Tag: Jagal

  • ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ರಾಜ್ಯೋತ್ಸವ ದಿನವೇ ಕೋಪ: ಬಿಗ್ ಬಾಸ್ ಮನೆಯಿಂದ ಹೊರಟ ರೂಪೇಶ್ ರಾಜಣ್ಣ

    ನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ (Rupesh Rajanna) ಕೋಪ ಮಾಡಿಕೊಳ್ಳುವುದು, ಕಿತ್ತಾಡಿಕೊಳ್ಳುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ಹೊಸದೇನೂ ಅಲ್ಲ. ಬಿಗ್ ಬಾಸ್ ಮನೆಯಲ್ಲಿರುವ ಹಲವಾರು ಜನರ ಜೊತೆ ಅವರು ಹೀಗೆ ಕೋಪ ಮಾಡಿಕೊಂಡಿದ್ದಾರೆ. ಜಗಳವನ್ನೂ ಆಡಿದ್ದಾರೆ. ಆದರೆ, ಪ್ರಶಾಂತ್ ಸಂಬರ್ಗಿ ವಿಷಯದಲ್ಲಿ ಅವರು ಪದೇ ಪದೇ ರೊಚ್ಚಿಗೇಳುತ್ತಲೇ ಇರುತ್ತಾರೆ.

    ಇವತ್ತು ಕೂಡ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಗಲಾಟೆ ಆಗಿದ್ದು, ರೂಪೇಶ್ ರಾಜಣ್ಣ ತಮ್ಮ ಬ್ಯಾಗ್ ತಗೆದುಕೊಂಡು ದೊಡ್ಮನೆಯಿಂದ ಹೊರ ಹೋಗುವುದಾಗಿ ಅಬ್ಬರಿಸಿದ್ದಾರೆ. ಬ್ಯಾಗ್ ಎತ್ತಿಕೊಂಡು ಮನೆಯಿಂದ ತಮ್ಮನ್ನು ಕಳುಹಿಸುವಂತೆ ಮನೆಯ ಮುಖ್ಯ ಬಾಗಿಲಿನವರೆಗೂ ಬಂದಿದ್ದಾರೆ. ಅವರು ಇಂಥದ್ದೊಂದು ನಿರ್ಧಾರ ತಗೆದುಕೊಳ್ಳುವುದಕ್ಕೆ ಕಾರಣವಾಗಿದ್ದು ಕ್ಯಾಪ್ಟನ್ಸಿ ಟಾಸ್ಕ್. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

    ಇದೀಗ ಬಿಗ್ ಬಾಸ್ (Bigg Boss Season 9) ಮನೆಯ ಕ್ಯಾಪ್ಟನ್ ಆಗಿ ಅನುಪಮಾ ಗೌಡ ಆಯ್ಕೆಯಾಗಿದ್ದಾರೆ. ಅವರ ಮುಂದಾಳತ್ವದಲ್ಲಿ ಕ್ಯಾಪ್ಟನ್ಸಿ ಆಯ್ಕೆಯ ಟೆಸ್ಟ್ ನಡೆದಿತ್ತು. ಗಾರ್ಡನ್ ಏರಿಯಾದಲ್ಲಿ ಬಜರ್ ಒಂದನ್ನು ಇಟ್ಟಿದ್ದು, ಮೊದಲು ಈ ಬಜರ್ ಯಾರು ಒತ್ತುತ್ತಾರೋ, ಅವರು ಕ್ಯಾಪ್ಟನ್ಸಿ ಟಾಸ್ಕ್ ಗೆ ಆಯ್ಕೆ ಆಗಲಿದ್ದಾರೆ ಎನ್ನುವುದು ನಿಯಮವಾಗಿತ್ತು. ಅದರಂತೆ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ ಓಡುತ್ತಾ ಬಂದು ಇಬ್ಬರೂ ಒಂದೇ ವೇಳೆಗೆ ಬಜರ್ ಮುಟ್ಟಿದರು. ಅದರಂತೆ ಯಾರು ಮೊದಲು ಮುಟ್ಟಿದ್ದು ಎಂಬ ಗೊಂದಲ ಎದುರಾಯಿತು.

    ಮೊದಲು ಬಜರ್ ಮುಟ್ಟಿದ್ದು ನಾನೇ ಎಂದು ಸಂಬರ್ಗಿ (Prashant Sambargi) ಕೈ ಎತ್ತಿದರೆ, ನಾನು ಮುಟ್ಟಿದ್ದು ಎಂದು ರೂಪೇಶ್ ರಾಜಣ್ಣ ಹೇಳಿದರೆ. ಸಂಬರ್ಗಿಯೇ ಮೊದಲು ಮುಟ್ಟಿದ್ದು ಎಂದು ಅನುಪಮಾ ಗೌಡ (Anupama Gowda) ಹೇಳಿದ್ದು ಜಗಳಕ್ಕೆ ಕಾರಣವಾಯಿತು. ಸಂಬರ್ಗಿಯ ಬೆನ್ನಿಗೆ ನಿಂತು ಅವರಿಗೆ ಕ್ಯಾಪ್ಟನ್ ಅನುಪಮಾ ಗೌಡ ಸಪೋರ್ಟ್ ಮಾಡಿದ್ದು ರೂಪೇಶ್ ರಾಜಣ್ಣಗೆ ಸರಿಬರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಮಾತಿನ ಚಕಮಕಿಯೇ ನಡೆಯಿತು. ಈ ರೀತಿಯಾದರೆ ನಾನು ಮನೆಯಲ್ಲಿ ಇರಲಾರೆ ಎಂದು ಬ್ಯಾಗ್ ಸಮೇತ ಹೊರಟು ನಿಂತರು.

    ತಾನು ಮನೆಯಿಂದ ಹೊರ ಹೋಗಬೇಕು, ದಯವಿಟ್ಟು ಬಾಗಿಲು ತೆಗೆಯಿರಿ ಎಂದು ಬಿಗ್ ಬಾಸ್ ಅವರನ್ನು ಕೇಳಿಕೊಂಡರು ರೂಪೇಶ್ ರಾಜಣ್ಣ. ಕೋಪಗೊಂಡಿದ್ದ ರೂಪೇಶ್ ಅವರನ್ನು ರೂಪೇಶ್ ಶೆಟ್ಟಿ ಮತ್ತು ಸಾನ್ಯ ಸಮಾಧಾನಿಸಿದರು. ಆದರೆ, ಅನುಪಮಾ ಗೌಡ ಮಾತ್ರ ತಾವೇನೂ ತಪ್ಪು ಮಾಡಿಲ್ಲ, ಸುಖಾಸುಮ್ಮನೆ ರೂಪೇಶ್ ಕೂಗಾಡಿದ್ರು ಎಂದು ನೊಂದುಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ರೂಪೇಶ್ ರಾಜಣ್ಣ- ಪ್ರಶಾಂತ್ ಸಂಬರ್ಗಿ ‘ಲೇ..’ ಜಗಳ: ರಣರಂಗವಾಯ್ತು ಬಿಗ್ ಬಾಸ್ ಮನೆ

    ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗಸಿಯಂತಿದ್ದ ರೂಪೇಶ್ ರಾಜಣ್ಣ ಮತ್ತು ಪ್ರಶಾಂತ್ ಸಂಬರ್ಗಿ (Prashant Sambargi) ಕಳೆದೊಂದು ವಾರದಿಂದ ತೀರಾ ಹತ್ತಿರವಾಗಿದ್ದರು. ಒಡಹುಟ್ಟಿದವರಂತೆ ಅನ್ಯೋನ್ಯವಾಗಿದ್ದರು. ಸ್ವತಃ ಬಿಗ್ ಬಾಸ್ಸೇ ಅಚ್ಚರಿ ಪಡುವಷ್ಟು ಒಬ್ಬರಿಗೊಬ್ಬರು ಗೌರವ ಕೊಟ್ಟುಕೊಂಡು ದಿನಗಳನ್ನು ದುಡುತ್ತಿದ್ದರು. ಆದರೆ, ದೀಪಾವಳಿ ದಿನದಂದು ಲಕ್ಷ್ಮಿ ಪಟಾಕಿ ಸಿಡಿಯುವಂತೆ ಇಬ್ಬರೂ ಸಿಡಿದುಕೊಂಡಿದ್ದಾರೆ. ಇವರಿಬ್ಬರ ಮಾತಿಗೆ ಬಿಗ್ ಬಾಸ್ ಮನೆ ರಣರಂಗವಾಗಿ ಮಾರ್ಪಟಿದೆ.

    ಕಳೆದ ನಾಲ್ಕೈದು ದಿನಗಳಿಂದ ರೂಪೇಶ್ ರಾಜಣ್ಣ (Rupesh Rajanna)ನನ್ನು ಪ್ರ್ಯಾಂಕ್ ಮಾಡುತ್ತಾ, ಮಜಾ ತಗೆದುಕೊಳ್ಳುತ್ತಿದ್ದರು ಪ್ರಶಾಂತ್ ಸಂಬರ್ಗಿ. ದೆವ್ವದ ವಿಚಾರವಾಗಿ ಕಾವ್ಯಶ್ರೀ ಗೌಡ ಮತ್ತು ಪ್ರಶಾಂತ್ ಸಂಬರ್ಗಿ ಹೂಡಿದ್ದ ಆಟಕ್ಕೆ ರೂಪೇಶ್ ರಾಜಣ್ಣ ಕ್ಲೀನ್ ಬೋಲ್ಡ್ ಆಗಿದ್ದರು. ಹೀಗಾಗಿ ರೂಪೇಶ್ ಮತ್ತು ಪ್ರಶಾಂತ್ ನಡುವೆ ಸ್ನೇಹ ಗಟ್ಟಿಯಾಗುತ್ತಿತ್ತು. ಆದರೆ, ದೀಪಾವಳಿ ದಿನದಂದು ಆಡಿದ ಆಟ ಮಾತ್ರ ಇಬ್ಬರನ್ನೂ ಕೆರಳಿಸಿತ್ತು. ದೀಪಾವಳಿ ಸಂಭ್ರಮವನ್ನು ನುಂಗಿತ್ತು. ಇಬ್ಬರ ಕಿತ್ತಾಟದಲ್ಲಿ ಬಿಗ್ ಬಾಸ್ ಮನೆಯ ಉಳಿದ ಸದಸ್ಯರು ಕೂಡ ಆತಂಕಗೊಂಡರು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ‘ಉಡುಗೊರೆ ಬೇಕಾ, ಕ್ಯಾಪ್ಟನ್ಸಿ ಪಾಯಿಂಟ್ಸ್ ಬೇಕಾ’ ವಿಚಾರವು ಅರುಣ್ ಸಾಗರ್ (Arun Sagar) ಸೇರಿದಂತೆ ಹಲವು ಸದಸ್ಯರನ್ನು ಚರ್ಚೆಗೀಡು ಮಾಡಿತ್ತು. ಮೊದಲ ಹಂತದ ಚರ್ಚೆಯಲ್ಲಿ ಅರುಣ್ ಸಾಗರ್ ಮತ್ತು ರೂಪೇಶ್ ರಾಜಣ್ಣ ಸಣ್ಣದಾಗಿ ಕಿತ್ತಾಡಿಕೊಂಡರು. ರೂಪೇಶ್ ಅವರಿಗೆ ದುರಾಸೆ ಎಂದು ಅರುಣ್ ಆಡಿದ ಮಾತು ರೂಪೇಶ್ ರಾಜಣ್ಣರನ್ನು ಕೆರಳಿಸಿತ್ತು. ಇವರಿಬ್ಬರ ನಡುವಿನ ಕಿತ್ತಾಟದಲ್ಲಿ ಪ್ರಶಾಂತ್ ಸಂಬರ್ಗಿ ಮೂಗು ತೂರಿಸಿದರು. ಪ್ರಶಾಂತ್ ಎಂಟ್ರಿ ಕೊಡುತ್ತಿದ್ದಂತೆಯೇ ಜಗಳ ಬೇರೆ ಹಂತ ತಲುಪಿತು.

    ಅರುಣ್ ಮತ್ತು ರೂಪೇಶ್ ನಡುವಿನ ಗಲಾಟೆಗೆ  ಉರಿವ ಬೆಂಕಿಗೆ ತುಪ್ಪ ಸುರಿದಂತೆ ಅರುಣ್ ಪರ ಬ್ಯಾಟ್ ಬೀಸಿದರು ಪ್ರಶಾಂತ್. ಅದರಿಂದ ಮತ್ತಷ್ಟು ಕುಪಿತಗೊಂಡ ರೂಪೇಶ್ ರಾಜಣ್ಣ ಸಿಡಿದೆದ್ದು ಬಿಟ್ಟರು. ಮಾತಿನ ಭರಾಟೆಯಲ್ಲಿ ರೂಪೇಶ್ ಅವರನ್ನು ‘ಲೇ..’ ಎಂದು ಕರೆದುಬಿಟ್ಟರು ಪ್ರಶಾಂತ್ ಸಂಬರ್ಗಿ. ರೂಪೇಶ್ ರಾಜಣ್ಣ ಮತ್ತಷ್ಟು ಸಿಟ್ಟಾಗಿ ಹೊಡೆಯಲೆಂದು ಹೊರಟರು. ಇಬ್ಬರೂ ಕೈ ಕೈ ಮಿಲಾಯಿಸಿದರು. ದೀಪಾವಳಿ ಸಂಭ್ರಮದಲ್ಲಿದ್ದ ಬಿಗ್ ಬಾಸ್ ಮನೆ ರಣರಂಗವಾಯಿತು. ರೂಪೇಶ್ ಶೆಟ್ಟಿ (Rupesh Shetty) ಇವರನ್ನು ಸಮಾಧಾನ ಪಡಿಸದೇ ಇದ್ದರೆ, ಬಿಗ್ ಬಾಸ್ ಮನೆ ಇನ್ನೇನಾಗುತ್ತಿತ್ತೋ. ಈ ಗಲಾಟೆ ಕಿಚ್ಚನ ಪಂಚಾಯತಿಯಲ್ಲಿ ಯಾವೆಲ್ಲ ಚರ್ಚೆಯನ್ನು ಹುಟ್ಟು ಹಾಕತ್ತೋ ಕಾದು ನೋಡಬೇಕು.

    Live Tv
    [brid partner=56869869 player=32851 video=960834 autoplay=true]

  • ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಪ್ರಶಾಂತ್ ಸಂಬರ್ಗಿ ತಾಯಿಗೆ ಅವಮಾನ ಮಾಡಿದ ರೂಪೇಶ್ ರಾಜಣ್ಣ: ಬಹಿರಂಗ ಕ್ಷಮೆ

    ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashant Sambargi) ಮತ್ತು ರೂಪೇಶ್ ರಾಜಣ್ಣ ನಡೆ ಒಂದು ಕಡೆಯಾದರೆ, ಉಳಿದವರ ಆಟ ಮತ್ತೊಂದು ಕಡೆ ಆಗಿದೆ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಅಂತಾರಲ್ಲ ಹಾಗಾಗಿದೆ ಬಿಗ್ ಬಾಸ್ ಮನೆಯ ಪರಿಸ್ಥಿತಿ. ದೊಡ್ಮನೆಯಲ್ಲಿರುವ ಬಹುತೇಕ ಸದಸ್ಯರು ಟಾಸ್ಕ್ ಗಾಗಿ ಕಿತ್ತಾಡಿಕೊಂಡರೆ, ಸಂಬರ್ಗಿ ಮತ್ತು ರೂಪೇಶ್ ವೈಯಕ್ತಿಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದಾರೆ. ಈ ಜಗಳವು ಅವರ ಕುಟುಂಬದ ಸದಸ್ಯರಿಗೆ ಮುಜುಗರ ಪಡುವಂತಾಗಿದೆ.

    ವೈಯಕ್ತಿಕವಾಗಿ ಅವರಿಬ್ಬರೂ ಹೇಗಾದರೂ ಕಿತ್ತಾಡಿಕೊಳ್ಳಲಿ, ಯಾವ ಪದಗಳಿಂದಲಾದರೂ ನಿಂದಿಸಿಕೊಳ್ಳಲಿ. ಆದರೆ, ತಮ್ಮ ಮನೆಯ ಸದಸ್ಯರಿಗೆ ಅಪಮಾನ ಮಾಡುವಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎನ್ನುವ ಮಾತು ಬಿಗ್ ಬಾಸ್ ಪ್ರೇಮಿಗಳದ್ದು. ಗೋಲ್ಡ್ ಮೈನ್ ಟಾಸ್ಕ್ ನಲ್ಲಂತೂ ಇಬ್ಬರೂ ನಾಲಿಗೆ ಹರಿಬಿಟ್ಟು, ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡಿದರು. ಅದರಲ್ಲೂ ಪ್ರಶಾಂತ್ ಸಂಬರ್ಗಿ ತಾಯಿಗೆ ಅಪಮಾನ ಮಾಡುವ ರೀತಿಯಲ್ಲಿ ರೂಪೇಶ್ ರಾಜಣ್ಣ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡರು. ರೂಪೇಶ್ (Rupesh Rajanna) ಆಡಿದ ಆ ಮಾತು ಸಂಬರ್ಗಿಯನ್ನು ಸಖತ್ ಕೆರಳಿಸಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ

    ಇದೇ ವಿಚಾರವಾಗಿ ಸಂಬರ್ಗಿ ಮತ್ತು ರೂಪೇಶ್ ಪದೇ ಪದೇ ಜಗಳ ಮಾಡುತ್ತಿದ್ದಾರೆ. ‘ನನ್ನ ತಾಯಿಗೆ ಅವಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೂಪೇಶ್ ಮೇಲೆ ಸಂಬರ್ಗಿ ಕೂಗಾಡಿದ್ದಾರೆ. ಕೊನೆಗೂ ತಾವು ಮಾಡಿದ್ದ ತಪ್ಪಿನ ಅರಿವಾಗಿ ರೂಪೇಶ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುವೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎಂದು ಮತ್ತೆ ಚುಚ್ಚಿದ್ದಾರೆ.

    ಗೋಲ್ಡ್ ಮೈನ್ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರ್ಗಿಗೆ ರಾಜಾ ಇಲಿ, ಹೇಡಿ, ಕುತಂತ್ರಿ ಅಂತೆಲ್ಲ ಕರೆದಿದ್ದಾರೆ ರೂಪೇಶ್ ರಾಜಣ್ಣ. ಇಷ್ಟೆಲ್ಲ ಅನಿಸಿಕೊಂಡಿದ್ದ ಸಂಬರ್ಗಿ ಕೂಡ ಸುಮ್ಮನೆ ಕೂತಿಲ್ಲ, ರೂಪೇಶ್ ರಾಜಣ್ಣಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ರೋಲ್‌ಕಾಲ್ ಹೋರಾಟಗಾರ ಎಂದೆಲ್ಲ ಜರಿದಿದ್ದಾರೆ. ‘ತಾವು ರೋಲ್‌ಕಾಲ್ ಮಾಡಿದ್ರೆ ಪ್ರೂ ಮಾಡಿ. ನೇಣಿಗೂ ಸಿದ್ಧನಿದ್ದೇನೆ’ ಎಂದು ರೂಪೇಶ್ ರಾಜಣ್ಣ ಮರು ಉತ್ತರ ನೀಡಿದ್ದರು. ಈ ಇಬ್ಬರ ಗಲಾಟೆ ಬಿಗ್ ಬಾಸ್ ನೋಡುಗರಿಗಂತೂ ಸಖತ್ ಕಿರಿಕಿರಿ ಮಾಡುತ್ತಿರುವುದಂತೂ ಸತ್ಯ.

    Live Tv
    [brid partner=56869869 player=32851 video=960834 autoplay=true]

  • ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ, ಸುಮ್ನಿರ್ತಿಯಾ’ ಅಂತ ಸೋನು ಮೇಲೆ ಗರಂ ಆದ ಗುರೂಜಿ

    ತೀ ಹೆಚ್ಚು ಮಾತನಾಡುವ ವಿಚಾರವಾಗಿ ಬಿಗ್ ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಮತ್ತು ಸೋನು ಶ್ರೀನಿವಾಸ್ ಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆರ್ಯವರ್ಧನ್ ಗುರೂಜಿ ಅಡುಗೆ ಮಾಡುತ್ತಿರುವ ಸಮಯದಲ್ಲಿ, ಈ ಜಗಳ ನಡೆದಿದ್ದು ಸೋನು ಶ್ರೀನಿವಾಸ್ ಗೌಡ ಅವರನ್ನು ಸುಮ್ಮನಿರಿಸಲು ಆಡಬಾರದ ಮಾತುಗಳನ್ನು ಆಡಿದ್ದಾರೆ ಗುರೂಜಿ. ಅದನ್ನು ಕೇಳಿಸಿಕೊಂಡ ಸೋನು, ಗುರೂಜಿ ನೀವು ಆ ರೀತಿ ಮಾತಡಬೇಡಿ ಎಂದು ಬುದ್ದಿವಾದ ಹೇಳಿದ್ದಾರೆ.

    ಊಟದ ವಿಚಾರಕ್ಕಾಗಿ ನಡೆದ ಮಾತು, ಜಗಳಕ್ಕೆ ತಿರುಗಿದ್ದು ಈ ಸಮಯದಲ್ಲಿ ಸುಮ್ಮನಿರುವಂತೆ ಸೋನು ಶ್ರೀನಿವಾಸ್ ಗೌಡಗೆ ಹೇಳುತ್ತಲೇ ಇರುತ್ತಾರೆ ಗುರೂಜಿ. ಆದರೆ, ಸೋನು ಮಾತನಾಡುತ್ತಲೇ ಹೋಗುತ್ತಾರೆ. ನೀವು ಮಾತನಾಡುತ್ತೀರಿ ಎಂದು ಗುರೂಜಿಗೆ ಹೇಳುತ್ತಾರೆ. ನಾನ್ ಸ್ಟಾಪ್ ಮಾತುಗಳನ್ನು ಕೇಳಿದ ಗುರೂಜಿ ಕೋಪ ಮಾಡಿಕೊಂಡು ‘ನಿನ್ನ ಬಾಯಿಗೆ ಪೊರಕೆ ಇಡ್ಬೇಕಾ? ಸುಮ್ನಿರ್ತಿಯಾ’ ಎಂದು ಆವಾಜ್ ಹಾಕುತ್ತಾರೆ. ಅದನ್ನು ಕೇಳಿಸಿಕೊಂಡ ಸೋನು, ನೀವು ಈ ರೀತಿ ಮಾತನಾಡಬೇಡಿ ಎಂದು ತಿರುಗೇಟು ನೀಡುತ್ತಾರೆ. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಸೋನು ಶ್ರೀನಿವಾಸ್ ಗೌಡ ಸದಾ ಮಾತನಾಡುತ್ತಲೇ ಇರುತ್ತಾಳೆ ಮತ್ತು ಗೌರವ ಕೊಡುವುದಿಲ್ಲ ಎನ್ನುವುದನ್ನು ಬಿಗ್ ಬಾಸ್ ಮನೆಯಲ್ಲಿರುವ ಬಹುತೇಕರು ಮಾತನಾಡಿದ್ದಾರೆ. ಇದೇ ಕಾರಣಕ್ಕಾಗಿ ಸುದೀಪ್ ಕೂಡ ಸೋನುಗೆ ಬುದ್ದಿವಾದ ಹೇಳಿದ್ದಾರೆ. ಆದರೂ, ಸೋನು ತಿದ್ದಿಕೊಂಡಂತೆ ಕಾಣುತ್ತಿಲ್ಲ. ಹಾಗಾಗಿಯೇ ಆಡಬಾರದ ಪದಗಳಿಂದ ಆಕೆಯನ್ನು ನಿಂದಿಸುತ್ತಲೇ ಇರುತ್ತಾರೆ ಬಿಗ್ ಬಾಸ್ ಸ್ಪರ್ಧಿಗಳು. ಅದರಲ್ಲಿ ಗುರೂಜಿ ಆಡಿದ ಈ ಮಾತೂ ಒಂದಾಗಿದೆ.

    Live Tv
    [brid partner=56869869 player=32851 video=960834 autoplay=true]

  • Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ

    Bigg Boss-ರಣರಂಗವಾದ ಬಿಗ್ ಬಾಸ್ ಮನೆ : ರೊಟ್ಟಿ ವಿಚಾರಕ್ಕೆ ಇಬ್ಬರು ಸ್ಪರ್ಧಿಗಳ ನಡುವೆ ಕಿತ್ತಾಟ

    ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರ ಭಾವುಕತೆ, ಫನ್ ಮತ್ತು ಪ್ರೇಮಿಗಳ ಕಲರವ ಕೇಳಿ ಬರುತ್ತಿತ್ತು. ತ್ರಿಕೋನ ಪ್ರೇಮಕಥೆಗಳು ಕೂಡ ಹುಟ್ಟಿಕೊಂಡವು. ಆರ್ಯವರ್ಧನ್ ಗುರೂಜಿ ಏರು ಧ್ವನಿಯಲ್ಲಿ ಒಂದು ಬಾರಿ ಮಾತನಾಡಿದ್ದನ್ನು ಬಿಟ್ಟರೆ, ಉಳಿದಂತೆ ಮನೆ ಫುಲ್ ಸೈಲೆಂಟ್. ಆದರೆ, ಎರಡನೇ ವಾರ ಹಾಗಿಲ್ಲ. ಮನೆಯ ಇಡೀ ವಾತಾವರಣೇ ಬದಲಾಗಿದೆ. ಅದರಲ್ಲೂ ಸಣ್ಣ ಪುಟ್ಟ ವಿಷಯಗಳನ್ನಿಟ್ಟುಕೊಂಡು ಹಗೆ ಸಾಧಿಸುವಂತಹ ಮನಸ್ಥಿತಿ ಉಂಟಾಗಿದೆ.

    ಸೋಮವಾರ ಮನೆಯ ಎಲ್ಲ ಸದಸ್ಯರು ಸ್ವಾತಂತ್ರ್ಯ ಧ್ವಜಾ ರೋಹನದಲ್ಲಿ ಪಾಲ್ಗೊಂಡಿದ್ದರು. ನಂತರ ಒಂದಷ್ಟು ಹೊತ್ತು ಸಂಭ್ರಮದಿಂದಲೇ ಕಳೆದರು. ನಗು ನಗುತ್ತಲೇ ಇದ್ದ ಮನೆಯು ರೊಟ್ಟಿ ವಿಚಾರವಾಗಿ ರಣರಂಗವಾಗಿ ಮಾರ್ಪಟ್ಟಿತು ಆ ಮನೆ. ರೂಪೇಶ್ ತನಗೆ ಕೊಟ್ಟಿದ್ದ ರೊಟ್ಟ ಹೆಚ್ಚಾಯಿತು ಎಂದು ಅದನ್ನು ಡಸ್ಟ್ ಬೀನ್ ಗೆ ಎಸೆದಿದ್ದರು. ಅದನ್ನು ಕಂಡ ಅರ್ಜುನ್, ಯಾರು ರೊಟ್ಟಿ ಎಸೆದದ್ದು ಎಂದು ಕೇಳಿದರು. ಇಬ್ಬರ ನಡುವಿನ ಸಂಭಾಷಣೆಯೇ ಜಗಳಕ್ಕೆ ಕಾರಣವಾಯಿತು. ಇದನ್ನೂ ಓದಿ:ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಯ್ತು ‘ಸಲಾರ್’ ಚಿತ್ರದ ಪೋಸ್ಟರ್

    ಡಸ್ಟ್ ಬೀನ್ ಗೆ ನಾನೇ ರೊಟ್ಟಿ ಎಸೆದದ್ದು ಅಂತ ರೂಪೇಶ್ ಒಪ್ಪಿಕೊಂಡ. ನನಗೆ ರೊಟ್ಟಿ ಹಿಡಿಸಲಿಲ್ಲ ಎಂದೂ ಹೇಳಿದ. ಈ ಉತ್ತರದಿಂದ ಸಮಾಧಾನವಾಗದ ಅರ್ಜುನ್, ಎಷ್ಟೋ ಜನಕ್ಕೆ ತಿನ್ನಲು ಅನ್ನವಿಲ್ಲ. ಉಪವಾಸದಿಂದ ಸಾಯುತ್ತಿದ್ದಾರೆ ಎಂದು ರೇಗಿದೆ. ಈ ಮಾತು ರೂಪೇಶ್ ಗೆ ಸರಿ ಕಾಣಲಿಲ್ಲ. ಹಾಗಾಗಿ ಇಬ್ಬರೂ ಏರು ಧ್ವನಿಯಲ್ಲೇ ಪರಸ್ಪರ ಮಾತಿನ ಯುದ್ಧವನ್ನೇ ಸಾರಿದರು. ಇಡೀ ಮನೆ ದಂಗಾಗಿ ಇಬ್ಬರನ್ನೂ ನೋಡುತ್ತಾ ನಿಂತಿತು.

    Live Tv
    [brid partner=56869869 player=32851 video=960834 autoplay=true]