Tag: Islamabad

  • ಕಾಶ್ಮೀರದ ಕುರಿತು ನಮಗೇಕೆ, ಕ್ರಿಕೆಟ್ ಬಗ್ಗೆ ಮಾತನಾಡಿ: ಪಾಕ್ ಕ್ರಿಕೆಟ್ ಕೋಚ್

    ಕಾಶ್ಮೀರದ ಕುರಿತು ನಮಗೇಕೆ, ಕ್ರಿಕೆಟ್ ಬಗ್ಗೆ ಮಾತನಾಡಿ: ಪಾಕ್ ಕ್ರಿಕೆಟ್ ಕೋಚ್

    ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಜವಾಬ್ದಾರಿಯನ್ನು ವಹಿಸಿಕೊಂಡ ಮಾಜಿ ಆಟಗಾರ ಮಿಸ್ಬಾ ಉಲ್ ಹಕ್, ಕಾಶ್ಮೀರದ ಕುರಿತ ಪತ್ರಕರ್ತನ ಪ್ರಶ್ನೆಗೆ ಗರಂ ಆಗಿದ್ದಾರೆ.

    ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಿಸ್ಬಾ ಉಲ್ ಹಕ್ ಅವರಿಗೆ ಪತ್ರಕರ್ತನೊಬ್ಬ ಕಾಶ್ಮೀರದ ಕುರಿತು ಪ್ರಶ್ನೆ ಮಾಡಿದ್ದ.

    ಪುಲ್ವಾಮಾ ದಾಳಿಯ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರರು ಸೇನೆಗೆ ಬೆಂಬಲ ನೀಡಲು ಆರ್ಮಿ ಕ್ಯಾಪ್ ಧರಿಸಿ ಪಂದ್ಯವಾಡಿದ್ದರು. ಸದ್ಯ ಪಾಕ್ ಕ್ರಿಕೆಟ್ ತಂಡದ ಕಾಶ್ಮೀರದ ಸಮಸ್ಯೆಯೊಂದಿಗೆ ನಿಲ್ಲಲು ಏನಾದರೂ ಪ್ಲಾನ್ ಮಾಡಲಾಗಿದೆಯಾ ಎಂದು ಪ್ರಶ್ನಿಸಿದ್ದ.

    ಈ ಪ್ರಶ್ನೆಗೆ ಉತ್ತರಿಸಲು ಇಷ್ಟಪಡದ ಮಿಸ್ಬಾ, ನಮಗೇಕೆ ಕಾಶ್ಮೀರದ ವಿಚಾರದ ಕುರಿತು ಪ್ರಶ್ನೆ ಕೇಳುತ್ತಿದ್ದೀರಿ. ಇಲ್ಲಿ ಕೇವಲ ಕ್ರಿಕೆಟ್ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಿ. ಕ್ರಿಕೆಟ್ ಬಗ್ಗೆ ಮಾತ್ರ ಮಾತನಾಡಲು ನಾವು ಇಲ್ಲಿ ಬಂದಿದ್ದೇವೆ ಎಂದಿದ್ದಾರೆ. ಬರೋಬ್ಬರಿ 10 ವರ್ಷಗಳ ಬಳಿಕ ಕರಾಚಿಯಲ್ಲಿ ಶ್ರೀಲಂಕಾ ವಿರುದ್ಧ ಪಂದ್ಯವಾಡಲು ಸಿದ್ಧವಾಗಿತ್ತು. ಆದರೆ ಮಳೆಯ ಕಾರಣ ಟೂರ್ನಿ ಮೊದಲ ಪಂದ್ಯ ರದ್ದಾಗಿದೆ.

    370ನೇ ವಿಧಿಯನ್ನು ರದ್ದು ಮಾಡಿದ ಬಳಿಕ ಪಾಕಿಸ್ತಾನ ಹಲವು ಕ್ರಿಕೆಟರ್ ಗಳು ಭಾರತದ ನಡೆಯ ವಿರುದ್ಧ ಟೀಕೆ ಮಾಡಿದ್ದರು. ಅಲ್ಲದೇ ಈ ಅಂಶವನ್ನು ಮುಂದಿಟ್ಟುಕೊಂಡು ವಿಶ್ವ ರಾಷ್ಟ್ರಗಳ ಗಮನವನ್ನು ಸೆಳೆಯಲು ಯತ್ನಿಸಿದ್ದ ಪಾಕ್‍ನ ಕುತಂತ್ರ ಕೂಡ ವಿಫಲವಾಗಿತ್ತು.

  • ಹೊಟ್ಟೆಕಿಚ್ಚಿನಿಂದ ‘ಹೌಡಿ ಮೋದಿ’ ಫ್ಲಾಪ್ ಶೋ ಎಂದ ಪಾಕ್

    ಹೊಟ್ಟೆಕಿಚ್ಚಿನಿಂದ ‘ಹೌಡಿ ಮೋದಿ’ ಫ್ಲಾಪ್ ಶೋ ಎಂದ ಪಾಕ್

    ಇಸ್ಲಾಮಾಬಾದ್: ಭಾನುವಾರ ಅಮೆರಿಕದ ಹ್ಯೂಸ್ಟನ್ ನಗರದ ಎನ್‍ಆರ್ ಜಿ ಕ್ರೀಡಾಂಗಣದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಆದರೆ ನೆರೆಯ ಪಾಕಿಸ್ತಾನ ಹೊಟ್ಟೆಕಿಚ್ಚಿನಿಂದ ಹತಾಶೆ ತಾಳಲಾರದೆ ಈ ಕಾರ್ಯಕ್ರಮ ಫ್ಲಾಪ್ ಶೋ ಎಂದಿದೆ.

    ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಚೌಧರಿ ಅವರು ‘ಹೌಡಿ ಮೋದಿ’ ಕಾರ್ಯಕ್ರಮವನ್ನು ಫ್ಲಾಪ್ ಶೋ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಮತ್ತು ‘ಹೌಡಿ ಮೋದಿ’ ಯಶಸ್ವಿ ಕಾರ್ಯಕ್ರಮವನ್ನು ಕಂಡು ಹೊಟ್ಟೆ ಉರಿದುಕೊಂಡು ಈ ರೀತಿ ಟ್ವೀಟ್ ಮಾಡಿ ಪಾಕಿಸ್ತಾನ ಸಚಿವ ತಮ್ಮ ಹತಾಶೆ ಹೊರಹಾಕಿದ್ದಾರೆ. ಇದನ್ನೂ ಓದಿ:ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಮೋದಿಯ ಪ್ರದರ್ಶನ ನಿರಾಶದಾಯಕವಾಗಿದೆ. ಬಿಲಿಯನ್‍ಗಳಷ್ಟು ಹಣ ಖರ್ಚು ಮಾಡಿ ಅಮೆರಿಕಾ, ಕೆನಡಾ ಮತ್ತು ಇತರೆ ಹಲವು ದೇಶಗಳಿಂದ ಕಾರ್ಯಕ್ರಮಕ್ಕೆ ಜನರನ್ನು ಒಟ್ಟುಗೂಡಿಸಲಾಗಿದೆ ಅಷ್ಟೆ. ಹಣದಿಂದ ಎಲ್ಲವನ್ನು ಖರೀದಿಸಲು ಆಗುವುದಿಲ್ಲ ಎನ್ನುವುದನ್ನು ಇದು ನಿರೂಪಿಸಿದೆ ಎಂದು ಬರೆದು #ModiJanta ಮತ್ತು #ModiInHouston ಹ್ಯಾಷ್‍ಟ್ಯಾಗ್ ಜೊತೆಗೆ ಫವಾದ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಮತ್ತೆ ಅಮೆರಿಕದಲ್ಲಿ ಇಮ್ರಾನ್ ಖಾನ್‍ಗೆ ಭಾರೀ ಮುಖಭಂಗ

    ಈ ಟ್ವೀಟ್ ಈಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಫವಾದ್ ಅವರ ಟ್ವೀಟ್‍ಗೆ ರೀ-ಟ್ವೀಟ್ ಮಾಡಿ ಭಾರತೀಯರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಮೂರ್ಖತನದ ಮಾತನ್ನು ನಂಬಲು ಪಾಕಿಸ್ತಾನದ ಪ್ರಜೆಗಳು ಮೂರ್ಖರಲ್ಲ. ಅವರು ನಿಮ್ಮನ್ನು ನಂಬಲ್ಲ. ಸುಳ್ಳು ಸುದ್ದಿಯ ವಿಡಿಯೋ ಇಟ್ಟುಕೊಂಡು ಮಾತನಾಡಬೇಡಿ. ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಜನಸಾಗರ ಹೇಗಿದೆ ನೋಡಿ ಎಂದು ಕಾರ್ಯಕ್ರಮದ ವಿಡಿಯೋ ರೀ-ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.

    https://twitter.com/pooja35956823/status/1175799771971252224

    ಹೌಡಿ ಮೋದಿ ಕಾರ್ಯಕ್ರಮದಲ್ಲಿ ಇತರೆ ದೇಶದ ಪ್ರಜೆಗಳನ್ನು ಹೊರತುಪಡಿಸಿ ಅನಿವಾಸಿ ಭಾರತೀಯರೇ ಬರೋಬ್ಬರಿ 50 ಸಾವಿರ ಮಂದಿ ಸೇರಿದ್ದರು. ಮೋದಿ ಜನಪ್ರಿಯತೆ ಏನು ಎಂದು ಇದನ್ನು ನೋಡಿದರೆ ಗೊತ್ತಾಗುತ್ತೆ ಎಂದು ನೆಟ್ಟಿಗರು ಪಾಕ್ ಸಚಿವರಿಗೆ ಟಾಂಗ್ ಕೊಟ್ಟಿದ್ದಾರೆ.

  • ಪಾಕ್ ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿ ಶವ ಪತ್ತೆ

    ಪಾಕ್ ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿ ಶವ ಪತ್ತೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಿಂದೂ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ಈಗ ಪಾಕಿನ ಸಿಂಧ್ ಪ್ರಾಂತ್ಯದಲ್ಲಿನ ಕಾಲೇಜು ಹಾಸ್ಟೆಲ್‍ನಲ್ಲಿ ಹಿಂದೂ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

    ಘೋಟ್ಕಿಯ ಮಿರ್ಪುರ್ ಮ್ಯಾಥೆಲೊ ನಿವಾಸಿ ನಮೃತಾ ಚಂದಾನಿ ಮೃತ ದುರ್ದೈವಿ. ಬಲವಂತವಾಗಿ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸುವ ಹಿನ್ನೆಲೆ ಈ ಕೊಲೆ ನಡೆದಿದೆ ಎಂದು ಶಂಕಿಸಲಾಗಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದನ್ನು ಪ್ರಾಥಮಿಕ ವರದಿಯಲ್ಲಿ ತಿಳಿಸುವುದು ಕಷ್ಟ ಎಂದು ಪೊಲೀಸರು ಹೇಳುತ್ತಿದ್ದಾರೆ. ಆದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ನಮೃತಾ ಕುಟುಂಬಸ್ಥರು ಆರೋಪಿಸಿದ್ದಾರೆ.

    ನಮೃತಾ ಬಿಬಿ ಆಸಿಫಾ ಡೆಂಟಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಳು. ನಮೃತಾಳ ಸ್ನೇಹಿತರು ಅವಳ ಕೋಣೆಯ ಬಾಗಿಲು ತಟ್ಟಿದರೂ ಆಕೆ ತೆಗೆಯದಿದ್ದಾಗ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಸ್ಥಳಕ್ಕೆ ಆಗಮಿಸಿದ ಬಳಿಕ ಬಾಗಿಲು ಮುರಿದು ಕೋಣೆಗೆ ಹೋದಾಗ, ಹಾಸಿಗೆಯ ಮೇಲೆ ಕುತ್ತಿಗೆಗೆ ಹಗ್ಗ ಸುತ್ತಿದ್ದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸದ್ಯ ವಿದ್ಯಾರ್ಥಿನಿಯ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಕೆಲವು ದಿನಗಳ ಹಿಂದೆ ಹಿಂದೂಗಳ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ ಸಿಂಧ್‍ನ ಘೋಟ್ಕಿ ಪ್ರದೇಶದಲ್ಲಿ ಹಿಂಸಾಚಾರ ನಡೆದಿತ್ತು. ಸೆಪ್ಟೆಂಬರ್ 15 ರಂದು ಘೋಟ್ಕಿಯಲ್ಲಿಯೇ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸ ಮಾಡಲಾಗಿತ್ತು.

  • ಮುಂದಿನ ಪ್ರಧಾನಿ ಅಫ್ರಿದಿ – ಪಾಕಿಸ್ತಾನದಲ್ಲಿ ಬಿಸಿ ಬಿಸಿ ಚರ್ಚೆ

    ಮುಂದಿನ ಪ್ರಧಾನಿ ಅಫ್ರಿದಿ – ಪಾಕಿಸ್ತಾನದಲ್ಲಿ ಬಿಸಿ ಬಿಸಿ ಚರ್ಚೆ

    ಇಸ್ಲಾಮಾಬಾದ್: ಪಾಕಿಸ್ತಾನದ ಸೇನಾ ವಕ್ತಾರ, ಡಿಜಿ ಐಎಸ್‍ಪಿಆರ್ ಆಸಿಫ್ ಗಫೂರ್ ಹಾಗೂ ಕ್ರಿಕೆಟರ್ ಶಾಹೀದ್ ಅಫ್ರಿದಿ ಬಿಗಿದಪ್ಪಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮುಂದಿನ ಪಾಕ್ ಪ್ರಧಾನಿಯಾಗಾಲಿದ್ದಾರಾ ಎನ್ನುವ ಪ್ರಶ್ನೆಯನ್ನು ಇಟ್ಟುಕೊಂಡು ಚರ್ಚೆಯಾಗುತ್ತಿದೆ.

    ಸಾಮಾಜಿಕ ಜಾಲತಾಣದ ಟ್ವಿಟ್ಟರಿನಲ್ಲಿ ಇಬ್ಬರು ತಬ್ಬಿಕೊಂಡಿರುವ ಫೋಟೋವನ್ನು ಶೇರ್ ಮಾಡಿರುವ ಪಾಕಿಸ್ತಾನದ ಮಾನವ ಹಕ್ಕುಗಳ ಹೋರಾಟಗಾರ್ತಿ ನಿಡಾ ಖಾನ್, ಮುಂದಿನ ಪ್ರಧಾನಿಗೆ ವೇದಿಕೆ ಸಿದ್ದವಾಗುತ್ತಿದ್ಯಾ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಅಫ್ರಿದಿ ಹೇಳಿದ್ದು ಸರಿ, ಕಾಶ್ಮೀರ ಎಂದಿಗೂ ಭಾರತದದ್ದೇ: ರಾಜನಾಥ್ ಸಿಂಗ್

    ಮಹಿಳೆಯ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಹಲವು ಮಂದಿ, ಅಫ್ರಿದಿ ಪಾಕಿಸ್ತಾನದ ಮುಂದಿನ ಪ್ರಧಾನಿಯಾದರೆ ಶೀಘ್ರವೇ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಿಂದಿರುಗಿಸಲು ಮುಂದಾಗುತ್ತಾರೆ ಎಂದು ಹೇಳಿದ್ದಾರೆ.

    ಈ ಹಿಂದೆ ಹಲವು ಬಾರಿ ಕಾಶ್ಮೀರದ ಬಗ್ಗೆ ಮಾತನಾಡಿದ್ದ ಅಫ್ರಿದಿ, ಭಾರತ ಕಾಶ್ಮೀರದಲ್ಲಿ ಹಿಂಸೆ ನಡೆಸುತ್ತಿದ್ದು, ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಬಗೆ ಹರಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೇ ಇತ್ತೀಚೆಗಷ್ಟೇ ಮುಜಫರ್ ನಗರದಲ್ಲಿ ನಡೆಸಲಾಗಿದ್ದ ಸಮಾವೇಶದಲ್ಲಿ ಆಫ್ರಿದಿ ಭಾಗಿಯಾಗಿ ಭಾಷಣ ಕೂಡ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪರಿಣಾಮ ಇಮ್ರಾನ್ ಖಾನ್‍ರಂತೆಯೇ ಅಫ್ರಿದಿ ಕೂಡ ಅಧಿಕಾರಕ್ಕೆ ಬರಲು ಸೇನೆಯ ಸಂಬಂಧ ಬೆಳೆಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದರು. ಇದನ್ನು ಓದಿ: ಪಿಓಕೆ ಸಮಸ್ಯೆಯನ್ನ ನಾವೇ ಇತ್ಯರ್ಥಗೊಳಿಸುತ್ತೇವೆ – ಅಫ್ರಿದಿಗೆ ಗಂಭೀರ್ ತಿರುಗೇಟು

    ಪಾಕಿಸ್ತಾನದಲ್ಲಿ ಸೇನೆಯೂ ಸರ್ಕಾರದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದು ಈ ಹಿಂದಿನಿಂದಲೂ ಸೇನೆ ಯಾವ ಪಕ್ಷಕ್ಕೆ ಬೆಂಬಲ ನೀಡುತ್ತದೆಯೋ ಆ ಪಕ್ಷ ಗೆಲುವು ಪಡೆಯುತ್ತಾ ಬಂದಿದೆ. ಇಮ್ರಾನ್ ಖಾನ್ ಕೂಡ ಚುನಾವಣೆಯ ಸಂದರ್ಭದಲ್ಲಿ ಪಾಕ್ ಸೇನೆಯ ಮುಖ್ಯಸ್ಥರನ್ನು ಭೇಟಿ ಮಾಡಿದ್ದರು. ಪಾಕ್ ಸೇನೆ ಸಹ ಇಮ್ರಾನ್ ಖಾನ್ ಅವರನ್ನು ಬೆಂಬಲಿಸಿತ್ತು.

    ಭಾರತದ ವಿರುದ್ಧ ದ್ವೇಷಕಾರುವ ವ್ಯಕ್ತಿಗೆ ಪಾಕ್ ಸೇನೆ ಯಾವಾಗಲೂ ಬೆಂಬಲ ನೀಡುತ್ತದೆ. ಅಧಿಕಾರ ನಡೆಸಿ ಯಾವುದೇ ಅನುಭವ ಇಲ್ಲದೇ ಇದ್ದರೂ ಭಾರತದ ವಿರುದ್ಧ ದ್ವೇಷ ಕಾರುವ ವ್ಯಕ್ತಿತ್ವ ಇದ್ದರೆ ಅವರಿಗೆ ಪಾಕ್ ಪ್ರಧಾನಿ ಪಟ್ಟ ಖಾಯಂ. ಈ ಎಲ್ಲ ವಿಚಾರದಲ್ಲಿ ಆಫ್ರಿದಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದನ್ನು ಓದಿ: ಭಾರತ ಮನೋವೈದ್ಯರ ಬಳಿ ಕರೆದ್ಯೊಯುತ್ತೇನೆ – ಅಫ್ರಿದಿಗೆ ಗಂಭೀರ್ ಟಾಂಗ್

  • ಬೆಲ್ಲಿ ಡ್ಯಾನ್ಸರ್ಸ್ ಮೂಲಕ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿ ಟ್ರೋಲಾದ ಪಾಕ್

    ಬೆಲ್ಲಿ ಡ್ಯಾನ್ಸರ್ಸ್ ಮೂಲಕ ಹೂಡಿಕೆದಾರರನ್ನು ಸೆಳೆಯಲು ಮುಂದಾಗಿ ಟ್ರೋಲಾದ ಪಾಕ್

    ಇಸ್ಲಾಮಾಬಾದ್: ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಪಾಕಿಸ್ತಾನ `ಖೈಬರ್ ಫಾಖ್ತೂಂಕ್ವಾ ಇನ್ವೆಸ್ಟ್‌ಮೆಂಟ್‌ ಆಪರ್ಚುನಿಟೀಸ್ ಕಾನ್ಫರೆನ್ಸ್’ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳನ್ನು ಕರೆಸಿ ನೃತ್ಯ ಮಾಡಿಸುವ ಮೂಲಕ ಹೂಡಿಕೆದಾರರ ಸೆಳೆಯಲು ಪಾಕ್ ಮುಂದಾಗಿತ್ತು. ಪಾಕ್‍ನ ಈ ಹೊಸ ಪ್ರಯತ್ನ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೋಲ್ ಆಗುತ್ತಿದೆ.

    ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಪಾಕಿಸ್ತಾನ ತನ್ನ ವೆಚ್ಚ ಕಡಿತಕ್ಕೆ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸುದ್ದಿಯಾಗಿತ್ತು. ಆದರೆ ಈಗ ಬೆಲ್ಲಿ ಡ್ಯಾನ್ಸರ್‌ಗಳ ಮೂಲಕ ಮತ್ತೆ ಪಾಕ್ ನಗೆಪಾಟಲಿಗೆ ಕಾರಣವಾಗಿದೆ. ಹೊಸ ಪ್ರಯತ್ನಕ್ಕೆ ಕೈ ಹಾಕಿ ಮತ್ತೆ ಟ್ರೋಲ್ ಆಗುತ್ತಿದೆ. ಅಜರ್‌ಬೈಜಾನ್‌ನ ಬಾಕುವಿನಲ್ಲಿ ಸೆ.4 ರಿಂದ 8ರವರೆಗೆ ಪಾಕಿಸ್ತಾನ `ಖೈಬರ್ ಫಾಖ್ತೂಂಕ್ವಾ ಇನ್ವೆಸ್ಟ್‌ಮೆಂಟ್‌ ಆಪರ್ಚುನಿಟೀಸ್ ಕಾನ್ಫರೆನ್ಸ್’ ಆಯೋಜಿಸಲಾಗಿತ್ತು.

    ಈ ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸರ್‌ಗಳ ನೃತ್ಯ ಕಾರ್ಯಕ್ರಮ ಏರ್ಪಡಿಸಿ ಹೂಡಿಕೆದಾರರನ್ನು ಸೆಳೆಯಲು ಪ್ಲಾನ್ ಮಾಡಿತ್ತು. ಸಮಾವೇಶದ ನಡುವೆ ವೇದಿಕೆಯ ಮೇಲೆ ಬೆಲ್ಲಿ ಡ್ಯಾನ್ಸರ್‌ಗಳು ಸೊಂಟ ಬಳುಕಿಸಿ ಹೂಡಿಕೆದಾರ ಮನಗೆಲ್ಲಲು ಪ್ರಯತ್ನಿಸಿದರು. ಆದರೆ ಈ ಪ್ರಯತ್ನ ಹೂಡಿಕೆದಾರರ ಮನ ಗೆದ್ದಿತ್ತೋ ಇಲ್ಲ ಎಂಬುದು ತಿಳಿದಿಲ್ಲ. ಆದರೆ ಮತ್ತೆ ಪಾಕಿಸ್ತಾನವನ್ನು ಟ್ರೋಲ್ ಮಾಡಲು ಹೊಸ ವಿಷಯ ಸಿಕ್ಕಂತಾಗಿದೆ.

    ಸಮಾವೇಶದ ವೇದಿಕೆ ಮೇಲೆ ಡ್ಯಾನ್ಸರ್‌ಗಳು ಸಖತ್ ಸ್ಟಪ್ಸ್ ಹಾಕುತ್ತಿರುವ ವಿಡಿಯೋವನ್ನು ಪಾಕಿಸ್ತಾನದ ಪತ್ರಕರ್ತರೊಬ್ಬರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬೇರೆ ದೇಶದ ಕಥೆ ಹಾಗಿರಲಿ, ಸ್ವತಃ ಪಾಕಿಸ್ತಾನಿ ಪ್ರಜೆಯೇ ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವಂತೆ ಮುಖ್ಯ ಅರ್ಥಶಾಸ್ತ್ರಜ್ಞರು ವಿದೇಶಿ ಹೂಡಿಕೆದಾರರಿಗೆ ಬೆಲ್ಲಿ ಡ್ಯಾನ್ಸರ್‌ಗಳ ಮೂಲಕ ಆಮಿಷ ಒಡ್ಡುತ್ತಿದ್ದಾರೆ ಎಂದು ಟೀಕಿಸಿದ್ದರು.

    ಟ್ವಿಟ್ಟರ್‌ನಲ್ಲಿ ಅಪ್ಲೋಡ್ ಆಗಿದ್ದ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆರ್ಥಿಕವಾಗಿ ಕುಗ್ಗಿರುವ ಪಾಕಿಸ್ತಾನ ಈ ಹಿಂದೆ ಕತ್ತೆ, ಬೀದಿ ನಾಯಿಗಳನ್ನು ರಫ್ತು ಮಾಡುವ ವಿಚಿತ್ರ ಯೋಚನೆ ಮೂಲಕ ಟ್ರೋಲ್ ಆಗಿತ್ತು. ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿ ಪಾಕಿಸ್ತಾನವನ್ನು ಟೀಕಿಸಿದ್ದಾರೆ.

    https://twitter.com/_HarshKhare/status/1170598336841187328

    ನಯಾ ಪಾಕಿಸ್ತಾನಕ್ಕೆ ಹೂಡಿಕೆದಾರರಿಗೆ ಸ್ವಾಗತ, ಕತ್ತೆ, ನಾಯಿಯನ್ನು ಮಾರಾಟ ಮಾಡುವುದರಿಂದ ಹಿಡಿದು ಸಮಾವೇಶದಲ್ಲಿ ಬೆಲ್ಲಿ ಡ್ಯಾನ್ಸ್ ಕಾರ್ಯಕ್ರಮ ಏರ್ಪಡಿಸುವ ಮೂಲಕ ಪಾಕ್ ತನ್ನ ಆರ್ಥಿಕತೆ ಸರಿ ಮಾಡಿಕೊಳ್ಳಲು ನೋಡುತ್ತಿದೆ. ಹಾದಿ ತಪ್ಪಿರುವ ತನ್ನ ಆರ್ಥಿಕತೆಯನ್ನು ಸರಿದಾರಿಗೆ ತರಲು ಪಾಕಿಸ್ತಾನ ಚಿತ್ರ ವಿಚಿತ್ರ ಪ್ರಯತ್ನಕ್ಕೆ ಕೈ ಹಾಕುತ್ತಿದೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ಹೂಡಿಕೆದಾರರನ್ನು ಸೆಳೆಯಲು ಬೆಲ್ಲಿ ಡ್ಯಾನ್ಸಿಂಗ್ ಬಿಟ್ಟರೆ ಬೇರೆ ಯಾವುದೇ ದಾರಿ ಪಾಕ್ ಸರ್ಕಾರಕ್ಕೆ ಕಾಣುತ್ತಿಲ್ಲ ಎಂದು ಪಾಕ್ ಕಾಲೆಳೆಯುತ್ತ ವ್ಯಂಗ್ಯವಾಡಿದ್ದಾರೆ.

  • ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಪಾಠ ನೆನಪಿಲ್ಲ ಎಂದಿದ್ದಕ್ಕೆ ಶಿಕ್ಷಕನಿಂದ ಥಳಿತ – 10ನೇ ತರಗತಿ ಬಾಲಕ ಸಾವು

    ಇಸ್ಲಾಮಾಬಾದ್: ಪಾಠ ನೆನಪಿಲ್ಲ ಎಂದ 10ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕ ಹೊಡೆದಿದ್ದು, ಇದರಿಂದ ಬಾಲಕ ಮೃತಪಟ್ಟ ಘಟನೆ ಪಾಕಿಸ್ತಾನದ ಲಾಹೋರ್ ನ ಶಾಲೆಯೊಂದರಲ್ಲಿ ನಡೆದಿದೆ.

    ಶಿಕ್ಷಕ ಕ್ಲಾಸ್‍ನಲ್ಲಿ ವಿದ್ಯಾರ್ಥಿಗೆ ಪ್ರಶ್ನೆ ಕೇಳಿದ್ದಾನೆ. ಆದರೆ ವಿದ್ಯಾರ್ಥಿಗೆ ಶಿಕ್ಷಕ ಮಾಡಿದ ಪಾಠ ನೆನಪಿರಲಿಲ್ಲ. ಇದರಿಂದ ಕೋಪಗೊಂಡ ಶಿಕ್ಷಕ 10ನೇ ತರಗತಿ ವಿದ್ಯಾರ್ಥಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದು, ವಿದ್ಯಾರ್ಥಿ ಮೃತಪಟ್ಟಿದ್ದಾನೆ.

    ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ್ದಕ್ಕೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ.

    ತನ್ನ ಮಗನ ಸಾವನ್ನು ಕಂಡ ತಂದೆ ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೆ ನನ್ನ ಮಗನಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಫೀಸ್ ಕಟ್ಟದ ಕಾರಣ ಶಾಲೆ ಸಿಬ್ಬಂದಿ ನನ್ನ ಮಗನಿಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ತಂದೆ ದೂರು ನೀಡಿದ್ದಾರೆ.

  • ಕಾಶ್ಮೀರ ಬಿಟ್ಟು ದೇಶದ ಆರ್ಥಿತಕೆ ಬಗ್ಗೆ ಗಮನ ಕೊಡಿ- ಪಾಕ್ ಪ್ರಧಾನಿಗೆ 15ರ ಪೋರ ಸಲಹೆ

    ಕಾಶ್ಮೀರ ಬಿಟ್ಟು ದೇಶದ ಆರ್ಥಿತಕೆ ಬಗ್ಗೆ ಗಮನ ಕೊಡಿ- ಪಾಕ್ ಪ್ರಧಾನಿಗೆ 15ರ ಪೋರ ಸಲಹೆ

    ಇಸ್ಲಾಮಾಬಾದ್: ಕಾಶ್ಮೀರದ ವಿಚಾರ ಬಿಡಿ, ಹಳ್ಳ ಹಿಡಿದಿರುವ ನಮ್ಮ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಯೋಚನೆ ಮಾಡಿ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್‍ಗೆ ಪಾಕಿನ 15 ವರ್ಷದ ಬಾಲಕನೋರ್ವ ಸಲಹೆ ಕೊಟ್ಟಿದ್ದಾನೆ.

    ಭಾರತ ಜಾಗತಿಕವಾಗಿ ಪ್ರಭಾವವನ್ನು ಹೊಂದಿದೆ, ಆರ್ಥಿಕ ಪ್ರಗತಿಯಲ್ಲಿ ಪಾಕಿಸ್ತಾನಕ್ಕಿಂತ ಭಾರತ ಮುಂದಿದೆ. ಆರ್ಥಿಕತೆ ವಿಷಯದಲ್ಲಿ ಪಾಕಿಸ್ತಾನವನ್ನು ಭಾರತಕ್ಕೆ ಹೋಲಿಸಿದರೆ ಪರಿಗಣನೆಗೆ ಸಿಗದಷ್ಟು ಪಾಕ್ ಹಿಂದೆ ಉಳಿದಿದೆ. ಭಾರತಕ್ಕೆ ಸಮನಾಗಿ ತನ್ನ ಆರ್ಥಿಕತೆಯನ್ನು ಬಲಪಡಿಸುವವರೆಗೂ ಪಾಕಿಸ್ತಾನವು ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

    ಪಾಕಿಸ್ತಾನವು ಭಾರತದೊಂದಿಗೆ ವ್ಯಾಪಾರಿ ಅನಿವಾರ್ಯತೆ ಹೊಂದಿದೆ ಎನ್ನುವುದನ್ನು ದೇಶ ಅರ್ಥ ಮಾಡಿಕೊಳ್ಳಬೇಕು. ಇಡೀ ವಿಶ್ವದ ಮೇಲೆ ಭಾರತ ಪ್ರಭಾವ ಬೀರಿದೆ, ವ್ಯವಹಾರ ವಾಣಿಜ್ಯ ಕಾರಣಕ್ಕೆ ಭಾರತ ಇಡೀ ಪ್ರಪಂಚದ ಮೇಲೆ ಪ್ರಭಾವ ಬೀರಿದೆ. ಈ ಲಾಬಿ ಇಡೀ ಜಗತ್ತನ್ನು ಭಾರತದೊಂದಿಗೆ ಕರೆದೊಯ್ಯುತ್ತಿದೆ. ಎಲ್ಲಿಯವರೆಗೆ, ಪಾಕಿಸ್ತಾನದ ಆರ್ಥಿಕತೆಯು ಭಾರತದ ಆರ್ಥಿಕತೆಗೆ ಸಮನಾಗುವುದಿಲ್ಲವೋ, ಅಲ್ಲಿಯವರೆಗೆ ಪಾಕಿಸ್ತಾನ ಸಮಸ್ಯೆ ಬಗೆಹರಿಯಲ್ಲ. ಸಮಸ್ಯೆ ಬಗೆಹರಿಸಲು ಪಾಕ್ ಭಾರತದ ಸಮಾನವಾಗಿ ನಿಲ್ಲಲು ಸಾಧ್ಯವಾಗಲ್ಲ ಎಂದು ಹೇಳಿದ್ದಾನೆ.

    ಪಾಕಿಸ್ತಾನವು ಭಾರತವನ್ನು ಆರ್ಥಿಕವಾಗಿ ಹಿಂದಿಕ್ಕುವವರೆಗೆ ಕಾಶ್ಮೀರ ಸಮಸ್ಯೆ ಬಗೆಹರಿಯಲ್ಲ. ಹಾಗೆಯೇ ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಲ್ಲುವುದರ ಮೂಲಕ ಭಾರತದ ಕೋಪಕ್ಕೆ ಒಳಗಾಗಲು ಯಾವ ದೇಶ ಕೂಡ ಬಯಸುವುದಿಲ್ಲ. ನಮ್ಮ ದೇಶದ ಆರ್ಥಿಕತೆಯನ್ನು ಬಲಪಡಿಸಿದರೆ ಮಾತ್ರ ಕಾಶ್ಮೀರ ಸಮಸ್ಯೆ, ಸೇರಿದಂತೆ ನಮ್ಮ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತೆ ಎಂದು ಬಾಲಕ ಧೈರ್ಯದಿಂದ ಪ್ರಧಾನಿಗೇನೆ ಖಡಕ್ ಡೈಲಾಗ್ ಹೇಳಿ ತಿರುಗೇಟು ನೀಡಿದ್ದಾನೆ.

    ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ, ಪಾಕ್ ಪ್ರಧಾನಿಗೆ ಚಿಕ್ಕ ಹುಡುಗನು ಸಲಹೆ ಕೊಡುವಂತೆ ಆಯಿತು ಎಂದು ಎಲ್ಲೆಡೆ ಟ್ರೋಲ್ ಆಗುತ್ತಿದೆ. ಚಿಕ್ಕವಯಸ್ಸಿನಲ್ಲೇ ದೇಶದ ಬಗ್ಗೆ ಆಲೋಚಿಸಿದ ಬಾಕಲನ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ಪಾಕ್‍ನಲ್ಲಿ ಮತ್ತೊಬ್ಬಳು ಯುವತಿಯ ಅಪಹರಣ – ಬಲವಂತವಾಗಿ ಇಸ್ಲಾಂಗೆ ಮತಾಂತರ

    ಪಾಕ್‍ನಲ್ಲಿ ಮತ್ತೊಬ್ಬಳು ಯುವತಿಯ ಅಪಹರಣ – ಬಲವಂತವಾಗಿ ಇಸ್ಲಾಂಗೆ ಮತಾಂತರ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮತ್ತೊಬ್ಬಳು ಸಿಖ್ ಯುವತಿಯ ಅಪಹರಣ ಆಗಿದ್ದು, ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ.

    ಶನಿವಾರ ಸಿಖ್ ಯುವತಿ ರೇಣುಕಾ ಕುಮಾರಿಯನ್ನು ಅಪಹರಣ ಮಾಡಿ ಇಸ್ಲಾಂ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದ್ದಾರೆ. ಪಾಕಿಸ್ತಾನದಲ್ಲಿ ಹಿಂದೂಗಳ ಹಕ್ಕುಗಳಿಗಾಗಿ ಕೆಲಸ ಮಾಡುವ ಆಲ್ ಪಾಕಿಸ್ತಾನ ಹಿಂದೂ ಪಂಚಾಯತ್ ಸಂಸ್ಥೆ ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದೆ.

    ರೇಣುಕಾ ಅವರನ್ನು ಸಿಂಧ್ ಪ್ರಾಂತ್ಯದ ಸುಕ್ಕೂರ್ ನಲ್ಲಿ ಇರುವ ತನ್ನ ಕಾಲೇಜ್ ಇನ್‍ಸ್ಟಿಟ್ಯೂಟ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್(ಐಬಿಎ)ಯಿಂದ ಅಪಹರಿಸಲಾಗಿದೆ. ಅವರು ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ಓದುತ್ತಿದ್ದರು. ರೇಣುಕಾ ಅಗಸ್ಟ್ 29ರಂದು ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ವೇಳೆ ನಾಪತ್ತೆಯಾಗಿದ್ದಾಳೆ.

    ನನ್ನ ಸಹೋದರಿ ನನ್ನ ಜೊತೆ ಓದುತ್ತಿದ್ದ ಬಾಬರ್ ಅಮಾನ್‍ನನ್ನು ಪ್ರೀತಿಸುತ್ತಿದ್ದಳು. ಮದುವೆಯಾದ ನಂತರ ಇಬ್ಬರು ಈಗ ಸಿಯಾಲ್ಕೋಟ್‍ನಲ್ಲಿ ಇದ್ದಾರೆ ಎಂದು ರೇಣುಕಾ ಸಹೋದರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ರೇಣುಕಾ ಪಾಕಿಸ್ತಾನದ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಕಾರ್ಯಕರ್ತೆ ಮಿರ್ಜಾ ದಿಲಾವರ್ ಬೇಗ್ ಅವರ ಮನೆಯಲ್ಲಿ ಇದ್ದಾರೆ ಎಂದು ಮೂಲಗಳಿಂದ ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಪೊಲೀಸರು ಶನಿವಾರ ರಾತ್ರಿ ಅಮನ್ ಸಹೋದರನನ್ನು ಬಂಧಿಸಿದ್ದಾರೆ.

    ಕಳೆದ ಗುರುವಾರದಂದು ಯುವಕರ ಗುಂಪೊಂದು ಸಿಖ್ ಯುವತಿಯ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿಕೊಂಡಿದ್ದರು. ಈ ಪ್ರಕರಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆಯೇ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಪಂಜಾಬ್ ಪ್ರಾಂತ್ಯದ ನಂಕನಾ ಸಾಹಿಬ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಬಂಧಿಸಿದ್ದರು.

  • ಸೋದರನಿಂದಲೇ ಗಾಯಕಿ ಹತ್ಯೆ

    ಸೋದರನಿಂದಲೇ ಗಾಯಕಿ ಹತ್ಯೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಮರ್ಯಾದಾ ಹತ್ಯೆಯಾಗಿದ್ದು, ಪಾಸ್ತೋ ಗಾಯಕಿಯೊಬ್ಬರನ್ನು ಆಕೆಯ ಸಹೋದರನೇ ಕೊಲೆ ಮಾಡಿರುವ ಘಟನೆ ಉತ್ತರ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ನಡೆದಿದೆ.

    ಸ್ವಾತ್ ಜಿಲ್ಲೆಯ ಬಾನ್ರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗಾಯಕಿ ಸನಾಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು, ಸನಾಳನ್ನು ಆಕೆಯ ಸಹೋದರನೇ ಕೊಲೆ ಮಾಡಿದ್ದಾನೆ. ಘಟನೆಯ ನಂತರ ಆತ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

    ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಖಚಿತವಾಗಿ ತಿಳಿದು ಬಂದಿಲ್ಲ. ಸದ್ಯಕ್ಕೆ ಪೊಲೀಸರು ಗಾಯಕಿಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸೈದು ಷರೀಫ್ ಆಸ್ಪತ್ರೆಗೆ ರವಾನಿಸಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

    ಉತ್ತರ ಖೈಬರ್ ಪಖ್ತುಂಖ್ವಾ ಪಾಸ್ತೋ ಗಾಯಕರಿಗೆ ಎಂದೂ ಸುರಕ್ಷಿತ ಸ್ಥಳವಾಗಿಲ್ಲ. ಏಕೆಂದರೆ ಅನೇಕ ಮಹಿಳಾ ಗಾಯಕರನ್ನು ಅವರ ಸಂಬಂಧಿಕರೇ ಕೊಲೆ ಮಾಡಿದ್ದಾರೆ.  ಮೇ 7, 2019 ರಂದು ಸ್ಥಳೀಯ ಗಾಯಕಿ ಮೀನಾರನ್ನು ಸ್ವಾತ್‍ನಲ್ಲಿ ಕೊಲೆ ಮಾಡಲಾಗಿತ್ತು. ಮೀನಾರನ್ನು ಪತಿಯೇ ಕೊಲೆ ಮಾಡಲಾಗಿದೆ ಎಂದು ವರದಿಯಾಗಿತ್ತು.

  • ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್

    ಪಾಕ್‍ನಲ್ಲಿ ಅಪಹರಣ ಆಗಿದ್ದ ಸಿಖ್ ಯುವತಿ ವಾಪಾಸ್ – 8 ಮಂದಿ ಅರೆಸ್ಟ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಯುವಕರ ಗುಂಪೊಂದು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮದುವೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ.

    ಈ ಪ್ರಕರಣಕ್ಕೆ ಒತ್ತಡ ಹೆಚ್ಚುತ್ತಿದ್ದಂತೆಯೇ ಯುವತಿಯನ್ನು ಆಕೆಯ ಮನೆಗೆ ಕಳುಹಿಸಿದ್ದರು. ಪಂಜಾಬ್ ಪ್ರಾಂತ್ಯದ ನಂಕನಾ ಸಾಹಿಬ್ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿ ಆರೋಪಿಯನ್ನು ಬಂಧಿಸಿದ್ದಾರೆ. ಗುರುವಾರ ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪಾಕಿಸ್ತಾನದ ಜೊತೆ ಭಾರತದಲ್ಲೂ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಕೇಂದ್ರ ಸರ್ಕಾರ ಶುಕ್ರವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಸರ್ಕಾರದ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಿ ಎಂದು ಒತ್ತಾಯಿಸಿದೆ. ಇದನ್ನೂ ಓದಿ: ಪಾಕ್‍ನಲ್ಲಿ ಸಿಖ್ ಯುವತಿಯ ಕಿಡ್ನಾಪ್ – ಮತಾಂತರಗೊಳಿಸಿ ಬಲವಂತವಾಗಿ ಮದುವೆ

    ವರದಿಗಳ ಪ್ರಕಾರ, ಯುವತಿಯನ್ನು ಮದುವೆಯಾದ ಮೊಹಮ್ಮದ್ ಹಸನ್ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಸ್ ಸಯ್ಯದ್ ಸಂಘಟನೆಯಾದ ಜಮಾತ್ ಉದ್-ದವಾ ಸದಸ್ಯ ಎಂಬು ಹೇಳಲಾಗುತ್ತಿದೆ.

    ನಡೆದಿದ್ದೇನು?
    ಪಾಕಿಸ್ತಾನದಲ್ಲಿ ಯುವಕರ ಗುಂಪು ಸಿಖ್ ಯುವತಿಯನ್ನು ಅಪಹರಣ ಮಾಡಿ ಬಲವಂತವಾಗಿ ಮತಾಂತರಗೊಳಿಸಿ ಮದುವೆ ಮಾಡಿದ್ದಾರೆ. ಈ ವಿಷಯದ ಕುರಿತು ಯುವತಿಯ ಕುಟುಂಬಸ್ಥರು ಪ್ರಧಾನಿ ಇಮ್ರಾನ್ ಖಾನ್ ಅವರ ಮೊರೆ ಹೋಗಿದ್ದರು. ಗುರುವಾರ ಶಿರೋಮಣಿ ಅಕಾಲಿ ದಳ ಶಾಸಕ ಮಂಜಿಂದರ್ ಎಸ್ ಸಿರ್ಸಾ ಅವರು ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಯುವತಿಯ ಕುಟುಂಬಸ್ಥರು, ತನ್ನ ಸಹೋದರ ಹಾಗೂ ತಂದೆಯನ್ನು ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಸಿ ಯುವತಿಯನ್ನು ಬಲವಂತವಾಗಿ ಮತಾಂತರಗೊಳಿಸಿದ್ದಾರೆ ಎಂದು ಆರೋಪಿಸಿದ್ದರು.

    ಗುರುವಾರ ಅಪಹರಣ ಆದ ಯುವತಿ ನನ್ನ ಸಹೋದರಿ. ಇಸ್ಲಾಂ ಧರ್ಮವನ್ನು ಒಪ್ಪಲಿಲ್ಲ ಎಂದು ತನ್ನ ತಂದೆ ಹಾಗೂ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ ನನ್ನ ಸಹೋದರಿಯನ್ನು ಹಿಂತಿರುಗಿ ಕರೆದುಕೊಂಡು ಬರಲು ನಾನು ಪ್ರಧಾನಿ ಇಮ್ರಾನ್ ಖಾನ್ ಹಾಗೂ ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರ ಬಳಿ ಸಹಾಯ ಕೇಳುತ್ತೇನೆ ಎಂದು ಯುವತಿಯ ಸಹೋದರ ಮನ್‍ಮೋಹನ್ ಸಿಂಗ್ ಅವರು ವಿಡಿಯೋದಲ್ಲಿ ತಿಳಿಸಿದ್ದರು.