Tag: Jaipur

  • ಟ್ರಕ್ ಗುದ್ದಿದ ರಭಸಕ್ಕೆ ಬೈಕ್‍ನಲ್ಲಿದ್ದ ಮೂವರು ಸಾವು

    ಟ್ರಕ್ ಗುದ್ದಿದ ರಭಸಕ್ಕೆ ಬೈಕ್‍ನಲ್ಲಿದ್ದ ಮೂವರು ಸಾವು

    – ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ
    – ಬೈಕ್‍ಗೆ ಗುದ್ದಿ ಮಗುಚಿ ಬಿದ್ದ ಟ್ರಕ್

    ಜೈಪುರ: ಕುಡಿದ ಮತ್ತಿನಲ್ಲಿದ್ದ ಟ್ರಕ್ ಚಾಲಕನೊಬ್ಬ ಬೈಕ್‍ಗೆ ಗುದ್ದಿ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಜೈಪುರದಲ್ಲಿ ನಡೆದಿದೆ.

    ಮೃತರನ್ನು ರಾಜ್ ಕುಮಾರ್, ಲಾಲ್ ಚಂದ್ ಮತ್ತು ಮೊಹಮ್ಮದ್ ಸಲಾಂ ಎಂದು ಗುರುತಿಸಲಾಗಿದೆ. ಟ್ರಕ್ ಚಾಲಕ ಹರ್ಯಾಣ ಮೂಲದವನು ಎಂದು ತಿಳಿದು ಬಂದಿದೆ. ಟ್ರಕ್ ಚಾಲಕನ ಅಚಾತುರ್ಯದಿಂದ ಈ ಅಪಘಾತ ಸಂಭವಿಸಿದೆ.

    ಟ್ರಕ್ ಬಂದು ಬೈಕ್‍ಗೆ ಗುದ್ದಿದ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಟ್ರಕ್ ಚಾಲಕ ಕುಡಿದ ಮತ್ತಿನಲ್ಲಿದ್ದನು, ಹೀಗಾಗಿ ವೇಗವಾಗಿ ಟ್ರಕ್ ಚಲಾಯಿಸಿಕೊಂಡು ಬಂದಿದ್ದಾನೆ. ಬೈಕ್ ಸವಾರರು ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದರು. ಇತ್ತ ಅಕ್ಕಿ ಚೀಲಗಳನ್ನು ಹೊತ್ತಿದ್ದ ಟ್ರಕ್ ವೇಗವಾಗಿ ಬಂದು ಬೈಕ್ ಸವಾರರ ಮೇಲೆ ಹರಿದಿದೆ. ಈ ವೇಳೆ ಜೈಪುರ್ ಬ್ರಾಂಪುರಿ ಫ್ಲೈ ಓವರ್ ಬಳಿ ಬೈಕ್‍ಗೆ ಗುದ್ದಿದ್ದಾನೆ. ಈ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

     

    ಅಪಘಾತವಾದ ಕೂಡಲೇ ಟ್ರಕ್ ಮಗುಚಿ ಬಿದ್ದಿದೆ. ಇಲ್ಲವಾದರೆ ಭಾರಿ ಪ್ರಮಾಣದ ಅನಾಹುತವಾಗುತ್ತಿತ್ತು ಎಂದು ಅಲ್ಲೇ ಸ್ಥಳದಲ್ಲಿದ್ದವರು ಹೇಳಿದ್ದಾರೆ.

  • ಹಣದ ಆಸೆಗಾಗಿ ಕಿವಿ, ಮೂಗು ಕತ್ತರಿಸಿ ಬಾಲಕನ ಹತ್ಯೆ

    ಹಣದ ಆಸೆಗಾಗಿ ಕಿವಿ, ಮೂಗು ಕತ್ತರಿಸಿ ಬಾಲಕನ ಹತ್ಯೆ

    ಜೈಪುರ: ಕಿವಿ, ಮೂಗು ಕತ್ತರಿಸಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ರಾಜಸ್ಥಾನದ ಅಲ್ವಾರ್ ಗ್ರಾಮದಲ್ಲಿ ಪತ್ತೆಯಾಗಿದೆ.

    11 ವರ್ಷದ ಬಾಲಕ ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾಣೆಯಾದವನು ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ತಂದೆ ಈ ಪ್ರಕರಣದಲ್ಲಿ ಕೆಲವು ಜನರ ಹೆಸರನ್ನು ಹೇಳಿದ್ದಾರೆ. ಇವರು ಹಣದ ದುರಾಸೆಗಾಗಿ ನಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಒಂದು ದಿನದ ಹಿಂದೆ ಅಲ್ವಾರ್ ಗ್ರಾಮದಿಂದ ಬಾಲಕ ನಾಪತ್ತೆಯಾಗಿದ್ದನು. ಆದರೆ ಇದೀಗ ವಿಕೃತವಾಗಿ ಕೊಂದಿರುವ ಅವನ ಮೃತ ದೇಹ ಪತ್ತೆಯಾಗಿದೆ. ಕಣ್ಣು, ಮೂಗು ಕತ್ತರಿಸಿ ಬಾಲಕನನ್ನು ಕೊಂದು ಹಾಕಿದ್ದಾರೆ. ಬಾಲಕನ ಶವ ಗದ್ದೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಅಲ್ವಾರ್‍ನ ಮಲಖೇಡಾ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

     

     

    ನಂದಾ, ಬದ್ರಿ ಸೊಮೆಟೊ, ಬಾಲಸಹೈ, ಜೀತು ಮತ್ತು ಕಲ್ಲು ಇವರು ಹಣದ ದುರಾಸೆಯಿಂದ ನಿನ್ನೆ ಬೆಳಿಗ್ಗೆ ಮಗುವನ್ನು ಅಪಹರಿಸಿದ್ದಾರೆ. ನನ್ನ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಹಣದ ದುರಾಸೆಯಿಂದ ಅವನು ಕೊಂದಿದ್ದಾರೆ. ಮಗ ಕಾಣದೇ ಇರುವುದನ್ನು ಗಮನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆದರೆ ಪೊಲೀಸರು ಹೆಚ್ಚಿನ ಗಮನವನ್ನು ಕೊಟ್ಟಿರಲಿಲ್ಲ ಎಂದು ಬಾಲಕನ ತಂದೆ ರಘುವೀರ್ ಸಿಂಗ್ ಹೇಳಿದ್ದಾರೆ.

    ಹತ್ಯೆಗೀಡಾದ ಮಗುವಿನ ಶವವನ್ನು ನವಲಿ ಗ್ರಾಮದ ಹೊಲದಲ್ಲಿ ಪತ್ತೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ತೇಜಸ್ವಿನಿ ಗೌತಮ್ ಹೇಳಿದರು.

  • ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

    ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

    – ನಾಲ್ವರ ಶವ ಬಾವಿಯಲ್ಲಿ ಪತ್ತೆ

    ಜೈಪುರ್: ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ಪ್ರಾಣ ಬಿಟ್ಟಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ರಾಮ್‍ಸರ್‍ನಲ್ಲಿ ನಡೆದಿದೆ.

    ಮೃತ ತಾಯಿ ಮತ್ತು ಮಕ್ಕಳು ರಾಮ್ಸರ್ ಗ್ರಾಮದ ನಿವಾಸಿಗಳಾಗಿದ್ದಾರೆ. ವಿಮ್ಲಾ(30) ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ತಾಯಿ ಮತ್ತು ಮೂವರು ಮಕ್ಕಳ ಶವವನ್ನು ಬೆಳಗ್ಗೆ ಬಾವಿಯಿಂದ ಹೊರತೆಗೆಯಲಾಗಿದೆ. ಮರಣೊತ್ತರ ಪರೀಕ್ಷೆಯ ನಂತರ ಪೊಲೀಸರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

    ಬುಧವಾರ ಸಂಜೆ ಮಹಿಳೆ ತನ್ನ ಮೂವರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಹೋಗಿದ್ದಾಳೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆವರೆಗೂ ತಾಯಿ ಮತ್ತು ಮಕ್ಕಳು ಮನೆಗೆ ಬಾರದೇ ಇರುವುದನ್ನು ಗಮನಿಸಿದ ಕುಟುಂಬಸ್ಥರು ಅವರನ್ನು ಹುಡುಕಲು ಪ್ರಾರಂಭಿಸಿದ್ದಾರೆ.

    ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ತಾಯಿ ಮತ್ತು ಮೂವರು ಮಕ್ಕಳ ಶವ ಬಾವಿಯಲ್ಲಿರುವುದು ಪತ್ತೆಯಾಗಿದೆ. ಆಗ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಶವಗಳನ್ನು ಬಾವಿಯಿಂದ ಹೊರತೆಗೆಸಿ ಮರಣೋತ್ತರ ಪರೀಕ್ಷೆ ಮಾಡಿಸಿ ನಾಲ್ಕು ಶವಗಳನ್ನು ಕುಟುಂಬಸ್ಥರಿಗೆ ನೀಡಿದ್ದಾರೆ.

    12 ವರ್ಷದ ಸುಖ ಸಂಸಾರ ಮಹಿಳೆಯದ್ದು. ಮೂವರು ಮಕ್ಕಳಿದ್ದಾರೆ. ಪತಿ-ಪತ್ನಿ ಚೆನ್ನಾಗಿದ್ದರು ಎಂದು ಮೃತ ಮಹಿಳೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

    ಪೊಲೀಸರ ತನಿಖೆಯಿಂದ ತಾಯಿ ಮತ್ತು ಮೂರು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂಬುದು ತಿಳಿದು ಬರಬೇಕಿದೆ.

  • ನನ್ನ ಜೊತೆ ಸೆಕ್ಸ್ ಮಾಡಿದ್ರೆ ಅಂಕ ಕೊಡ್ತೀನಿ- ವಿದ್ಯಾರ್ಥಿನಿಯರಿಗೆ ಶಿಕ್ಷಕನ ಕಿರುಕುಳ

    ನನ್ನ ಜೊತೆ ಸೆಕ್ಸ್ ಮಾಡಿದ್ರೆ ಅಂಕ ಕೊಡ್ತೀನಿ- ವಿದ್ಯಾರ್ಥಿನಿಯರಿಗೆ ಶಿಕ್ಷಕನ ಕಿರುಕುಳ

    – ಶಿಕ್ಷಕನ ವರ್ತನೆಗೆ ಬೇಸತ್ತ ವಿದ್ಯಾರ್ಥಿನಿಯರು

    ಜೈಪುರ: ನನ್ನ ಜೊತೆ ಸೆಕ್ಸ್ ಮಾಡಿದ್ರೆ ನಾನು ಮಾರ್ಕ್ಸ್ ಕೊಡುತ್ತೇನೆ ಎಂದು ಶಾಲಾ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹೇಳಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

    ಸರ್ಕಾರಿ ಶಾಲಾ ಶಿಕ್ಷಕ ಪ್ರಕಾಶ್ ಯಾದವ್(45) ಆರೋಪ ಎದುರಿಸುತ್ತಿರುವ ಶಿಕ್ಷಕನಾಗಿದ್ದಾನೆ. ಮೇಲಾಧಿಕಾರಿಗೆ ವಿದ್ಯಾರ್ಥಿನಿಯರು ಶಿಕ್ಷಕನ ಕುರಿತಾಗಿ ತಿಳಿಸಿದ್ದಾರೆ. ಇದೀಗ ಆರೋಪಿ ಶಿಕ್ಷಕ ಜೈಲು ಸೇರಿದ್ದಾನೆ.

    ವಿದ್ಯಾರ್ಥಿನಿಯರ ಜೊತೆ ಅಸಭ್ಯರೀತಿಯಲ್ಲಿ ವರ್ತನೆ ಮಾಡುತ್ತಿದ್ದ. ಒಳ್ಳೆ ಅಂಕ ಬೇಕಾದರೆ ನನ್ನ ಜೊತೆ ದೈಹಿಕವಾಗಿ ಹೊಂದಿಕೊಳ್ಳಬೇಕು ಎಂದು ಹೇಳುತ್ತಿದ್ದನಂತೆ. ವಿದ್ಯಾರ್ಥಿನಿಯರು ಶಿಕ್ಷಕನ ವರ್ತನೆಯಿಂದ ಮನನೊಂದಿದ್ದರು.

    ಒಂದು ದಿನ ಮೇಲಾಧಿಕಾರಿಗಳು ಶಾಲೆಯ ಮೇಲ್ವಿಚಾರಣೆಗೆ ಬಂದಾಗ ಶಿಕ್ಷಕನ ವರ್ತನೆಯ ಬಗ್ಗೆ ತಿಳಿಸಿದ್ದಾರೆ. ಶಿಕ್ಷಕರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ. ದೈಹಿಕ ಸಂಪರ್ಕವನ್ನು ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಾರೆ. ನನ್ನೊಂದಿಗೆ ಸಹಕರಿಸಲಿಲ್ಲ ಎಂದರೆ ನಿಮಗೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಕೊಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ. ತಕ್ಷಣ ಎಚ್ಚರಿತುಕೊಂಡ ಮೇಲಾಧಿಕಾರಿ ಈ ವಿಷಯವನ್ನು ಶಿಕ್ಷಣ ಇಲಾಖೆಗೆ ತಿಳಿಸಿದ್ದಾರೆ. ಈಗ ಶಿಕ್ಷಕನ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

  • ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    ಸ್ಟಾರ್ ಹೋಟೆಲ್‍ನಲ್ಲಿ ಸೆಕ್ಸ್ ವರ್ಕರ್ ಇಲ್ಲದ್ದಕ್ಕೆ ಸಿಬ್ಬಂದಿ ಮೇಲೆ ಗ್ಯಾಂಗ್ ರೇಪ್

    – ಪಿಸ್ತೂಲು ತೋರಿಸಿ ಅತ್ಯಾಚಾರ

    ಜೈಪುರ್ : ಸ್ಟಾರ್ ಹೋಟೆಲ್‍ವೊಂದರಲ್ಲಿ ತಂಗಿದ್ದ ಐವರು ಹೋಟೆಲ್ ಮಹಿಳಾ ಸಿಬ್ಬಂದಿಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ.

    ಆರೋಪಿಗಳನ್ನು ನರೇಶ್ ಗುಜ್ಜರ್, ಲೋಕೇಶ್, ರಾಹುಲ್, ದನ್ವೀರ್ ಮತ್ತು ಪ್ರಿನ್ಸ್ ತಿವಾರಿ ಎಂದು ಗುರುತಿಸಲಾಗಿದೆ. ಐವರು ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಆರೋಪಿಗಳು ಪೊಲೀಸರ ಎದುರು ಬಾಯಿಬಿಟ್ಟಿದ್ದಾರೆ.

    ಈ ಐವರು ಆರೋಪಿಗಳು ತ್ರಿಸ್ಟಾರ್ ಹೋಟೆಲ್‍ವೊಂದಕ್ಕೆ ಬಂದು ಉಳಿದಿದ್ದಾರೆ. ರೂಮ್ ಕೀಯನ್ನು ತೆಗೆದುಕೊಂಡು ರೂಂಗೆ ಹೋಗಿದ್ದಾರೆ. ಕೆಲವೇ ಕ್ಷಣದಲ್ಲಿ ಮತ್ತೆ ಬಂದು ಸೆಕ್ಸ್ ವರ್ಕರ್‍ಗಳನ್ನು ರೂಮ್‍ಗೆ ಕಳುಹಿಸುವಂತೆ ಹೇಳಿದ್ದಾರೆ. ಇದಕ್ಕೆ ಹೋಟೆಲ್ ಸಿಬ್ಬಂದಿ ನಿರಾಕರಿಸಿದ್ದಾರೆ.

    ಸಿಟ್ಟಿಗೆದ್ದ ಆರೋಪಿಗಳು ಮಹಿಳಾ ಸಿಬ್ಬಂದಿ ಮಲಗಿದ್ದ ಕೋಣೆ ಕಡೆಗೆ ಹೋಗಿದ್ದಾರೆ. ಇಬ್ಬರು ಒಳಗೆ ಹೋಗಿದ್ದಾರೆ. ಮೂವರು ಹೊರಗೆ ಕಾವಲು ಕಾಯಲು ನಿಂತಿದ್ದಾರೆ. ಒಳಗೆ ಹೋದ ಆರೋಪಿಗಳು ಮಹಿಳಾ ಸಿಬ್ಬಂದಿಗೆ ಪಿಸ್ತೂಲು ತೋರಿಸಿ, ಇಬ್ಬರ ಮೇಲೆ ಅತ್ಯಾಚಾರವೆಸಗಿದ್ದಾರೆ.

    ಕೂಡಲೇ ಎಚ್ಚೆತ್ತ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಪೊಲೀಸರ ವಿಶೇಷ ತಂಡ ಸ್ಥಳಕ್ಕೆ ಬಂದು ಮಹಿಳಾ ಸಿಬ್ಬಂದಿಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಈ ಐವರು ಒಬ್ಬ ಬಿಸಿನೆಸ್‍ಮ್ಯಾನ್‍ನನ್ನು ಕೊಲೆ ಮಾಡುವ ಉದ್ದೇಶದಿಂದ ಹೋಟೆಲ್‍ಗೆ ಬಂದು ಉಳಿದುಕೊಂಡಿದ್ದರು. ಇವರ ಟಾರ್ಗೆಟ್‍ನಲ್ಲಿರುವ ಬಿಸಿನೆಸ್ ಮ್ಯಾನ್‍ಗೆ 20 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಕೊಡದಿದ್ದರೆ ಕೊಲೆ ಮಾಡುವವರಾಗಿದ್ದರು ಎಂದು ತಿಳಿದು ಬಂದಿದೆ. ಈ ಐವರು ಆರೋಪಿಗಳಲ್ಲಿ ಒಬ್ಬನಾದ ನರೇಶ್ ಈಗಾಗಲೇ ಒಂದು ಕೊಲೆ ಆರೋಪವನ್ನು ಹೊತ್ತಿದ್ದು, ಪೆರೋಲ್ ಮೇಲೆ ಜೈಲಿನಿಂದ ಹೊರಗಡೆ ಬಂದಿದ್ದ.

  • ಜಡ್ಜ್ ಪ್ರಶ್ನೆಗೆ ಸನ್ನೆಯ ಉತ್ತರ – ಚಿಕ್ಕಮ್ಮಳಿಗೆ ಬಾಲಕಿಯನ್ನು ಒಪ್ಪಿಸಿದ ಕೋರ್ಟ್

    ಜಡ್ಜ್ ಪ್ರಶ್ನೆಗೆ ಸನ್ನೆಯ ಉತ್ತರ – ಚಿಕ್ಕಮ್ಮಳಿಗೆ ಬಾಲಕಿಯನ್ನು ಒಪ್ಪಿಸಿದ ಕೋರ್ಟ್

    ಜೈಪುರ: ತಾಯಿ ಇಲ್ಲದ ಐದು ವರ್ಷದ ಬಾಲಕಿಯ ಸನ್ನೆಯೇ ಆಕೆಯ ಒಪ್ಪಿಗೆ ಎಂದು ತಿಳಿದು ಆಕೆಯನ್ನು ಚಿಕ್ಕಮ್ಮಳ ವಶಕ್ಕೆ ಕೋರ್ಟ್ ಒಪ್ಪಿಸಿದ ಅಪರೂಪದ ಪ್ರಕರಣ ರಾಜಸ್ಥಾನದಲ್ಲಿ ನಡೆದಿದೆ.

    ನ್ಯಾಯಾಧೀಶ ಸಂದೀಪ್ ಮೆಹ್ತಾ ಮತ್ತು ನ್ಯಾಯಾಧೀಶ ದೇವೇಂದ್ರ ಕಛಚವ್ಹಾ ಬಾಲಕಿ ಲಾವಣ್ಯಗೆ ಯಾರ ಬಳಿ ಇರಲು ಇಷ್ಟಪಡುತ್ತಿಯಾ ಎಂದು ಪ್ರಶ್ನೆ ಮಾಡಿದ್ದರು. ಲಾವಣ್ಯ ದೂರದಲ್ಲಿ ನಿಂತಿದ್ದ ಚಿಕ್ಕಮ್ಮ ಸುಮಿತ್ರಾ ಕಡೆ ಕೈ ಮಾಡಿ ತೋರಿಸಿ ಸುಮ್ಮನಾಗಿದ್ದಳು. ಬಾಲಕಿ ಕೈ ಸನ್ನೆಯೇ ಆಕೆಯ ನಿರ್ಧಾರ ಎಂದು ಭಾವಿಸಿದ ನ್ಯಾಯಾಧೀಶರು ಚಿಕ್ಕಮ್ಮಳ ವಶಕ್ಕೆ ನೀಡಿದರು. ಲಾವಣ್ಯಳನ್ನ ಕಾನೂನು ಪ್ರಕಾರ ದತ್ತು ಪಡೆದುಕೊಳ್ಳುವಾಗ ಸುಮಿತ್ರಾ ಭಾವುಕರಾಗಿ ಕಣ್ಣೀರು ಹಾಕಿದರು.

    ಲಾವಣ್ಯ ತಾಯಿಯ ತಂದೆ ಮೋಹನ್ ಸಿಂಗ್ ಬಾಲಕಿಯ ಜೀವಕ್ಕೆ ಅಪಾಯವಿದೆ. ಹಾಗಾಗಿ ಮೊಮ್ಮಗಳನ್ನು ಆಕೆಯ ಚಿಕ್ಕಮ್ಮಳಾದ ಸುಮಿತ್ರಾ ಕಸ್ಟಡಿಗೆ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತ ಲಾವಣ್ಯ ತಂದೆಯ ಪೋಷಕರು ತಮ್ಮ ಬಳಿಯೇ ಮೊಮ್ಮಗಳು ಇರಬೇಕೆಂದು ನ್ಯಾಯಾಲಯದ ಬಳಿ ಮನವಿ ಮಾಡಿಕೊಂಡಿದ್ದರು.

    ಜನವರಿ 27, 2020ರಂದು ಲಾವಣ್ಯ ತಾಯಿ ಸುನಿತಾ ಕೊಲೆಯಾಗಿತ್ತು. ತಂದೆ ಪರ್ವಿಂದ್ರ ಸಿಂಗ್ ಅಮ್ಮನ ಕೊಲೆ ಮಾಡಿದ್ದು ಎಂದು ಲಾವಣ್ಯ ಪೊಲೀಸರು ಮುಂದೆ ಹೇಳಿಕೆ ನೀಡಿದ್ದಳು. ಲಾವಣ್ಯ ಸುನಿತಾ ಕೊಲೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿ. ಹಾಗಾಗಿ ಆಕೆ ಜೀವಕ್ಕೆ ಅಪಾಯವಿದೆ ಎಂದು ಮೋಹನ್ ಸಿಂಗ್ ಆರೋಪಿಸಿದ್ದರು. ಸುನಿತಾ ಕೊಲೆ ಬಳಿಕ ಮಕ್ಕಳ ಅಭಿವೃದ್ಧಿ ಅಧಿಕಾರಿಗಳು ಲಾವಣ್ಯಳನ್ನು ತಂದೆಯ ಪೋಷಕರ ವಶಕ್ಕೆ ನೀಡಿದ್ದರು. ಹೀಗಾಗಿ ಮೋಹನ್ ಸಿಂಗ್ ನ್ಯಾಯಾಲಯದ ಮೊರೆ ಹೋಗಿದ್ದರು.

  • ನಿಮ್ಮ ಮಗಳನ್ನ ಕೊಂದೆ, ಬಂದು ಹೆಣ ನೋಡಿ – ಮಾವನಿಗೆ ಫೋನ್ ಮಾಡಿದ ಅಳಿಯ

    ನಿಮ್ಮ ಮಗಳನ್ನ ಕೊಂದೆ, ಬಂದು ಹೆಣ ನೋಡಿ – ಮಾವನಿಗೆ ಫೋನ್ ಮಾಡಿದ ಅಳಿಯ

    – ಶವದ ಪಕ್ಕ ಕುಳಿತು ಮೊಬೈಲ್ ಗೇಮ್ ಆಡ್ತಿದ್ದ ಪತಿ

    ಜೈಪುರ: ರಾಜಸ್ಥಾನದ ಜೋಧಪುರ ನಗರದ ಮಹಾಮಂದಿರ ಠಾಣಾ ವ್ಯಾಪ್ತಿಯ ಬಿಜೆಎಸ್ ಕಾಲೋನಿಯಲ್ಲಿ ಪತಿಯೇ ಪತ್ನಿಯನ್ನ ಕೊಂದಿದ್ದಾನೆ. ಕೊಲೆಯ ಬಳಿಕ ಮಗಳ ಶವ ನೋಡಲು ಬನ್ನಿ ಎಂದು ಮಾವನಿಗೆ ಕರೆ ಮಾಡಿ ತಿಳಿಸಿದ್ದಾನೆ. ಭಾನುವಾರ ರಾತ್ರಿ ಕೊಲೆನಡೆದಿದ್ದು, ಪೊಲೀಸರು ಬರೋವರೆಗೂ ಶವದ ಪಕ್ಕದಲ್ಲಿಯೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು.

    ಶಿವ ಕಂವರಾ ಪತಿ ವಿಕ್ರಂ ಸಿಂಗ್ ನಿಂದ ಕೊಲೆಯಾದ ಮಹಿಳೆ. ಕತ್ತರಿಯಿಂದ ದಾಳಿ ನಡೆಸಿ ಪತ್ನಿಯನ್ನ ಕೊಲೆಗೈದಿರೋದಾಗಿ ವಿಕ್ರಂ ಸಿಂಗ್ ಒಪ್ಪಿಕೊಂಡಿದ್ದಾನೆ. ಪತ್ನಿಯನ್ನ ಕೊಲೆ ಮಾಡಿದ ಗಳಿಗೆಯಲ್ಲಿ ತನಗೆ ಏನಾಯ್ತು ಎಂದು ಗೊತ್ತಿಲ್ಲ. ಎಲ್ಲವೂ ಅಸ್ಪಷ್ಟ, ಆದ್ರೆ ಪತ್ನಿಯನ್ನ ಕೊಲೆ ಮಾಡಿದ್ದು ನಾನೇ ಎಂದು ಸಹ ವಿಚಾರಣೆ ವೇಳೆ ವಿಕ್ರಂ ಸಿಂಗ್ ಹೇಳಿದ್ದಾನೆ. ಇದನ್ನೂ ಓದಿ: ಸೆಕ್ಸ್ ಬೇಡ ಎಂದ ಪತ್ನಿಯನ್ನೇ ಕೊಂದ ಪತಿಯ ಆರೋಪ ಸಾಬೀತು

    ಮೊಬೈಲ್ ಗೇಮ್ ಆಡ್ತಿದ್ದ: ರಾತ್ರಿ ಕೊಲೆ ಮಾಡಿದ್ದರೂ ವಿಕ್ರಂ ಸಿಂಗ್ ಪತ್ನಿಯ ಶವದ ಪಕ್ಕವೇ ಕುಳಿತು ಮೊಬೈಲ್ ಗೇಮ್ ಆಡುತ್ತಿದ್ದನು. ಆತ ಓಡಿ ಹೋಗುವ ಪ್ರಯತ್ನವೂ ಸಹ ಮಾಡಿಲ್ಲ. ಮನೆಯಲ್ಲಿದ್ದ ಮಕ್ಕಳಿಗೂ ಆತ ಏನು ಮಾಡಿಲ್ಲ. ಆರೋಪಿ ಮೇಲ್ನೀಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಂಪತಿಗೆ ಓರ್ವ ಮಗಳು ಮತ್ತು ಮಗನಿದ್ದಾನೆ. ಇದನ್ನೂ ಓದಿ: ಸೆಕ್ಸ್‌ಗೆ ಒಪ್ಪದ ಪತ್ನಿ- ಖಿನ್ನತೆಯಿಂದ ಪತಿ ಸೂಸೈಡ್

    ನಿರುದ್ಯೋಗಿಯಾಗಿದ್ದ ಆರೋಪಿ: ವಿಕ್ರಂ ಸಿಂಗ್ ಮೂಲತಃ ಫಲೇದಿಯ ನಿವಾಸಿಯಾಗಿದ್ದು, ಬಿಜೆಎಸ್ ಕಾಲೋನಿಯಲ್ಲಿರುವ ಮನೆಯಲ್ಲಿ ಬಹಳ ದಿನಗಳಿಂದ ವಿಕ್ರಂಸಿಂಗ್ ಕುಟುಂಬ ಸಮೇತನಾಗಿ ವಾಸವಾಗಿದ್ದನು. ವಿಕ್ರಂ ಸಿಂಗ್ ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದನು. ಪತ್ನಿ ಮೊದಲಿಗೆ ಮನೆಯಲ್ಲಿ ಬಟ್ಟೆ ಹೊಲಿಯುವ ಕೆಲಸ ಮಾಡುತ್ತಿದ್ದರು. ಕೆಲ ದಿನಗಳಿಂದ ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸಕ್ಕೆ ಸೇರಿಕೊಂಡಿದ್ದರು. ಸಹಕಾರಿ ಸ್ಟೋರ್ ನಲ್ಲಿ ಪತ್ನಿ ಕೆಲಸ ಮಾಡೋದು ವಿಕ್ರಂಗೆ ಇಷ್ಟವಿರಲಿಲ್ಲ. ಇದನ್ನೂ ಓದಿ: ಸುಂದರ ಪತ್ನಿಯಿದ್ರೂ ಮತ್ತೊಬ್ಬಾಕೆಯ ಬಾಹುಗಳಲ್ಲಿ ಸೆರೆಯಾದವನಿಂದ ಮಡದಿಯ ಕೊಲೆ?

    2008ರಲ್ಲಿ ವಿಕ್ರಂ ಮತ್ತು ಶಿವ ಮದುವೆ ನಡೆದಿತ್ತು. ತುಂಬಾ ದಿನಗಳಿಂದ ನಿರುದ್ಯೋಗಿಯಾಗಿದ್ದ ವಿಕ್ರಂ ಪತ್ನಿ ಜೊತೆ ಸದಾ ಜಗಳ ಮಾಡುತ್ತಿದ್ದನು. ಹಣಕ್ಕಾಗಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನು. ಕೊಲೆಯ ಬಳಿಕ ಮಾವ ಮತ್ತು ಪೊಲೀಸರಿಗೆ ಆತನೇ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ ಎಂದು ಡಿಸಿಪಿ ಧರ್ಮೇಂದ್ರ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪತಿಯಿಂದಲೇ ಪತ್ನಿ ಕೊಲೆ- 4 ದಿನದಿಂದ ಮೃತದೇಹ ಮುಂದಿಟ್ಟುಕೊಂಡು ಸಂಬಂಧಿಕರಿಂದ ಪ್ರತಿಭಟನೆ

    ಭಾನುವಾರ ಮಲಗಿದ್ದ ನನಗೆ ದಿಢೀರ್ ಎಚ್ಚರವಾಯ್ತು. ಕೂಡಲೇ ಕತ್ತರಿಯಿಂದ ಪತ್ನಿಯನ್ನ ಕೊಲೆ ಮಾಡಿದೆ. ಆ ಕ್ಷಣ ಏನಾಯ್ತು ಎಂಬುದು ನನ್ನ ಅರಿವಿಗೆ ಬರಲಿಲ್ಲ ಎಂದು ವಿಕ್ರಂ ಸಿಂಗ್ ಹೇಳಿದ್ದಾನೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ರವಾನಿಸಲಾಗಿದೆ. ಆರೋಪಿ ವಿಕ್ರಂ ಸಿಂಗ್ ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಪತ್ನಿ ಕೊಲೆ ಆರೋಪದಲ್ಲಿ ಪತಿಗೆ ಜೈಲು ಶಿಕ್ಷೆ – 7 ವರ್ಷಗಳ ನಂತ್ರ ಹೆಂಡ್ತಿ ಪತ್ತೆ

  • ದೀಪಾವಳಿ ಪೂಜೆ ಬಳಿಕ ಮನೆ ಲಕ್ಷ್ಮಿಯನ್ನ ಕೊಂದ ತಂದೆ-ಮಗ

    ದೀಪಾವಳಿ ಪೂಜೆ ಬಳಿಕ ಮನೆ ಲಕ್ಷ್ಮಿಯನ್ನ ಕೊಂದ ತಂದೆ-ಮಗ

    – ಕೊಂದು ಬೆಡ್‍ಶೀಟ್ ನಲ್ಲಿ ಸುತ್ತಿ ಎಸೆದ್ರು
    – ಎರಡೇ ದಿನದಲ್ಲಿ ಕಂಬಿ ಹಿಂದೆ ಆರೋಪಿಗಳು

    ಜೈಪುರ: ದೀಪಾವಳಿಯ ಪೂಜೆ ಬಳಿಕ ಮನೆಯ ಲಕ್ಷ್ಮಿಯನ್ನ ಕೊಂದಿದ್ದ ತಂದೆ-ಮಗ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾರೆ. ನಾವು ಯಾರಿಗೂ ಸಿಗಲ್ಲ ಅಂತ ಓಡಾಡುತ್ತಿದ್ದ ತಂದೆ-ಮಗನನ್ನ ಪೊಲೀಸರು ಎರಡನೇ ದಿನದಲ್ಲಿ ಜೈಲಿಗಟ್ಟಿದ್ದಾರೆ. ರಾಜಸ್ಥಾನದ ರೇವಾಡಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

    23 ವರ್ಷದ ಪೂಜಾ ಯಾದವ್ ಮಾವ ಮತ್ತು ಪತಿಯಿಂದ ಕೊಲೆಯಾದ ಮಹಿಳೆ. ಮಾವ ಲಕ್ಷ್ಮಣ್ ಯಾದವ್ ಮತ್ತು ಪತಿ ಆಶೀಷ್ ಯಾದವ್ ಮಾಡಿದ ತಪ್ಪಿಗೆ ಕತ್ತಲೆ ಕೋಣೆಯಲ್ಲಿ ಕುಳಿತು ಕಂಬಿಗಳ ಲೆಕ್ಕ ಹಾಕ್ತಿದ್ದಾರೆ. ಇದನ್ನೂ ಓದಿ:  ಜ್ಯೋತಿಷಿ ಮಾತು ಕೇಳಿ ಪತ್ನಿಗೆ ಕಿರುಕುಳ – ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ

    ಪತ್ನಿ ತವರಿನವರು ಆಶೀಷ್ ಗೆ ಐದು ಲಕ್ಷ ರೂ. ನೀಡಬೇಕಿತ್ತು ಮತ್ತು ಆಶೀಷ್ ಗೆ ಪತ್ನಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆ ನವೆಂಬರ್ 14ರ ರಾತ್ರಿ ದೀಪಾವಳಿಯ ವಿಶೇಷ ಪೂಜೆ ಬಳಿಕ ಪತ್ನಿಯನ್ನ ತಂದೆ ಜೊತೆ ಸೇರಿ ಆಶೀಷ್ ಕೊಲೆ ಮಾಡಿದ್ದನು. ಕೊಲೆಯ ಬಳಿಕ ಮೃತದೇಹವನ್ನು ಬೆಡ್‍ಶೀಟ್ ನಲ್ಲಿ ಸುತ್ತಿ ಸೌತಾನಾವಾಲಾ ಸೇತುವೆ ಬಳಿ ಎಸೆದಿದ್ದರು. ಇದನ್ನೂ ಓದಿ: 7ನೇ ಮಹಡಿಯಲ್ಲಿರೋ ಪತಿ ಬೆಡ್ ರೂಮಿನಿಂದ ಜಿಗಿದ ನವ ವಿವಾಹಿತೆ

    ನವೆಂಬರ್ 15ರಂದು ಪನಿಯಾಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶವ ಪತ್ತೆಯಾಗಿತ್ತು. ಶವದ ಕತ್ತಿನ ಭಾಗದಲ್ಲಿ ಗಾಯವಾಗಿದ್ದು ಕಂಡು ಬಂದಿತ್ತು. ಅಪರಿಚಿತ ಶವ ಎಂದು ದೂರು ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯಲ್ಲಿರಿಸಿದ್ದರು. ನೇಣುಬಿಗಿದು ಕೊಲೆ ಮಾಡಿ ಶವ ಬಿಸಾಡಿರೋದು ಪೊಲೀಸರಿಗೆ ಮೃತದೇಹ ನೋಡಿದ ಕ್ಷಣವೇ ತಿಳಿದಿತ್ತು. ಹಾಗಾಗಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಖಾಡಕ್ಕೆ ಇಳಿದು ಎರಡೇ ದಿನದಲ್ಲಿ ಕೊಲೆ ರಹಸ್ಯ ಭೇದಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ– ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ರು

    ಸೋಶಿಯಲ್ ಮೀಡಿಯಾ ಸಹಾಯ: ಮೃತದೇಹದ ಫೋಟೋ ಕ್ಲಿಕ್ಕಿಸಿ ಸುತ್ತಲಿನ ಜಿಲ್ಲೆಗಳ ಪೊಲೀಸ್ ಠಾಣೆಗೆ ರವಾನಿಸಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿರುವ ಬಗ್ಗೆ ಮಾಹಿತಿ ಕೇಳಿದ್ದರು. ಅಪರಿಚಿತ ಶವ ದೊರೆತಿರುವ ಬಗ್ಗೆ ಪತ್ರಿಕಾ ಪ್ರಕಟನೆ ಸಹ ಹೊರಡಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಮೃತ ಮಹಿಳೆಯ ಫೋಟೋ ಅಪ್ಲೋಡ್ ಮಾಡಲಾಗಿತ್ತು. ಇದನ್ನೂ ಓದಿ: ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಮೃತ ಮಹಿಳೆಯ ಫೋಟೋ ಗಮನಿಸಿದ ಮಾಡೆಲ್ ಟೌನ್ ರೇವಾಡಿ ಪೊಲೀಸರು ತಮ್ಮ ಠಾಣೆಯಲ್ಲಿ ಪೂಜಾ ಯಾದವ್ ಎಂಬ ಮಹಿಳೆಯ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿರುವ ಮಹಿಳೆಯ ಶವ ಮತ್ತು ಪೂಜಾ ಯಾದವ್ ಹೋಲಿಕೆಯಲ್ಲಿ ಸಾಮ್ಯತೆ ಇರೋ ಬಗ್ಗೆ ಕಂಡು ಹಿಡಿದಿದ್ದರು. ಪೊನಿಯಾಲಾ ಪೊಲೀಸರು ಪೂಜಾ ಯಾದವ್ ಪೋಷಕರು ಕರೆಸಿದಾಗ ಮೃತದೇಹ ತಮ್ಮ ಮಗಳದ್ದು ಎಂದು ಗುರುತಿಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ 8 ದಿನಕ್ಕೆ ನವ ವಿವಾಹಿತೆ ಆತ್ಮಹತ್ಯೆ– ಹಬ್ಬಕ್ಕೆ ಕರ್ಕೊಂಡು ಬರಲು ಹೋದಾಗ ರಹಸ್ಯ ಬಯಲು

    ಇನ್ನು ಪೂಜಾ ಯಾದವ್ ಪತಿ ಮತ್ತು ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾರೆ. ಇತ್ತ ಪೂಜಾ ಯಾದವ್ ಶವವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ನವ ವಿವಾಹಿತೆ ತಾಳಿ, ಕಾಲುಂಗುರ ತೆಗೆಸಿದ ಪೊಲೀಸ್ರು?

  • ಪಾಕಿಸ್ತಾನಕ್ಕೆ ಗುಪ್ತ ಸಂದೇಶ ರವಾನಿಸ್ತಿದ್ದ ಆರ್ಮಿ ಡ್ರೈವರ್ ಅರೆಸ್ಟ್

    ಪಾಕಿಸ್ತಾನಕ್ಕೆ ಗುಪ್ತ ಸಂದೇಶ ರವಾನಿಸ್ತಿದ್ದ ಆರ್ಮಿ ಡ್ರೈವರ್ ಅರೆಸ್ಟ್

    – ನಕಲಿ ಖಾತೆ ಬಳಸಿ ಪಾಕ್ ಜೊತೆ ಸಂಪರ್ಕ

    ಜೈಪುರ: ವೈರಿ ಪಾಕಿಸ್ತಾನಕ್ಕೆ ದೇಶದ ಸೇನೆಯ ರಹಸ್ಯ ಮಾಹಿತಿ ರವಾನಿಸುತ್ತಿದ್ದ ಆರ್ಮಿ ಕಚೇರಿಯ ಚಾಲಕನನ್ನು ರಾಜಸ್ಥಾನದ ಗುಪ್ತಚರ ತಂಡ ಬಂಧಿಸಿದೆ.

    29 ವರ್ಷದ ರಾಮ್‍ನಿವಾಸ್ ಬಂಧಿತ ಆರ್ಮಿ ವಾಹನದ ಚಾಲಕ. ಬಂಧಿತ ಚಾಲಕ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದನು. ಅನುಮಾನದ ಮೇಲೆ ಗುಪ್ತಚರ ತಂಡ ರಾಮ್‍ನಿವಾಸ್ ಚಲನವಲನ ಮೇಲೆ ಕಣ್ಣೀಟ್ಟಿತ್ತು. ಸಂಶಯದ ಮೇಲೆ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ರಾಜಸ್ಥಾನದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ನಕಲಿ ಖಾತೆ ತರೆದಿದ್ದ ರಾಮ್‍ನಿವಾಸ್ ಪಾಕಿಸ್ತಾನದ ಸೇನೆಯ ಜೊತೆ ಸಂಪರ್ಕ ಹೊಂದಿದ್ದನು. ಭಾರತೀಯ ಸೇನೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚಾಲಕ ಪಾಕಿಸ್ತಾನದ ಜೊತೆ ಹಂಚಿಕೊಳ್ಳುತ್ತಿದ್ದನು. ಆರೋಪಿ ವಿಷಯ ಹಂಚಿಕೆ ಪ್ರತಿಫಲವಾಗಿ ಪಾಕಿಸ್ತಾನ ಸೇನಾಧಿಕಾರಿಗಳಿಗೆ ಹಣ ನೀಡುವಂತೆ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನ ಸಹ ಕಳುಹಿಸಿದ್ದನು ಎಂದು ಉಮೇಶ್ ಮಿಶ್ರಾ ತಿಳಿಸಿದ್ದಾರೆ.

    ಬಂಧಿತ ರಾಮ್‍ನಿವಾಸ್ ನಾಗೌರ್ ಜಿಲ್ಲೆಯ ನಿವಾಸಿಯಾಗಿದ್ದು, ಜೈಪುರದ ನಿವಾರೂದಲ್ಲಿರುವ ಸೇನಾ ಕಾರ್ಯಲಯದಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದನು. ಸದ್ಯ ಆರೋಪಿಯನ್ನ ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಯಾರಿಗೆ, ಯಾವ ವಿಷಯಗಳನ್ನ ರವಾನಿಸುತ್ತಿದ್ದ ಮತ್ತು ಹಣ ಹೇಗೆ ಈತನ ಖಾತೆಗೆ ಬರುತ್ತಿತ್ತು? ಚಾಲಕನಾಗಿದ್ದರೂ ರಾಮನಿವಾಸ್ ಗೆ ಸೇನೆಯ ರಹಸ್ಯ ಮಾಹಿತಿ ಹೇಗೆ ತಲುಪತ್ತಿತ್ತು ಎಂಬುದರ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

  • ಜೀವಂತವಾಗಿ ಅರ್ಚಕನನ್ನು ಸುಟ್ಟು ಕೊಂದ ದುಷ್ಕರ್ಮಿಗಳು

    ಜೀವಂತವಾಗಿ ಅರ್ಚಕನನ್ನು ಸುಟ್ಟು ಕೊಂದ ದುಷ್ಕರ್ಮಿಗಳು

    – ಸಾವಿಗೂ ಮುನ್ನ ಪೊಲೀಸರಿಗೆ ಹೇಳಿಕೆ ನೀಡಿದ ಅರ್ಚಕ

    ಜೈಪುರ: ಭೂ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ಅರ್ಚಕರೊಬ್ಬರನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

    ಕರೌಲಿ ಜಿಲ್ಲೆಯ ಗ್ರಾಮವೊಂದರ ಅರ್ಚಕ ಬಾಬುಲಾಲ್ ಸಾವನ್ನಪ್ಪಿದ್ದು, ಜಿಲ್ಲೆಯ ಹಳ್ಳಿಯೊಂದರ ರಾಧಾ ಕೃಷ್ಣ ದೇವಾಲಯದ ಟ್ರಸ್ಟ್ ಗೆ ಸೇರಿದ ಸುಮಾರು 5.2 ಎಕರೆ ಭೂಮಿಯನ್ನು ಅವರು ಹೊಂದಿದ್ದರು. ಈ ಭೂಮಿಯನ್ನು ಅರ್ಚಕರಿಗೆ ಪ್ರಮುಖ ಆದಾಯದ ಮೂಲವಾಗಿ ನೀಡಲಾಗಿತ್ತು. ದೇವಾಲಯದ ಟ್ರಸ್ಟ್ ಗೆ ಸೇರಿದ ಭೂಮಿಯಾದರು ಇದರ ಉಸ್ತುವಾರಿಯನ್ನು ಅರ್ಚಕರಿಗೆ ನೀಡಲಾಗಿತ್ತು. ಅವರು ಗ್ರಾಮದ ದೇವಾಲಯದಲ್ಲಿ ಪೂಜೆ ಮಾಡುವ ಕಾರ್ಯವನ್ನು ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದೆ.

    ದೇವಾಲಯದಲ್ಲಿ ಸೇವೆ ಸಲ್ಲಿಸುವ ಕಾರಣದಿಂದ ಅರ್ಚಕರಿಗೆ ನೀಡುವ ಈ ಪದ್ದತಿಯನ್ನು ಮಂದಿತ ಮಾಫಿ ಎಂದು ಕರೆಯಲಾಗುತ್ತದೆ. ರಾಜಸ್ಥಾನದ ಹಲವು ಗ್ರಾಮಗಳಲ್ಲಿ ದೇವಾಲಯದ ಉಸ್ತುವಾರಿ ವಹಿಸುವ ಅರ್ಚಕರಿಗೆ ಆದಾಯದ ಮೂಲವಾಗಿ ನೀಡಲಾಗುತ್ತದೆ.

    ಈ ಭೂಮಿ ಮೇಲೆ ಕಣ್ಣಿಟ್ಟಿದ್ದ ಗುಂಪು ವಿವಾದವನ್ನು ಸೃಷ್ಟಿ ಮಾಡಿತ್ತು. ಅರ್ಚಕ ಬಾಬುಲಾಲ್ ಹೊಂದಿದ್ದ ಜಮೀನು ತಮ್ಮದೆಂದು ಗ್ರಾಮದ ಪ್ರಭಾವಿ ಗುಂಪೊಂದು ಗಲಾಟೆ ಮಾಡಿತ್ತು. ಈ ಗಲಾಟೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಅರ್ಚಕರ ಮೇಲೆ ದಾಳಿ ನಡೆಸಿದ್ದ ಗುಂಪು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿತ್ತು.

    ತೀವ್ರ ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅರ್ಚಕರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅರ್ಚಕರು ಸಾವನ್ನಪ್ಪಿದ್ದರು. ಸಾವನ್ನಪ್ಪುವ ಮುನ್ನ ಅರ್ಚಕರಿಂದ ಹೇಳಿಕೆ ಪಡೆದ ಪೊಲೀಸರು ಘಟನೆ ಸಂಬಂಧ ಪ್ರಮುಖ ಆರೋಪಿ ಕೈಲಾಶ್ ಮೀನಾನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲು 6 ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಎಂದು ಸ್ಥಳೀಯ ಎಸ್‍ಪಿ ಮಾಹಿತಿ ನೀಡಿದ್ದಾರೆ.