Tag: ireland

  • ಬೆಂಗಳೂರು ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ನಿಗೂಢ ಸಾವು

    ಬೆಂಗಳೂರು ಮೂಲದ ಮಹಿಳೆ, ಮಕ್ಕಳು ಐರ್ಲೆಂಡ್‌ನಲ್ಲಿ ನಿಗೂಢ ಸಾವು

    ಡಬ್ಲಿನ್‌: ಬೆಂಗಳೂರು ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಐರ್ಲೆಂಡಿನಲ್ಲಿ ಸಾವನ್ನಪ್ಪಿದ್ದಾರೆ.

    ಸೀಮಾ ಬಾನು(37), ಮಗಳು ಅಫ್ರಿಯಾ(11) ಮಗ ಫಜಾನ್‌(06) ದಕ್ಷಿಣ ಡಬ್ಲಿನ್‌ನಲ್ಲಿರುವ ಬ್ಯಾಲಿಂಟೀರ್ ಲೆವೆಲಿನ್ ಎಸ್ಟೇಟ್ ನಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.

    ಹಲವು ವರ್ಷಗಳ ಹಿಂದೆ ಸೀಮಾ ಬಾನು ಬೆಂಗಳೂರು ಅಥವಾ ಮೈಸೂರಿನಿಂದ ಡಬ್ಲಿನ್‌ಗೆ ಆಗಮಿಸಿದ್ದರು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

    ಇಬ್ಬರು ಮಕ್ಕಳು ಒಂದು ಕೊಠಡಿಯಲ್ಲಿ, ತಾಯಿಯ ಶವ ಮತ್ತೊಂದು ಕೊಠಡಿಯಲ್ಲಿ ಪತ್ತೆಯಾಗಿದೆ. ಇಬ್ಬರು ಮಕ್ಕಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಸೀಮಾ ಬಾನು ಸಾವನ್ನಪ್ಪಿದ್ದು ಹೇಗೆ ಎಂದು ತಿಳಿದು ಬಂದಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಪ್ರಕಟವಾಗಬೇಕಿದೆ.

    ಸಮೀಪದ ನಿವಾಸಿಗಳ ಜೊತೆ ಉತ್ತಮ ಸಂಬಂಧದಲ್ಲಿದ್ದ ಸೀಮಾ ಬುಧವಾರ ಯಾರಿಗೂ ಕಾಣಿಸಿರಲಿಲ್ಲ. ಹೀಗಾಗಿ ಅನುಮಾನ ಬಂದು ಸಮೀಪದ ನಿವಾಸಿಗಳು ಮನೆಗೆ ಬಂದು ವೀಕ್ಷಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಮೀಪದ ನಿವಾಸಿಗಳು ಬಳಿಕ ಸೀಮಾ ಪತಿಗೆ ವಿಚಾರ ತಿಳಿಸಿದ್ದಾರೆ.

    ಈ ವರ್ಷದ ಮೇ ತಿಂಗಳಿನಲ್ಲಿ ಸೀಮಾ ಮೇಲೆ ಹಲ್ಲೆ ನಡೆದಿತ್ತು. ವ್ಯಕ್ತಿಯೊಬ್ಬ ಇವರ ಮೇಲೆ ಹಲ್ಲೆ ಮಾಡಿದ್ದ. ಈ ಘಟನೆಯ ಬಳಿಕ ಸೀಮಾ ಅವರು ಕುಟುಂಬದ ಸುರಕ್ಷತೆಯ ಬಗ್ಗೆ ಭಯಗೊಂಡಿದ್ದರು ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಆತನೇ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಪ್ರಕರಣ ಸಂಬಂಧ ತನಿಖೆ ಆರಂಭಗೊಂಡಿದ್ದು ಪತಿ ಸಹಕಾರ ನೀಡುತ್ತಿದ್ದಾರೆ.

    https://twitter.com/iamemmaallen/status/1321721036883267586

    ಸೀಮಾ ಬಾನು ಮೃತರಾದ ಹಿನ್ನೆಲೆಯಲ್ಲಿ ನಿವಾಸಿಗಳು ಮೊಂಬತ್ತಿ ಹೊತ್ತಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  • ಭರ್ಜರಿ ಸಿಕ್ಸರ್ ಚಚ್ಚಿ ತನ್ನ ಕಾರಿನ ಗ್ಲಾಸ್ ತಾನೇ ಒಡೆದ ಕೆವಿನ್ ಒಬ್ರಿಯಾನ್

    ಭರ್ಜರಿ ಸಿಕ್ಸರ್ ಚಚ್ಚಿ ತನ್ನ ಕಾರಿನ ಗ್ಲಾಸ್ ತಾನೇ ಒಡೆದ ಕೆವಿನ್ ಒಬ್ರಿಯಾನ್

    ಡಬ್ಲಿನ್: ಐರ್ಲೆಂಡ್‍ನ ದೈತ್ಯ ಬ್ಯಾಟ್ಸ್‍ಮ್ಯಾನ್ ಕೆವಿನ್ ಒಬ್ರಿಯಾನ್ ಸಿಕ್ಸ್ ಚಚ್ಚುವ ಮೂಲಕ ತನ್ನ ಕಾರಿನ ಗ್ಲಾಸನ್ನು ಒಡೆದು ಹಾಕಿದ್ದಾರೆ.

    ಐರ್ಲೆಂಡ್ ಸ್ಫೋಟಕ ಆಲ್‍ರೌಂಡರ್ ಕೆವಿನ್ ಒಬ್ರಿಯಾನ್, ಸಿಕ್ಸ್ ಚಚ್ಚುವುದರಲ್ಲಿ ಎತ್ತಿದ ಕೈ. ಕೆವಿನ್ ಹೊಡೆದ ಸಿಕ್ಸ್ ಗಳು ಮೈದಾನದ ಆಚೆಗೂ ಹೋಗುತ್ತವೆ. ಈಗ ಸದ್ಯ ಕೆವಿನ್ ಒಬ್ರಿಯಾನ್ ಐರ್ಲೆಂಡ್‍ಮಲ್ಲಿ ನಡೆಯುತ್ತಿರುವ ಅಂತರ ಪ್ರಾಂತೀಯ ಟಿ-20 ಟೂರ್ನಿಯನ್ನು ಆಡುತ್ತಿದ್ದಾರೆ.

    ಡಬ್ಲಿನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆವಿನ್ ಭರ್ಜರಿಯಾಗಿ ಬ್ಯಾಟ್ ಬೀಸಿದ್ದರು. ಈ ಪಂದ್ಯದಲ್ಲಿ ಅವರು ಕೇವಲ 37 ಬಾಲಿಗೆ ಬರೋಬ್ಬರಿ 82 ರನ್ ಗಳಿಸಿದ್ದರು. ಇದರಲ್ಲಿ ಎಂಟು ಭರ್ಜರಿ ಸಿಕ್ಸರ್ ಕೂಡ ಸೇರಿದ್ದವು. ಈ ಸಿಕ್ಸರ್ ಗಳಲ್ಲಿ ಒಂದು ಮೈದಾನದಿಂದ ಆಚೆಗೆ ಹೋಗಿತ್ತು. ಈ ಚೆಂಡು ನೇರವಾಗಿ ಹೋಗಿ ಪಾರ್ಕಿಂಗ್ ಏರಿಯಾದಲ್ಲಿ ನಿಂತಿದ್ದ ಕೆವಿನ್ ಒಬ್ರಿಯಾನ್ ಅವರ ಹಿಂಬದಿಯ ಗ್ಲಾಸ್ ಅನ್ನು ಒಡೆದು ಹಾಕಿದೆ.

    ಕಾರಿನ ಫೋಟೋವನ್ನು ಟ್ವೀಟ್ ಮಾಡಿರುವ ಐರ್ಲೆಂಡ್ ಕ್ರಿಕೆಟ್ ತಂಡ, ಕೆವಿನ್ ಒಬ್ರಿಯಾನ್ ಅವರು ಸಿಕ್ಸ್ ಹೊಡೆದ ಬಾಲು ಅವರ ಕಾರಿನ ಗ್ಲಾಸ್ ಅನ್ನು ಒಡೆಯಿತು ಎಂದು ಬರೆದುಕೊಂಡಿದೆ. ಇದನ್ನು ರೀಟ್ವೀಟ್ ಮಾಡಿರುವ ಕೆವಿನ್, ಈಗ ನನ್ನ ಕಾರಿಗೆ ಎಸಿಯೇ ಬೇಕಾಗಿಲ್ಲ. ಹಾಗೇ ಡ್ರೈವ್ ಮಾಡಬಹುದು. ನನಗೆ ಇದರಿಂದ ಬೇಜಾರಿಲ್ಲ. ಇನ್ನೊಮ್ಮೆ ಕಾರನ್ನು ಸರಿ ಮಾಡಿಸುತ್ತೇನೆ. ಮುಂದಿನ ದಿನದಲ್ಲಿ ಕಾರನ್ನು ಬೇರೆ ಕಡೆ ಪಾರ್ಕ್ ಮಾಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಕಿವಿನ್ ಒಬ್ರಿಯಾನ್ ಅವರನ್ನು ಭಾರತದ ಕ್ರೀಡಾಭಿಮಾನಿಗಳು ಮರೆಯುವಂತಿಲ್ಲ. ಏಕೆಂದರೆ 2011ರಲ್ಲಿ ನಡೆದ ವಿಶ್ವಕಪ್‍ನಲ್ಲಿ ಕೆವಿನ್ ವೇಗದ ಶತಕ ಸಿಡಿಸಿ ಸುದ್ದಿಯಾಗಿದ್ದರು. ಅಂದು ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಐರ್ಲೆಂಡ್‍ಗೆ 327 ರನ್‍ಗಳ ದೊಡ್ಡ ಟಾರ್ಗೆಟ್ ನೀಡಿತ್ತು. ಅಂದು ಐರ್ಲೆಂಡ್ ಗೆಲ್ಲುತ್ತದೆ ಎಂದು ಯಾರೂ ಊಸಿರಲಿಲ್ಲ. ಅಂದಿನ ಪಂದ್ಯದಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸಿದ್ದ ಕೆವಿನ್ 63 ಎಸೆತಗಳಲ್ಲಿ 113 ರನ್ ಗಳಿಸಿ ತಂಡಕ್ಕೆ 3 ವಿಕೆಟ್‍ಗಳ ಜಯವನ್ನು ತಂದುಕೊಟ್ಟಿದ್ದರು.

  • ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಜೆಸಿಬಿ ನುಗ್ಗಿಸಿ ಗೋಡೆ ಒಡೆದು ಎಟಿಎಂ ಯಂತ್ರವನ್ನೇ ಕಾರಿಗೆ ತುಂಬಿಸಿದ್ರು

    ಡಬ್ಲಿನ್: ಎಟಿಎಂಗೆ ಕಳ್ಳರು ನುಗ್ಗಿ ಯಂತ್ರವನ್ನು ಹೊತ್ತುಕೊಂಡು ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಕಳ್ಳರು ಮತ್ತಷ್ಟು ಮುಂದುವರಿದಿದ್ದು ಜೆಸಿಬಿಯನ್ನೇ ಎಟಿಎಂಗೆ ನುಗ್ಗಿಸಿ ಕಳ್ಳತನ ಮಾಡಿದ್ದಾರೆ.

    ಐರ್ಲೆಂಡಿನ ಖತರ್ನಾಕ್ ಕಳ್ಳರು ಜೆಸಿಬಿ, ಕಾರು ಬಳಸಿಕೊಂಡು ಎಟಿಎಂ ಯಂತ್ರವನ್ನು ಕದ್ದಿದ್ದಾರೆ. ಎಟಿಎಂ ಯಂತ್ರವನ್ನು ಕದಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/RT_com/status/1183553004227706880

    ಕದ್ದಿದ್ದು ಹೇಗೆ?
    ಮುಸುಕುಧಾರಿ ಕಳ್ಳರ ಗುಂಪೊಂದು ಜೆಸಿಬಿ ಮೂಲಕ ಮೊದಲು ಗ್ಯಾಸ್ ಸ್ಟೇಷನ್ನಿನ ಗೋಡೆಯನ್ನು ಬೀಳಿಸಿದ್ದಾರೆ. ಬಳಿಕ ಅದರೊಳಗಿದ್ದ ಎಟಿಎಂ ಯಂತ್ರವನ್ನು ಜೆಸಿಬಿ ಮೂಲಕ ಎತ್ತಿದ್ದಾರೆ. ನಂತರ ಅಲ್ಲೇ ಸಿದ್ಧವಾಗಿ ನಿಂತುಕೊಂಡಿದ್ದ ಕಾರಿಗೆ ಯಂತ್ರವನ್ನು ತುಂಬಿಸಿದ್ದಾರೆ.

    ಕಳ್ಳರು ಎಟಿಎಂ ಯಂತ್ರ ತುಂಬಲೆಂದೇ ಕಾರನ್ನು ವಿಶೇಷವಾಗಿ ವಿನ್ಯಾಸ ಮಾಡಿಕೊಂಡು ಬಂದಿದ್ದರು. ಕಾರಿನ ಸನ್ ರೂಫ್ ಜಾಗವನ್ನು ಎಟಿಎಂ ಯಂತ್ರ ಒಳ ಹೋಗುವಷ್ಟು ದೊಡ್ಡದಾಗಿ ವಿನ್ಯಾಸ ಮಾಡಿದ್ದರು. ಫಿಲ್ಮಿ ಸ್ಟೈಲ್ ಕಳ್ಳತನದ ಸಂಪೂರ್ಣ ವಿಡಿಯೋ ಪಕ್ಕದ ಕಟ್ಟಡದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಟೆಸ್ಟ್ ಕ್ರಿಕೆಟ್: 38 ರನ್ನಿಗೆ ಆಲೌಟ್ – ಐರ್ಲೆಂಡ್ ಕನಸು ಭಗ್ನ

    ಲಾರ್ಡ್ಸ್: ಇಂಗ್ಲೆಂಡ್ ತಂಡವನ್ನು ಸೋಲಿಸಿ ಇತಿಹಾಸ ರಚಿಸುವ ಮಹದಾಸೆಯಲ್ಲಿದ್ದ ಐರ್ಲೆಂಡ್ ತಂಡದ ಕನಸು ನುಚ್ಚುನೂರಾಗಿದೆ. ಲಾರ್ಡ್ಸ್ ನಲ್ಲಿ ನಡೆದ ಏಕೈಕ ಟೆಸ್ಟ್ ನ ಮೂರನೇ ದಿನವಾದ ಶುಕ್ರವಾರ ನೆರೆಯ ರಾಷ್ಟ್ರವನ್ನು ಕೇವಲ 38 ರನ್ನಿಗೆ ಆಲೌಟ್ ಮಾಡಿದ ಇಂಗ್ಲೆಂಡ್ ಪಂದ್ಯವನ್ನು 143 ರನ್‍ಗಳ ಆಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ ಕೇವಲ 85 ರನ್‍ಗೆ ಆಲೌಟ್ ಆಗಿದ್ದ ಐರ್ಲೆಂಡ್ 2ನೇ ಇನ್ನಿಂಗ್ಸ್ ನಲ್ಲಿ ನಿರಾಸೆ ಅನುಭವಿಸಿತ್ತು. ಇತ್ತ 2ನೇ ಇನ್ನಿಂಗ್ಸ್ ನಲ್ಲಿ ಕಮ್ ಬ್ಯಾಕ್ ಮಾಡಿದ ಇಂಗ್ಲೆಂಡ್ ತಂಡ ಜ್ಯಾಕ್ ಲೀಚ್ 92 ರನ್, ಜೇಸನ್ ರಾಯ್ 72 ರನ್ ಗಳ ನೆರವಿನಿಂದ 303 ರನ್ ಗಳಿಸಿತು. ಎರಡನೇ ದಿನದ ಕೊನೆಗೆ 9 ವಿಕೆಟ್‍ಗೆ 303 ರನ್ ಗಳಿಸಿದ್ದ ಇಂಗ್ಲೆಂಡ್ ಶುಕ್ರವಾರ ಮೊದಲ ಎಸೆತದಲ್ಲೇ ಆಲೌಟ್ ಆಯಿತು.

    ಪರಿಣಾಮ ಗೆಲ್ಲಲು 182 ರನ್‍ಗಳ ಗುರಿಹೊಂದಿದ್ದ ಐರ್ಲೆಂಡ್ ತಂಡ ವೋಕ್ಸ್ 6 ವಿಕೆಟ್ ಮತ್ತು ಬ್ರಾಡ್ 4 ವಿಕೆಟ್ ದಾಳಿಗೆ ಸಿಲುಕಿ 15.4 ಓವರ್ ಗಳಲ್ಲೇ 38 ರನ್‍ಗೆ ಪತನಗೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ 5ನೇ ಅತಿ ಕನಿಷ್ಠ ಮೊತ್ತವಾಗಿದ್ದು, 1955 ರಲ್ಲಿ ಇಂಗ್ಲೆಂಡ್ ವಿರುದ್ಧ ಕಿವೀಸ್ ತಂಡ 26 ರನ್ನಿಗೆ ಆಲೌಟ್ ಆಗಿತ್ತು.

  • ವಿಶ್ವಕಪ್ ಗೆದ್ದ 10 ದಿನಗಳ ಬೆನ್ನಲ್ಲೇ 85 ರನ್‍ಗಳಿಗೆ ಇಂಗ್ಲೆಂಡ್ ಆಲೌಟ್

    ವಿಶ್ವಕಪ್ ಗೆದ್ದ 10 ದಿನಗಳ ಬೆನ್ನಲ್ಲೇ 85 ರನ್‍ಗಳಿಗೆ ಇಂಗ್ಲೆಂಡ್ ಆಲೌಟ್

    – ವಿಶ್ವಕಪ್ ವಿಜೇತರಿಗೆ ಶಾಕ್ ಕೊಟ್ಟ ಐರ್ಲೆಂಡ್

    ಲಾರ್ಡ್ಸ್: 2019 ಏಕದಿನ ವಿಶ್ವಕಪ್ ವಿಜೇತವಾಗಿ ಹೊರಹೊಮ್ಮಿದ ಇಂಗ್ಲೆಂಡ್ ತಂಡ ಐರ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆಗುವ ಮೂಲಕ ಮುಖಭಂಗ ಅನುಭವಿಸಿದೆ.

    ಲಾರ್ಡ್ಸ್ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಎದುರಾಳಿ ತಂಡದ ಟೀಮ್ ಮುರ್ತಾ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಕೇವಲ 23.4 ಓವರ್ ಗಳಲ್ಲಿ ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 85 ರನ್ ಗಳಿಗೆ ಆಲೌಟ್ ಆಯ್ತು. ಇನ್ನಿಂಗ್ಸ್ ನಲ್ಲಿ ಟೀಮ್ ಮುರ್ತಾ 5 ವಿಕೆಟ್ ಪಡೆದು ಇಂಗ್ಲೆಂಡ್ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು.

    ಇಂಗ್ಲೆಂಡ್ ತಂಡದ ಪರ ಜೋ ಡೆನ್ಲಿ 23 ರನ್, ಸ್ಯಾಮ್ ಕರ್ರನ್ 18 ರನ್, ಸ್ಟೋನ್ 19 ರನ್ ಗಳಿಸಿದ್ದು ಬಿಟ್ಟರೆ ಬೇರಾವ ಆಟಗಾರ ಕೂಡ ಎರಡಂಕಿ ಮೊತ್ತ ದಾಟಲಿಲ್ಲ. ತಂಡದ ನಾಯಕ ಜೋ ರೂಟ್ 2 ರನ್ ಗಳಿಸಿ ಔಟಾದರೆ, ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಜೇಸನ್ ರಾಯ್ 5 ರನ್ ಗಳಿಸಿದರು. ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿ ಬ್ಯಾಟಿಂಗ್ ಆರಂಭಿಸಿರುವ ಐರ್ಲೆಂಡ್ ತಂಡ 32 ರನ್ ಗಳಿಗೆ 1 ವಿಕೆಟ್ ಕಳೆದುಕೊಂಡು ಬ್ಯಾಟಿಂಗ್ ಆಯ್ದುಕೊಂಡಿದೆ.

    ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಇಂಗ್ಲೆಂಡ್ ತಂಡ ಇದೇ ಮೊದಲ ಬಾರಿಗೆ ಪಂದ್ಯದ ಆರಂಭದ ದಿನದ ಭೋಜನ ವಿರಾಮದ ಅವಧಿಗೂ ಮುನ್ನವೇ ಆಲೌಟ್ ಆಗಿದೆ. 1997ರ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಬಳಿಕ ತವರು ನೆಲದಲ್ಲಿ ಗಳಿಸಿದ ಅತಿ ಕನಿಷ್ಠ ಮೊತ್ತ ಇದಾಗಿದೆ. ಅಂದಹಾಗೇ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ವೊಂದರಲ್ಲಿ ಇಂಗ್ಲೆಂಡ್ ತಂಡ ಗಳಿಸಿದ ಕನಿಷ್ಠ ಮೊತ್ತ 45 ರನ್ ಆಗಿದ್ದು, 1887ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಟೆಸ್ಟ್ ನಲ್ಲಿ 45 ರನ್‍ಗಳಿಗೆ ಆಲೌಟಾಗಿತ್ತು.

    ಏಕದಿನ ಕ್ರಿಕೆಟ್‍ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಐರ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್‍ನಲ್ಲಿ ದೊರೆತ ಅವಕಾಶದಲ್ಲಿ ಉತ್ತಮ ಸಾಧನೆ ಮಾಡಿದೆ. ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕೈಕ್ ಟೆಸ್ಟ್ ಪಂದ್ಯದ ಸರಣಿ ಇದಾಗಿದ್ದು, ಕಳೆದ ವರ್ಷವಷ್ಟೇ ಟೆಸ್ಟ್ ಗೆ ಐರ್ಲೆಂಡ್ ಪಾದಾರ್ಪಣೆ ಮಾಡಿದ್ದು, 2 ಪಂದ್ಯಗಳನ್ನಷ್ಟೇ ಆಡಿದೆ.

  • ಹುತಾತ್ಮ ಯೋಧರಿಗೆ ಐರ್ಲೆಂಡ್‍ನಲ್ಲಿ ಶ್ರದ್ಧಾಂಜಲಿ

    ಹುತಾತ್ಮ ಯೋಧರಿಗೆ ಐರ್ಲೆಂಡ್‍ನಲ್ಲಿ ಶ್ರದ್ಧಾಂಜಲಿ

    ಡಬ್ಲಿನ್: ಐರ್ಲೆಂಡ್ ದೇಶದ ಗಾಲವೇ ನಗರದಲ್ಲಿ ಪುಲ್ವಾಮಾದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ನೂರಾರು ಭಾರತೀಯ ನಿವಾಸಿಗಳಿಂದ ಪುಲ್ವಾಮಾದಲ್ಲಿ ಮಡಿದ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಭಾರತದ ಧ್ವಜ ಹಿಡಿದು ಮೌನ ಮೆರವಣಿಗೆ ಮೂಲಕ ಗೌರವ ಸಲ್ಲಿಸಿದ್ರು. ಐರ್ಲೆಂಡ್ ದೇಶದ ಪಾಕಿಸ್ತಾನ ಮಳಿಗೆಗಳಲ್ಲಿ ಯಾವುದೇ ವಸ್ತು ಖರೀದಿಸದೆ ಇರಲು ಭಾರತೀಯರು ನಿರ್ಧಾರ ಮಾಡಿದ್ದಾರೆ.

     

    ಪಾಕಿಸ್ತಾನ ಹಾಗೂ ಅದು ಸಾಕಿ ಸಲಹುತ್ತಿರುವ ಉಗ್ರರ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಂತೆ ಪ್ರಧಾನಿ ಮೋದಿ ಅವರಿಗೆ ಭಾರತೀಯ ನಿವಾಸಿಗಳಿ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ರು.

    40 ಯೋಧರು ಹುತಾತ್ಮ:
    ಫೇ.14 ರ ಗುರುವಾರ ಬೆಳಗ್ಗೆ 3.30ಕ್ಕೆ ಜಮ್ಮುವಿನಿಂದ ಶ್ರೀನಗರಕ್ಕೆ 78 ಸಿಆರ್‍ಪಿಎಫ್ ವಾಹನಗಳಲ್ಲಿ 2,547 ಯೋಧರು ಪ್ರಯಾಣಿಸುತ್ತಿದ್ದರು. ಶ್ರೀನಗರಕ್ಕೆ 20 ಕಿ.ಮೀ ದೂರದಲ್ಲಿದ್ದಾಗ 350 ಕೆಜಿ ಸುಧಾರಿತ ಸ್ಫೋಟಕಗಳನ್ನು ತುಂಬಿದ್ದ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರನ್ನು ಉಗ್ರನೊಬ್ಬ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದಿದ್ದನು. ಡಿಕ್ಕಿ ಹೊಡೆದ ರಭಸಕ್ಕೆ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ 40 ಮಂದಿ ಸೈನಿಕರು ವೀರ ಮರಣವನ್ನು ಅಪ್ಪಿದ್ದರು. ಸ್ಫೋಟದ ತೀವ್ರತೆ ಎಷ್ಟು ಇತ್ತು ಎಂದರೆ ಸೈನಿಕರ ದೇಹದ ಭಾಗಗಳು ಹೈವೇಯ 100 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು. ಸ್ಫೋಟಕಗೊಂಡ ಬಳಿಕ ಉಳಿದ ಬಸ್ಸುಗಳು ನಿಂತ ಮೇಲೆ ಅವುಗಳ ಮೇಲೂ ಉಗ್ರರು ದಾಳಿ ನಡೆಸಿದ್ದರು. ಪೂರ್ವನಿಯೋಜಿತ ಕೃತ್ಯವಾಗಿದ್ದರಿಂದ ಸೈನಿಕರ ವಾಹನವನ್ನು ಉಗ್ರರು ಹಿಂಬಾಲಿಸಿಕೊಂಡು ಬಂದಿದ್ದರು. ಹೀಗಾಗಿ ಸಾವು, ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಉಗ್ರರ ಈ ದಾಳಿಗೆ ಸಾಕ್ಷ್ಯ ಎಂಬಂತೆ ಬಸ್ಸಿನ ಹಿಂಭಾಗದಲ್ಲಿ ಬುಲೆಟ್ ಗುರುತು ಬಿದ್ದಿತ್ತು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹಾರ್ದಿಕ್ ಪಾಂಡ್ಯಗೆ ಸಿಕ್ಕ ಹೊಸ `ಚಿಯರ್ ಲೀಡರ್’ – ವಿಡಿಯೋ ನೋಡಿ

    ಹಾರ್ದಿಕ್ ಪಾಂಡ್ಯಗೆ ಸಿಕ್ಕ ಹೊಸ `ಚಿಯರ್ ಲೀಡರ್’ – ವಿಡಿಯೋ ನೋಡಿ

    ಡಬ್ಲಿನ್ : ಐರ್ಲೆಂಡ್ ವಿರುದ್ಧ ಎರಡನೇ ಕೊನೆಯ ಟಿ20 ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸ್ಫೋಟಕ ಪ್ರದರ್ಶನ ನೀಡಿದ್ದು, ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಪುತ್ರಿ ಜೀವಾ, ಪಾಂಡ್ಯ ಗೆ ಚಿಯರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜೀವಾ ಚಿಯರ್ ಮಾಡಿರುವ ವಿಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಹಾರ್ದಿಕ್ ಪಾಂಡ್ಯ, ತನಗೆ ಹೊಸ `ಚಿಯರ್ ಲೀಡರ್’ ಸಿಕ್ಕಿದ್ದಾಳೆ ಎಂದು ಬರೆದುಕೊಂಡಿದ್ದಾರೆ.

    ಐರ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 18 ಓವರ್ ನಲ್ಲಿ ಕಣಕ್ಕೆ ಇಳಿದ ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತಗಳಲ್ಲಿ 32 ರನ್ ಸಿಡಿಸಿ ಮಿಂಚು ಹರಿಸಿದ್ದರು. ಇದರಲ್ಲಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹ ಒಳಗೊಂಡಿದ್ದು, ತಂಡದ ಮೊತ್ತ 200 ರನ್ ಗಡಿ ದಾಟಲು ನೆರವಾಗಿತ್ತು.

    https://www.instagram.com/p/BknuIqeBtcI/?utm_source=ig_embed

    ಇದಕ್ಕೂ ಮುನ್ನ ಆರಂಭಿಕನಾಗಿ ಕಣಕ್ಕೆ ಇಳಿದ ಕನ್ನಡಿಗ ಕೆಎಲ್ ರಾಹುಲ್ ಸಹ ತಂಡಕ್ಕೆ ಸ್ಫೋಟಕ ಆರಂಭ ನೀಡಿದ್ದು, 70 ರನ್(36 ಎಸೆತ, 3 ಬೌಂಡರಿ, 6 ಸಿಕ್ಸರ್) ನೆರವಿನಿಂದ ಅರ್ಧ ಶತಕ ಸಿಡಿಸಿ ಮಿಂಚಿದ್ದರು. ಉಳಿದಂತೆ ಅಂಬಟಿ ರಾಯುಡು ಸ್ಥಾನದಲ್ಲಿ ಸರಣಿಗೆ ಆಯ್ಕೆ ಆಗಿದ್ದ ರೈನಾ ಕೂಡ 69 ರನ್ (45 ಎಸೆತ, 5 ಬೌಂಡರಿ, 3 ಸಿಕ್ಸರ್)ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಅಂತಿಮವಾಗಿ ಭಾರತದ 213 ರನ್ ಬೃಹತ್ ಬೆನ್ನತ್ತಿದ್ದ ಐರ್ಲೆಂಡ್ ತಂಡ ಯಜುವೇಂದ್ರ ಚಹಲ್, ಕುಲ್ ದೀಪ್ ಸ್ಪೀನ್ ದಾಳಿಗೆ ನಲುಗಿ 70 ರನ್ ಗಳಿಸಿ ಸೋಲುಂಡಿತ್ತು. ಚಹಲ್ ಮತ್ತು ಕುಲ್‍ದೀಪ್ ತಲಾ 3 ವಿಕೆಟ್ ಪಡೆದರು.

    ಸದ್ಯ ಐರ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದು ಕೊಂಡಿರುವ ಕೊಹ್ಲಿ ಬಳಕ ಇಂಗ್ಲೆಂಡ್ ವಿರುದ್ಧದ ತಲಾ ಮೂರು ಪಂದ್ಯಗಳ ಟಿ20, ಏಕದಿನ ಹಾಗೂ ಐದು ಪಂದ್ಯಗಳ ಟೆಸ್ಟ್ ಆಡಲಿದೆ.

    https://twitter.com/sidkaul22/status/1012771396693516289?

  • ಐರ್ಲೆಂಡ್, ಇಂಗ್ಲೆಂಡ್ ತಂಡಕ್ಕೆ ನಾವು ಸರ್ಪ್ರೈಸ್ ನೀಡ್ತೀವಿ: ಕೊಹ್ಲಿ

    ಐರ್ಲೆಂಡ್, ಇಂಗ್ಲೆಂಡ್ ತಂಡಕ್ಕೆ ನಾವು ಸರ್ಪ್ರೈಸ್ ನೀಡ್ತೀವಿ: ಕೊಹ್ಲಿ

    ಡಬ್ಲಿನ್: ಐರ್ಲೆಂಡ್ ಹಾಗೂ ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಅರ್ಡರ್ ಎದುರಾಳಿಗಳಿಗೆ `ಸರ್ಪ್ರೈಸ್’ ಮಾಡುತ್ತೆ. ತಂಡದ ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್ ತಂಡದ ಸರ್ಪ್ರೈಸ್ ಆಟಗಾರರು ಎಂದು ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದ ಗೆಲುವಿನ ಬಳಿಕ ಮಾತನಾಡಿದ ಅವರು, ಟೀಂ ಇಂಡಿಯಾ ಬ್ಯಾಟಿಂಗ್ ಅರ್ಡರ್ ಸನ್ನಿವೇಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಉತ್ತಮವಾಗಿದ್ದು, ಎದುರಾಳಿ ತಂಡಕ್ಕೆ ಸರ್ಪ್ರೈಸ್ ನೀಡಲು ಸಾಧ್ಯವಾಗಿದೆ. ಬ್ಯಾಟ್ಸ್ ಮನ್ ಸಹ ಬದಲಾವಣೆಗೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ಮೊದಲ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯದ ಕನ್ನಡಿಗ ಕೆಎಲ್ ರಾಹುಲ್ ಹಾಗೂ ದಿನೇಶ್ ಕಾರ್ತಿಕ್ ಮುಂದಿನ ಪಂದ್ಯದಲ್ಲಿ ಅವಕಾಶ ಪಡೆಯುವ ಕುರಿತು ಖಚಿತ ಪಡಿಸಿರುವ ಕೊಹ್ಲಿ, ಈ ಕುರಿತು ತಂಡದ ಇತರೇ ಆಟಗಾರರೊಂದಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಉಳಿದಂತೆ ಟೀಂ ಇಂಡಿಯಾ ಯುವ ಆಟಗಾರರಾದ ವಾಷಿಂಗ್ಟನ್ ಸುಂದರ್, ಸಿದ್ಧಾರ್ಥ್ ಕೌಲ್ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ವೇಗಿ ಉಮೇಶ್ ಯಾದವ್ ಸಹ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.

    ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ 6ನೇ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿದು ಅಚ್ಚರಿ ಮೂಡಿಸಿದ್ದರು. ಇದಕ್ಕೂ ಮುನ್ನ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮಾ (97), ಧವನ್ (74) ಮೊದಲ ವಿಕೆಟ್ ಗೆ 160 ರನ್ ಜೊತೆಯಾಟದ ನೆರವಿನಿಂದ ಉತ್ತಮ ಆರಂಭ ಪಡೆದಿತ್ತು. ಈ ಬಳಿಕ ರೈನಾ ಹಾಗೂ ಧೋನಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಉನ್ನತಿ ನೀಡಿ ಬಳಿಕ ಕೊಹ್ಲಿ 3 ಎಸೆತಗಳು ಬಾಕಿ ಇರುವಂತೆ ಬ್ಯಾಟಿಂಗ್ ನಡೆಸಿದ್ದರು. ಅಂತಿಮವಾಗಿ ಟೀಂ ಇಂಡಿಯಾ 208 ರನ್ ಹೊಡೆದಿತ್ತು.

    ಟೀಂ ಇಂಡಿಯಾ ನೀಡಿದ ಗುರಿ ಬೆನ್ನತ್ತಿದ್ದ ಐರ್ಲೆಂಡ್ ತಂಡ ಕುಲ್‍ದೀಪ್ ಯಾದವ್ ಹಾಗೂ ಚಹಲ್ ದಾಳಿಗೆ ಸಿಲುಕಿ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ ಸೋಲುಂಡಿತು. ಸದ್ಯ ಎರಡು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವ ಟೀಂ ಇಂಡಿಯಾ, ಮಲಹೈಡ್ ನಲ್ಲಿ ಜೂನ್ 29 ರಂದು ನಡೆಯುವ ಪಂದ್ಯದಲ್ಲಿ ಜಯದ ನಿರೀಕ್ಷೆಯಲ್ಲಿದೆ.

  • 17 ರನ್ ಹೊಡೆದ್ರೆ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ವಿಶ್ವದಾಖಲೆ!

    17 ರನ್ ಹೊಡೆದ್ರೆ ವಿರಾಟ್ ಕೊಹ್ಲಿ ಮುಡಿಗೆ ಮತ್ತೊಂದು ವಿಶ್ವದಾಖಲೆ!

    ಡಬ್ಲಿನ್: ಭಾರತದ ಕ್ರಿಕೆಟ್ ತಂಡದ ನಾಯಕ ಕೊಹ್ಲಿ ಅವರಿಗೆ ಮುಡಿಗೆ ಮತ್ತೊಂದು ದಾಖಲೆ ಸೇರಲು ಸಿದ್ಧವಾಗಿದ್ದು, ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ದಾಖಲೆ ಬರೆಯಲು ವೇದಿಕೆ ಸಿದ್ಧವಾಗಿದೆ.

    ಅಂದಹಾಗೇ 29 ವರ್ಷದ ಕೊಹ್ಲಿ 2 ಸಾವಿರ ರನ್ ಗಳಿಸಿದ ವೇಗದ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಲು ಕೇವಲ 17 ರನ್ ಗಳು ಬಾಕಿ ಇದೆ. ಐರ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ 17 ರನ್ ಗಳಿಸಿದರೆ ಟಿ20 ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಅವರ ಹೆಸರಿಗೆ ಬರೆಯಲ್ಪಡುತ್ತದೆ.

    ಕೊಹ್ಲಿ 57 ಪಂದ್ಯಗಳ 53 ಇನ್ನಿಂಗ್ಸ್ ನಲ್ಲಿ ಬ್ಯಾಟ್ ಮಾಡಿ 50.84 ರ ಸರಾಸರಿಯಲ್ಲಿ 1,983 ರನ್ ಗಳಿಸಿದ್ದಾರೆ. ಸದ್ಯ ಕೊಹ್ಲಿ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದು, ಒಂದೊಮ್ಮೆ 17 ರನ್ ಗಳಿಸಿದರೆ ಕಡಿಮೆ ಪಂದ್ಯವಾಡಿ ವೇಗವಾಗಿ 2 ಸಾವಿರ ರನ್ ಗಳಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಅಲ್ಲದೇ ಈ ಪಂದ್ಯದಲ್ಲಿ 17 ರನ್ ಗಳಿಸದೇ ಇದ್ದರೂ ಟೂರ್ನಿಯಲ್ಲಿ ಕೊಹ್ಲಿಗೆ ದಾಖಲೆ ನಿರ್ಮಿಸಲು ಹೆಚ್ಚಿನ ಅವಕಾಶವಿದೆ.

    ಸದ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೆಕ್ಲಮ್ 68 ಪಂದ್ಯಗಳ 66 ಇನ್ನಿಂಗ್ ಆಡಿ 2 ಸಾವಿರ (2,140) ರನ್ ಪೂರೈಸಿದ್ದಾರೆ. ಉಳಿದಂತೆ ನ್ಯೂಜಿಲೆಂಡಿನ ಮಾರ್ಟಿನ್ ಗುಪ್ಟಿಲ್ 2,271 ರನ್ ಗಳಿಸಿದ್ದರೆ, ಪಾಕಿಸ್ತಾನ ಆಟಗಾರ ಮಲ್ಲಿಕ್ 1,989 ರನ್ ಗಳಿಸಿ ಮೂರನೇ ಸ್ಥಾನ ಪಡೆದಿದ್ದಾರೆ.

    ವಿಶ್ವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿರುವ ಕೊಹ್ಲಿ ಇದುವರೆಗೂ ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಶತಕ ಸಿಡಿಸಿಲ್ಲ. ಇನ್ನು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 2007 ರ ಬಳಿಕ ನಾಲ್ಕು ಬಾರಿ ಮಾತ್ರ ಮುಖಾಮುಖಿ ಆಗಿದೆ. ಸದ್ಯದ ಟೂರ್ನಿಯಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಲಿದ್ದು, ಬಳಿಕ ಇಂಗ್ಲೆಂಡ್ ಪ್ರವಾಸ ಆರಂಭಿಸಲಿದೆ.

  • ಗರ್ಭಪಾತ ನಿಷೇಧ ಕಾನೂನಿಗೆ ಬಲಿಯಾದ ಕನ್ನಡತಿ – ಜನಾದೇಶಕ್ಕೆ ಜಯ ಸಿಗಲಿ ಅಂತ ಪೋಷಕರ ಮನವಿ

    ಗರ್ಭಪಾತ ನಿಷೇಧ ಕಾನೂನಿಗೆ ಬಲಿಯಾದ ಕನ್ನಡತಿ – ಜನಾದೇಶಕ್ಕೆ ಜಯ ಸಿಗಲಿ ಅಂತ ಪೋಷಕರ ಮನವಿ

    ಬೆಳಗಾವಿ: ಐರ್ಲೆಂಡ್ ನಲ್ಲಿ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್ ಅವರು ಗರ್ಭಪಾತಕ್ಕೆ ಬಲಿಯಾಗಿ ಇದೀಗ 5 ವರ್ಷಗಳೇ ಕಳೆದಿವೆ. ಅನೇಕ ವರ್ಷಗಳ ಕಾನೂನು ಹೋರಾಟದ ಬಳಿಕ ಈಗ ಐರ್ಲೆಂಡ್ ಸರ್ಕಾರ ಗರ್ಭಪಾತ ಬೆಕೋ, ಬೆಡವೋ ಎನ್ನುವುದರ ಬಗ್ಗೆ ಜನಾದೇಶ ಸಂಗ್ರಹಕ್ಕೆ ಮುಂದಾಗಿದೆ.

    ಈ ಬಗ್ಗೆ ಐರ್ಲೆಂಡ್ ದೇಶದಲ್ಲಿ ಜನಾದೇಶ ನಡೆಯಲಿದ್ದು, ಶನಿವಾರ ಗರ್ಭಪಾತ ನಿಷೇಧ ಕಾನೂನು ತಿದ್ದುಪಡಿ ಕುರಿತು ನಿರ್ಧಾರ ಹೊರ ಬೀಳಲಿದೆ. ಈ ಕುರಿತು ವಿಶ್ವವೇ ಐರ್ಲೆಂಡ್ ದೇಶದ ಜನಾದೇಶದತ್ತ ಎದುರು ನೋಡುತ್ತಿದೆ.

    ಏನಿದು ಪ್ರಕರಣ?:
    ಬೆಳಗಾವಿಯ ಶ್ರೀನಗರದ ನಿವಾಸಿಯಾಗಿದ್ದ ಸವಿತಾರನ್ನು ವೈದ್ಯ ಪ್ರವೀಣ್ ಜತೆಗೆ ಮದುವೆ ಮಾಡಿಕೊಡಲಾಗಿತ್ತು. ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿದ್ದರಿಂದ ಉದ್ಯೋಗ ಅರಸಿ ದೂರದ ಐರ್ಲೆಂಡ್ ದೇಶಕ್ಕೆ ತೆರಳಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸವಿತಾಗೆ ಹೊಟ್ಟೆಯಲ್ಲಿ ನಂಜಾಗಿತ್ತು. ಗರ್ಭಪಾತ ಮಾಡಿದರೆ ಸವಿತಾ ಬದುಕುತ್ತಿದ್ದರು. ಆದರೆ ಈ ಚಿಕಿತ್ಸೆಗೆ ಅಲ್ಲಿನ ಗರ್ಭಪಾತ ನಿಷೇಧ ಕಾನೂನು ಅಡ್ಡಿಯಾಗಿತ್ತು.

    ಐರ್ಲೆಂಡ್ ಕ್ಯಾತೊಲಿಕ್ ದೇಶವಾಗಿದ್ದರಿಂದ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದರು. ಇದರಿಂದ ದಂತವೈದ್ಯೆ ಸವಿತಾ ಹಾಲಪ್ಪನವರ್ ಅಕ್ಟೋಬರ್ 28, 2013 ಮೃತಪಟ್ಟಿದ್ದರು. ಸವಿತಾ ಹಾಲಪ್ಪನವರ್ ಅವರ ಸಾವು ಪ್ರಕರಣ ಇಡೀ ವಿಶ್ವದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಐರ್ಲೆಂಡ್ ದೇಶದ ಕಾನೂನಿನ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿತ್ತು. ಐರ್ಲೆಂಡ್ ದೇಶದ ಮಾನವೀಯತೆ ಮತ್ತು ಸಂಪ್ರದಾಯದ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು.

    ಮೃತ ಸವಿತಾ ಕುಟುಂಬಸ್ಥರು ಸಹ ಮಗಳ ಸಾವಿನ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಇದೀಗ ಐರ್ಲೆಂಡ್ ಸರ್ಕಾರ ಗರ್ಭಪಾತ ಮೇಲಿರುವ ನಿಷೇಧ ಕಾನೂನು ತಿದ್ದುಪಡಿ ಮಾಡಲು ಜನಾದೇಶ ಸಂಗ್ರಹಿಸಲು ಮುಂದಾಗಿದೆ. ಇಂದು ಐರ್ಲೆಂಡ್ ದೇಶದಲ್ಲಿ ಜನಮತ ಸಂಗ್ರಹ ನಡೆಯಲಿದೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮೃತ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಅಲ್ಲಿನ ಜನ ಗರ್ಭಪಾತ ನಿಷೇಧ ಕಾನೂನಿನ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯ ಮತ್ಯಾವ ಕುಟುಂಬಕ್ಕೆ ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.

    ಇಂದು ಸಂಗ್ರಹವಾದ ಜನಮತ ಇದೇ ಶನಿವಾರ(ನಾಳೆ) ಪ್ರಕಟವಾಗಲಿದೆ. ಈ ಜನಮತದ ಬಗ್ಗೆ ಇಡೀ ಜಗತ್ತು ಕುತೂಹಲ ಹೊಂದಿದ್ದು, ಐರ್ಲೆಂಡ್ ಸರ್ಕಾರ ಭಾರತದ ಮಹಿಳೆಯೊಬ್ಬರ ಸಾವಿನಿಂದ ಎಚ್ಚೆತ್ತುಕೊಂಡು ಗರ್ಭಪಾತ ನಿಷೇಧ ಕಾಯ್ದೆ ರದ್ದುಗೊಳಿಸುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.