Tag: Jaggi Jagannatha

  • ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಜಗ್ಗಿ ಜಗನ್ನಾಥ ಇದು ಓಂ ಸಾಯಿ ಪ್ರಕಾಶ್ ಸಿನಿಮಾ

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಯಾರಿಗೆ ಗೊತ್ತಿಲ್ಲ ಹೇಳಿ. ಚಂದನವನಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರೋ ಇವ್ರು, ಭಕ್ತಿ ಪ್ರಧಾನ, ಪ್ಯಾಮಿಲಿ ಸೆಂಟಿಮೆಂಟ್ ಸಿನಿಮಾಗಳಿಂದಲೇ ಹೆಸರುವಾಸಿ. ಇವ್ರು ಇತ್ತೀಚೆಗೆ ಆ್ಯಕ್ಷನ್ ಕಟ್ ಹೇಳಿರೋ ಜಗ್ಗಿ ಜಗನ್ನಾಥ ಚಿತ್ರ ಇದೇ ತಿಂಗಳ 28ಕ್ಕೆ ಬಿಡುಗಡೆಯಾಗುತ್ತಿದೆ.

    ಚಿತ್ರದ ವಿಶೇಷ ಅಂದ್ರೆ ಇದು ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ. ಅದ್ರಲ್ಲೇನಿದೆ ವಿಶೇಷ ಅಂದ್ಕೋಬೇಡಿ ವಿಶೇಷ ಇದೆ. ಓಂ ಸಾಯಿ ಪ್ರಕಾಶ್ ಮೊದಲಿನಿಂದಲೂ ಭಕ್ತಿ ಪ್ರಧಾನ, ಸೆಂಟಿಮೆಂಟ್ ಕಂಟೆಂಟ್ ಇರೋ ಸಿನಿಮಾಗಳಿಗೆ ಹೆಸರುವಾಸಿ ಅನ್ನೋದು ಎಲ್ಲರಿಗು ಗೊತ್ತೆ ಇದೆ. ಆದ್ರೆ ಫರ್ ದಿ ಫಸ್ಟ್ ಟೈಂ ಓಂ ಸಾಯಿ ಪ್ರಕಾಶ್ ಮಾಸ್ ಸಬ್ಜೆಕ್ಟ್ ಇರೋ ಸಿನಿಮಾ ಡೈರೆಕ್ಟ್ ಮಾಡಿರೋದು. ಇನ್ನೊಂದು ವಿಶೇಷ ಅಂದ್ರೆ ಹೊಸ ಪ್ರತಿಭೆಯನ್ನು ನಾಯಕ ನಟನಾಗಿ ತಮ್ಮ ಚಿತ್ರದಲ್ಲಿ ಇಂಟ್ರಡ್ಯೂಸ್ ಮಾಡ್ತಿರೋದು. ಈ ಎಲ್ಲ ಅಂಶಗಳಿಂದ ಸಾಯಿ ಪ್ರಕಾಶ್ ಅವ್ರ ಜಗ್ಗಿ ಜಗನ್ನಾಥ್ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಟ್ರೈಲರ್ ಕೂಡ ಮಾಸ್ ಡೈಲಾಗ್, ಆಕ್ಷನ್ ದೃಶ್ಯಗಳಿಂದ ಸಖತ್ ಸೌಂಡ್ ಮಾಡ್ತಿದೆ.

    ಸದ್ದಿಲ್ಲದೆ ಶೂಟಿಂಗ್ ಮುಗಿಸಿ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರೋ ಜಗ್ಗಿ ಜಗನ್ನಾಥ್ ಚಿತ್ರ ಮಾಫಿಯಾ, ಲವ್ ಸ್ಟೋರಿ, ಆ್ಯಕ್ಷನ್ ಸಬ್ಜೆಕ್ಟ್ ಒಳಗೊಂಡಿದ್ದು, ಸಾಯಿ ಪ್ರಕಾಶ್ ಸಿನಿಮಾ ಅಭಿಮಾನಿಗಳಿಗೆ ಹೊಸ ಫೀಲ್ ನೀಡೋದಂತೂ ಖಂಡಿತ. ಹೊಸ ಪ್ರತಿಭೆ ಲಿಖಿತ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ದುನಿಯಾ ರಶ್ಮಿ ನಾಯಕ ನಟಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಡೈಲಾಗ್ ಕಿಂಗ್ ಖ್ಯಾತಿಯ ಸಾಯಿ ಕುಮಾರ್ ಪೊಲೀಸ್ ಆಗಿ ಮತ್ತದೇ ಹಳೆ ಖದರ್‍ನಲ್ಲಿ ಮಾಸ್ ಪಂಚ್ ಡೈಲಾಗ್ ಮೂಲಕ ಕಂ ಬ್ಯಾಕ್ ಮಾಡಿದ್ದಾರೆ.

    ಎ.ಎಂ ನೀಲ್ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು, ಹೆಚ್.ಜಯರಾಜು, ಜಿ.ಶಾರಾದ ಜಗ್ಗಿ ಜಗನ್ನಾಥ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಓಂ ಸಾಯಿ ಪ್ರಕಾಶ್ ಈ ಹಿಂದಿನ ಸಿನಿಮಾ ನೋಡಿದವರು ಈ ಹೊಸ ಪ್ರಯತ್ನವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದಕ್ಕೆ ಫೆಬ್ರವರಿ 28ಕ್ಕೆ ಥಿಯೇಟರ್ ಅಂಗಳದಲ್ಲಿ ಉತ್ತರ ಸಿಗಲಿದೆ.

  • ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಡೈಲಾಗ್ ಕಿಂಗ್ ಈಸ್ ಬ್ಯಾಕ್!

    ಪೊಲೀಸ್ ಡೈರಿ, ಅಗ್ನಿ ಸಿನಿಮಾಗಳಲ್ಲಿ ಪೊಲೀಸ್ ಸೂಪರ್ ಕಾಪ್ ಆಗಿ ಪವರ್ ಫುಲ್ ಡೈಲಾಗ್ ಮೂಲಕ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವ್ರನ್ನ ಮರೆಯೋಕಾಗುತ್ತಾ..? ತಮ್ಮ ಚಿತ್ರಗಳಲ್ಲಿ ಖಾಕಿಗೆ ಹೊಸ ಖದರ್ ತಂದುಕೊಟ್ಟಿದ್ದ ಸಾಯಿ ಕುಮಾರ್ ತಮ್ಮ ಡೈಲಾಗ್ ಡೆಲಿವರಿ ಸ್ಟೈಲ್‍ನಿಂದಲೇ ಹೊಸ ಟ್ರೆಂಡ್ ಸೃಷ್ಟಿಸಿದ್ರು. ಈಗಲೂ ಆ ಡೈಲಾಗ್‍ಗಳು ಫೇಮಸ್ ಆಗಿವೆ.

    ಸಾಯಿ ಕುಮಾರ್ ರನ್ನು ಮತ್ತೆ ಖಾಕಿಯಲ್ಲಿ ನೋಡಲು, ಡೈಲಾಗ್ ಕಣ್ತುಂಬಿಕೊಳ್ಳಲು ಸಿನಿ ರಸಿಕರು ವರ್ಷಗಳಿಂದ ಕಾಯ್ತಾಯಿದ್ರು. ಈಗ ಆ ಸಮಯ ಬಂದಿದೆ. ಅದೇ ಖದರ್, ಅಷ್ಟೇ ಪವರ್ ಫುಲ್ ಡೈಲಾಗ್, ಅದೇ ಮ್ಯಾನರಿಸಂ ಮೂಲಕ ಮತ್ತೆ ಡೈಲಾಗ್ ಕಿಂಗ್ ಪೊಲೀಸ್ ಸೂಪರ್ ಕಾಪ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ. ಆ ಚಿತ್ರದ ಹೆಸರೇ ಜಗ್ಗಿ ಜಗನ್ನಾಥ್. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರ್ನೊಂದಿಗೆ ಗಮನ ಸೆಳೆಯುತ್ತಿದ್ದಾರೆ.

    ಎಸ್, ಡೈಲಾಗ್ ಕಿಂಗ್ ಸಾಯಿ ಕುಮಾರ್ ಬಿಡುಗಡೆಗೆ ಸಿದ್ಧವಾಗಿರೋ ಜಗ್ಗಿ ಜಗನ್ನಾಥ ಚಿತ್ರದಲ್ಲಿ ಪವರ್ ಫುಲ್ ಪೊಲೀಸ್ ಆಗಿ ಬಣ್ಣ ಹಚ್ಚಿದ್ದಾರೆ. ಚಿತ್ರದ ಜನರ್ದಸ್ತ್ ಟ್ರೈಲರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದ್ದು, ಡೈಲಾಗ್ ಕಿಂಗ್ ಎನರ್ಜಿಟಿಕ್ ಅಂಡ್ ಖದರ್ ತುಂಬಿರೋ ಮಾಸ್ ಡೈಲಾಗ್‍ಗಳು ಈಗಾಗಲೇ ಟ್ರೈಲರ್ ನಲ್ಲಿ ಮಿಂಚು ಹರಿಸಿದೆ. ಬಹು ದಿನಗಳಿಂದ ಸಾಯಿ ಕುಮಾರ್ ಡೈಲಾಗ್ ಮಿಸ್ ಮಾಡಿಕೊಂಡಿದ್ದ ಸಿನಿರಸಿಕರಿಗೆ ಈ ಚಿತ್ರ ಭರಪೂರ ಮನರಂಜನೆ ನೀಡಲಿದೆ.

    ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಸಾಯಿಕುಮಾರ್, ಲಿಖಿತ್, ದುನಿಯಾ ರಶ್ಮಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಮಾಫಿಯ, ರೌಡಿಸಂ ಕಥಾನಕವುಳ್ಳ ಮಾಸ್ ಸಬ್ಜೆಕ್ಟ್ ಜಗ್ಗಿ ಜಗನ್ನಾಥ ಚಿತ್ರದಲ್ಲಿದ್ದು, ಸಾಯಿ ಕುಮಾರ್ ದುಷ್ಟರನ್ನ ಬಗ್ಗು ಬಡಿಯೋ ಪವರ್ ಫುಲ್ ಪೊಲೀಸ್ ಆಫಿಸರ್ ಆಗಿ ಬಣ್ಣ ಹಚ್ಚಿದ್ದಾರೆ. ಹೆಚ್, ಜಯರಾಜ್, ಜಿ. ಶಾರದಾ ಜಗ್ಗಿ ಜಗನ್ನಾಥ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎ. ಎಂ ನೀಲ್ ಸಂಗೀತ ನಿರ್ದೇಶನ ಇರುವ ಈ ಚಿತ್ರ ಇದೇ ಫೆಬ್ರವರಿ 28ಕ್ಕೆ ಬಿಡುಗಡೆಯಾಗುತ್ತಿದೆ.

  • ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಸಾಯಿಕುಮಾರ್ ‘ಜಗ್ಗಿ ಜಗನ್ನಾಥ್’ ಟ್ರೈಲರ್ ಹಿಟ್

    ಬೆಂಗಳೂರು: ಸೆಂಟಿಮೆಂಟ್ ಚಿತ್ರಗಳಿಗೆ ಹೆಸರಾದ ನಿರ್ದೇಶಕ ಓಂಸಾಯಿಪ್ರಕಾಶ್ ಪಕ್ಕಾ ಆ್ಯಕ್ಷನ್, ಲವ್ ಸ್ಟೋರಿ ಇಟ್ಟುಕೊಂಡು ಮಾಡಿರುವ ಚಿತ್ರ ಜಗ್ಗಿ ಜಗನ್ನಾಥ್. ಈ ಚಿತ್ರದ ಟ್ರೈಲರ್ ಹೊರಬಂದಿದ್ದು, ಎಲ್ಲಾ ಕಡೆ ಸಖತ್ ವೈರಲ್ ಆಗಿದೆ. ಡೈಲಾಗ್ ಕಿಂಗ್ ಸಾಯಿಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ಯುವಪ್ರತಿಭೆ ಲಿಖಿತ್ ರಾಜ್ ಈ ಮೂವರ ಕಾಂಬಿನೇಶನ್‍ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಯುಟ್ಯೂಬ್‍ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿಯಂಥ ಮಾಸ್ ಡೈಲಾಗ್‍ಗಳನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಲಿಖಿತ್ ರಾಜ್ ಹಾಗೂ ಸಾಯಿಪ್ರಕಾಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿರುವ ಡೈಲಾಗ್‍ಗಳು ಪ್ರೇಕ್ಷಕರ ಮನಗೆದ್ದಿವೆ. ಅಂಡರ್‍ವಲ್ರ್ಡ್ ಕಥೆ ಇದಾಗಿದ್ದರೂ ಚಿತ್ರದಲ್ಲಿರುವ ಹೃದಯ ಕಲಕುವ ತಾಯಿ-ಮಗನ ಸೆಂಟಿಮೆಂಟ್ ಸೀನ್‍ಗಳು ಕೂಡ ಗಮನ ಸೆಳೆದಿವೆ. ಈಗಾಗಲೇ ಜಗ್ಗಿ ಜಗನ್ನಾಥ್ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲಾ ಮುಕ್ತಾಯಗೊಂಡು ಇತ್ತೀಚೆಗಷ್ಟೇ ಚಿತ್ರ ಸೆನ್ಸಾರ್ ಕೂಡ ಆಗಿದೆ. ಒಬ್ಬ ಸಾಮಾನ್ಯ ಯುವಕ ಹೇಗೆ ಅಘೋರಿಯಾದ ಎನ್ನುವ ಕುತೂಹಲಕರವಾದ ಕಥಾಹಂದರ ಚಿತ್ರದಲ್ಲಿದ್ದು, ಇದೇ ಥರದ ಹಲವಾರು ವಿಶೇಷತೆಗಳು ಚಿತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸಿವೆ.

    ಶ್ರೀಮೈಲಾರಲಿಂಗೇಶ್ವರ ಮೂವೀಸ್ ಲಾಂಛನದಲ್ಲಿ ಹೆಚ್.ಜಯರಾಜು, ಜಿ.ಶಾರದ,ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎ.ಎಂ.ನೀಲ್ ಸಂಗೀತ, ರೇಣುಕುಮಾರ್ ಛಾಯಾಗ್ರಹಣ, ಯೋಗರಾಜ್‍ಭಟ್, ಜಯಂತ್ ಕಾಯ್ಕಿಣಿ, ವಿಜಯ್ ವಿ., ಸಾಯಿಸರ್ವೇಶ್ ಸಾಹಿತ್ಯ, ಶ್ರೀನಿವಾಸ್ ಪಿ. ಬಾಬು ಸಂಕಲನ, ಅರವಿಂದ್ ಡಿಸ್ಕೊ ಡಿಸಿಲ್ವ ನೃತ್ಯ ನಿರ್ದೇಶನ, ಜಾನಿ ಮಾಸ್ಟರ್, ಕೌರವ ವೆಂಕಟೇಶ್ ಸಾಹಸವಿದೆ.

    ಲಿಖಿತ್ ರಾಜ್, ದುನಿಯಾ ರಶ್ಮಿ, ಸಾಯಿಕುಮಾರ್, ತಬಲಾ ನಾಣಿ, ಪದ್ಮಜ ರಾವ್, ಲಯ ಕೋಕಿಲ, ಮೈಕೊ ನಾಗರಾಜ್, ಪೆಟ್ರೋಲ್ ಪ್ರಸನ್ನ, ಕಡ್ಡಿಪುಡಿ ಚಂದ್ರು, ಮುನಿ ದಂಡುಪಾಳ್ಯ, ಪವನ್ (ಮಜಾ ಟಾಕೀಸ್), ಮೋಹನ್ ಜುನೇಜ, ಗುರುರಾಜ್ ಹೊಸಕೋಟೆ, ವಾಣಿಶ್ರೀ, ನಾಗರಾಜ್ ಕೋಟೆ ಮುಂತಾದವರ ತಾರಾಬಳಗವಿದೆ.

  • ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬಿಡುಗಡೆಯಾಯ್ತು ಜಗ್ಗಿ ಜಗನ್ನಾಥ ಮಾಸ್ ಟ್ರೇಲರ್!

    ಬೆಂಗಳೂರು: ನಿರ್ದೇಶಕ ಓಂ ಸಾಯಿಪ್ರಕಾಶ್ ಅಂದರೆ ಭಾವನೆಗಳನ್ನು ಮೀಟುವಂಥಾ ಕೌಟುಂಬಿಕ ಚಿತ್ರಗಳು, ಭಕ್ತಿಪ್ರಧಾನ ಚಿತ್ರಗಳೇ ಕಣ್ಮುಂದೆ ಬರುತ್ತವೆ. ಅವರು ನಿರ್ದೇಶನ ಮಾಡಿದ ಚಿತ್ರಗಳನ್ನು ನೋಡುತ್ತಾ ಬಂದವರಿಗೆ ಅವರನ್ನು ಮಾಸ್ ಸಿನಿಮಾ ನಿರ್ದೇಶಕರಾಗಿ ಕಲ್ಪಿಕೊಳ್ಳುವುದೂ ಕಷ್ಟವಾಗಬಹುದು. ಆದರೀಗ ಸಾಕ್ಷಾತ್ತು ಸಾಯಿಪ್ರಕಾಶ್ ಜಗ್ಗಿ ಜಗನ್ನಾಥ ಎಂಬ ಪಕ್ಕಾ ಆಕ್ಷನ್ ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ. ಯಾವ ಸದ್ದೂ ಇಲ್ಲದೆ ಚಿತ್ರೀಕರಣ ಪೂರೈಸಿಕೊಂಡಿರೋ ಈ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ.

    ಈ ಚಿತ್ರದಲ್ಲಿ ಲಿಖಿತ್ ಎಂಬ ಹೊಸ ಹುಡುಗ ನಾಯಕನಾಗಿ ಪಾದಾರ್ಪಣೆ ಮಾಡಿದ್ದಾರೆ. ಅವರಿಗೆ ಜೋಡಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ತಮ್ಮ ಬ್ರ್ಯಾಂಡಿನಂತಿರೋ ಖಡಕ್ ಪೊಲೀಸ್ ಪಾತ್ರದಲ್ಲಿ ಡೈಲಾಗ್ ಕಿಂಗ್ ಸಾಯಿಪ್ರಕಾಶ್ ಕಾಣಿಸಿಕೊಂಡಿದ್ದಾರೆ. ಈಗ ಹೊರಬಂದಿರೋ ಟ್ರೇಲರ್‍ನಲ್ಲಿ ಅವರ ಪಾತ್ರವೇ ಹೈಲೈಟ್ ಆಗಿದೆ. ದುಷ್ಟರ ಪಾಲಿಗೆ ಸಿಂಹಸ್ವಪ್ನವಾದ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿರುವ ಸಾಯಿಕುಮಾರ್ ತಮ್ಮ ಹಳೆಯ ಲುಕ್ಕಲ್ಲಿ, ಹೊಸ ಖದರಿನ ಡೈಲಾಗುಗಳೊಂದಿಗೆ ಗಮನ ಸೆಳೆದಿದ್ದಾರೆ. ಇಲ್ಲಿನ ಮೈನವಿರೇಳಿಸೋ ಮಾಸ್ ಸೂಚನೆಗಳು ಇದು ಓಂ ಸಾಯಿಪ್ರಕಾಶ್ ನಿರ್ದೇಶನದ ಚಿತ್ರವಾ ಎಂಬಂಥಾ ಸಂಶಯ ಹುಟ್ಟುವಷ್ಟು ಆಕ್ಷನ್ ಅಂಶಗಳನ್ನೊಳಗೊಂಡಿದೆ.

    ಪೆಟ್ರೋಲ್ ಪ್ರಸನ್ನ ಈ ಹಿಂದೆ ದಂಡುಪಾಳ್ಯಂ ಸರಣಿಯಲ್ಲಿ ಒಂದಷ್ಟು ಸದ್ದು ಮಾಡಿದ್ದರು. ಜಗ್ಗಿ ಜಗನ್ನಾಥ ಚಿತ್ರದಲ್ಲಿ ಅವರು ಮತ್ತೆ ವಿಲನ್ ರೋಲ್‍ನಲ್ಲಿ ಅಬ್ಬರಿಸಿದ್ದಾರೆ. ಈ ಕಥಾ ಹಂದರವೂ ವಿಶೇಷವಾಗಿಯೇ ಇದೆಯಂತೆ. ಸಾಮಾನ್ಯರಲ್ಲಿ ಸಾಮಾನ್ಯನಾದ ಹುಡುಗನೊಬ್ಬ ಅಘೋರಿಯ ಅವತಾರವೆತ್ತುವ ಅಪರೂಪದ ಸನ್ನಿವೇಶವೂ ಇಲ್ಲಿದೆಯಂತೆ. ಮಾಫಿಯಾ, ರೌಡಿಸಂ ಮತ್ತು ಅದನ್ನು ಬಗ್ಗುಬಡಿಯಲು ನಿಂತ ಖಡಕ್ ಖಾಕಿಯ ಸುತ್ತಾ ಈ ಕಥೆ ರೋಚಕವಾಗಿ ಚಲಿಸುತ್ತದೆಯಂತೆ. ಇದೆಲ್ಲದರ ಜೊತೆಗೆ ಮನಮಿಡಿಯೋ ಪ್ರೇಮಕಥೆಯನ್ನೂ ಹೊಂದಿರುವ ಈ ಚಿತ್ರವೀಗ ಟ್ರೇಲರ್ ಮೂಲಕ ಸುದ್ದಿ ಕೇಂದ್ರದಲ್ಲಿದೆ. ಇಷ್ಟರಲ್ಲಿಯೇ ಇದರ ಬಿಡುಗಡೆ ದಿನಾಂಕವೂ ಘೋಷಣೆಯಾಗಲಿದೆ.