂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ತಕ್ಷಣ ಬಾಲಕಿಯ ಆರೋಗ್ಯದ ಪರೀಕ್ಷೆ ಮಾಡಿ ವರದಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

    ಏನಿದು ಪ್ರಕರಣ?
    ಕೆಲವು ದಿನಗಳ ಹಿಂದೆ ಬಾಲಕಿಯ ತಂದೆ ತಮ್ಮ ಮಗಳ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಆದರೆ ಪೊಲೀಸರಿಗೆ ಬಾಲಕಿಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಕೊನೆಗೆ ಬಾಲಕಿಯ ಪೋಷಕರು ಹೈ ಕೋರ್ಟ್ ನಲ್ಲಿ ಈ ಮಗಳನ್ನು ಪತ್ತೆ ಹಚ್ಚು ಕೊಡುವಂತೆ ಹೇಬಿಯಸ್ ಕಾರ್ಪಸ್ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ಕೂಡಲೇ ಬಾಲಕಿಯನ್ನು ಪತ್ತೆ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಸೂಚನೆ ನೀಡಿತ್ತು.

    ಕೋರ್ಟ್ ಆದೇಶದ ಬಳಿಕ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕಿಯನ್ನು ಪತ್ತೆ ಮಾಡಿದ್ದಾರೆ. ಆದರೆ ಈ ವೇಳೆ ಬಾಲಕಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಹೀಗಾಗಿ ಆಕೆ ಇನ್ನೂ ಅಪ್ರಾಪ್ತೆಯಾದ ಹಿನ್ನೆಲೆಯಲ್ಲಿ ನಾರಿ ನಿಕೇತನ ಸಂಸ್ಥೆಯಲ್ಲಿ ಇಡಲಾಗಿತ್ತು. ಈ ವೇಳೆ ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿತ್ತು.