Tag: ISRO scientist

  • ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ

    ಪ್ರಜ್ಞಾನ್ ರೋವರ್‌ಗೆ ಎದುರಾಯ್ತು ದೊಡ್ಡ ಕುಳಿ, ಮಾರ್ಗ ಬದಲಿಸಿದ ಇಸ್ರೋ – ಇನ್ನು 10 ದಿನ ಮಾತ್ರ ಬಾಕಿ

    ನವದೆಹಲಿ/ಬೆಂಗಳೂರು: ಚಂದ್ರಯಾನ-3 (Chandrayaan-3) ಯಶಸ್ವಿ ಕಾರ್ಯಾಚರಣೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪ್ರಜ್ಞಾನ್ ರೋವರ್ (Pragyan Rover) ಚಂದ್ರನ ಮೇಲ್ಮೈನ ದತ್ತಾಂಶ ಸಂಗ್ರಹಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಚಂದ್ರನ ಅಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಪ್ರಜ್ಞಾನ್ ರೋವರ್ ದೊಡ್ಡದೊಂದು ಕುಳಿಗೆ ಮುಖಾಮುಖಿಯಾಗಿದೆ.

    4 ಮೀಟರ್ ಸುತ್ತಳತೆ ಹೊಂದಿರುವ ಗುಂಡಿಯೊಂದನ್ನ ರೋವರ್ ಗುರುತಿಸಿದೆ. ಈ ಕುಳಿಯಿಂದ ಪ್ರಜ್ಞಾನ್ ರೋವರ್ 3 ಮೀಟರ್ ದೂರದಲ್ಲಿ ಇತ್ತು. ಹೀಗಾಗಿ ರೋವರ್‌ನ ಪಥ ಬದಲಾವಣೆಗೆ ಇಸ್ರೋ (ISRO) ನಿಯಂತ್ರಣ ಕೊಠಡಿ ಸೂಚನೆ ರವಾನಿಸಿತು. ಇದೀಗ ಹೊಸ ಹಾದಿಯಲ್ಲಿ ರೋವರ್ ಮುಂದೆ ಸಾಗಿದೆ ಎಂದು ಇಸ್ರೋ ತನ್ನ ಟ್ವಿಟ್ಟರ್ (X) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್

    ಸೋಮವಾರ ಮಧ್ಯಾಹ್ನ ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಜ್ಞಾನ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತಾಗಿ ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ ರೋವರ್‌ಗೆ ಹೊಸ ಮಾರ್ಗ ಸೂಚಿಸಿತು. ನಂತರ ರೋವರ್‌ನ ಬದಲಾದ ಮಾರ್ಗದ ಫೋಟೋ ಸಮೇತ ಇಸ್ರೋ ಸಾರ್ವಜನಿಕರಿಗೆ ಮಾಹಿತಿ ನೀಡಿದೆ. ಇದನ್ನೂ ಓದಿ: 15 ದಿನಗಳ ನಿತ್ಯ 5 ಸಾವಿರ ಕ್ಯೂಸೆಕ್‌ ನೀರು ತಮಿಳುನಾಡಿಗೆ ಹರಿಸಿ – ಕರ್ನಾಟಕಕ್ಕೆ CWRC ಆದೇಶ

    ಚಂದ್ರನ ಅಂಗಳದಲ್ಲಿ ಈಗಾಗಲೇ 4 ದಿನಗಳ ಕಾರ್ಯಾಚರಣೆ ನಡೆಸಿರುವ ಪ್ರಗ್ಯಾನ್ ರೋವರ್‌ಗೆ ಇನ್ನು ಕೇವಲ 10 ದಿನ ಮಾತ್ರ ಬಾಕಿ ಉಳಿದಿದೆ. ಚಂದ್ರನ ಮೇಲೆ ಒಂದು ದಿನ ಕಳೆಯಲು ಭೂಮಿಯ 14 ದಿನಗಳು ಆಗುತ್ತವೆ. ನಂತರದ 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದ ಮೇಲೆ ಕತ್ತಲು ಕವಿಯುತ್ತದೆ. ಹೀಗಾಗಿ ಈ 14 ದಿನಗಳ ಒಳಗೆ ಕಾರ್ಯಾಚರಣೆ ಮುಕ್ತಾಯಗೊಳಿಸಬೇಕಿದೆ. ಒಂದು ವೇಳೆ ಚಂದ್ರನ ದಕ್ಷಿಣ ಧ್ರವದಲ್ಲಿ ಕತ್ತಲು ಕವಿಯುವ 14 ದಿನಗಳ ಬಳಿಕವೂ ರೋವರ್ ಜೀವಂತವಾಗಿದ್ದರೆ, ಅದನ್ನು ಮುಂದಿನ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಬಹುದಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಇಸ್ರೋ ವಿಜ್ಞಾನಿಯಾಗಲಿದ್ದಾರೆ ಶರ್ಮಿಳಾ ಮಾಂಡ್ರೆ – ಕನ್ನಡಕ್ಕೂ ಬರ್ತಾರಂತೆ..!

    ಇಸ್ರೋ ವಿಜ್ಞಾನಿಯಾಗಲಿದ್ದಾರೆ ಶರ್ಮಿಳಾ ಮಾಂಡ್ರೆ – ಕನ್ನಡಕ್ಕೂ ಬರ್ತಾರಂತೆ..!

    ಮುದ್ದು ಮುದ್ದಾದ ನಟನೆಯಿಂದಲೇ ಕನ್ನಡಿಗರ ಮನಸಲ್ಲುಳಿದಿರುವ ನಟಿ ಶರ್ಮಿಳಾ ಮಾಂಡ್ರೆ. ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರೋ ಶರ್ಮಿಳಾ ಈಗೊಂದಷ್ಟು ಕಾಲದಿಂದ ಚಿತ್ರರಂಗದಿಂದಲೇ ಮರೆಯಾದಂತಿದ್ದರು. ಅಭಿಮಾನಿಗಳೆಲ್ಲ ಮಿಸ್ ಮಾಡಿಕೊಳ್ಳುತ್ತಿರುವಾಗಲೇ ಶರ್ಮಿಳಾ ಮತ್ತೆ ಮರಳುವ ಸ್ಪಷ್ಟ ಸೂಚನೆ ರವಾನಿಸಿದ್ದಾರೆ.

    ಒಂದಷ್ಟು ಸಮಯ ಶರ್ಮಿಳಾ ಬಿಡುವಿನಲ್ಲಿದ್ದದ್ದು ನಿಜ. ಆದರೆ ಈ ಅವಧಿಯಲ್ಲಿ ಅವರ ಮುಂದಿನ ನಡೆಗಳ ಬಗ್ಗೆ ಸ್ಪಷ್ಟವಾದ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರಂತೆ. ಇದೀಗ ಮತ್ತೆ ನಟನೆಗೆ ಎಂಟ್ರಿ ಕೊಡಲು ಉತ್ಸುಕರಾಗಿರುವ ಶರ್ಮಿಳಾ ತಮಿಳು ಚಿತ್ರವೊಂದರ ಮೂಲಕ ಸದ್ಯದಲ್ಲಿಯೇ ರೀ ಲಾಂಚ್ ಆಗಲಿದ್ದಾರಂತೆ.

    ಈ ಸುದ್ದಿ ಕೇಳಿದಾಕ್ಷಣ ಕನ್ನಡದ ಶರ್ಮಿಳಾ ಅಭಿಮಾನಿಗಳು ನಿರಾಸೆ ಹೊಂದುವ ಅಗತ್ಯವೇನಿಲ್ಲ. ಯಾಕೆಂದರೆ, ತಮಿಳು ಚಿತ್ರದ ಜೊತೆಯೇ ಎರಡೆರಡು ಕನ್ನಡ ಚಿತ್ರಗಳ ಅವಕಾಶವೂ ಅವರ ಮುಂದಿದೆ. ಈ ಎರಡೂ ಚಿತ್ರಗಳ ಕಥೆ, ತಾರಾಗಣ ಮುಂತಾದ ಆಯ್ಕೆ ಪ್ರಕ್ರಿಯೇ ಚಾಲ್ತಿಯಲ್ಲಿದೆಯಂತೆ.

    ಇದರಲ್ಲಿ ಒಂದು ಚಿತ್ರ ಇದೇ ಆಗಸ್ಟ್ ತಿಂಗಳಿಂದ ಆರಂಭವಾಗಲಿದೆ. ಆ ಚಿತ್ರದ ನಿರ್ದೇಶಕ ಯಾರು, ನಾಯಕನ್ಯಾರು ಮತ್ತು ಶೀರ್ಷಿಕೆ ಏನು ಎಂಬ ವಿಚಾರವನ್ನೆಲ್ಲ ಶರ್ಮಿಳಾ ನಿಗೂಢವಾಗಿಟ್ಟಿದ್ದಾರೆ. ಆದರೆ ಈ ಚಿತ್ರದಲ್ಲಿ ತಾನು ಇಸ್ರೋ ವಿಜ್ಞಾನಿಯಾಗಿ ನಟಿಸಲಿರೋದರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಅಂತೂ ಒಂದಷ್ಟು ಕಾಲ ಮರೆಯಾಗಿದ್ದ ಶರ್ಮಿಳಾ ಭರ್ಜರಿಯಾಗಿಯೇ ರೀ ಎಂಟ್ರಿ ಕೊಡಲಿದ್ದಾರೆಂಬುದಂತೂ ಸತ್ಯ!