Tag: italy

  • ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ: ಬೊಮ್ಮಾಯಿ

    ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ: ಬೊಮ್ಮಾಯಿ

    ಬೆಂಗಳೂರು: ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಭಾರತ ಮತ್ತು ಇಟಲಿಯ ಸಾಂಸ್ಕೃತಿಕ ಮತ್ತು ವ್ಯವಹಾರಿಕ ಸಂಬಂಧ ಬಹಳ ಹಿಂದಿನಿಂದಲೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮನ್ನು ಭೇಟಿಯಾದ ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಲುಯ್ಗಿ ಡಿ ಮಾಯಿಒ ನೇತೃತ್ವದ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.

    ಈ ಸಂದರ್ಭದಲ್ಲಿ ಮಾತನಾಡಿದ ಇಟಲಿಯ ವಿದೇಶಾಂಗ ವ್ಯವಹಾರಗಳ ಸಚಿವ ಲುಯ್ಗಿ ಡಿ ಮಾಯಿಒ, ಕರ್ನಾಟಕದೊಂದಿಗೆ ಇಟಲಿ ಅತ್ಯುತ್ತಮ ಬಾಂಧವ್ಯವನ್ನು ಹೊಂದಲು ಇಚ್ಚಿಸಿದ್ದು, ಇಟಲಿಗೆ ಭೇಟಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿದರು. ತಮ್ಮ ಭೇಟಿಯ ಕುರಿತಂತೆ ಸ್ಪಷ್ಟ ಕಲ್ಪನೆಯನ್ನು ಹೊಂದಿರುವ ನಿಯೋಗವು ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಬೆಂಗಳೂರಿನ ಮಹತ್ವವನ್ನು ಅರಿತುಕೊಂಡಿದೆ. ಬೆಂಗಳೂರು ಮತ್ತು ಇಟಲಿಯ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಆಸಕ್ತಿ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದರು. ಇದನ್ನೂ ಓದಿ: ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ತಾಕತ್ತಿದ್ರೆ ನನ್ನನ್ನು ಅರೆಸ್ಟ್ ಮಾಡಲಿ: ಪ್ರಿಯಾಂಕ್ ಖರ್ಗೆ

    ಪುರಾತನ ಸಂಬಂಧ:
    ಮಾರ್ಬಲ್, ಗ್ರ್ಯಾನೈಟ್, ಟಯರ್ ಉತ್ಪಾದನಾ ಘಟಕಗಳು ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿವೆ. ಬೆಂಗಳೂರಿನ ಸುತ್ತಮುತ್ತ ಆಧುನಿಕ ಟೈಲ್ಸ್ ಉತ್ಪಾದಕ ಘಟಕಗಳಿವೆ. ಇವುಗಳಲ್ಲಿ ಶೇ. 99 ರಷ್ಟು ಘಟಕಗಳಲ್ಲಿ ಇಟಲಿಯ ಯಂತ್ರಗಳು ಬಳಕೆಯಾಗುತ್ತವೆ ಎಂದು ಮಾಹಿತಿ ಹಂಚಿಕೊಂಡರು.

    ವಿಜ್ಞಾನ ಇಲ್ಲಿನ ಜೀವನ ವಿಧಾನ:
    ಕರ್ನಾಟಕದಲ್ಲಿ ಜನಸಾಮಾನ್ಯರೂ ತಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಬಳಸುತ್ತಾರೆ. ವಿಜ್ಞಾನ ಇಲ್ಲಿನ ಜೀವನ ವಿಧಾನ. ವಿಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಜನಸಾಮಾನ್ಯರೂ ತಮ್ಮ ದಿನನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಬಳಸುತ್ತಾರೆ. ಬೆಂಗಳೂರು ವಿಜ್ಞಾನ ನಗರ. ಇಲ್ಲಿನ ಶಿಕ್ಷಣ ಹಾಗೂ ಆಲೋಚನೆಗಳು ವೈಜ್ಞಾನಿಕವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಗೌರವ್‌ ಗುಪ್ತ ಎತ್ತಂಗಡಿ – ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ವರ್ಗ

    ಬೆಂಗಳೂರು ವಿಜ್ಞಾನ ನಗರಿ:
    ಕರ್ನಾಟಕ ರಾಜ್ಯ ವಿಜ್ಞಾನ, ಸಂಶೋಧನೆ, ತಂತ್ರಜ್ಞಾನ, ಸ್ಟಾರ್ಟ್ ಅಪ್ ಹಾಗೂ ಯೂನಿಕಾರ್ನ್, ಐಟಿ ಬಿಟಿ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲವುಗಳ ಬೆಳವಣಿಗೆಗೆ 150 ವರ್ಷಗಳ ಹಿಂದೆಯೇ ಮೈಸೂರು ಮಹಾರಾಜರು ಬುನಾದಿಯನ್ನು ಹಾಕಿದ್ದರು. ಹೆಚ್‍ಎಂಟಿ, ಬಿಹೆಚ್‍ಇಎಲ್ ಮುಂತಾದ ಉತ್ಪಾದನಾ ಕೇಂದ್ರಿತ ಕಾರ್ಖಾನೆಗಳು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಿತು. ಸ್ಟಾರ್ಟ್ ಅಪ್‍ಗಳು ಹಾಗೂ ಯೂನಿಕಾರ್ನ್‍ಗಳ ಸ್ಥಾಪನೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಬೆಂಗಳೂರು ದೇಶದ ವಿಜ್ಞಾನ ಹಾಗೂ ಆರ್ಥಿಕ ರಾಜಧಾನಿ ಹಾಗೂ ದೇಶದ ಭವಿಷ್ಯ ಎಂದರು.

  • 20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ

    20 ವರ್ಷದಿಂದ ಮಕ್ಕಳ ಅಶ್ಲೀಲ ಫೋಟೋ, ವೀಡಿಯೋ ಚಿತ್ರಿಸುತ್ತಿದ್ದ ಸಂಗೀತಗಾರ

    ರೋಮ್: 20 ವರ್ಷಗಳಿಂದ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಚಿತ್ರಿಸುತ್ತಿದ್ದ 49 ವರ್ಷದ ಸಂಗೀತಗಾರ ಇಂದು ಪೋಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

    ವಯಸ್ಕರೊಂದಿಗೆ ಮಕ್ಕಳು ಲೈಂಗಿಕ ಕ್ರಿಯೆಗಳಲ್ಲಿ ತೊಡಗಿಕೊಳ್ಳುವ ಲಕ್ಷಗಳಷ್ಟು ಫೋಟೋ ಮತ್ತು ವೀಡಿಯೋಗಳನ್ನು 49 ವರ್ಷದ ಸಂಗೀತಗಾರ ಹೊಂದಿದ್ದು, ಆತನನ್ನು ಇಟಾಲಿಯನ್ ಪೊಲೀಸರು ಇಂದು ಬಂಧಿಸಿದ್ದಾರೆ. ಇದನ್ನೂ ಓದಿ: 6 ಲಕ್ಷ ರೂ. ಬಹುಮಾನ ಘೋಷಣೆಯಾಗಿದ್ದ ಇಬ್ಬರು ಮಹಿಳಾ ನಕ್ಸಲರ ಹತ್ಯೆ

    ಇಟಲಿಯ ಮಾರ್ಚೆ ಪ್ರದೇಶದ ಕರಾವಳಿ ನಗರವಾದ ಅಂಕೋನಾದಲ್ಲಿ ಸಂಗೀತಗಾರನಾಗಿದ್ದ ವ್ಯಕ್ತಿ ಸುಮಾರು 20 ವರ್ಷಗಳಿಂದ ಮಕ್ಕಳನ್ನು ಬಳಸಿಕೊಂಡು ಅಶ್ಲೀಲ ವೀಡಿಯೋ ಮತ್ತು ಫೋಟೋಗಳ್ನು ಚಿತ್ರಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅವನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ವಿವಿಧ ಹಾರ್ಡ್ ಡಿಸ್ಕ್‍ಗಳು, ಆಪ್ಟಿಕಲ್ ಮೀಡಿಯಾ ಮತ್ತು ಸ್ಮಾರ್ಟ್‍ಫೋನ್‍ನಲ್ಲಿ ಫೈಲ್‍ಗಳನ್ನು ಆತ ಇಟ್ಟುಕೊಂಡಿದ್ದನು. ಅದನ್ನು ಪೊಲೀಸರು ಪರಿಶೀಲಿಸಿದಾಗ ಮಕ್ಕಳ ಅಶ್ಲೀಲ ಫೋಟೋ ಮತ್ತು ವೀಡಿಯೋ ಇರುವುದು ಪತ್ತೆಯಾಗಿದೆ.

    ಅದು ಅಲ್ಲದೇ ಈ ಫೈಲ್ ಗಳಿಗೆ ಮಕ್ಕಳ ವಯಸ್ಸಿನ ಪ್ರಕಾರ ಹೆಸರನ್ನು ಕೊಟ್ಟು ವಿಂಗಡಿಸಲಾಗಿದ್ದು, ವಿಭಿನ್ನ ಫೋಲ್ಡರ್ ಗಳನ್ನು ಮಾಡಲಾಗಿದೆ. ಇದರಲ್ಲಿ ಅಪ್ರಾಪ್ತ ಮಕ್ಕಳ ಫೋಟೋ ಮತ್ತು ವೀಡಿಯೋಗಳನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದರು. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ 4 ಗಂಟೆ ದಾಳಿ ನಂತರ 60 ಲಕ್ಷ ರೂ. ಪತ್ತೆ

    ಈತ ಅಪ್ರಾಪ್ತ ಮಕ್ಕಳಿಗೆ ಸಂಗೀತವನ್ನು ಹೇಳಿಕೊಂಡುತ್ತಿದ್ದು, ಮಕ್ಕಳನ್ನು ಬಳಸಿಕೊಂಡು ಈ ರೀತಿಯ ಕೃತ್ಯವನ್ನು ಮಾಡುತ್ತಿದ್ದಾನೆ. ಆದರೆ ಈ ಕುರಿತು ಈತನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಪೊಲೀಸರು ಹೇಳಿದರು.

  • ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ಲೈವ್ ವೇಳೆ ವರದಿಗಾರ್ತಿಗೆ ಕಿರುಕುಳ, ಕಪಾಳಮೋಕ್ಷ

    ರೋಮ್: ಟಿವಿ ವರದಿಗಾರ್ತಿಯೊಬ್ಬರಿಗೆ ಲೈವ್ ವರದಿಯನ್ನು ನೀಡುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಆಕೆಯ ಮೇಲೆ ಹಲ್ಲೆ ನಡೆಸಿ ಕಿರುಕುಳ ಘಟನೆ ಇಟಲಿಯಲ್ಲಿ ನಡೆದಿದೆ.

    ಎಂಪೋಲಿಯಾದ ಕಾರ್ಲೋ ಕ್ಯಾಸ್ಟೆಲ್ಲಾನಿ ಕ್ರೀಡಾಂಗಣದ ಹೊರಗಿನಿಂದ ಟೋಸ್ಕಾನಾ ಟಿವಿಯ ಪತ್ರಕರ್ತೆ ಬೆಕಾಗ್ಲಿಯಾ ನೇರ ವರದಿ ಮಾಡುತ್ತಿದ್ದ ಸಂದರ್ಭದಲ್ಲಿ ಹಲ್ಲೆಗೆ ಒಳಗಾಗಿದ್ದಾರೆ.

    ಬೆಕಾಗ್ಲಿಯಾ ಫುಟ್‍ಬಾಲ್ ಆಟ ಮುಗಿದ ಬಳಿಕ ಕ್ರೀಡಾಂಗಣದ ಹೊರಭಾಗದಲ್ಲಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಹಿಂದುಗಡೆಯಿಂದ ಬಂದ ವ್ಯಕ್ತಿ ಕೈಗೆ ಉಗುಳಿ, ನೇರ ಪ್ರಸಾರದಲ್ಲೇ ಬೆಕಾಗ್ಲಿಯಾಳ ಕಪಾಳಕ್ಕೆ ಹೊಡೆದಿದ್ದಾನೆ. ಇದನ್ನೂ ಓದಿ: ಇನ್ನೂ ಕಾಯಲು ಸಿದ್ಧವಿಲ್ಲ: ಮಲ್ಯಗೆ ಶಿಕ್ಷೆ ವಿಧಿಸಲು ಸಿದ್ಧ ಎಂದು ಸುಪ್ರೀಂ

    ಈ ಘಟನೆ ವರದಿಗಾರ್ತಿಗೆ ಅಸಹ್ಯವನ್ನು ಉಂಟುಮಾಡಿದ್ದು, ಕೋಪಗೊಂಡು ಹಲ್ಲೆ ಮಾಡಿದಾತನಿಗೆ ಬೈದಿದ್ದಾಳೆ. ಲೈವ್‍ನಲ್ಲಿದ್ದ ಟಿವಿ ನಿರೂಪಕರು ಆಕೆಯನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.

    ಬೆಕಾಗ್ಲಿಯಾ ತನಗೆ ಕಪಾಳಮೋಕ್ಷ ಮಾಡಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಿದ್ದು, ಆ ವ್ಯಕ್ತಿಯನ್ನು ಗುರುತಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಟೋಸ್ಕಾನಾ ಟೀವಿ ಇದಕ್ಕೆ ಸಂಬಂಧಿಸಿದ ಎಲ್ಲಾ ಕಾನೂನು ವೆಚ್ಚಗಳನ್ನು ಭರಿಸುವುದಾಗಿ ಒಪ್ಪಿಕೊಂಡಿದೆ.

    ನನಗೆ ಏನಾಯಿತು ಎಂಬುವುದು ಮುಖ್ಯವಲ್ಲ. ನಾನು ನನ್ನ ಕೆಲಸದಲ್ಲಿದ್ದ ಕಾರಣ ಕ್ಯಾಮೆರಾ ಅದನ್ನು ಚಿತ್ರೀಕರಿಸಿದೆ. ಹೀಗಾಗಿ ಘಟನೆ ಬೆಳಕಿಗೆ ಬಂದಿದೆ. ಆದರೆ ಇತರ ಮಹಿಳೆಯರ ವಿಚಾರಕ್ಕೆ ಬಂದಾಗ ಅದನ್ನು ಚಿತ್ರೀಕರಿಸಲು ಯಾವುದೇ ಕ್ಯಾಮೆರಾಗಳು ಇರುವುದಿಲ್ಲ. ಇದರಿಂದ ನಡೆದ ಅನ್ಯಾಯ ಗೋಚರಿಸದೇ ಹೋಗುವ ಸಾಧ್ಯತೆ ಇರುತ್ತದೆ. ಈ ರೀತಿಯಾಗಿ ಯಾವ ಮಹಿಳೆಯರಿಗೂ ಆಗಬಾರದು ಎಂದು ಘಟನೆಯ ಕುರಿತು ಬೆಕಾಗ್ಲಿಯಾ ಹೇಳಿದ್ದಾಳೆ. ಇದನ್ನೂ ಓದಿ: ತೋಡಿನಲ್ಲಿ ಮರಿಗೆ ಜನ್ಮವಿತ್ತ ಕಾಡಾನೆ

  • ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ಇಟಲಿ, ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆ

    ನವದೆಹಲಿ: ಯುರೋಪಿಯನ್ ರಾಷ್ಟ್ರಗಳಲ್ಲಿ ಪ್ರತಿದಿನ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಎರಡನೇ ಹಂತದ ಲಾಕ್‍ಡೌನ್ ಆರಂಭವಾಗಿದೆ.

    ಯೂರೋಪ್ ರಾಷ್ಟ್ರಗಳಲ್ಲಿ ಕಳೆದ ಎರಡು ವಾರಗಳಿಂದ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಈ ನಡುವೆ ಇಟಲಿ ಮತ್ತು ಫ್ರಾನ್ಸ್ ನಲ್ಲಿ ಮತ್ತೆ ಲಾಕ್‍ಡೌನ್ ಘೋಷಣೆಯಾಗಿದ್ದು, ಮಾರ್ಚ್ 15 ರಿಂದ ಇಟಲಿಯಲ್ಲಿ ಲಾಕ್‍ಡೌನ್ ಘೋಷಣೆಯಾದರೆ, ಫ್ರಾನ್ಸ್ ನಲ್ಲೂ ಮಾರ್ಚ್ 17 ರಿಂದಲೂ ಲಾಕ್‍ಡೌನ್ ಮಾಡಲಾಗುವುದು ಎಂಬ ನಿರ್ಧಾರ ಹೊರಬಿದ್ದಿದೆ.

    ಜರ್ಮನಿಯಲ್ಲೂ ಕೊರೊನಾ ಅಲೆ ಜೋರಾಗುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಸೀಮಿತ ಪ್ರದೇಶಗಳಲ್ಲಿ ಲಾಕ್‍ಡೌನ್ ಮಾಡಲು ಜರ್ಮನಿ ನಿರ್ಧರಿಸಿದೆ, ಹಂಗೇರಿಯಲ್ಲಿ ನೈಟ್ ಕಫ್ರ್ಯೂ ಮಾಡಲು ಕ್ರಮ ಕೈಗೊಂಡರೆ, ಪೋಲ್ಯಾಂಡ್‍ನಲ್ಲಿ ಥಿಯೇಟರ್, ಅಂಗಡಿಗಳು, ವಾಣಿಜ್ಯ ಮಳಿಗೆಗಳಿಗೆ ಮತ್ತೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.

    ಯೂರೋಪ್ ರಾಷ್ಟ್ರಗಳಂತೆ ಭಾರತದಲ್ಲೂ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಸೀಮಿತ ಪ್ರದೇಶಗಳ ಲಾಕ್ ಡೌನ್ ಪ್ರಕ್ರಿಯೆ ಆರಂಭವಾಗಿದೆ. ಹಾಗೆ ಕರ್ನಾಟಕದಲ್ಲಿ ಕಳೆದ ಒಂದೇ ದಿನದಲ್ಲಿ 1488 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿ ಬರೋಬ್ಬರಿ 925 ಪ್ರಕರಣ ಪತ್ತೆಯಾಗಿ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.

  • ರೋಮನ್ ಕಾಲದ ಫಾಸ್ಟ್ ಫುಡ್ ಸ್ಟಾಲ್ ಪತ್ತೆ

    ರೋಮನ್ ಕಾಲದ ಫಾಸ್ಟ್ ಫುಡ್ ಸ್ಟಾಲ್ ಪತ್ತೆ

    ರೋಮ್: ಜ್ವಾಲಾಮುಖಿ ಬೂದಿಯಲ್ಲಿ ಹೂತುಹೋಗಿದ್ದ 2000 ವರ್ಷಗಳ ಹಳೆಯ ರೋಮನ್ ಕಾಲದ ಪುರಾತನ ಫಾಸ್ಟ್ ಫುಡ್ ಸ್ಟಾಲ್ ರೀತಿಯ ಅಂಗಡಿಯೊಂದು ಇಟಲಿಯ ಪಾಂಪೆ ನಗರದಲ್ಲಿ ಪತ್ತೆಯಾಗಿದೆ.

    ಈ ಪುರಾತನ ಕಾಲದ ಫಾಸ್ಟ್ ಫುಡ್ ಸ್ಟಾಲ್ ಸಂಶೋಧಕರಲ್ಲಿ ಬೆರಗು ಮೂಡಿಸಿದೆ. ರೋಮನ್ ಕಾಲದ ಆಹಾರ ಪದ್ಧತಿ ಹೇಗಿತ್ತು ಎನ್ನುವುದರ ಸುಳಿವು ಸಿಕ್ಕಂತಾಗಿದೆ.

    ವಿವಿಧ ರೀತಿಯ ಪೇಂಟಿಂಗ್ಸ್ ನಿಂದ ಅಲಂಕಾರ ಮಾಡಿದ ಬಾರ್ ಕೌಂಟರ್ ಇದ್ದಾಗಿದ್ದು, ಈವರೆಗೆ ಜ್ವಾಲಾಮುಖಿ ಬೂದಿಯಿಂದ ಮುಚ್ಚಿಹೋಗಿತ್ತು. ಕಳೆದ ವರ್ಷ ಪುರಾತತ್ವಶಾಸ್ತ್ರಜ್ಞರು ಅನ್ವೇಷಣೆ ಮಾಡಿದ್ದಾರೆ. ಈ ಜಾಗದ ಸಂಪೂರ್ಣವಾದ ಮಾಹಿತಿಯನ್ನು ಕಲೆ ಹಾಕಿದ್ದಾರೆ.

    ಕ್ರಿಸ್ತಶಕ 79ರಲ್ಲಿ ಮೌಂಟ್ ವೆಸುವಿಯಸ್ ಸ್ಫೋಟಿಸಿದ ಜ್ವಾಲಾಮುಖಿಯಿಂದ ಪಾಂಪೆ ನಗದ ಕುದಿಯುವ ಲಾವಾದಲ್ಲಿ ಹೂತುಹೋಗಿತ್ತು. ಈ ವೇಳೆ 2,000 ದಿಂದ 15,000 ಮಂದಿ ಸಾವನ್ನಪ್ಪಿದ್ದರು ಎಂದು ಇತಿಹಾಸ ಹೇಳುತ್ತಿದೆ. ಈಗ ಪತ್ತೆಯಾಗಿರುವ ರೊಮನ್ ಕಾಲದ ಫುಡ್ ಸ್ಟಾಲ್ ಥರ್ಮೋಪೋಲಿಯಂ ಎಂದು ಕರೆಯಲಾಗಿದೆ. ಸಿಲ್ವರ್ ವೆಡ್ಡಿಂಗ್ ಸ್ಟ್ರೀಟ್ ಮತ್ತು ಆ್ಯಲಿ ಆಫ್ ಬಾಲ್ಕನೀಸ್ ಎಂಬ ಪ್ರದೇಶದಲ್ಲಿ ಈ ಸ್ಟಾಲ್ ಪತ್ತೆ ಹಚ್ಚಲಾಗಿದೆ.

    ಸ್ಥಳದಲ್ಲಿ ಬಾತುಕೋಳಿ ಮೂಳೆಯ ಚೂರು, ಮಣ್ಣಿನ ಮಡಿಕೆ, ಹಂದಿ, ಮೇಕೆ ಹಾಗೂ ಮೀನಿನ ಅವಶೇಷಗಳು ಪತ್ತೆಯಾಗಿವೆ. ವೈನ್‍ನ ರುಚಿ ಮಾರ್ಪಡಿಸಲು ಬಳಸುವ ಕೆಲವು ವಸ್ತಗಳು ಪತ್ತೆಯಾಗಿವೆ. ಅಂಗಡಿಯ ಗೋಡೆಗಳ ಮೇಲೆ ಕೋಳಿ ಹಾಗೂ ಬಾತುಕೋಳಿ ಚಿತ್ರವನ್ನು ಕಾಣಬಹುದಾಗಿದೆ. ಈ ಎಲ್ಲಾ ಚಿತ್ರಣವನ್ನು ಗಮನಿಸಿದ ನಂತರ ಇಲ್ಲಿ ಒಂದು ಹೋಟೆಲ್ ಇದ್ದಿರಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

    ಬಹುಶಃ ಜ್ವಾಲಾಮುಖಿ ಸ್ಫೋಟದ ಹಿನ್ನಲೆ ಅಂಗಡಿ ಮುಚ್ಚಿ ಹೋಗಿರಬಹುದು. ಈ ಥರ್ಮೀಪೋಲಿಯಂ ಜನರ ಜೀವನ ಹೇಗಿತ್ತು ಎಂಬುದು ತಿಳಿಯಬಹುದಾಗಿದೆ. ಅಂಗಡಿ ಮಾತ್ರವಲ್ಲದೇ ವ್ಯಕ್ತಿ ಅಸ್ತಪಂಜರವು ದೊರಕಿದೆ. ಸುಮಾರು 50 ವರ್ಷದ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ರೋಮನ್ ಸಾಮ್ರಾಜ್ಯ ಅತೀ ಶ್ರೀಮಂತ ನಗರದಲ್ಲಿ ಒಂದಾಗಿದ್ದ ಪಾಂಪೆ ಸುಮಾರು 110 ಎಕರೆಯಷ್ಟು ವಿಸ್ತೀರ್ಣವಿದೆ. ಜ್ವಾಲಾಮುಖಿ ಬೂದಿಯಡಿ ಹಲವು ಕಟ್ಟಡಗಳು ಅನೇಕ ವಸ್ತುಗಳು ಹಾಗೂ ಮೃತದೇಹಗಳು ಇಲ್ಲಿ ಹುದುಗಿಹೋಗಿದೆ ಎಂದು ಎಂದು ಆರ್ಕಿಯಾಲಾಜಿಕಲ್ ಪಾಕ್ ಆಫ್ ಪಾಂಪೆಯ ನಿರ್ದೇಶಕ ಮಸ್ಸೀಮೋ ಒಸ್ಸಾನಾ ಹೇಳಿದ್ದಾರೆ.

  • ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್- 52 ಕೋಟಿ ಬೆಲೆ, ವಿಶೇಷತೆ ಏನು ಗೊತ್ತಾ?

    ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್- 52 ಕೋಟಿ ಬೆಲೆ, ವಿಶೇಷತೆ ಏನು ಗೊತ್ತಾ?

    ರೋಮ್: ಇಟಲಿಯ ಐಷಾರಾಮಿ ವಸ್ತುಗಳ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಪರಿಚಯಿಸಿದ್ದು, ಇದರ ಬೆಲೆ ಬರೋಬ್ಬರಿ 52 ಕೋಟಿ ರೂ. ಆಗಿದೆ.

    ಬೊಲುಗ್ನಾ ಮೂಲದ ಬ್ರಾಂಡ್ ಆಗಿರುವ ಬೋರಿನಿ ಮಿಲನೇಸಿ ಕೇವಲ ಮೂರು ಐಷಾರಾಮಿ ಪರ್ವಾ ಮೀ ಬ್ಯಾಗ್‍ಗಳನ್ನು ಉತ್ಪಾದಿಸಿದೆ. ಪ್ರತಿ ಬ್ಯಾಗ್ ತಯಾರಿಸಲು 1 ಸಾವಿರ ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಎಂದು ವರದಿಯಾಗಿದೆ. ಈ ಬ್ಯಾಗ್ ಕುರಿತು ಬೋರಿನಿ ಮಿಲನೇಸಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದು, ಬ್ಯಾಗ್ ಮಾರಾಟದಿಂದ ಬಂದ ಆದಾಯದಲ್ಲಿ ಒಂದು ಭಾಗವನ್ನು ಸಮುದ್ರ ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನವಾಗಿ ನೀಡಲಾಗುವುದು ಎಂದು ಘೋಷಿಸಿದೆ.

    6 ಮಿಲಿಯನ್ ಯೂರೋ (52 ಕೋಟಿ ರೂ.) ಬೆಲೆ ಬಾಳುವ ಬ್ಯಾಗ್‍ನ್ನು ಪರಿಚಯಿಸಲು ನಮಗೆ ಹೆಮ್ಮೆಯಾಗುತ್ತದೆ. ಇದು ವಿಶ್ವದ ಅತ್ಯಂತ ಬೆಲೆ ಬಾಳುವ ಬ್ಯಾಗ್ ಎಂಬುದು ಮತ್ತೊಂದು ವಿಶೇಷ. ಪ್ಲಾಸ್ಟಿಕ್‍ನಿಂದ ಮಲಿನವಾಗುತ್ತಿರುವ ಸಮುದ್ರವನ್ನು ರಕ್ಷಿಸಬೇಕಿದ್ದು, ಈ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಬ್ಯಾಗ್ ತಯಾರಿಸಲಾಗಿದೆ. ಈ ಪೈಕಿ 800 ಸಾವಿರ ಯೂರೋಗಳನ್ನು ಸಮುದ್ರವನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದಾನ ನೀಡಲಾಗುತ್ತಿದೆ ಎಂದು ಸಂಸ್ಥೆ ತನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದೆ.

     

    View this post on Instagram

     

    A post shared by BOARINI MILANESI (@boarinimilanesi)

    ಬ್ಯಾಗ್ ಸೆಮಿ ಶೈನಿ ಅಲಿಗೇಟರ್ ಹೊದಿಕೆ ಹೊಂದಿದ್ದು, 10 ಬಿಳಿ ಚಿನ್ನದ ಚಿಟ್ಟೆಗಳು ಹಾಗೂ ವಜ್ರದ ಕೊಕ್ಕೆಗಳಿಂದ ಬ್ಯಾಗ್ ಮೇಲ್ಭಾಗದಲ್ಲಿ ಅಲಂಕರಿಸಲಾಗಿದೆ. 10 ಚಿಟ್ಟೆಗಳಲ್ಲಿ ನಾಲ್ಕು ವಜ್ರ ಹಾಗೂ ಮೂರು ನೀಲಮಣಿ ಹಾಗೂ ಅಪರೂಪದ ಪ್ಯಾರೈಬಾ ಟೂರ್‍ಮ್ಯಾಲೈನ್‍ಗಳಿಂದ ಅಲಂಕರಿಸಲಾಗಿದೆ. ಸಮುದ್ರದಿಂದ ಪ್ರೇರಿತಗೊಂಡು ನೀಲಿ ಬಣ್ಣದಲ್ಲಿ ಚೀಲವನ್ನು ವಿನ್ಯಾಸ ಮಾಡಲಾಗಿದ್ದು, ಕಲ್ಲುಗಳ ಆಕಾರದ ಡಿಸೈನ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಬೋರಿನಿ ಮಿಲನೇಸಿ ಸಹ-ಸಂಸ್ಥಾಪಕ ಮ್ಯಾಟಿಯೊ ರೊಡಾಲ್ಫೊ ಮಿಲನೇಸಿ ಅವರು ತಮ್ಮ ತಂದೆಯ ನೆನಪಿನ ಗೌರವಾರ್ಥವಾಗಿ ಇದನ್ನು ಸಮರ್ಪಿಸಿದ್ದಾರೆ.

    ಬ್ಯಾಗ್ ವಿನ್ಯಾಸಕರಾದ ಕೊರೊಲಿನಾ ಬೋರಿನಿ ಈ ಕುರಿತು ಮಾಹಿತಿ ನೀಡಿ, ನೀಲಮಣಿಗಳು ಸಾಗರದ ಆಳವನ್ನು ಪ್ರತಿನಿಧಿಸುತ್ತವೆ. ಪ್ಯಾರೈಬಾ ಟೂರ್ ಮ್ಯಾಲಿನ್ ಅಸಂಖ್ಯಾತ ಕೆರಿಬಿಯನ್ ಸಮುದ್ರಗಳನ್ನು ನೆನಪಿಸುತ್ತವೆ. ಅಲ್ಲದೆ ವಜ್ರಗಳು ನೀರಿನ ಪಾರದರ್ಶಕತೆಯನ್ನು ಬಿಂಬಿಸುತ್ತವೆ ಎಂದು ವಿವರಿಸಿದ್ದಾರೆ. ಬೋರಿನಿ ಮಿಲನೇಸಿ ಕಂಪನಿಯನ್ನು 2016ರಲ್ಲಿ ಇಟಲಿಯಲ್ಲಿ ಸ್ಥಾಪಿಸಲಾಗಿದ್ದು, ಐಶಾರಾಮಿ ವಸ್ತುಗಳನ್ನು ಉತ್ಪಾದಿಸುತ್ತದೆ.

    ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪ್ರಕಾರ ಈಗಿನ ವಿಶ್ವದ ಅತ್ಯಂತ ಬೆಲೆ ಬಾಳುವ ಹ್ಯಾಂಡ್ ಬ್ಯಾಗ್ ಮೌವಾಡ್ ಆಗಿದ್ದು, ಇದು ಹೃದಯದಾಕಾರದಲ್ಲಿದೆ. 1001 ನೈಟ್ಸ್ ಡೈಮಂಡ್ ಪರ್ಸ್, 18 ಕ್ಯಾರೆಟ್ ಚಿನ್ನದಿಂದ ಇದನ್ನು ಮಾಡಲಾಗಿದೆ. 4,517 ವಜ್ರಗಳನ್ನು ಹೊಂದಿದೆ.

  • ಬರೋಬ್ಬರಿ 8 ವರ್ಷಗಳ ಬಳಿಕ ಗಂಡು ಮಗು ಜನನ- ಗ್ರಾಮದ ಜನಸಂಖ್ಯೆ 29ಕ್ಕೆ ಏರಿಕೆ

    ಬರೋಬ್ಬರಿ 8 ವರ್ಷಗಳ ಬಳಿಕ ಗಂಡು ಮಗು ಜನನ- ಗ್ರಾಮದ ಜನಸಂಖ್ಯೆ 29ಕ್ಕೆ ಏರಿಕೆ

    – ಹಬ್ಬದ ವಾತಾವರಣದಲ್ಲಿ ಹಳ್ಳಿಯ ಜನ

    ರೋಮ್: ಅತೀ ಕಡಿಮೆ ಜನಸಂಖ್ಯೆ ಇರುವ ಇಟಲಿಯ ಪುಟ್ಟ ಗ್ರಾಮವೊಂದರ ಮನೆಯಲ್ಲಿ ಗಂಡು ಮಗುವಿನ ಜನನವಾಗಿದೆ. ಈ ಮೂಲಕ ಬರೋಬ್ಬರಿ 8 ವರ್ಷದ ಬಳಿಕ ಮಗು ಹುಟ್ಟಿದ್ದು, ಹೀಗಾಗಿ ಗ್ರಾಮದ ಜನ ಅದ್ಧೂರಿಯಾಗಿ ಶಿಶುವನ್ನು ಸ್ವಾಗತಿಸಿದ್ದಾರೆ.

    ಲೊಂಬಾರ್ಡಿಯ ಮೌಂಟೇನಿಯಸ್ ಸಮುದಾಯದ ಮೊರ್ಟೆರೋನ್ ನಲ್ಲಿ ಗಂಡು ಮಗು ಜನನದ ಬಳಿಕ ಅಲ್ಲಿನ ಜನಸಂಖ್ಯೆ 29ಕ್ಕೆ ಏರಿಕೆಯಾಯಿತು. ಮಗುವಿಗೆ ಡೇನಿಸ್ ಎಂದು ನಾಮಕರಣ ಕೂಡ ಮಾಡಲಾಗಿದೆ.

    ಗಂಡು ಮಗು ಹುಟ್ಟಿದ್ದೇ ತಡ ಇಡೀ ಸಮುದಾಯದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು ಎಂದು ಮೊರ್ಟೆರೋನ್ ಮೇಯರ್ ಇನ್ವರ್ನಿಜಿ ತಿಳಿಸಿದ್ದಾರೆ.

    ಡೇನಿಸ್ ತಂದೆ ಮ್ಯಾಟಿಯೊ ಹಾಗೂ ತಾಯಿ ಸಾರಾ ತಮಗೆ ಗಂಡು ಮಗು ಹುಟ್ಟಿರುವ ವಿಚಾರವನ್ನು ಇಟಾಲಿಯನ್ ಸಂಪ್ರದಾಯದಂತೆ ಘೋಷಣೆ ಮಾಡಿದ್ದಾರೆ. ನೀಲಿ ಬಣ್ಣ ಅಂದ್ರೆ ಗಂಡು, ಪಿಂಕ್ ಬಣ್ಣ ಅಂದ್ರೆ ಹುಡುಗಿ ಎಂದು ಸಾಮಾನ್ಯವಾಗಿ ಗ್ರಹಿಸಲಾಗುತ್ತದೆ. ಅಂತೆಯೇ ಡೇನಿಸ್ ತಂದೆ- ತಾಯಿ ಮನೆ ಬಾಗಿಲಿಗೆ ನೀಲಿ ಬಣ್ಣದ ರಿಬ್ಬನ್ ಕಟ್ಟುವ ಮೂಲಕ ಗಂಡು ಮಗುವಾಗಿರುವ ವಿಚಾರ ತಿಳಿಸಿದ್ದಾರೆ.

    2012ರಲ್ಲಿ ಹೆಣ್ಣು ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ಹಳ್ಳಿಯಲ್ಲಿ ರಿಬ್ಬನ್ ಕಂಡು ಬಂದಿರುವುದಾಗಿದೆ. ಲೆಕ್ಕೊದ ಅಲೆಸ್ಸಾಂಡ್ರೊ ಮಂಜೋನಿ ಆಸ್ಪತ್ರೆಯಲ್ಲಿ ಡೇನಿಸ್ ಜನನವಾಗಿದ್ದು, ಹುಟ್ಟಿದಾಗ ಈತ 2.6 ಕೆ.ಜಿ ಇದ್ದನು.

    ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸಾರಾ, ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಸಮಯದಲ್ಲಿಯೇ ಗರ್ಭಿಣಿಯಾಗಿದ್ದು, ನನಗೆ ಭಾರೀ ಸವಾಲಾಗಿತ್ತು. ಮೊರ್ಟೆರೋನ್ ಬಿಟ್ಟು ಲೊಂಬಾರ್ಡಿ ಪ್ರದೇಶದಲ್ಲಿ ಕೋವಿಡ್ 19 ತನ್ನ ಅಟ್ಟಹಾಸ ಮೆರೆದಿತ್ತು. ಹೀಗಾಗಿ ನಾನು ತುಂಬಾ ಆತಂಕಕ್ಕೀಡಾಗಿದ್ದೆ. ಇಂತಹ ಸಮಯದಲ್ಲಿ ಹೊರಗಡೆ ಹೋಗಲು ಸಾಧ್ಯವಗುತ್ತಿರಲಿಲ್ಲ. ಅಲ್ಲದೆ ಪ್ರೀತಿ ಪಾತ್ರರನ್ನು ಭೇಟಿಯಾಗಲು ಕೂಡ ಅಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.

    ತಮಗೆ ಗಂಡು ಮಗು ಹುಟ್ಟಿದ ಖುಷಿಗಾಗಿ ಆಸ್ಪತ್ರೆಯಿಂದ ತೆರಳಿ ಇಡೀ ಕುಟುಂಬಕ್ಕೆ ಭರ್ಜರಿ ಪಾರ್ಟಿ ನೀಡಲು ತೀರ್ಮಾನಿಸಿದ್ದೇವೆ. ಈ ಪಾರ್ಟಿಗೆ ಎಲ್ಲರನ್ನೂ ಆತ್ಮೀಯತೆಯಿಂದ ಬರಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

    ಡೆನಿಸ್ ಜನಿಸುವ ಕೆಲ ವಾರಗಳ ಮೊದಲು ಇಟಲಿಯ ಜನನ ಪ್ರಮಾಣ 2019ರಲ್ಲಿ ದಾಖಲೆಯ ಕನಿಷ್ಟ ಮಟ್ಟವನ್ನು ತಲುಪಿದೆ ಎಂದು ಹೇಳಲಾಗಿತ್ತು. 1862ರಲ್ಲಿ ದಾಖಲೆಗಳು ಪ್ರಾರಂಭವಾದ ಬಳಿಕ ಇದೇ ಮೊದಲು ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವುದಾಗಿದೆ. ಜನಸಂಖ್ಯೆಯ ಆಧಾರದ ಮೇಲೆ ಮೊರ್ಟೆರೋನ್ ಅನ್ನು ಇಟಲಿಯ ಅತ್ಯಂತ ಚಿಕ್ಕ ಪುರಸಭೆ ಎಂದು ವರ್ಗೀಕರಿಸಲಾಗಿದೆ. ಇತ್ತೀಚೆಗೆ ಮೇಯರ್ ತಂದೆ ನಿಧನರಾಗಿದ್ದು, ಆ ಬಳಿಕ ಜನಸಂಖ್ಯೆ 28ಕ್ಕೆ ಕುಸಿದಿತ್ತು.

    ಪ್ರಸ್ತುತ ನಮ್ಮ ಜನಸಂಖ್ಯೆ 29ಕ್ಕೆ ಏರಿಕೆಯಾಗಿದೆ. ನನ್ನ ಪ್ರಕಾರ ಸದ್ಯ ಯಾರೂ ಗರ್ಭಿಣಿಯರು ಇಲ್ಲ. ಆದರೆ ಇದೀಗ ಗಂಡು ಮಗು ಜನಿಸಿರುವುದು ನಮಗೆ ತುಂಬಾ ಖುಷಿ ತಂದಿದೆ ಎಂದು ಇನ್ವರ್ನಿಜಿ ಖುಷಿ ಹಂಚಿಕೊಂಡಿದ್ದಾರೆ.

  • ವಿಶ್ವಾದ್ಯಂತ 40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – 2.76 ಲಕ್ಷ ಮಂದಿ ಬಲಿ

    ವಿಶ್ವಾದ್ಯಂತ 40 ಲಕ್ಷ ದಾಟಿದ ಸೋಂಕಿತರ ಸಂಖ್ಯೆ – 2.76 ಲಕ್ಷ ಮಂದಿ ಬಲಿ

    – 13 ಲಕ್ಷಕ್ಕೂ ಅಧಿಕ ಮಂದಿ ಗುಣಮುಖ
    – ಅಮೆರಿಕ ಒಂದರಲ್ಲೇ 78 ಸಾವಿರ ಮಂದಿ ಸಾವು

    ವಾಷಿಂಗ್ಟನ್: ಇಡೀ ವಿಶ್ವವನ್ನೇ ಕಾಡುತ್ತಿರುವ ಕಿಲ್ಲರ್ ಕೊರೊನಾ ವೈರಸ್ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ವಿಶ್ವವ್ಯಾಪಿ ಸೋಂಕಿತರ ಸಂಖ್ಯೆ 40.29 ಲಕ್ಷಕ್ಕೆ ಏರಿದ್ದು, ಮಹಾಮಾರಿಗೆ ಬಲಿಯಾದವರ ಸಂಖ್ಯೆ 2,76,484ಕ್ಕೆ ತಲುಪಿದೆ.

    ಜಗತ್ತಿನಾದ್ಯಂತ ಇರುವ ಸೋಂಕಿತರ ಪೈಕಿ ಈವರೆಗೆ 13,94,289 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 212 ರಾಷ್ಟ್ರಗಳು ಹಾಗೂ ಪ್ರಾಂತ್ಯದಲ್ಲಿ ಹಬ್ಬಿರುವ ಕೊರೊನಾ ತನ್ನ ರಣಕೇಕೆ ಮುಂದುವರೆಸಿದೆ. ಅದರಲ್ಲೂ ಅಮೆರಿಕದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 13,22,164ಕ್ಕೆ ಏರಿದ್ದು, 78,616 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿಪಡೆದಿದೆ. ಹಾಗೆಯೇ ಈವರಗೆ 2,23,749 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

    ಕೊರೊನಾ ವೈರಸ್ ಅತೀ ಹೆಚ್ಚು ಹರಡಿರುವ ದೇಶಗಳ ಪಟ್ಟಿಯಲ್ಲಿ ಸ್ಪೈನ್ 2ನೇ ಸ್ಥಾನದಲ್ಲಿದ್ದು, ಇಲ್ಲಿ 2,60,117 ಮಂದಿಗೆ ಸೋಂಕು ತಗುಲಿದೆ. ಈವರೆಗೆ 26,299 ಮಂದಿ ಸಾವನ್ನಪ್ಪಿದ್ದು, 1,68,408 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ. ಇಟಲಿಯಲ್ಲಿ ಸೋಂಕಿತರ ಸಂಖ್ಯೆ 2,17,185ಕ್ಕೆ ತಲುಪಿದೆ. ಈವರೆಗೆ 99,023 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 30,201 ಮಂದಿ ಜೀವ ಕಳೆದುಕೊಂಡಿದ್ದಾರೆ. ಬ್ರಿಟನ್‍ನಲ್ಲೂ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ 2,11,364ಕ್ಕೆ ತಲುಪಿದ್ದು, 31,241 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

    ಭಾರತದಲ್ಲಿಯೂ ಕೊರೊನಾ ಹಾವಳಿ ದಿನೇ ದಿನೇ ಹೆಚ್ಚಾಗುಲೇ ಇದ್ದು, 59,765 ಮಂದಿಗೆ ಈವರೆಗೆ ಸೋಂಕು ತಗುಲಿದ್ದು, 1,986 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. 17,897 ಮಂದಿ ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಹಾಗೆಯೇ ಪಾಕಿಸ್ತಾನದಲ್ಲಿ 27,474 ಮಂದಿ ಸೋಂಕಿಗೆ ತುತ್ತಾಗಿದ್ದು, 7,756 ಮಂದಿ ಸೋಂಕಿನಿಂದ ಗುಣವಾಗಿ, 618 ಮಂದಿ ಸಾವನ್ನಪ್ಪಿದ್ದಾರೆ.

  • ದೇಶದಲ್ಲಿ ಇಂದು ಒಂದೇ ದಿನ 2,411 ಜನರಿಗೆ ಕೊರೊನಾ

    ದೇಶದಲ್ಲಿ ಇಂದು ಒಂದೇ ದಿನ 2,411 ಜನರಿಗೆ ಕೊರೊನಾ

    – ಮಹಾರಾಷ್ಟ್ರ ಸಿಎಂ ಮನೆಯ ಪೇದೆಗಳಿಗೂ ಸೋಂಕು
    – ವಿಶ್ವದಲ್ಲಿ ಕೊರೊನಾಗೆ 2.40 ಲಕ್ಷ ಮಂದಿ ಬಲಿ

    ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಇವತ್ತು ಒಂದೇ ದಿನ 2,411 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು 37,776 ಜನರಿಗೆ ಕೊರೊನಾ ವೈರಸ್ ತಗುಲಿದೆ. 1,223ಜನ ಸಾವನ್ನಪ್ಪಿದ್ದಾರೆ.

    ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 1,008 ಕೇಸ್ ಪತ್ತೆಯಾಗಿದ್ದು, ಬಾಧಿತರ ಸಂಖ್ಯೆ 11 ಸಾವಿರ ದಾಟಿದೆ. ಮುಂಬೈಯೊಂದರಲ್ಲೇ ಸುಮಾರು 8 ಸಾವಿರ ಸೋಂಕಿತರು ಇದ್ದಾರೆ. ಪೂರ್ವ ದೆಹಲಿಯ ಬೆಟಾಲಿಯನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ 68 ಮಂದಿ ಸಿಆರ್‍ಪಿಎಫ್ ಯೋಧರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಇದೇ ಬೆಟಾಲಿಯನ್‍ನ 122 ಮಂದಿ ಸಿಆರ್‍ಪಿಎಫ್ ಯೋಧರಿಗೆ ಸೋಂಕು ವ್ಯಾಪಿಸಿದೆ. ಸದ್ಯ 1,100 ಯೋಧರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ.

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮನೆಯ ಮೂವರು ಪೇದೆಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ. 130 ಸೆಕ್ಯೂರಿಟಿ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ನಾಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಸೇರಿ ಕೊರೊನಾ ಆಸ್ಪತ್ರೆಗಳ ವಾರಿಯರ್ಸ್ ಮೇಲೆ ಭಾರತೀಯ ಸೇನೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಠಿ ಮಾಡಿ ಧನ್ಯವಾದ ಹೇಳಲಿದೆ. ನೌಕಾಪಡೆಯ ಹಡಗುಗಳಲ್ಲಿ ದೀಪವನ್ನು ಬೆಳಗಿಸಲಾಗುತ್ತದೆ.

    ವಿಶ್ವದಲ್ಲಿ ಮಹಾಮಾರಿ ಕೊರೊನಾಗೆ 2.40 ಲಕ್ಷ ಮಂದಿ ಬಲಿಯಾಗಿದ್ದಾರೆ. 34 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 11 ಲಕ್ಷದಷ್ಟು ಜನ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಅಮೆರಿಕದಲ್ಲಿ 66 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. 11.34 ಲಕ್ಷ ಮಂದಿ ಸೋಂಕಿತರಿದ್ದಾರೆ. ವಿಶ್ವದಲ್ಲೇ ಅಮೆರಿಕ ಕೊರೊನಾ ಸಾವಿನ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಸ್ಪೇನ್‍ನಲ್ಲಿ ಸಾವಿನ ಸಂಖ್ಯೆ 25 ಸಾವಿರ ಗಡಿ ಮುಟ್ಟುತ್ತಿದೆ. 2 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಿದ್ದಾರೆ. ಇಟಲಿ ಕೊರೊನಾ ಸಾವಿನ ಸಂಖ್ಯೆಯಲ್ಲಿ ಸ್ಪೇನ್ ರಾಷ್ಟ್ರವನ್ನೇ ಮೀರಿಸಿದೆ. 28 ಸಾವಿರ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿ ಕಳೆದ 24 ಗಂಟೆಗಳಲ್ಲಿ 269 ಮಂದಿ ಸಾವನಪ್ಪಿದ್ದಾರೆ.

    ಕೊರೊನಾ ಸೋಂಕಿತರಿಗೆ ತುರ್ತು ಸಂದರ್ಭದಲ್ಲಿ ರೆಮಿಡೆಸಿವರ್ ಲಸಿಕೆ ಪ್ರಯೋಗ ಮಾಡಬಹುದು ಅಂತ ಭಾರತೀಯ ಆಹಾರ ಮತ್ತು ಮಾದಕ ನಿಯಂತ್ರಕ ಸಂಸ್ಥೆ ಹೇಳಿದೆ. ಭಾರತೀಯ ಮತ್ತು ಅಮೆರಿಕ ವೈದ್ಯರ ನೇತೃತ್ವದ ತಂಡ ಲಸಿಕೆ ಬಗ್ಗೆ ಹಲವು ಪ್ರಯೋಗಗಳನ್ನ ನಡೆಸಿದೆ. ಕೊರೊನಾ ಸೋಂಕಿತ ಕೆಲವು ಪ್ರಕರಣಗಳು ವಾಸಿಯಾಗಲು ರೆಮಿಡೆಸಿವರ್ ಸಹಾಯ ಮಾಡಿದೆ ಅಂತಾ ಹೇಳಿದ್ದಾರೆ. ಅಮೆರಿಕದ ಹಲವು ಜಿಲ್ಲೆಗಳಲ್ಲಿ ಈ ಲಸಿಕೆಯನ್ನ ವ್ಯಾಪಕವಾಗಿ ಬಳಸಿರುವ ಉದಾಹರಣೆ ನೀಡಿದೆ.

  • ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    ದೇಶದಲ್ಲಿ 23 ಸಾವಿರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

    – ಅಮೆರಿಕದಲ್ಲಿ 50 ಸಾವಿರಕ್ಕೂ ಅಧಿಕ ಸಾವು

    ನವದೆಹಲಿ: ದೇಶದಲ್ಲಿ ಕೊರೊನಾ ಸಾವಿನ ಸಂಖ್ಯೆ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದು, 723 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಸೋಂಕಿತರ ಸಂಖ್ಯೆ 23 ಸಾವಿರ ಗಡಿದಾಟಿದೆ.

    ಕಳೆದೆರಡು ದಿನಗಳಿಂದ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ಕೊರೊನಾಗೆ ಕೇರಳದಲ್ಲಿ 4 ತಿಂಗಳ ಮಗು ಅಸುನೀಗಿದೆ. ದೇಶದಲ್ಲೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. 6,430 ಜನರಿಗೆ ಸೋಂಕು ತಗುಲಿದ್ದು, 283 ಮಂದಿ ಸಾವನಪ್ಪಿದ್ದಾರೆ. ದೆಹಲಿ ಮತ್ತು ಗುಜರಾತ್‍ನಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, 3 ಸಾವಿರ ಗಡಿ ತಲುಪುತ್ತಿದೆ.

    ತಮಿಳುನಾಡಿನಲ್ಲಿ ಕೊರೊನಾ ಬಾದಿತರ ಪ್ರಮಾಣ ಗಣನೀಯವಾಗಿ ಏರುತ್ತಿದೆ. ತಮಿಳುನಾಡು ಸರ್ಕಾರ ಚೆನ್ನೈ, ಮಧುರೈ, ಕೊಯಂಬತ್ತೂರ್‍ನಲ್ಲಿ ಏಪ್ರಿಲ್ 28ರ ವರೆಗೆ ಕಟ್ಟುನಿಟ್ಟಿನ ಲಾಕ್‍ಡೌನ್ ಘೋಷಿಸಿದೆ. ಆಂಧ್ರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2 ಹೊಸ ಸಾವು ಪ್ರಕರಣ ಸೇರಿ 29 ಮಂದಿ ಬಲಿಯಾಗಿದ್ದಾರೆ.

    ಯಾವ ರಾಜ್ಯಗಳಲ್ಲಿ ಹೆಚ್ಚು?
    ಮಹಾರಾಷ್ಟ್ರದಲ್ಲಿ 6,430 ಜನರಿಗೆ ಸೋಂಕು ತಗುಲಿದ್ದು, 283 ಜನ ಸಾವನ್ನಪ್ಪಿದ್ದಾರೆ. ಗುಜರಾತ್‍ನಲ್ಲಿ ಸೋಂಕಿತರ ಸಂಖ್ಯೆ 2,624ಕ್ಕೆ ಹೆಚ್ಚಿದರೆ 112 ಜನ ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ 2,376 ಜನರಿಗೆ ಸೋಂಕು ತಗುಲಿದೆ. 50 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶದಲ್ಲಿ 1,852 ಜನರಿಗೆ ಸೋಂಕು ತಗುಲಿದೆ. 83 ಜನ ಅಸು ನೀಗಿದ್ದಾರೆ.

    ವಿಶ್ವ ಮಟ್ಟದಲ್ಲಿ ಸಹ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆ 2 ಲಕ್ಷದ ಗಡಿ ತಲುಪುತ್ತಿದೆ. ಸೋಂಕಿತರ ಸಂಖ್ಯೆ 27 ಲಕ್ಷದ ದಾಟಿದೆ. ಅಮೆರಿಕಾದಲ್ಲಿ ಸಾವಿನ, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 50,849 ಮಂದಿ ಅಮೆರಿಕದಲ್ಲಿ ಸೋಂಕಿಗೆ ಬಲಿಯಾಗಿದ್ದಾರೆ. 8,92,761 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಸ್ಪೇನ್‍ನಲ್ಲಿ 22,549 ಮಂದಿ ಬಲಿಯಾಗಿದ್ದು, 2,19,764 ಮಂದಿ ಸೋಂಕಿತರಿದ್ದಾರೆ. ಇಟಲಿಯಲ್ಲೂ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು, 1,89,973 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಬೆಲ್ಜಿಯಂನಲ್ಲಿ ಕಳೆದ 24 ಗಂಟೆಗಳಲ್ಲಿ 189 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.