Tag: Jaipur

  • ಇಂದು 120 ಮಂದಿ ಭಾರತೀಯರನ್ನು ಇರಾನ್‍ನಿಂದ ಕರೆತರುತ್ತಿರುವ ಸೇನೆ

    ಇಂದು 120 ಮಂದಿ ಭಾರತೀಯರನ್ನು ಇರಾನ್‍ನಿಂದ ಕರೆತರುತ್ತಿರುವ ಸೇನೆ

    – ಸೇನಾ ಕೇಂದ್ರಗಳಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ

    ಜೈಪುರ: ಮಹಾಮಾರಿ ಕೊರೊನಾ ವೈರಸ್‍ಗೆ ಇಡೀ ವಿಶ್ವವೇ ಆತಂಕಕ್ಕೀಡಾಗಿದೆ. ಅದರಲ್ಲೂ ಇರಾನ್‍ನಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು, ಅಲ್ಲಿರುವ ಸುಮಾರು 120 ಮಂದಿ ಭಾರತೀಯರನ್ನು ಇಂದು ದೇಶಕ್ಕೆ ವಾಪಸ್ ಕರೆತರಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ವಕ್ತಾರರು ತಿಳಿಸಿದ್ದಾರೆ.

    ಏರ್ ಇಂಡಿಯಾ ವಿಮಾನದ ಮೂಲಕ ಇರಾನ್‍ನಲ್ಲಿ ಇರುವ 120 ಮಂದಿ ಭಾರತೀಯರನ್ನು ಇಂದು ರಾಜಸ್ಥಾನದ ಜೈಸಲ್ಮರ್ ಗೆ ಕರೆತರಲಾಗುತ್ತಿದೆ. ಅಲ್ಲದೇ ಅವರಿಗೆ ಸೇನಾ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಈ ಬಗ್ಗೆ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ಸೊಂಬಿತ್ ಘೋಷ್ ಅವರು ಪ್ರತಿಕ್ರಿಯಿಸಿ, ದಕ್ಷಿಣ ಕಮಾಂಡರ್ ಅವರ ರಕ್ಷಣೆಯಲ್ಲಿ ಭಾರತೀಯ ಸೇನಾ ಕೇಂದ್ರಗಳಲ್ಲಿ ಇರಾನ್‍ನಿಂದ ಬಂದ ಭಾರತೀಯರನ್ನು ಕೆಲ ದಿನಗಳ ಕಾಲ ಇರಿಸಲಾಗುತ್ತದೆ. ಇರಾನ್‍ನಿಂದ ವಾಪಸ್ ಬಂದ ಭಾರತೀಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆಯಾ ಎಂದು ತಿಳಿಯಲು ವಿಮಾನ ನಿಲ್ದಾಣದಲ್ಲೇ ಆರಂಭಿಕ ಹಂತದ ತಪಾಸಣೆ ಮಾಡಿ, ಬಳಿಕ ಜೈಸಲ್ಮರ್ ನಲ್ಲಿರುವ ಸೇನಾ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಸದ್ಯ ಇಂದು 120 ಮಂದಿ ಭಾರತೀಯರನ್ನು ಇರಾನ್‍ನಿಂದ ಕರೆತರಲಾಗುತ್ತಿದೆ. ಮಾರ್ಚ್ 15ರಂದು ಸುಮಾರು 250 ಭಾರತೀಯರನ್ನು ಇರಾನ್‍ನಿಂದ ಕರೆತರಲಾಗುವುದು. ಅವರನ್ನು ಕೂಡ ತಪಾಸಣೆಗೆ ಒಳಪಡಿಸಿದ ಬಳಿಕ ಜೈಸಲ್ಮರ್ ನ ಸೇನಾ ಕೇಂದ್ರದಲ್ಲಿಯೇ ಇರಿಸಲಾಗುವುದು ಎಂದರು.

    ಕೊರೊನಾ ಪೀಡಿತ ದೇಶದಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ರಾಷ್ಟ್ರಕ್ಕೆ ವಾಪಾಸ್ ಕರೆತರಲು ಭಾರತೀಯ ಸೇನೆ ಸಿದ್ಧವಿದೆ. ಈಗಾಗಲೇ 7 ಸೇನಾ ಕೇಂದ್ರಗಳನ್ನು ಕೊರೊನಾ ವೈರಸ್ ರೋಗಿಗಳಿಗೆ ಸ್ಥಾಪಿಸಿದ್ದು, ಜೈಸಲ್ಮರ್, ಸೂರತ್ ಗದ್, ಜಾನ್ಸಿ, ಜೋಧ್ ಪುರ್, ದಿಯೊಲಾಲಿ, ಕೋಲ್ಕತ್ತಾ ಮತ್ತು ಚೆನ್ನೈಗಳಲ್ಲಿ ಈ ಸೇನಾ ಕೇಂದ್ರಗಳಿವೆ. ಅವುಗಳಲ್ಲಿ ವಿದೇಶಗಳಿಂದ ಬರುವ ಭಾರತೀಯರನ್ನು ಇರಿಸಲಾಗುತ್ತದೆ.

    ಮುಂದಿನ ದಿನಗಳಲ್ಲಿ ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಇರುವ ಇನ್ನಷ್ಟು ಭಾರತೀಯರನ್ನು ರಾಷ್ಟ್ರ ಕರೆತರುವ ನಿರೀಕ್ಷೆಯಿದೆ. ಹೀಗೆ ಭಾರತಕ್ಕೆ ಬಂದವರಿಗೆ ವಾಸ್ತವ್ಯ ವ್ಯವಸ್ಥೆಯನ್ನು ತಕ್ಷಣವೇ ರಕ್ಷಣಾ ಇಲಾಖೆ ಮಾಡಿಕೊಡುತ್ತದೆ ಎಂದು ಸೇನಾ ವಕ್ತಾರ ಕರ್ನಲ್ ಅಮನ್ ಆನಂದ್ ತಿಳಿಸಿದ್ದಾರೆ.

    ಸದ್ಯ ಇರಾನ್‍ನಲ್ಲಿ ಕೊರೊನಾ ಸೋಂಕು ತಗುಲಿ 1,016 ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲಿ 75 ಮಂದಿಗೆ ಸೋಂಕು ತಗುಲಿದ್ದು, ಈಗಾಗಲೇ 4 ಮಂದಿ ಚೇತರಿಸಿಕೊಂಡಿದ್ದಾರೆ ಹಾಗೂ ಓರ್ವನನ್ನು ಕೊರೊನಾ ಬಲಿ ಪಡೆದಿದೆ. ಇತ್ತ ಇಟಲಿ ಮತ್ತು ಯುರೋಪ್ ರಾಷ್ಟ್ರಗಳಲ್ಲಿ ಒಟ್ಟು 15,113 ಮಂದಿಗೆ ಸೋಕು ತಗುಲಿದ್ದು, ಚೀನಾದಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿನಿಂದ ಬಳಲುತ್ತಿದ್ದು, 3,117 ಮಂದಿ ಸಾವನ್ನಪ್ಪಿದ್ದಾರೆ. ವಿಶ್ವದಾದ್ಯಂತ 1,34,769 ಮಂದಿ ಕೊರೊನಾ ಸೋಂಕಿನಿಂದ ಬಳಲುತ್ತಿದ್ದಾರೆ. ಅಲ್ಲದೇ ಈವರೆಗೆ ವಿಶ್ವದೆಲ್ಲೆಡೆ 4,983 ಮಂದಿಯನ್ನು ಮಹಾಮಾರಿ ಕೊರೊನಾ ಬಲಿಪಡೆದಿದ್ದರೆ, 70,387 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

  • ಭಾರತದಲ್ಲಿ ಫಸ್ಟ್, ಕೊರೊನಾಗೆ ಎಚ್‍ಐವಿ ಡ್ರಗ್ಸ್ – ಇಟಲಿ ದಂಪತಿಯ ಆರೋಗ್ಯದಲ್ಲಿ ಭಾರೀ ಚೇತರಿಕೆ

    ಭಾರತದಲ್ಲಿ ಫಸ್ಟ್, ಕೊರೊನಾಗೆ ಎಚ್‍ಐವಿ ಡ್ರಗ್ಸ್ – ಇಟಲಿ ದಂಪತಿಯ ಆರೋಗ್ಯದಲ್ಲಿ ಭಾರೀ ಚೇತರಿಕೆ

    ಜೈಪುರ: ಕೊರೊನಾದಿಂದ ಬಳಲುತ್ತಿರುವ ಇಟಲಿ ದಂಪತಿಗೆ ಎಚ್‍ಐವಿ ನಿಯಂತ್ರಣಕ್ಕೆ ಬಳಕೆ ಮಾಡುವ ಎರಡು ಡ್ರಗ್ಸ್ ನೀಡಿದ್ದು ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.

    ಭಾರತಕ್ಕೆ ಪ್ರವಾಸಕ್ಕೆ ಬಂದ ದಂಪತಿಗೆ ಜೈಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಪತಿಯ ಆರೋಗ್ಯ ಬಹಳ ಹದೆಗೆಟ್ಟಿತ್ತು. ಈ ಡ್ರಗ್ಸ್ ನೀಡಿದ ಬಳಿಕ ಆತನ ಆರೋಗ್ಯ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪತ್ನಿಯ ಆರೋಗ್ಯ ಬಹಳಷ್ಟು ಸುಧಾರಿಸಿದೆ.

    ಎಚ್‍ಐವಿಗೆ ನೀಡಲಾಗುವ ಲೋಪಿನವೀರ್ ಮತ್ತು ರಿಟೋನವೀರ್ ಡ್ರಗ್ಸ್ ಅನ್ನು ಇಟಲಿ ದಂಪತಿಗೆ ನೀಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯಿಸಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಕೊರೊನಾ ಪೀಡಿತರಿಗೆ ಎರಡು ಎಚ್‍ಐವಿ ಡ್ರಗ್ಸ್ ನೀಡಲು ಅನುಮತಿ ನೀಡಿದೆ. ತುರ್ತು ಸಂದರ್ಭದಲ್ಲಿ ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡಲಾಗುತ್ತದೆ. ಜೈಪುರದಲ್ಲಿ ದಾಖಲಾಗಿರುವ ಇಬ್ಬರು ಇಟಲಿಯ ರೋಗಿಗಳಿಗೆ ಈ ಡ್ರಗ್ಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡುವುದು ಹೊಸದೆನಲ್ಲ. ಚೀನಾದಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಈ ಡ್ರಗ್ಸ್ ನೀಡುವುದರಿಂದ ಕೆಲ ಸೈಡ್ ಎಫೆಕ್ಟ್ ಆಗುತ್ತದೆ. ಈಗಲೇ ಈ ಡ್ರಗ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

    ಇಟಲಿ ದಂಪತಿಯ ಪೈಕಿ 69 ವರ್ಷದ ಪತಿಯ ಆರೋಗ್ಯ ಆಸ್ಪತ್ರೆಗೆ ದಾಖಲಾದಾಗ ಬಹಳ ಹದಗೆಟ್ಟಿತ್ತು. ಚಿಕಿತ್ಸೆಯ ನಂತರ ಆರೋಗ್ಯ ಸುಧಾರಣೆಯಾಗಿದ್ದು ಈಗ ಆ ವ್ಯಕ್ತಿ ಜ್ವರದಿಂದ ಬಳಲುತ್ತಿಲ್ಲ. ರಕ್ತದೊತ್ತಡ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಆತನನ್ನು ಡಿಸ್ಚಾರ್ಜ್ ಮಾಡಬಹುದು. ಆದರೆ ಪೂರ್ಣವಾಗಿ ಗುಣಮುಖನಾದ ಬಳಿಕ ಬಿಡುಗಡೆ ಮಾಡಲಾಗುವುದು. ಆತನ ಪತ್ನಿಯ ಆರೋಗ್ಯ ಗಮನಾರ್ಹವಾಗಿ ಚೇತರಿಕೆ ಕಂಡಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

    ಎಚ್‍ಐವಿ ನಿಯಂತ್ರಿಸಲು ಬಳಸಲಾಗುತ್ತಿರುವ ಈ ಎರಡು ಡ್ರಗ್ಸ್ ಅನ್ನು ಎಲ್ಲ ಕೊರೊನಾ ಪೀಡಿತರಿಗೆ ನೀಡುವಂತಿಲ್ಲ. ಭಾರತದಲ್ಲಿ ಶೇ.70 ರಷ್ಟು ಎಚ್‍ಐವಿ ಪೀಡಿತರಿಗೆ ಮೊದಲ ಸಾಲಿನ ಔಷಧಿಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿ ತಯಾರಾಗುವ ಈ ಎರಡನೇ ಸಾಲಿನ ಔಷಧಿಯನ್ನು ರಫ್ತು ಮಾಡಲಾಗುತ್ತದೆ. ವಿಶೇಷವಾಗಿ ಆಫ್ರಿಕಾ ದೇಶಗಳಿಗೆ ರಫ್ತು ಆಗುತ್ತದೆ. ಭಾರತದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ಲೋಪಿನವೀರ್ ಮತ್ತು ರಿಟೋನವೀರ್ ಬಳಕೆ ಅನುಮತಿ ನೀಡಲಾಗಿದೆ. ಈ ಡ್ರಗ್ಸ್ ಬಳಕೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನಿಗದಿ ಮಾಡಲಾಗಿದೆ.

    ಕೊರೊನಾಗೆ ಇಲ್ಲಿಯವರೆಗೆ ಯಾರು ಔಷಧಿ ಕಂಡು ಹಿಡಿದಿಲ್ಲ. ವಿಶ್ವದ ಹಲವು ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಗುಣವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿವಿಧ ದೇಶಗಳಲ್ಲಿ ಕೊರೊನಾ ಪೀಡಿತರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಡ್ರಗ್ಸ್ ನೀಡಲಾಗುತ್ತಿದೆ.

  • ನದಿಗೆ ಬಿದ್ದ ಬಸ್ – ಮದ್ವೆ ಮುಗಿಸಿ ವಾಪಸ್ ಬರ್ತಿದ್ದ 25ಕ್ಕೂ ಹೆಚ್ಚಿನ ಮಂದಿ ಜಲಸಮಾಧಿ

    ನದಿಗೆ ಬಿದ್ದ ಬಸ್ – ಮದ್ವೆ ಮುಗಿಸಿ ವಾಪಸ್ ಬರ್ತಿದ್ದ 25ಕ್ಕೂ ಹೆಚ್ಚಿನ ಮಂದಿ ಜಲಸಮಾಧಿ

    – ಸೇತುವೆ ಮೇಲೆ ಯಾವುದೇ ತಡೆಗೋಡೆ ಇಲ್ಲ

    ಜೈಪುರ: ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ಖಾಸಗಿ ಬಸ್ ನದಿಗೆ ಬಿದ್ದ ಪರಿಣಾಮ 25ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ರಾಜಸ್ಥಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.

    ಬುಂಡಿ ಜಿಲ್ಲೆಯ ಕೋಟಾ-ದೌಸಾ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಅಪಘಾತದಲ್ಲಿ 30 ಜನರು ಸಾವನ್ನಪ್ಪಿದ್ದಾರೆ. ಆದರೆ ಈವರೆಗೆ 24 ಮೃತದೇಹಗಳು ಪತ್ತೆಯಾಗಿರುವ ಕುರಿತು ವರದಿಯಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ರಾಜ್ಯ ಸರ್ಕಾರವು ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ.

    ಬುಂಡಿ ಜಿಲ್ಲೆಯ ಕೇಶೋರೈಪಟಾನ್ ಪ್ರದೇಶದಲ್ಲಿ ಪ್ರಯಾಣಿಕರು ತುಂಬಿದ ಬಸ್ ನದಿಗೆ ಬಿದ್ದಿದೆ. ಬುಂಡಿಯ ಮೇಜ್ ನದಿಯ ಕಲ್ವರ್ಟ್ ನಲ್ಲಿ ಈ ಅಪಘಾತ ಸಂಭವಿಸಿದೆ. ಬಸ್‍ನಲ್ಲಿದ್ದವರು ವಿವಾಹ ಸಮಾರಂಭಕ್ಕೆ ಹೋಗಿ ವಾಪಸ್ ಬರುತ್ತಿದ್ದರು. ಬಸ್ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊಂದಿತ್ತು. ಹೀಗಾಗಿ ನದಿ ಸೇತುವೆಯ ಮೇಲೆ ಬಸ್ಸನ್ನು ನಿಯಂತ್ರಿಸಲು ಚಾಲಕನಿಗೆ ಸಾಧ್ಯವಾಗಲಿಲ್ಲ.  ಅಲ್ಲದೇ ಕಲ್ವರ್ಟ್ ನಲ್ಲಿ ಯಾವುದೇ ಸುರಕ್ಷತಾ ಗೋಡೆ ಇಲ್ಲ. ಹೀಗಾಗಿ ಬಸ್ ನದಿಗೆ ಬಿದ್ದಿದೆ ಎಂದು ಸಬ್ ಇನ್ಸ್‌ಪೆಕ್ಟರ್ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

    ಪರಿಣಾಮ 25ಕ್ಕೂ ಅಧಿಕ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ. ಇನ್ನೂ ಅಪಘಾತದಲ್ಲಿ ಗಾಯಾಗೊಂಡವರನ್ನು ಲೆಖಾರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರವಾಗಿ ಗಾಯಗೊಂಡವರನ್ನು ಕೋಟಾದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ತಕ್ಷಣ ಪೊಲೀಸರು ಸ್ಥಳಕ್ಕೆ ತಲುಪಿ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸದ್ಯಕ್ಕೆ ಮೃತದೇಹಗಳನ್ನು ಬಸ್‍ನಿಂದ ಹೊರತೆಗೆಯುವ ಕಾರ್ಯಾಚರಣೆಯನ್ನು ಪೊಲೀಸರು ಮಾಡುತ್ತಿದ್ದಾರೆ.

    ಅಪಘಾತದ ಬಗ್ಗೆ ತಿಳಿದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ, “ಬುಂಡಿಯಲ್ಲಿ ಸಂಭವಿಸಿದ ದುರಂತದ ಬಗ್ಗೆ ತಿಳಿದು ನಾನು ತುಂಬಾ ದುಃಖಿತನಾಗಿದ್ದೇನೆ. ಬಸ್ ಮೇಜ್ ನದಿಗೆ ಬಿದ್ದ ನಂತರ ಸುಮಾರು 24 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಅಪಘಾತದಲ್ಲಿ ಗಾಯಗೊಂಡಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

  • ಯುವತಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ

    ಯುವತಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ

    – ಅಪ್ರಾಪ್ತನನ್ನು ನಗ್ನವಾಗಿ ಮೆರವಣಿಗೆ ಮಾಡಿದ ಗ್ರಾಮಸ್ಥರು
    – ಇಬ್ಬರು ಆರೋಪಿಗಳು ಅರೆಸ್ಟ್

    ಜೈಪುರ: ಯುವತಿ ಜೊತೆ ಟಿಕ್‍ಟಾಕ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದಕ್ಕೆ ಗ್ರಾಮಸ್ಥರು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ತನ್ನ ಸಹೋದರಿ ಜೊತೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಮೂವರು ಆರೋಪಿಗಳು ಅಪ್ರಾಪ್ತನನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಅಲ್ಲದೆ ಬಾಲಕನ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಾಲಕನ ವಿಡಿಯೋ ಕೂಡ ಸೆರೆ ಹಿಡಿಯಲಾಗಿದ್ದು, ಅದರಲ್ಲಿ ಆರೋಪಿಗಳು ಅಪ್ರಾಪ್ತನನ್ನು ಬಲವಂತವಾಗಿ ಮೆರವಣಿಗೆ ಮಾಡಿಸಿರುವುದು ಕಂಡು ಬಂದಿದೆ.

    ಅಪ್ರಾಪ್ತ ಕ್ಷಮೆ ಕೇಳುತ್ತಿದ್ದರೂ ಆರೋಪಿಗಳು ಆತನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೆ ಟಿಕ್‍ಟಾಕ್ ವಿಡಿಯೋ ಮಾಡಿದ್ದಕ್ಕೆ ಈಗ ನೀನು ಬುದ್ಧ ಕಲಿಯುತ್ತಿದ್ದೀಯಾ ಎಂದು ವಿಡಿಯೋದಲ್ಲಿ ಆರೋಪಿಗಳು ಬಾಲಕನಿಗೆ ಹೇಳುತ್ತಿದ್ದಾರೆ.

    ಈ ಬಗ್ಗೆ ಅಪ್ರಾಪ್ತನ ಪೋಷಕರು ಪ್ರತಿಕ್ರಿಯಿಸಿ, ಈ ಘಟನೆಯಿಂದ ನಮ್ಮ ಮಗ ತುಂಬಾ ಹೆದರಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಮೂವರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ಪೊಲೀಸರು ಆರೋಪಿಗಳ ವಿರುದ್ಧ ಐಟಿ ಆ್ಯಕ್ಟ್ ಹಾಗೂ ಇತರ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದರು ಹೇಳಿದ್ದಾರೆ.

    ಅಪ್ರಾಪ್ತನ ಪೋಷಕರು ದೂರು ದಾಖಲಿಸಿದ ನಂತರ ಯುವತಿಯ ಪೋಷಕರು ಕೂಡ ಮೂವರು ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಅಪ್ರಾಪ್ತನನ್ನು ನಗ್ನವಾಗಿ ಮೆರವಣಿಗೆ ಮಾಡಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ವಿಡಿಯೋ ಮಾಡಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ವಾಹನದಲ್ಲಿ ಕೂರೋ ವಿಷ್ಯಕ್ಕೆ ವಾಗ್ವಾದ- ತಲೆಗೆ ಪಂಚ್ ಕೊಟ್ಟು ಯುವಕನ ಕೊಲೆ

    ವಾಹನದಲ್ಲಿ ಕೂರೋ ವಿಷ್ಯಕ್ಕೆ ವಾಗ್ವಾದ- ತಲೆಗೆ ಪಂಚ್ ಕೊಟ್ಟು ಯುವಕನ ಕೊಲೆ

    – ಕ್ಲುಲ್ಲಕ ವಿಚಾರಕ್ಕೆ ಕಾಶ್ಮೀರಿ ಯುವಕನ ಹತ್ಯೆ

    ಜೈಪುರ: ತಲೆಗೆ ಪಂಚ್ ಮಾಡುವ ಮೂಲಕ ಕಾಶ್ಮೀರಿ ಯುವಕನನ್ನು ಕೊಲೆ ಮಾಡಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಬಾಸಿತ್ ಅಲಿಯಾಸ್ ಮೊಯ್ದಿನ್ ಖಾನ್ ಕೊಲೆಯಾದ ಯುವಕ. ಕ್ಷುಲ್ಲಕ ಕಾರಣಕ್ಕೆ ಬಾಸಿತ್ ಹಾಗೂ ಆತನ ಸಹದ್ಯೋಗಿ ಆದಿತ್ಯ ನಡುವೆ ವಾಗ್ವಾದ ನಡೆದು ಪರಸ್ಪರ ಹಲ್ಲೆ ಮಾಡಿದ್ದರು. ಹಲ್ಲೆ ಮಾಡುವ ವೇಳೆ ಬಾಸಿತ್ ತಲೆಗೆ ಆದಿತ್ಯ ಪಂಚ್ ಮಾಡಿದ್ದಾನೆ. ಪರಿಣಾಮ ಬಾಸಿತ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದನು. ತಕ್ಷಣ ಆತನನ್ನು ಸವಾಯು ಮಾನಸಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಸಿತ್ ಮೃತಪಟ್ಟಿದ್ದಾನೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ, ಬಾಸಿತ್ ಕಾಶ್ಮೀರದ ಕುಪ್ವಾಡಾ ಜಿಲ್ಲೆಯವನಾಗಿದ್ದು, ಜೈಪುರದಲ್ಲಿ ಬೇರೆ ಯುವಕರ ಜೊತೆ ಕ್ಯಾಟರಿಂಗ್ ಸ್ಟಾಫ್ ಕೆಲಸ ಮಾಡುತ್ತಿದ್ದನು. ಫೆ. 4ರಂದು ಹರ್‍ಮಾಡದ ಮೈರಿಜ್ ಗಾರ್ಡನ್‍ನಲ್ಲಿ ಕೆಲಸ ಮಾಡಲು ಬಾಸಿತ್ ಹಾಗೂ ಆದಿತ್ಯ ಹೋಗಿದ್ದರು. ಕೆಲಸ ಮುಗಿಸಿ ಹಿಂದಿರುಗುವಾಗ ವಾಹನದಲ್ಲಿ ಕೂರುವ ವಿಷಯಕ್ಕೆ ಸಂಬಂಧಿಸಿದಂತೆ ಬಾಸಿತ್ ಹಾಗೂ ಆದಿತ್ಯ ನಡುವೆ ವಾಗ್ವಾದ ನಡೆಯಿತು. ಬಳಿಕ ನೋಡನೋಡುತ್ತಿದ್ದಂತೆ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಎಂದರು.

    ಈ ಘಟನೆಯಲ್ಲಿ ಬಾಸಿತ್‍ಗೆ ಗಂಭೀರವಾಗಿ ಗಾಯಗೊಂಡ ಬಾಸಿತ್‍ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಬಾಸಿತ್ ಮೃತಪಟ್ಟಿದ್ದಾನೆ. ಹಲ್ಲೆ ನಡೆದ ನಂತರ ಬಾಸಿತ್ ಸ್ನೇಹಿತೆ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ಆದಿತ್ಯನನ್ನು ಬಂಧಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆದ ನಂತರ ಬಾಸಿತ್ ಮೃತದೇಹವನ್ನು ಕಾಶ್ಮೀರಕ್ಕೆ ರವಾನಿಸಲಾಯಿತು ಎಂದು ಪೊಲೀಸ್ ಕಮೀಶನರ್ ಅಶೋಕ್ ಕುಮಾರ್ ಗುಪ್ತಾ ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ಥಳದಲ್ಲಿದ್ದ ಜನರ ವಿಚಾರಣೆ ನಡೆಸಿದ್ದಾರೆ.

  • ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    ವಿದ್ಯಾರ್ಥಿಗಳ ಎದುರೇ ವೇದಿಕೆಯಲ್ಲಿ ಶಿಕ್ಷಕಿಗೆ ಕಿಸ್ ಕೊಟ್ಟು ನಕ್ಕ ಶಿಕ್ಷಕ

    – ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

    ಜೈಪುರ: ವಿದ್ಯಾರ್ಥಿಗಳ ಮುಂದೆಯೇ ವೇದಿಕೆ ಮೇಲೆ ಶಿಕ್ಷಕಿಗೆ ಶಿಕ್ಷಕನೋರ್ವ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ರಾಜಸ್ಥಾನದ ಕರೌಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರೌಲಿಯ ಶಾಲೆಯೊಂದರಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ವೇದಿಕೆ ಮೇಲೆ ಕುಳಿತ್ತಿದ್ದ ಶಿಕ್ಷಕನೋರ್ವ ತನ್ನ ಪಕ್ಕದಲ್ಲಿದ್ದ ಶಿಕ್ಷಕಿಯ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ವಿದ್ಯಾರ್ಥಿಗಳ ಎದುರೇ ಶಿಕ್ಷಕಿಗೆ ಶಿಕ್ಷಕ ಮುತ್ತಿಟ್ಟ ದೃಶ್ಯವನ್ನು ಕಾರ್ಯಕ್ರಮದಲ್ಲಿ ನೆರೆದಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ತರಗತಿಯಲ್ಲೇ 8ನೇ ತರಗತಿ ಹುಡ್ಗ-ಹುಡ್ಗಿ ಕಿಸ್ಸಿಂಗ್

    ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಈ ಬಗ್ಗೆ ರಾಜಸ್ಥಾನದ ಶಿಕ್ಷಣ ಸಚಿವರನ್ನು ಪ್ರಶ್ನಿಸಿದರೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದುರ್ವರ್ತನೆ ತೋರಿದ ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಚಿವರು ತಲೆಕೆಡಿಸಿಕೊಂಡಿಲ್ಲ. ಸಚಿವರ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಮಟಮಟ ಮಧ್ಯಾಹ್ನವೇ ವಿದ್ಯಾರ್ಥಿಗಳಿಬ್ಬರ ಲಿಪ್ ಲಾಕ್

    ವೈರಲ್ ವಿಡಿಯೋದಲ್ಲಿ, ವೇದಿಕೆ ಮೇಲೆ ಓರ್ವ ಶಿಕ್ಷಕ, ಒಬ್ಬರು ಶಿಕ್ಷಕಿ ಕೂತಿರುವಾಗ ಏಕಾಏಕಿ ಶಿಕ್ಷಕ ಪಕ್ಕದಲ್ಲಿದ್ದ ಶಿಕ್ಷಕಿ ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ. ಈ ವೇಳೆ ವೇದಿಕೆ ಎದುರಿಗಿದ್ದ ವಿದ್ಯಾರ್ಥಿಗಳು ಜೋರಾಗಿ ಕೂಗುತ್ತಾ, ಶಿಕ್ಷಕನಿಗೆ ರೇಗಿಸಿದ ದೃಶ್ಯಗಳು ಸೆರೆಯಾಗಿದೆ.

    ಈ ಹಿಂದೆ ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ವಿದ್ಯಾರ್ಥಿಗಳು ಸಾರ್ವಜನಿಕವಾಗಿಯೇ ಕಿಸ್ ಮಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿತ್ತು. ಆ ಬಳಿಕ ಗುಜರಾತಿನಲ್ಲಿ 8ನೇ ತರಗತಿಯ ವಿದ್ಯಾರ್ಥಿ, ವಿದ್ಯಾರ್ಥಿನಿ ತರಗತಿಯಲ್ಲೇ ಕಿಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.

    ಗುಜರಾತ್‍ನ ಪಂಚಮಹಲ್ ಜಿಲ್ಲೆಯ ಗೋದ್ರಾ ಸಮೀಪವಿರುವ ಮೊರ್ವಾ ಹಡಾಫ್‍ನ ಕ್ರುಶಿಕರ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡಿದ್ದರು. 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿ ಕ್ಲಾಸ್ ರೂಮಿನಲ್ಲಿಯೇ ಒಬ್ಬರಿಗೊಬ್ಬರು ಕಿಸ್ ಕೊಡುತ್ತಿರುವ ವಿಡಿಯೋ ಸದ್ಯ ಸಖತ್ ವೈರಲ್ ಆಗಿತ್ತು. ವಿದ್ಯಾರ್ಥಿ, ವಿದ್ಯಾರ್ಥಿನಿ ಕಿಸ್ ಮಾಡುತ್ತಿರುವ ವಿಡಿಯೋವನ್ನು ಯಾರೋ ಸೆರೆಹಿಡಿದು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

  • ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಗಿರ್ಗಿಟ್ಲೆ ರೀತಿ ನಾಗಪ್ಪನನ್ನು ತಿರುಗಿಸಿ, ಕತ್ತಿಗೆ ಸುತ್ಕೊಂಡ ಕುಡುಕ

    ಜೈಪುರ: ಮದ್ಯದ ನಶೆಯಿದ್ದ ಜನರು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುತ್ತಾರೆ. ಆದರೆ ರಾಜಸ್ಥಾನದಲ್ಲೊಬ್ಬ ಕುಡುಕ ಮದ್ಯದ ನಶೆಯಲ್ಲಿ ನಾಗರ ಹಾವಿನೊಂದಿಗೆ ಸರಸಕ್ಕಿಳಿದಿದ್ದಾನೆ. ಹಾವಿನ ಮುಂದೆ ನಿಂತು ನಾನಾ, ನೀನಾ ನೋಡೇ ಬಿಡಣಾ ಎಂದು ನಾಗನಿಗೆ ಸವಾಲ್ ಹಾಕಿರುವ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಸಾಮಾನ್ಯವಾಗಿ ನಾಗರ ಹಾವನ್ನು ಕಂಡರೇ ಭಯಬಿದ್ದು ಜನ ಜಾಗ ಖಾಲಿ ಮಾಡುತ್ತಾರೆ. ಆದರೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ನಾಗರ ಹಾವಿನೊಂದಿಗೆ ಆಟವಾಡಿದ್ದಾನೆ. ಈ ಕುಡುಕನನ್ನು ಪ್ರಕಾಶ್ ಮಹಾವರ್ ಎಂದು ಗುರುತಿಸಲಾಗಿದೆ. ಹಾವನ್ನು ಕೈಯಲ್ಲಿ ಹಿಡಿದು ಗಿರ ಗಿರನೇ ಗಿರ್ಗಿಟ್ಲೆ ರೀತಿ ತಿರುಗಿಸಿ, ಸುಮಾರು 1 ಗಂಟೆಯ ಕಾಲ ಹಾವನ್ನು ಹಿಡಿದುಕೊಂಡು ಕುಡುಕ ಸತಾಯಿಸಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಕುಡುಕನ ಹುಚ್ಚಾಟ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿಬಿಟ್ಟಿದೆ.

    ದೌಸಾ ಜಿಲ್ಲೆಯ ಗದ್ದೆಯೊಂದರಲ್ಲಿ ತನ್ನ ಪಾಡಿಗೆ ಹರಿದಾಡಿಕೊಂಡು ಹೋಗುತ್ತಿದ್ದ ನಾಗರ ಹಾವಿನ ಕಂಡ ಪ್ರಕಾಶ್ ಅದರ ದಾರಿಯನ್ನು ತಡೆದಿದ್ದಾನೆ. ಕೆಲ ಸಮಯದ ಬಳಿಕ ಅದನ್ನು ಹಿಡಿದು ಗಿರ ಗಿರನೇ ತಿರುಗಿಸಿ, ತನ್ನ ಕೊರಳಿಗೆ ಧರಿಸಿಕೊಂಡು ಹುಚ್ಚಾಟವಾಡಿದ್ದಾನೆ. ನೀನಾ, ನಾನಾ ನೋಡೇ ಬಿಡಣಾ ಎಂದು ನಾಗಪ್ಪನಿಗೆ ಸವಾಲ್ ಹಾಕಿಕೊಂಡು ರಂಪಾಟ ಮಾಡಿದ್ದಾನೆ. ಈ ವೇಳೆ ಆತನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಬಾರಿ ಹಾವು ಆತನಿಗೆ ಕಚ್ಚಿದೆ. ಆದರೂ ಆತ ಮಾತ್ರ ಎಣ್ಣೆ ಏಟಲ್ಲಿ ಹುಚ್ಚಾಟ ಮುಂದುವರಿಸಿದ್ದ. ಈ ದೃಶ್ಯವು ವಿಡಿಯೋದಲ್ಲಿ ಸೆರೆಯಾಗಿದೆ.

    ಹಾವು ಕಚ್ಚಿದ ಪರಿಣಾಮ ಪ್ರಕಾಶ್ ಶರೀರ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದರು. ಸದ್ಯ ಪ್ರಕಾಶ್ ಸ್ಥಿತಿ ಹೇಗಿದೆ ಎನ್ನುವ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.

  • ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಜೈಪುರ: ಮದುವೆಯಾದ 16 ದಿನದಲ್ಲೇ ರಾಜಸ್ಥಾನ ಮೂಲದ ಯೋಧರೊಬ್ಬರು ಬಾಂಬ್ ಬ್ಲಾಸ್ಟ್ ನಲ್ಲಿ ಹುತಾತ್ಮರಾದ ಘಟನೆ ಜಮ್ಮು ಹಾಗೂ ಕಾಶ್ಮೀರದಲ್ಲಿ ನಡೆದಿದೆ.

    ಸೌರಬ್ ಕಠಾರಾ ಹುತಾತ್ಮರಾದ ಯೋಧ. ಸೌರಬ್ 16 ದಿನದ ಹಿಂದೆ ಅಂದರೆ ಡಿಸೆಂಬರ್ 8ರಂದು ಪೂನಂ ಅವರನ್ನು ಮದುವೆಯಾಗಿದ್ದರು. ಸೌರಬ್ ಹುತಾತ್ಮರಾದ ವಿಷಯ ತಿಳಿದ ಪೂನಂ ಹಾಗೂ ಕುಟುಂಬಸ್ಥರು ಆಕ್ರಂದನ ಮುಗಿಲು ಮುಟ್ಟಿದೆ. ಸೌರಬ್ ಅವರ ಪಾರ್ಥಿವ ಶರೀರ ಇಂದು ಸಂಜೆ ಅವರ ಗ್ರಾಮಕ್ಕೆ ತಲುಪಲಿದೆ.

    ಮಾಹಿತಿಗಳ ಪ್ರಕಾರ ಇಂದು ಸೌರಬ್ ಅವರ ಹುಟ್ಟುಹಬ್ಬ. ಸೌರಬ್ ಹಾಗೂ ಅವರ ಸಹೋದರ ಅಕ್ಕ-ತಂಗಿಯನ್ನು ಡಿಸೆಂಬರ್ 8ರಂದು ಮದುವೆಯಾಗಿದ್ದರು. ಮದುವೆಯಾದ ಬಳಿಕ ಸೌರಬ್ ತನ್ನ 5 ದಿನದ ರಜೆಯನ್ನು ಮುಗಿಸಿ ಕೆಲಸಕ್ಕೆ ಹಾಜರಾಗಲು ಕುಪ್ವಾರಾಕ್ಕೆ ತೆರಳಿದ್ದರು. ಅಲ್ಲಿ ಅವರು ಬಾಂಬ್ ಸ್ಫೋಟಕ್ಕೆ ಹುತಾತ್ಮರಾಗಿದ್ದಾರೆ.

    ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಟ್ವಿಟ್ಟರಿನಲ್ಲಿ, ಭರತಪುರದ ಕೆಚ್ಚೆದೆಯ ಸೈನಿಕರಿಗೆ ನನ್ನ ಸಲಾಂ. ಜಮ್ಮು-ಕಾಶ್ಮೀರದ ಕುಪ್ವಾರದಲ್ಲಿ ಸೌರಬ್ ಸರ್ವೋಚ್ಚ ತ್ಯಾಗ ಮಾಡಿದ್ದಾರೆ. ಈ ಸಮಯದಲ್ಲಿ ನಾವು ಸೌರಬ್ ಅವರ ಕುಟುಂಬ ಸದಸ್ಯರೊಂದಿಗೆ ನಿಲ್ಲುತ್ತೇವೆ. ದೇವರು ಅವರಿಗೆ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ.

  • ಪೆನ್‍ಗಾಗಿ ಗೆಳತಿಯನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ ಬಾಲಕಿ

    ಪೆನ್‍ಗಾಗಿ ಗೆಳತಿಯನ್ನೇ ಕಬ್ಬಿಣದ ರಾಡ್‍ನಿಂದ ಹೊಡೆದು ಕೊಂದ ಬಾಲಕಿ

    ಜೈಪುರ: ಪೆನ್ ವಾಪಸ್ ಕೊಡು ಎಂದು ಮನೆಗೆ ಬಂದ ಗೆಳತಿಯನ್ನೇ 10 ವರ್ಷದ ಬಾಲಕಿಯೊಬ್ಬಳು ಕಬ್ಬಿಣದ ರಾಡ್‍ನಿಂದ ಹೊಡೆದು ಕೊಲೆಗೈದ ಘಟನೆ ರಾಜಸ್ಥಾನದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಶನಿವಾರ ಜೈಪುರದಲ್ಲಿ 12 ವರ್ಷದ ಬಾಲಕಿ ತನ್ನ ಕ್ಲಾಸ್‍ಮೇಟ್ ಮನೆಗೆ ಹೋಗಿದ್ದಳು. ಈ ವೇಳೆ ಬಾಲಕಿ ಮನೆಯಲ್ಲಿ ಆಕೆಯ ಪೋಷಕರು ಇರಲಿಲ್ಲ. ಆಗ ಶಾಲೆಯಲ್ಲಿ ತನ್ನ ಬಳಿ ಕಸಿದುಕೊಂಡಿದ್ದ ಪೆನ್ನನ್ನು ವಾಪಸ್ ಕೊಡು ಎಂದು ಸಂತ್ರಸ್ತೆ ಕೇಳಿದ್ದಳು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಬಾಲಕಿ ಕಬ್ಬಿಣದ ರಾಡ್‍ನಿಂದ ಗೆಳತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಳು. ಪರಿಣಾಮ ಸಂತ್ರಸ್ತೆ ಪಕ್ಕೆಲುಬು, ಹೊಟ್ಟೆ ಹಾಗೂ ತಲೆಗೆ ಗಂಭೀರ ಗಾಯವಾಗಿ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಳು.

    ಮನೆಗೆ ಬಂದ ತಾಯಿಗೆ ನಡೆದ ಘಟನೆ ಬಗ್ಗೆ ಬಾಲಕಿ ವಿವರಿಸಿದಳು. ಆಗ ಬೇರೆ ದಾರಿ ತೋಚದೆ ಮಗಳನ್ನು ಕಾಪಾಡಲು ಸಂತ್ರಸ್ತೆ ಮೃತದೇಹಕ್ಕೆ ಕಲ್ಲನ್ನು ಕಟ್ಟಿ ತಾಯಿ ಕೊಳವೊಂದರಲ್ಲಿ ಎಸೆದು ಬಂದಿದ್ದಳು. ಬಳಿಕ ಪತಿ ಮನೆಗೆ ಬಂದ ಮೇಲೆ ಮಗಳ ಕೃತ್ಯದ ಬಗ್ಗೆ ತಾಯಿ ತಿಳಿಸಿದಳು. ಆಗ ತಂದೆ ಕೊಳದಲ್ಲಿದ್ದ ಮೃತದೇಹವನ್ನು ಹೊರತೆಗೆದು ಅದನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದು ಸಾಕ್ಷ್ಯಗಳನ್ನು ನಾಶ ಮಾಡಿದ್ದನು.

    ಇತ್ತ ಸಂಜೆಯಾದರೂ ಮಗಳು ಮನೆಗೆ ಬರಲಿಲ್ಲ ಎಂದು ಸಂತ್ರಸ್ತೆ ಪೋಷಕರು ಹುಡುಕಾಟ ನಡೆಸಿದರು. ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ಹೆತ್ತವರು ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸಿದಾಗ ಗುರುವಾರ ಸಂತ್ರಸ್ತ ಬಾಲಕಿ ಮೃತದೇಹ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ.

    ಈ ಸಂಬಂಧ ತನಿಖೆ ನಡೆಸಿದಾಗ ಸಂತ್ರಸ್ತೆಯನ್ನು ಕೊಲೆ ಮಾಡಿರುವ ವಿಚಾರ ತಿಳಿದುಬಂದಿದ್ದು, ಆಕೆಯ ಕ್ಲಾಸ್‍ಮೇಟ್ ಬಾಲಕಿಯೇ ಕೊಲೆಗೈದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿ ಬಾಲಕಿ ಹಾಗೂ ಕೃತ್ಯದ ಸಾಕ್ಷ್ಯ ನಾಶ ಮಾಡಿದ್ದಕ್ಕೆ ಆಕೆಯ ಹೆತ್ತವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

  • 6ರ ಬಾಲಕಿಯನ್ನು ಅತ್ಯಾಚಾರಗೈದು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಂದ ಕಾಮುಕರು

    6ರ ಬಾಲಕಿಯನ್ನು ಅತ್ಯಾಚಾರಗೈದು ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಂದ ಕಾಮುಕರು

    – ಶಾಲೆಯಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾದ್ಳು
    – ಪೊದೆಯ ಮಧ್ಯೆ ರಕ್ತದ ಮಡುವಿನಲ್ಲಿ ಬಾಲಕಿ ಪತ್ತೆ

    ಜೈಪುರ: ಶಾಲೆಗೆ ಹೋಗಿದ್ದ 6 ವರ್ಷದ ಬಾಲಕಿಯನ್ನು ಕಾಮುಕರು ಅತ್ಯಾಚಾರಗೈದು, ಬೆಲ್ಟ್‌ನಿಂದ ಬಾಲಕಿ ಕತ್ತು ಹಿಸುಕಿ ಕೊಂದು ಪೊದೆಯಲ್ಲಿ ಬಿಸಾಡಿ ಹೋದ ಅಮಾನವೀಯ ಘಟನೆ ರಾಜಸ್ಥಾನದ ಟೋಂಕ್ ಜಿಲ್ಲೆಯ ಖೇತಾಡಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

    ಶನಿವಾರದಂದು ಶಾಲೆಗೆ ತೆರೆಳಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಭಾನುವಾರ ಬಾಲಕಿಯ ಶವ ಶಾಲೆಯಿಂದ ತುಸು ದೂರದಲ್ಲಿ ಪತ್ತೆಯಾಗಿದೆ. ಶಾಲೆಗೆ ಹೋಗಿದ್ದ ಬಾಲಕಿಯನ್ನು ಕಾಮುಕರು ಅಪಹರಿಸಿ ಅತ್ಯಾಚಾರಗೈದು, ಬಳಿಕ ಆಕೆಯ ಶಾಲಾ ಸಮವಸ್ತ್ರದ ಬೆಲ್ಟ್‌ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಪೊದೆಯೊಂದರ ಮಧ್ಯೆ ಬಿಸಾಡಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆಗೈದ ಮೇಲೂ ಪಶುವೈದ್ಯೆ ಮೇಲೆ ಅತ್ಯಾಚಾರವೆಸೆಗಿದ ರಾಕ್ಷಸರು

    ಬಾಲಕಿಯ ಶಾಲೆ ಬಳಿ ಇದ್ದ ನಿರ್ಜನ ಪ್ರದೇಶದ ಪೊದೆಯೊಂದರಲ್ಲಿ ಶವ ಪತ್ತೆಯಾಗಿದೆ. ಶವದ ಬಳಿ ಮದ್ಯದ ಬಾಟಲಿಗಳು, ಸ್ಯಾಕ್ಸ್ ಪ್ಯಾಕೆಟ್‍ಗಳು ಹಾಗೂ ರಕ್ತದ ಕಲೆಗಳು ಪತ್ತೆಯಾಗಿವೆ.

    ಶನಿವಾರ ಬಾಲಕಿಯ ಶಾಲೆಯಲ್ಲಿ ಕ್ರೀಡಾಕೂಟವಿತ್ತು. ಆದರೆ ಶಾಲೆ ಮುಗಿದ ಬಳಿಕ ಬಾಲಕಿ ನಾಪತ್ತೆಯಾಗಿದ್ದಳು. ಪೋಷಕರು ಮಧ್ಯಾಹ್ನ 3 ಗಂಟೆಯಾದರೂ ಮಗಳು ಮನೆಗೆ ಬಾರದಿದ್ದಾಗ ಗಾಬರಿಗೊಂಡು ಹುಡುಕಾಟ ನಡೆಸಿದರೂ ಬಾಲಕಿ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಸಂಬಂಧಿಕರ ಮನೆಯಲ್ಲಿ, ಸ್ನೇಹಿತರ ಮನೆಯಲ್ಲೆಲ್ಲಾ ಪೋಷಕರು ಮಗಳಿಗಾಗಿ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗಲಿಲ್ಲ. ಬಳಿಕ ಈ ಬಗ್ಗೆ ಪೋಷಕರು ದೂರು ಕೊಟ್ಟಿದ್ದರು. ಆದರೆ ಭಾನುವಾರ ಬೆಳಗ್ಗೆ ಶಾಲೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.  ಇದನ್ನೂ ಓದಿ:  4ರ ಬಾಲೆಯ ಮೇಲೆ ಅತ್ಯಾಚಾರ- ಆರೋಪಿಯ ಬೆತ್ತಲೆ ಮೆರವಣಿಗೆ

    ಮೃತದೇಹ ಪತ್ತೆಯಾದ ತಕ್ಷಣ ಸ್ಥಳದಲ್ಲಿ ಸೇರಿದ್ದ ಗ್ರಾಮಸ್ಥರು ಕಾಮುಕರ ದುಷ್ಕೃತ್ಯಕ್ಕೆ ಹಿಡಿ ಶಾಪ ಹಾಕಿದ್ದಾರೆ. ಅಲ್ಲದೆ ಪೊಲೀಸರು ಸ್ಥಳಕ್ಕೆ ಭೇಟಿಕೊಟ್ಟು ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಬಾಲಕಿಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದು, ಪ್ರಾಥಮಿಕ ವರದಿಯಲ್ಲಿ ಬಾಲಕಿಯನ್ನು ರೇಪ್ ಮಾಡಿ ಕೊಲೆಗೈಯಲಾಗಿದೆ ಎಂಬುದು ಬಯಲಾಗಿದೆ.

    ಈ ಪ್ರಕರಣ ಸಂಬಂಧ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪೊಲೀಸರು ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವೊಂದನ್ನು ನೇಮಿಸಿ, ತನಿಖೆ ಮುಂದುವರಿಸಿದ್ದಾರೆ. ಅಲ್ಲದೆ ಗ್ರಾಮದ ನಿವಾಸಿ ಮಹೇಂದ್ರ(40) ಬಾಲಕಿಯ ಅತ್ಯಾಚಾರಗೈದು, ಕೊಲೆ ಮಾಡಿರಬಹುದು ಎಂಬ ಅನುಮಾನದ ವ್ಯಕ್ತವಾಗಿದ್ದು, ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.